Tag: ಸಚಿವರು

  • ವಲಯಗಳಲ್ಲಿ ಹಂಚಿಹೋದ ಬಜೆಟ್ – ಸಚಿವರು ಕನ್ಫ್ಯೂಷನ್

    ವಲಯಗಳಲ್ಲಿ ಹಂಚಿಹೋದ ಬಜೆಟ್ – ಸಚಿವರು ಕನ್ಫ್ಯೂಷನ್

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಂಡಿಸಿರುವ 2020-21ನೇ ಸಾಲಿನ ರಾಜ್ಯ ಮುಂಗಡಪತ್ರ ಹಿಂದಿನ ಮುಂಗಡಪತ್ರಗಳಿಗಿಂತ ವಿಭಿನ್ನವಾಗಿದೆ. ಇದೇ ಮೊದಲ ಬಾರಿಗೆ ಸಿಎಂ ಯಡಿಯೂರಪ್ಪ ಬಜೆಟ್ ಸಂಪ್ರದಾಯದ ಚೌಕಟ್ಟು ದಾಟಿದ್ದಾರೆ.

    ರಾಜ್ಯದ ಬಜೆಟ್ ಇತಿಹಾಸದಲ್ಲಿ ಹೊಸ ಸಂಪ್ರದಾಯ ಆರಂಭಿಸಿರುವ ಸಿಎಂ ಯಡಿಯೂರಪ್ಪ, ಇದುವರೆಗೆ ಯಾರೂ ರೂಪಿಸದ ರೀತಿಯಲ್ಲಿ ಬಜೆಟ್ ಮಂಡಿಸಿದ್ದಾರೆ. ಈ ಸಲ ಇಲಾಖಾವಾರು ಬಜೆಟ್ ಮಂಡನೆಗೆ ಬ್ರೇಕ್ ಹಾಕಿದ ಬಿಎಸ್‍ವೈ, ಇಲಾಖಾವಾರು ಬದಲು ವಯಲವಾರು ವಿಂಗಡಿಸಿ ಬಜೆಟ್ ಮಂಡನೆ ಮಾಡಿದ್ದಾರೆ. ಆರು ವಲಯದಲ್ಲಿ 34 ಇಲಾಖೆಗಳನ್ನು ಹಂಚಿಕೆ ಮಾಡುವ ಮೂಲಕ ಅನುದಾನ ಘೋಷಿಸಲಾಗಿದೆ.

    ಲಭ್ಯ ಆರ್ಥಿಕ ಇತಿಮಿತಿಯಲ್ಲೇ ಸಿಎಂ ಯಡಿಯೂರಪ್ಪ ಈ ಬಾರಿ ಬಜೆಟ್ ಕೊಟ್ಟಿದ್ದಾರೆ. ಬಜೆಟ್‍ನಲ್ಲಿ ಸರ್ಕಾರದ ಇಲಾಖೆಗಳನ್ನು ವಲಯವಾರು ಹಂಚಿರೋದು ವಿಭಿನ್ನ ಪ್ರಯೋಗವೇನೋ ಸರಿ. ಆದರೆ ಸಂಪುಟ ಸಚಿವರಿಗೆ ಇದೇ ಒಂದು ದೊಡ್ಡ ಗೊಂದಲ ಸೃಷ್ಟಿಸಿದೆ ಎಂದು ತಿಳಿದು ಬಂದಿದೆ. ಯಾವ ಇಲಾಖೆ, ಯಾವ ವಲಯದಲ್ಲಿ ಸೇರಿದೆ ಅನ್ನೋದೇ ಸಚಿವರಿಗೆ ಕನ್ಫ್ಯೂಷನ್ ಹುಟ್ಟಿಸಿದೆ ಎನ್ನಲಾಗಿದೆ.

    ಇದೀಗ ಸಚಿವರು ತಮ್ಮ ಗೊಂದಲ ಬಗೆಹರಿಸಿಕೊಳ್ಳಲು ತಮ್ಮ ತಮ್ಮ ಇಲಾಖೆಗಳ ಹಿರಿಯ ಅಧಿಕಾರಿಗಳ ಮೊರೆ ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವರು ಬಜೆಟ್ ಅರ್ಥವಾಗದೇ ತಮ್ಮ ತಮ್ಮಲ್ಲೇ ಒಳ ಚರ್ಚೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಚಿವರು ಬಜೆಟ್ ಹೇಗಿದೆ ಅಂತ ಬಹಿರಂಗವಾಗಿ ಅಭಿಪ್ರಾಯ ಹೇಳಿಕೊಳ್ಳುವುದಕ್ಕೂ ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.

    ಮೇಲ್ನೋಟಕ್ಕೆ ಕೆಲವು ಪ್ರಮುಖ ವಿಷಯಗಳು ಮಾತ್ರ ಬಜೆಟ್‍ನಲ್ಲಿ ಗೋಚರವಾಗಿದೆ. ಉಳಿದಂತೆ ಬಜೆಟ್‍ನಲ್ಲಿ ಇಲಾಖಾವಾರು ಏನೇನು ಸಿಕ್ಕಿದೆ ಅನ್ನೋದೇ ಸಚಿವರಿಗೆ ಅರ್ಥವಾಗಿಲ್ಲವಂತೆ. ಸಿಎಂ ಮಂಡಿಸಿದ ಬಜೆಟ್‍ನ ತಲೆಬುಡ ಅರ್ಥ ಮಾಡಿಕೊಳ್ಳಲು ತಿಣುಕಾಡುತ್ತಿರುವ ಸಚಿವರು ಅಧಿಕಾರಿಗಳ ಮೊರೆ ಹೋಗುತ್ತಿದ್ದಾರಂತೆ. ತಮ್ಮ ತಮ್ಮ ಇಲಾಖೆಗಳ ಅಧಿಕಾರಿಗಳಿಂದ ಸಚಿವರು ಬಜೆಟ್ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳುತ್ತಿದ್ದಾರಂತೆ. ತಮ್ಮ ತಮ್ಮ ಇಲಾಖೆಗಳಿಗೆ ಏನೇನು ಸಿಕ್ಕಿದೆ, ಹಳೆಯ ಅನುದಾನ ಎಷ್ಟು, ಹೊಸ ಅನುದಾನ ಎಷ್ಟು ಅನ್ನೋ ಮಾಹಿತಿಗೆ ಅಧಿಕಾರಿಗಳ ಬಳಿ ಸಚಿವರು ಹೋಗುತ್ತಿದ್ದಾರೆ. ಈ ಕಸರತ್ತಿನಲ್ಲಿ ಸಚಿವರು ಎಷ್ಟರ ಮಟ್ಟಿಗೆ ಸಕ್ಸಸ್ ಆಗ್ತಾರೋ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಸಚಿವರ ಪಾಡು ಈಗ, ಮೊದಲು ಬಜೆಟ್ ಅರ್ಥ ಮಾಡಿಕೊಳ್ಳುವುದು, ಉಳಿದದ್ದು ನಂತರ ಅನ್ನುವಂತಾಗಿದೆ ಎನ್ನಲಾಗಿದೆ.

    ರಾಜ್ಯ ಬಜೆಟ್‍ನ ವಲಯವಾರು ವಿಂಗಡಣೆ ಹೀಗಿದೆ:
    1) ಕೃಷಿ ಮತ್ತು ಪೂರಕ ಚಟುವಟಿಕೆಗಳು
    2) ಸರ್ವೋದಯ ಮತ್ತು ಕ್ಷೇಮಾಭಿವೃದ್ದಿ
    3) ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ
    4) ಬೆಂಗಳೂರು ಸಮಗ್ರ ಅಭಿವೃದ್ಧಿ
    5) ಸಂಸ್ಕೃತಿ ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ
    6) ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು

  • ನಾಲ್ಕು ದಿನದ ಜಂಟಿ ಅಧಿವೇಶನಕ್ಕೂ ಸಚಿವರು, ಶಾಸಕರು ಗೈರು- ಪ್ರತಿಪಕ್ಷ ಆಕ್ರೋಶ

    ನಾಲ್ಕು ದಿನದ ಜಂಟಿ ಅಧಿವೇಶನಕ್ಕೂ ಸಚಿವರು, ಶಾಸಕರು ಗೈರು- ಪ್ರತಿಪಕ್ಷ ಆಕ್ರೋಶ

    ಬೆಂಗಳೂರು: ಕೇವಲ ನಾಲ್ಕು ದಿನಗಳಷ್ಟೇ ನಡೆಯುವ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಸಚಿವರು ಮತ್ತು ಶಾಸಕರ ಗೈರು ಎದ್ದು ಕಾಣುತ್ತಿದೆ. ಶಾಸಕರು ಹಾಗೂ ಸಚಿವರ ಗೈರು ಹಾಜರಿ ಮೂರನೇ ದಿನವಾದ ಇವತ್ತು ವಿಧಾನಸಭೆ ಕಲಾಪದಲ್ಲೂ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಇವತ್ತು ಕಲಾಪ ಆರಂಭವಾಗುತ್ತಿದ್ದಂತೆಯೇ ಸಚಿವರ ಗೈರು ಹಾಜರಿ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

    ಇಂದು ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಬೆರಳೆಣಿಕೆಯಷ್ಟು ಸಚಿವರು, ಶಾಸಕರು ಕಲಾಪದಲ್ಲಿ ಹಾಜರಿದ್ದರು. ಕಾಂಗ್ರೆಸ್ ಶಾಸಕರಾದ ಪಿ.ಟಿ.ಪರಮೇಶ್ವರ್ ನಾಯಕ್ ಮತ್ತು ಜಮೀರ್ ಅಹಮದ್ ಖಾನ್ ಮೊದಲಿಗೆ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ನಿಯಮ 69ರಡಿ ಕಾನೂನು ಮತ್ತು ಸುವ್ಯವಸ್ಥೆ ಮೇಲಿನ ಚರ್ಚೆ ಆರಂಭಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಸದನದಲ್ಲಿ ಸಚಿವರಿಲ್ಲ. ನಾನು ಯಾರ ಮುಂದೆ ಭಾಷಣ ಮಾಡಲಿ ಅಂತ ಬೇಸರ ವ್ಯಕ್ತಪಡಿಸಿದರು. ಸಚಿವರು ಗೈರಾಗುವುದು ಎಲ್ಲ ಸರ್ಕಾರಗಳಲ್ಲೂ ರೋಗದಂತೆ ಅಂಟಿಕೊಂಡಿರುತ್ತದೆ. ಈ ಸರ್ಕಾರದ ಸಚಿವರಿಗೂ ಆ ರೋಗ ಅಂಟಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಆ ವೇಳೆ ಸದನದಲ್ಲಿ ಸಚಿವರಾದ ಸುಧಾಕರ್ ಮತ್ತು ಸಿ.ಟಿ.ರವಿ ಮಾತ್ರ ಹಾಜರಾಗಿದ್ದರು.

    ಮಾತು ಮುಂದುವರಿಸಿದ ಸಿದ್ದರಾಮಯ್ಯನವರು, ಎರಡು ದಿನದಲ್ಲೇ ಸಚಿವರು ಆಸಕ್ತಿ ಕಳೆದುಕೊಂಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಹೇಗೆಂದು ಪ್ರಶ್ನಿಸಿದರು. ಆಗ ಮಧ್ಯ ಪ್ರವೇಶಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ನೂತನ ಸಚಿವರು ತಮ್ಮ ಕಚೇರಿಗಳಿಗೆ ಪೂಜೆ ಮಾಡುತ್ತಿದ್ದಾರೆ. ನೀವು ಮಾತು ಶುರು ಮಾಡಿ, ಎಲ್ಲಾ ಸಚಿವರು ಬರುತ್ತಾರೆ ಎಂದು ಸಮರ್ಥನೆಗೆ ಮುಂದಾದರು. ಹಾಗಿದ್ರೆ ಪೂಜೆ ಮುಗಿದ ಬಳಿಕವೇ ಅಧಿವೇಶನ ಕರೆಯಬೇಕಿತ್ತು ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.

    ಅಧಿವೇಶನದಲ್ಲಿ ಶಾಸಕರು, ಸಚಿವರು ಇಲ್ಲದಿದ್ದ ಮೇಲೆ ಚರ್ಚೆ ಮಾಡಿ ಏನು ಪ್ರಯೋಜನ. ನಾವೆಲ್ಲ ಸೇರಿ ಪ್ರಜಾಪ್ರಭುತ್ವವನ್ನು ಯಶಸ್ವಿ ಮಾಡಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು. ಅದಕ್ಕೆ ಸಹಮತ ವ್ಯಕ್ತಪಡಿಸಿದ ಸ್ಪೀಕರ್, ಇದು ಎಲ್ಲಾ ಕಾಲದಲ್ಲೂ ನಿರಂತರವಾಗಿ ಕಂಡು ಬರುವ ಸಮಸ್ಯೆ. ಸದನಕ್ಕೆ ಸಚಿವರು ಶಾಸಕರು ಹಾಜರಾಗಲೇಬೇಕು. ಇದು ಸಚಿವರ ಜವಾಬ್ದಾರಿ ಕೂಡ. ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸ್ಪೀಕರ್ ಕಾಗೇರಿ ಸಲಹೆ ನೀಡಿದರು. ಅಷ್ಟರಲ್ಲಿ ಸದನದೊಳಗೆ ಬಂದ ಸಚಿವ ಬಸವರಾಜ ಬೊಮ್ಮಾಯಿ, ತಡವಾಗಿ ಬಂದಿದ್ದಕ್ಕೆ ಬೇಷರತ್ ಕ್ಷಮೆ ಕೇಳಿದರು. ಅಲ್ಲಿಗೆ ಸಮಾಧಾನಗೊಂಡ ಸಿದ್ದರಾಮಯ್ಯ ಚರ್ಚೆ ಮುಂದುವರೆಸಿದರು.

    ಈ ಮಧ್ಯೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಶಾಸಕರಾದ ರಾಮದಾಸ್ ಮತ್ತು ಎಂ.ಸಿ.ಮನಗೂಳಿ ಅವರು ಕಲಾಪಕ್ಕೆ ಗೈರು ಹಾಜರಾಗಲು ಅನುಮತಿ ಕೇಳಿರುವ ಪತ್ರಗಳನ್ನು ಸದನದ ಗಮನಕ್ಕೆ ತಂದು ಅವರ ಗೈರು ಹಾಜರಾತಿಗೆ ಸದನದ ಸಮ್ಮತಿ ಇದೆ ಎಂದು ಪ್ರಕಟಿಸಿದರು.

  • 109 ಅಡಿ ಎತ್ತರದ ಬಸವೇಶ್ವರ ಮೂರ್ತಿ ಸ್ಥಾಪನೆ – ಫೆ. 22ರಂದು ಸಿಎಂ ಅಡಿಗಲ್ಲು

    109 ಅಡಿ ಎತ್ತರದ ಬಸವೇಶ್ವರ ಮೂರ್ತಿ ಸ್ಥಾಪನೆ – ಫೆ. 22ರಂದು ಸಿಎಂ ಅಡಿಗಲ್ಲು

    ಚಿಕ್ಕೋಡಿ/ಬೆಳಗಾವಿ: 109 ಅಡಿ ಎತ್ತರದ ಬಸವೇಶ್ವರರ ಮೂರ್ತಿ ಸ್ಥಾಪನೆಯ ಅಡಿಗಲ್ಲು ಪೂಜೆಯನ್ನು ಫೆಬ್ರವರಿ 22ರಂದು ಸಿಎಂ ಯಡಿಯೂರಪ್ಪ ನೆರವೇರಿಸಲಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಲ್ಯಾಣ ಹೆಬ್ಬಾಳದಲ್ಲಿ ಇದೇ ತಿಂಗಳ 21, 22, 23ಕ್ಕೆ ಬಸವ ಉತ್ಸವ ನಡೆಯಲಿದ್ದು, ಈ ಉತ್ಸವದಲ್ಲಿ ಸಚಿವರು, ಕೇಂದ್ರ ಮಂತ್ರಿಗಳು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಈ ಕುರಿತು ಹೆಬ್ಬಾಳ ಗ್ರಾಮದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಸವ ಉತ್ಸವ ಸಮಿತಿಯ ನೇತೃತ್ವ ವಹಿಸಿರುವ ಬಸವ ದೇವರು ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.

    ಮೂರು ದಿನದ ಬಸವ ಉತ್ಸವದಲ್ಲಿ ನಾಡಿನ ಅನೇಕ ಮಠಾಧೀಶರು ಹಾಗೂ ಸಮಾಜದ ವಿವಿಧ ಸ್ಥರದ ಎಲ್ಲಾ ಜನಾಂಗದ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. 22ರಂದು ಕಲ್ಯಾಣ ಹೆಬ್ಬಾಳ ಗ್ರಾಮಕ್ಕೆ ಸಿಎಂ ಯಡಿಯೂರಪ್ಪ ಆಗಮಿಸಲಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲ್ಯಾಣ ಹೆಬ್ಬಾಳದಲ್ಲಿ ಪ್ರತಿಷ್ಠಾಪಿಸಲಿಚ್ಛಿಸಿರುವ 109 ಅಡಿ ಉದ್ಧದ ಬಸವ ಮೂರ್ತಿ ಅಡಿಗಲ್ಲು ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

    ಯಡಿಯೂರಪ್ಪ ಅವರ ಜೊತೆ ಸಚಿವರಾದ ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ, ಅಣ್ಣಾ ಸಾಹೇಬ್ ಜೊಲ್ಲೆ, ಸೇರಿದಂತೆ ಕೇಂದ್ರ ಸಚಿವರಾದ ಸುರೇಶ ಅಂಗಡಿ ಹಾಗೂ ಪ್ರಹ್ಲಾದ ಜೋಶಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ ಪಂಡಿತ, ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾಧ್ಯಕ್ಷಾ ಶಂಕರ ಗುಡಸ, ಎಸ್ ವಾಯ್ ಹಂಜಿ ಸಾಹಿತಿ ಚಿಕ್ಕೋಡಿ, ಬಿ.ಎಲ್ ಖೋತ, ಮಹಾಂತೇಶ ಚೌಗಲ, ಸಿದ್ದು ಪಾಟೀಲ್, ಮಹೇಶ ಕಾಡಗಿ ಸೇರಿದಂತೆ ಇತರರು ಹಾಜರಿದ್ದರು.

  • ‘ಬಾಯಿಬಿಟ್ರೆ ಬಾಂಬ್’ ಸಾಹುಕಾರ್ ಇಂದು ಸೈಲೆಂಟ್

    ‘ಬಾಯಿಬಿಟ್ರೆ ಬಾಂಬ್’ ಸಾಹುಕಾರ್ ಇಂದು ಸೈಲೆಂಟ್

    ಬೆಂಗಳೂರು: ಬಾಯಿ ಬಿಟ್ಟರೆ ಬಾಂಬ್ ಎನ್ನುವ ಲೆವೆಲ್‍ಗೆ ಮಾತಿನ ಪಟಾಕಿಯಿಂದಲೇ ಮೈತ್ರಿ ಸರ್ಕಾರದ ಬುಡಕ್ಕೆ ಬೆಂಕಿಯಿಟ್ಟ ರಮೇಶ್ ಜಾರಕಿಹೊಳಿ ಬಿಜೆಪಿಗೆ ಬಂದಾಗಲೂ ಡೋಂಟ್ ಕೇರ್ ಮಾಸ್ಟರ್ ಆಗಿದ್ದರು. ಆಗಾಗ ಮಾತಿನ ಬಾಂಬ್ ಹಾಕಿ ಬಿಎಸ್‍ವೈಗೂ ನುಂಗಲಾರದ ಬಿಸಿ ತುಪ್ಪದಂತಾಗಿದ್ದರು. ದೊಡ್ಡ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸಾಹುಕಾರ್ ಡಿಸಿಎಂ ಆಗುವುದಕ್ಕೆ ಒಂದು ಹಂತದಲ್ಲಿ ಎಲ್ಲಾ ಸರ್ಕಸ್ ಮಾಡಿದ್ದರು. ಆದರೆ ಹೈಕಮಾಂಡ್ ಇವರ ಮಾತಿನ ಆಟಕ್ಕೆ ಅಂಕುಶ ಹಾಕಿದೆ. 60 ದಿನ ಹೊಟ್ಟೆಯಲ್ಲಿ ಬೆಂಕಿ ಇಟ್ಟುಕೊಂಡೆ ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದ ರಮೇಶ್ ಜಾರಕಿಹೊಳಿ ಇಂದು ಫುಲ್ ಸೈಲೆಂಟ್ ಮೋಡ್‍ಗೆ ಜಾರಿಬಿಟ್ಟಿದ್ದಾರೆ.

    ಇಂದು ಪ್ರಮಾಣವಚನ ಸ್ವೀಕರಿಸಿದ ಮೇಲೆ ಎಲ್ಲಾ ಸಚಿವರು ಮಾಧ್ಯಮದವರಿಗೆ ಫುಲ್ ಖುಷ್ ಖುಷಿಯಿಂದ ಕರೆದು ಕರೆದು ಮಾತಾನಾಡಿಸಿದ್ರೆ, ರಮೇಶ್ ಜಾರಕಿಹೊಳಿ ಮುನಿಸಿಕೊಂಡ ಮಗುವಿನಂತೆ ಮುಖ ದಪ್ಪ ಮಾಡಿಕೊಂಡು ಕುಳಿತುಕೊಂಡಿದ್ದರು.

    ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮೊದಲು ರಮೇಶ್ ಜಾರಕಿಹೊಳಿ ಮನೆಯಲ್ಲಿ ಮಾತಾನಾಡದೆ ರಾಜಭವನದಲ್ಲಿ ಮಾತಾನಾಡುತ್ತೇನೆ ಎಂದು ಹೇಳಿದ್ದರು. ಆದರೆ ರಾಜಭವನದಲ್ಲೂ ಮಾತಾನಾಡದ ರಮೇಶ್ ಮಾಧ್ಯಮ ಕಂಡೊಡನೇ ತಲೆ ತಗ್ಗಿಸಿ ಹೊರಟು ಹೋದರು. ಪ್ರಮಾಣ ವಚನ ನಡೆದ ಮೇಲೂ ರಮೇಶ್ ಕಾರನ್ನೇರಿದರು. ಬಳಿಕ ಮಾಧ್ಯಮವನ್ನು ಕಂಡ ತಕ್ಷಣ ರಮೇಶ್ ಜಾರಕಿಹೊಳಿ ಕಾರಿನ ಗ್ಲಾಸ್ ಏರಿಸಿ ನಾನು ಮಾತನಾಡುವುದಿಲ್ಲ ಎಂದು ಹೊರಟು ಹೋದರು.

    ನಾನು ಮಾತನಾಡಲ್ಲ:
    ಸಚಿವರಾದ 10 ಮಂದಿಯಲ್ಲಿ 9 ಮಂದಿ ತಮ್ಮ ಸಂತೋಷದ ಕ್ಷಣಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು. ಆದರೆ ಇದಕ್ಕೆ ಬೆಳಗಾವಿಯ ಸಾಹುಕಾರ್ ರಮೇಶ್ ಜಾರಕಿಹೊಳಿ ಮಾತ್ರ ತದ್ವಿರುದ್ಧವಾಗಿದ್ದರು. ಸಮ್ಮಿಶ್ರ ಸರ್ಕಾರ ಬೀಳುವಾಗಿನಿಂದ ಮಾಧ್ಯಮಗಳ ಜೊತೆ ಅಂತರ ಕಾಯ್ದುಕೊಂಡಿದ್ದ ರಮೇಶ್ ಜಾರಕಿಹೊಳಿ, ಇಂದು ಮಿನಿಸ್ಟರ್ ಆದರೂ ಕೂಡ ತುಟಿ ಬಿಚ್ಚಲಿಲ್ಲ. ಸಾಹುಕಾರ್ ಉಳಿದುಕೊಳ್ಳುತ್ತಿದ್ದ ರೇಸ್ ವ್ಯೂ ಕಾಟೇಜ್‍ನಲ್ಲಿ ಬೆಳ್ಳಂಬೆಳಗ್ಗೆ ಮಾಧ್ಯಮಗಳು ಅವರನ್ನು ಹುಡುಕುವ ಕೆಲಸ ಮಾಡಿತ್ತು.

    ಮಂತ್ರಿ ಸ್ಕ್ವೇರ್ ನಲ್ಲಿದ್ದಾರೆ ಎಂದು ಗೊತ್ತಾಗಿ ಅಲ್ಲಿಯೂ ಠಿಕಾಣಿ ಹೂಡಲಾಯಿತು. ಕೊನೆಗೆ ಸದಾಶಿವನಗರ ಕ್ಲಬ್ ಬಳಿ ಇರುವ ಗಣೇಶ ದೇವಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ದೇವರ ಮೂಡ್ ನಲ್ಲಿದ್ದೇನೆ ರಾಜಭವನದಲ್ಲಿ ಮಾತಾನಾಡುತ್ತೇನೆ ಡಿಸ್ಟರ್ಬ್ ಮಾಡಬೇಡಿ ಎಂದಿದ್ದರು. ಅದಾದ ಮೇಲೆ ರಾಜಭವನದಲ್ಲೂ ಸಹ ಮಾಧ್ಯಮಗಳ ಜೊತೆ ಮಾತಾಡಲಿಲ್ಲ. ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೂ ಸಹ ಮಾತಾಡಲಿಲ್ಲ.

    ಧಾನಸೌಧಕ್ಕೆ ಬಂದು ಸಚಿವ ಸಂಪುಟದಲ್ಲಿ ಪಾಲ್ಗೊಂಡ ಬಳಿಕವೂ, ನಾನು ಮಾತಾಡಲ್ಲ ಎಂದು ಸಾಹುಕಾರ್ ಹೊರಟು ಹೋದರು. ಉಪಮುಖ್ಯಮಂತ್ರಿ ಕೊಡಲ್ವಂತೆ ನಿಮಗೆ? ನಿಮ್ಮನ್ನು ನಂಬಿ ಬಂದ ಮಹೇಶ್ ಕುಮಟಳ್ಳಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಲು ವಿಫಲರಾದ್ರಲ್ಲಾ ಎನ್ನುವ ಮಾಧ್ಯಮಗಳ ಖಾರವಾದ ಪ್ರಶ್ನೆಗೆ ತಪ್ಪಿಸಿಕೊಳ್ಳಲೊ ಏನೊ ಸಾಹುಕಾರ್ ಇಡೀ ದಿನ ಅಂತರ ಕಾಯ್ದುಕೊಂಡೇ ನಿರ್ಗಮಿಸಿದರು.

  • ಸಂಪುಟ ಪುನಾರಚನೆ ಅಲ್ಲ ವಿಸ್ತರಣೆಯೇ ಎಲ್ಲ – ಹಾಲಿ ಮೂವರು ಸಚಿವರೂ ಸೇಫ್

    ಸಂಪುಟ ಪುನಾರಚನೆ ಅಲ್ಲ ವಿಸ್ತರಣೆಯೇ ಎಲ್ಲ – ಹಾಲಿ ಮೂವರು ಸಚಿವರೂ ಸೇಫ್

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಾ? ಪುನಾರಚನೆಯಾ ಅನ್ನೋ ಗೊಂದಲ ಬಗೆಹರಿದಿದೆ. ಗುರುವಾರ ನಡೆಯೋದು ವಿಸ್ತರಣೆ ಮಾತ್ರ, ಪುನಾರಚನೆಯಲ್ಲ. ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಪೂರ್ಣ ಒಪ್ಪಿಗೆ ಕೊಟ್ಟಿದೆ. ಸಂಪುಟದಿಂದ ಯಾರನ್ನೂ ಕೈಬಿಡದೇ ವಿಸ್ತರಣೆ ನಡೆಸಲು ಹೈಕಮಾಂಡ್ ಸೂಚನೆ ಕೊಟ್ಟಿದೆ. ಸಚಿವ ವಿಸ್ತರಣೆ ಹಿನ್ನೆಲೆಯಲ್ಲಿ ಹಾಲಿ ಮೂವರು ಸಚಿವರೂ ಸೇಫ್ ಆಗಿದ್ದಾರೆ.

    ಸಚಿವ ಸಂಪುಟ ಸಂಕಷ್ಟಗಳ ಮಧ್ಯೆಯೂ ಹಾಲಿ ಮೂವರು ಸಚಿವರಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಸಿ.ಸಿ.ಪಾಟೀಲ್ ಮತ್ತು ಶಶಿಕಲಾ ಜೊಲ್ಲೆ ಈ ಮೂವರು ಸಚಿವರನ್ನೂ ಸಂಪುಟದಿಂದ ಕೈಬಿಡಲಾಗುತ್ತದೆ ಎನ್ನಲಾಗಿತ್ತು. ಆದರೆ ಇದೀಗ ಸಂಪುಟ ಪುನಾರಚನೆ ಬದಲು ವಿಸ್ತರಣೆ ನಡೆಯುವುದರಿಂದ ಮೂವರೂ ಸಚಿವರು ಸೇಫಾಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ.

    ಡಿಸಿಎಂ ಲಕ್ಷ್ಮಣ ಸವದಿಯವರು ಪರಿಷತ್ ಗೆ ಆಯ್ಕೆಯಾಗಲಿರುವ ಕಾರಣದಿಂದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಯವ್ರಿಗೆ ಸಂಪುಟದಿಂದ ಕೊಕ್ ಕೊಡುವ ಸಾಧ್ಯತೆ ಇತ್ತು. ಒಂದೊಮ್ಮೆ ಲಕ್ಷ್ಮಣ ಸವದಿಯವರನ್ನು ವಿಧಾನ ಪರಿಷತ್ ಸಭಾನಾಯಕರಾಗಿ ಮಾಡಿದರೂ ಹಾಲಿ ಸಭಾನಾಯಕರಾಗಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಮುಂದುವರಿಯಲಿದ್ದಾರೆ. ಸಚಿವ ಸಿ.ಸಿ.ಪಾಟೀಲ್ ರಿಗೂ ಕೈಬಿಡದಿರಲು ಹೈಕಮಾಂಡ್ ನಿರ್ಧಾರ ಕೈಗೊಂಡಿದೆ. ಇನ್ನು ಬೆಳಗಾವಿಯಲ್ಲಿ ಸಚಿವರ ಸಂಖ್ಯೆ ಕಡಿಮೆ ಮಾಡಲು ಸಚಿವೆ ಶಶಿಕಲಾ ಜೊಲ್ಲೆಯವ್ರಿಗೂ ಕೊಕ್ ಕೊಡುವ ಸಾಧ್ಯತೆ ಇತ್ತು. ಆದರೆ ಮಹೇಶ್ ಕುಮಟಳ್ಳಿಯವರು ಸಂಪುಟ ಸೇರ್ಪಡೆ ಇಲ್ಲದ ಹಿನ್ನೆಲೆಯಲ್ಲಿ ಹಾಗೂ ಮಹಿಳಾ ಕೋಟಾದಿಂದ ಒಬ್ಬರೇ ಸಚಿವೆಯಾಗಿರುವ ಕಾರಣದಿಂದ ಶಶಿಕಲಾ ಜೊಲ್ಲೆಯವರು ಸೇಫ್ ಆಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

  • ಸೋಮವಾರ ಸಂಪುಟ ವಿಸ್ತರಣೆ ಡೌಟ್

    ಸೋಮವಾರ ಸಂಪುಟ ವಿಸ್ತರಣೆ ಡೌಟ್

    ಬೆಂಗಳೂರು: ಇಬ್ಬರು ಹಾಲಿ ಸಚಿವರ ಮನವೊಲಿಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಸೋಮವಾರ ಸಂಪುಟ ವಿಸ್ತರಣೆ ಅನುಮಾನ ವ್ಯಕ್ತವಾಗಿದೆ.

    ಉಪ ಚುನಾವಣೆಯಲ್ಲಿ ಗೆದ್ದ ಶಾಸಕರು ಹಾಗೂ ಹೊಸಬರಿಗೆ ಸಚಿವಸ್ಥಾನ ನೀಡುವ ನಿಟ್ಟಿನಲ್ಲಿ ಇಬ್ಬರು ಹಾಲಿ ಸಚಿವರಿಗೆ ಕೊಕ್ ಕೊಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಆ ಇಬ್ಬರು ಶಾಸಕರ ಮನವೊಲಿಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ಬುಧವಾರ ಆಗಲಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಸಿಎಂ ಯಡಿಯೂರಪ್ಪ ಅವರು ಹೈಕಮಾಂಡ್ ಎದುರು ಪುನಾರಚನೆ ಇಲ್ಲ ಎಂದಿದ್ದರು. ಹೀಗಾಗಿ ಇಬ್ಬರನ್ನು ಮನವೊಲಿಸಿ ರಾಜೀನಾಮೆ ಕೊಡಿಸುವ ಬಗ್ಗೆ ಪ್ಲ್ಯಾನ್ ರೂಪಿಸಿದ್ದರು. ಒಂದು ವೇಳೆ ಮನವೊಲಿಕೆ ಸಾಧ್ಯವಾಗದಿದ್ದರೆ ವಿಸ್ತರಣೆ ಮಾಡಲು ಸಿಎಂ ಯಡಿಯೂರಪ್ಪ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

  • ಬೆಂಗ್ಳೂರು ಗ್ರಾಮಾಂತರ ಸೇರಿ ಗ್ರೇಟರ್ ಬೆಂಗ್ಳೂರು ಮಾಡ್ಬೇಕು ಎಂಬೋದು ಸಚಿವರ ತಲೆಯಲ್ಲಿದೆ: ಎಂ ರುದ್ರೇಶ್

    ಬೆಂಗ್ಳೂರು ಗ್ರಾಮಾಂತರ ಸೇರಿ ಗ್ರೇಟರ್ ಬೆಂಗ್ಳೂರು ಮಾಡ್ಬೇಕು ಎಂಬೋದು ಸಚಿವರ ತಲೆಯಲ್ಲಿದೆ: ಎಂ ರುದ್ರೇಶ್

    ರಾಮನಗರ: ಜಿಲ್ಲೆಗೆ ನವ ಬೆಂಗಳೂರು ಮರುನಾಮಕರಣ ವಿಚಾರವಾಗಿ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪ್ರಾರಂಭಿಕ ಹಂತದಲ್ಲಿ ಚರ್ಚೆಗಳು ನಡೆದಿದ್ದು, ರಾಮನಗರ ಜಿಲ್ಲೆಯ ಐದು ತಾಲೂಕುಗಳು ಹಾಗೂ ಬೆಂಗಳೂರು ಗ್ರಾಮಾಂತರ ಸೇರಿ ಗ್ರೇಟರ್ ಬೆಂಗಳೂರು ಮಾಡಬೇಕು ಎಂಬುದು ಸಚಿವರ ತಲೆಯಲ್ಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ ರುದ್ರೇಶ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯಾಗಿ ಘೋಷಣೆಯಾಗಿ 13 ವರ್ಷಗಳೇ ಕಳೆದಿವೆ. ಆದರೆ ಅಭಿವೃದ್ದಿ ಮಾತ್ರ ಶೂನ್ಯವಾಗಿದ್ದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ಡಿಕೆ ಶಿವಕುಮಾರ್ ಜನರಿಗೆ ಕಿವಿಯ ಮೇಲೆ ಹೂ ಇಡುವಂತಹ ಕೆಲಸ ಮಾಡಿದ್ದಾರೆ. ಆದರೆ ಬಿಜೆಪಿ – ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ರಾಮನಗರ ಜಿಲ್ಲೆಯ ಘೋಷಣೆಗೆ ಪ್ರಮುಖ ಪಾತ್ರ ವಹಿಸಿದ್ದು ಸಿಎಂ ಯಡಿಯೂರಪ್ಪ ಎಂದು ತಿಳಿಸಿದರು.

    ನವ ಬೆಂಗಳೂರು ವಿಚಾರವಾಗಿ ಜನರಲ್ಲಿ ಗೊಂದಲ ಮೂಡಿಸುವ ಅವಶ್ಯಕತೆ ಇಲ್ಲ. ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದು, ನಂತರ ರಾಮನಗರ ಜಿಲ್ಲೆಯಾಗಿದೆ. ರಾಮನಗರ ಕೂಗಳತೆ ದೂರದಲ್ಲಿರುವ ಜಿಲ್ಲೆಯಾಗಿದ್ದು 5 ಟೌನ್ ಶಿಫ್ ಗಳು ಬರ್ತಿವೆ. ರಾಮನಗರ ಹೆಸರನ್ನು ಬದಲಾವಣೆ ಮಾಡಿ ನವ ಬೆಂಗಳೂರು ಮಾಡುವ ಯೋಚನೆ ಇಲ್ಲ ಅಂತ ಹೇಳಿದರು.

    ಆದರೆ ನ್ಯೂ ಡೆಲ್ಲಿ, ನ್ಯೂ ಮುಂಬೈ, ನ್ಯೂ ಮಡ್ರಾಸ್ ರೀತಿ ರಾಮನಗರದ ಹೆಸರಿಗೆ ತೊಂದರೆಯಾಗದ ರೀತಿ ಕಾಳಜಿ ವಹಿಸಲಾಗಿದೆ. ಡಿಸಿಎಂ ಅಶ್ವಥ್ ನಾರಾಯಣ್ ರಿಂದ ಮಾರ್ಗಸೂಚಿ ಮಾಡಿ ಪ್ಲಾನ್ ಮಾಡಲಾಗಿದೆ. ಈಗಾಗಲೇ ಜಿಲ್ಲೆಯ ಮುಖಂಡರಿಂದಲೂ ಸಹ ಸಲಹೆ ಪಡೆಯಲಾಗುತ್ತಿದೆ. ಯಾವ ರೀತಿ ಮಾಡಬೇಕು ಎಂಬ ಚರ್ಚೆಯಾಗುತ್ತಿದೆ ಎಂದರು.

    ಅಂತರಾಷ್ಟ್ರೀಯವಾಗಿ ರಾಮನಗರ ಹೆಸರು ಮಾಡುವುದರ ಬಗ್ಗೆ ಚರ್ಚೆಯಾಗುತ್ತಿದ್ದು, ಸಿಎಂ ಹಾಗೂ ಡಿಸಿಎಂ ನಿರ್ಧಾರ ತೆಗೆದುಕೊಂಡಿದ್ದು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನವ ಬೆಂಗಳೂರು ಬಗ್ಗೆ ಚಿಂತನೆ ನಡೆದಿದ್ದು ಜಿಲ್ಲೆ ಅಭಿವೃದ್ಧಿಯ ದೃಷ್ಟಿಯಿಂದ ನವ ಬೆಂಗಳೂರು ಮಾಡಬೇಕೆಂಬ ಚರ್ಚೆ ಆಗುತ್ತಿದ್ದು, ಆಗುತ್ತೆ ಎಂದು ಅವರು ತಿಳಿಸಿದ್ರು.

  • ವಿಧಾನ ಸೌಧಕ್ಕೆ ಆವರಿಸಿದ ಗ್ರಹಣ- ಸಚಿವರುಗಳು ನಾಪತ್ತೆ

    ವಿಧಾನ ಸೌಧಕ್ಕೆ ಆವರಿಸಿದ ಗ್ರಹಣ- ಸಚಿವರುಗಳು ನಾಪತ್ತೆ

    ಬೆಂಗಳೂರು: ವಿಧಾನ ಸೌಧಕ್ಕೂ ಕೇತುಗ್ರಸ್ಥ ಸೂರ್ಯಗ್ರಹಣ ತಟ್ಟಿದೆ. ಇಂದು ಗ್ರಹಣಕ್ಕೆ ಹೆದರಿ ಒಬ್ಬರೇ ಒಬ್ಬ ಸಚಿವರು ವಿಧಾನ ಸೌಧದತ್ತ ಸುಳಿದಿಲ್ಲ. ಸಿಎಂ ಸೇರಿದಂತೆ ಯಾವೊಬ್ಬ ಸಚಿವರುಗಳು ತಮ್ಮ ಕಚೇರಿಯತ್ತ ಸುಳಿಯದ ಕಾರಣ ವಿಧಾನ ಸೌಧ ಬಿಕೋ ಅನ್ನುತ್ತಿತ್ತು.

    ಜನಪ್ರತಿನಿಧಿ ಆಗಮಿಸದ ಹಿನ್ನೆಲೆಯಲ್ಲಿ ವಿಧಾನ ಸೌಧದ ಕಾರಿಡಾರ್, ಪಾರ್ಕಿಂಗ್ ಎಲ್ಲವು ಖಾಲಿ ಖಾಲಿ ಆಗಿತ್ತು. ಅಧಿಕಾರಿಗಳು ಹಾಗೂ ಸಿಬ್ಬಂದಿ ಎಂದಿನಂತೆ ವಿಧಾನ ಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಜನರ ಸಮಸ್ಯೆ ಆಲಿಸಬೇಕಾದ ಸಚಿವರುಗಳು ಗ್ರಹಣಕ್ಕೆ ಹೆದರಿ ವಿಧಾನ ಸೌಧದತ್ತ ಸುಳಿದಿಲ್ಲ.

    ಸಚಿವರುಗಳು ಕಚೇರಿಗೆ ಬಂದರೆ ವಿಧಾನಸೌಧ ಜನಜಂಗುಳಿಯಿಂದ ಕೂಡಿರುತ್ತಿದೆ. ಮುಖ್ಯಮಂತ್ರಿಗಳು ಸೇರಿದಂತೆ ಯಾವೊಬ್ಬ ಸಚಿವರುಗಳು ವಿಧಾನ ಸೌಧದತ್ತ ಸುಳಿದಿಲ್ಲ. ಅದರಿಂದಾಗಿ ಪಾರ್ಕಿಂಗ್,ಕಾರಿಡಾರ್ ಎಲ್ಲವು ಬಿಕೋ ಎನ್ನುತ್ತಿದೆ.

  • ಅಭಿವೃದ್ದಿಗಿಂತ ಶಾಸಕರನ್ನು ಸಮಾಧಾನಪಡಿಸುವುದೇ ಸಿಎಂಗೆ ದೊಡ್ಡ ಕೆಲಸವಾಗುತ್ತೆ- ನಾರಾಯಣಸ್ವಾಮಿ

    ಅಭಿವೃದ್ದಿಗಿಂತ ಶಾಸಕರನ್ನು ಸಮಾಧಾನಪಡಿಸುವುದೇ ಸಿಎಂಗೆ ದೊಡ್ಡ ಕೆಲಸವಾಗುತ್ತೆ- ನಾರಾಯಣಸ್ವಾಮಿ

    – ಶರತ್ ಬಚ್ಚೆಗೌಡ ಪಕ್ಷಕ್ಕೆ ಬಂದ್ರೆ ಸ್ವಾಗತ
    – ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲಿ

    ಕೋಲಾರ: ಬಿಜೆಪಿ ಸರ್ಕಾರದಲ್ಲಿ ಸಿಎಂ ಯಡಿಯೂರಪ್ಪಗೆ ರಾಜ್ಯದ ಅಭಿವೃದ್ಧಿಗಿಂತ ತಮ್ಮ ಪಕ್ಷದ ಶಾಸಕರನ್ನು ಸಮಾದಾನ ಪಡಿಸುವುದೇ ದೊಡ್ಡ ಕೆಲಸವಾಗುತ್ತದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲಾ ಪಂಚಾಯತ ಕೆಡಿಪಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ಸಿನಲ್ಲಿ ಅಧಿಕಾರ ಪಡೆದುಕೊಂಡವರು ಬಿಜೆಪಿಗೆ ಹೋಗಿದ್ದಾರೆ, ಹೊಸ ನೀರು ಹೋದಮೇಲೆ ಹಳೆ ನೀರಿಗೆ ಅಲ್ಲಿ ಬೆಲೆ ಇಲ್ಲ ಹಾಗಾಗಿ ಬಿಜೆಪಿಯಲ್ಲಿ ಸಚಿವ ಸಂಪುಟ ವಿಚಾರವಾಗಿ ಗೊಂದಲ ಮುಂದುವರೆಯುತ್ತದೆ. ಎಂಟಿಬಿಗೆ ಬಿಜೆಪಿಯಲ್ಲಿ ಸ್ಥಾನಮಾನ ಕೊಡಲು ಸಾಧ್ಯವೇ ಇಲ್ಲ. ಗೆದ್ದಿರುವವರಿಗೆ ಸ್ಥಾನಮಾನ ಕೊಡುವುದೇ ಕಷ್ಟವಾಗಿದೆ. ಹಳಬರು-ಹೊಸಬರನ್ನು ಒಟ್ಟಾಗಿ ಕರೆದುಕೊಂಡು ಹೋಗುವುದೇ ಸಿಎಂಗೆ ಸರ್ಕಸ್ ಆಗುತ್ತದೆ ಎಂದರು.

    ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ನೂತನ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್‍ಗೆ ಬಂದರೆ ಸ್ವಾಗತಿಸುತ್ತೇವೆ. ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿರುವ ಶರತ್ ಏಕೆ ಕಾಂಗ್ರೆಸ್‍ಗೆ ಬರಬಾರದು ಎಂದು ಪ್ರಶದನಿಸಿದರು. ಇದೇ ವೇಳೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವಂತೆ ಹೈಕಮಾಂಡ್‍ಗೆ ಒತ್ತಾಯ ಮಾಡುತ್ತೇನೆ ಎಂದರು.

    ಸಂಸದ, ಶಾಸಕರ ನಡುವೆ ವಾಗ್ವಾದ
    ಕೆಡಿಪಿ ಸಭೆಯಲ್ಲಿ ಸಂಸದ ಮುನಿಸ್ವಾಮಿ ಹಾಗೂ ಮಾಲೂರು ಕಾಂಗ್ರೇಸ್ ಶಾಸಕ ಹಾಗೂ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ನಂಜೇಗೌಡ ನಡುವೆ ಏರು ಧ್ವನಿಯಲ್ಲಿ ವಾಗ್ವಾದ ನಡೆಯಿತು. ಕೆಎಂಎಫ್ ನಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ ಎಂದು ಸಂಸದ ಮುನಿಸ್ವಾಮಿಗೆ ಆರೋಪಿಸಿದರು. ಇದಕ್ಕೆ ಉತ್ತರಿಸುವ ವೇಳೆ ಶಾಸಕರು ಏಕವಚನದಲ್ಲಿ ಮಾತನಾಡಿ ನೀನು ಎಂದು ಸಂಭೋಧಿಸಿದರು. ಇದಕ್ಕೆ ಕೋಪಗೊಂಡ ಸಂಸದರು ನ್ಯಾಯವಾಗಿ ಮಾತನಾಡಿ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಸಂಸದರು ಹಾಗೂ ಶಾಸಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಸಭೆಯಲ್ಲಿದ್ದ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಮತ್ತು ಸಚಿವ ನಾಗೇಶ್ ಸಮಾಧಾನ ಪಡಿಸಿದರು. ನಂತರ ಸಭೆಯಲ್ಲಿ ಒಬ್ಬರಿಗೊಬ್ಬರು ಸಮರ್ಥಿಸಿಕೊಂಡರು. ಮಧ್ಯಾಹ್ನದ ಊಟವನ್ನು ಇಬ್ಬರೂ ಜೊತೆಯಲ್ಲೆ ಸವಿದರು.

    ಉಸ್ತುವಾರಿ ಸಚಿವರ ಮೌನ
    ಸಂಸದರ ಜೊತೆ ಮಾತನಾಡುತ್ತ ಕುಳಿತ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಬದಲಾಗಿ ಇಡೀ ಸಭೆಯನ್ನು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ನಡೆಸಿಕೊಟ್ಟರು. ಸಚಿವ ನಾಗೇಶ್ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೂರು ತಿಂಗಳ ನಂತರ ಮೂರು ಬಾರಿ ದಿನಾಂಕ ನಿಗದಿ ಮಾಡಿ ನಂತರ ಮುಂದೂಡಿ ಕೊನೆಗೆ ಇಂದು ಸಭೆ ನಡೆಸಿದರು. ಆದರೆ ನಡೆಸಿಕೊಟ್ಟವರು ಮಾತ್ರ ನಾರಾಯಣಸ್ವಾಮಿ.

    ಸಭೆಯಲ್ಲಿ ಪ್ರತಿ ವಿಷಯದ ಮೇಲೆ ಚರ್ಚೆ ಬಂದಾಗಲೂ ಅಧಿಕಾರಿಗಳನ್ನು ಪ್ರಶ್ನೆ ಮಾಡಿ ಸಚಿವರೇ ಅದೇಶ ನೀಡುತ್ತಿದ್ದರು. ಆದರೆ ಈ ಬಾರಿ ನಾರಾಯಣಸ್ವಾಮಿಯವರು ಮಾಡಿದ್ದಾರೆ.

    ಈ ವೇಳೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಜನಪ್ರತಿನಿಧಿಗಳಿಗೆ ಸರಿಯಾಗಿ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ. ಕೋಲಾರ ತಾಲೂಕು ವಡಗೂರು ಗ್ರಾಮದಲ್ಲಿ ರಾಜೀವ್‍ಗಾಂಧಿ ಸೇವಾ ಕೇಂದ್ರವನ್ನು ನನ್ನ ಗಮನಕ್ಕೆ ತರದೆ ಉದ್ಘಾಟನೆ ಮಾಡಲಾಗಿದೆ ಎಂದು ಆರೋಪಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಇದಕ್ಕೆ ಸಭೆಯಲ್ಲಿದ್ದ ಎಲ್ಲ ಜನಪ್ರತಿನಿಧಿಗಳು ಧ್ವನಿಗೂಡಿಸಿದರು. ಜಿಲ್ಲಾಧಿಕಾರಿಗಳು ಉತ್ತರಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಸಭೆಗೂ ನಮಗೂ ಸಂಬಂಧವೇ ಇಲ್ಲವೆಂದು ಕುಳಿತಿದ್ದ ಅಧಿಕಾರಿಗಳು, ಕೆಲವರು ನಿದ್ದೆಗೆ ಜಾರಿದರೆ, ಬಹುತೇಕರು ಮೊಬೈಲ್ ನಲ್ಲೇ ಮುಳುಗಿದ್ದರು. ಸಭೆಯಲ್ಲಿ ಜನರ ಸಮಸ್ಯೆಗಳಿಗಿಂತ ಹೆಚ್ಚಾಗಿ ಶಾಸಕರು ಮತ್ತು ಸಚಿವರು ತಮ್ಮ ಸಮಸ್ಯೆಗಳ ಬಗ್ಗೆಯೇ ಚಿಂತಿಸಿದ್ದು, ಮತ್ತೊಂದು ವಿಶೇಷವಾಗಿತ್ತು.

  • ಸರ್ಕಾರಿ ಕಚೇರಿಗಳಿಗೆ ಸಚಿವ ಪ್ರಭು ಚೌವ್ಹಾಣ್ ದಿಢೀರ್ ಭೇಟಿ – ಅಧಿಕಾರಿಗಳಿಗೆ ಫುಲ್ ಕ್ಲಾಸ್

    ಸರ್ಕಾರಿ ಕಚೇರಿಗಳಿಗೆ ಸಚಿವ ಪ್ರಭು ಚೌವ್ಹಾಣ್ ದಿಢೀರ್ ಭೇಟಿ – ಅಧಿಕಾರಿಗಳಿಗೆ ಫುಲ್ ಕ್ಲಾಸ್

    ಬೀದರ್: ಸರ್ಕಾರಿ ಕಚೇರಿಗಳಿಗೆ ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸಚಿವರು ದಿಢೀರ್ ಭೇಟಿ ನೀಡಿದರು. ಈ ವೇಳೆ ಗುಟಕಾ ತಿಂದು ಕಿಟಕಿ ಬಾಗಿಲಲ್ಲಿ ಊಗುಳಿ ಹೊಲಸು ಮಾಡಲಾಗಿತ್ತು. ಇದನ್ನು ಗಮನಿಸಿದ ಪ್ರಭು ಚೌವ್ಹಾಣ್ ಅವರು ಸ್ವಚ್ಚತೆ ಕಾಪಾಡದ್ದಕ್ಕೆ ತಾಲೂಕು ವೈದ್ಯಾಧಿಕಾರಿ ಡಾ. ಗಾಯತ್ರಿ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.

    ಔರಾದ್ ಪಟ್ಟಣ ಪಂಚಾಯತ್‍ನಲ್ಲಿ ಸಾಮೂಹಿಕವಾಗಿ ಗೈರಾದ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 16 ಜನ ಅಧಿಕಾರಿಗಳ ಪೈಕಿ 9 ಜನರಿಗೆ ಕಾರಣ ಕೇಳಿ ನೋಟಿಸ್ ನೀಡಿವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದರು.

    ಇದೇ ವೇಳೆ ಆಸ್ಪತ್ರೆಯಲ್ಲಿ ಒಂದು ವರ್ಷದಿಂದ ಗೈರಾದ ದಂತ ವೈದ್ಯ ಡಾ. ಮೆಹಬಿನ್ ಫೀರ್ದೊಸ್ ಎಂಬಾತನನ್ನು ಸಸ್ಪೆಂಡ್ ಮಾಡುವಂತೆ ಪ್ರಭು ಚೌವ್ಹಾಣ್ ಆದೇಶಿಸಿದ್ದಾರೆ. ಬಳಿಕ ಕೇಂದ್ರ ಸ್ಥಾನ ಬಿಟ್ಟು ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಮಾಡಿದ ಮುಖ್ಯಾಧಿಕಾರಿ, ಸಿಬ್ಬಂದಿಗೆ ಮೈ ಚಳಿ ಬಿಡಿಸಿದರು.