Tag: ಸನ್ಯಾಸಿ

  • ಶುದ್ಧೀಕರಣದ ಹೆಸರಲ್ಲಿ ಪೋಷಕರ ಮುಂದೆಯೇ 11 ವರ್ಷಗಳ ಕಾಲ ಯುವತಿ ಮೇಲೆ ನಿರಂತರ ಅತ್ಯಾಚಾರ ಮಾಡ್ದ ಸನ್ಯಾಸಿ!

    ಶುದ್ಧೀಕರಣದ ಹೆಸರಲ್ಲಿ ಪೋಷಕರ ಮುಂದೆಯೇ 11 ವರ್ಷಗಳ ಕಾಲ ಯುವತಿ ಮೇಲೆ ನಿರಂತರ ಅತ್ಯಾಚಾರ ಮಾಡ್ದ ಸನ್ಯಾಸಿ!

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೂಢನಂಬಿಕೆಗೆ ಸಂಬಂಧಿಸಿದ ದುಷ್ಕೃತ್ಯವೊಂದು ನಡೆದಿದೆ. ಶುದ್ಧೀಕರಣದ ಹೆಸರಲ್ಲಿ ಪೋಷಕರ ಮುಂದೆಯೇ ಅನೇಕ ವರ್ಷಗಳ ಕಾಲ ನಿರಂತರವಾಗಿ ಡೋಂಗಿ ಸನ್ಯಾಸಿಯೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಈ ಘಟನೆ ನೇತಾಜಿ ಸುಭಾಷ್ ಪ್ಲೇಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಶುದ್ಧೀಕರಣದ ಹೆಸರಿನಲ್ಲಿ ಡೋಂಗಿ ಸನ್ಯಾಸಿ 11 ವರ್ಷಗಳ ಕಾಲ ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆಯ ತಂದೆ ದೇವ್ ಶರ್ಮಾ ಹಾಗೂ ಆತನ ಪತ್ನಿ ಮತ್ತು ಸಹೋದರಿ ಕಪಟ ಸನ್ಯಾಸಿ ಮಾತಿಗೆ ತಲೆದೂಗಿದ್ದರು. ಕೆಲ ವರ್ಷಗಳ ಹಿಂದೆ ಈ ಕುಟುಂಬ ಸೋದರ ಸಂಬಂಧಿಯೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಆ ಭಯವನ್ನು ಹೋಗಲಾಡಿಸಲು 11 ವರ್ಷಗಳ ಹಿಂದೆ ದೇವಿ ಶರ್ಮಾ ಸನ್ಯಾಸಿಯೊಬ್ಬರನ್ನು ಮನೆಗೆ ಕರೆದಿದ್ದರು.

    11 ವರ್ಷಗಳ ಹಿಂದೆ ಮೊದಲ ಬಾರಿ ಮನೆಗೆ ಬಂದ ಸನ್ಯಾಸಿ ಪೂಜೆ ಮಾಡಿ ನಂತರ 14 ವರ್ಷದ ಹುಡುಗಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಮನೆಯವರು ಕೇಳಿದಾಗ ಇದು ಶುದ್ಧೀಕರಣಕ್ಕೆ ಮಾಡಿದೆ ಎಂದು ಹೇಳಿ ಮನೆಯವರ ಬಾಯಿ ಮುಚ್ಚಿಸಿದ್ದಾನೆ. 11 ವರ್ಷಗಳ ಕಾಲ ದೇವಿ ಶರ್ಮಾ ಮನೆಗೆ ಬಂದಾಗಲೆ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ. ಈಗ ಯುವತಿ ತನ್ನ ನೋವನ್ನು ಪೊಲೀಸ್ ಮುಂದೆ ಹೇಳಿಕೊಂಡಿದ್ದಾರೆ.

    ಸಂತ್ರಸ್ತ ಯುವತಿ ಅನೇಕ ದಿನಗಳಿಂದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಆದ್ರೆ ಯಾರೂ ಈ ಬಗ್ಗೆ ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಆರೋಪಿಸಲಾಗಿದೆ. ಕೆಲವು ಬಾರಿ ದೂರು ದಾಖಲಿಸಿಕೊಂಡರೂ ತನಿಖೆಯ ಹೆಸರಿನಲ್ಲಿ ಅನೇಕ ತಿಂಗಳುಗಳು ಕಳೆದಿವೆ. ಅಷ್ಟೇ ಅಲ್ಲದೇ ಪೊಲೀಸರೇ ಸಂತ್ರಸ್ತೆಗೆ ರಾಜಿ ಮಾಡಿಕೊಳ್ಳುವಂತೆ ಸಲಹೆ ಕೂಡ ನೀಡಿದ್ದರು ಎನ್ನಲಾಗಿದೆ.

    ಕೆಲವು ದಿನಗಳ ನಂತರ ಮನೆಗೆ ಪೊಲೀಸರು ಬಂದಾಗ ಆಕೆಯ ಪೋಷಕರು ಮತ್ತು ಚಿಕ್ಕಮ್ಮ ಮಾಂತ್ರಿಕನ ಜೊತೆ ಯುವತಿಯನ್ನ ಕೋಣೆಯಲ್ಲಿ ಲಾಕ್ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಿಸಿದಾಗ ಇದು ಶುದ್ಧೀಕರಣಕ್ಕಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

     

  • ಓದೋ ವಯಸ್ಸಲ್ಲಿ ವೈರಾಗ್ಯ- ಸನ್ಯಾಸಿನಿಯಾದ ಎಂಜಿನಿಯರಿಂಗ್ ವಿದ್ಯಾರ್ಥಿನಿ

    ಓದೋ ವಯಸ್ಸಲ್ಲಿ ವೈರಾಗ್ಯ- ಸನ್ಯಾಸಿನಿಯಾದ ಎಂಜಿನಿಯರಿಂಗ್ ವಿದ್ಯಾರ್ಥಿನಿ

    ಕಲಬುರಗಿ: ಧರ್ಮಕ್ಕಾಗಿ ಒಂದೆಡೆ ಕಚ್ಚಾಟ ನಡೆಯುತ್ತಿದ್ದರೆ ಮತ್ತೊಂದೆಡೆ ಲೋಕಕಲ್ಯಾಣಕ್ಕಾಗಿ ಡಿಪ್ಲೊಮಾ ಸಿವಿಲ್ ವಿದ್ಯಾರ್ಥಿನಿ ವೈರಾಗ್ಯ ತಳೆದು ಸನ್ಯಾಸಿನಿಯಾಗಿದ್ದಾರೆ. ಪ್ರಜ್ಞಾವಂತರಲ್ಲಿ ಇದು ಅಚ್ಚರಿ ತಂದ್ರೆ ಗ್ರಾಮೀಣ ಭಾಗದ ಜನ ಭಕ್ತಿಯ ಪರಾಕಾಷ್ಟೆ ಮೆರೆಯುತ್ತಿದ್ದಾರೆ.

    ಹೌದು. ಕಲಬುರಗಿಯ ಗೌರ ಗ್ರಾಮದ ವಿಠಲ್ ಹಾಗೂ ಸಿದ್ದಮ್ಮ ದಂಪತಿಯ ಪುತ್ರಿ ಭಾಗ್ಯಶ್ರೀ ಡಿಪ್ಲೊಮಾ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡ್ತಿದ್ರು. ಆದ್ರೆ ಇದಕ್ಕಿದ್ದಂತೆ ಈಕೆಗೆ ಆಧ್ಯಾತ್ಮದತ್ತ ಒಲವು ಮೂಡಿದೆ. ಕಳೆದ ವರ್ಷ ಕನಸಿನಲ್ಲಿ ಮುಗಳಖೋಡ ಯಲ್ಲಾಲಿಂಗೇಶ್ವರ ಮಹಾರಾಜರು ದೈವಾನುಗ್ರಹ ನೀಡಿ ಸನ್ಯಾಸಿನಿ ಆಗುವಂತೆ ಹೇಳಿದ್ದಾರಂತೆ. ಹೀಗಾಗಿ ಈಕೆ ವಿದ್ಯಾಭ್ಯಾಸ ಬಿಟ್ಟು ಸನ್ಯಾಸಿನಿಯಾಗಿದ್ದಾರೆ. ಅಂತೆಯೇ ಯಲ್ಲಾಲಿಂಗ ಮಹಾರಾಜರ ಚಿಕ್ಕ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಅನುಷ್ಠಾನಕ್ಕೆ ಕುಳಿತಿದ್ದಾರೆ.

    ಶ್ರಾವಣದ ಆರಂಭದಿಂದ ಅನ್ನ-ನೀರು ಸೇವಿಸದೇ ಮೌನ ವ್ರತಕ್ಕೆ ಕುಳಿತಿರೋ ಈ ಸನ್ಯಾಸಿನಿ 15 ದಿನಗಳ ಬಳಿಕ ಅನುಷ್ಠಾನವನ್ನ ಬಿಡಲಿದ್ದಾರಂತೆ. ಈಗಾಗಲೇ 8 ದಿನ ಈಕೆಯ ಅನುಷ್ಠಾನ ಪೂರೈಸಿದೆ. ಕಳೆದ ಒಂದು ವರ್ಷದಿಂದ ಗ್ರಾಮದ ಜನ ಕೂಡ ಈಕೆಯ ಬಳಿ ಬಂದು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರಂತೆ. ಈ ಬಾಲ ಸನ್ಯಾಸಿನಿಯ ಮುಖದಲ್ಲಿ ಯಲ್ಲಾಲಿಂಗೇಶ್ವರ ಮಹಾರಾಜರ ರೂಪವಿದೆ ಅಂತಾರೆ ಇಲ್ಲಿನ ಜನರು.

    ಒಟ್ಟಿನಲ್ಲಿ ಡಿಪ್ಲೊಮಾ ಸಿವಿಲ್ ವಿದ್ಯಾಭ್ಯಾಸ ಮಾಡಿ ಎಂಜಿನಿಯರ್ ಆಗಬೇಕಾದ ಭಾಗ್ಯಶ್ರೀ ಸದ್ಯ ಸನ್ಯಾಸಿನಿಯಾಗಿದ್ದಾರೆ. ಇದು ಪ್ರಜ್ಞಾವಂತರಿಗೆ ಅಚ್ಚರಿ ಅನ್ನಿಸಿದ್ರೆ ಭಕ್ತಿಯ ಪರಾಕಾಷ್ಟೆಯಲ್ಲಿರೋ ಜನ ಯಲ್ಲಾಲಿಂಗೇಶ್ವರ ಮಹಾರಾಜರ ಕೃಪೆ ಅಂತಾ ಪೂಜಿಸ್ತಿದ್ದಾರೆ. ಸದ್ಯ ಈಕೆಯನ್ನು ಪೂಜಿಸಲು ಭಕ್ತಸಾಗರವೇ ಹರಿದುಬರ್ತಿದೆ.

  • ಲೋಕ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ಲೋಕದ ಹಾದಿ ಹಿಡಿದ ಎಂಜಿನಿಯರ್!

    ಲೋಕ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ಲೋಕದ ಹಾದಿ ಹಿಡಿದ ಎಂಜಿನಿಯರ್!

    ಯಾದಗಿರಿ: ಅವರೊಬ್ಬ ಎಲೆಕ್ಟ್ರಿಕಲ್ ಎಂಜಿನಿಯರ್. ಆದ್ರೆ ಇದೀಗ ತನ್ನ ವೃತ್ತಿಯನ್ನು ಬಿಟ್ಟು ಲೋಕ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ಲೋಕದ ಹಾದಿ ಹಿಡಿದಿದ್ದಾರೆ. ತನ್ನ ಮನೆ ಮಠ ಮತ್ತು ಸಂಸಾರದ ಜಂಜಾಟ ತೊರೆದು ಈಗ ಉತ್ತಮ ಮಳೆ ಹಾಗೂ ಸಮೃದ್ಧಿ ಬೆಳೆಗಾಗಿ ನಾಡಿನ ಒಳಿತಿಗಾಗಿ ಅನುಷ್ಠಾನ ಕೈಗೊಂಡಿದ್ದಾರೆ.

    ಹೌದು. ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಬಾದ್ಯಾಪೂರ ಗ್ರಾಮದ ಶ್ರೀ ಸಿದ್ದ ಯಲ್ಲಾಲಿಂಗಮಠದ ಪೀಠಾಧಿಪತಿಯಾದಂತಹ ಸಚ್ಚಿದಾನಂದ ಸ್ವಾಮೀಜಿ ಅವರು ಕಳೆದ 3 ತಿಂಗಳಿನಿಂದ ಮಠದ ಗುಹೆಯೊಳಗೆ ಅನುಷ್ಠಾನಕ್ಕೆ ಕುಳಿತಿದ್ದಾರೆ. ಈ ಹಿಂದೆ ಕೂಡಾ ಬಹಳಷ್ಟು ಸ್ಥಳಗಳಲ್ಲಿ ಅನುಷ್ಠಾನ ಮಾಡುವ ಮೂಲಕ ತಮ್ಮ ಪವಾಡದಿಂದ ಭಕ್ತರ ಕಷ್ಟಗಳನ್ನ ದೂರ ಮಾಡಿದ್ದಾರೆ ಅಂತಾ ಭಕ್ತರು ಸ್ವಾಮೀಜಿಯ ಬಗ್ಗೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಅನುಷ್ಠಾನದಿಂದ ಹೊರಬಂದ ಈ ಸ್ವಾಮಿಯ ದರ್ಶನಕ್ಕೆ ಭಕ್ತಾದಿಗಳೆಲ್ಲಾ ಆಗಮಿಸಿದ್ದಾರೆ.

    ಈ ಸ್ವಾಮೀಜಿ ಯಾದಗಿರಿ ತಾಲ್ಲೂಕಿನ ಎಲೆರಿ ಗ್ರಾಮದ ನೀವಾಸಿಯಾಗಿದ್ದು, ತಮ್ಮ ಶಿಕ್ಷಣವನ್ನ ರಾಯಚೂರು ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ವಿಭಾಗದ ಪದವಿ ಪಡೆದು ಜಮಖಂಡಿ ಬಳಿ ಇರುವ ಸಕ್ಕರೆ ಕಾರ್ಖಾನೆಯಲ್ಲಿ ಎಂಜಿನಿಯರಾಗಿ ಕಾರ್ಯನಿರ್ವಹಿಸಿದ್ದರು. ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿರುವ ಇವರು 10 ವರ್ಷಗಳ ಹಿಂದೆ ಸಂಸಾರದ ಜಂಜಾಟವನ್ನು ತೊರೆದು ಲೋಕ ಕಲ್ಯಾಣಕ್ಕಾಗಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.

    ಬಳಿಕ ಇವರು ತಿಂಥಣಿ ಕೊಂಡಯ್ಯಪ್ಪಮಠ ಮತ್ತು ಎಲ್ಹೇರಿ ಮತ್ತು ಬಾದ್ಯಪೂರ ಗ್ರಾಮದ ಗಳಲ್ಲಿ ಅನುಷ್ಠಾನ ಮಾಡುವ ಮೂಲಕ ಪ್ರಸಿದ್ಧಿಯಾಗಿದ್ದರು. ಇದೀಗ ಮತ್ತೊಮ್ಮೆ ನಾಡಿನ ಒಳಿತಿಗಾಗಿ 225 ದಿನಗಳ ಕಾಲ ತಪಸ್ಸು ಮಾಡುವ ಮೂಲಕ ನಾಡಿನಲ್ಲಿ ಉತ್ತಮ ಮಳೆ ಮತ್ತು ಸಮೃದ್ಧಿ ಬೆಳೆಗಾಗಿ ರೈತರ ಮತ್ತು ಭಕ್ತರ ಸಂಕಷ್ಟ ದೂರವಾಗಲೆಂದು ಈ ಅನುಷ್ಠಾನ ಕೈಗೊಂಡಿದ್ದಾರೆ ಎಂಬುವುದು ಭಕ್ತರ ಹೇಳಿಕೆಯಾಗಿದೆ.