Tag: ಸರ್ಪ

  • ಹಿಂದೂಗಳಿಗೆ ಮುನ್ನುಡಿ ಹಬ್ಬ ನಾಗರ ಪಂಚಮಿ – ಪುರಾಣ, ಇತಿಹಾಸದಲ್ಲಿ ಸರ್ಪದ ಬಗ್ಗೆ ಇರುವ ಉಲ್ಲೇಖಗಳೇನು?

    ಹಿಂದೂಗಳಿಗೆ ಮುನ್ನುಡಿ ಹಬ್ಬ ನಾಗರ ಪಂಚಮಿ – ಪುರಾಣ, ಇತಿಹಾಸದಲ್ಲಿ ಸರ್ಪದ ಬಗ್ಗೆ ಇರುವ ಉಲ್ಲೇಖಗಳೇನು?

    ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ನಾಗರ ಪಂಚಮಿ ಮುನ್ನುಡಿ ಎಂಬಂತೆ ಬರುತ್ತದೆ. ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪಡುವ ಈ ಹಬ್ಬದ ಬಳಿಕ ಗಣೇಶ ಚತುರ್ಥಿ, ಕೃಷ್ಣ ಜನ್ಮಾಷ್ಟಮಿ, ನವರಾತ್ರಿ ಸೇರಿದಂತೆ ಇತರ ಹಬ್ಬಗಳು ಬರುತ್ತವೆ. ನಾಗರ ಪಂಚಮಿಗೆ ಸಂಬಂಧಿಸಿದಂತೆ ಪುರಾಣ, ಇತಿಹಾಸ ಮಾತ್ರವಲ್ಲದೇ ಜಾನಪದದ ಸಾಕಷ್ಟು ಕಥೆಗಳಿವೆ.

    ನಾಗನ ಪೂಜೆ ಭಾರತದ ಪ್ರಾಚೀನ ಸಂಪ್ರದಾಯ. ನಾಗರ ಪಂಚಮಿಯನ್ನು ಪವಿತ್ರವಾದ ದಿನ ಎಂದು ನಂಬಲಾಗಿದೆ. ಪುರಾಣದಲ್ಲಿ ವಾಸುಕಿ, ತಕ್ಷಕ, ಕಾಳೀಯ, ಮಣಿಭದ್ರ, ಕಾರ್ಕೋಟಕ, ಧನಂಜಯ ನಾಗದೇವರುಗಳಾಗಿ ಕಾಣಿಸಿಕೊಂಡಿದ್ದಾರೆ. ಇವರ ಪ್ರತಿಮೆಗಳಿಗೆ ಕ್ಷೀರಾಭಿಷೇಕ ಮಾಡುವ ಪದ್ಧತಿ ವ್ಯಾಪಕವಾಗಿದೆ.

    ಗಣಪತಿಯ ಹೊಟ್ಟೆಯ ಪಟ್ಟಿಯಾಗಿ, ಶಿವನ ಆಭರಣ ವಾಗಿ, ವಿಷ್ಣುವಿನ ಹಾಸಿಗೆಯಾಗಿ, ಕುಂಡಲಿನೀ ಶಕ್ತಿಯ ಪ್ರತೀಕವಾಗಿ, ತ್ರಿಪುರ ಸಂಹಾರ ಕಾಲದಲ್ಲಿ ಮೇರುವೆಂಬ ಬಿಲ್ಲಿನ ಹೆದೆಯಾಗಿ, ಸಮುದ್ರಮಂಥನ ಕಾಲದಲ್ಲಿ ಮಂದರ ಪರ್ವತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜಚಿಹ್ನೆಯಾಗಿ, ಭೂಮಿಯನ್ನು ಹೊತ್ತ ಆದಿಶೇಷನಾಗಿ, ಪಾರ್ಶ್ವನಾಥ ತೀರ್ಥಂಕರನ ಶಿರೋಲಾಂಛನವಾಗಿ, ಲಕ್ಷ್ಮಣ, ಬಲರಾಮ, ಸುಬ್ರಹ್ಮಣ್ಯ ಸ್ವಾಮಿಯ ಅನನ್ಯ ಸ್ವರೂಪವಾಗಿರುವ ನಾಗ ಹಿಂದೂಗಳ ಪಾಲಿನ ದೇವರಾಗಿದ್ದಾನೆ.

    ಸಿಂಧೂ ಸಂಸ್ಕೃತಿಯ ಅವಶೇಷಗಳಲ್ಲಿ ಸರ್ಪಮಿಥುನ ಸಿಕ್ಕಿದ್ದನ್ನು ಗಮನಿಸಿದಾಗ, ಮಾನವ ಜನಾಂಗ ಆದಿಕಾಲದಿಂದಲೂ ಈ ನಾಗಾರಾಧನೆ ನಡೆಸಿಕೊಂಡು ಬಂದಿದ್ದು ತಿಳಿದುಬರುತ್ತದೆ. ಭಾರತದಾದ್ಯಂತ ಶೈವ, ಶಾಕ್ತ, ವೈಷ್ಣವ, ಬೌದ್ಧ, ಜೈನ ಮುಂತಾದ ಎಲ್ಲ ಸಂಪ್ರದಾಯಗಳಲ್ಲೂ ನಾಗನ ಪೂಜೆ ಮಾಡಲಾಗುತ್ತದೆ. ಇಷ್ಟಾರ್ಥ ಸಿದ್ಧಿಗಾಗಿ, ಪುತ್ರಪ್ರಾಪ್ತಿಗಾಗಿ ಪ್ರಾರ್ಥಿಸುವ ನಾಗ ಸತ್ತರೆ ವೈದೀಕ ರೀತಿಯಲ್ಲಿ ಉತ್ತರಕ್ರಿಯೆ ನಡೆಸುಬ ಪದ್ಧತಿಯೂ ಇದೆ.

    ನಾಗಾರಾಧನೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಜಪಾನ್, ಚೀನಾ, ಈಜಿಪ್ಟ್, ಗ್ರೀಸ್ ಮುಂತಾದ ಪುರಾತನ ಸಂಸ್ಕೃತಿಯ ಜನತೆಯೂ ನಾಗನನ್ನು ಪೂಜಿಸಿಕೊಂಡು ಬಂದಿದೆ. ಭಾರತದ ಇತಿಹಾಸದಲ್ಲಿ ಹಿಂದಿನಿಂದಲೂ ನಾಗವಂಶಗಳಿದ್ದವು. ಇತ್ತೀಚೆಗೆ ನಾಗ ಜನಾಂಗದ ಒಂದು ಪ್ರತ್ಯೇಕ ಪ್ರಾಂತವೇ ಏರ್ಪಟ್ಟಿದೆ. ನಾಗವಂಶೀಯರು ಕೇರಳ, ಅಸ್ಸಾಂ, ನಾಗಾಲ್ಯಾಂಡ್‌ಗಳಲ್ಲಿ ಇದ್ದಾರೆ.

    ನಾಗರ ಪಂಚಮಿ ಆಚರಣೆ ಹೇಗೆ?
    ಶ್ರಾವಣ ಶುದ್ಧ ಪಂಚಮಿಯ ದಿನ, ಗೋಮಯದಿಂದ ಬಾಗಿಲು ಸಾರಿ, ನಾಗನ ಚಿತ್ರಗಳನ್ನು ಬರೆದು ನೇಮನಿಷ್ಠೆಯಿಂದ ಪೂಜೆ ಮಾಡುತ್ತಾರೆ. ಕೆಲವರು ಪ್ರತಿ ಷಷ್ಠಿ ದಿನ ಸುಬ್ರಹ್ಮಣ್ಯನ ಪೂಜೆಮಾಡಿ ಹಾಲೆರೆಯುತ್ತಾರೆ. ಶ್ವೇತಾಂಬರ ಜೈನರು ಶ್ರಾವಣ ಶುದ್ಧ ಪಂಚಮಿಯಲ್ಲಿ ನಾಗಪಂಚಮಿ ವ್ರತವನ್ನೂ, ಮಾರ್ಗಶಿರ ಶುದ್ಧ ಪಂಚಮಿಯಲ್ಲಿ ನಾಗರ ದೀಪಾವಳಿಯನ್ನೂ ಆಚರಿಸುತ್ತಾರೆ.

    ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬತ್ತೀಸ ಶಿರಾಳ್ ಗ್ರಾಮದಲ್ಲಿ ನಾಗರ ಪಂಚಮಿ ದಿನ ಜೀವಂತ ನಾಗರಹಾವುಗಳನ್ನು ಪೂಜಿಸುತ್ತಾರೆ. ಸರ್ಪ ಕುಂಡಲಿನಿ ಶಕ್ತಿಯ ಸಂಕೇತ. ಸರ್ಪದ ಮಂಡಲಾಕಾರವು ಪೂರ್ಣವೃತ್ತ ಅಥವಾ ಶೂನ್ಯ. ಈ ಪೂರ್ಣದಲ್ಲಿ ಪೂರ್ಣವನ್ನು ಕಳೆದರೆ ಶೇಷವೂ ಪೂರ್ಣ. ಈ ಶೇಷನೇ ಆದಿಶೇಷನೆಂದೂ ಹೇಳುವರು. ಆದ್ದರಿಂದ ಅನಂತನೆಂಬ ಪೂರ್ಣವೃತ್ತದಲ್ಲಿ ಶೇಷಶಾಯಿ ವಿಷ್ಣುವಿರುವನು. ಅನಂತನೇ ಶೇಷ, ಶೇಷನೇ ಅನಂತ, ಶೂನ್ಯವು ಕೇವಲ ಶೂನ್ಯವಲ್ಲ. ಅದರ ಮಧ್ಯೆ ಸಚ್ಚಿದಾನಂದ ಸ್ವರೂಪದ ಕುಂಡಲಿನಿ ಶಕ್ತಿಯಿಂದಾವೃತವಾದ ವಿಭುವಿರುವನು ಎಂಬ ದಿವ್ಯ ಬೋಧೆನೆಯನ್ನು ನಾಗಪೂಜೆಯು ತಿಳಿಸುತ್ತದೆ. ಇದನ್ನೂ ಓದಿ: Naga Panchami: ಚಂದನವನದಲ್ಲಿ ನಾಗಾರಾಧನೆ: ಹಿರಿತೆರೆಗೂ ಹರಿದು ಬಂದ ಹಾವು!

    ಈ ದಿನ ಭಯ ಭಕ್ತಿಯಿಂದ ಪೂಜೆ ಮಾಡುವವರಿಗೆ ಯಾವುದೇ ಭಯವಿಲ್ಲ. ಭೂಮಿ, ಅಂತರಿಕ್ಷಗಳಲ್ಲೂ, ಅಶ್ವತ್ಥ ವೃಕ್ಷಗಳಲ್ಲೂ ವಾಸಿಸುವ ಸರ್ಪಗಳಿಗೆ ಸಾಷ್ಟಾಂಗ ನಮಸ್ಕಾರ ಎಂಬರ್ಥದ ಶ್ಲೋಕ ಕೃಷ್ಣ ಯಜುರ್ವೇದ ಸಂಹಿತೆಯಲ್ಲಿ ಬರುತ್ತದೆ.

    ನಾಗಪಂಚಮಿ ಹೆಣ್ಣುಮಕ್ಕಳ ಹಬ್ಬ ಎಂದು ಆಚರಿಸಲಾಗುತ್ತದೆ. ಅದು ಅವರಿಗೆ ಮಾಂಗಲ್ಯಪ್ರದ ಎಂದೂ ಸಂತಾನ ಪ್ರದ ಎಂದೂ ನಂಬಿಕೆ. ಈ ಹಬ್ಬ ತವರಿನ ಸೌಹಾರ್ದ ಸೂಚಕವೂ ಆಗಿದೆ. ಅಣ್ಣತಮ್ಮಂದಿರನ್ನು ಕರೆದು ಬೆನ್ನನ್ನು ಹಾಲಿನಿಂದ ಸವರಿ ಒಳ್ಳೆಯದಾಗಲಿ ಎಂದು ಪ್ರೀತಿಯಿಂದ ಹಾರೈಸುತ್ತಾರೆ.

    ಉತ್ತರ ಕರ್ನಾಟಕದಲ್ಲಿ ಇದನ್ನು ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತದೆ. ಅಂದು ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸುತ್ತಾರೆ. ಪಂಜಾಬಿನಲ್ಲಿ ಸರ್ಪದೇವತೆಯ ಸೂಚಕವಾಗಿ ಗೋಡೆಯ ಮೇಲೆ ಕಪ್ಪು ಚಿತ್ರ ಬರೆಯುತ್ತಾರೆ. ಇದರಿಂದ ಮನೆಗೆ ಸರ್ಪಬಾಧೆಯಿಲ್ಲ ಎಂಬುದು ನಂಬಿಕೆ. ಆಸ್ತಿಕ ಋಷಿಯ ಹೆಸರು ಬರೆಯುವುದರಿಂದ ಸರ್ಪ ಒಳಗೆ ಬರುವುದಿಲ್ಲ ಎಂಬ ಭಾವನೆ ಸರ್ವತ್ರ ಭಾರತದಲ್ಲಿ ಪ್ರಚಲಿತವಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 15 ಅಡಿ ಉದ್ದದ ಬೃಹತ್ ಕಾಳಿಂಗ ಸೆರೆ

    15 ಅಡಿ ಉದ್ದದ ಬೃಹತ್ ಕಾಳಿಂಗ ಸೆರೆ

    ಚಿಕ್ಕಮಗಳೂರು: ಸುಮಾರು 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ.

    ಅತ್ತಿಗೆರೆ ಗ್ರಾಮದ ಮಂಜುನಾಥ್ ಗೌಡ ಎಂಬವರ ತೋಟದಲ್ಲಿ 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಕಾಫಿ ತೋಟದಲ್ಲಿ ಕಾಳಿಂಗ ಸರ್ಪಗಳಿರುವುದು ಮಾಮೂಲಿ. ಅವು ಇದ್ದಲ್ಲೇ ಇರುವುದಿಲ್ಲ. ಬರುತ್ತದೆ, ಹೋಗುತ್ತೆ ಎಂದು ಜನ ಕೂಡ ಸುಮ್ಮನಾಗುತ್ತಿದ್ದರು. ಇದನ್ನು ಓದಿ: ಮನವಿ ಸ್ವೀಕರಿಸಲು ಬಾರದ ಸಚಿವರು – ಮನವಿ ಪತ್ರ, ಹೂವುಗಳನ್ನು ಸಮುದ್ರಕ್ಕೆ ಅರ್ಪಿಸಿ ಮೀನುಗಾರರಿಂದ ವಿನೂತನ ಪ್ರತಿಭಟನೆ

    ಆದರೆ ಲಾಕ್‍ಡೌನ್ ಇರುವುದರಿಂದ ತೋಟದಲ್ಲಿ ಹೆಚ್ಚಿನ ಕೆಲಸಗಾರರು ಇರಲಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಕಳೆದ ಎರಡು ದಿನಗಳಿಂದ ಕಾಳಿಂಗ ಸರ್ಪ ದಿನ ಕಾಣಿಸಿಕೊಳ್ಳುತ್ತಿರುವುದರಿಂದ ಕೆಲಸಗಾರರು ಭಯಗೊಂಡಿದ್ದಾರೆ. ಕೊನೆಗೆ ಆ ಬೃಹತ್ ಕಾಳಿಂಗ ಸರ್ಪವನ್ನ ಕಂಡ ಕೆಲಸಗಾರನೊಬ್ಬ ತೋಟದ ಮಾಲೀಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ತೋಟದ ಮಾಲೀಕ ಮಂಜುನಾಥ್ ಗೌಡ ವಿಷಯವನ್ನ ಸ್ನೇಕ್ ಆರೀಫ್ ತಿಳಿಸಿದ್ದಾರೆ.

    ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನ ಸೆರೆ ಹಿಡಿದಿದ್ದಾರೆ. ಕಾಫಿ ತೋಟ ಆಗಿರುವುದರಿಂದ ಕಾಳಿಂಗ ಸರ್ಪ ತೋಟದೊಳಗೆ ವೇಗವಾಗಿ ಸಂಚರಿಸುತ್ತೆ. ಗಿಡಗಳ ಮಧ್ಯೆ ಹಾವುಗಳು ಹೋದಷ್ಟು ವೇಗವಾಗಿ ಜನಸಾಮಾನ್ಯರು ಹೋಗಿ ಹಾವನ್ನ ಹಿಡಿಯುವುದು ಕಷ್ಟ. ಆದರೂ ಸ್ನೇಕ್ ಆರೀಫ್ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಳಿಂಗನನ್ನ ಸೆರೆ ಹಿಡಿದಿದ್ದಾರೆ.

    ಬಳಿಕ ಸೆರೆ ಹಿಡಿದ ಕಾಳಿಂಗ ಸರ್ಪವನ್ನ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಪರಿಸರವಾದಿಗಳು ಜಿಲ್ಲೆಯ ಮಲೆನಾಡು ಭಾಗದಲ್ಲಿ ಹಾವಾಡಿಗರು ಹಾವನ್ನ ಸೆರೆ ಹಿಡಿಯುವ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದನ್ನು ಓದಿ:ಮದ್ಯಕ್ಕಾಗಿ ಕ್ಯೂ- ಮದ್ಯದಂಗಡಿ ಮುಂದೆ ನೂಕುನುಗ್ಗಲು

  • ಹಾವಿನ ಹೆಡೆಯಂತಿದೆ ಬಾಲಕನ ಎಡಗೈ- ಬೆಳಗಾವಿಯಲ್ಲೊಂದು ಅಚ್ಚರಿ

    ಹಾವಿನ ಹೆಡೆಯಂತಿದೆ ಬಾಲಕನ ಎಡಗೈ- ಬೆಳಗಾವಿಯಲ್ಲೊಂದು ಅಚ್ಚರಿ

    – ಹುತ್ತದ ಬಳಿಯೇ ಬಾಲಕನ ವಾಸ್ತವ್ಯ

    ಬೆಳಗಾವಿ: ಸರ್ಪಶಾಪದಿಂದಾಗಿ ಬಾಲಕನೊಬ್ಬ ನರಕಯಾತನೆ ಅನುಭವಿಸುತ್ತಿರೋ ಘಟನೆಯೊಂದು ಬೆಳಗಾವಿ ನಡೆದಿರೋ ಬಗ್ಗೆ ಬೆಳಕಿಗೆ ಬಂದಿದೆ.

    ಬಾಲಕನ ಕೈ ಹಾವಿನ ಹೆಡೆಯನ್ನೇ ಹೋಲುತ್ತಿದೆ. ಆತನ ಎಡಗೈಯ ಎರಡು ಬೆರಳುಗಳು ಒಂದಾಗಿ ಸರ್ಪದ ಹೆಡೆಯಂತಾಗಿದ್ದು, ಅಚ್ಚರಿ ಹುಟ್ಟಿಸಿದೆ. ಕನಸಲ್ಲಿ ಹಾವು ಬರುತ್ತೆ ಅಂತಾ ಬಾಲಕ ಒದ್ದಾಡುತ್ತಾನೆ. ಅಲ್ಲದೇ ರಾತ್ರೋರಾತ್ರಿ ಹುತ್ತದ ಬಳಿ ಕುಳಿತಿರುತ್ತಾನೆ. ಯಾವುದೇ ಆಸ್ಪತ್ರೆಗೆ ಕರೆದೊಯ್ದರೂ ಪರಿಹಾರ ಸಿಕ್ಕಿಲ್ಲ. ನಾಗರಹಾವನ್ನು ಮುಟ್ಟಿದ್ರೂ ಈತನಿಗೆ ಕಚ್ಚೋದಿಲ್ಲ. ಶಾಲೆಯಲ್ಲಿ ಫ್ರೆಂಡ್ಸ್ ಜೊತೆ ಇರಬೇಕಾದ ಬಾಲಕನಿಗೆ ಇದೆಂಥಾ ಶಾಪ ಅನ್ನೋ ಪ್ರಶ್ನೆಯೊಂದು ಇದೀಗ ಕಾಡುತ್ತಿದೆ.

    ಜಿಲ್ಲೆಯ ಪೂಜೇರಿ ಕುಟುಂಬಕ್ಕೆ ತಲೆ ತಲಾಂತರಗಳಿಂದ ಸರ್ಪದ ಶಾಪವಿದೆಯಂತೆ. ಹಲವಾರು ಆಸ್ಪತ್ರೆಗಳಿಗೆ ಹೋದರೂ ಇದಕ್ಕೆ ಪರಿಹಾರ ಸಿಕ್ಕಿಲ್ಲ ಎಂದು ಪೂಜೇರಿ ಕುಟುಂಬದವರ ಹೇಳುತ್ತಾರೆ. ಈ ಸಮಸ್ಯೆಯಿಂದ ಬಾಲಕ ತನ್ನ ವಿದ್ಯಾಭ್ಯಾಸವನ್ನೂ ಮೊಟಕುಗೊಳಿಸಿದ್ದಾನೆ. ಒಂದೆಡೆ ಕಿತ್ತು ತಿನ್ನುವ ಬಡತನ ಇನ್ನೊಂದೆಡೆ ಬಾಲಕನ ಸಮಸ್ಯೆ ಪಾಲಕರ ನಿದ್ದೆಗೆಡಿಸಿದೆ.

    ರಾತ್ರಿ ನನ್ನ ಕನಸಲ್ಲಿ ಹಾವು ಬರುತ್ತದೆ. ಬಳಿಕ ಹುತ್ತದ ಬಳಿ ಬಂದು ಕುಳಿತರೆ ಸಮಾಧಾನವಾಗುತ್ತದೆ. ನಾನು ಸಣ್ಣ ಇರುವಾಗಿಂದಲೂ ಇದೆ. ತಲೆತಲಾಂತರದಿಂದ ಈ ದೋಷ ನಮಗೆ ಇದೆ ಅಂತ ಬಾಲಕ ತಿಳಿಸಿದ್ದಾನೆ.

    ತಲೆತಲಾಂತರದ ಶಾಪ ಇದಾಗಿದ್ದು, ಈ ಮನೆಯಲ್ಲಿ ಪೂರ್ವಜರು ಹಾವನ್ನು ಹೊಡೆದಿದ್ದಾರಂತೆ. ಆ ಬಳಿಕದಿಂದ ಹಾವು ಮನೆಯಲ್ಲೇ ಇರುತ್ತಿತ್ತಂತೆ. ಹಾವಿನ ಮೇಲೆ ಹಾಲಿನ ಪಾತ್ರೆ ಇಟ್ಟು ಸಾಯಿಸಿದ್ದರಂತೆ. ಹೀಗಾಗಿ ಈ ಕುಟುಂಬಕ್ಕೆ ದೋಷ ಅಂಟಿಕೊಂಡಿದೆ. ಸದ್ಯ ಬಾಲಕನ ಈ ಸಮಸ್ಯೆಯಿಂದ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ ಅಂತ ತಿಳಿದುಬಂದಿದೆ. ಸದ್ಯ ಬಾಲಕನ ಕುಟುಂಬಸ್ಥರು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಅಥವಾ ತಮಿಳುನಾಡಿನ ದೇವಾಲಯಕ್ಕೆ ತೆರಳಿ ಪೂಜೆ-ಪುನಸ್ಕಾರಗಳನ್ನು ಮಾಡುವ ಯೋಚನೆ ಮಾಡಿದ್ದಾರೆ.

    ಬಾಲಕ ಇತರ ಮಕ್ಕಳಂತೆ ಚಟುವಟಿಕೆಯಿಂದರಲ್ಲ. ಬದಲಾಗಿ ತನ್ನ ಪಾಡಿಗೆ ತಾನು ಕುಳಿತುಕೊಂಡಿರುತ್ತಾನೆ. ಕಣ್ಣಲ್ಲಿ ನೀರು ಬರುತ್ತಿರುತ್ತದೆ. ಅಲ್ಲದೇ ಮಲಗುವ ಸಂದರ್ಭದಲ್ಲೂ ಹಾವಿನ ರೀತಿಯೇ ಮಲಗಿರುತ್ತಾನೆ. ಒಟ್ಟಿನಲ್ಲಿ ಬಾಲಕನ ಈ ಸಮಸ್ಯೆಯಿಂದ ಆದಷ್ಟು ಬೇಗ ಮುಕ್ತವಾಗಲಿ ಎಂಬುದೇ ಸ್ಥಳೀಯರ ಆಶಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪ್ರಯಾಣಿಕರ ಜೊತೆ ರೈಲಿನಲ್ಲಿ ಪ್ರಯಾಣಿಸಿದ ಹಸಿರು ಹಾವು!

    ಪ್ರಯಾಣಿಕರ ಜೊತೆ ರೈಲಿನಲ್ಲಿ ಪ್ರಯಾಣಿಸಿದ ಹಸಿರು ಹಾವು!

    ಮುಂಬೈ: ಇಲ್ಲಿನ ಸ್ಥಳೀಯ ರೈಲೊಂದರ 2 ನೇ ಕಂಪಾರ್ಟ್ ಮೆಂಟ್‍ನಲ್ಲಿ ಕೈ ಹಿಡಿದುಕೊಳ್ಳುವ ಹಾಂಗಿಂಗ್ ಸ್ಟಾಂಡ್ ಗೆ ಹಸಿರು ಹಾವೊಂದು ಸುತ್ತಿಕೊಂಡಿದ್ದು, ಪ್ರಯಾಣಿಕರ ಜೊತೆ ರೈಲಿನಲ್ಲಿ ಸಂಚರಿಸಿದೆ.

    ಸಾಮಾನ್ಯವಾಗಿ ರೈಲುಗಳಲ್ಲಿ ಪ್ರಯಾಣಿಕರು ಹಾಂಗಿಂಗ್ ಸ್ಟಾಂಡ್ ಅನ್ನು ಹಿಡಿದುಕೊಂಡು ನಿಂತಿರುತ್ತಾರೆ. ಇದೀಗ ಆ ಸ್ಟಾಂಡ್‍ನಲ್ಲಿ ಹಸಿರು ಹಾವೊಂದು ಸುತ್ತಿಕೊಂಡಿದ್ದು, ಜನರಲ್ಲಿ ಆತಂಕವನ್ನು ಉಂಟುಮಾಡಿದೆ. ಈ ಹಾವು ಬೆಳಗ್ಗೆ 8.33 ಥತ್ವಾಲಾ-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಎಂಬ ಸ್ಥಳೀಯ ರೈಲಿನಲ್ಲಿ ಇದ್ದು, ರೈಲು ಥಾಣೆಗೆ ತಲುಪುತ್ತಿದ್ದಂತೆ ಕಾಣಿಸಿಕೊಂಡಿದೆ.

    ಈ ಅವಘಡದಿಂದ ಜನರೆಲ್ಲರೂ ದಿಗಿಲುಗೊಂಡು ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದಾರೆ. ಅಲ್ಲದೇ ಹಾವನ್ನು ಕಂಡು ಬೆದರಿ ಕಿರುಚಿದ್ದಾರೆ. ಬಳಿಕ ರೈಲ್ವೇ ಪೊಲೀಸರನ್ನು ಕಾಪಾಡುವಂತೆ ಒತ್ತಾಯಿಸಿದರು. ಹಾಗಾಗಿ ರೈಲು ಥಾಣೆಗೆ ಬರುತ್ತಿದ್ದಂತೆ ರೈಲ್ವೇ ಪೊಲೀಸರು 2 ನೇ ಕಂಪಾರ್ಟ್‍ಮೆಂಟ್ ನಲ್ಲಿದ್ದ ಜನರನ್ನು ಕಾಪಾಡಿದ್ದಾರೆ. ನಂತರ ಭದ್ರತೆ ಮೇರೆಗೆ ಆ ಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.

    ಮತ್ತೆ ಪ್ರಯಾಣ ಮುಂದುವರಿಸಬೇಕಾದ ಪ್ರಯಾಣಿಕರು ರೈಲನ್ನು ಹತ್ತಿ, ಮತ್ತೆ ಯಾವುದಾದರೂ ಸರಿಸೃಪಗಳು ಇರಬಹುದೆಂದು ಪರೀಕ್ಷಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಸ್ಥಳೀಯ ರೈಲು ಸಮಯಕ್ಕೆ ಸರಿಯಾಗಿ ಸ್ಥಳವನ್ನು ಸೇರಲು ವಿಳಂಬವಾಗಿದೆ. ಸದ್ಯ ಈ ಹಸಿರು ಹಾವಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೇಂದ್ರ ರೈಲ್ವೇ ಮುಖ್ಯ ಅಧಿಕಾರಿಯಾದ ಸುನೀಲ್ ಉದಾಸಿ, 1ನೇ ಹಾಗೂ 2 ಬಾರಿ ರೈಲು ಪ್ರಯಾಣಿಸಿದಾಗ ಈ ಅವಘಡ ಸಂಭವಿಸಿರಲಿಲ್ಲ. 3 ನೇ ಬಾರಿ ಸಂಭವಿಸಿದ್ದು, ಇದು ಯಾರಾದೋ ಕೈವಾಡವಿರಬಹುದು ಎಂಬ ಅನುಮಾನವಿದೆ. ಹಾವು ಹೇಗೆ ರೈಲನ್ನು ಪ್ರವೇಶಿಸಿತ್ತು ಎಂಬುದನ್ನು ವಿಡಿಯೋ ನೋಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.