Tag: ಸರ್ಕಾರಿ ನೌಕರರು

  • ದಶಮಾನೋತ್ಸವ ಆಚರಣೆಗೆ ಸರ್ಕಾರಿ ನೌಕರರಿಂದ 500 ರೂ. ವಸೂಲಿ- ಸರ್ಕಾರದ ಬಳಿ ದುಡ್ಡು ಇಲ್ವಾ?

    ದಶಮಾನೋತ್ಸವ ಆಚರಣೆಗೆ ಸರ್ಕಾರಿ ನೌಕರರಿಂದ 500 ರೂ. ವಸೂಲಿ- ಸರ್ಕಾರದ ಬಳಿ ದುಡ್ಡು ಇಲ್ವಾ?

    ಚಿಕ್ಕಬಳ್ಳಾಪುರ: ಜಿಲ್ಲೆಗೆ 10 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಜಿಲ್ಲಾ ದಶಮಾನೋತ್ಸವ ಆಚರಣೆಗೆ ಜಿಲ್ಲಾಡಳಿತ ಮುಂದಾಗಿದೆ. ಆದರೆ ಜಿಲ್ಲೆಯ ಸರ್ಕಾರಿ ನೌಕರರ ವೇತನದಲ್ಲಿ 500 ರೂಪಾಯಿ ಕಡಿತ ಮಾಡಿಕೊಳ್ಳಲು ನಿರ್ಧಾರಕ್ಕೆ ಆಕ್ಷೇಪ ಕೇಳಿ ಬಂದಿದೆ.

    ಫೆಬ್ರವರಿ 2, 3 ಹಾಗೂ 4 ಮೂರು ದಿನಗಳ ಕಾಲ ಚಿಕ್ಕಬಳ್ಳಾಪುರ ನಗರದಲ್ಲಿರುವ ಸರ್.ಎಂ.ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ದಶಮಾನೋತ್ಸವ ಆಚರಿಸಲು ಸಿದ್ಧತೆ ನಡೆದಿದೆ. ಆದರೆ ಈ ದಶಮಾನೋತ್ಸವ ಆಚರಣೆಗೆ ಸರ್ಕಾರಿ ನೌಕರರ ವೇತನದಲ್ಲಿ ಹಣ ಕಡಿತ ಮಾಡಿಕೊಳ್ಳುತ್ತಿರುವುದರಿಂದ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸರ್ಕಾರಿ ಕಾರ್ಯಕ್ರಮ ಮಾಡೋಕೆ ಹಣದ ಕೊರತೆ ಇದೆಯಾ ಎಂಬ ಮಾತುಗಳು ಕೇಳಿಬರುತ್ತಿದೆ.

    ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 10 ವರ್ಷಗಳಾಗಿವೆ. ದಶಮಾನೋತ್ಸವ ಆಚರಣೆಗೆ ಸ್ವತಃ ರಾಜ್ಯ ಸರ್ಕಾರ ಸೂಕ್ತ ಅನುದಾನ ನೀಡಬೇಕಿತ್ತು. ಆದರೆ ಜಿಲ್ಲೆಯಲ್ಲಿ ಪ್ರಭಾವಿ ಮೂರು ಜನ ಕಾಂಗ್ರೆಸ್ ಶಾಸಕರಿದ್ದರೂ ಅನುದಾನ ತರಲು ಸಾಧ್ಯವಾಗಿಲ್ಲ. ಹೀಗಾಗಿ ದಶಮಾನೋತ್ಸವ ಆಚರಣೆಗೆ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯಾ ಕಾನಡೆ, ಎಲ್ಲಾ ರೀತಿಯ ಸರ್ಕಾರಿ ನೌಕರರ ವೇತನದಲ್ಲಿ ತಲಾ 1000-2000 ರೂ. ಕೊಡಿ ಎಂದು ನೌಕರರ ಸಂಘಗಳ ಜೊತೆ ಸಭೆಗಳನ್ನು ನಡೆಸಿದ್ದಾರೆ.

    ಜಿಲ್ಲೆಯ ಸರ್ಕಾರಿ ನೌಕರರು ಮೊದಲೇ ಕಡಿಮೆ ವೇತನ ಪಡೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಇಂಥದೊಂದು ವಿವಾದಾತ್ಮಕ ನಿರ್ಧಾರವನ್ನು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೈಗೊಂಡಿದೆ. ಜಿಲ್ಲಾಧಿಕಾರಿಯ ಒತ್ತಡಕ್ಕೆ ಮಣಿದ ನೌಕರರು ಕೊನೆಗೆ ಒಲ್ಲದ ಮನಸ್ಸಿನಿಂದಲೇ 500 ರೂಪಾಯಿ ನೀಡಲು ಒಪ್ಪಿದ್ದಾರೆ.

    ದಶಮಾನೋತ್ಸವ ಆಚರಣೆಗೆ ರಾಜ್ಯ ಸರ್ಕಾರದಿಂದ ಭರ್ಜರಿ ಅನುದಾನ ಮಂಜೂರು ಮಾಡಿಸಿಕೊಳ್ಳೊದನ್ನು ಬಿಟ್ಟು ಸರ್ಕಾರಿ ನೌಕರರ ವೇತನವನ್ನು ಕಡಿತ ಮಾಡಿಕೊಳ್ಳಲು ಮುಂದಾಗಿದೆ.

  • ವಾರದಲ್ಲಿ ಐದೇ ದಿನ ಕೆಲ್ಸ, ಸಂಬಳ ಹೆಚ್ಚಳ – ರಾಜ್ಯದ ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್

    ವಾರದಲ್ಲಿ ಐದೇ ದಿನ ಕೆಲ್ಸ, ಸಂಬಳ ಹೆಚ್ಚಳ – ರಾಜ್ಯದ ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್

    ಬೆಂಗಳೂರು: ವಿಧಾನಸಭೆ ಎಲೆಕ್ಷನ್ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಉಡುಗೊರೆ ನೀಡುವುದು ಖಚಿತವಾಗಿದೆ.

    ಎಂ.ಆರ್.ಶ್ರೀನಿವಾಸಮೂರ್ತಿ ನೇತೃತ್ವದ ಆರನೇ ವೇತನ ಆಯೋಗ ನೀಡಿರೋ ವರದಿಯನ್ನು ಯಥಾವತ್ತು ಜಾರಿಗೊಳಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜನವರಿ ಅಂತ್ಯಕ್ಕೆ ಆಯೋಗದ ಅವಧಿ ಕೊನೆಗೊಳ್ಳಲಿದೆ. ಅವಧಿ ಮುಗಿಯೋದಕ್ಕೂ ಮುನ್ನ ವರದಿ ಮಂಡನೆಯಾಗಲಿದೆ.

    6 ನೇ ವೇತನ ಆಯೋಗದ ವರದಿಯನ್ನು ಜಾರಿಗೆ ತಂದು ಚುನಾವಣೆ ಎದುರಿಸಲು ನಿರ್ಧಾರ ಮಾಡಲಾಗಿದ್ದು, ಸರ್ಕಾರದ ಅವಧಿ ಮುಗಿಯೋ ಮುನ್ನ ಸಿದ್ದರಾಮಯ್ಯ ಕೊನೆಯ ಬ್ರಹ್ಮಸ್ತ್ರ ಬಿಡಲಿದ್ದಾರೆ.

     

    ಈ ಮೂಲಕ 6 ಲಕ್ಷ ಸರ್ಕಾರಿ ನೌಕರರ ಕುಟುಂಬದ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಸಲುವಾಗಿ ಫೆಬ್ರವರಿ 16ರಂದು ಮಂಡಿಸುವ ಬಜೆಟ್‍ ನಲ್ಲಿ ವೇತನ ಆಯೋಗದ ವರದಿ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

    ಪಬ್ಲಿಕ್ ಟಿವಿಗೆ 6 ನೇ ವೇತನ ಆಯೋಗದ ಸಂಭವನೀಯ ವರದಿ ಸಿಕ್ಕಿದೆ. ಹಾಗಾದ್ರೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗೋ ಭರ್ಜರಿ ಉಡುಗೊರೆ ಏನು ಅಂತ ನೋಡೋದಾದ್ರೆ:

    – ವಾರದಲ್ಲಿ 5 ದಿನ ಮಾತ್ರ ಕೆಲಸ, ಶನಿವಾರ, ಭಾನುವಾರ ರಜೆ.
    – ಕೆಲ ಜಯಂತಿಗಳಿಗೆ ರಜೆ ರದ್ದು ಮಾಡಲು ಶಿಫಾರಸ್ಸು.
    – ಕೆಲಸದ ಸಮಯದಲ್ಲಿ ಬದಲಾವಣೆ.
    – ನೌಕರರ ವೇತನದಲ್ಲಿ ಭಾರಿ ಹೆಚ್ಚಳ.
    – ಕೇಂದ್ರ ಸರ್ಕಾರಿ ನೌಕರರ ಹತ್ತಿರದ ಸಂಬಳಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಬಳ.
    – ಕನಿಷ್ಠ ವೇತನ ಮೊತ್ತ 16,350 ರೂ.ಗೆ, ಗರಿಷ್ಠ ವೇತನ 1,32,925 ರೂ.ಗೆ ಏರಿಕೆ.
    – ಗ್ರೂಪ್ ಡಿ – 16,350 ರೂ., ಗ್ರೂಪ್ ಸಿ – 19,850, ಎಫ್‍ಡಿಐ – 28,125 ರೂ.
    – ಗ್ರೂಪ್ ಬಿ – 39,425 ರೂ., ಗ್ರೂಪ್ ಎ – 48,625 ರೂ., ಐಎಎಸ್ ಯೇತರ ಅಧಿಕಾರಿಗಳು-95,325 ರೂ.

  • ನಮಗೆ 20 ದಿನ ರಜೆ ಬೇಡ, 10 ರಜೆ ಸಾಕು-ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರ ಮನವಿ

    ನಮಗೆ 20 ದಿನ ರಜೆ ಬೇಡ, 10 ರಜೆ ಸಾಕು-ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರ ಮನವಿ

    -ಸಂಜೆ 6 ಗಂಟೆಯವರೆಗೆ ಕೆಲ್ಸ ಮಾಡ್ತೀವಿ

    ಬೆಂಗಳೂರು: ತಮಗೆ ಲಭ್ಯವಿರುವ 20 ದಿನಗಳು ಇರುವ ಸಾರ್ವತ್ರಿಕ ರಜೆಯನ್ನು 10 ದಿನಗಳಿಗೆ ಇಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರ ಸಂಘ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ.

    ರಜೆ ಬೇಡ ಓಟಿ (ಓವರ್ ಟೈಮ್) ನೀಡಿ ಮತ್ತು ಹೆಚ್ಚಿನ ಅವಧಿ ದುಡಿತಕ್ಕೆ ಹೆಚ್ಚಿನ ಸೌಲಭ್ಯ ನೀಡಿ ಸರ್ಕಾರಿ ನೌಕರರು ಹೇಳಿಕೊಂಡಿದ್ದಾರೆ. 10 ದಿನಗಳು ಇರುವ ಸಾಂದರ್ಭಿಕ ರಜೆಯನ್ನು 5 ದಿನಗಳಿಗೆ ಇಳಿಸಿ, ಜಯಂತಿಗಳ ಆಚರಣೆಗೆ ರಜೆ ಬೇಡ ಬದಲಾಗಿ ಕಚೇರಿಯಲ್ಲಿ ಅವರ ಭಾವಚಿತ್ರ ಇಟ್ಟು ಅವರ ಸ್ಮರಣಾರ್ಥ ಕಾರ್ಯಕ್ರಮ ಮಾಡಿ ಕಚೇರಿ ಕೆಲಸ ಮುಂದುವರೆಸುತ್ತೇವೆ. ಉಳಿದಂತೆ ಬೇರೆ ರಜೆಗಳಿಗೆ ಯಥಾಸ್ಥಿತಿ ಕಾಪಾಡುವಂತೆ 6ನೇ ವೇತನ ಆಯೋಗಕ್ಕೆ ಸಲಹೆ ನೀಡಿದ್ದಾರೆ.

    ಸರ್ಕಾರಿ ಎಲ್ಲಾ ನೌಕರರಿಗೂ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಎಲ್ಲಾ ಕಚೇರಿಗಳಿಗೂ ರಿಯಾಯಿತಿ ದರದ ಕ್ಯಾಂಟೀನ್ ಆರಂಭಿಸಬೇಕು. ಕಚೇರಿಯ ಸಮಯವನ್ನು 9.30 ರಿಂದ 6 ಗಂಟೆಯವರೆಗೆ ವಿಸ್ತರಿಸಿ, ವಾರಕ್ಕೆ ಎರಡು ದಿನ ರಜೆ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.