Tag: ಸಚಿವರು

  • ಉಪ ತಹಶೀಲ್ದಾರ್‍ಗೆ ಸುಳ್ಳು ಹೇಳಿದರೆ `ಚೊನ್ನ’ ಬಿಚ್ಚುವೆ ಅಂದ್ರು ಸಚಿವ ಎಚ್‍ಕೆ ಪಾಟೀಲ್

    ಉಪ ತಹಶೀಲ್ದಾರ್‍ಗೆ ಸುಳ್ಳು ಹೇಳಿದರೆ `ಚೊನ್ನ’ ಬಿಚ್ಚುವೆ ಅಂದ್ರು ಸಚಿವ ಎಚ್‍ಕೆ ಪಾಟೀಲ್

    ಗದಗ: ಉಪ ತಹಶೀಲ್ದಾರ್ ದುರಾಡಳಿತ ವರ್ತನೆ ಕಂಡು ಸಚಿವ ಎಚ್‍ಕೆ ಪಾಟೀಲ್ ಅಧಿಕಾರಿ ಮೇಲೆ ಕೆಂಡಾಮಂಡಲರಾಗಿರುವ ಘಟನೆ ಬೆಟಗೇರಿನಲ್ಲಿ ನಡೆದಿದೆ.

    ಸಾಮಾಜಿಕ ಭದ್ರತಾ ಯೋಜನೆ ಅರ್ಹರಿಗೆ ಲಾಭ ಒದಗಿಸುವಲ್ಲಿ ಉಪ ತಹಶೀಲ್ದಾರ್ ಐಜೆ ಪಾಪಣ್ಣವರ್ ವಿಫಲರಾಗಿದ್ದು, ಸಾರ್ವಜನಿಕರು ಯೋಜನೆ ಬಗ್ಗೆ ಕೇಳಲು ಬಂದಾಗ, ತಹಶಿಲ್ದಾರಗೆ ಅರ್ಜಿಕೊಡಿ ನಾನೇನು ಮಾಡಲಿ ಎಂದ ಉಪ ತಹಶೀಲ್ದಾರ್ ಉದ್ಧಟತನದ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಸಚಿವರಿಗೆ ದೂರು ನೀಡಿದ್ದು, ಇದನ್ನ ಕೇಳಿದ ಎಚ್‍ಕೆ ಪಾಟೀಲ್‍ರು ಅಧಿಕಾರಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸುಳ್ಳು ಹೇಳಿದರೆ ಚೊನ್ನಾ ಬಿಚ್ಚುವೆ, ಬಡವರಿಗೆ ಸಹಾಯ ಮಾಡಬೇಕು ಅಂತಾ ಅನಿಸಲ್ವಾ ನಿನಗೆ ಎಂದು ಉಪ ತಹಶೀಲ್ದಾರ್‍ಗೆ ತರಾಟೆ ತೆಗೆದುಕೊಂಡಿದ್ದಾರೆ. ಬೆಟಗೇರಿ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಫಲಾನುಭವಿಗಳಿಗೆ ಪರಿಹಾರ ನೀಡಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

    ಕೆಲಸದಲ್ಲಿ ನಿರ್ಲಕ್ಷ್ಯ, ಸಾರ್ವಜನಿಕರಿಗೆ ಸ್ಪಂದಿಸದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಸರಿಯಾಗಿ ಕೆಲಸಮಾಡಬೇಕು. ತಹಶೀಲ್ದಾರ್ ಇರಲಿ, ಎಸಿ ಇರಲಿ ಸಹಾಯ ಅಂತ ಬಂದವರಿಗೆ ಸ್ಪಂದಿಸಬೇಕು. ಉಪ ತಹಶೀಲ್ದಾರ್ ಮೇಲೆ ನಿಗಾ ವಹಿಸುವಂತೆ ಎಸಿ ಮಂಜುನಾಥಗೆ ಸೂಚನೆ ನೀಡಿದ್ದೇನೆ ಎಂದು ಎಚ್‍ಕೆ ಪಾಟೀಲ್ ಹೇಳಿದ್ದಾರೆ.

  • ಸಚಿವ ಆಂಜನೇಯಗೆ ಕ್ಲಾಸ್ ತೆಗೆದುಕೊಂಡ ಮಹಿಳೆಯರು

    ಸಚಿವ ಆಂಜನೇಯಗೆ ಕ್ಲಾಸ್ ತೆಗೆದುಕೊಂಡ ಮಹಿಳೆಯರು

    ಚಿತ್ರದುರ್ಗ: ನಗರದಲ್ಲಿ ರಾಜಕಾಲುವೆ ಒತ್ತುವರಿ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಸಮಾಜಕಲ್ಯಾಣ ಸಚಿವ ಹೆಚ್.ಆಂಜನೇಯ ಅವರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿಯಿಂದ ರಾಜಕಾಲುವೆ ಒತ್ತುವರಿಯಾಗಿದೆ. ಹಾಗಾಗಿ ಮಳೆ ನೀರು ಸರಾಗವಾಗಿ ಹರಿಯಲಾಗದೇ ನೆಹರು ನಗರದ ನೂರಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಹೀಗಾಗಿ ಆಕ್ರೋಶಗೊಂಡ ಮಹಿಳೆಯರು ರಾಜಕಾಲುವೆ ಒತ್ತುವರಿಯನ್ನು ತುರ್ತಾಗಿ ತೆರವುಗೊಳಿಸುವಂತೆ ಆಗ್ರಹಿಸಿ ಸಚಿವ ಆಂಜನೇಯ ಹಾಗೂ ನಗರಸಭೆ ಪೌರಾಯುಕ್ತ ಚಂದ್ರಪ್ಪ ಅವರಿಗೆ ಮುತ್ತಿಗೆ ಹಾಕಿದರು.

    ನೀರಿಲ್ಲದ ಪ್ರದೇಶ ಹಾಗೂ ತಗ್ಗು ದಿಬ್ಬಗಳಿಲ್ಲದ ರಸ್ತೆಗಳಲ್ಲಿ ವಾಹನ ಸವಾರರು ಸಂಚರಿಸಬೇಕು. ಇಲ್ಲವಾದರೆ ನೀರಿಲ್ಲದ ಕಡೆ ಮಾರ್ಗ ಬದಲಾವಣೆ ಮಾಡಿಕೊಂಡು ಸಂಚರಿಸಿ. ಮಳೆ ಬಂದು ನೀರು ನಿಂತಾಗ ಗುಂಡಿ ಬೀಳೋದು ಕಾಮನ್, ಹೀಗಾಗಿ ಮಳೆ ನೀರು ನಿಂತು ರಸ್ತೆ ಹಾಳಾಗೋದು ಕೂಡ ಸಹಜವಾಗಿದೆ. ಆದ್ದರಿಂದ ಒಂದೇ ಬಾರಿಗೆ ಎಲ್ಲಾ ರಸ್ತೆ ರಿಪೇರಿ ಮಾಡಲು ಆಗುವುದಿಲ್ಲ. ವಾಹನ ಸವಾರರು ಸಂಚರಿಸುವಾಗ ತಗ್ಗು ದಿಬ್ಬಗಳಿಲ್ಲದ ರಸ್ತೆಗಳಲ್ಲಿ ನೋಡಿಕೊಂಡು ಓಡಾಡಬೇಕು. ಅಲ್ಲದೆ ರಾತ್ರಿ ಸಮಯದಲ್ಲಿ ಸಂಚಾರ ಮಾಡುತ್ತಾ ಅನಾಹುತಕ್ಕೆ ಬಲಿಯಾಗಬೇಡಿ ಎಂದು ಹೇಳುವ ಮೂಲಕ ಕಳಪೆ ಕಾಮಗಾರಿಯಿಂದ ಅನಾಹುತವಾಗಿಲ್ಲ ಎಂದು ಸಚಿವ ಆಂಜನೇಯ ಸಮರ್ಥಿಸಿಕೊಂಡರು.

     

  • ಹಗರಣ, ಲೈಂಗಿಕ ಪ್ರಕರಣದಲ್ಲಿ ಸಿಲುಕಬೇಡಿ- ಸಚಿವರು, ಶಾಸಕರಿಗೆ ವೇಣುಗೋಪಾಲ್ ವಾರ್ನಿಂಗ್

    ಹಗರಣ, ಲೈಂಗಿಕ ಪ್ರಕರಣದಲ್ಲಿ ಸಿಲುಕಬೇಡಿ- ಸಚಿವರು, ಶಾಸಕರಿಗೆ ವೇಣುಗೋಪಾಲ್ ವಾರ್ನಿಂಗ್

    ಬೆಂಗಳೂರು: ಸಾಲಮನ್ನಾ ಹೆಸರಿನಲ್ಲಿ ಖುಷಿ ಖುಷಿಯಾಗಿರೋ ಕಾಂಗ್ರೆಸ್ ಶಾಸಕರು ಮತ್ತು ಮಿನಿಸ್ಟರ್‍ಗಳಿಗೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಯಾವುದೇ ಮಂತ್ರಿ ಅಥವಾ ಶಾಸಕರು ಹಗರಣ ಅಥವಾ ಲೈಂಗಿಕ ಪ್ರಕರಣಗಳಲ್ಲಿ ಸಿಲುಕಿಕೊಳ್ಳದಂತೆ ವೇಣುಗೋಪಾಲ್ ವಾರ್ನಿಂಗ್ ಕೊಟ್ಟಿದ್ದಾರೆ. ನಮ್ಮ ಮುಂದಿರೋದು ಚುನಾವಣಾ ವರ್ಷ. ಹಾಗಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಹ ಭ್ರಷ್ಟಾಚಾರ ಅಥವಾ ಲೈಂಗಿಕ ಪ್ರಕರಣಗಳಲ್ಲಿ ಭಾಗಿಯಾಗದಂತೆ ಶಾಸಕರಿಗೆ ಮತ್ತು ಮಂತ್ರಿಗಳಿಗೆ ಖಡಕ್ ಸೂಚನೆ ರವಾನಿಸಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.

    ಒಂದೊಮ್ಮೆ ಸಿಲುಕಿದ್ದೇ ಆದಲ್ಲಿ ಮುಂದಿನ ಎಲೆಕ್ಷನ್‍ನಲ್ಲಿ ಟಿಕೆಟ್ ನೀಡುವುದಿಲ್ಲ. ಇದು ಹಾಲಿ ಶಾಸಕರಿಗೂ ಅನ್ವಯಿಸುತ್ತೆ ಮತ್ತು ಚುನಾವಣಾ ಆಕಾಂಕ್ಷಿಗಳಿಗೂ ಅನ್ವಯಿಸುತ್ತದೆ ಅಂತ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ ಎನ್ನಲಾಗಿದೆ.

  • ಎಲ್‍ಕೆ ಅಡ್ವಾಣಿ ರೀತಿಯಲ್ಲಿ ಡೈರಿಯಲ್ಲಿ ಹೆಸರಿರುವವರು ರಾಜೀನಾಮೆ ನೀಡ್ಬೇಕು – ಅಮೀನ್ ಮಟ್ಟು

    ಎಲ್‍ಕೆ ಅಡ್ವಾಣಿ ರೀತಿಯಲ್ಲಿ ಡೈರಿಯಲ್ಲಿ ಹೆಸರಿರುವವರು ರಾಜೀನಾಮೆ ನೀಡ್ಬೇಕು – ಅಮೀನ್ ಮಟ್ಟು

    ಬೆಂಗಳೂರು: ಎಲ್‍ಕೆ ಅಡ್ವಾಣಿ ರೀತಿಯಲ್ಲೇ ಡೈರಿಯಲ್ಲಿ ಹೆಸರಿರುವ ಸಚಿವರು ರಾಜೀನಾಮೆ ನೀಡಬೇಕು ಎಂದು ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.

    ಈ ಬಗ್ಗೆ ತಮ್ಮ ಫೆಸ್‍ಬುಕ್ ಅಕೌಂಟ್‍ನಲ್ಲಿ ಪೋಸ್ಟ್ ಮಾಡಿರೋ ಅಮೀನ್ ಮಟ್ಟು, ಈ ಹಿಂದೆ ಹವಾಲಾ ಹಣ ಸ್ವೀಕರಿಸಿದವರ ಪಟ್ಟಿಯಲ್ಲಿ `ಎಲ್ ಕೆ ಎನ್’ ಎನ್ನುವ ಇನಿಷಿಯಲ್ ಇರುವುದು ಬಹಿರಂಗವಾಗಿ, ಅದು ಲಾಲ್ ಕೃಷ್ಣ ಅಡ್ವಾಣಿಯವರೇ ಎಂದು ಪ್ರಚಾರವಾಗತೊಡಗಿದಾಗ ನೊಂದುಕೊಂಡ ಅಡ್ವಾಣಿಯವರು ಅದೇ ದಿನ ಸಂಜೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಹಾರಾ-ಬಿರ್ಲಾ ಡೈರಿಯಲ್ಲಿ `ಗುಜರಾತ್ ಸಿಎಂ’ ಮಧ್ಯಪ್ರದೇಶ ಸಿಎಂ, ಚತ್ತೀಸ್ ಗಡ ಸಿಎಂ’ ಡೆಲ್ಲಿ ಸಿಎಂ ಅವರಿಗೆ ಹಣ ನೀಡಲಾದ ಎಂಟ್ರಿಗಳಿವೆಯಂತೆ. ಡೈರಿ ಹಾವಳಿ ಅತಿಯಾಯಿತು. ಇದನ್ನು ಕೊನೆಗೊಳಿಸಬೇಕಾದರೆ ಸನ್ಮಾನ್ಯ ನರೇಂದ್ರಮೋದಿಯವರು ತಮ್ಮದೇ ಪಕ್ಷದ ಮಾರ್ಗದರ್ಶಕ ಮಂಡಳಿಯ ಹಿರಿಯ ಸದಸ್ಯರಾದ ಎಲ್.ಕೆ.ಅಡ್ವಾಣಿಯವರ ಮಾದರಿಯನ್ನು ಅನುಸರಿಸಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅದರ ನಂತರ ಗೋವಿಂದರಾಜ್ ಅವರದ್ದೆನ್ನಲಾದ ಡೈರಿಯಲ್ಲಿರುವ ಹೆಸರಿನ ಎಲ್ಲ ರಾಜಕಾರಣಿಗಳು ಕ್ಷಣಮಾತ್ರವೂ ಸಮಯ ವ್ಯರ್ಥಮಾಡದೆ ರಾಜೀನಾಮೆ ಎಸೆದುಬಿಡಬೇಕು ಎಂದಿದ್ದಾರೆ.

    ಈ ಮಧ್ಯೆ ಇಂದು ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ನಡೆಯಲಿದ್ದು 4 ವರ್ಷ ಪೂರೈಸಿದ ಹಿರಿಯ ಸಚಿವರಿಗೆ ಸಂಪುಟದಿಂದ ಗೇಟ್‍ಪಾಸ್ ನೀಡೋ ನಿರೀಕ್ಷೆ ಇದೆ.

    ಅಮೀನ್ ಮಟ್ಟು ಫೇಸ್‍ಬುಕ್ ಪೋಸ್ಟ್ ನಲ್ಲಿ ಈ ರೀತಿ ಹೇಳಿದ್ದಾರೆ:

    ಕಳೆದ ಕೆಲವು ವರ್ಷಗಳಿಂದ ಈ ಸಿಕ್ರೇಟ್ ಡೈರಿಗಳ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇದೆ. ಜೈನ್ ಹವಾಲಾ ಡೈರಿ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಯು.ವಿ.ಸಿಂಗ್ ನೀಡಿದ ತನಿಖಾ ವರದಿಯಲ್ಲಿನ ಖಾರದಪುಡಿ ಮಹೇಶ್ ಡೈರಿ, ಇತ್ತೀಚೆಗೆ ಸಹರಾ ಮತ್ತು ಬಿರ್ಲಾ ಕಂಪೆನಿಗಳ ಕಚೇರಿಯಲ್ಲಿ ಸಿಕ್ಕಿದೆಯೆನ್ನಲಾದ ಡೈರಿ, ಇದೀಗ ಎಂಎಲ್‍ಸಿ ಗೋವಿಂದರಾಜ್ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆಯೆನ್ನಲಾದ ಡೈರಿ.
    ಜೈನ್-ಹವಾಲಾ ಡೈರಿಯಲ್ಲಿನ ಆರೋಪಿಗಳೆಲ್ಲರನ್ನೂ ಸುಪ್ರೀಂಕೋರ್ಟ್ ಖುಲಾಸೆಗೊಳಿಸಿದೆ. ಸಹಾರಾ-ಬಿರ್ಲಾ ಕಂಪೆನಿಗಳ ಡೈರಿ ಬಗ್ಗೆ ವಿಚಾರಣೆಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಈಗ ಉಳಿದಿರುವುದು ನೈತಿಕತೆಯ ಆಧಾರದ ಪಾಪ ಪ್ರಾಯಶ್ಚಿತ. ಇದು ಹೇಗೆ ಎನ್ನುವುದು ಪ್ರಶ್ನೆ. ನೈತಿಕತೆಯ ಆಧಾರದ ಪಾಪ ಪ್ರಾಯಶ್ಚಿತಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಪಾಲಿಸಿದ ರಾಜಧರ್ಮದ ಮಾರ್ಗವೊಂದಿದೆ. ಇದು ಸರಿಯಾದ ಮಾರ್ಗ ಎಂದೆನಿಸುತ್ತದೆ. ಹವಾಲಾ ಹಣ ಸ್ವೀಕರಿಸಿದವರ ಪಟ್ಟಿಯಲ್ಲಿ `ಎಲ್ ಕೆ ಎನ್’ ಎನ್ನುವ ಇನಿಷಿಯಲ್ ಇರುವುದು ಬಹಿರಂಗವಾಗಿ, ಅದು ಲಾಲ್ ಕೃಷ್ಣ ಅಡ್ವಾಣಿಯವರೇ ಎಂದು ಪ್ರಚಾರವಾಗತೊಡಗಿದಾಗ ನೊಂದುಕೊಂಡ ಅಡ್ವಾಣಿಯವರು ಅದೇ ದಿನ ಸಂಜೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    `ರಾಜಕೀಯದಲ್ಲಿ ವಿಶ್ವಾಸಾರ್ಹತೆ ಮುಖ್ಯ, ಅಧಿಕಾರ ಅಲ್ಲ. ಈ ಆರೋಪದಿಂದ ಮುಕ್ತವಾಗುವವರೆಗೆ ಲೋಕಸಭೆ ಪ್ರವೇಶಿಸುವುದಿಲ್ಲ’ ಎಂದು ಅವರು ಶಪಥ ಮಾಡಿದ್ದರು. ಅನಂತರ ಡೈರಿಯಲ್ಲಿ ಹೆಸರಿದ್ದ ಅನೇಕ ರಾಜಕಾರಣಿಗಳು ಕೂಡಾ ರಾಜೀನಾಮೆ ನೀಡಬೇಕಾಯಿತು. ನೈತಿಕ ನಿಲುವುಗಳು ಮೇಲಿನಿಂದ ಕೆಳಕ್ಕೆ ಇಳಿದು ಬರಬೇಕು. ಈಗ ಚೆಂಡು ಸನ್ಮಾನ್ಯ ಪ್ರಧಾನಿ ನರೇಂದ್ರಮೋದಿಯವರ ಮನೆಯಂಗಳದಲ್ಲಿದೆ. ಸಹಾರಾ-ಬಿರ್ಲಾ ಡೈರಿಯಲ್ಲಿ `ಗುಜರಾತ್ ಸಿಎಂ’ ಮಧ್ಯಪ್ರದೇಶ ಸಿಎಂ, ಚತ್ತೀಸ್ ಗಡ ಸಿಎಂ’ ಡೆಲ್ಲಿ ಸಿಎಂ ಅವರಿಗೆ ಹಣ ನೀಡಲಾದ ಎಂಟ್ರಿಗಳಿವೆಯಂತೆ. ಡೈರಿ ಹಾವಳಿ ಅತಿಯಾಯಿತು. ಇದನ್ನು ಕೊನೆಗೊಳಿಸಬೇಕಾದರೆ ಸನ್ಮಾನ್ಯ ನರೇಂದ್ರಮೋದಿಯವರು ತಮ್ಮದೇ ಪಕ್ಷದ ಮಾರ್ಗದರ್ಶಕ ಮಂಡಳಿಯ ಹಿರಿಯ ಸದಸ್ಯರಾದ ಎಲ್.ಕೆ.ಅಡ್ವಾಣಿಯವರ ಮಾದರಿಯನ್ನು ಅನುಸರಿಸಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅದರ ನಂತರ ಗೋವಿಂದರಾಜ್ ಅವರದ್ದೆನ್ನಲಾದ ಡೈರಿಯಲ್ಲಿರುವ ಹೆಸರಿನ ಎಲ್ಲ ರಾಜಕಾರಣಿಗಳು ಕ್ಷಣಮಾತ್ರವೂ ಸಮಯ ವ್ಯರ್ಥಮಾಡದೆ ರಾಜೀನಾಮೆ ಎಸೆದುಬಿಡಬೇಕು.

  • ಡೈರಿ ಸ್ಫೋಟ ಬಳಿಕ ಕೈ ಕಕ್ಕಾಬಿಕ್ಕಿ – 4 ವರ್ಷ ಪೂರೈಸಿದ ಸಚಿವರಿಗೆ ಗೇಟ್‍ಪಾಸ್?

    ಡೈರಿ ಸ್ಫೋಟ ಬಳಿಕ ಕೈ ಕಕ್ಕಾಬಿಕ್ಕಿ – 4 ವರ್ಷ ಪೂರೈಸಿದ ಸಚಿವರಿಗೆ ಗೇಟ್‍ಪಾಸ್?

    – ನಾಳೆಯ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರ

    ಬೆಂಗಳೂರು: ಕಾಂಗ್ರೆಸ್ ಕಪ್ಪ ಕೊಟ್ಟಿರೋ ಡೈರಿ ಬೆಳಕಿಗೆ ಬಂದ ಬೆನ್ನಲ್ಲೇ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿಯಾಗಲಿದೆ. ನಾಲ್ಕು ವರ್ಷ ಪೂರೈಸಿದ ಸಚಿವರನ್ನ ಕೈ ಬಿಟ್ಟು ಅವರಿಗೆ ಪಕ್ಷದ ಜವಾಬ್ದಾರಿ ವಹಿಸಲು ಕಾಂಗ್ರೆಸ್ ನಲ್ಲಿ ಗಂಭೀರ ಚರ್ಚೆ ಆರಂಭವಾಗಿದ್ದು, ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರ ಹೊರಬೀಳಲಿದೆ.

    ಕಾಂಗ್ರೆಸ್ ಹೈಕಮಾಂಡ್ ಗೆ ಸಾವಿರ ಕೋಟಿ ಕಪ್ಪ ಕೊಟ್ಟಿರುವ ವಿಚಾರ ಒಂದೆಡೆ ಆದ್ರೆ, ಇದೀಗ ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆ ತರಲು ಸಮನ್ವಯ ಸಮಿತಿ ಸಜ್ಜಾಗಿದೆ. ಭಾನುವಾರದಂದು ನಡೆಯಲಿರುವ 20 ಜನ ಸದಸ್ಯರಿರುವ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಹಿರಿಯ ಸಚಿವರಿಗೆ ಗೇಟ್ ಪಾಸ್ ನೀಡಲು ಮಹತ್ವದ ಚರ್ಚೆ ನಡೆಯಲಿದೆ.

    ನಾಲ್ಕು ವರ್ಷ ಪೂರೈಸಿದ ಸಚಿವರನ್ನ ಕೈಬಿಟ್ಟು ಹೊಸ ಮುಖಗಳಿಗೆ, ಆರೋಪಗಳಿಲ್ಲದವರಿಗೆ ಸಂಪುಟದಲ್ಲಿ ಅವಕಾಶ ನೀಡಲು ಚಿಂತಿಸಲಾಗುತ್ತಿದೆ. ಸಂಪುಟ ಸರ್ಜರಿಯಲ್ಲಿ ಪ್ರಾದೇಶಿಕತೆ, ಜಾತಿ ಸಮೀಕ್ಷೆ ಆಪಾದನೆ ಇಲ್ಲದವರಿಗೆ ಆದ್ಯತೆ ಹಾಗೂ ಸಂಪುಟದಿಂದ ಹೊರ ಬರುವ ಸಚಿವರಿಗೆ ಕನಿಷ್ಠ 15 ಕ್ಷೇತ್ರಗಳ ಸಂಘಟನಾ ಹೊಣೆ ನೀಡಲಾಗುತ್ತೆ ಎಂದು ಹೇಳಲಾಗಿದೆ.

    ದಿಗ್ವಿಜಯ್ ಸಿಂಗ್ ನೇತೃತ್ವದ 20 ಸದಸ್ಯರಿರುವ ಕಾಂಗ್ರೆಸ್ ಸಮನ್ವಯ ಸಮಿತಿಯಲ್ಲಿ ಇರೋರೆಲ್ಲ ಬಹುತೇಕ ಮೂಲ ಕಾಂಗ್ರೆಸಿಗರು. ಜಾಫರ್ ಶರೀಫ್ ಸೇರಿದಂತೆ ಎಸ್.ಎಮ್ ಕೃಷ್ಣ ಕೂಡ ಈ ಸಮಿತಿಯಲ್ಲಿದ್ರು. ಆದ್ರೆ ಎಸ್.ಎಮ್.ಕೆ ಈಗ ಕಾಂಗ್ರೆಸ್ ನಲ್ಲಿ ಇಲ್ಲ. ಹೀಗಾಗಿ ಸಂಪುಟ ಮೇಜರ್ ಸರ್ಜರಿಗೆ ಸಿದ್ದು ಬಣ ಒಪ್ಪಲಿದೆಯಾ? ಅನ್ನೋ ಪ್ರಶ್ನೆ ಮೂಡಿದೆ. ಮೂಲ ಕಾಂಗ್ರೆಸಿಗರು ಹಾಗೂ ಸಿದ್ದು ಬಣದ ನಡುವೆ ಫೈಟ್ ನಡೆಯಲಿದೆ ಎನ್ನಲಾಗ್ತಿದೆ.

    ನಾಲ್ಕು ವರ್ಷ ಪೂರೈಸಿದವರಲ್ಲಿ ಎಚ್.ಕೆ ಪಾಟೀಲ್, ರಾಮಲಿಂಗಾ ರೆಡ್ಡಿ, ಕೆ.ಜೆ ಜಾರ್ಜ್, ಆರ್.ವಿ ದೇಶಪಾಂಡೆ, ಎಚ್.ಸಿ ಮಹದೇವಪ್ಪ, ಟಿ.ಬಿ ಜಯಚಂದ್ರ, ರಮಾನಾಥ ರೈ ಹೀಗೆ ಬಹುತೇಕ ಹಿರಿಯ ಸಚಿವರಿದ್ದಾರೆ. ಹಿರಿಯ ಸಚಿವರನ್ನ ಸಂಪುಟದಿಂದ ಕೈ ಬಿಟ್ರೆ, ಸಿಎಂ ಸರ್ಜರಿಗೂ ಸಿಎಂ ವಿರೋಧಿ ಹಿರಿಯ ಸಚಿವರು ಒತ್ತಾಯಿಸೋ ಸಾಧ್ಯತೆ ಇದೆ. ಸಿಎಂ ಮೇಲಿನ ಆರೋಪಗಳನ್ನೇ ಅಸ್ತ್ರವಾಗಿ ಬಳಸಬಹುದಾದ ಸಾಧ್ಯತೆಗಳಿವೆ.

    ಇದೆಲ್ಲದರ ನಡುವೆ ಕಾಂಗ್ರೆಸ್ ಪಕ್ಷದಲ್ಲೂ ಭಾರೀ ಬದಲಾವಣೆಗೆ ಸಮನ್ವಯ ಸಮಿತಿ ವೇದೆಕೆಯಾಗಲಿದೆ. ಮೂಲ ಕಾಂಗ್ರೆಸಿಗರಿಗೆ ಹೆಚ್ಚು ಸ್ಥಾನ ನೀಡಲು ಒತ್ತಾಯಿಸಲಿದೆ. 20 ಜನ ಜಿಲ್ಲಾಧ್ಯಕ್ಷರ ಬದಲಾವಣೆಗೆ ಬಗ್ಗೆ ಹಾಗೂ 25 ಮಹಿಳೆಯರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಬಗ್ಗೆ ಚರ್ಚೆ ನಡೆಯಲಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ ಎನ್ನಲಾಗ್ತಿದೆ. ಸೋತ 102 ಕ್ಷೇತ್ರಗಳಲ್ಲಿ ಆಂತರಿಕೆ ಸಮೀಕ್ಷೆ ಪ್ರಕಾರ ಗೆಲ್ಲೋ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಿದ್ದು, ನಂಜನಗೂಡು, ಗುಂಡ್ಲಪೇಟೆ ಉಪ ಚುನಾವಣೆ ಗೆಲ್ಲಲು ಶ್ರಮವಹಿಸಲಿದ್ದಾರೆ ಎಂದು ಹೇಳಲಾಗಿದೆ.

    ಒಟ್ಟಾರೆ ಭಾನುವಾರದ ಸಮನ್ವಯ ಸಮಿತಿ ಸಭೆ ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿದೆ.