Tag: ಸರ್ಜಿಕಲ್ ಸ್ಟ್ರೈಕ್ 2

  • ಎಲ್ಲವನ್ನು ಮೊದ್ಲೇ ಹೇಳಲ್ಲ, ಮುಂದೆ ನಿಮ್ಗೆ ಗೊತ್ತಾಗುತ್ತೆ: ಪ್ರಧಾನಿ ಮೋದಿ

    ಎಲ್ಲವನ್ನು ಮೊದ್ಲೇ ಹೇಳಲ್ಲ, ಮುಂದೆ ನಿಮ್ಗೆ ಗೊತ್ತಾಗುತ್ತೆ: ಪ್ರಧಾನಿ ಮೋದಿ

    ನವದೆಹಲಿ: ಇಂದು ನಾನು ಎಲ್ಲವನ್ನು ಮೊದಲೇ ಹೇಳಲು ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ನಿಮಗೆ ಎಲ್ಲವೂ ಗೊತ್ತಾಗಲಿದೆ. ಇಂದು ಭಾರತಕ್ಕೆ ದೊಡ್ಡ ಜಯ ಸಿಕ್ಕಿದೆ ಎಂದು ವಾಯುದಾಳಿಯ ವಿಜಯದ ಸಂತೋಷವನ್ನು ಪರೋಕ್ಷವಾಗಿ ಪ್ರಧಾನಿ ಮೋದಿ ಯುವಕರೊಂದಿಗೆ ಹಂಚಿಕೊಂಡರು.

    ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ `ನ್ಯಾಷನಲ್ ಯೂತ್ ಫೆಸ್ಟಿವಲ್’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ, ಯುವ ಪೀಳಿಗೆ ಜೊತೆ ಸಂವಾದ ನಡೆಸಿದರು. ಸಂವಾದಕ್ಕೂ ಮುನ್ನ ಮಾತನಾಡಿ ಅವರು, ಇಂದಿನ ಯುವಕರು ಪ್ರತಿಯೊಂದರಲ್ಲಿಯೂ ಹೊಸತನವನ್ನು ಹುಡುಕುತ್ತಾರೆ. ಇಂದಿನ ಪೀಳಿಗೆಯವರು ತುಂಬಾ ಚಾಣಕ್ಷರಾಗಿರುತ್ತಾರೆ. ಕೆಲವರಿಗೆ ವಯಸ್ಸು ಆಗುತ್ತಿದೆ ಆದ್ರೆ ಬುದ್ಧಿ ಬೆಳೆಯಲ್ಲ ಅಂತಹವರನ್ನು ನಾವೆಲ್ಲ ನೋಡಿದ್ದೇವೆ. ನಿಮ್ಮ ಮನೆಯಲ್ಲಿರುವ ಮಕ್ಕಳನ್ನೇ ನೋಡಿ, ನಿಮಗಿಂತ ಚುರುಕಾಗಿರುತ್ತವೆ ಎಂದರು.

    ಇಂದಿನ ಯುವ ಪೀಳಿಗೆ ಮಲ್ಟಿ ಟಾಸ್ಕಿಂಗ್ ಗಾಗಿ ಸಿದ್ಧವಿರುತ್ತದೆ. ಹಾಗಾಗಿ ಹಲವು ಕೆಲಸಗಳನ್ನು ಏಕಕಾಲದಲ್ಲಿ ಮಾಡಿ ಯಶಸ್ವಿಯಾಗುತ್ತಾರೆ. ಗುರಿಗಳನ್ನು ಬೇಗ ತಲುಪುವುದಕ್ಕಾಗಿ ಹೆಚ್ಚಿನ ಶ್ರಮ ಹಾಕುತ್ತಾರೆ. ಇದುವೇ ಹೊಸ ಭಾರತದ ಆಧಾರವಾಗಿದೆ. ಹಾಗಾಗಿ ಯುವಕರಿಗೆ ಎಲ್ಲ ವಿಭಾಗದಲ್ಲಿ ಅವಕಾಶ ಸಿಗಬೇಕು ಮತ್ತು ಪ್ರೋತ್ಸಾಹ ದೊರೆಯಬೇಕು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಗ್ರರನ್ನು ಚೆಂಡಾಡಿದ ಭಾರತಕ್ಕೆ ಪಾಕ್ ಚಾಲೆಂಜ್

    ಉಗ್ರರನ್ನು ಚೆಂಡಾಡಿದ ಭಾರತಕ್ಕೆ ಪಾಕ್ ಚಾಲೆಂಜ್

    ಇಸ್ಲಾಂಬಾದ್: ಫೆಬ್ರವರಿ 26ರ ಬೆಳಗ್ಗಿನ ಜಾವ ಪಾಕಿಸ್ತಾನದಲ್ಲಿರುವ ಜೈಷ್ ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸುವ ಮೂಲಕ ಪುಲ್ವಾಮ ದಾಳಿಗೆ ಪ್ರತಿಕಾರ ತೆಗೆದುಕೊಂಡಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಕಿಸ್ತಾನ ಸೇನೆಯೆ ವಕ್ತಾರ ಆಸಿಫ್ ಗಫೂರ್ ಭಾರತಕ್ಕೆ ಚಾಲೆಂಜ್ ಹಾಕಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಭಾರತದ ಮಾಧ್ಯಮಗಳ ಕೆಲ ಸುದ್ದಿಯ ಚಿತ್ರಗಳನ್ನು ಪ್ರದರ್ಶಿಸಿದ ಆಸಿಫ್ ಗಫೂರ್, ಭಾರತೀಯ ವಾಯುಸೇನೆ ಬಾಲ್ ಕೋಟ್, ಮುಜಾಫರ್‍ಬಾದ್ ಮತ್ತು ಚಿಕೋಟಿಯಲ್ಲಿ ದಾಳಿ ನಡೆಸಿದೆಯಂತೆ. ಬರೋಬ್ಬರಿ 21 ನಿಮಿಷಗಳ ಕಾಲ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಈ ಕಾರ್ಯಾಚರಣೆ ನಡೆಸಿವೆ ಎಂದು ನೆರೆಯ ದೇಶದ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸುತ್ತಿವೆ. ಇದೊಂದು ದೊಡ್ಡ ಸುಳ್ಳಾಗಿದ್ದು, ಧೈರ್ಯವಿದ್ದರೆ ಪಾಕ್ ವಾಯುನೆಲೆಯಲ್ಲಿ ಭಾರತದ ವಿಮಾನಗಳು ಹಾರಾಟ ನಡೆಸಲಿ ಎಂದು ಆಸಿಫ್ ಗಫೂರ್ ಚಾಲೆಂಜ್ ಹಾಕಿದ್ದಾರೆ.

    ವಾಯುಸೇನೆಯ ಜೆಟ್‍ಗಳು ಯಾವಾಗಲೂ ಹಾರಾಡುವುದಿಲ್ಲ. ಆದ್ರೆ ಗಡಿರೇಖೆಯ ನಮ್ಮ ನಿಗಾ ಯಾವಾಗಲೂ ಇರುತ್ತದೆ. ಫೆಬ್ರವರಿ 14ರ ಬಳಿಕ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

    ಭಾರತ ಪಾಕಿಸ್ತಾನದ ಸೈನಿಕರು ಇಲ್ಲದ ಜಾಗದಲ್ಲಿ ದಾಳಿ ನಡೆಸಲು ಸಂಚು ರೂಪಿಸಿತ್ತು. ಸೈನಿಕರಲ್ಲದ ಸಾಮಾನ್ಯ ಜನರು ವಾಸವಾಗಿರುವ ಸ್ಥಳದಲ್ಲಿ ಬಾಂಬ್ ಹಾಕಲು ಪ್ಲಾನ್ ಮಾಡಿತ್ತು. ಸಾಮಾನ್ಯ ಜನರ ಮೇಲೆ ದಾಳಿ ನಡೆಸುವ ಮೂಲಕ ನಾವು ಉಗ್ರರನ್ನು ಕೊಂದಿದ್ದೇವೆ ಎಂದು ಹೇಳಿಕೊಳ್ಳಲು ಭಾರತ ಪ್ಲಾನ್ ಮಾಡಿತ್ತು ಎಂದು ಗಫೂರ್ ಆರೋಪಿಸಿದ್ದಾರೆ.

    ಭಾರತದ ಯುದ್ಧವಿಮಾನಗಳು ನಮ್ಮತ್ತ ಪ್ರವೇಶಿಸುತ್ತಿದ್ದಂತೆ ನಮ್ಮವರು ದಾಳಿ ನಡೆಸಿದಾಗ ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಎಸೆದು ಪರಾರಿಯಾದ್ರು. ಭಾರತ ತಾವು 200ರಿಂದ 300 ಉಗ್ರರನ್ನು ಕೊಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಯಾಣಿಕರಿಗೆ ಉಚಿತ ಸೇವೆ ನೀಡಿ ಸರ್ಜಿಕಲ್ ಸ್ಟ್ರೈಕ್ 2 ಸಂಭ್ರಮಿಸಿದ ಆಟೋ ಡ್ರೈವರ್

    ಪ್ರಯಾಣಿಕರಿಗೆ ಉಚಿತ ಸೇವೆ ನೀಡಿ ಸರ್ಜಿಕಲ್ ಸ್ಟ್ರೈಕ್ 2 ಸಂಭ್ರಮಿಸಿದ ಆಟೋ ಡ್ರೈವರ್

    ನವದೆಹಲಿ: ಪುಲ್ವಾಮಾ ದಾಳಿಯ ಪ್ರತಿಕಾರ ತೀರಿಸಿಕೊಂಡ ಹಿನ್ನಲೆಯಲ್ಲಿ ದೇಶವ್ಯಾಪಿ ಸಂತೋಷ ಮನೆ ಮಾಡಿದೆ. ಕೆಲವರು ಪಟಾಕಿ ಸಿಡಿಸಿ, ಸ್ವೀಟ್ ಹಂಚಿ ಸರ್ಜಿಕಲ್ ಸ್ಟ್ರೈಕ್ 2 ಅನ್ನು ಸಂಭ್ರಮಿಸಿದ್ದಾರೆ. ಆದರೆ ದೆಹಲಿಯ ಆಟೋ ಡ್ರೈವರ್ ಒಬ್ಬರು ವಿನೂತನ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.

    ಆಟೋ ಚಾಲಕ ಮನೋಜ್ ಅವರು ಫೆಬ್ರವರಿ 26ರಂದು (ಮಂಗಳವಾರ) ತಮ್ಮ ಆಟೋದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರಿಗೆಲ್ಲ ಉಚಿತವಾಗಿ ಸೇವೆ ಒದಗಿಸಿದ್ದಾರೆ. ಜೊತೆಗೆ ತಮ್ಮ ಆಟೋದಲ್ಲಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಹಾಗೂ ಭಾರತೀಯ ವಾಯು ಪಡೆ ಇಂದು ನಡೆಸಿದ ಸರ್ಜಿಕಲ್ ಸ್ಟ್ರೈಕ್ 2 ನಿಂದಾಗಿ ಎಲ್ಲರಿಗೂ ಉಚಿತ ಪ್ರಯಾಣ ಎಂದು ಬ್ಯಾನರ್ ಹಾಕಿದ್ದಾರೆ. ಇದನ್ನು ಓದಿ: ಸರ್ಜಿಕಲ್ ಸ್ಟ್ರೈಕ್ 2: ವಾಯುಸೇನೆಗೆ ಅಭಿನಂದಿಸಿ ನಾವು ಹೆಮ್ಮೆ ಪಡಬೇಕು ಯಾಕೆ?

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಮನೋಜ್ ಅವರು, ಉಚಿತ ಆಟೋ ಸೇವೆಗಿಂತ ಹೆಚ್ಚೇನೂ ಮಾಡಲು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ನನ್ನ ಆಟೋದಲ್ಲಿ ಮಂಗಳವಾರ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೆ ಯಾವುದೇ ರೀತಿ ದರ ವಿಧಿಸುತ್ತಿಲ್ಲ. ಇದು ನನಗೆ ಹೆಚ್ಚು ಖುಷಿ ತಂದಿದೆ ಎಂದು ಹೇಳಿದ್ದಾರೆ.

    ಭಾರತೀಯ ವಾಯು ಪಡೆ ಮಂಗಳವಾರ ಮುಂಜಾನೆ 3.45ರ ಸುಮಾರಿಗೆ ಮೊದಲು ಬಾಲಕೋಟ್ ಮೇಲೆ ದಾಳಿ ಮಾಡಿತ್ತು. ಬಳಿಕ ಮುಂಜಾನೆ 3.48ಕ್ಕೆ ಮುಜಾಫರಬಾದ್ ಮೇಲೆ ದಾಳಿ ಮಾಡಲಾಗಿತ್ತು. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ದಾಳಿ ಮಾಡಿದೆ. ಇದನ್ನು ಓದಿ: ಕವಿತೆ ಬರೆದು ವಾಯುಪಡೆಗೆ ಗೌರವ ಸಲ್ಲಿಸಿ #AlwaysReady ಎಂದ ಭಾರತೀಯ ಸೇನೆ!

    ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ್ದ ಬಾಲಕೋಟ್ ನೆಲೆಯಲ್ಲಿ 300 ಉಗ್ರರು, ತರಬೇತುದಾರರು ಹಾಗೂ ಜೈಶ್ ಸಂಘಟನೆಯ ಕಮಾಂಡೋಗಳು ಬಲಿಯಾಗಿದ್ದಾರೆ. ಜೊತೆಗೆ ಈ ದಾಳಿಯಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಅಜರ್ ಮಸೂದ್‍ನ ಭಾಮೈದ ಅಜರ್ ಯೂಸುಫ್ ಅಲಿಯಾಸ್ ಉಸ್ತಾದ್ ಘೋರಿ ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನುಡಿದದ್ದು ನಾನಲ್ಲ ನನ್ನ ಕಾಲಭೈರವ: ಪ್ರಧಾನಿ ಮೋದಿ ಹೊಗಳಿದ ಜಗ್ಗೇಶ್

    ನುಡಿದದ್ದು ನಾನಲ್ಲ ನನ್ನ ಕಾಲಭೈರವ: ಪ್ರಧಾನಿ ಮೋದಿ ಹೊಗಳಿದ ಜಗ್ಗೇಶ್

    ಬೆಂಗಳೂರು: ಪುಲ್ವಾಮಾ ದಾಳಿಯ ಪ್ರತಿಕಾರವಾಗಿ ಇಂದು ಭಾರತೀಯ ವಾಯುಪಡೆಯು ಇಂದು ಪಾಕಿಸ್ತಾನ ಹಾಗೂ ಉಗ್ರರಿಗೆ ಬಿಸಿ ಮುಟ್ಟಿಸಿದೆ. ಈ ಸಂಬಂಧ ನವರಸನಾಯಕ ಜಗ್ಗೇಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ.

    ಟ್ವೀಟ್ ಮಾಡಿರುವ ಜಗ್ಗೇಶ್ ಅವರು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ನನ್ನ ಅನಿಸಿಕೆ ತಿಳಿಸಿದ್ದೆ. ಆಗ ಕೆಲ ಸಹೋದರರು ಉದ್ರೇಕಗೊಂಡರು. ಆದರೆ ಇಂದು ಅವರಿಗೆ ದೇಶ ಮೆಚ್ಚುವ ಪ್ರಧಾನಿ ಮೋದಿ ನೇತೃತ್ವ ಕಾಯಕ ಅರಿವಾಗಿದ್ದರೆ ನನ್ನ ಅನಿಸಿಕೆ ಸಾರ್ಥಕವಾದಂತೆ ಎಂದು ಹೇಳಿದ್ದಾರೆ.

    “ನುಡಿದ್ದದ್ದು ನಾನಲ್ಲ, ನನ್ನ ಕಾಲಭೈರವ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಉತ್ತರ ಪ್ರದೇಶದ ಪ್ರಯಾಗ್ ಕುಂಭಸ್ನಾನದ ವೇಳೆ ಕಪ್ಪು ಬಟ್ಟೆ ಹಾಕಿದ್ದರು. ಅದು ನಾಥ ಸಂಪ್ರದಾಯ, ಅಂದರೆ ‘ಕಾಲಭೈರವನಿಗೆ’ ಶತ್ರುಸಂಹಾರಕ್ಕೆ ಸೂಚಿಸಿದಂತೆ ಎಂದು ಜಗ್ಗೇಶ್ ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದಾರೆ.

    ಸ್ಯಾಂಡಲ್‍ವುಡ್ ನಾಯಕರು ಟ್ವೀಟ್ ಮೂಲಕ ಸರ್ಜಿಕಲ್ ಸ್ಟ್ರೈಕ್ 2 ಮಾಡಿದ ವಾಯು ಪಡೆ ಹಾಗೂ ಯೋಧರಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಟ ಧ್ರವಾ ಸರ್ಜಾ ಅವರು, ಭಾರತೀಯರ ಮೈಯಾಗ ಎಷ್ಟ್ ಪೊಗರು ಐತೆ ಅಂತ ಚೆಕ್ ಮಾಡಾಕಾ ಬರಬೇಡಾ.. ಮಕ್ಳಾ ಬ್ಲಾಸ್ಟ್ ಆಗೋಯ್ತಿರಾ. ಭೋಲೋ ಭಾರತ್ ಮಾತಾ ಕಿ ಜೈ.. ಜೈ ಆಂಜನೇಯ ಎಂದು ಟ್ವೀಟ್ ಮಾಡಿ ಭಾರತೀಯರ ಪೊಗರಿನ ಬಗ್ಗೆ ಪಾಕಿಸ್ತಾನದವರಿಗೆ ತಿಳಿಸಿಕೊಟ್ಟಿದ್ದಾರೆ.

    ನಟ ಗಣೇಶ್ ಅವರು, “ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿ ಭಯೋತ್ಪಾದರ ಕ್ಯಾಂಪಸ್‍ಗಳನ್ನು ನಾಶ ಮಾಡಿದೆ. ನಮ್ಮ ಭಾರತೀಯ ವಾಯುಸೇನೆಯ ಬಗ್ಗೆ ಹೆಮ್ಮೆ ಇದೆ. ಜೈ ಹಿಂದ್” ಎಂದು ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕಿಸ್ತಾನದ ಮೂರ್ಖ ನಿರ್ಧಾರಕ್ಕೆ ಉತ್ತರ ನೀಡಲು ಭಾರತೀಯ ಸೇನೆ ಸಿದ್ಧವಾಗಿರಲಿ: ಓವೈಸಿ

    ಪಾಕಿಸ್ತಾನದ ಮೂರ್ಖ ನಿರ್ಧಾರಕ್ಕೆ ಉತ್ತರ ನೀಡಲು ಭಾರತೀಯ ಸೇನೆ ಸಿದ್ಧವಾಗಿರಲಿ: ಓವೈಸಿ

    – ವಾಯು ಪಡೆ, ಕೇಂದ್ರ ಸರ್ಕಾರಕ್ಕೆ ಧನ್ಯವಾದ

    ಹೈದರಾಬಾದ್: ಪಾಕಿಸ್ತಾನ ಮೂರ್ಖ ನಿರ್ಧಾರಗಳನ್ನ ಕೈಗೊಂಡರೆ ಅದನ್ನು ಎದುರಿಸಲು ನಮ್ಮ ಸೇನೆ ಸಿದ್ಧವಾಗಿರಬೇಕು ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

    ಹೈದರಾಬಾದ್‍ನಲ್ಲಿ ಮಾತನಾಡಿದ ಅವರು, ನಾವು ಊಹಿಸಿದಂತೆ ಭಾರತ ಸರ್ಕಾರ ಹಾಗೂ ವಾಯು ಪಡೆ ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ನೀಡಿದೆ. ವಾಯುಸೇನೆಗೆ ನಮ್ಮ ಅಭಿನಂದನೆ. ಕೇಂದ್ರ ಸರ್ಕಾರವು ದಿಟ್ಟ ನಿರ್ಧಾವನ್ನು ಕೈಗೊಂಡಿದೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಓವೈಸಿ ತಿಳಿಸಿದರು.  ಇದನ್ನೂ ಓದಿ:ಭಾರತದಿಂದ 50 ಉಗ್ರರ ಹತ್ಯೆ: ದಾಳಿ ಒಪ್ಪಿಕೊಂಡ ಪಾಕ್ ಸೇನೆ

    ವಿಶ್ವಸಂಸ್ಥೆಯ ವಿಧಿ 51ರಂತೆ ಭಾರತವು ತನ್ನ ಗಡಿಯನ್ನು ಮತ್ತು ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಂಡಿದೆ. ಸ್ವಯಂ ರಕ್ಷಣೆಗೆ ದಾಳಿ ಮಾಡುವ ಹಕ್ಕನ್ನು ಭಾರತ ಹೊಂದಿದೆ. ಕೇಂದ್ರ ಸರ್ಕಾರವು ಉಗ್ರರಿಗೆ ತಕ್ಕ ಪಾಠ ಕಲಿಸಲು ಸೂಕ್ತ ದಾಳಿ ನಡೆಸಬೇಕೆಂದು ನಾವು ಬಹುದಿನಗಳಿಂದ ಕಾಯುತ್ತಿದ್ದೇವು. ದಾಳಿ ಮಾಡಿದವರು ಮಸೂದ್ ಅಜರ್, ಲಷ್ಕರ್ ಅದು ಯಾರೇ ಆಗಿರಲಿ ನಾನು ಅವುಗಳನ್ನು ತಾಲಿಬಾನ್‍ಗಳು ಎಂತಲೇ ಕರೆಯುತ್ತೇನೆ. ಇಂತಹ ಸೈತಾನ್‍ಗಳನ್ನು ಸರ್ಕಾರ ಹೊಡೆದು ಹಾಕಬೇಕು ಎಂದು ಕಿಡಿಕಾರಿದರು.

    ನಾನು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾವುದೇ ಬಗ್ಗೆ ಪ್ರಶ್ನೆ ಮಾಡಲ್ಲ. ಉಗ್ರರನ್ನು ಹೊಡೆದು ಹಾಕುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ಸರ್ಜಿಕಲ್ ಸ್ಟ್ರೈಕ್‍ಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ:ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತಕ್ಕೆ ಪ್ರತ್ಯುತ್ತರ ನೀಡುತ್ತೇವೆ ಎಂದ ಪಾಕಿಸ್ತಾನದ ವಿದೇಶಾಂಗ ಸಚಿವ!

    ಭಾರತಕ್ಕೆ ಪ್ರತ್ಯುತ್ತರ ನೀಡುತ್ತೇವೆ ಎಂದ ಪಾಕಿಸ್ತಾನದ ವಿದೇಶಾಂಗ ಸಚಿವ!

    ನವದೆಹಲಿ: ಸರ್ಜಿಕಲ್ ಸ್ಟ್ರೈಕ್ ನಡೆಸಿದ ಭಾರತಕ್ಕೆ ಸೂಕ್ತ ಉತ್ತರ ನೀಡುತ್ತೇವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾಹ್ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.

    ಭಾರತೀಯ ವಾಯುಪಡೆ ಇಂದು ಪಾಕಿಸ್ತಾನದ ಮೇಲೆ ಆಕ್ರಮಣ ನಡೆಸಿದೆ. ಭಾರತ ಗಡಿ ನಿಯಂತ್ರಣ ರೇಖೆಯನ್ನು ದಾಟಿ ನಮ್ಮ ಮೇಲೆ ದಾಳಿ ನಡೆಸಿದೆ. ಇದಕ್ಕೆ ನಾವು ಪ್ರತೀಕಾರವನ್ನು ಕೈಗೊಳ್ಳುತ್ತೇವೆ ಎಂದು ಖುರೇಷಿ ಕಿಡಿಕಾರಿದ್ದಾರೆ. ಇದನ್ನು ಓದಿ: ಪಾಕಿಸ್ತಾನಕ್ಕೆ ಅಮೇರಿಕ 1 ಡಾಲರ್ ಆರ್ಥಿಕ ನೆರವನ್ನು ನೀಡಬಾರದು: ನಿಕ್ಕಿ ಹ್ಯಾಲೆ

    ಸರ್ಜಿಕಲ್ ಸ್ಟ್ರೈಕ್ 2 ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಜಯ್ ಗೋಖಲೆ ಸುದ್ದಿಗೋಷ್ಠಿ ನಡೆಸಿದ ಬಳಿಕ ಪ್ರತಿಕ್ರಿಯೆ ನೀಡಿದ ಖುರೇಷಿ ಅವರು, ದಾಳಿಯ ಸಂಬಂಧ ಚರ್ಚೆ ನಡೆಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸಭೆ ಕರೆದಿದ್ದಾರೆ ಎಂದು ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯ್ ಗೋಖಲೆ ಅವರು, ನಮ್ಮ ಗುರಿಯಿದ್ದ ಪ್ರದೇಶಗಳು ಜೈಶ್ ಉಗ್ರರ ಕ್ಯಾಂಪ್ ಆಗಿತ್ತು. ಹಲವು ಉಗ್ರರು, ತರಬೇತಿದಾರರು ಮತ್ತು ಕಮಾಂಡರ್ ಗಳು ನಮ್ಮ ದಾಳಿಯಲ್ಲಿ ಹತ್ಯೆಯಾಗಿದ್ದಾರೆ. ದಾಳಿ ನಡೆದ ಸ್ಥಳಗಳು ಅರಣ್ಯ ಪ್ರದೇಶದಲ್ಲಿದ್ದು ಯಾವುದೇ ಜನರಿಗೆ ಹಾನಿಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ಓದಿ: #Surgicalstrike2 ವಿಶ್ವದಲ್ಲೇ ನಂಬರ್ ಒನ್ ಟ್ರೆಂಡಿಂಗ್

    ಬಾಲಕೋಟ್ ಉಗ್ರರ ನೆಲೆಯನ್ನು ಮೌಲಾನ ಯೂಸೂಫ್ ಅಜರ್ ಅಲಿಯಾಸ್ ಉಸ್ತಾದ್ ನೋಡಿಕೊಳ್ಳುತ್ತಿದ್ದ. ಈತ ಜೈಷ್ ಮುಖ್ಯಸ್ಥ ಮಸೂದ್ ಅಜರ್ ಸಹೋದರನಾಗಿದ್ದಾನೆ. ಬಾಲಕೋಟ್ ಜೈಷ್ ಸಂಘಟನೆಯ ಅತಿ ದೊಡ್ಡ ಕ್ಯಾಂಪ್ ಆಗಿತ್ತು ಎಂದು ತಿಳಿಸಿದ್ದಾರೆ.

    ಉಗ್ರರ ಬಗ್ಗೆ ಭಾರತ ಹಲವು ಬಾರಿ ಮಾಹಿತಿ ನೀಡಿದರೂ ಪಾಕಿಸ್ತಾನ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ಹೀಗಾಗಿ ಈ ಬಾರಿ ನಾವೇ ನೇರವಾಗಿ ಹೋಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದೇವೆ ಎಂದು ದಾಳಿ ಬಗ್ಗೆ ಸಮರ್ಥನೆ ನೀಡಿದ್ದಾರೆ.

    ಇದೇ ವೇಳೆ ಜೈಷ್ ಸಂಘಟನೆ ದೇಶದ ಹಲವೆಡೆ ಆತ್ಮಾಹುತಿ ದಾಳಿ ನಡೆಸಲು ಸಿದ್ಧತೆ ನಡೆಸಿದೆ. ಈ ಬಗ್ಗೆ ನಮಗೆ ಖಚಿತ ಗುಪ್ತಚರ ಮಾಹಿತಿಗಳು ಸಿಕ್ಕಿವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • #Surgicalstrike2 ವಿಶ್ವದಲ್ಲೇ ನಂಬರ್ ಒನ್ ಟ್ರೆಂಡಿಂಗ್

    #Surgicalstrike2 ವಿಶ್ವದಲ್ಲೇ ನಂಬರ್ ಒನ್ ಟ್ರೆಂಡಿಂಗ್

    ಬೆಂಗಳೂರು: ಟ್ವಿಟ್ಟರ್‌ನಲ್ಲಿ ಸರ್ಜಿಕಲ್‍ಸ್ಟ್ರೈಕ್ 2 ವಿಶ್ವದಲ್ಲೇ ನಂಬರ್ ಒನ್ ಟ್ರೆಂಡಿಂಗ್ ಸ್ಥಾನದಲ್ಲಿದ್ದು, ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ಪುಲ್ವಾಮಾ ದಾಳಿಯ ಪ್ರತಿಕಾರವಾಗಿ ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಭಾರತೀಯ ವಾಯುಪಡೆ ಜೈಸ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮೂರು ನೆಲೆಗಳ ಮೇಲೆ ದಾಳಿ ಮಾಡಿದೆ. ಈ ದಾಳಿಯು ಪಾಕಿಸ್ತಾನ ಹಾಗೂ ಉಗ್ರರಲ್ಲಿ ನಡುಕ ಹುಟ್ಟಿಸಿದೆ. ಉಗ್ರರಿಗೆ ಬಿಸಿ ಮುಟ್ಟಿಸಿದ ಭಾರತೀಯ ವಾಯುಪಡೆಗೆ ಅನೇಕ ರಾಜಕೀಯ ನಾಯಕರು, ಜನರು ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

    #Surgicalstrike2, #IndianAirForce, #IndiaStrikesBack ಹ್ಯಾಷ್ ಟ್ಯಾಗ್‍ಗಳನ್ನು ಬಳಸಿ ನೆಟ್ಟಿಗರು ಟ್ವೀಟ್ ಮಾಡುತ್ತಿದ್ದಾರೆ. ಈ ಮೂಲಕ #ಸರ್ಜಿಕಲ್ ಸ್ಟ್ರೈಕ್ 2 ವಿಶ್ವಮಟ್ಟದಲ್ಲಿ ನಂಬರ್ ಒನ್ ಟ್ರೆಂಡಿಂಗ್ ಸ್ಥಾನ ಪಡೆದಿದ್ದು, ಪುಲ್ವಾಮಾ ದಾಳಿಯ ಪ್ರತಿಕಾರದ ದಾಳಿಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಕೆಲ ಪಾಕಿಸ್ತಾನದ ನಾಯಕರು, ರಾಜಕಾರಣಿಗಳು ಸರ್ಜಿಕಲ್ ಸ್ಟ್ರೈಕ್ 2 ವಿರುದ್ಧ ಧ್ವನಿ ಎತ್ತಿದ್ದು, ಭಾರತದ ವಿರುದ್ಧ ಯುದ್ಧ ಘೋಷಿಸಬೇಕು ಎಂದು ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಒತ್ತಾಯಿಸುತ್ತಿದ್ದಾರೆ.

    ಜನ ಏನು ಹೇಳುತ್ತಿದ್ದಾರೆ?:
    ಬೆಂಗಳೂರಿನಲ್ಲಿ ಆರಂಭವಾದ ಏರ್ ಶೋ ಪಾಕಿಸ್ತಾನದ ಉಗ್ರರ ನೆಲೆಯ ಮೇಲೆ ದಾಳಿ ಮಾಡುವ ಮೂಲಕ ಮುಕ್ತಾಯವಾಗಿದೆ ಎಂದು ನೆಟ್ಟಿಗರೊಬ್ಬರು ಫೇಸ್‍ಬುಕ್‍ನಲ್ಲಿ ಪಾಕಿಸ್ತಾನದ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಕರ್ನಾಟಕಕ್ಕೆ ಮೋಸ ಮಾಡುತ್ತಿದ್ದಾರೆ. ಏರ್ ಶೋ ಬೆಂಗಳೂರಿನಲ್ಲಿ ಎಂದು ಹೇಳಿ, ಇವಾಗ ಏರ್ ಶೋವನ್ನು ಪಾಕಿಸ್ತಾನದಲ್ಲಿ ನಡೆಸುತ್ತಿದ್ದಾರೆ ಎಂದು ರಾಮಚಂದ್ರ ಗೌಡ ಕಮೆಂಟ್ ಮಾಡಿದ್ದಾರೆ.

    ಇದೇನ್ ಗುರು ಏರ್ ಶೋ ಬೆಂಗಳೂರಿನಲ್ಲಿ ಅಂತ ಹೇಳಿ ಪಾಕಿಸ್ತಾನದತ್ತ ಹೊರಟವರೇ ಎಂದು ನಾಗರಾಜ್ ಆರ್ ರಾವ್ ಫೇಸ್‍ಬುಕ್‍ನಲ್ಲಿ ಕಮೆಂಟ್ ಮಾಡಿದ್ದಾರೆ.

    ಮೂಲಗಳ ಪ್ರಕಾರ ಮೊದಲು 20 ಕೆಜಿ ಟೊಮೆಟೊ ಎಸೆಯಲಾಯಿತಂತೆ. ಹೆಕ್ಕಲು ಮುಗಿಬಿದ್ದ ಉಗ್ರರ ಮೇಲೆ ಸಾವಿರ ಕೆಜೆ ಬಾಂಬ್ ಹಾಕಲಾಯಿತು ಎಂದು ವ್ಯಂಗ್ಯವಾಗಿ  ಕಮೆಂಟ್ ಮಾಡಿದ್ದಾರೆ.

    ಪ್ರಧಾನಿ ಮೋದಿ: ವಾಯು ದಾಳಿ ನಡೆಸಿದ್ದೇವೆ!,
    ಪಾಕ್ ಪ್ರಧಾನಿ ಇಮ್ರಾನ್ ಖಾನ್: ಸಮಾಧಾನ ಆಯ್ತಾ? ಈಗಲಾದರೂ ಟೊಮೆಟೋ, ನೀರು ಬಿಡಿ ಪ್ಲೀಸ್! ಎಂದು ವ್ಯಂಗ್ಯವಾಗಿ ಗೊರಾ ನರಸಿಂಹ ಮೂರ್ತಿ ಫೆಸ್‍ಬುಕ್‍ನಲ್ಲಿ ಕಮೆಂಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 7 ಶಕ್ತಿಗಳನ್ನು ಬಳಸಿ ಪಾಕ್ ಮೇಲೆ ಬಾಂಬ್ ದಾಳಿಗೈದ ಭಾರತ!

    7 ಶಕ್ತಿಗಳನ್ನು ಬಳಸಿ ಪಾಕ್ ಮೇಲೆ ಬಾಂಬ್ ದಾಳಿಗೈದ ಭಾರತ!

    ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತದ ವಾಯುಸೇನೆ ಪಾಕಿಸ್ತಾನದ ಉಗ್ರರ ತರಬೇತಿ ಶಿಬಿರದ ದಾಳಿ ನಡೆಸಿದೆ. ಇಂದು ಬೆಳಗಿನ ಜಾವ ಮೂರು ಶಿಬಿರಗಳ ಮೇಲೆ ದಾಳಿ ನಡೆಸಿದೆ. ಉರಿ ದಾಳಿ ನಡೆದ ಬಳಿಕ ಭಾರತ ಭೂಸೇನೆಯನ್ನು ನಡೆಸಿ ಸರ್ಜಿಕಲ್ ನಡೆಸಿದರೆ ಈ ಬಾರಿ ಭಾರತ ವಾಯುಸೇನೆಯನ್ನು ಬಳಸಿ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದೆ.

    1. ಗ್ವಾಲಿಯರ್ ನಿಂದ ಹೊರಟ 12 ಮಿರಾಜ್-2000 ಯುದ್ಧ ವಿಮಾನಗಳು (Mirage 2000) -ಈ ವಿಮಾನಗಳು ಹಲವು ರೀತಿಯಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದ್ದು, ಡಸಾಲ್ಟ್ ಏವಿಯೇಷನ್ ಈ ಜೆಟ್ ನ್ನು ನಿರ್ಮಾಣ ಮಾಡಿದ್ದು, 1980ರಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡಿದೆ. ಪಂಜಾಬ್ ನ ಭಟಿಂಡಾದಲ್ಲಿ ಮಿರಾಜ್ ಯುದ್ಧ ವಿಮಾನದ ಮೂಲಕ ಮೊದಲು ವಾಯು ಸೇನೆ ಟ್ರಯಲ್ ನೋಡಿತ್ತು. ಬಳಿಕ ಮಿರಾಜ್ ಯುದ್ಧ ವಿಮಾನಗಳು ಆಗ್ರಾದಲ್ಲಿ ಇಂಧನ ತುಂಬಿಸಿಕೊಂಡಿದ್ದವು. ಮಿರಾಜ್-2000 ವಿಮಾನವು ಗ್ವಾಲಿಯಾರ್ ನಿಂದ ಟೇಕಾಫ್ ಆಗಿತ್ತು. ಈ ಯುದ್ಧ ವಿಮಾನಗಳು 1000 ಕೆ.ಜಿ ತೂಕದ 10 ಲೇಸರ್ ಗೈಡೆಡ್ ಬಾಂಬ್‍ಗಳಿಂದ ತುಂಬಿದ್ದವು.

    2. ಅಮೆರಿಕ ನಿರ್ಮಿತ ಲೇಸರ್ ಗೈಡೆಡ್ ಬಾಂಬ್ ಜಿಬಿಯು-12 (GBU-12 Paveway Laser Guided Bomb): ನಿರ್ಧಿಷ್ಟ ಗುರಿಯನ್ನು ತಲುಪಲು ಭಾರತ ಈ ಬಾಂಬ್ ಬಳಕೆ ಮಾಡಿದೆ. ಇದನ್ನೂ ಓದಿ: ಪಾಕ್‍ನ 3 ಉಗ್ರರ ಕೇಂದ್ರಗಳು ಉಡೀಸ್- ಭಾರತದ ಬಾಂಬ್ ದಾಳಿಯ ಪ್ಲಾನ್ ಹೀಗಿತ್ತು

    3. ಮಾಟ್ರಾ ಮ್ಯಾಜಿಕ್ ಕ್ಲೋಸ್ ಕಂಬ್ಯಾಟ್ ಮಿಸೈಲ್ (Matra Magic Close Combat Missile)- ಪಾಕ್ ವಾಯುಸೇನೆಯಿಂದ ಪ್ರತಿದಾಳಿಯಾದ್ರೆ ಅಪ್ಪಳಿಸಲು ಸಿದ್ಧವಾಗಿದ್ದ ಫ್ರಾನ್ಸ್ ನಿರ್ಮಿತ ಕ್ಷಿಪಣಿ ಇದನ್ನೂ ಓದಿ: ಯಾವುದೇ ಹಾನಿಯಾಗಿಲ್ಲ, ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ರು: ಪಾಕಿಸ್ತಾನ ಮೊಂಡುವಾದ

    4. ಲೈಟ್‍ನಿಂಗ್ ಪಾಡ್ (Litening POD)- ನಿರ್ದಿಷ್ಟ ಗುರಿಗಳನ್ನು ಟಾರ್ಗೆಟ್ ಮಾಡಲು ಬಳಸುವ ತಂತ್ರಜ್ಞಾನ ಇದನ್ನೂ ಓದಿ:ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ ಸೇನೆ!

    5. ನೇತ್ರಾ (Netra Airborne Early Warning Jet)- ಡಿಆರ್ ಡಿಒ ನಿರ್ಮಿಸಿದ ನೇತ್ರಾ ವಿಮಾನವನ್ನು ಈ ಬಾರಿಯ ಕಾರ್ಯಾಚರಣೆಗೆ ಬಳಕೆ ಮಾಡಿದೆ. ದಾಳಿ ನಡೆಸುವ ವಿಮಾನಕ್ಕೆ ಎಲ್ಲಿ ದಾಳಿ ನಡೆಸಬೇಕು ಎನ್ನುವ ನಿಖರ ಮಾಹಿತಿಯನ್ನು ಈ ವಿಮಾನಲ್ಲಿರುವ ವ್ಯವಸ್ಥೆ ನೀಡುತ್ತದೆ. ರೇಡಾರ್ ಗಳನ್ನು ಸ್ಕ್ಯಾನ್ ಮಾಡಿ ಪ್ರತಿ ದಾಳಿ ಹೇಗೆ ನಡೆಸಬೇಕು ಎನ್ನುವ ಮಾಹಿತಿಯನ್ನು ನೇತ್ರಾ ನೀಡುತ್ತದೆ. ಇದನ್ನೂ ಓದಿ: ಭಾರತದ ಬಾಂಬ್ ದಾಳಿಗೆ ಜೈಷ್ ಉಗ್ರರ ಅತಿ ದೊಡ್ಡ ಕ್ಯಾಂಪ್ ಧ್ವಂಸ

    6. ಇಲ್ಯೂಷನ್ 78ಎಂ (Ilyushin-78 M) – ರಷ್ಯಾ ನಿರ್ಮಿತ ಈ ವಿಮಾನ ಇಂಧನ ಟ್ಯಾಂಕ್ ಆಗಿ ಬಳಕೆಯಾಗುತ್ತದೆ. ಕಾರ್ಯಾಚರಣೆ ಗುಪ್ತವಾಗಿ ನಡೆಯಲು ಆಗ್ರಾ ವಾಯುನೆಯಲ್ಲಿ ಇಂಧನ ತುಂಬಿಸಿದ್ದ ಇಲ್ಯೂಷನ್ ಮಿರಾಜ್ ಯುದ್ಧ ವಿಮಾನಗಳಿಗೆ ಆಕಾಶದಲ್ಲೇ ಇಂಧನವನ್ನು ತುಂಬಿಸಿತ್ತು.

    7. ಹೆರಾನ್ (Heron Drone) – ಫೆ. 16ರಿಂದ 20 ರವರೆಗೆ ಉಗ್ರರ ಕೇಂದ್ರ ಸ್ಥಳಗಳನ್ನು ಪತ್ತೆ ಹಚ್ಚಲು ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭೂಸೇನೆ ಮತ್ತು ವಾಯುಸೇನೆ 4 ದಿನ ವೈಮಾನಿಕ ಸಮೀಕ್ಷೆ ನಡೆಸಿತ್ತು. ಇಸ್ರೇಲ್ ನಿರ್ಮಿತ ಹೆರಾನ್ ಹೆಸರಿನ ಮಾನವರಹಿತ ವೈಮಾನಿಕ ಸರ್ವೇಕ್ಷಣಾ ವಾಹನ ಬಳಸಿ ಈ ಸರ್ವೆ ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್‍ನ 3 ಉಗ್ರರ ಕೇಂದ್ರಗಳು ಉಡೀಸ್- ಭಾರತದ ಬಾಂಬ್ ದಾಳಿಯ ಪ್ಲಾನ್ ಹೀಗಿತ್ತು

    ಪಾಕ್‍ನ 3 ಉಗ್ರರ ಕೇಂದ್ರಗಳು ಉಡೀಸ್- ಭಾರತದ ಬಾಂಬ್ ದಾಳಿಯ ಪ್ಲಾನ್ ಹೀಗಿತ್ತು

    ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರ, ಭಾರತೀಯ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿ 40 ಮಂದಿ ಸೈನಿಕರನ್ನು ಬಲಿ ಪಡೆದ ಮರುದಿನವೇ ಭಾರತ, ಪಾಕ್ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿತ್ತು.

    ಯೋಧರನ್ನು ಕಳೆದುಕೊಂಡ ಬಳಿಕ ಇಡೀ ಭಾರತ ದುಃಖಿಸುತ್ತಿದ್ದು, ಪಾಕ್ ವಿರುದ್ಧ ಪ್ರತಿಕಾರ ತೀರಿಸಲೇಬೇಕು ಎಂದು ಜನ ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದರು. ಆದರೆ ಇದೇ ಸಂದರ್ಭದಲ್ಲಿ ಪಾಕ್ ವಿರುದ್ಧ ಯಾವ ರೀತಿ ಸೇಡು ತೀರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಭಾರತ ಸೈನ್ಯದ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರು.

    ಭಾರತ ರೂಪಿಸಿದ್ದ ಪ್ಲಾನ್ ಹೀಗಿತ್ತು:
    ಫೆಬ್ರವರಿ 15:
    ಫೇಬ್ರವರಿ 14 ಪ್ರೇಮಿಗಳ ದಿನಂದೇ ಉಗ್ರರು ಯೋಧರ ಮೇಲೆ ದಾಳಿ ನಡೆಸಿದ್ದು, ಅದರ ಮರುದಿನವೇ ವಾಯು ಸೇನಾ ಮುಖ್ಯಸ್ಥ ಬೀರೇಂದರ್ ಸಿಂಗ್  ಧನೋವಾ ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಇದಕ್ಕೆ ಮೋದಿ ಸರ್ಕಾರ ಒಪ್ಪಿಗೆಯನ್ನೂ ಸೂಚಿಸಿತ್ತು. ಇದನ್ನೂ ಓದಿ: ಭಾರತದ ಬಾಂಬ್ ದಾಳಿಗೆ ಜೈಷ್ ಉಗ್ರರ ಅತಿ ದೊಡ್ಡ ಕ್ಯಾಂಪ್ ಧ್ವಂಸ

    ಫೆ. 16ರಿಂದ 20:
    ಉಗ್ರರ ಕೇಂದ್ರ ಸ್ಥಳಗಳನ್ನು ಪತ್ತೆ ಹಚ್ಚಲು ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭೂಸೇನೆ ಮತ್ತು ವಾಯುಸೇನೆ 4 ದಿನ ವೈಮಾನಿಕ ಸಮೀಕ್ಷೆ ನಡೆಸಿತ್ತು. ಇಸ್ರೇಲ್ ನಿರ್ಮಿತ ಹೆರಾನ್ ಹೆಸರಿನ ಮಾನವರಹಿತ ವೈಮಾನಿಕ ಸರ್ವೇಕ್ಷಣಾ ವಾಹನ ಬಳಸಿ ಈ ಸರ್ವೆ ಮಾಡಲಾಗಿತ್ತು.

    ಫೆ. 20-22:
    ಎಲ್ಲಿ ದಾಳಿ ನಡೆಯಬೇಕೆಂಬ ಬಗ್ಗೆ 2 ದಿನ ಚರ್ಚೆ ನಡೆಸಲಾಗಿತ್ತು. ಗುಪ್ತಚರ ದಳ, ವಾಯುಸೇನೆ ಅಧಿಕಾರಿಗಳ ಮಧ್ಯೆ ಮಹತ್ವದ ಚರ್ಚೆ ನಡೆಸಲಾಯಿತು. ಈ ವೇಳೆ ಅಧಿಕಾರಿಗಳು ದಾಳಿ ನಡೆಸುವ ಸ್ಥಳಗಳನ್ನು ಗುರುತು ಹಾಕೊಂಡಿದ್ದರು. ಇದನ್ನೂ ಓದಿ: ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ ಸೇನೆ!

    ಫೆ. 21:
    ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಏರ್ ಸ್ಟ್ರೈಕ್ ನಡೆಸುವ ಬಗ್ಗೆ ವಿವರಗಳನ್ನು ನೀಡಿದ್ರು. ಈ ಸಂದರ್ಭದಲ್ಲಿ ಅವರು ಕೆಲ ಸಲಹೆಗಳನ್ನುಕೂಡ ನೀಡಿದರು.

    ಫೆ.22:
    ವಾಯುಸೇನೆಯ `ಟೈಗರ್’ ಮತ್ತು `ಬ್ಯಾಟಲ್ ಆ್ಯಕ್ಸೆಸ್’ ಸ್ಕ್ವಾಡರ್ನ್ ನ 12 ಗೆ ದಾಳಿಯ ಹೊಣೆ ಹೊರಿಸಲಾಗಿತ್ತು. ಇದನ್ನೂ ಓದಿ: ಯಾವುದೇ ಹಾನಿಯಾಗಿಲ್ಲ, ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ರು: ಪಾಕಿಸ್ತಾನ ಮೊಂಡುವಾದ

    ಫೆ.24
    ಪಂಜಾಬ್ ನ ಭಟಿಂಡಾದಲ್ಲಿ ಮಿರಾಜ್ ಯುದ್ಧ ವಿಮಾನದ ಮೂಲಕ ವಾಯು ಸೇನೆ ಟ್ರಯಲ್ ನೋಡಿತ್ತು. ಬಳಿಕ ಮಿರಾಜ್ ಯುದ್ಧ ವಿಮಾನಗಳು ಆಗ್ರಾದಲ್ಲಿ ಇಂಧನ ತುಂಬಿಸಿಕೊಂಡಿದ್ದವು.

    ಫೆ.25-26
    ಕಾರ್ಯಾಚರಣೆ ಆರಂಭ ಮಾಡಲಾಗಿತ್ತು. ಮಿರಾಜ್-2000 ವಿಮಾನವು ಗ್ವಾಲಿಯಾರ್ ನಿಂದ ಟೇಕಾಫ್ ಆಗಿತ್ತು. ಈ ಯುದ್ಧ ವಿಮಾನಗಳು 1000 ಕೆ.ಜಿ ತೂಕದ 10 ಲೇಸರ್ ಗೈಡೆಡ್ ಬಾಂಬ್‍ಗಳಿಂದ ತುಂಬಿದ್ದವು. ಇದನ್ನೂ ಓದಿ: `How is The Josh Sir’- ಭಾರತೀಯ ವೀರಯೋಧರಿಗೆ ಬಿಗ್ ಸೆಲ್ಯೂಟ್

    ಮಿರಾಜ್ ಪೈಲಟ್ ಕೊನೆಯದಾಗಿ ಟಾರ್ಗೆಟ್ ಮಾಡಿದ ಸ್ಥಳಗಳನ್ನು ಮತ್ತೊಮ್ಮೆ ಪರಿಶೀಲಿಸಿದ್ದಾರೆ. ನಂತರ ಮುಜಾಫರ್ ಬಾದ್ ನಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿಗೆ ಮುಂದಾಗಿದ್ದಾರೆ. ಈ ಕಾರ್ಯಾಚರಣೆ ನಸುಕಿನ ಜಾವ 3.20, 3.30ರ ಸುಮಾರಿಗೆ ನಡೆದಿದ್ದು, ಉಗ್ರರ 3 ಕೇಂದ್ರಗಳನ್ನು ಧ್ವಂಸ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಾವುದೇ ಹಾನಿಯಾಗಿಲ್ಲ, ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ರು: ಪಾಕಿಸ್ತಾನ ಮೊಂಡುವಾದ

    ಯಾವುದೇ ಹಾನಿಯಾಗಿಲ್ಲ, ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ರು: ಪಾಕಿಸ್ತಾನ ಮೊಂಡುವಾದ

    ನವದೆಹಲಿ: ಭಾರತದ ವಾಯ ಸೇನೆಯ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ. ಭಾರತದ ಯುದ್ಧ ವಿಮಾನಗಳು ನಮ್ಮಿಂದ ತಪ್ಪಿಸಿಕೊಳ್ಳುವ ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದೆ ಎಂದು ಪಾಕಿಸ್ತಾನದ ಮೇಜರ್ ಜನರಲ್ ಆಸೀಪ್ ಗಫೂರ್ ಟ್ವೀಟ್ ಮಾಡುವ ಮೂಲಕ ಮೊಂಡುತನ ಪ್ರದರ್ಶನ ಮಾಡಿದ್ದಾರೆ.

    ಭಾರತದ ವಾಯುಸೇನೆಯ ವಿಮಾನಗಳು ಗಡಿ (ಎಲ್‍ಓಸಿ)ಯನ್ನು ಉಲ್ಲಂಘಿಸಿದ್ದವು, ಕೂಡಲೇ ನಾವು ದಾಳಿ ಮಾಡುತ್ತಿದ್ದಂತೆ ಮರಳಿ ಹೋಗಿವೆ. ಭಾರತದ ಯುದ್ಧ ವಿಮಾನಗಳು ಮುಜಾಫರಬಾದ್ ಬಳಿ ಒಳನುಸಳಲು ಪ್ರಯತ್ನ ನಡೆಸಿದ್ದವು. ಪಾಕಿಸ್ತಾನದ ಪ್ರತಿ ದಾಳಿಗೆ ಹೆದರಿದ ಕೂಡಲೇ ತಪ್ಪಿಸಿಕೊಳ್ಳುವ ಗಡಿಬಿಡಿಯಲ್ಲಿ ಬಾಲಕೋಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಬಾಂಬ್ ಹಾಕಿ ಹೋಗಿವೆ ಎಂದು ತಮ್ಮ ಎಂದಿನ ವಿತ್ತಂಡವಾದವನ್ನು ಮುಂದಿಟ್ಟಿದ್ದಾರೆ. ಗಫೂರ್ ಬೆಳಗ್ಗೆ 5.12ಕ್ಕೆ ಟ್ವೀಟ್ ಮಾಡಿದ ಬಳಿಕ ಸರಣಿ ಟ್ವೀಟ್ ಮಾಡಿದ್ದಾರೆ.

    ಪಾಕಿಸ್ತಾನ ಈ ರೀತಿಯ ಹೇಳಿಕೆ ನೀಡುವುದು ಇದೇ ಮೊದಲೆನಲ್ಲ. ಉರಿ ದಾಳಿ ನಡೆದ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲೂ ಏನು ಆಗಿಲ್ಲ ಎಂದು ಹೇಳಿತ್ತು. ಅಷ್ಟೇ ಅಲ್ಲದೇ ವಿದೇಶಿ ಮಾಧ್ಯಮಗಳನ್ನು ಕರೆಸಿ ಭಾರತದ ಯಾವುದೇ ದಾಳಿ ನಡೆಸಿಲ್ಲ ಎಂದು ಹೇಳಿತ್ತು. ಬಳಿಕ ವಿದೇಶಿ ಮಾಧ್ಯಮಗಳೇ ಪಾಕಿಸ್ತಾನ ಸುಳ್ಳು ಹೇಳಿದೆ. ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಹೊಡೆದು ಉರುಳಿಸಿವೆ ಎಂದು ವರದಿ ಮಾಡಿತ್ತು. ಆದರೆ ಈ ಬಾರಿ ದಾಳಿಯನ್ನು ಒಪ್ಪಿಕೊಂಡಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿಸಿದೆ.

    ಮೊದಲಿಗೆ ಮುಂಜಾನೆ 3.45ರ ಸುಮಾರಿಗೆ ಬಾಲ್‍ಕೋಟ್ ಮೇಲೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ.

    ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್‍ಗಾಗಿ ಮಿರಾಜ್-2000 ಹೆಸರಿನ 12 ಜೆಟ್ (ಐಎಎಫ್)ಗಳನ್ನು ಬಳಸಿಕೊಳ್ಳಲಾಗಿದೆ. ಉಗ್ರರ ಶಿಬಿರದ ಮೇಲೆ 100 ಕೆಜಿಯ 10 ಬಾಂಬ್ ಸಿಡಿಸಲಾಗಿದ್ದು, ಉಗ್ರರ ತಾಣದ 500 ಮೀ. ವ್ಯಾಪ್ತಿ ಧ್ವಂಸಗೊಂಡಿದೆ ಎನ್ನಲಾಗುತ್ತಿದ್ದು, ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದ್ರೆ ಪುಲ್ವಾಮಾ ದಾಳಿಯ 12 ನೇ ದಿನಕ್ಕೆ ಭಾರತೀಯ ಪ್ರತಿಕಾರ ತೀರಿಸಿರುವುದು ಸ್ಪಷ್ಟವಾಗಿದೆ.

    ಬಾಂಬ್ ದಾಳಿಯ ವೇಳೆ ಮಿರಾಜ್ ಗೆ ಸುಖೋಯ್ ಯುದ್ಧ ವಿಮಾನ ಕೂಡ ಬೆಂಗಾವಲಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಿರಾಜ್-2000, ಏಕಕಾಲಕ್ಕೆ 1000 ಕೆ.ಜಿ ಲೇಸರ್ ಗೈಡೆಡೆ ಬಾಂಬ್ ಹಾಕಬಹುದಾದ ಸಾಮರ್ಥ್ಯ  ಹೊಂದಿದೆ. ಹೀಗಾಗಿ ಈ ವಿಮಾನಕ್ಕೆ ಭಾರತೀಯ ವಾಯು ಸೇನೆ `ವಜ್ರ’ ಎಂದು ಹೆಸರಿಟ್ಟಿದೆ. ಸದ್ಯ ದೇಶದ ವಾಯುನೆಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    https://www.youtube.com/watch?v=Y3sC0vgwSyg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv