Tag: ಸಕ್ಕರೆ

  • ಸಕ್ಕರೆ, ಹತ್ತಿಗಾಗಿ ಭಾರತದ ಕದ ತಟ್ಟಿದ ಇಮ್ರಾನ್ ಖಾನ್

    ಸಕ್ಕರೆ, ಹತ್ತಿಗಾಗಿ ಭಾರತದ ಕದ ತಟ್ಟಿದ ಇಮ್ರಾನ್ ಖಾನ್

    ನವದೆಹಲಿ: ಪಾಕಿಸ್ತಾನ ಹತ್ತಿ ಮತ್ತು ಸಕ್ಕರೆಗಾಗಿ ಭಾರತದ ಕದ ತಟ್ಟಿದೆ. ಇಮ್ರಾನ್ ಖಾನ್ ಸರ್ಕಾರ ಭಾರತದ ಜೊತೆ ವ್ಯಾಪಾರಕ್ಕೆ ಮುಂದಾಗಿದ್ದು, ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

    2021 ಜೂನ್ ವರೆಗೆ ಭಾರತದ ಹತ್ತಿ ಆಮದು ಮಾಡಿಕೊಳ್ಳಲು ಪಾಕಿಸ್ತಾನ ಮುಂದಾಗಿದೆ. ಶೀಘ್ರದಲ್ಲಿಯೇ ಸಕ್ಕರೆ ಆಮದು ಮಾಡಿಕೊಳ್ಳುವ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪಾಕ್ ಮಾಧ್ಯಮಗಳ ವರದಿ ಮಾಡಿವೆ.

    ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ತಜ್ಞರ ವರದಿ ಸಲ್ಲಿಕೆಯ ಬೆನ್ನಲ್ಲೇ ಇಮ್ರಾನ್ ಖಾನ್ ಸರ್ಕಾರ ಭಾರತದ ಜೊತೆ ವ್ಯಾಪರಕ್ಕೆ ಮುಂದಾಗಿದೆ. ಸಕ್ಕರೆ ಮತ್ತು ಹತ್ತಿಗೆ ಪಾಕಿಸ್ತಾನ ಕೊರತೆ ಅನುಭವಿಸುತ್ತಿದ್ದು. ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳೋದು ದುಬಾರಿ ಆಗಲಿದೆ. ಹಾಗಾಗಿ ತನ್ನ ಒಣಜಂಬವನ್ನ ಬದಿಗಿರಿಸಿ ಭಾರತದ ಮುಂದೆ ತಲೆ ಬಾಗಿದೆ.

    19 ತಿಂಗಳಿನಿಂದ ವ್ಯಾಪಾರ ಸ್ಥಗಿತ
    ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಎಲ್ಲರಿಗೂ ತಿಳಿದಿರುವ ವಿಚಾರ. 2019ರಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದುಗೊಳಿಸಲಾಗಿತ್ತು. ಆದ್ರೆ ಪಾಕಿಸ್ತಾನ ಈ ವಿಷಯದಲ್ಲಿ ಮೂಗಿ ತೂರಿಸಿ ವಿಶ್ವದಲ್ಲಿ ನಗೆಪಾಟಲಾಗಿತ್ತು. ಆರ್ಟಿಕಲ್ 370 ರದ್ದುಗೊಳಿಸಿದ್ದ ದಿನದಿಂದ ಪಾಕಿಸ್ತಾನ ಭಾರತದಿಂದ ಸಕ್ಕರೆ ಮತ್ತು ಹತ್ತಿಯನ್ನ ಆಮದು ಮಾಡಿಕೊಳ್ಳೋದನ್ನ ನಿಲ್ಲಿಸಿತ್ತು.

    ಇದೀಗ ಆರ್ಥಿಕ ತಜ್ಞರ ಸಲಹೆ ಮೇರೆಗೆ ಭಾರತದ ಮುಂದೆ ಬಂದು ಪಾಕಿಸ್ತಾನ ನಿಂತಿದೆ. ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ವಸ್ತುಗಳ ಮೇಲೆ ಶೇ.200ರಷ್ಟು ಆಮದು ಶುಲ್ಕ ವಿಧಿಸುತ್ತಿದೆ. ಇದರ ಜೊತೆಗೆ ಪಾಕಿಸ್ತಾನದ ಜೊತೆಗಿನ ಹಲವು ವ್ಯವಹಾರಿಕ ಸಂಬಂಧವನ್ನ ಕಡಿತಗೊಳಿಸಿಕೊಂಡಿತ್ತು.

  • ಶುಗರ್ ಸೇವನೆ ಬಿಟ್ಟ ಸಕ್ಕರೆ ನಾಡಿನ ಪದ್ಮಾವತಿ!

    ಶುಗರ್ ಸೇವನೆ ಬಿಟ್ಟ ಸಕ್ಕರೆ ನಾಡಿನ ಪದ್ಮಾವತಿ!

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ನಟಿ ರಮ್ಯಾ ಅವರು ಸಕ್ಕರೆ ತಿನ್ನುವುದನ್ನು ಬಿಟ್ಟಿದ್ದಾರೆ.

    ನಟಿ ರಮ್ಯಾ ಅವರಿಗೆ ಸಕ್ಕರೆ ಅಂದರೆ ತುಂಬಾ ಇಷ್ಟ. ಆದರೆ ಈಗ ರಮ್ಯಾ ಅವರು ಈ ವರ್ಷದ ಕೊನೆಯವರೆಗೂ ಸಕ್ಕರೆ ಹಾಗೂ ಸಿಹಿ ಪದಾರ್ಥಗಳನ್ನ ಸೇವಿಸದೇ ಇರಲು ನಿರ್ಧಾರ ಮಾಡಿದ್ದಾರೆ. ಸಕ್ಕರೆ ಮತ್ತು ಸಿಹಿ ಪದಾರ್ಥಗಳು ತಮ್ಮ ಜೀವನ ಶೈಲಿಯ ಮೇಲೆ ಭಾರೀ ಪರಿಣಾಮ ಬೀರಿರುವ ಕಾರಣ ಡಿಸೆಂಬರ್ 31 ರವರೆಗೂ ಸಕ್ಕರೆ ಸೇವಿಸುವುದಿಲ್ಲ ಎಂದು ರಮ್ಯಾ ಅವರು #ನೋಶುಗರ್ ಚಾಲೆಂಜ್ ಸ್ವೀಕರಿಸಿದ್ದಾರೆ. ಮೂರು ದಿನಗಳ ಹಿಂದೆ ಈ ಬಗ್ಗೆ ಅವರೇ ಇನ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

    ನಟಿ ರಮ್ಯಾ ”ಇದು ಸಕ್ಕರೆ ಇಲ್ಲದ ನನ್ನ ಮೊದಲ ದಿನವಾಗಿದೆ. ಈ ವರ್ಷದ ಕೊನೆಯವರೆಗೂ ಇದನ್ನು ಮುಂದುವರಿಸಲು ನಾನು ತೀರ್ಮಾನ ಮಾಡಿದ್ದೇನೆ. ಇದು ತುಂಬಾ ಒಳ್ಳೆಯದು. ಈ ಹಿಂದೆ ನಾನು ಸಕ್ಕರೆಯನ್ನ ಬಿಟ್ಟು ಇರಬೇಕು ಅಂತ ಹಲವಾರು ಬಾರಿ ನಾನು ಪ್ರಯತ್ನ ಪಟ್ಟಿದ್ದೇನೆ. ಆದರೆ 2-3 ದಿನಗಳಿಗಿಂತ ಹೆಚ್ಚು ದಿನ ಸಕ್ಕರೆಯನ್ನು ಬಿಟ್ಟಿರಲು ಸಾಧ್ಯ ಆಗಲಿಲ್ಲ” ಎಂದು ಹೇಳಿಕೊಂಡಿದ್ದಾರೆ.

    “ಅಷ್ಟೇ ಅಲ್ಲದೇ ಎಷ್ಟೋ ಬಾರಿ ಸಕ್ಕರೆ ತ್ಯಜಿಸಲು ನಾನು ನನ್ನ ಪ್ರೀತಿಸುವ ವ್ಯಕ್ತಿಗಳ ಮೇಲೆ ಪ್ರತಿಜ್ಞೆ ಮಾಡಿದ್ದೇನೆ. ಆದರೂ ನಾನು ಅವರ ಮೇಲೆ ಪ್ರಮಾಣ ಮಾಡಿದ್ದೇನೆ ಎಂದು ನಾನು ಮರೆತುಬಿಡುತ್ತಿದ್ದೆ. ನಾನು ಈ ಹಿಂದೆ ಇಷ್ಟಪಟ್ಟು ಸಿಹಿ ತಿನಿಸುಗಳನ್ನು ತಿನ್ನುತ್ತಿದ್ದೆ. ಆದರೆ ಈಗ ಅದೇ ಅಭ್ಯಾಸವಾಗಿ ಹೋಗಿದೆ. ನನಗೆ ಒತ್ತಡ ಹೆಚ್ಚಾದಾಗ ಸಿಹಿ ತಿನ್ನಬೇಕು ಎನಿಸುತ್ತದೆ. ಸಕ್ಕರೆ ದೈಹಿಕ ಹಾಗೂ ಮಾನಸಿಕವಾಗಿ ನನ್ನ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಿದೆ” ಎಂದು ರಮ್ಯಾ ತಿಳಿಸಿದ್ದಾರೆ.

    ನನ್ನ ಜೀವನದಲ್ಲಿ ನಾನು ಸಕ್ಕರೆಯನ್ನು ಅತಿಯಾಗಿ ಸೇವಿಸಿದ್ದೇನೆ. ಆದ್ದರಿಂದ ನಾನು ಈಗ ಮತ್ತೆ ಸಕ್ಕರೆ ಕಡಿಮೆ ಮಾಡಬೇಕು ಎಂಬ ಕಾರಣದಿಂದ ಡಿಸೆಂಬರ್ 31 ರವರೆಗೆ ಸಕ್ಕರೆಗೆ ಗುಡ್ ಬೈ ಹೇಳಲು ನಿರ್ಧಾರ ಮಾಡಿದ್ದೇನೆ. ಆದ್ದರಿಂದ ನನ್ನೊಂದಿಗೆ ನೀವು ಚಾಲೆಂಜ್ ತೆಗೆದುಕೊಳ್ಳಲು ಇಷ್ಟಪಟ್ಟರೆ ಮೊದಲು ನಿಮ್ಮ ಜೀವನದ ಸ್ಟೋರಿಯನ್ನು ಹಂಚಿಕೊಳ್ಳಿ. ಬಳಿಕ ನನ್ನ ಜೊತೆ ನೀವು ನೋ ಸುಗರ್ ಚಾಲೆಂಜ್ ಸ್ವೀಕಸಿ ಎಂದು ನಟಿ ರಮ್ಯಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/Bo8dFYaD63r/?hl=en&taken-by=divyaspandana

  • ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಆಯ್ತು- ಈಗ ಪ್ಲಾಸ್ಟಿಕ್ ಪಾಪಡ್?

    ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಆಯ್ತು- ಈಗ ಪ್ಲಾಸ್ಟಿಕ್ ಪಾಪಡ್?

    ಹುಬ್ಬಳ್ಳಿ: ಇದುವರೆಗೆ ಪ್ಲಾಸ್ಟಿಕ್ ಸಕ್ಕರೆ, ಪ್ಲಾಸ್ಟಿಕ್ ಅಕ್ಕಿ ಹಾಗೂ ಪ್ಲಾಸ್ಟಿಕ್ ಮೊಟ್ಟೆಗಳ ಬಗ್ಗೆ ಕೇಳಿದ್ವಿ. ಆದರೆ, ಅಗ್ಗದ ದರದಲ್ಲಿ ಎಂದರೆ ಕೇವಲ ಒಂದು ರೂಪಾಯಿಗೆ ಸಿಗೋ, ಮಕ್ಕಳು ಬಲು ಇಷ್ಟಪಟ್ಟು ತಿನ್ನೊ ಪಾಪಡಿಗಳೂ ಪ್ಲಾಸ್ಟಿಕ್ ನಿಂದ ತಯಾರಾಗುತ್ತಿದ್ಯಾ ಎನ್ನುವ ಅನುಮಾನ ಕಾಡುತ್ತಿದೆ.

    ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಸಿಗುವ ಈ ಪಾಪಡಿಯನ್ನು ಸುಟ್ಟರೆ ದಟ್ಟ ಕಪ್ಪು ಹೊಗೆ ಬರುತ್ತೆ. ಜೊತೆಗೆ ಈ ಪಾಪಡಿ ಸುಡುವಾಗ ಪ್ಲಾಸ್ಟಿಕ್ ಸುಟ್ಟ ಹಾಗೆ ವಾಸನೆಯೂ ಬರುತ್ತೆ. ಹೀಗಾಗಿ ಇದು ಪ್ಲಾಸ್ಟಿಕ್ ನಿಂದ ತಯಾರಿಸಿದ ಪಾಪಡ್ ಎನ್ನುವ ಅನುಮಾನ ಜನರಲ್ಲಿ ಮೂಡಿದೆ.

    ಈ ಹಿಂದೆ ಪ್ಲಾಸ್ಟಿಕ್ ನ ಕೆಲ ಆಹಾರ ಪದಾರ್ಥಗಳು ಮಾರಾಟವಾಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಂದು ಪ್ಲಾಸ್ಟಿಕ್‍ನ ಆಹಾರ ಪದಾರ್ಥವೊಂದು ಬೆಳಕಿಗೆ ಬಂದಿದ್ದು, ಇದರಲ್ಲಿಯೂ ಕೂಡಾ ಪ್ಲಾಸ್ಟಿಕ್ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ರೀತಿಯ ಉದ್ದದ ಪಾಪಡ್ ಗಳನ್ನು ನಗರದಲ್ಲಿ ಉತ್ಪಾದನೆ ಮಾಡಲಾಗುತ್ತಿದ್ದು, ಶಾಲೆಗಳ ಅಕ್ಕ ಪಕ್ಕದಲ್ಲಿ ಎಗ್ಗಿಲ್ಲದೇ ಮಾರಾಟ ಮಾಡಲಾಗುತ್ತಿದೆ.

    ಸಾಮಾನ್ಯ ಪಾಪಡಿಗಳಿಗಿಂತ ಈ ಪಾಪಡ್ ಗಳು ನೋಡಲು ಹಾಗೂ ತಿನ್ನಲು ವಿಭಿನ್ನವಾಗಿದ್ದು, ತಿಂದರೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆಯಂತೆ. ಇನ್ನು ಇವುಗಳಿಗೆ ಬೆಂಕಿ ಹಚ್ಚಿದರೆ ಪ್ಲಾಸ್ಟಿಕ್ ಹಾಗೇ ಉರಿಯುತ್ತವೆ. ಜೊತೆಗೆ ಕೊನೆಯಲ್ಲಿ ಕೆಲ ತ್ಯಾಜ್ಯ ವಸ್ತುಗಳು ಉಳಿಯುತ್ತವೆ. ಹೀಗಾಗಿ ಇದರಲ್ಲಿ ಪ್ಲಾಸ್ಟಿಕ್ ಇದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ.

     

  • ನೀವು ತಿನ್ನುವ ಸಕ್ಕರೆ ಆರೋಗ್ಯಕ್ಕೆ ಎಷ್ಟು ಸೇಫ್?- ನೀರಿಗೆ ಹಾಕಿ ಪರೀಕ್ಷೆ ಮಾಡಿ

    ನೀವು ತಿನ್ನುವ ಸಕ್ಕರೆ ಆರೋಗ್ಯಕ್ಕೆ ಎಷ್ಟು ಸೇಫ್?- ನೀರಿಗೆ ಹಾಕಿ ಪರೀಕ್ಷೆ ಮಾಡಿ

    -ಮಂಡ್ಯದಲ್ಲಿ ಅಕ್ಕಿಯಲ್ಲಿ ಸಿಕ್ತು ಪ್ಲಾಸ್ಟಿಕ್!

    ಚಿಕ್ಕಬಳ್ಳಾಪುರ: ನೀವು ಬಳಸುವ ಸಕ್ಕರೆ ಆರೋಗ್ಯಕ್ಕೆ ಎಷ್ಟು ಸೇಫ್ ಎಂಬುದನ್ನು ಒಮ್ಮೆ ನೀರಿಗೆ ಹಾಕಿ ಪರೀಕ್ಷೆ ಮಾಡಿ. ಕೆಲವು ದಿನಗಳ ಹಿಂದೆ ಅನ್ನಭಾಗ್ಯದ ಉಪ್ಪು ನೀಲಿ ಬಣ್ಣಕ್ಕೆ ತಿರುಗಿದ ಸುದ್ದಿ ಪ್ರಕಟವಾಗಿತ್ತು. ಇದೀಗ ಸಕ್ಕರೆಯ ಸರದಿ. ಚಿಕ್ಕಬಳ್ಳಾಪುರ ನಗರದ ಹೋಟೆಲ್‍ವೊಂದರಲ್ಲಿ ಸಕ್ಕರೆ ಹಸಿರು ಬಣ್ಣಕ್ಕೆ ತಿರುಗಿ ಜನರಲ್ಲಿ ಆತಂಕ ಉಂಟುಮಾಡಿದೆ.

    ಇಂದು ಬೆಳಗ್ಗೆ ಗ್ರಾಹಕ ಸ್ನೇಕ್ ಪ್ರಥ್ವಿರಾಜ್ ಎಂಬವರು ಮೊಸರಿನ ಜೊತೆ ಸಕ್ಕರೆ ಮಿಶ್ರಣ ಮಾಡಿ ಸೇವಿಸುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ಮತ್ತೆರೆಡು ಬಾರಿ ಇದೇ ರೀತಿ ಮೊಸರು ಹಾಗೂ ನೀರಿಗೆ ಸಕ್ಕರೆ ಮಿಶ್ರಣ ಮಾಡಿ ಪರಿಶೀಲನೆ ನಡೆಸಿದಾಗ ಸಕ್ಕರೆ ಮಿಶ್ರಿತ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದೆ. ಸಕ್ಕರೆಯಲ್ಲಿ ಯಾವೋದೋ ಕೆಮಿಕಲ್ ಸೇರಿರಬೇಕೆಂಬ ಅನುಮಾನ ಮೂಡಿದೆ. ಹೀಗಾಗಿ ಸಂಬಂಧಪಟ್ಟವರು ಸಕ್ಕರೆಯ ಗುಣಮಟ್ಟದ ಪರೀಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.

    ಪ್ಲಾಸ್ಟಿಕ್ ಅಕ್ಕಿ: ಪಡಿತರದಾರರಿಗೆ ಸೊಸೈಟಿಯಲ್ಲಿ ವಿತರಿಸಿರುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ವಸ್ತು ಪತ್ತೆಯಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿಯ ನಿವಾಸಿ ಪುಟ್ಟರಾಜು ಅವರು ಮಾರ್ಚ್ 23 ರಂದು ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 40 ಕೆಜಿ ಅಕ್ಕಿ ತೆಗೆದುಕೊಂಡಿದ್ದರು.

    ಕೆಲ ದಿನದ ಬಳಿಕ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಹೋಗಿ ಮಿಲ್ ಮಾಡಿಸಿಕೊಂಡು ಮನೆಗೆ ತಂದಿದ್ದಾರೆ. ಮನೆಯಲ್ಲಿ ರೊಟ್ಟಿ ಮಾಡಲು ಮುಂದಾದಾಗ ಪ್ಲಾಸ್ಟಿಕ್ ವಸ್ತು ಸಿಕ್ಕಿದೆ. ಬಳಿಕ ಮಿಲ್ ಮಾಡಿಸಿದ ಅಕ್ಕಿಯನ್ನು ಪರಿಶೀಲನೆ ನಡೆಸಿದಾಗ ಸುಮಾರು ಒಂದು ಹಿಡಿಯಷ್ಟು ಪ್ಲಾಸ್ಟಿಕ್ ವಸ್ತು ಪತ್ತೆಯಾಗಿದೆ ಎಂದು ಹೇಳಲಾಗಿದೆ.

    https://www.youtube.com/watch?v=2xgKCWaCgJs