Tag: ಸಫಾರಿ

  • ಅರಣ್ಯದಲ್ಲಿ ಆನೆಗಳ ಜೊತೆ ಚಾಲೆಂಜಿಂಗ್ ಸ್ಟಾರ್ ರಿಲ್ಯಾಕ್ಸ್ ಮೂಡ್!

    ಅರಣ್ಯದಲ್ಲಿ ಆನೆಗಳ ಜೊತೆ ಚಾಲೆಂಜಿಂಗ್ ಸ್ಟಾರ್ ರಿಲ್ಯಾಕ್ಸ್ ಮೂಡ್!

    ಬೆಂಗಳೂರು: ಅರಣ್ಯ ಇಲಾಖೆಯ ಪ್ರಚಾರ ರಾಯಭಾರಿ ಆಗಿರುವ ನಟ ದರ್ಶನ್ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.

    ಮೈಸೂರಿನ ಕಬಿನಿ ಹಿನ್ನೀರಿನ ಅರಣ್ಯದಲ್ಲಿ ಆನೆ ಜೊತೆ ಹಾಗೂ ಕಾಡಿನ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಇಂದು ಬೆಳಗ್ಗೆ ಸಫಾರಿಗೆ ಹೋದ ದರ್ಶನ್, ಕೈಯಲ್ಲಿ ಕ್ಯಾಮೆರಾ ಹಿಡಿದು ಪ್ರಕೃತಿ ಸೌಂದರ್ಯ ಹಾಗೂ ತಮಗೆ ಎದುರಾಗುವ ಕಾಡು ಪ್ರಾಣಿಗಳ ಫೋಟೋ ಕ್ಲಿಕ್ಕಿಸಿದರು.

    ಸದ್ಯ ಚಿತ್ರೀಕರಣದಿಂದ ದರ್ಶನ್ ಬ್ರೇಕ್ ತೆಗೆದುಕೊಂಡಿದ್ದಾರೆ. ದರ್ಶನ್ ಬಿಡುವಿನ ಸಮಯದಲ್ಲಿ ಮೈಸೂರಿನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದು, ಕಳೆದ ಎರಡು ದಿನಗಳಿಂದ ಮೈಸೂರಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

    ಪ್ರಾಣಿ ಪಕ್ಷಿಗಳನ್ನು ತುಂಬಾನೇ ಇಷ್ಟಪಡುವ ಅವರು, ಮೈಸೂರಿನ ತನ್ನ ಫಾರ್ಮ್ ಹೌಸ್‍ನಲ್ಲಿ ಸಾಕಷ್ಟು ಪ್ರಾಣಿಗಳನ್ನು ಸಾಕಿದ್ದಾರೆ. ಪ್ರಾಣಿ ಹಾಗೂ ಪರಿಸರ ಮೇಲಿರುವ ಪ್ರೀತಿಯನ್ನು ಕಂಡು ದರ್ಶನ್ ಅವರನ್ನು ಮೈಸೂರು ಮೃಗಾಲಯದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ.

    ದರ್ಶನ್ ತಮ್ಮದೇ ಫಾರ್ಮ್‍ನಲ್ಲಿ ಹಲವಾರು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೇ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹುಲಿ ಮತ್ತು ಆನೆ ಪ್ರಾಣಿಗಳನ್ನು ದತ್ತು ಪಡೆದು ಆ ಪ್ರಾಣಿಗಳ ಪಾಲನೆಗೆ ಸಹಾಯ ಮಾಡುತ್ತಿದ್ದಾರೆ.

    https://twitter.com/DarshanTrends/status/1011628239977000960

     

  • ವಿಂಡೋ ಗ್ಲಾಸ್ ಒಡೆದು ಕಾರಿನೊಳಗೆ ತಲೆದೂರಿಸಿ ಆಹಾರ ಪಾಕೆಟ್ ಕಿತ್ತುಕೊಂಡ ಜಿರಾಫೆ-ವಿಡಿಯೋ ನೋಡಿ

    ವಿಂಡೋ ಗ್ಲಾಸ್ ಒಡೆದು ಕಾರಿನೊಳಗೆ ತಲೆದೂರಿಸಿ ಆಹಾರ ಪಾಕೆಟ್ ಕಿತ್ತುಕೊಂಡ ಜಿರಾಫೆ-ವಿಡಿಯೋ ನೋಡಿ

    ಲಂಡನ್: ಸಫಾರಿ ಕಾರಿನ ಗ್ಲಾಸ್ ಒಡೆದ ಜಿರಾಫೆಯೊಂದು ಆಹಾರದ ಪೊಟ್ಟಣವನ್ನು ಎತ್ತಿಕೊಂಡಿರುವ ವಿಚಿತ್ರ ಘಟನೆ ಇಂಗ್ಲೆಂಡಿನ ವೆಸ್ಟ್ ಮಿಡ್‍ಲ್ಯಾಂಡ್ ನ ವರ್ಸೆಸ್ಟಶೈರ್ ನಲ್ಲಿ ಸೋಮವಾರ ನಡೆದಿದೆ.

    ಕಾರಿನಲ್ಲಿ ಸಫಾರಿ ಮಾಡುವ ವೇಳೆ ಎದುರಿಗೆ ಬಂದ ಜಿರಾಫೆಗೆ ಆಹಾರ ನೀಡಲು ದಂಪತಿ ಮುಂದಾಗಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಆಹಾರದ ಪೊಟ್ಟಣಗಳನ್ನು ನೋಡಿದ ಜಿರಾಫೆ ಕಾರಿನೊಳಗೆ ತನ್ನ ತಲೆಯನ್ನು ತೂರಿಸಿದೆ. ಇದ್ರಿಂದ ಭಯಗೊಂಡ ಕಾರಿನಲ್ಲಿದ್ದ ಮಹಿಳೆ ಕಾರಿನ ಕಿಟಕಿಯ ಗ್ಲಾಸ್ ಮೇಲೆರಿಸಲು ಪ್ರಯತ್ನಿಸಿದ್ದಾರೆ. ಜಿರಾಫೆಗೆ ತಗುಲಿದ ಗ್ಲಾಸ್ ಒಡೆದು ಚೂರು ಚೂರಾಗಿದೆ.

    ಈ ಎಲ್ಲ ದೃಶ್ಯಗಳನ್ನು ಪಕ್ಕದ ಸಫಾರಿ ಕಾರಿನಲ್ಲಿದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಈ ಸಂಬಂಧ ಸಫಾರಿ ಉದ್ಯಾನದ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದ್ದು ಮತ್ತು ಜಿರಾಫೆಗೆ ಯಾವುದೇ ರೀತಿಯಲ್ಲಿ ಅಪಾಯಗಳಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

    ಪಾರ್ಕ್ ನಿಯಮವೇನು?: ವರ್ಸೆಸ್ಟಶೈರ್ ಪಾರ್ಕ್ ನಲ್ಲಿ ಸಫಾರಿ ಮಾಡುವ ಜನರು ಕಾರಿನ ಕಿಟಕಿಯ ಅರ್ಧ ಗ್ಲಾಸ್ ಮಾತ್ರ ತೆಗೆಯಬೇಕು. ಇದರ ಮೂಲಕವೇ ಸಫಾರಿಯಲ್ಲಿ ಎದುರಾಗುವ ಜಿರಾಫೆಗಳಿಗೆ ಆಹಾರವನ್ನು ನೀಡಬಹುದು ಎನ್ನುವ ನಿಯಮವಿದೆ.

    ದಂಪತಿ ಕಾರಿನ ವಿಂಡೋ ಪೂರ್ಣ ಪ್ರಮಾಣದಲ್ಲಿ ತೆರೆದು ಆಹಾರವನ್ನು ತೋರಿಸಿ ಜಿರಾಫೆಯನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಜಿರಾಫೆ ತಮ್ಮ ಹತ್ರ ಬರುತ್ತಿದ್ದಂತೆ ದಂಪತಿ ನಗುತ್ತಾ ಅದಕ್ಕೆ ಆಹಾರ ನೀಡಲು ಮುಂದಾಗಿದ್ದಾರೆ. ಆಹಾರದ ಪೊಟ್ಟಣಕ್ಕೆ ಕಣ್ಣು ಹಾಕಿದ ಜಿರಾಫೆ ಕಾರಿನ ಒಳಗೆಯೇ ತಲೆಯನ್ನ ತೂರಿಸಿದ್ದರಿಂದ ಈ ಅವಘಡ ನಡೆದಿದೆ.

    ನಾನು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಾ ಜಿರಾಫೆಯನ್ನ ನನ್ನ ಹತ್ತಿರ ಸೆಳೆಯುವ ಪ್ರಯತ್ನ ಮಾಡಿದೆ. ಆದರೆ ಜಿರಾಫೆ ಪಕ್ಕದ ಕಾರಿನತ್ತ ಹೋಯಿತು. ಕಾರಿನಲ್ಲಿದ್ದ ದಂಪತಿ ಜಿರಾಫೆ ತಮ್ಮತ್ತ ಬರುತ್ತಿದ್ದಂತೆ ಖುಷಿಯಿಂದ ನಗಲಾರಂಭಿಸಿದ್ರು. ಯಾವಾಗ ಜಿರಾಫೆ ತನ್ನ ಕತ್ತನ್ನ ಕಾರಿನೊಳಗೆ ಸೇರಿಸಿತೋ ಭಯಗೊಂಡ ದಂಪತಿ ಗ್ಲಾಸ್ ಮೇಲೆ ಮಾಡಿದ್ದರಿಂದ ಅದು ಚೂರು ಚೂರಾಯಿತು. ಗ್ಲಾಸ್ ಒಡೆದಿದ್ದರಿಂದ ಜಿರಾಫೆಗೆ ಯಾವುದೇ ಅಪಾಯವಾಗಿಲ್ಲ. ಆದ್ರೆ ಕಾರಿನಲ್ಲಿದ್ದವರಿಗೆ ತರಚಿದ ಗಾಯಗಳಾಗಿವೆ. ಕಾರಿನ ಗ್ಲಾಸ್ ತೆಗೆಯಬಾರದು ಎಂಬ ನಿಯಮವಿದ್ದರೂ ದಂಪತಿ ವಿಂಡೋ ಓಪನ್ ಮಾಡಿದ್ದು ಯಾಕೆ ಅಂತಾ ಗೊತ್ತಿಲ್ಲ ಎಂದು ವಿಡಿಯೋ ಮಾಡಿದ ವ್ಯಕ್ತಿ ಹೇಳಿದ್ದಾನೆ.

  • ಆಹಾರಕ್ಕಾಗಿ ಪ್ರವಾಸಿಗರ ಜೀಪ್ ಒಳಗಡೆ ಸೊಂಡಿಲು ಹಾಕಿದ ಆನೆ!- ಫೋಟೋಗಳಲ್ಲಿ ನೋಡಿ

    ಆಹಾರಕ್ಕಾಗಿ ಪ್ರವಾಸಿಗರ ಜೀಪ್ ಒಳಗಡೆ ಸೊಂಡಿಲು ಹಾಕಿದ ಆನೆ!- ಫೋಟೋಗಳಲ್ಲಿ ನೋಡಿ

    ಕೊಲಂಬೊ: ಆಹಾರಕ್ಕಾಗಿ ಆನೆಯೊಂದು ಸಫಾರಿಗೆ ಬಂದಿದ್ದ ಜೀಪನ್ನೇ ಅಡ್ಡಹಾಕಿ ಅದರೊಳಗೆ ಸೊಂಡಿಲು ಹಾಕುವ ಮೂಲಕ ಪ್ರವಾಸಿಗರನ್ನು ಭಯಭೀತಗೊಳಿಸಿದ ಅಚ್ಚರಿಯ ಘಟನೆಯೊಂದು ಶ್ರೀಲಂಕಾದಲ್ಲಿ ನಡೆದಿದೆ.

    ಯಲಾ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ರಸ್ತೆಯ ಸಮೀಪ ಮರಗಳಿಂದ ಎಲೆ ಮತ್ತು ಹುಲ್ಲು ತಿನ್ನುತ್ತಿತ್ತು. ಈ ವೇಳೆ ಎದುರುಗಡೆಯಿಂದ ಜೀಪ್ ಬರುತ್ತಿರುವುದನ್ನು ನೋಡಿದೆ. ಅಲ್ಲದೇ ಜೀಪೊಳಗಡೆ ಆಹಾರವಿರುವುದು ಆನೆಯ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಆನೆ ಜೀಪ್ ಬಳಿ ತೆರಳಿ ಅಡ್ಡಹಾಕಿ, ಅದರೊಳಗೆ ತನ್ನ ಸೊಂಡಿಲನ್ನು ಹಾಕಿದೆ. ಇದರಿಂದ ಭಯಗೊಂಡ ಚಾಲಕ ಆನೆಯಿಂದ ತಪ್ಪಿಸಿಕೊಳ್ಳಲೆಂದು ಜೀಪನ್ನು ವೇಗವಾಗಿ ಚಲಾಯಿಸಲು ಯತ್ನಿಸಿದ್ದಾನೆ. ಆದರೆ ಜೀಪಿನಲ್ಲಿ ಕುಳಿತಿದ್ದ ಕೆಲ ಪ್ರಯಾಣಿಕರು ಭಯದಿಂದಲೇ ಆನೆಯನ್ನು ಕಂಡು ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಆನೆಗೆ ಮತ್ತಷ್ಟು ಕೋಪ ಬಂದಿದೆ. ಪರಿಣಾಮ ಓರ್ವ ಪ್ರವಾಸಿಗ ಆನೆಯಿಂದ ರಕ್ಷಿಸಿಕೊಳ್ಳಲೆಂದು ಜೀಪ್ ನಿಂದ ಹಾರಲು ರೆಡಿಯಾಗಿದ್ದಾನೆ.

    ಈ ಭಯಾನಕ ದೃಶ್ಯಗಳನ್ನು ರಷ್ಯಾದ ವನ್ಯಜೀವಿ ಫೋಟೋಗ್ರಾಫರ್ ಸರ್ಗಿ ಅವರು ತನ್ನ ಪತ್ನಿ ಜೊತೆ ಸಫಾರಿ ಹೋಗುತ್ತಿದ್ದ ಸೆರೆಹಿಡಿದಿದ್ದಾರೆ. ಆ ಘಟನೆ ಅದ್ಭುತ ಮತ್ತು ಭಯಹುಟ್ಟಿಸುವಂತಿತ್ತು ಅಂತ ಅವರು ಹೇಳಿದ್ದಾರೆ.

    ಆನೆ ಜೋರಾಗಿ ಘೀಳಿಡುತ್ತಿತ್ತು. ಅಲ್ಲದೇ ತನ್ನ ಕಾಲಿನಿಂದ ಜೀಪನ್ನು ಉರುಳಿಸಲು ಯತ್ನಿಸುತ್ತಿತ್ತು. ತನ್ನ ಕಾಲನ್ನು ಸಿಟ್ಟಿನಿಂದ ನೆಲಕ್ಕಿಡುವಾಗ ಧೂಳು ಬರುತಿತ್ತು. ಆದ್ರೆ ಜೀಪ್ ತುಂಬಾ ಪ್ರವಾಸಿಗರು ಇದ್ದುದರಿಂದ ಆನೆಗೆ ಜೀಪನ್ನು ಉರುಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಜೀಪನ್ನು ಆನೆ ತಿರುಗಿಸಲು ಆರಂಭಿಸಿತು. ಆಗ ಜೀಪಿನಲ್ಲಿದ್ದ ಪ್ರಯಾಣಿಕರು ಕಿರಿಚಾಡಲು ಶುರುಮಾಡಿದ್ದು, ಅವರ ಕಿರಿಚೋದು, ಅಳುವುದನ್ನು ಕೇಳಿದ ಸ್ಥಳೀಯ ನಿವಾಸಿಗಳ ಗುಂಪು ಸ್ಥಳಕ್ಕೆ ದೌಡಾಯಿಸಿತ್ತು. ನಂತರ ಆನೆಯನ್ನು ಓಡಿಸಿ ಅವರನ್ನು ರಕ್ಷಿಸಿದ್ದಾರೆ.

    ಈ ಆನೆ ಏಷ್ಯಾದ ಆನೆಯಾಗಿದ್ದು, ಇದು ಖಂಡದ ದೊಡ್ಡ ಸಸ್ತನಿಗಳಾಗಿವೆ. ಇದು 9 ಅಡಿ ಎತ್ತರವಾಗಿದ್ದು, ಐದು ಟನ್‍ಗಳಷ್ಟು ತೂಕವಿರುತ್ತದೆ.

  • ತಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಹೊಸ ಕಳೆ- ಬನ್ನೇರುಘಟ್ಟದಿಂದ ಬಂದ್ವು 2 ಸಿಂಹಗಳು

    ತಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಹೊಸ ಕಳೆ- ಬನ್ನೇರುಘಟ್ಟದಿಂದ ಬಂದ್ವು 2 ಸಿಂಹಗಳು

    ಶಿವಮೊಗ್ಗ: ಸಿಂಹಗಳು ಇಲ್ಲದೆ ಸೊರಗಿದ್ದ ಶಿವಮೊಗ್ಗದ ತಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಈಗ ಹೊಸ ಕಳೆ ಬಂದಿದೆ.

    ಈ ಕಳೆ ನೀಡಿರುವುದು ಬನ್ನೆರುಘಟ್ಟ ಸಫಾರಿಯಿಂದ ಬಂದಿರುವ ನಾಲ್ಕು ವರ್ಷದ ಸರ್ವೇಶ, ನಾಲ್ಕೂವರೆ ವರ್ಷದ ಸುಶ್ಮಿತ ಎಂಬ ಎರಡು ಸಿಂಹಗಳು. ಒಂದು ಕಾಲದಲ್ಲಿ ಎಂಟು ಸಿಂಹಗಳಿದ್ದ ಇಲ್ಲಿ ಈಗ ಕೇವಲ ಮುದಿಯಾಗಿರುವ ಆರ್ಯ ಹಾಗೂ ಮಾನ್ಯ ಎಂಬ ಎರಡೇ ಸಿಂಹಗಳಿವೆ.

    ಈ ಸಿಂಹಗಳ ಕೊರತೆ ನೀಗಲು ಮೃಗಾಲಯ ಪ್ರಾಧಿಕಾರ ಇಲ್ಲಿಗೆ ಬನ್ನೇರುಘಟ್ಟದಿಂದ ಸಿಂಹಗಳನ್ನು ಕಳುಹಿಸಿದೆ. ಈ ಸಿಂಹಗಳು ಇಲ್ಲಿ ವಂಶೋದ್ಧಾರ ಮಾಡಿ, ಸಿಂಹಗಳ ಸಂಖ್ಯೆ ಹೆಚ್ಚಿಸಲಿವೆ ಎಂಬ ವಿಶ್ವಾಸ ಅರಣ್ಯ ಇಲಾಖೆ ಅಧಿಕಾರಿಗಳಿದ್ದಾಗಿದೆ. ಇಲ್ಲಿರುವ ಸಿಂಹಗಳ ಜೊತೆ ಹೊಂದಿಕೊಳ್ಳಲಿ ಎಂಬ ಕಾರಣಕ್ಕೆ ಹೊಸ ಸಿಂಹಗಳನ್ನು ಇನ್ನೂ ಕೇಜ್ ನಲ್ಲೇ ಇಡಲಾಗಿದೆ. ಇನ್ನೊಂದು ವಾರದಲ್ಲಿ ಮುಕ್ತವಾಗಿ ಬಿಡುವ ಸಾಧ್ಯತೆ ಇದ್ದು ಸಾರ್ವಜನಿಕರು ವೀಕ್ಷಣೆ ಮಾಡಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಸಫಾರಿ ಹುಲಿ ಜೊತೆ ಕಾಡು ಹುಲಿ ಜಗಳ!

    ಸಫಾರಿ ಹುಲಿ ಜೊತೆ ಕಾಡು ಹುಲಿ ಜಗಳ!

    ಆನೇಕಲ್: ಸಫಾರಿಯಲ್ಲಿದ್ದ ಹುಲಿಯ ಜೊತೆ ಕಾಡು ಹುಲಿಯೊಂದು ಜಗಳ ತೆಗೆಯುತ್ತಿರುವ ವೀಡಿಯೋ ಪ್ರವಾಸಿಗರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಬನ್ನೇರುಘಟ್ಟ ಹುಲಿ ಸಫಾರಿಯಲ್ಲಿ ಈ ಘಟನೆ ನಡೆದಿದ್ದು ಪ್ರವಾಸಿಗರನ್ನು ಭಯಭೀತಗೊಳಿಸುವಂತೆ ಮಾಡಿದೆ.

    ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಕೆಲ ತಿಂಗಳಿಂದ ಆಗಾಗ ಕಾಣಿಸಿಕೊಂಡು ನಾಪತ್ತೆಯಾಗುತ್ತಿತ್ತು. ಅದೇ ಹುಲಿ ಇಂದು ಅರಣ್ಯ ಪ್ರದೇಶದಲ್ಲಿರುವ ಹುಲಿ ಸಫಾರಿಯ ಬಳಿ ಕಾಣಿಸಿಕೊಂಡಿದೆ. ಸಫಾರಿಯ ಒಳಗಡೆ ಇದ್ದ ಹುಲಿಯೊಂದಿಗೆ ಜಗಳ ತೆಗೆದಿದೆ. ಸಫಾರಿ ಹುಲಿ ಹಾಗೂ ಕಾಡು ಹುಲಿ ಮದ್ಯೆ ಕಬ್ಬಿಣದ ಬೇಲಿ ಇದ್ದ ಕಾರಣ ಹೆಚ್ಚಿನ ಅನಾಹುತವೇನೂ ಸಂಭವಿಸಿಲ್ಲ. ಸುಮಾರು ಹತ್ತು ನಿಮಿಷಗಳ ಕಾಲ ಎರಡು ಹುಲಿಗಳ ನಡುವೆ ಕಿತ್ತಾಟ ಮುಂದುವರೆದಿದೆ.

    ಸಾಮಾನ್ಯವಾಗಿ ಸಫಾರಿಯಲ್ಲಿರುವ ಹುಲಿಗಳಿಗಿಂತ ಕಾಡಿನಲ್ಲಿ ಬೆಳೆಯುವ ಹುಲಿಗಳಿಗೆ ದೈರ್ಯ ಹಾಗೂ ಶಕ್ತಿ ಹೆಚ್ಚಾಗಿರುತ್ತದೆ. ಆದರೆ ಸಫಾರಿಯಲ್ಲಿದ್ದ ಹುಲಿ ಕೂಡ ತಾನೇನು ಕಡಿಮೆ ಇಲ್ಲ ಎಂಬಂತೆ ಕಾಡು ಹುಲಿಯನ್ನ ಹೆದರಿಸಿ ಓಡುವಂತೆ ಮಾಡಿದೆ. ಇಷ್ಟು ದಿನ ಕಾಡಂಚಿನ ಹಳ್ಳಿಗಳ ಬಳಿ ಕಾಣಿಸಿಕೊಂಡು ಭಯ ಹುಟ್ಟಿಸುತ್ತಿದ್ದ ಹುಲಿ ಇಂದು ಏಕಾಏಕಿ ಸಫಾರಿ ಬಳಿ ಕಾಣಿಸಿಕೊಂಡು ಪ್ರವಾಸಿಗರನ್ನು ಆತಂಕಕ್ಕೀಡು ಮಾಡಿತ್ತು. ಆದರೆ ಹುಲಿ ಸಫಾರಿಯನ್ನು ನೋಡಲು ಹೋಗಿದ್ದ ಪ್ರವಾಸಿಗರಿಗಂತೂ ಇಂದು ಧಬಲ್ ಧಮಾಕಾ ಕಾದಿತ್ತು. ಸಫಾರಿ ಹುಲಿಯನ್ನು ನೋಡುವುದರ ಜೊತೆಗೆ ಕಾಡು ಹುಲಿಯನ್ನು ನೋಡುವ ಅವಕಾಶ ದೊರೆತಿದೆ.

    ತಿಂಗಳ ಹಿಂದಷ್ಟೇ ಬನ್ನೇರುಘಟ್ಟ ಸಫಾರಿ ವೇಳೆ ಸಿಂಹವೊಂದು ಕಾರಿನ ಮೇಲೆ ಏರಿ ಆತಂಕದ ವಾತಾವರಣ ಸೃಷ್ಟಿ ಮಾಡಿತ್ತು. ಅಂದು ಕೂಡಾ ಇದೇ ರೀತಿಯ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

    https://www.youtube.com/watch?v=U92q03WEXIw&feature=youtu.be

    https://www.youtube.com/watch?v=gkyumRjXHk0