Tag: ಸಹಿ

  • ಡಿ ಗ್ರೂಪ್‌ ಸಿಬ್ಬಂದಿಯಿಂದಲೇ VSK ವಿವಿ ಕುಲಸಚಿವರ ಸಹಿ ಫೋರ್ಜರಿ

    ಡಿ ಗ್ರೂಪ್‌ ಸಿಬ್ಬಂದಿಯಿಂದಲೇ VSK ವಿವಿ ಕುಲಸಚಿವರ ಸಹಿ ಫೋರ್ಜರಿ

    ಬಳ್ಳಾರಿ: ಸದಾ ಒಂದಲ್ಲೊಂದು ವಿವಾದದಿಂದ ಸುದ್ದಿಯಾಗುವ ಬಳ್ಳಾರಿಯ (Ballari) ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ (Vijayanagara Sri Krishnadevaraya University) ಈ ಬಾರಿ ಡಿ ಗ್ರೂ ಸಿಬ್ಬಂದಿ ಕುಲಸಚಿವರ ಸಹಿಯನ್ನೇ ನಕಲು ಮಾಡಿ ಸಿಕ್ಕಿ ಬಿದ್ದಿದ್ದಾನೆ.

    ವಿದ್ಯಾರ್ಥಿಗಳ ವಲಸೆ ಪ್ರಮಾಣಪತ್ರಕ್ಕೆ (Migration Certificate) ಉಪಕುಲಸಚಿವರ ಸಹಿಯನ್ನು ಡಿ ಗ್ರೂಪ್ ನೌಕರ ವೈ.ಕೃಷ್ಣಮೂರ್ತಿ ನಕಲು ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ವಿವಿಯ ಕುಲಪತಿ ವಿಚಾರಣೆ ಕಾಯ್ದಿರಿಸಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.  ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ: ಅಶ್ವಿನಿ ವೈಷ್ಣವ್‌

    ಗಂಗಾವತಿಯ ಕೆಲವು ವಿದ್ಯಾರ್ಥಿಗಳು ವಲಸೆ ಪ್ರಮಾಣ ಪತ್ರಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳ ಸತ್ಯಾಸತ್ಯತೆ ತಿಳಿಯಲು ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ವಿವಿಯ ಸಿಬ್ಬಂದಿ ಕರೆ ಮಾಡಿದ್ದರು.

    ಈ ವೇಳೆ ಶುಲ್ಕ ಪಾವತಿಸಿ ಪ್ರಮಾಣ ಪತ್ರ ಪಡೆದಿರುವುದಾಗಿ ವಿದ್ಯಾರ್ಥಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ವಿವಿಗೆ ಯಾವುದೇ ಶುಲ್ಕ ಪಾವತಿಯಾಗದೇ ಪ್ರಮಾಣ ಪತ್ರಗಳು ವಿತರಣೆಯಾಗಿರುವ ಹಿನ್ನೆಲೆ ಅನುಮಾನಗೊಂಡು ಮತ್ತಷ್ಟು ವಿಚಾರಣೆ ಮಾಡಿದಾಗ ಸತ್ಯ ಪ್ರಕಟವಾಗಿದೆ.

    ವಿದ್ಯಾರ್ಥಿಗಳಿಂದ ಹಣ ಪಡೆದ ಕೃಷ್ಣಮೂರ್ತಿ ಉಪ ಕುಲಸಚಿವರ ನಕಲಿ ಸಹಿ ಮಾಡಿ ಪ್ರಮಾಣ ಪತ್ರ ವಿತರಿಸಿರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಈಗ ನಿಗದಿತ ಶುಲ್ಕ ನೀಡಿ ನಕಲಿ ಸಹಿ ಹೊಂದಿದ ವಲಸೆ ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳು ಗೊಂದಲದಲ್ಲಿ ಸಿಲುಕಿದ್ದಾರೆ.

     

  • 50ನೇ ದಿನಕ್ಕೆ ಕಾಲಿಟ್ಟ ಏಮ್ಸ್ ಹೋರಾಟ – ರಕ್ತದಲ್ಲಿ ಸಹಿ ಸಂಗ್ರಹಿಸಿ ಸಿಎಂಗೆ ಮನವಿ

    50ನೇ ದಿನಕ್ಕೆ ಕಾಲಿಟ್ಟ ಏಮ್ಸ್ ಹೋರಾಟ – ರಕ್ತದಲ್ಲಿ ಸಹಿ ಸಂಗ್ರಹಿಸಿ ಸಿಎಂಗೆ ಮನವಿ

    ರಾಯಚೂರು: ಏಮ್ಸ್‌ಗಾಗಿ ಜಿಲ್ಲೆಯಲ್ಲಿ ನಡೆದಿರುವ ಅನಿರ್ಧಿಷ್ಟಾವಧಿ ಹೋರಾಟ ಶುಕ್ರವಾರ 50ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಹೋರಾಟಕ್ಕೆ ಇದುವರೆಗೂ ಸ್ಪಂದಿಸದ ಹಿನ್ನೆಲೆ ಹೋರಾಟಗಾರರು ರಕ್ತದಲ್ಲಿ ಸಹಿ ಮಾಡುವ ಬೃಹತ್ ಆಂದೋಲನಕ್ಕೆ ಮುಂದಾಗಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಸುಮಾರು 5,000 ಜನರಿಂದ ರಕ್ತದ ಸಹಿ ಸಂಗ್ರಹಿಸಲಾಗುತ್ತಿದೆ. ವಿದ್ಯಾರ್ಥಿಗಳು, ವೃದ್ಧರು, ಹೋರಾಟಗಾರರು, ಸ್ಥಳೀಯರಿಂದ ಸಹಿ ಸಂಗ್ರಹ ಮಾಡಲಾಗುತ್ತಿದೆ. 90ರ ಇಳಿ ವಯಸ್ಸಿನ ವೃದ್ಧರೊಬ್ಬರ ಮೂಲಕ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ರಕ್ತದ ಸಹಿಗಳನ್ನು ಸಿಎಂಗೆ ಕಳುಹಿಸುವ ಮೂಲಕ ಹೋರಾಟ ಮುಂದುವರೆಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: IIMB ಯಿಂದ ‘ಹಾಸ್ಪಿಟಲ್ ಮ್ಯಾನೇಜ್‍ಮೆಂಟ್’ ಕೋರ್ಸ್ ಆರಂಭ – ಡಾ.ಕೆ.ಸುಧಾಕರ್ ಕನಸು ಸಾಕಾರ

    ರಾಯಚೂರಿನಿಂದ ಐಐಟಿ ಕಸಿದುಕೊಳ್ಳಲಾಗಿದೆ. ಸದ್ಯ ಏಮ್ಸ್ ಆದರೂ ರಾಯಚೂರಿಗೆ ನೀಡಲಿ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಬೊಮ್ಮಾಯಿ ಹುಬ್ಬಳ್ಳಿ-ಧಾರವಾಡಕ್ಕೆ ಮಾತ್ರ ಸಿಎಂ ಅಲ್ಲ, ಸಮಗ್ರ ಕರ್ನಾಟಕಕ್ಕೆ ಸಿಎಂ. ಹೀಗಾಗಿ ಏಮ್ಸ್ ರಾಯಚೂರಿಗೆ ನೀಡುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕನ್ಹಯ್ಯಲಾಲ್ ಹತ್ಯೆ ಖಂಡಸಿ ಪ್ರತಿಭಟನೆ – ಮೂವರು ಕಾರ್ಯಕರ್ತರ ಪ್ಯಾಂಟ್‍ಗೆ ತಗುಲಿದ ಬೆಂಕಿ

    Live Tv

  • ನಕಲಿ ಬಿಲ್‍ಗೆ ಸಹಿ ಮಾಡದ ಅಧಿಕಾರಿ ಮೇಲೆ ಹಲ್ಲೆ – ಪುರಸಭೆ ಸದಸ್ಯನ ಗೂಂಡಾಗಿರಿ

    ನಕಲಿ ಬಿಲ್‍ಗೆ ಸಹಿ ಮಾಡದ ಅಧಿಕಾರಿ ಮೇಲೆ ಹಲ್ಲೆ – ಪುರಸಭೆ ಸದಸ್ಯನ ಗೂಂಡಾಗಿರಿ

    ಕಲಬುರಗಿ: ನಕಲಿ ಬಿಲ್‍ಗಳಿಗೆ ಅಧಿಕಾರಿ ಸಹಿ ಮಾಡದ ಹಿನ್ನೆಲೆ ಚಿಂಚೋಳಿ ತಾಲೂಕಿನ ಪುರಸಭೆಯ ಮುಖ್ಯಾಧಿಕಾರಿ ಅಭಯ್ ಮೇಲೆ ಪುರಸಭೆಯ ಸದಸ್ಯ ಆನಂದ್, ಪುರಸಭೆ ಕಚೇರಿ ಆವರಣದಲ್ಲಿಯೇ ಹಲ್ಲೆ ಮಾಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

    ಚಿಂಚೋಳಿ ತಾಲೂಕಿನಲ್ಲಿ ಪುರಸಭೆ ಮುಖ್ಯಾಧಿಕಾರಿಯಾಗಿ ಹಲವು ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತಂದ ಅಭಯ್, ನಕಲಿ ಬಿಲ್ ಗಳಿಗೂ ಸಹ ಕಡಿವಾಣ ಹಾಕಿದ್ದಾರೆ. ಇದು ಅಲ್ಲಿನ ಕೆಲ ಪುರಸಭೆ ಸದಸ್ಯರಿಗೆ ಇದೀಗ ನುಂಗಲಾಗದ ಬಿಸಿ ತುಪ್ಪವಾಗಿದೆ. ಇದೇ ವೇಳೆ ಚಿಂಚೋಳಿ ಪುರಸಭೆಯ ಆರ್ ಪಿಐ ಪಕ್ಷದ ಪುರಸಭೆ ಸದಸ್ಯನಾದ ಆನಂದ್ ಟೈಗರ್ ಮಂಗಳವಾರ ಸಂಜೆ ತನ್ನ ಸ್ನೇಹಿತ ಶಶಿಕುಮಾರ್ ಜೊತೆ ಪುರಸಭೆಗೆ ಹೋಗಿದ್ದಾನೆ. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಅಭಯ್ ಹಾಗೂ ಆನಂದ್ ನಡುವೆ ಬಿಲ್ ಮಾಡುವ ಕುರಿತು ಮಾತಿನ ಚಕಮಕಿ ನಡೆದಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ಆನಂದ ನನ್ನ ಬಿಲ್‍ಗೆ ಸಹಿ ಮಾಡಲು ನೀಕಾರಿಸುತ್ತಿಯಾ ಎಂದು ಅಧಿಕಾರಿಗೆ ವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ.

    ಈ ಪುರಸಭೆ ಸದಸ್ಯನ ಗೂಂಡಾಗಿರಿಯ ದೃಶ್ಯ ಪುರಸಭೆ ಆವರಣದಲ್ಲಿ ಇರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪುರಸಭೆ ಸದಸ್ಯನ ಗೂಂಡಾಗಿರಿ ವಿರುದ್ಧ ಅಧಿಕಾರಿ ಅಭಯ್ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ಬಿಎಸ್‍ವೈ ಡೈರಿ ಪ್ರಕರಣಕ್ಕೆ ಟ್ವಿಸ್ಟ್ – ಬಿಜೆಪಿಯಿಂದ ದಾಖಲೆ ಬಿಡುಗಡೆ

    ಬಿಎಸ್‍ವೈ ಡೈರಿ ಪ್ರಕರಣಕ್ಕೆ ಟ್ವಿಸ್ಟ್ – ಬಿಜೆಪಿಯಿಂದ ದಾಖಲೆ ಬಿಡುಗಡೆ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ 1800 ಕೋಟಿ ಡೈರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ದೊರೆತಿದೆ.

    ಡೈರಿಯಲ್ಲಿರೋದು ಯಡಿಯೂರಪ್ಪ ಸಹಿ ಅಲ್ಲವೇ ಅಲ್ಲ ಎಂದು ಹೇಳಲಾಗುತ್ತಿದೆ. ಡೈರಿಯಲ್ಲಿರುವ ಸಹಿಗೂ ಬಿಎಸ್‍ವೈ ಸಹಿಗೂ ವ್ಯತ್ಯಾಸ ಇದೆ ಎಂದು ಸಹಿಯ ಅಸಲಿ, ನಕಲಿ ಬಗ್ಗೆ ದಾಖಲೆಯನ್ನು ಯಡಿಯೂರಪ್ಪ ಆಪ್ತರು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: 1800 ಕೋಟಿ ಬಿಎಸ್‌ವೈ ಡೈರಿ ಬಾಂಬ್ – ಗಡ್ಕರಿಗೆ 150 ಕೋಟಿ, ಅಡ್ವಾಣಿಗೆ 50 ಕೋಟಿ!

    2009ರಲ್ಲಿ ಸಚಿವರಾಗಿದ್ದ ಶರದ್ ಪವಾರ್‍ಗೆ ಬಿಎಸ್‍ವೈ ಪತ್ರ ಬರೆದಿದ್ದರು. ಈ ಪತ್ರವನ್ನು ಇಂದು ಬಿಎಸ್‍ವೈ ಆಪ್ತರು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ರಿಲೀಸ್ ಮಾಡಿದ ಡೈರಿಯಲ್ಲಿರುವ ಸಹಿಗೂ ಈ ಸಹಿಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಯೂರಿಯಾ ಬಗ್ಗೆ ಜುಲೈ 2009ರಲ್ಲಿ ಬಿಎಸ್‍ವೈ ಬರೆದಿದ್ದ ಪತ್ರವನ್ನೂ ಬಿಡುಗಡೆ ಮಾಡುವ ಮೂಲಕ ಸಹಿಯ ಪ್ರತಿ ಅಕ್ಷರ ವ್ಯತ್ಯಾಸ ತೋರಿಸಿ ಮಾರ್ಕ್ ಮಾಡಿ ದಾಖಲೆ ಬಿಡುಗಡೆಗೊಳಿಸಿದ್ದಾರೆ. ಇದನ್ನೂ ಓದಿ: ದಾಳಿ ನಡೆಯದೇ ಇದ್ದರೂ ಬಿಎಸ್‍ವೈ ಡೈರಿ ಐಟಿಗೆ ಸಿಕ್ಕಿದ್ದು ಹೇಗೆ?

    ಹಾಗಾದ್ರೆ ಶುಕ್ರವಾರ ಕಾಂಗ್ರೆಸ್ ಬಿಡುಗಡೆ ಮಾಡಿದ ಡೈರಿಯಲ್ಲಿರುವ ಯಡಿಯೂರಪ್ಪ ಸಹಿ ನಕಲಿಯೋ ಅಥವಾ ಅಸಲಿಯೋ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ. ಇತ್ತ ಸಿಬಿಡಿಟಿ ಕೂಡ ಇದು ಬಿಎಸ್‍ವೈ ಅವರ `ಕೈ’ ಬರಹ ಅಲ್ಲ ಅಂತ ಸ್ಪಷ್ಟನೆ ನೀಡುತ್ತಿದೆ.

    ಒಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳ ಆರೋಪ ಕೇವಲ ರಾಜಕೀಯ ಕೆಸರೆರಚಾಟಕ್ಕೆ ಮಾತ್ರನಾ. ಹಾಗೂ ತಾರ್ಕಿಕ ಅಂತ್ಯಕ್ಕೆ ಈ ಪ್ರಕರಣವನ್ನು ತೆಗೆದುಕೊಂಡು ಹೋಗೋದಿಲ್ಲವಾ ಎಂಬ ಪ್ರಶ್ನೆ ಇದೀಗ ಜನಸಾಮಾನ್ಯರನ್ನು ಕಾಡುತ್ತಿದೆ. ಇದನ್ನೂ ಓದಿ: ಬಿಎಸ್‍ವೈ ಡೈರಿ ಡಿಕೆಶಿ ಮನೆ ಸೇರಿದ್ದು ಹೇಗೆ?

     

  • ರಬ್ಬರ್ ಮೂಲಕ ತಹಶೀಲ್ದಾರ್ ಹೆಬ್ಬಟ್ಟನ್ನೆ ನಕಲು ಮಾಡಿದ – ಬಂದವರಿಗೆಲ್ಲಾ ಸಲೀಸಾಗಿ ದಾಖಲಾತಿ ಮಾಡಿಕೊಟ್ಟ

    ರಬ್ಬರ್ ಮೂಲಕ ತಹಶೀಲ್ದಾರ್ ಹೆಬ್ಬಟ್ಟನ್ನೆ ನಕಲು ಮಾಡಿದ – ಬಂದವರಿಗೆಲ್ಲಾ ಸಲೀಸಾಗಿ ದಾಖಲಾತಿ ಮಾಡಿಕೊಟ್ಟ

    ಚಿಕ್ಕೋಡಿ: ಫಿಲ್ಮಿ ಮಾದರಿಯಲ್ಲಿ ರಬ್ಬರ್ ಮೂಲಕ ತಹಶೀಲ್ದಾರ್ ಹೆಬ್ಬರಳಿನ ಗುರುತುಗಳನ್ನು ಖದೀಮನೊಬ್ಬ ನಕಲಿ ಮಾಡಿದ್ದಾನೆ. ಪೆನ್ ನಿಂದ ಮಾಡುವ ಸಹಿ ಅಲ್ಲ, ಡಿಜಿಟಲ್ ಸಹಿಯನ್ನೇ ನಕಲು ಮಾಡಿರೋದು ಇದೀಗ ಹಲವು ಅನುಮಾಗಳಿಗೆ ಎಡೆ ಮಾಡಿ ಕೊಟ್ಟಿದೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ಕಂದಾಯ ಇಲಾಖೆಯ ನೌಕರ ನಿಶಾನ್ ಹೈಬತ್ತಿ. ಈತ ತಹಶೀಲ್ದಾರ ಹೆಬ್ಬಟ್ಟನ್ನೇ ನಕಲು ಮಾಡಿ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಹಣ ವಸೂಲಿ ಮಾಡಿದ್ದಾನೆ. ಜಾತಿ, ಆದಾಯ, ಜಮೀನು ವಿವಾದ ಸೇರಿದಂತೆ 31ಕ್ಕೂ ಹೆಚ್ಚು ದಾಖಲಾತಿಗಳಿಗೆ ತಹಶೀಲ್ದಾರ್ ಫಿಂಗರ್ ಪ್ರಿಂಟ್ ಅವಶ್ಯವಾಗಿದೆ. ಇದನ್ನೇ ಅಸ್ತ್ರ ಮಾಡಿಕೊಂಡ ಈತ ನಕಲಿ ಥಂಬ್ ಮಾಡಿ ಮಾದ್ಯಮಗಳ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ.

    ಚಿಕ್ಕೋಡಿ ತಹಶೀಲ್ದಾರ್ ಚಿದಂಬರ್ ಕುಲಕರ್ಣಿಯವರಿಗೆ ವಿಷಯ ಗೊತ್ತಿದ್ದರು ಮೌನವಾಗಿದ್ದಾರೆ ಅಂತಾ ಹೇಳಲಾಗಿದೆ. ಆದ್ದರಿಂದ ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಚಿಕ್ಕೋಡಿ ಉಪ ವಿಭಾಗಧಿಕಾರಿ ಭೇಟಿ ನೀಡಿ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.

    ತಹಶೀಲ್ದಾರ್ ನಕಲಿ ಡಿಜಿಟಲ್ ಸಹಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ನಕಲಿ ದಾಖಲೆಗಳು ನಿರ್ಮಾಣವಾಗಿರುವ ಸಾಧ್ಯತೆಗಳಿವೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.