Tag: ಸಚಿವ ರೇವಣ್ಣ

  • ಕೋಲಾರ, ಚಿಕ್ಕಬಳ್ಳಾಪುರದ ಹಾಲು ಉತ್ಪಾದಕರಿಗೆ ರೇವಣ್ಣ ಶಾಕ್!

    ಕೋಲಾರ, ಚಿಕ್ಕಬಳ್ಳಾಪುರದ ಹಾಲು ಉತ್ಪಾದಕರಿಗೆ ರೇವಣ್ಣ ಶಾಕ್!

    ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ದಿಂದ ಸರಬರಾಜು ಆಗುತ್ತಿದ್ದ ಗುಡ್‍ಲೈಫ್ ಹಾಲನ್ನು ಖಡಿತಗೊಳಿಸುವ ನಿರ್ಧಾರವನ್ನು ಸಚಿವ ರೇವಣ್ಣ ಅವರು ನೀಡಿದ್ದಾರೆ ಎನ್ನಲಾಗಿದ್ದು, ಈ ನಿರ್ಧಾರವನ್ನು ಖಂಡಿಸಿ ಕೋಲಾರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

    ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತರಾಗುತ್ತಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಸೈನ್ಯಕ್ಕೆ ಕಳುಹಿಸಿಕೊಡುತ್ತಿದ್ದ ಕೋಚಿಮುಲ್ ಹಾಲಿನಲ್ಲಿ ಹಾಸನಕ್ಕೆ ಅರ್ಧದಷ್ಟು ಪಾಲು ನೀಡಲು ಮುಂದಾಗಿದ್ದು, ಅವರ ನಿಲುವನ್ನು ಬದಲಿಸುವಂತೆ ಕೋಲಾರ ನಗರದ ಜೂನಿಯರ್ ಕಾಲೇಜು ವೃತ್ತದಲ್ಲಿ ಪ್ರತಿಕೃತಿ ದಹಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

    ಕಳೆದ ಏಳೆಂಟು ವರ್ಷಗಳಿಂದ ಕೋಲಾರ ಹಾಲು ಒಕ್ಕೂಟದಲ್ಲಿ ತಯಾರಾಗುವ, ಟೆಟ್ರಾ ಪ್ಯಾಕ್‍ನ ಗುಡ್ ಲೈಫ್ (ಯು.ಹೆಚ್.ಟಿ) ಹಾಲನ್ನು ದೇಶ ಕಾಯುವ ಯೋಧರು, ತಿರುಪತಿ ಸೇರಿದಂತೆ ವಿವಿಧೆಡೆ ಪ್ರತಿ ವರ್ಷಕ್ಕೆ 80 ಲಕ್ಷ ಲೀಟರ್ ಹಾಲು ಕಳಿಸಿಕೊಡಲಾಗುತ್ತಿತ್ತು. ಆದರೆ ಸಚಿವ ರೇವಣ್ಣ ಅವರ ಕೈವಾಡದಿಂದಾಗಿ ಸುಮಾರು 40 ಲಕ್ಷ ಲೀಟರ್ ಹಾಲನ್ನ ಕಡಿತಗೊಳಿಸಿರುವುದರಿಂದ, ಈಗಾಗಲೇ ನಷ್ಟದಲ್ಲಿರುವ ಕೋಚಿಮಲ್‍ಗೆ ಹಾಗೂ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

    ಯಾವುದೇ ಶಾಶ್ವತ ನೀರಾವರಿ ಆಧಾರವಿಲ್ಲದಿದ್ದರೂ ಹೈನೋದ್ಯಮವನ್ನೇ ನಂಬಿ ಬದುಕುತ್ತಿರುವ ಅವಳಿ ಜಿಲ್ಲೆಯ ರೈತರಿಗೆ ನಷ್ಟವಾಗುವ ಆತಂಕ ಎದುರಾಗಿದ್ದು, ಹಾಸನಕ್ಕೆ ಪಾಲು ಕೇಳಿರುವ ಸಚಿವರ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

    ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಸರಬರಾಜು ಮಾಡಲಾಗುತ್ತಿದ್ದ 40 ಲಕ್ಷ ಲೀಟರ್ ಹಾಲನ್ನು ಖಡಿತ ಮಾಡಲು ಮುಂದಾಗಿರುವ ಸಚಿವ ರೇವಣ್ಣ ಅವರು, ತಮ್ಮ ನಿರ್ಧಾರವನ್ನು ಈ ಕೂಡಲೇ ವಾಪಸ್ ಪಡೆಯಬೇಕು, ಇಲ್ಲವಾದಲ್ಲಿ ಜಿಲ್ಲೆಲ್ಲಿ ಬಂದ್ ಮಾಡಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

     

  • ಡಿಕೆಶಿ ವಿಚಾರವಾಗಿ ಹೇಗೆ ನಡೆದುಕೊಳ್ಳಬೇಕು – ಎಚ್‍ಡಿಕೆ, ರೇವಣ್ಣಗೆ ದೇವೇಗೌಡರ ಕ್ಲಾಸ್!

    ಡಿಕೆಶಿ ವಿಚಾರವಾಗಿ ಹೇಗೆ ನಡೆದುಕೊಳ್ಳಬೇಕು – ಎಚ್‍ಡಿಕೆ, ರೇವಣ್ಣಗೆ ದೇವೇಗೌಡರ ಕ್ಲಾಸ್!

    ಸಾಂದರ್ಭಿಕ ಚಿತ್ರ

    ಬೆಂಗಳೂರು: ಹವಾಲ ವ್ಯವಹಾರದಲ್ಲಿ ಜಲಸಂಪ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಅವರ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಈ ಕುರಿತು ಹೇಗೆ ನಡೆದುಕೊಳ್ಳಬೇಕು ಎಂದು ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಎಚ್‍ಡಿ ರೇವಣ್ಣ ಅವರಿಗೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಎಚ್ಚರಿಕೆ ಹೆಜ್ಜೆ ಇಡುವಂತೆ ಸಲಹೆ ನೀಡಿದ್ದಾರೆ.

    ಸದ್ಯ ಐಟಿ ದಾಳಿ ವಿಚಾರ ಅತ್ಯಂತ ಸೂಕ್ಷ್ಮ ಹಾಗೂ ಕಾನೂನಾತ್ಮಕ ವಿಚಾರವಾಗಿದ್ದು, ಈ ವಿಚಾರದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಸದ್ಯದ ಸನ್ನಿವೇಶದಲ್ಲಿ ಡಿಕೆಶಿ ಅವರಿಗೆ ನೈತಿಕ ಬೆಂಬಲ ನೀಡಿ ಎಂದು ಎಚ್‍ಡಿ ದೇವೇಗೌಡ ಅವರು ಹೇಳಿದ್ದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನು ಓದಿ: ಐಟಿ ಅಧಿಕಾರಿಗಳ ನಿಜ ಬಣ್ಣ ಕೆಲವೇ ದಿನಗಳಲ್ಲಿ ಗೊತ್ತಾಗುತ್ತೆ: ಡಿ.ಕೆ.ಸುರೇಶ್

    ರಾಜ್ಯದಲ್ಲಿರುವ ಮೈತ್ರಿ ಸರ್ಕಾರದಲ್ಲಿ ಹೆಚ್ಚಿನ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಹಾಗೂ ಜನತೆಗೆ ತಮ್ಮ ಸಮುದಾಯದ ವಿರುದ್ಧ ಮೆಚ್ಚುಗೆ ಉಂಟಾಗುವಂತೆ ಮಾಡಲು ಡಿಕೆಶಿ ಅವರ ವಿಚಾರವಾಗಿ ಹೆಚ್ಚು ಮಾತನಾಡದಿರಲು ಸಲಹೆ ನೀಡಿದ್ದಾರೆ. ಅಲ್ಲದೇ ಸಂಪೂರ್ಣವಾಗಿ ಸುಮ್ಮನಿರಲು ಸೂಚಿಸಿರುವ ಅವರು, ಕಾನೂನು ಹೋರಾಟ ಮಾಡಿಕೊಳ್ಳುತ್ತಾರೆ. ಆದರೆ ಸರ್ಕಾರದ ಬೆಂಬಲ ಡಿಕೆಶಿ ಅವರಿಗೆ ಇರುತ್ತದೆ ಎಂದು ಹೇಳಲು ಸಲಹೆ ನೀಡಿದ್ದಾರೆ. ಇದನ್ನು ಓದಿ: ಹವಾಲ ವ್ಯವಹಾರದಲ್ಲಿ ಡಿಕೆ ಶಿವಕುಮಾರ್ ಭಾಗಿ? 

    ದೇವೇಗೌಡ ಸಲಹೆ ಪಡೆದು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಡಿಕೆ ಶಿವಕುಮಾರ್ ನಮ್ಮ ಸಂಪುಟದಲ್ಲಿ ಸಚಿವರು. ಅವರಿಗೆ ಕಾನೂನಾತ್ಮಕ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. ಬಿಜೆಪಿ ಹೇಳಿದರೆ ರಾಜೀನಾಮೆ ನೀಡಬೇಕಾ? ಏಕೆ ರಾಜೀನಾಮೆ ನೀಡಬೇಕು? ಇಲ್ಲಿ ರಾಜೀನಾಮೆಯ ಅವಶ್ಯಕತೆ ಇಲ್ಲ. ಬಿಜೆಪಿ ನಾಯಕರ ಮೇಲೆ ಎಷ್ಟು ಆರೋಪಗಳಿವೆ, ಅವರ ವಿರುದ್ಧ ಆರೋಪ ಕೇಳಿಬಂದ ವೇಳೆ ರಾಜೀನಾಮೆ ನೀಡಿದ್ದರಾ ಎಂದು ಸಚಿವ ಡಿಕೆಶಿ ಪರವಾಗಿ ಎಚ್‍ಡಿಕೆ ಬ್ಯಾಟ್ ಬೀಸಿದ್ದಾರೆ. ಇದನ್ನು ಓದಿ: ರಾಜೀನಾಮೆ ನೀಡುವ ಅಗತ್ಯವಿಲ್ಲ: ಡಿಕೆಶಿ ಪರ ಸಿಎಂ ಎಚ್‍ಡಿಕೆ ಬ್ಯಾಟಿಂಗ್