Tag: ಸಚಿವ ಪ್ರಭು ಚೌಹಾಣ್

  • ಪ್ರತಿ ಮನೆಯಲ್ಲಿ ಗೋವು ಪಾಲನೆಯಾಗಲಿ: ಪ್ರಭು ಚವ್ಹಾಣ್

    ಪ್ರತಿ ಮನೆಯಲ್ಲಿ ಗೋವು ಪಾಲನೆಯಾಗಲಿ: ಪ್ರಭು ಚವ್ಹಾಣ್

    ಬೀದರ್: ನಮ್ಮ ಪರಂಪರೆಯಲ್ಲಿ ತಾಯಿಯ ಸ್ಥಾನಮಾನ ಹೊಂದಿರುವ ಗೋವನ್ನು ಪ್ರತಿ ಮನೆಯಲ್ಲಿಯೂ ಪಾಲನೆ ಮಾಡಬೇಕೆನ್ನುವ ಸದಾಶಯ ಹೊಂದಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.

    ಔರಾದ್ ತಾಲೂಕಿನ ಬೋಂತಿ ತಾಂಡಾದಲ್ಲಿ ಜುಲೈ 6ರಂದು ಕೋವಿಡ್ ಲಸಿಕಾಕರಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗೋವು ಅತ್ಯಂತ ಪೂಜ್ಯನೀಯ ಪ್ರಾಣಿಯಾಗಿದೆ. ಹಾಲು, ಗೋಮೂತ್ರ ಹಾಗೂ ಸಗಣಿ ಹೀಗೆ ಗೋವಿನ ಪ್ರತಿ ಉತ್ಪನ್ನವೂ ಉಪಯೋಗಕ್ಕೆ ಬರುತ್ತದೆ. ಇವುಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಿ ಗೋಪಾಲನೆಯನ್ನು ಇನ್ನಷ್ಟು ಲಾಭದಾಯಕ ಕೆಲಸವನ್ನಾಗಿ ಮಾಡುವ ಪ್ರಯತ್ನಗಳು ನಡೆದಿವೆ. ಯೋಗ ಗುರು ಬಾಬಾ ರಾಮ್‍ದೇವ್ ಅವರೊಂದಿಗೆ ಮಾತುಕತೆಯೂ ನಡೆದಿದೆ ಎಂದರು.

    ಪಶು ಸಂಗೋಪನೆ ಇಲಾಖೆಯನ್ನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿದ್ದೇನೆ. ಧರ್ಮ ಗುರು ಸಂತ ಸೇವಾಲಾಲ ಮಹಾರಾಜರ ಆಶಯದಂತೆ ಗೋವುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಹಿಂದೆ ಎಲ್ಲರೂ ತಾತ್ಸಾರದಿಂದ ನೋಡುತ್ತಿದ್ದ ಪಶು ಸಂಗೋಪನೆ ಇಲಾಖೆಯನ್ನು ಸಚಿವನಾದ ನಂತರ ಎಲ್ಲರೂ ಕಣ್ಣೆತ್ತಿ ನೋಡುವಂತೆ ಬದಲಾವಣೆ ತರಲಾಗಿದೆ ಎಂದರು.

  • ಪಶು ವಿವಿಯಲ್ಲಿ ಕಿಂಗ್ ಫಿಶರ್ ಬಿಯರ್ ಬಾಕ್ಸ್ – ವಿಸಿಗೆ ಸಚಿವರಿಂದ ತರಾಟೆ

    ಪಶು ವಿವಿಯಲ್ಲಿ ಕಿಂಗ್ ಫಿಶರ್ ಬಿಯರ್ ಬಾಕ್ಸ್ – ವಿಸಿಗೆ ಸಚಿವರಿಂದ ತರಾಟೆ

    – ನೀವಿಲ್ಲಿ ಪಾಠ ಮಾಡ್ತಿರೋ ಅಥವಾ ಪಾರ್ಟಿ ಮಾಡ್ತಿರೋ

    ಬೀದರ್: ಪಶು ವೈದ್ಯಕೀಯ, ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದಲ್ಲಿ ಕಿಂಗ್ ಫಿಶರ್ ಬಿಯರ್ ನ  ಖಾಲಿ ಬಾಕ್ಸ್ ಗಳು ಪತ್ತೆಯಾಗಿವೆ. ಇದನ್ನು ಕಂಡು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಕೆಂಡಾಮಂಡಲರಾಗಿದ್ದು, ಉಪಕುಲಪತಿ ನಾರಾಯಣ ಸ್ವಾಮಿಯ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.

    ಕಮಠಾಣಾ ಬಳಿಯ ಪಶು ವೈದ್ಯಕೀಯ, ಮೀನುಗಾರಿಕೆ ವಿಜ್ಞಾನಿಗಳ ವಿವಿಗೆ ಸಚಿವರು ದಿಢೀರ್ ಭೇಟಿ ನೀಡಿದ್ದ ವೇಳೆ ಕಿಂಗ್ ಫಿಶರ್ ಖಾಲಿ ಕಾಟನ್ ಬಾಕ್ಸ್ ಪತ್ತೆಯಾಗಿವೆ. ಈ ವೇಳೆ ಕಾಲೇಜು ಒಳಗಡೆ ಕಿಂಗ್ ಫಿಶರ್ ಬಾಕ್ಸ್ ಬಂದಿದ್ದು ಹೇಗೆ? ನೀವು ಪಾರ್ಟಿ ಮಾಡ್ತಿರಾ ಎಂದು ಉಪಕುಲಪತಿಯವರನ್ನು ಪ್ರಶ್ನಿಸಿದ್ದಾರೆ.

    ಪಶು ವಿವಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದು, ಕಿಂಗ್ ಫಿಶರ್ ಕಾಟನ್ ಬಾಕ್ಸ್ ಗಳನ್ನು ನೋಡಿ ಉಪಕುಲಪತಿ ನಾರಾಯಣ ಸ್ವಾಮಿಯವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ವಿಸಿ ಬೇರೆ ವಸ್ತುಗಳನ್ನು ಪ್ಯಾಕ್ ಮಾಡುವಾಗ ಇಂತಹ ಬಾಕ್ಸ್‍ಗಳಲ್ಲೇ ಪ್ಯಾಕ್ ಮಾಡುತ್ತಾರೆ ಎಂದು ಉತ್ತರಿಸಿದ್ದಾರೆ.

    ಇಷ್ಟಕ್ಕೇ ಸುಮ್ಮನಾಗದ ಸಚಿವರು, ಕಾಲೇಜಿನಲ್ಲಿ ಕಿಂಗ್ ಫಿಶರ್ ಬಾಟಲ್ ಬಾಕ್ಸ್ ಬಂದಿದ್ದು ಹೇಗೆ ಎಂದು ಫುಲ್ ಗರಂ ಆಗಿದ್ದಾರೆ. ನೋಡಿ ಇದರ ಮೇಲೆ ಕಿಂಗ್ ಫಿಶರ್ ಮೈಲ್ಡ್ ಬಿಯರ್ ಎಂದು ಬರೆದಿದೆ. ನೀವು ಇಲ್ಲಿ ಪಾಠ ಮಾಡುತ್ತೀರೋ ಅಥವಾ ಪಾರ್ಟಿ ಮಾಡುತ್ತಿರೋ ಎಂದು ಪ್ರಶ್ನಿಸಿ ಕೆಂಡಾಮಂಡಲರಾಗಿದ್ದಾರೆ.