Tag: ಸರೆಂಡರ್

  • ಜಾಝ್ ಶೈಲಿಯಲ್ಲಿ ‘ಸರೆಂಡರ್’ ಮಾಡಲು ಬಂದ ‘ವಿಂಡೋಸೀಟ್’ ನಟಿಮಣಿಯರು

    ಜಾಝ್ ಶೈಲಿಯಲ್ಲಿ ‘ಸರೆಂಡರ್’ ಮಾಡಲು ಬಂದ ‘ವಿಂಡೋಸೀಟ್’ ನಟಿಮಣಿಯರು

    ಬೆಂಗಳೂರು: ಶೀತಲ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರೋ ‘ವಿಂಡೋಸೀಟ್’ ಸಿನಿಮಾ ಸ್ಯಾಂಡಲ್‍ವುಡ್ ಬಹು ನಿರೀಕ್ಷಿತ ಚಿತ್ರಗಳಲ್ಲೊಂದು.

    ರೋಮ್ಯಾಂಟಿಕ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ‘ವಿಂಡೋಸೀಟ್’ ಚಿತ್ರದಲ್ಲಿ ನಿರೂಪ್ ಭಂಡಾರಿ, ಸಂಜನಾ ಆನಂದ್, ಅಮೃತಾ ಐಯ್ಯಂಗಾರ್ ಮುಖ್ಯ ಭೂಮಿಕೆಯಲ್ಲಿ ತೆರೆ ಹಂಚಿಕೊಂಡಿದ್ದಾರೆ. ಆರಂಭದಿಂದಲೂ ಎಲ್ಲರ ಗಮನ ಸೆಳೆಯುತ್ತಲೇ ಬಂದಿರುವ ಈ ಚಿತ್ರ ಇದೀಗ ಚಿತ್ರದ ಹಾಡೊಂದನ್ನ ವಿಶೇಷ ಶೈಲಿಯಲ್ಲಿ ಚಿತ್ರೀಕರಿಸಿ ಎಲ್ಲರ ಚಿತ್ತ ಸೆಳೆದಿದೆ.

    ಚಿತ್ರದ ‘ಸರೆಂಡರ್’ ಹಾಡನ್ನು ಚಿತ್ರತಂಡ ವಿಭಿನ್ನವಾಗಿ, ವಿಶೇಷವಾಗಿ ಚಿತ್ರೀಕರಿಸಿ ಸುದ್ದಿಯಲ್ಲಿದೆ. ಜಾಝ್ ಶೈಲಿಯಲ್ಲಿ ಮೂಡಿ ಬಂದಿರುವ ಈ ಹಾಡು ಕನ್ನಡದ ಮಟ್ಟಿಗಂತೂ ಇದೇ ಮೊದಲ ಪ್ರಯೋಗ. ಸರೆಂಡರ್ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದ್ದು, ಈ ಹಾಡು ಎಲ್ಲರ ಗಮನವನ್ನು ತನ್ನತ್ತ ಆಕರ್ಷಿಸಿದೆ. ಈ ಪ್ರಯೋಗಾತ್ಮಕ ಹಾಡಿಗೆ ಮಹೇಶ್ ರಘುನಂದನ್ ಸಾಹಿತ್ಯ, ಸೌಂದರ್ಯ ಜಯಚಂದ್ರನ್ ಗಾಯನ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮ್ಯೂಸಿಕ್ ಮೋಡಿ ಇದೆ. ಇದನ್ನೂ ಓದಿ:  ಕೆಜಿಎಫ್ ಶೂಟಿಂಗ್ ನಡೆದ ಬಂಜರು ಭೂಮಿಗೆ ಮತ್ತೆ ಜೀವ ನೀಡುತ್ತಿದೆ ಹೊಂಬಾಳೆ ಫಿಲಂಸ್

    ಈಗಾಗಲೇ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದೆ. ಇಷ್ಟೊತ್ತಿಗಾಗಲೇ ಈ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ ಕೊರೊನಾ ಅದಕ್ಕೆಲ್ಲ ಬ್ರೇಕ್ ಹಾಕಿತ್ತು. ಆದ್ರೀಗ ಎಲ್ಲವೂ ಸುಧಾರಣೆಯ ಹಂತಕ್ಕೆ ಬಂದು ತಲುಪಿದ್ದು, ‘ವಿಂಡೋಸೀಟ್’ ಚಿತ್ರತಂಡ ಕೂಡ ಸಿನಿರಸಿಕರಿಗೆ ಸದ್ಯದಲ್ಲೇ ಸಿಹಿ ಸುದ್ದಿ ನೀಡಲಿದೆ.

    ಮೇಕಿಂಗ್, ಟೀಸರ್, ಹಾಡುಗಳು ಸೃಷ್ಟಿಸಿರೋ ಬಝ್, ಶೀತಲ್ ಶೆಟ್ಟಿ ನಿರ್ದೇಶನದ ಮೊದಲ ಸಿನಿಮಾ ಅನ್ನೋ ಕ್ಯೂರಿಯಾಸಿಟಿ, ಆದಿ ಲಕ್ಷ್ಮೀ ಪುರಾಣ ನಂತರ ನಿರೂಪ್ ಭಂಡಾರಿ ಯಾವುದೇ ಸಿನಿಮಾಗಳು ತೆರೆ ಕಾಣದಿರುವುದು, ಈ ಎಲ್ಲವೂ ಪ್ರೇಕ್ಷಕ ಪ್ರಭುಗಳ ಮನಸ್ಸಲ್ಲಿ ‘ವೀಂಡೋಸೀಟ್’ ಚಿತ್ರದ ಮೇಲೆ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿವೆ.

    ಕೆ ಎಸ್ ಕೆ ಶೋರೀಲ್ ಬ್ಯಾನರ್ ನಡಿ ನಿರ್ಮಾಣವಾದ ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಾರಥ್ಯ, ವಿಘ್ನೇಶ್ ರಾಜ್ ಕ್ಯಾಮೆರಾ ವರ್ಕ್, ರಿತ್ವಿಕ್ ಸಂಕಲನವಿದೆ. ಲೇಖಾ ನಾಯ್ಡು, ಮಧುಸೂದನ್ ರಾವ್, ರವಿಶಂಕರ್, ಸೂರಜ್ ಒಳಗೊಂಡಂತೆ ಹಲವು ಕಲಾವಿದರು ‘ವಿಂಡೋಸೀಟ್’ ತಾರಾ ಬಳಗದಲ್ಲಿದ್ದಾರೆ. ಇದನ್ನೂ ಓದಿ: ಕಷ್ಟಕರವಾದ ರಸ್ತೆಗಳು ಸುಂದರ ತಾಣಗಳಿಗೆ ದಾರಿ ಮಾಡಿಕೊಡುತ್ತೆ: ದೀಪಿಕಾ ದಾಸ್

  • ಟಿಕ್‍ಟಾಕ್ ಸ್ಟಾರ್ ನವೀನ್ ಸೇರಿ ನಾಲ್ವರು ಪೊಲೀಸರಿಗೆ ಶರಣು

    ಟಿಕ್‍ಟಾಕ್ ಸ್ಟಾರ್ ನವೀನ್ ಸೇರಿ ನಾಲ್ವರು ಪೊಲೀಸರಿಗೆ ಶರಣು

    ಬೆಂಗಳೂರು: ಕಾರ್ಪೋರೇಟರ್ ಅಣ್ಣನ ಮಗನ ಕೊಲೆ ಮಾಡಿರುವ ಪ್ರಕರಣದಲ್ಲಿ ಟಿಕ್‍ಟಾಕ್ ಸ್ಟಾರ್ ನವೀನ್ ಸೇರಿದಂತೆ ನಾಲ್ವರು ಪೊಲೀಸರಿಗೆ ಶರಣಾಗಿದ್ದಾರೆ.

    ಬುಧವಾರ ಕಗ್ಗಲಿಪುರ ಬಳಿ ಕಾರ್ಪೋರೇಟರ್ ಸೋಮಣ್ಣನ ಅಣ್ಣನ ಮಗ ವಿನೋದನನ್ನು ತಲೆ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಟಿಕ್‍ಟಾಕ್ ಸ್ಟಾರ್ ನವೀನ್ ಅಲಿಯಾಸ್ ಸ್ಮೈಲ್ ನವೀನ್ ಮತ್ತು ರೌಡಿ ಶೀಟರ್ ಮಂಜೇಶ್ ಕುಮಾರ್ ಅಲಿಯಾಸ್ ಅವಲಹಳ್ಳಿ ಮಂಜ ಸೇರಿದಂತೆ ನಾಲ್ವರು ಆರೋಪಿಗಳು ಕಗ್ಗಲಿಪುರ ಪೊಲೀಸ್ ಠಾಣೆಗೆ ತಡರಾತ್ರಿ ಬಂದು ಶರಣಾಗಿದ್ದಾರೆ.

    ಮೊಬೈಲ್ ಹಿಡಿದುಕೊಂಡು ಟಿಕ್‍ಟಾಕ್ ಮಾಡಿ ಫೇಮಸ್ ಆಗಿದ್ದ ನವೀನ್ ಈಗ ಲಾಂಗ್ ಹಿಡಿದು ರೌಡಿಯಾಗಿದ್ದಾನೆ. ಕಗ್ಗಲಿಪುರದಲ್ಲಿ ಒಬ್ಬನೇ ಬರುತ್ತಿದ್ದ ವಿನೋದ್‍ನನ್ನು ಅಡ್ಡಿಗಟ್ಟಿದ್ದ ಈ ನಾಲ್ವರು ಬ್ಯಾಟ್ ಹಾಗೂ ಆಯುಧಗಳಿಂದ ಆತನನ್ನು ಕೊಚ್ಚಿ, ತಲೆಯನ್ನು ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದರು. ಈ ಕೊಲೆಯ ಮೂಲಕ ಮಂಜ ತನ್ನ ಗುರುವನ್ನು ಕೊಂದವರ ವಿರುದ್ಧ ರಿವೇಂಜ್ ತೆಗೆದುಕೊಂಡಿದ್ದಾನೆ.

    2013ರಲ್ಲಿ ತಲಘಟ್ಟಪುರ ರೌಡಿ ಶೀಟರ್ ಮಂಜನ ಗುರು ಕೆಂಬತ್ತಹಳ್ಳಿ ಪರಮೇಶನ ಕೊಲೆಯಾಗಿತ್ತು. ಈ ಕೊಲೆಗೆ ವಿನೋದ್ ಸಾಥ್ ನೀಡಿದ್ದ. ಪರಮೇಶನನ್ನು ನಾಗ ಮತ್ತವನ ತಂಡ ಕೊಲೆ ಮಾಡಿತ್ತು. ಇದಕ್ಕೆ ವಿನೋದ್ ಹಣ ಸಹಾಯ ಮಾಡಿದ್ದ. ಈ ಕೊಲೆಯ ಪ್ರತಿಕಾರವಾಗಿ ಮಂಜ, ನಾಗ ಮತ್ತು ಅವನ ಸ್ನೇಹಿತನ್ನು ಡಬಲ್ ಮರ್ಡರ್ ಮಾಡಿ ಜೈಲು ಸೇರಿದ್ದ. ಕಳೆದ ಐದು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ.

    ಈ ನಂತರ ಜಮೀನಿನ ವಿಷಯದಲ್ಲಿ ವಿನೋದ ಮತ್ತು ಮಂಜ ತಕರಾರು ಮಾಡಿಕೊಂಡಿದ್ದರು. ಈ ಮೊದಲೇ ಗುರುವಿನ ಕೊಲೆ ಸಾಥ್ ನೀಡಿದ್ದಕ್ಕೆ ವಿನೋದನ ಮೇಲೆ ಮಂಜ ಕತ್ತಿ ಮಸೆಯುತ್ತಿದ್ದ. ಹೀಗಾಗಿ ತನ್ನ ಜೊತೆ ಪುಡಿ ರೌಡಿಯಾಗಿದ್ದ ಸ್ಮೈಲ್ ನವೀನನ್ನು ಸೇರಿಸಿಕೊಂಡು ವಿನೋದ್ ಕೊಲೆಗೆ ಸ್ಕೆಚ್ ಹಾಕಿದ್ದ. ಅಂತಯೇ ಬುಧವಾರ ವಿನೋದನನ್ನು ಕೊಲೆ ಮಾಡಿದ್ದರು. ಈ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ನ್ಯಾಯಾಲಯದ ಮುಂದೆ ಶರಣಾದ ಕೊಲೆ ಆರೋಪಿಗಳು

    ನ್ಯಾಯಾಲಯದ ಮುಂದೆ ಶರಣಾದ ಕೊಲೆ ಆರೋಪಿಗಳು

    ಮಂಡ್ಯ: ಕಳೆದ ನಾಲ್ಕು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೊಗರಹಳ್ಳಯಲ್ಲಿ ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಉದಯ್‍ಕುಮಾರ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳು ಇಂದು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

    ಮೊಗರಹಳ್ಳಿಯಲಿ ನಾಲ್ಕು ದಿನಗಳ ಹಿಂದೆ ಉದಯ್‍ಕುಮಾರ್ ಎಂಬಾತನನ್ನು ಕೋಲೆ ಮಾಡಿ ಕುಳ್ಳಚ್ಚಿ ವಿನಯ್ ಮತ್ತು ಧರ್ಮ ತಲೆಮರಿಸಿಕೊಂಡಿದ್ದರು. ಇಂದು ಶ್ರೀರಂಗಪಟ್ಟಣದ ತಾಲೂಕು ನ್ಯಾಯಾಲಯಕ್ಕೆ ತಾವೇ ಬಂದು ಶರಣಾಗಿದ್ದಾರೆ. ಇಂದು ವಕೀಲರ ಜೊತೆಯಲ್ಲಿ ಬಂದ ಈ ಇಬ್ಬರು ಕೊಲೆ ಆರೋಪಿಗಳು ತಾವೇ ಉದಯ್‍ಕುಮಾರ್ ಅನ್ನು ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡು ಶರಣಾಗಿದ್ದಾರೆ.

    ಉದಯ್‍ಕುಮಾರ್ ಮೊಗರಹಳ್ಳಿ ಗ್ರಾಮದ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಆ ಮಹಿಳೆಗೆ ಗಂಡ ಇಲ್ಲದ ಕಾರಣ ಮುಂದಿನ ದಿನಗಳಲ್ಲಿ ಮದುವೆ ಆಗಲು ಕೂಡ ಇಬ್ಬರು ನಿರ್ಧಾರ ಮಾಡಿದ್ದರು. ಹೀಗಿರುವಾಗ ಕುಳ್ಳಚ್ಚಿ ವಿನಯ್‍ಗೆ ಇದನ್ನು ನೋಡಿ ಸಹಿಸಲಾಗದೇ, ತನ್ನ ಸ್ನೇಹಿತರೊಂದಿಗೆ ಏಕಾಏಕಿ ಮನೆಗೆ ನುಗ್ಗಿ ಉದಯ್‍ಕುಮಾರ್ ಅನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಕೆಆರ್‍ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರೂ ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

  • ಸಿಲಿಕಾನ್ ಸಿಟಿಯಲ್ಲಿ ಹಿಟ್ ಅಂಡ್ ರನ್ ಕೇಸ್ – ತಲೆ ಮರೆಸಿಕೊಂಡಿದ್ದ ವಿಷ್ಣು ಪೊಲೀಸರಿಗೆ ಶರಣಾಗತಿ

    ಸಿಲಿಕಾನ್ ಸಿಟಿಯಲ್ಲಿ ಹಿಟ್ ಅಂಡ್ ರನ್ ಕೇಸ್ – ತಲೆ ಮರೆಸಿಕೊಂಡಿದ್ದ ವಿಷ್ಣು ಪೊಲೀಸರಿಗೆ ಶರಣಾಗತಿ

    – 5 ದಿನಗಳ ಕಾಲ ವಶಕ್ಕೆ ಪಡೆಯೋ ಸಾಧ್ಯತೆ

    ಬೆಂಗಳೂರು: ಮದ್ಯದ ಮತ್ತಲ್ಲಿ ಹಿಟ್ ಅಂಡ್ ರನ್ ಮಾಡಿದ್ದ ಉದ್ಯಮಿ ಆದಿಕೇಶವುಲು ಮೊಮ್ಮಗ ವಿಷ್ಣು ಪೊಲೀಸರಿಗೆ ಶರಣಾಗಿದ್ದಾನೆ. ಸಿಸಿಬಿ ಪೊಲೀಸರ ಮುಂದೆ ಶರಣಾಗಿರೋ ಆರೋಪಿಯನ್ನು ಇಂದು ಕೋರ್ಟ್ ಮುಂದೆ ಹಾಜರುಪಡಿಸಿ 5 ದಿನ ಪೊಲೀಸ್ ಕಸ್ಟಡಿ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

    ಸೆಪ್ಟೆಂಬರ್ 28ರ ಬೆಳಗಿನ ಜಾವ ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್‍ನಲ್ಲಿ ಸಿಕ್ಕಸಿಕ್ಕವರಿಗೆಲ್ಲಾ ಐಷಾರಾಮಿ ಬೆಂಜ್ ಕಾರಿನಲ್ಲಿ ಗುದ್ದಿ ಎಸ್ಕೇಪ್ ಆಗಿದ್ದ ಉದ್ಯಮಿ ಆದಿಕೇಶವುಲು ಮೊಮ್ಮಮ ಗೀತಾವಿಷ್ಣು. ಆತನ ಕಾರಿನಲ್ಲಿ ಡ್ರಗ್ಸ್ ಹಾಗೂ ಕೊಕೇನ್ ಸಿಕ್ಕಿತ್ತು. ಅಲ್ಲದೇ ಆತನ ಜೊತೆ ಕೆಲ ನಟರೂ ಇದ್ದರು. ರೇವ್ ಪಾರ್ಟಿಗೆ ಹೋಗಬೇಕಾದ್ದರೆ ಆಕ್ಸಿಡೆಂಟ್ ಮಾಡಿದ್ದರು ಎಂದು ಹೇಳಲಾಗಿತ್ತು. ಇಡೀ ಸುದ್ದಿ ದೊಡ್ಡ ಸದ್ದು ಮಾಡುತ್ತಿದ್ದಂತೆ ಆ ರಾತ್ರಿಯೇ ವಿಷ್ಣು ಎಸ್ಕೇಪ್ ಆಗಿದ್ದ. ವಿಷ್ಣುಗಾಗಿ ಪೊಲೀಸರೆಲ್ಲಾ ಆತನ ತಂದೆ ಸಹಾಯದಿಂದ ಹುಡುಕಾಡದ ಜಾಗವೇ ಇರಲಿಲ್ಲ.

    ನಿರೀಕ್ಷಣಾ ಜಾಮೀನು ಸಿಗದ ಭಯಕ್ಕೆ ಶರಣಾಗತಿ?: ಕಳೆದ ಐದು ದಿನಗಳಿಂದ ತಲೆಮರೆಸಿಕೊಂಡಿದ್ದ ವಿಷ್ಣು ಮಂಗಳವಾರ ಸಂಜೆ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಬಂದು ಶರಣಾಗಿದ್ದಾನೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತಾಡಿದ ತಂದೆ ಶ್ರೀವಾಸಮೂರ್ತಿ ನನ್ನ ಮಗ ತಪ್ಪು ಮಾಡಿಲ್ಲ. ಡ್ರಗ್ಸ್ ಸೇವಿಸೋ ಅಭ್ಯಾಸ ಇಲ್ಲ. ಯಾರೋ ಆತನ ಕಾರಿನಲ್ಲಿ ಡ್ರಗ್ಸ್ ಇಟ್ಟಿರಬಹುದು ಅಂತಾ ಹೇಳಿದ್ದಾರೆ.

    ಪೊಲೀಸರಿಗೆ ಫೋನ್ ಮಾಡಿ ಕರೆಸಿಕೊಂಡನಾ?: ತಲೆ ಮರೆಸಿಕೊಂಡಿದ್ದ ವಿಷ್ಣು ಯಾರಿಗೂ ಗೊತ್ತಾಗಬಾರದು ಅಂತಾ ಕೂದಲು ಕತ್ತರಿಸಿ, ಮೀಸೆ ಬೋಳಿಸಿಕೊಂಡು ವೇಷ ಬದಲಿಸಿಕೊಂಡಿದ್ದ. ನಾನು ಮಡಿಕೇರಿಯ ರಾಣಿಪೇಟ್‍ನಲ್ಲಿದ್ದೀನಿ. ಬನ್ನಿ ಸಾರ್ ಸರೆಂಡರ್ ಆಗ್ತೀನಿ ಅಂತಾ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನ ಕರೆಸಿಕೊಂಡು ಶರಣಾಗಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಇಂದು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತೆ. ಆದರೆ ಇಂದು ವಕೀಲರು ಇಂದು ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ಮಾಡಲಿದ್ದಾರೆ. ಹೀಗಾಗಿ ವಿಷ್ಣು ಇಂದು ಪೊಲೀಸರ ವಶದಲ್ಲೇ ಇರಬೇಕಾಗುತ್ತೆ.

    ಸತ್ಯ ಹೊರ ಬರುತ್ತಾ?: ವಿಷ್ಣು ಜೊತೆ ಯಾರೆಲ್ಲಾ ಇದ್ದರು? ನಟ-ನಟಿಯರು ಇದ್ದರ? ಅವರರೆಲ್ಲಾ ಕುಡಿದಿದ್ದರ? ಡ್ರಗ್ಸ್ ಸೇವನೆ ಮಾಡಿದ್ದರಾ? ರೇವ್ ಪಾರ್ಟಿಗೆ ಹೋಗುತ್ತಿದ್ದರಾ? ಇನ್ನೂ ಅನೇಕ ಪ್ರಶ್ನೆಗಳಿಗೆ ವಿಷ್ಣುವೇ ಉತ್ತರ ನೀಡಬೇಕಿದೆ.