Tag: ಸರ್ಜಿಕಲ್ ಸ್ಟ್ರೈಕ್ 2.0

  • ಮೂರು ವಿಶ್ವದಾಖಲೆಗಳನ್ನು ಯೋಧರಿಗೆ ಸಮರ್ಪಿಸಿದ ತನುಶ್ರೀ ಪಿತ್ರೋಡಿ!

    ಮೂರು ವಿಶ್ವದಾಖಲೆಗಳನ್ನು ಯೋಧರಿಗೆ ಸಮರ್ಪಿಸಿದ ತನುಶ್ರೀ ಪಿತ್ರೋಡಿ!

    ಉಡುಪಿ: ಉಗ್ರರ ಪುಲ್ವಾಮಾ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು, ಭಾರತದಾದ್ಯಂತ ಜನ ವಿಜಯೋತ್ಸವ ಆಚರಿಸುತ್ತಿರುವ ಬೆನ್ನಲ್ಲೇ ಉಡುಪಿಯ ತನುಶ್ರೀ ಪಿತ್ರೋಡಿ ತನ್ನ ಮೂರು ವಿಶ್ವದಾಖಲೆಗಳನ್ನು ಯೋಧರಿಗೆ ಸಮರ್ಪಿಸಿ ದೇಶಭಕ್ತಿ ಮೆರೆದಿದ್ದಾಳೆ.

    ಒಂದು ನಿಮಿಷದಲ್ಲಿ ಅತಿ ಹೆಚ್ಚು ನಿರಾಲಂಬ ಪೂರ್ಣ ಚಕ್ರಾಸನ ಮತ್ತು ಧನುರಾಸನ ಮಾಡಿದ್ದಕ್ಕೆ ತನುಶ್ರೀ ಪಿತ್ರೋಡಿ ಹೆಸರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಹಾಗೂ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಪುಸ್ತಕಕ್ಕೆ ಸೇರ್ಪಡೆಯಾಗಿತ್ತು. ಇದೀಗ ಆ ಮೂರೂ ದಾಖಲೆಗಳನ್ನು ಭಾರತದ ವೀರ ಯೋಧರಿಗೆ ಈ ಪುಟ್ಟ ಬಾಲಕಿ ಸಮರ್ಪಣೆ ಮಾಡಿದ್ದಾಳೆ. ದೇಶದಲ್ಲಿ ಯೋಧರು ಮಾಡುವ ಕೆಲಸಕ್ಕಿಂತ ಮಿಗಿಲಾದ ಕೆಲಸ ಇನ್ಯಾವುದೂ ಇಲ್ಲ ಅಂತ ತನುಶ್ರೀ ಹೇಳಿದ್ದಾಳೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ತನುಶ್ರೀ, 13 ದಿನದ ಹಿಂದೆ ಉಗ್ರಗಾಮಿಗಳು ನಮ್ಮ ಸೈನಿಕರನ್ನು ಕೊಂದಿದ್ದರು. ಅದನ್ನು ಟಿವಿಯಲ್ಲಿ ನೋಡಿ ಕಣ್ಣೀರು ಬಂತು. ನಾನು ಒಂದು ವರ್ಷದ ಹಿಂದೆ ಮಾಡಿದ ದಾಖಲೆ ಮತ್ತು ವಾರದ ಹಿಂದೆ ಮಾಡಿರುವ ಮತ್ತೆರಡು ದಾಖಲೆಗಳನ್ನು ಯೋಧರಿಗೆ ಸಮರ್ಪಿಸುತ್ತೇನೆ ಎಂದು ತಿಳಿಸಿದ್ದಾಳೆ.

    ಪಾಕಿಸ್ತಾನದ ಉಗ್ರರು ಭಾರತದಲ್ಲಿ ದಾಳಿ ಮಾಡಿ 40 ಸೈನಿಕರನ್ನು ಹತ್ಯೆ ಮಾಡಿದ ಫೋಟೋಗಳನ್ನು ನೋಡಿ ಬಹಳ ಬೇಸರವಾಗಿದೆ. ಈಗ ನಮ್ಮ ದೇಶದ ಸೈನಿಕರು ಪಾಕಿಸ್ತಾನದವರನ್ನು ದಾಳಿ ಮಾಡಿ ಕೊಂದಿದ್ದಾರೆ. ನನ್ನ ಎಲ್ಲಾ ಪ್ರಶಸ್ತಿಯ ಗೌರವ ನಮ್ಮ ದೇಶದ ಸೈನಿಕರಿಗೆ ಸಲ್ಲಬೇಕು. ಇದು ನನ್ನ ಆಸೆಯೂ ಹೌದು, ನಮ್ಮ ತಂದೆ ತಾಯಿಯ ಆಸೆಯೂ ಹೌದು. ನಾವು ಮನೆಯಲ್ಲಿ ಆರಾಮವಾಗಿ ಇರುತ್ತೇವೆ. ಸೈನಿಕರು ಮನೆ ಬಿಟ್ಟು- ಸಂಬಂಧದವರನ್ನು ಬಿಟ್ಟು ದೇಶ ರಕ್ಷಣೆ ಮಾಡುತ್ತಾರೆ. ಪ್ರಶಸ್ತಿಯನ್ನು ಸೈನಿಕರಿಗೆ ಅರ್ಪಣೆಮಾಡಿದ್ದು ಶಾಲೆಯ ಶಿಕ್ಷಕರಿಗೂ ಖುಷಿಯಾಗಿದೆ ಎಂದು ತನುಶ್ರೀ ಸಂತೋಷಪಟ್ಟಳು.

    ತನುಶ್ರೀ ಪಿತ್ರೋಡಿ ಪೋಷಕರು ಮಾತನಾಡಿ, ದೇಶಾಭಿಮಾನ ಮಕ್ಕಳಲ್ಲಿ ತುಂಬುವುದು ಎಲ್ಲಾ ತಂದೆ ತಾಯಿಗಳ ಕರ್ತವ್ಯ. ದೇಶಕ್ಕೆ, ಸೈನಿಕರಿಗೆ ನಮ್ಮಿಂದ ಏನೂ ಕೊಡಲು ಸಾಧ್ಯವಿಲ್ಲ. ಬಿಸಿಲು ಮಳೆ ಚಳಿಯನ್ನು ಲೆಕ್ಕಿಸದೇ ದೇಶವನ್ನು ಹಗಲಿರುಳು ಅವರು ಕಾಯುತ್ತಾರೆ. ಈ ಪ್ರಶಸ್ತಿಯನ್ನು ಯೋಧರಿಗೆ ಅರ್ಪಿಸುವುದರಿಂದ ಅವರ ಮನಸ್ಸಿಗೆ ಖುಷಿಯಾದರೆ, ಅವರ ಮುಖದಲ್ಲಿ ಒಂದು ನಗು ಮೂಡಿದರೆ ಅಷ್ಟೇ ಸಾಕು. ಮಗಳು ವಿಶ್ವದಾಖಲೆ ಯೋಧರಿಗೆ ಅರ್ಪಿಸಿದ್ದು ಬಹಳ ಖುಷಿಯಾಗಿದೆ. ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಸಂಹಾರ ಮಾಡಿದ್ದು ಮನಸ್ಸಿಗೆ ನೆಮ್ಮದಿ ತಂದಿದೆ. 40 ಯೋಧರ ಆತ್ಮಕ್ಕೆ ಶಾಂತಿ ಸಿಕ್ಕರೆ ಅಷ್ಟೇ ಸಾಕು. ಭಾರತೀಯ ಸೇನೆಗೆ ನಮ್ಮದೊಂದು ಸೆಲ್ಯೂಟ್ ಎಂದು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಇಡೀ ಕುಟುಂಬ ಶ್ರದ್ಧಾಂಜಲಿ ಸಲ್ಲಿಸಿ, ವಾಯುಸೇನೆಯ ದಾಳಿಗೆ ಅಭಿನಂದನೆ ಸಲ್ಲಿಸಿದೆ.

    https://www.youtube.com/watch?v=zduxBSmQEHo

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹನುಮಂತ ಲಂಕೆಯನ್ನು ಸುಟ್ಟಂತೆ ವಾಯುಪಡೆ ಉಗ್ರರನ್ನು ಮಟ್ಟ ಹಾಕಿದೆ: ಸ್ಪೀಕರ್ ಮೆಚ್ಚುಗೆ

    ಹನುಮಂತ ಲಂಕೆಯನ್ನು ಸುಟ್ಟಂತೆ ವಾಯುಪಡೆ ಉಗ್ರರನ್ನು ಮಟ್ಟ ಹಾಕಿದೆ: ಸ್ಪೀಕರ್ ಮೆಚ್ಚುಗೆ

    ನವದೆಹಲಿ: ಲಂಕೆಯನ್ನು ಸುಟ್ಟು ಹನುಮಂತ ಬಂದಂತೆ ಭಾರತೀಯ ವಾಯುಪಡೆ ಪಾಕಿಸ್ತಾನ ಉಗ್ರರ ಕ್ಯಾಂಪ್‍ಗಳನ್ನು ಸುಟ್ಟು ನೆಲಸಮ ಮಾಡಿದೆ ಎಂದು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಏರ್‌ಸ್ಟ್ರೈಕ್‌ ಶೌರ್ಯವನ್ನು ಹೊಗಳಿದ್ದಾರೆ.

    ಭಾರತೀಯ ವಾಯುಪಡೆಗೆ ಇಂತಹ ಅದ್ಭುತ ಏರ್‌ಸ್ಟ್ರೈಕ್‌ ನಡೆಸಲು ಅನುಮತಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೂ ಧನ್ಯವಾದಗಳು. ಈ ಮೂಲಕ ಪಾಕಿಸ್ತಾನ ಮತ್ತೆ ಭಾರತದತ್ತ ತನ್ನ ಕೆಟ್ಟ ದೃಷ್ಟಿ ಹಾಕಲು ಹೆದರುವಂತೆ ವಾಯುಸೇನೆ ಮಾಡಿದೆ ಎಂದು ಶ್ಲಾಘಿಸಿದ್ದಾರೆ.

    ಪವನ ಪುತ್ರ ಹನುಮಂತ ಲಂಕೆಯನ್ನು ಧ್ವಂಸ ಮಾಡಿ ವಾಪಸ್ ಆದಂತೆ ವಾಯುಪಡೆ ಉಗ್ರರನ್ನು ಧ್ವಂಸ ಮಾಡಿ ಸುರಕ್ಷಿತವಾಗಿ ದೇಶಕ್ಕೆ ಮರಳಿದೆ. ಒಂದೇ ಒಂದು ಸಣ್ಣ ಗಾಯವಾದಂತೆ ಚಾಣಾಕ್ಯತನದಿಂದ ಕೆಲಸ ಮುಗಿಸಿ ವಾಯುಪಡೆ ವಾಪಸ್ ಬಂದಿದೆ. ಈ ಮೂಲಕ ಪ್ರಜೆಗಳಲ್ಲಿ ದೇಶದಲ್ಲಿ ಭಯೋತ್ಪದನೆ ನೆಲಸಮವಾಗುತ್ತದೆ ಎಂಬ ನಂಬಿಕೆ ಮೂಡುತ್ತಿದೆ. ಇಷ್ಟೆಲ್ಲ ನಡೆದರೂ, ನೂರಾರು ಉಗ್ರರು ಮಣ್ಣಾದರೂ ಪಾಕ್ ಸೇನೆಗೆ ಮಾತ್ರ ಕಿಂಚಿತ್ತು ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇದು ಭಾರತೀಯ ಸೇನೆಯ ಶಕ್ತಿ ಎಂದು ಸುಮಿತ್ರಾ ಮಹಾಜನ್ ಹೆಮ್ಮೆಯಿಂದ ವಾಯುಪಡೆಯ ಏರ್‌ಸ್ಟ್ರೈಕ್‌ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲಕೋಟ್ ಜೈಷ್ ಉಗ್ರರ ಬೋರ್ಡಿಂಗ್ ಸ್ಕೂಲ್ – ಭಾರತದ ವಿಮಾನಗಳನ್ನು ನೋಡಿ ಪಾಕ್ ಕನ್‍ಫ್ಯೂಸ್

    ಬಾಲಕೋಟ್ ಜೈಷ್ ಉಗ್ರರ ಬೋರ್ಡಿಂಗ್ ಸ್ಕೂಲ್ – ಭಾರತದ ವಿಮಾನಗಳನ್ನು ನೋಡಿ ಪಾಕ್ ಕನ್‍ಫ್ಯೂಸ್

    ನವದೆಹಲಿ: ಭಾರತೀಯ ವಾಯುಸೇನೆ ಮಂಗಳವಾರ ಬೆಳಗ್ಗೆ ಪಾಕಿನಲ್ಲಿ ಅಡಗಿದ್ದ ಉಗ್ರರಿಗೆ ಶಾಕ್ ನೀಡಿದೆ. ರಾತ್ರಿ ವೇಳೆ ನಿದ್ರಿಸುತ್ತಿದ್ದ ಉಗ್ರರ ಮೇಲೆ ಬಾಂಬ್ ದಾಳಿ ನಡೆಸಿ ಅಡಗುತಾಣವನ್ನೇ ನೆಲಸಮ ಮಾಡಿದೆ.

    ನಮ್ಮ ಹೆಮ್ಮೆಯ ವಾಯುಪಡೆಯ ಯೋಧರು ದಾಳಿ ಮಾಡಿದ್ದ ಬಾಲಕೋಟ್ ಉಗ್ರರ ನೆಲೆ ಅಂತಿಂಥ ನೆಲೆಯಲ್ಲ. ಅದು ಉಗ್ರರ ಬೋರ್ಡಿಂಗ್ ಸ್ಕೂಲ್ ಆಗಿತ್ತು. ಯುವಕರ ತಲೆಕೆಡಿಸಿ ಉಗ್ರರನ್ನಾಗಿ ರೂಪಿಸಿ ಭಾರತ ಮೇಲೆ ವಿಷಬಿಜ ಬಿತ್ತುತ್ತಿದ್ದ ಪ್ರಧಾನ ಕೇಂದ್ರ ಸ್ಥಳವೇ ಬಾಲಕೋಟ್. ಇದನ್ನೂ ಓದಿ:ಭಾರತದಿಂದ 50 ಉಗ್ರರ ಹತ್ಯೆ: ದಾಳಿ ಒಪ್ಪಿಕೊಂಡ ಪಾಕ್ ಸೇನೆ

    ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲಿದೆ ಎನ್ನುವುದನ್ನು ಅರಿತ ನೂರಾರು ಉಗ್ರರು ಪಾಕ್ ಆಕ್ರಮಿತ ಕಾಶ್ಮೀರದಿಂದ ಅರಣ್ಯ ಪ್ರದೇಶದ ಬೆಟ್ಟದ ತುದಿಯಲ್ಲಿ ರೆಸಾರ್ಟ್ ನಂತಿರುವ ಬಾಲಕೋಟ್ ನೆಲೆಗೆ ಸ್ಥಳಾಂತರಗೊಂಡಿದ್ದರು.

    5 ಸ್ಟಾರ್ ಹೋಟೆಲ್ ನಂತಿರುವ ಈ ನೆಲೆ ಸುರಕ್ಷಿತ ಎಂದು ಭಾವಿಸಿ ಉಗ್ರರು ಈ ನೆಲೆಯಲ್ಲಿ ಆಶ್ರಯ ಪಡೆದಿದ್ದರು. ಈ ಕ್ಯಾಂಪ್ ನಲ್ಲಿ ಸುಮಾರು 300ಕ್ಕೂ ಹೆಚ್ಚು ಉಗ್ರರು ಹಾಗೂ 25 ರಿಂದ 27 ಮಂದಿ ತರಬೇತುದಾರರು ತಂಗಿದ್ದರು ಎಂದು ಮೂಲಗಳು ತಿಳಿಸಿವೆ.

    ಬಾಲಕೋಟ್ ಕ್ಯಾಂಪ್ ನೆಲದ ಮೆಟ್ಟಿಲುಗಳಲ್ಲಿ ಅಮೆರಿಕ, ಇಂಗ್ಲೆಂಡ್ ಮತ್ತು ಇಸ್ರೇಲ್ ಧ್ವಜಗಳನ್ನು ಬಿಡಿಸಲಾಗಿತ್ತು. ಈ ತರಬೇತಿ ಶಿಬಿರ ಬಾಲಕೋಟ್ ಸಮೀಪದ ಕಾಡಿನಲ್ಲಿ ಆರು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿತ್ತು. ಈ ಶಿಬಿರದಲ್ಲಿ 600ಕ್ಕೂ ಹೆಚ್ಚು ಮಂದಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಇದನ್ನೂ ಓದಿ:ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ದೊಡ್ಡ ದೊಡ್ಡ ಕೊಠಡಿಗಳು, ಈಜುಕೊಳ, ಜಿಮ್ ಸೆಂಟರ್‍ಗಳನ್ನು ಇಲ್ಲಿ ನಿರ್ಮಾಣಗೊಂಡಿದೆ. ತರಬೇತಿ ನೀಡಿದ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಇಲ್ಲೇ ನೀಡಲಾಗುತಿತ್ತು. ಜೈಷ್ ಸಂಘಟನೆಯ ಮದ್ದುಗುಂಡುಗಳ ಸಂಗ್ರಹಾಲಯ ಇದಾಗಿತ್ತು. ಅರಣ್ಯ ಪ್ರದೇಶದಲ್ಲಿ ಉಗ್ರರಿಗೆ ಶೂಟಿಂಗ್ ತರಬೇತಿ ನೀಡಲಾಗುತಿತ್ತು.

    ಬಾಲಕೋಟ್ ಮುಖ್ಯನಗರದಿಂದ 20 ಕಿ.ಮೀ ದೂರದಲ್ಲಿರುವ ಜೈಷ್ ಉಗ್ರರ ಕೇಂದ್ರ ಸ್ಥಳ ಭಾರತದ ಗಡಿ ನಿಯಂತ್ರಣ ರೇಖೆಯಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ಅಮೆರಿಕದ ದಾಳಿಗೆ ಬಲಿಯಾಗಿದ್ದ ಅಲ್‍ಕೈದಾ ಸಂಘಟನೆಯ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಅಡಗಿದ್ದ ಅಬೋಟಾಬಾದ್ ನಗರ ಬಾಲಕೋಟ್‍ನಿಂದ 60 ಕಿ.ಮೀ ದೂರದಲ್ಲಿದೆ. ಇದನ್ನೂ ಓದಿ:ರಾತ್ರಿ ವಿಮಾನಗಳು ಹಾರಾಡುತ್ತಿದ್ದು, ಶಬ್ಧ ಕೇಳಿ ಭಯದಲ್ಲಿ ನಿದ್ದೆ ಬಂದಿಲ್ಲ- ಪ್ರತ್ಯಕ್ಷದರ್ಶಿ

    ಭಾರತ ಸೇನೆ ಪ್ರತೀಕಾರವನ್ನು ತೀರಿಸಲಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಉಗ್ರರೆಲ್ಲರೂ ಬಾಲಕೋಟ್ ಅಡಗುದಾಣವನ್ನು ಸೇರಿದ್ದರು. ಭಾರತ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಸಾಧ್ಯವೇ ಇಲ್ಲ. ಒಂದು ವೇಳೆ ಭಾರತದ ಸೇನೆ ನುಗ್ಗಿದರೂ ಪಾಕ್ ಸೇನೆ ಹೊಡೆದು ಉರುಳಿಸಿ ನಮ್ಮನ್ನು ರಕ್ಷಿಸುತ್ತದೆ ಎಂದೇ ಉಗ್ರರು ಬಲವಾಗಿ ನಂಬಿದ್ದರು.

    ಪಾಕ್ ಕನ್‍ಫ್ಯೂಸ್:
    ದಾಳಿಯ ಬಗ್ಗೆ ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ಭಾರತದ ಪಶ್ಚಿಮ ಮತ್ತು ಕೇಂದ್ರ ವಾಯುನೆಲೆಯಿಂದ ಒಂದೇ ಸಮಯಕ್ಕೆ ಒಂದೇ ಬಾರಿಗೆ ಹಲವು ವಿಮಾನಗಳು ಹಾರಾಟ ಆರಂಭಿಸಿದವು. ಈ ವಿಚಾರ ಪಾಕಿಸ್ತಾನ ಅಧಿಕಾರಿಗಳಿಗೆ ಗೊತ್ತಾಗಿ ಅವರು ತುಂಬಾ ಗೊಂದಲಕ್ಕೆ ಒಳಗಾಗಿದ್ದರು. ಒಂದೇ ಸಮಯದಲ್ಲಿ ಹಲವು ವಿಮಾನಗಳು ಟೇಕಾಫ್ ಆಗಿದ್ದರಿಂದ ಗಡಿ ನಿಯಂತ್ರಣ ರೇಖೆಯ ಬಳಿ ದಾಳಿ ನಡೆಸಬಹುದು. ಆದರೆ ಪಾಕಿಸ್ತಾನದ ನೆಲದ ಒಳಗಡೆ ವಿಮಾನ ಬರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಊಹಿಸಿದ್ದರು ಗೃಹ ಇಲಾಖೆ ಮೂಲಗಳು ತಿಳಿಸಿವೆ.

    ಎಲ್ಲ ವಿಮಾನಗಳ ಜೊತೆ ಗುಂಪಿನಲ್ಲಿ ಬಂದಿದ್ದ ಮಿರಾಜ್ ಪಾಕಿಸ್ತಾನದ ರೇಡಾರ್‍ಗಳು ಕಣ್ಣು ತಪ್ಪಿಸಿ ಬಿಟ್ಟಿತು. ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಭೂಪ್ರದೇಶ ಒಳಗಡೆ ನುಗ್ಗಿದ ಮಿರಾಜ್ ವಿಮಾನ ಯಾರೂ ನಿರೀಕ್ಷೆ ಮಾಡದಂತೆ ಪಾಕ್ ನೆಲಕ್ಕೆ ನುಗ್ಗಿ ಉಗ್ರರ ಅಡಗುದಾಣದ ಮೇಲೆಯೇ ಬಾಂಬ್ ದಾಳಿ ನಡೆಸಿ ಯಶಸ್ವಿಯಾಗಿ ದೇಶಕ್ಕೆ ಮರಳಿತ್ತು. ಈ ಮೂಲಕ ನೀವೇ ಎಲ್ಲೇ ಅಡಗಿದ್ದರೂ ನಾವು ಹೊಡೆಯಬಲ್ಲೆವು ಎಂದು ತೋರಿಸಿಕೊಟ್ಟಿತು. ಅಷ್ಟೇ ಅಲ್ಲದೇ ಸಾಕ್ಷ್ಯ ಕೇಳಿದ ಪಾಕಿಸ್ತಾನಕ್ಕೆ ಅವರ ನೆಲದಲ್ಲೇ ಉತ್ತರ ನೀಡಿ ಪುಲ್ವಾಮಾ ದಾಳಿ ಸೇಡು ತೀರಿಸಿಕೊಂಡಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತದಿಂದ 50 ಉಗ್ರರ ಹತ್ಯೆ: ದಾಳಿ ಒಪ್ಪಿಕೊಂಡ ಪಾಕ್ ಸೇನೆ

    ಭಾರತದಿಂದ 50 ಉಗ್ರರ ಹತ್ಯೆ: ದಾಳಿ ಒಪ್ಪಿಕೊಂಡ ಪಾಕ್ ಸೇನೆ

    ನವದೆಹಲಿ: ಪುಲ್ವಾಮ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ವಾಯುಪಡೆ ನಡೆಸಿದ ಪ್ರತಿದಾಳಿಗೆ ಸುಮಾರು 50 ಮಂದಿ ಪಾಕ್ ಉಗ್ರರು ಹತ್ಯೆಯಾಗಿದ್ದಾರೆ ಎಂದು ಪಾಕಿಸ್ತಾನದ ಸೇನೆ ಹೇಳಿದೆ.

    ಭಾರತದ ವಾಯುಸೇನೆ ಬೆಳಗ್ಗೆ ನಡೆಸಿದ ದಾಳಿ ವೇಳೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಿತ್ತು. ಆದರೆ ಸಂಜೆಯ ವೇಳೆ ಸಾವು ನೋವು ಸಂಭವಿಸಿದೆ ಎನ್ನುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ.

    ಭಾರತೀಯ ವಾಯು ಪಡೆಯು ಗಡಿ ನಿಯಂತ್ರಣ ರೇಖೆಯನ್ನು ದಾಟಿ ದಾಳಿ ನಡೆಸಿ, ಪಾಕಿಸ್ತಾನದಲ್ಲಿ ಅಡಗಿ ಕುಳಿತ್ತಿದ್ದ ಸುಮಾರು 15 ಉಗ್ರರ ಅಡಗುತಾಣಗಳನ್ನು ಒಳಗೊಂಡ 6 ಪ್ರದೇಶವನ್ನು ಟಾರ್ಗೆಟ್ ಮಾಡಿ ವಾಯುಪಡೆ ದಾಳಿ ನಡೆಸಿದೆ. ಸದ್ಯ ಈ ದಾಳಿಯಲ್ಲಿ ಸುಮಾರು 50 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪಾಕ್ ಸೇನೆಯ ಮೂಲಗಳನ್ನು ಆಧಾರಿಸಿ ನ್ಯೂಸ್ 18 ವರದಿ ಮಾಡಿದೆ. ಇದನ್ನೂ ಓದಿ:ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ಪ್ರಮುಖವಾಗಿ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಉಗ್ರರ ತರಬೇತಿ ಕ್ಯಾಂಪ್‍ಗಳ ಮೇಲೆಯೇ ದಾಳಿ ನಡೆದಿದೆ ಎನ್ನುವುದನ್ನು ಪಾಕ್ ಸೇನೆ ಒಪ್ಪಿಕೊಂಡಿದೆ ಎಂದು ಮೂಲಗಳನ್ನು ಆಧಾರಿಸಿ ವಾಹಿನಿ ಸುದ್ದಿ ಪ್ರಸಾರ ಮಾಡಿದೆ.

    ಭಾರತದ ಗೃಹ ಇಲಾಖೆಯ ಮೂಲಗಳು ಸುಮಾರು 350ಕ್ಕೂ ಹೆಚ್ಚು ಉಗ್ರರು ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎಂದು ಹೇಳಿತ್ತು. ಎಷ್ಟು ಜನ ಉಗ್ರರು ಹತ್ಯೆಯಾಗಿದ್ದಾರೆ ಎನ್ನುವುದನ್ನು ಅಧಿಕೃತವಾಗಿ ಪಾಕ್ ತಿಳಿಸುವುದಿಲ್ಲ. ತಿಳಿಸಿದರೆ ಉಗ್ರರು ಪಾಕಿಸ್ಥಾನದಲ್ಲೇ ನೆಲೆಸಿದ್ದಾರೆ ಎನ್ನುವುದನ್ನು ಒಪ್ಪಿಕೊಂಡ ಹಾಗೆ ಆಗುತ್ತದೆ. ಆದರೆ ಬಾಂಬ್ ದಾಳಿ ನಡೆದು ಅಪಾರ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ ಎಂದು ಬಾಲಕೋಟ್ ನಿವಾಸಿಗಳೇ ಹೇಳುವ ಮೂಲಕ ಪಾಕ್ ಸುಳ್ಳನ್ನು ಬಯಲು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕವಿತೆ ಬರೆದು ವಾಯುಪಡೆಗೆ ಗೌರವ ಸಲ್ಲಿಸಿ #AlwaysReady ಎಂದ ಭಾರತೀಯ ಸೇನೆ!

    ಕವಿತೆ ಬರೆದು ವಾಯುಪಡೆಗೆ ಗೌರವ ಸಲ್ಲಿಸಿ #AlwaysReady ಎಂದ ಭಾರತೀಯ ಸೇನೆ!

    ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಗಡಿ ಭಾಗದಲ್ಲಿ ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, 21 ನಿಮಿಷದಲ್ಲಿ ಮೂರು ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಈ ಸರ್ಜಿಕಲ್ ಸ್ಟ್ರೈಕ್ 2.0 ಮಾಡಿ ಯಶಸ್ವಿಯಾದ ವಾಯುಪಡೆಗೆ ಭಾರತೀಯ ಸೇನೆ ಒಂದು ಕವಿತೆ ಸಮರ್ಪಿಸಿ ಟ್ವೀಟ್ ಮಾಡುವ ಮೂಲಕ ಗೌರವ ಸಲ್ಲಿಸಿದೆ.

    ಇಂದು ಮುಂಜಾನೆ 3.45ರ ಸುಮಾರಿಗೆ ಬಾಲ್‍ಕೋಟ್ ಮೇಲೆ ವಾಯುಪಡೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರ್ ಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿದೆ. ಪುಲ್ವಾಮದಲ್ಲಿ 44 ಮಂದಿ ಸಿಆರ್‌ಪಿಎಫ್ ಯೋಧರ ಬಲಿಪಡೆದ ಪಾಕ್ ಉಗ್ರರಿಗೆ ಭಾರತೀಯ ಸೇನೆ ಈ ಮೂಲಕ ಪ್ರತ್ಯುತ್ತರ ನೀಡಿದೆ. ಮಿರಾಜ್-2000 ಯುದ್ಧ ವಿಮಾನವನ್ನು ಬಳಸಿಕೊಂಡು ಕೆಲವೇ ನಿಮಿಷಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಉಗ್ರರನ್ನು ಭಾರತೀಯ ವಾಯುಪಡೆ ಭೇಟೆಯಾಡಿದೆ. ಇದನ್ನೂ ಓದಿ:ರಾತ್ರಿ ವಿಮಾನಗಳ ಶಬ್ಧ ಹೆಚ್ಚಿತ್ತು, ದಿಢೀರ್ ಒಂದು ಶಬ್ಧ ಬಂತು – ಬಾಲಕೋಟ್ ನಿವಾಸಿಗಳ ಪ್ರತಿಕ್ರಿಯೆ

    ಈ ಬಗ್ಗೆ ಇಡೀ ದೇಶವೇ ಹೆಮ್ಮೆಯಿಂದ ಸಂಭ್ರಮಿಸುತ್ತಿದೆ. ಅಲ್ಲದೆ ವಾಯುಪಡೆಯ ಈ ಸಾಹಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿರುವ ಭಾರತೀಯ ಸೇನೆ ಒಂದು ಕವಿತೆಯನ್ನು ವಾಯುಪಡೆಗೆ ಸಮರ್ಪಿಸುವ ಮೂಲಕ ಟ್ವೀಟ್ ಮಾಡಿ ಗೌರವ ಸಲ್ಲಿಸಿದೆ. ಎಡಿಜಿಪಿಐ ಇಂಡಿಯನ್ ಆರ್ಮಿ ಈ ಅದ್ಭುತ ಸರ್ಜಿಕಲ್ ಸ್ಟ್ರೈಕ್ 2.0ವನ್ನು ಮಹಾಭಾರತಕ್ಕೆ ಹೋಲಿಕೆ ಮಾಡಿದೆ. ಕವಿತೆಯಲ್ಲಿ ಭಾರತ ಹೇಡಿ ಅಲ್ಲ, ಸುಮ್ಮನೆ ಕೂರುವ ದೇಶವೂ ಅಲ್ಲ. ದುಷ್ಟ ಕೌರವರನ್ನು ಹೇಗೆ ಮಣ್ಣಾದರೋ ಅದೇ ರೀತಿ ಉಗ್ರರು ಮಣ್ಣಾಗುತ್ತಾರೆ ಎಂಬಂತೆ ಕವಿತೆ ರಚಿಸಿ ವಾಯುಪಡೆಯನ್ನು ಶ್ಲಾಘಿಸಿದೆ. #IndianArmy, #AlwaysReady ಎಂದು ಹ್ಯಾಷ್‍ಟ್ಯಾಗ್ ಹಾಕಿ ಈ ಕವಿತೆಯನ್ನು ಟ್ವೀಟ್ ಮಾಡಿದೆ. ಇದನ್ನೂ ಓದಿ:ಮಿರಾಜ್ ವಿಮಾನವನ್ನೇ ಬಳಸಿದ್ದು ಯಾಕೆ? ಅಂಥ ವಿಶೇಷತೆ ಅದರಲ್ಲಿ ಏನಿದೆ?

    ಪಾಕಿಸ್ತಾನದ ವಾಯುದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಭದ್ರತಾ ಸಮಿತಿ(ಸಿಸಿಎಸ್) ಸಭೆ ನಡೆದಿದೆ. ಈ ಸಭೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಮ್ಮ ಆಟಗಾರರು ಅತ್ಯುತ್ತಮವಾಗಿ ಆಡಿದ್ದಾರೆ: ಸೆಹ್ವಾಗ್

    ನಮ್ಮ ಆಟಗಾರರು ಅತ್ಯುತ್ತಮವಾಗಿ ಆಡಿದ್ದಾರೆ: ಸೆಹ್ವಾಗ್

    ನವದೆಹಲಿ: ಪುಲ್ವಾಮ ದಾಳಿಗೆ ಪ್ರತ್ಯುತ್ತರ ನೀಡಲು ಗಡಿ ನಿಯಂತ್ರಣ ರೇಖೆ ದಾಟಿ ಭಾರತೀಯ ವಾಯುಪಡೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿದಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಅಲ್ಲದೆ ಈ ಸರ್ಜಿಕಲ್ ಸ್ಟ್ರೈಕ್ 2.0 ನಡೆದ ಮೇಲಾದರೂ ತಪ್ಪನ್ನು ತದ್ದಿಕೊಂಡು ಸುಧಾರಿಸಿಕೊಳ್ಳಿ ಇಲ್ಲವಾದರೆ ಹೇಗೆ ನಿಮ್ಮನ್ನು ಸುಧಾರಿಸಬೇಕು ಅಂತ ನಮಗೆ ಗೊತ್ತು ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

    ಇಂದು ಮುಂಜಾನೆ ಭಾರತೀಯ ವಾಯುಪಡೆಯ 12 ಮಿರಾಜ್-2000 ಯುದ್ಧ ವಿಮಾನಗಳು ನಡೆಸಿದ ದಾಳಿಯಲ್ಲಿ 200ಕ್ಕೂ ಹೆಚ್ಚು ಉಗ್ರರು ಮಣ್ಣಾಗಿದ್ದಾರೆ. ಪುಲ್ವಾಮ ಕೃತ್ಯಕ್ಕೆ ಸೇಡು ತೀರಿಸಿಕೊಂಡಿರುವ ಭಾರತೀಯ ಸೇನೆಯನ್ನು ದೇಶದೆಲ್ಲೆಡೆ ಹಾಡಿ ಹೊಗಳುತ್ತಿದ್ದಾರೆ. ಹಾಗೆಯೇ ಈ ಬಗ್ಗೆ ವಾಯುಪಡೆಯ ಸಾಹಸವನ್ನು ಶ್ಲಾಘಿಸಿ ವೀರೇಂದ್ರ ಸೆಹ್ವಾಗ್ ತಮ್ಮದೇ ಕ್ರಿಕೆಟ್ ಶೈಲಿಯಲ್ಲಿ ಟ್ವೀಟ್ ಮಾಡಿ ಭಾರತೀಯ ಸೇನೆಗೆ ಅಭಿನಂದನೆ ತಿಳಿಸಿದ್ದಾರೆ. ಇದನ್ನೂ ಓದಿ:ಕವಿತೆ ಬರೆದು ವಾಯುಪಡೆಗೆ ಗೌರವ ಸಲ್ಲಿಸಿ #AlwaysReady ಎಂದ ಭಾರತೀಯ ಸೇನೆ!

    ನಮ್ಮ ಹುಡುಗರು ನಿಜಕ್ಕೂ ಉತ್ತಮ ಆಟ ಆಡಿದ್ದಾರೆ ಎಂದು ಬರೆದು, ಸುಧಾರಿಸಿಕೊಳ್ಳಿ ಇಲ್ಲವೇ ನಾವು ಸುಧಾರಿಸುತ್ತೇವೆ ಎಂದು ಹ್ಯಾಶ್‍ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಈ ಸರ್ಜಿಕಲ್ ಸ್ಟ್ರೈಕ್ 2.0 ಬಗ್ಗೆ ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಕೂಡ ಜೈ ಹಿಂದ್ ಐಎಎಫ್ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಭಾರತೀಯ ಸೇನೆಯ ಈ ಪ್ರತ್ಯುತ್ತರ ದಾಳಿಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದ್ದು, ಎಲ್ಲೆಡೆ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv