Tag: ಸವರ್ಣ ದೀರ್ಘ ಸಂಧಿ

  • ಸವರ್ಣದೀರ್ಘ ಸಂಧಿಯಲ್ಲಿರೋದು ಡಿಫರೆಂಟ್ ಗ್ಯಾಂಗ್‍ಸ್ಟರ್!

    ಸವರ್ಣದೀರ್ಘ ಸಂಧಿಯಲ್ಲಿರೋದು ಡಿಫರೆಂಟ್ ಗ್ಯಾಂಗ್‍ಸ್ಟರ್!

    ಬೆಂಗಳೂರು: ಲುಷಿಂಗ್ಟನ್ ಥಾಮಸ್, ಹೇಮಂತ್ ಕುಮಾರ್ ಪಿವಿಆರ್ ಸೇರಿದಂತೆ ನಾಲ್ಕು ಮಂದಿ ಸೇರಿ ನಿರ್ಮಾಣ ಮಾಡಿರೋ ಸವರ್ಣದೀರ್ಘ ಸಂಧಿ ಚಿತ್ರ ಇದೇ ಹದಿನೆಂಟನೇ ತಾರೀಕಿನಂದು ಬಿಡುಗಡೆಯಾಗಲಿದೆ. ಶೀರ್ಷಿಕೆಯ ಮೂಲಕವೇ ಪ್ರೇಕ್ಷಕರ ಚಿತ್ತ ಸೆಳೆಯುವ ಅಪರೂಪದ ಚಿತ್ರಗಳಿವೆಯಲ್ಲಾ? ಆ ಸಾಲಿನಲ್ಲಿ ಈ ಚಿತ್ರ ನಿಜಕ್ಕೂ ಮುಂಚೂಣಿಯಲ್ಲಿದೆ. ವೀರೇಂದ್ರ ಶೆಟ್ಟಿ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಈ ಸವರ್ಣದೀರ್ಘ ಸಂಧಿಯಲ್ಲಿ ಏನೋ ಇದೆ ಎಂಬ ಭಾವನೆ ಕನ್ನಡದ ಎಲ್ಲ ವರ್ಗದ ಪ್ರೇಕ್ಷಕರಲ್ಲಿಯೂ ಮೂಡಿಕೊಂಡಿದೆ.

    ನಿರ್ದೇಶಕ ಕಂ ನಟ ವೀರೇಂದ್ರ ಶೆಟ್ಟಿ ಅಂಥಾದ್ದೊಂದು ಕಮಾಲ್ ಮಾಡಿದ್ದಾರೆ. ಇದೀಗ ಈ ಸಿನಿಮಾ ಹಾಡುಗಳು ಬಿಡುಗಡೆಗೊಂಡು ಅವುಗಳೆಲ್ಲವೂ ಹಿಟ್ ಆಗಿದೆ. ಹಾಗಾದರೆ ವ್ಯಾಕರಣ ಸಂಬಂಧಿ ಶೀರ್ಷಿಕೆ ಹೊಂದಿರುವ ಈ ಸಿನಿಮಾದ ಕಥೆ ಯಾವ ರೀತಿಯದ್ದೆಂಬ ಪ್ರಶ್ನೆ ಮುಂದಿಟ್ಟರೆ ಚಿತ್ರತಂಡ ರೋಚಕವಾದ ಒಂದಷ್ಟು ವಿಚಾರಗಳನ್ನು ಬಿಚ್ಚಿಡುತ್ತದೆ. ಅವೆಲ್ಲವೂ ಈ ಸಿನಿಮಾದತ್ತ ಮತ್ತಷ್ಟು ಆಕರ್ಷಣೆ ಮೂಡಿಸುವಂತಿವೆ. ವ್ಯಾಕರಣದ ಶೀರ್ಷಿಕೆ ಹೊಂದಿರೋ ಇದು ಗ್ಯಾಂಗ್‍ಸ್ಟರ್ ಚಿತ್ರವೆಂದರೆ ಅದಕ್ಕಿಂತಾ ವಿಚಿತ್ರ ಮತ್ತೇನಿದೆ?

    ಸವರ್ಣದೀರ್ಘ ಸಂಧಿಯಲ್ಲಿ ಪಕ್ಕಾ ಡಿಫರೆಂಟಾಗಿರೋ ಗ್ಯಾಂಗ್ ಸ್ಟರ್ ಪ್ರೇಕ್ಷಕರನ್ನು ಸಂಧಿಸಲಿದ್ದಾನೆ. ಗ್ಯಾಂಗ್‍ಸ್ಟರ್ ಅಂದರೆ ಹೊಡೆದಾಟ ಬಡಿದಾಟಗಳು, ಬಿಲ್ಡಪ್ಪು ಮತ್ತು ಮಚ್ಚು ಲಾಂಗುಗಳ ಮೊರೆತ ಇರುತ್ತದೆಂದುಕೊಳ್ಳುವಂತಿಲ್ಲ. ಈ ಗ್ಯಾಂಗ್ ಸ್ಟರ್ ಭಿನ್ನವಾಗಿರೋದೇ ಆ ಕಾರಣದಿಂದ. ಇಲ್ಲಿನ ಗ್ಯಾಂಗ್‍ಸ್ಟರ್ ವ್ಯಾಕರಣದಲ್ಲಿ ಪಾರಂಗತ. ಅದರ ಮೂಲಕವೇ ನಗಿಸುತ್ತಾ ನಗುವಿನ ಹೊಳೆಯನ್ನೇ ಹರಿಸುತ್ತಾನೆ. ಅದರ ಸುತ್ತಾ ಕಥೆಯ ಕೊಂಬೆ ಕೋವೆಗಳಿದ್ದರೂ ಇದರ ಪ್ರಧಾನ ಉದಾಹರಣೆ ಮನೋರಂಜನೆ. ಈ ಪ್ರಕಾರವಾಗಿ ನೋಡ ಹೋದರೆ ಇದೇ 18ರಿಂದ ಭರ್ಜರಿ ನಗೆಹಬ್ಬ ಚಾಲೂ ಆಗಲಿದೆ.

  • ಸವರ್ಣದೀರ್ಘ ಸಂಧಿ: ಮತ್ತೆ ಶುರುವಾಗುತ್ತಾ ಮನೋಮೂರ್ತಿ ಸುವರ್ಣಯುಗ?

    ಸವರ್ಣದೀರ್ಘ ಸಂಧಿ: ಮತ್ತೆ ಶುರುವಾಗುತ್ತಾ ಮನೋಮೂರ್ತಿ ಸುವರ್ಣಯುಗ?

    ಬೆಂಗಳೂರು: ಮುಂಗಾರು ಮಳೆ ಚಿತ್ರದ ಹಾಡುಗಳ ಮೂಲಕ ಸಂಗೀತ ನಿರ್ದೇಶಕ ಮನೋಮೂರ್ತಿ ಮಾಡಿದ್ದ ಮೋಡಿ ಇಂದಿಗೂ ಎಲ್ಲರ ಮನಸುಗಳಿಗೆ ಹನಿಯುತ್ತಲೇ ಇದೆ. ಆ ನಂತರದಲ್ಲಿಯೂ ಅವರು ಸಂಗೀತ ನಿರ್ದೇಶಕರಾಗಿ ಸಕ್ರಿಯರಾಗಿಯೇ ಇದ್ದಾರೆ. ಆದರೆ ಮುಂಗಾರು ಮಳೆಯನ್ನು ಸರಿಗಟ್ಟಲು ಖುದ್ದು ಅವರಿಂದಲೇ ಸಾಧ್ಯವಾಗಿಲ್ಲ. ಇದು ಆರೋಪವಲ್ಲ. ಅವರ ಸಂಗೀತದ ಕಸುವಿನ ಪ್ರತೀಕ. ಆದರೆ ಸವರ್ಣದೀರ್ಘ ಸಂಧಿ ಚಿತ್ರದ ಇಂಪಾದ ಹಾಡು ಕೇಳಿದವರೆಲ್ಲ ಮತ್ತೆ ಮನೋಮೂರ್ತಿಯವರ ಸುವರ್ಣ ಯುಗ ಆರಂಭವಾಗಿದೆ ಎಂಬ ನಿಖರ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತಿದ್ದಾರೆ.

    ಸವರ್ಣ ದೀರ್ಘ ಸಂಧಿ ಚಿತ್ರದ ಆಡಿಯೋವನ್ನು ಯೋಗರಾಜ ಭಟ್ ಬಿಡುಗಡೆಗೊಳಿಸಿದ್ದಾರೆ. ಅದರಲ್ಲಿರೋ ಒಂದೊಂದು ಹಾಡುಗಳೂ ಕೂಡಾ ಮುಂಗಾರುಮಳೆಯ ಇತಿಹಾಸ ಮತ್ತೆ ಮರುಕಳಿಸೋ ಮುನ್ಸೂಚನೆಯನ್ನೇ ನೀಡುತ್ತಿವೆ. ಕೊಳಲಾದೆನಾ ಹಾಡಂತೂ ಹಳೆಯದ್ದು ಮತ್ತು ಹೊಸತರ ಕೊಂಡಿಯಂತೆ ಮನೋಮೂರ್ತಿ ಸಂಗೀತ ನಿರ್ದೇಶನದಲ್ಲಿ ಮಾಧುರ್ಯ ತುಂಬಿಕೊಂಡು ಮೂಡಿ ಬಂದಿದೆ. ಶ್ರೇಯಾ ಘೋಶಾಲ್ ಜೇನ್ದನಿಯಲ್ಲಿ ಬಂದಿರೋ ಈ ಹಾಡು ಕೇಳಿದ ಪ್ರತಿಯೊಬ್ಬರೂ ಭಾವ ಪರವಶರಾಗಿದ್ದಾರೆ.

    ಕೊಳಲಾದೆನಾ ಹಾಡನ್ನು ವೀರೇಂದ್ರ ಶೆಟ್ಟಿ ಬರೆದಿದ್ದಾರೆ. ನಿರ್ದೇಶಕನಾಗಿ, ನಟನಾಗಿ, ನಿರ್ಮಾಪಕನಾಗಿಯೂ ಒಂದಷ್ಟು ಜವಾಬ್ದಾರಿ ವಹಿಸಿಕೊಂಡಿರುವ ಅವರು ಹಾಡುಗಳಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ವಿಶೇಷವೆಂದರೆ ಈ ಮೂಲಕ ಅವರು ಗೀತರಚನೆಕಾರರಾಗಿಯೂ ಭರವಸೆ ಮೂಡಿಸಿದ್ದಾರೆ. ಸವರ್ಣದೀರ್ಘ ಸಂಧಿ ಚಿತ್ರ ಈ ಪಾಟಿ ಕ್ರೇಜ್ ಸೃಷ್ಟಿಸಿರೋದಕ್ಕೆ ದಂಡಿ ದಂಡಿ ಕಾರಣಗಳಿವೆ. ಆದರೆ ಅದರಲ್ಲಿ ಹಾಡುಗಳದ್ದೇ ಸಿಂಹಪಾಲು. ಈ ಹಿಂದೆ ಮುಂಗಾರು ಮಳೆ ಚಿತ್ರ ಕೂಡಾ ಆರಂಭದಲ್ಲಿ ಪ್ರೇಕ್ಷಕರನ್ನು ಸೋಕಿದ್ದೇ ಹಾಡುಗಳ ಮೂಲಕ. ಈ ನಿಟ್ಟಿನಲ್ಲಿ ಹೇಳೋದಾದರೆ ಸವರ್ಣದೀರ್ಘ ಸಂಧಿಯ ಮೂಲಕ ಮತ್ತೆ ಮುಂಗಾರು ಶುರುವಾಗಿ ಮನೋಮೂರ್ತಿ ಪಾಲಿನ ಸುರ್ಣಯುಗವೂ ಆರಂಭವಾಗುವ ಲಕ್ಷಣಗಳಿವೆ.

  • ‘ಚಾಲಿಪೋಲಿಲು’ ಸಾರಥಿಯ ಸವರ್ಣದೀರ್ಘ ಸಂಧಿ!

    ‘ಚಾಲಿಪೋಲಿಲು’ ಸಾರಥಿಯ ಸವರ್ಣದೀರ್ಘ ಸಂಧಿ!

    ಬೆಂಗಳೂರು: ತುಳು ಚಿತ್ರರಂಗಕ್ಕೂ ಕನ್ನಡ ಚಿತ್ರರಂಗಕ್ಕೂ ನೇರಾ ನೇರ ಕನೆಕ್ಷನ್ನುಗಳಿವೆ. ಇದೀಗ ವ್ಯಾಪಕವಾಗಿ ಮಾರುಕಟ್ಟೆ ವಿಸ್ತರಿಸಿಕೊಂಡಿರುವ ತುಳು ಚಿತ್ರರಂಗದಲ್ಲಿ ಒಂದು ಗೆಲುವು ಕಂಡವರ ಮುಂದಿನ ಕನಸು ಹೆಚ್ಚಿನದ್ದಾಗಿ ಕನ್ನಡ ಚಿತ್ರರಂಗವೇ ಆಗಿರುತ್ತದೆ. ಹಾಗೆ ಒಂದಷ್ಟು ಮಂದಿ ಬಂದು ಕನ್ನಡ ಚಿತ್ರರಂಗದ ಭಾಗವಾಗಿದ್ದಾರೆ. ಇದೀಗ ಸವರ್ಣದೀರ್ಘ ಸಂಧಿ ಚಿತ್ರದ ಮೂಲಕ ಮತ್ತೊಂದು ಪ್ರತಿಭಾವಂತರ ತಂಡದ ಆಗಮನವಾಗಿದೆ. ಅದರಲ್ಲಿಯೂ ತುಳುವಿನಲ್ಲಿ ದಾಖಲೆ ನಿರ್ಮಿಸಿದ್ದ ಚಾಲಿಪೋಲಿಲು ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ವೀರೇಂದ್ರ ಶೆಟ್ಟಿ ಇದೀಗ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ.

    ತುಳು ಚಿತ್ರರಂಗದಲ್ಲಿ ವೀರೇಂದ್ರ ಶೆಟ್ಟಿ ನಿರ್ದೇಶನ ಮಾಡಿದ್ದ ಮೊದಲ ಚಿತ್ರ ಚಾಲಿಪೋಲಿಲು. ಈ ಸಿನಿಮಾ ಆ ಭಾಷೆಯಲ್ಲಿ ಸೃಷ್ಟಿಸಿದ್ದ ಹವಾ ಸಣ್ಣ ಮಟ್ಟದ್ದೇನಲ್ಲ. ವರ್ಷಾಂತರಗಳ ಕಾಲ ಪ್ರದರ್ಶನಗೊಂಡಿದ್ದ ಚಾಲಿಪೋಲಿಲು ತುಳುವಿನಲ್ಲಿ ಸಾರ್ವಕಾಲಿಕ ದಾಖಲೆಯನ್ನೇ ಮಾಡಿತ್ತು. ಮೊದಲ ಹೆಜ್ಜೆಯಲ್ಲಿಯೇ ಆ ಮಟ್ಟಕ್ಕೆ ಗೆದ್ದಿದ್ದವರು ವೀರೇಂದ್ರ ಶೆಟ್ಟಿ. ಅವರೀಗ ಸವರ್ಣದೀರ್ಘ ಸಂಧಿ ಚಿತ್ರದ ಮೂಲಕ ಕನ್ನಡದಲ್ಲಿಯೂ ಅಂಥಾದ್ದೇ ಗೆಲುವು ಕಾಣುವ ಸೂಚನೆಯೊಂದಿಗೆ ಅಡಿಯಿರಿಸಿದ್ದಾರೆ.

    ಸವರ್ಣದೀರ್ಘ ಸಂಧಿ ಆರಂಭಿಕವಾಗಿಯೇ ಸೃಷ್ಟಿಸಿರೋ ಕ್ರೇಜ್ ನೋಡಿದರೆ ವೀರೇಂದ್ರ ಶೆಟ್ಟಿ ಪಾಲಿಗೆ ತುಳು ಚಿತ್ರರಂಗದಲ್ಲಿ ಸಿಕ್ಕ ಯಶಸ್ಸನ್ನೇ ಮೀರಿಸುವಂಥಾ ಗೆಲುವು ಕೈ ಹಿಡಿಯಲಿರೋ ಸ್ಪಷ್ಟ ಸೂಚನೆಗಳೇ ಕಾಣಿಸುತ್ತಿವೆ. ನಿರ್ದೇಶಕರಾಗಿಯೇ ಹಿಡಿತ ಹೊಂದಿದ್ದ, ಅದನ್ನೇ ಕನಸಾಗಿಸಿಕೊಂಡಿದ್ದ ವೀರೇಂದ್ರ ಶೆಟ್ಟಿ ಹೀರೋ ಆಗಿದ್ದೇ ಆಕಸ್ಮಿಕ. ಬೇರೆಯವರಿಗಾಗಿ ಕಥೆ ಮಾಡಿಕೊಂಡು ಅಡ್ಡಾಡಿದ್ದ ಅವರು ಈ ಚಿತ್ರದ ನಾಯಕನ ಪಾತ್ರವನ್ನು ತಾನು ನಿರ್ವಹಿಸೋ ಛಾತಿ ಇದೆ ಎಂಬುದನ್ನು ಖಚಿತಪಡಿಸಿಕೊಂಡೇ ಹೀರೋ ಆಗಿ ಅವತರಿಸಿದ್ದಾರೆ. ನಿರ್ದೇಶಕನಾಗಿ ಗೆದ್ದಿರುವ ಅವರೀಗ ನಾಯಕನಾಗಿಯೂ ಅಭೂತಪೂರ್ವ ಗೆಲುವು ಕಾಣೋ ಲಕ್ಷಣಗಳೇ ದಟ್ಟವಾಗಿವೆ.