Tag: ಸಂಸ್ಕೃತ ಭಾಷೆ

  • ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಅರ್ಜಿ – ಛೀಮಾರಿ ಹಾಕಿ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್

    ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಅರ್ಜಿ – ಛೀಮಾರಿ ಹಾಕಿ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್

    ನವದೆಹಲಿ: ಸಂಸ್ಕೃತ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಕೆ.ಜಿ ವಂಝಾರ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂಆರ್ ಷಾ ಮತ್ತು ಕೃಷ್ಣ ಮುರಾರಿ ಅವರ ಪೀಠವು ವಜಾ ಮಾಡಿದೆ.

    ವಿಚಾರಣೆ ವೇಳೆ ಅರ್ಜಿದಾರರಿಗೆ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಂಸತ್‍ನಲ್ಲಿ ಚರ್ಚೆ ಮಾಡಬೇಕು, ನ್ಯಾಯಾಲಯದಲ್ಲಿ ಅಲ್ಲ. ನಾವು ಏಕೆ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಬೇಕು, ನಿಮ್ಮ ಪ್ರಚಾರ ನೀಡಬೇಕೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹೇಳಿದ್ದನ್ನೇ ಹೇಳೋ ಕಿಸಬಾಯಿ ದಾಸನಂತೆ ಸುಳ್ಳು ಭಾಷಣ ಬಿಟ್ಟು ಸತ್ಯ ಮಾತಾಡ್ತೀರಾ: ಮೋದಿಗೆ ಗುಂಡೂರಾವ್ ಪ್ರಶ್ನೆ

    ಭಾಷೆಯ ಬದಲಾವಣೆ ಬಗ್ಗೆ ಸಂವಿಧಾನದ ತಿದ್ದುಪಡಿಯಾಗಬೇಕು, ಭಾಷೆಯನ್ನು ಬದಲಿಸಲು ಕೋರ್ಟ್‍ನಿಂದ ಸಾಧ್ಯವಿಲ್ಲ. ಹೀಗಾಗಿ ನಾವು ಈ ಅರ್ಜಿಯನ್ನು ವಿಚಾರಣೆ ನಡೆಸುವುದಿಲ್ಲ. ಅರ್ಜಿ ವಜಾ ಮಾಡುತ್ತಿದ್ದೇವೆ ಎಂದು ನ್ಯಾಯಾಧೀಶರು ಹೇಳಿದರು. ಅಲ್ಲದೇ ಈ ಬಗ್ಗೆ ಮನವಿಗಳಿದ್ದರೆ ವಕೀಲರು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಸ್ವತಂತ್ರವಾಗಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ; ವಿಕಾಸ ದರ್ಶನಕ್ಕೋ.. ವಿನಾಶ ದರ್ಶನಕ್ಕೋ ಎಂದು ಸಿದ್ದು ಲೇವಡಿ

    ನಿವೃತ್ತ ಐಎಎಸ್ ಅಧಿಕಾರಿ ಹಾಗೂ ವಕೀಲ ಕೆ.ಜಿ.ವಂಝಾರ ಈ ಪಿಐಎಲ್ ಸಲ್ಲಿಸಿದ್ದರು. ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಇಂತಹ ಕ್ರಮವು ದೇಶದ ಅಧಿಕೃತ ಭಾಷೆಯಾಗಿ ಇಂಗ್ಲಿಷ್ ಮತ್ತು ಹಿಂದಿಯನ್ನು ಒದಗಿಸುವ ಪ್ರಸ್ತುತ ಸಾಂವಿಧಾನಿಕ ನಿಬಂಧನೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಸಂಸ್ಕೃತ ಉಳಿಸಲು ಅವಿರತ ಪ್ರಯತ್ನ ಮಾಡ್ತಿದ್ದಾರೆ ವಿಜಯಪುರದ ರಾಮಸಿಂಗ್

    ಸಂಸ್ಕೃತ ಉಳಿಸಲು ಅವಿರತ ಪ್ರಯತ್ನ ಮಾಡ್ತಿದ್ದಾರೆ ವಿಜಯಪುರದ ರಾಮಸಿಂಗ್

    – ಬಟ್ಟೆ ಅಂಗಡಿಯಲ್ಲಿ ಉಚಿತ ಬೋಧನೆ

    ವಿಜಯಪುರ: ಸಂಸ್ಕೃತ ಭಾಷೆ ನಮ್ಮ ಭಾರತದ ಮೂಲ ಭಾಷೆ ಅಂತಾರೆ. ಆದರೆ ಅದೆಷ್ಟೋ ಜನ ಸಂಸ್ಕೃತ ಅಂದರೆ ಬಲು ದೂರ ಓಡುತ್ತಾರೆ. ಎಲ್ಲರಿಗೂ ಸಂಸ್ಕೃತ ಭಾಷೆ ಮಾತನಾಡಲು ಬರಲ್ಲ. ಅದು ತುಂಬ ಕಷ್ಟ ಅಂತಾರೆ. ಆದರೆ ಪ್ರಪಂಚದಲ್ಲೇ ಅತೀ ಸರಳ ಭಾಷೆ ಅಂದರೆ ಅದು ಸಂಸ್ಕೃತ ಭಾಷೆಯಾಗಿದೆ. ಅದನ್ನ ಯಾರು ಬೇಕಾದರೂ ಅತೀ ಸರಳವಾಗಿ ಮಾತನಾಡಬಹುದು ಎಂಬುದನ್ನ ಪ್ರಾಯೋಗಿಕವಾಗಿ ನಿರೂಪಿಸಿದ್ದಾರೆ. ಅಲ್ಲದೆ ತಮ್ಮ ಅಂಗಡಿಯನ್ನೇ ಪಾಠ ಶಾಲೆಯನ್ನಾಗಿ ಮಾಡಿಕೊಂಡು ಜಾತಿ ಬೇಧವಿಲ್ಲದೆ ಉಚಿತವಾಗಿ ಕಲಿಸುವ ಮೂಲಕ ಸಂಸ್ಕೃತ ಭಾಷೆಯನ್ನು ಬೆಳೆಸಿಕೊಂಡು ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಹೌದು. ಇದು ವಿಜಯಪುರದ ಹುತಾತ್ಮ ಚೌಕ್ ನಲ್ಲಿ ರಾಮಸಿಂಗ್ ರಜಪೂತ್ ಅವರ 3 ಆರ್ ಬಟ್ಟೆ ಅಂಗಡಿ ಇದೆ. ರಜಪೂತ್ ಅವರು ಅಂಗಡಿಯ ಮಾಲೀಕರು, ಜೊತೆಗೆ ಸಂಸ್ಕೃತ ಭಾಷೆ ಕಲಿಸುವ ಶಿಕ್ಷಕರು ಕೂಡ. ಕಳೆದ 15 ವರ್ಷಗಳಿಂದ ಇದೇ ರೀತಿ ಉಚಿತವಾಗಿ ಆಸಕ್ತರಿಗೆ ತಮ್ಮ ಅಂಗಡಿಯಲ್ಲೇ ಬಿಡುವು ಮಾಡಿಕೊಂಡು ಸಂಸ್ಕೃತ ಭಾಷೆಯನ್ನ ಕಲಿಸುತ್ತಿದ್ದಾರೆ. ಸಂಸ್ಕೃತ ಭಾಷೆಯಿಂದ ಮನಃಶುದ್ಧಿ ಜೊತೆಗೆ ಉತ್ತಮ ಆಲೋಚನೆ ಸೇರಿದಂತೆ ಒಳ್ಳೆಯ ಮನೋಭಾವನೆ ಬರುತ್ತದೆ ಎಂದು ರಾಮಸಿಂಗ್ ಹೇಳುತ್ತಾರೆ.

    ಇನ್ನೊಂದು ವಿಶೇಷ ಅಂದರೆ ಈ ಅಂಗಡಿಯಲ್ಲಿ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯದವರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಪರಸ್ಪರ ಪ್ರತಿನಿತ್ಯ ಸಂಸ್ಕೃತದಲ್ಲೇ ಮಾತನಾಡುತ್ತಾರೆ. ಮುಸ್ಲಿಂ ಯುವಕರು ಅತೀ ಸರಳವಾಗಿ ಸಂಸ್ಕೃತವನ್ನ ಮಾತನಾಡುತ್ತಾರೆ. ಕೆಲಸದೊಂದಿಗೆ ಮಧ್ಯಾಹ್ನದ ವೇಳೆ ಸಂಸ್ಕೃತ ಪಾಠಗಳಿಗೆ ಹಾಜರಾಗುತ್ತಾರೆ. ಇದರ ಜೊತೆಗೆ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದಲು ಆಸಕ್ತ ವಿದ್ಯಾರ್ಥಿಗಳು ಬಂದು ಸಂಸ್ಕೃತ ಭಾಷೆ ಕಲಿಯುತ್ತಿದ್ದಾರೆ. ಸಂಸ್ಕೃತ ಭಾಷೆ ತುಂಬಾನೇ ಸರಳವಾಗಿದೆ. ಇದನ್ನ ಯಾರು ಬೇಕಾದರೂ ಕಲಿಯಬಹುದು. ಇದರಿಂದ ಒಳ್ಳೆಯದಾಗುತ್ತದೆ. ಅಂಗಡಿಗೆ ಬಂದ ಗ್ರಾಹಕರು, ನಾವು ಸಂಸ್ಕೃತ ಮಾತನಾಡುವುದನ್ನ ನೋಡಿ ಗೌರವ ಕೊಡುತ್ತಾರೆ. ಇದರಿಂದ ಖುಷಿ ಆಗುತ್ತದೆ ಎಂದು ಅಂಗಡಿಯ ಕೆಲಸಗಾರ ಸಮೀರ ಹೇಳಿದ್ದಾರೆ.

    ಯಾರಾದರೂ 10 ಜನ ಸೇರಿದರೆ ಸಾಕು ರಾಮ್ ಸಿಂಗ್ ಅವರು ಅಲ್ಲಿಗೆ ಹೋಗಿ ಉಚಿತವಾಗಿ ಸಂಸ್ಕೃತ ಪಾಠಗಳನ್ನ ಮಾಡಿ ಬರುತ್ತಾರೆ. ಒಟ್ಟಿನಲ್ಲಿ ನಮ್ಮ ದೇಶದ ಪುರಾತನ ಹಾಗೂ ಮೂಲ ಭಾಷೆ ಸಂಸ್ಕೃತ ನಶಿಸಲು ಹೊರಟಿದೆ. ಅಂಥದ್ದರಲ್ಲಿ ಉಚಿತವಾಗಿ ಸಂಸ್ಕೃತ ಭಾಷೆ ಕಲಿಸುವುದರ ಜೊತೆಗೆ ಅನ್ಯ ಭಾಷಿಕರಿಗೂ ಸಂಸ್ಕೃತ ಕಲಿಸುತ್ತಿರುವ ರಾಮ್ ಸಿಂಗ್ ಇತರರಿಗೆ ಮಾದರಿಯಾಗಿದ್ದಾರೆ.