Tag: ಸಂಸದ ಪ್ರತಾಪ್ ಸಿಂಹ

  • ಶಾಸಕ ಶ್ರೀರಾಮುಲುಗೆ ಕನ್ನಡ, ಕಾನೂನು ಪಾಠ ಮಾಡಿದ ಮಾಜಿ ಸಿಎಂ

    ಶಾಸಕ ಶ್ರೀರಾಮುಲುಗೆ ಕನ್ನಡ, ಕಾನೂನು ಪಾಠ ಮಾಡಿದ ಮಾಜಿ ಸಿಎಂ

    ಬಳ್ಳಾರಿ: ಬಳ್ಳಾರಿ ಲೋಕಸಭಾ ಉಪಚುನಾವಣೆ ರಂಗೇರುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಶ್ರೀರಾಮುಲು ವಾಗ್ದಾಳಿ ಮುಂದುವರಿದಿದೆ. ಈ ಇಬ್ಬರು ನಾಯಕರು ಉಚ್ಛಾರ ದೋಷ, ಕನ್ನಡ ವ್ಯಾಕರಣ ಪಾಠಕ್ಕೆ ಇಳಿದಿದ್ದಾರೆ.

    ನನಗೆ ಕನ್ನಡ ಹೇಳಿಕೊಡುತ್ತಾರಲ್ಲಪಾ… ನಾನು ಲಕ್ಷ ಹಾಗೂ ಪಕ್ಷ ಅಂತಾ ಸರಿಯಾಗಿ ಮಾತನಾಡುತ್ತೇನಾ ಎಂದ ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ‘ಕ್ಷ’ ಅನ್ನೋದು ಸ್ವತಂತ್ರ ಪದವೇ? ಅಥವಾ ಸಂಯುಕ್ತ ಪದವೇ ಅಂತಾ ಶ್ರೀರಾಮುಲು ಹೇಳಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

    ಸ್ವರ ಅಂದ್ರೆ ಏನು? ವ್ಯಂಜನ, ಅನುನಾಸಿಕ, ಅಲ್ಪಪ್ರಾಣ, ದೀರ್ಘಸ್ವರ, ಒತ್ತಾಕ್ಷರಗಳ ಬಗ್ಗೆ ಶ್ರೀರಾಮುಲು ಅವರಿಗೆ ಗೊತ್ತಿದ್ದರೆ ಹೇಳಲಿ ನೋಡೋಣ ಎಂದು ತಿರುಗೇಟು ಕೊಟ್ಟ ಮಾಜಿ ಸಿಎಂ, ಶಾಸಕರು ಹಾಗೂ ಸಂಸದರು ಆಗಲು ಕನ್ನಡ ವ್ಯಾಕರಣ ಹಾಗೂ ಉಚ್ಛಾರಣೆ ಮಾನದಂಡವಲ್ಲ ಎಂದರು.

    ನಾನು ಎಸ್‍ಎಸ್‍ಎಲ್ ವರೆಗೆ ನಾನು ಚಪ್ಪಲಿ ಹಾಕದೇ ಶಾಲೆಗೆ ಹೋಗುತ್ತಿದ್ದೆ. ಓದುವ ಉದ್ದೇಶದಿಂದ ರೂಮ್ ಮಾಡಿಕೊಂಡು, ಅಡುಗೆ ಮಾಡಿಕೊಂಡು ಜೀವನ ಕಳೆದಿರುವೆ. ಶಿಕ್ಷಣ ಪಡೆದರೆ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಸ್ಪರ್ಧೆ ನೀಡಲು ಸಾಧ್ಯವಾಗುತ್ತದೆ ಎನ್ನುವ ಅರ್ಥದಲ್ಲಿ ಶ್ರೀರಾಮುಲು ಅವರಿಗೆ ಹೇಳಿದ್ದೆ ಎಂದರು.

    ಕನ್ನಡ ವ್ಯಾಕರಣದ ಜೊತೆಗೆ ಕಾನೂನು ಪಾಠ ಕೂಡ ಮಾಡಿದರು. ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 302 (ಕೊಲೆ), 420 (ಮೋಸ) ಹೀಗೆ ಸೆಕ್ಷನ್‍ಗಳ ಪಾಠ ಮಾಡಿದರು. ಜನಾರ್ದನ ರೆಡ್ಡಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ ಅವರು, ಜನಾರ್ದನ ರೆಡ್ಡಿ ಲೂಟಿ ಹೊಡೆದು, ಶ್ರೀರಾಮುಲು ಅವರನ್ನು ಕೈಗೊಂಬೆಯಾಗಿ ಆಡಿಸುತ್ತಾರೆ. ಈ ಇಬ್ಬರು ನಾಯಕರ ಸಾಧನೆ ಇಷ್ಟೇ ಎಂದು ಲೇವಡಿ ಮಾಡಿದರು.

    ರಫೇಲ್ ಹರಣದ ಕೈಬಿಟ್ಟು, ಬ್ಯಾಂಕ್‍ಗಳಿಗೆ ವಂಚನೆ ಮಾಡಿ ವಿದೇಶ ಸೇರಿರುವ ನೀರವ್ ಮೋದಿ ಹಾಗೂ ವಿಜಯ್ ಮಲ್ಯ ಹೆಸರು ಬಳಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ, ನಾನು ಚೌಕಿದಾರ್ ಅಂತಾರೆ. ಆದರೆ ಅವರ ಆಡಳಿತ ಅವಧಿಯಲ್ಲಿಯೇ ನೀರವ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಬ್ಯಾಂಕ್‍ಗೆ ಸಾಲ ಮರುಪಾವತಿ ಮಾಡದೇ ವಿದೇಶ ಸೇರಿಕೊಂಡಿದ್ದಾರೆ. ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ಹೇಳಿಯೇ ವಿಜಯ್ ಮಲ್ಯ ಲಂಡನ್‍ಗೆ ಹೋಗಿದ್ದು ಎಂದು ಆರೋಪಿಸಿದರು.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಲಗಿದ ಕೂಡಲೇ ಅವರಿಗೆ ವಿಧಾನಸೌಧ ಮೂರನೇ ಮಹಡಿ ಕಾಣಿಸುತ್ತದೆ. ಅವರಿಗೆ ನಿದ್ರೆನೇ ಬರಲ್ಲ. ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ನೂರು ಬಾರಿ ಹೇಳಿದರೂ ಸರ್ಕಾರ ಬೀಳಲ್ಲ ಎಂದು ಲೇವಡಿ ಮಾಡಿದರು.

    ಜಿಲ್ಲೆಯಲ್ಲಿ 6 ಜನ ಶಾಸಕರು ಕಾಂಗ್ರೆಸ್‍ನವರಿದ್ದಾರೆ. ನೀತಿ ಸಂಹಿತೆ ಇದೆ ಹೇಳಬಾರದು. ಆದರೂ ಹೇಳುತ್ತಿರುವೆ, ನವೆಂಬರ್ 3ರಂದು ಚುನಾವಣೆ ನಡೆದ ಬಳಿಕ, ಜಿಲ್ಲೆಯ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನಿಡುತ್ತೇವೆ ಎಂದ ಸಿದ್ದರಾಮಯ್ಯ ಭರವಸೆ ನೀಡಿದರು.

    ಸಂಸದ ಪ್ರತಾಪ್ ಸಿಂಹ ಅವರಿಗೆ ಮೈಸೂರು ರಾಜಕೀಯ ಅರ್ಥ ಆಗಲ್ಲ. ನಾನು ಅಲ್ಲಿ ಏಳು ಬಾರಿ ಗೆದ್ದಿದ್ದೇನೆ. ಅವರು ಬಿಜೆಪಿಗೆ ಬಂದ್ರು, ಟಿಕೆಟ್ ಸಿಕ್ಕಿತು ಗೆದ್ದರು. ಆದರೆ ಅವರು ಮೂಲತಃ ಸಕಲೇಶಪುರದವರು, ಮೈಸೂರಿನವರಲ್ಲ. ಪ್ರತಾಪ ಸಿಂಹ ಅವರಷ್ಟು ಸುಳ್ಳು ಹೇಳುವ ವ್ಯಕ್ತಿ ಇನ್ನೊಬ್ಬರಿಲ್ಲ ಎಂದು ಟೀಕಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೋದಿ ನೋಟ್ ಬ್ಯಾನ್ ಹೊಡೆತಕ್ಕೆ ಸಿದ್ದರಾಮಯ್ಯ ಆರ್ಥಿಕ ದಿವಾಳಿ: ಪ್ರತಾಪ್ ಸಿಂಹ

    ಮೋದಿ ನೋಟ್ ಬ್ಯಾನ್ ಹೊಡೆತಕ್ಕೆ ಸಿದ್ದರಾಮಯ್ಯ ಆರ್ಥಿಕ ದಿವಾಳಿ: ಪ್ರತಾಪ್ ಸಿಂಹ

    ಬಾಗಲಕೋಟೆ: ಭ್ರಷ್ಟರಾಜಕಾರಣಿಗಳು, ಅಧಿಕಾರಿಗಳು, ರಿಯಲ್ ಎಸ್ಟೇಟ್ ಕುಳಗಳು ಮೋದಿ ಅವರ ನೋಟ್ ಬ್ಯಾನ್ ಹೊಡೆತಕ್ಕೆ ಆರ್ಥಿಕ ದಿವಾಳಿಯಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಪರಿಸ್ಥಿತಿಯೂ ಹಾಗೆಯೇ ಆಗಿದೆ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

    ಜಮಖಂಡಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಪ್ರಚಾರಕ್ಕಾಗಿ ಆಗಮಿಸಿದ ಪ್ರತಾಪ್ ಸಿಂಹ, ತಾಲೂಕಿನ ಸಿದ್ದಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಸಿದ್ದರಾಮಯ್ಯ ಅವರು ಮಾಡಿಕೊಂಡಿದ್ದ ಬೇನಾಮಿ ಆಸ್ತಿ, ಅಕ್ರಮ ದುಡ್ಡು ಹಾಗೂ ಬೇನಾಮಿ ಕಂಪನಿಗೆ ಸರ್ಕಾರಿ ಭೂಮಿ ಕೊಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡಿದ್ದರಿಂದ ಸಿದ್ದರಾಮಯ್ಯ ಆರ್ಥಿಕವಾಗಿ ದಿವಾಳಿ ಆಗಿದ್ದಾರೆ ಎಂದು ಆರೋಪಿಸಿದರು.

    ಏರ್ ಸೆಲ್ ಪ್ರಕರಣದಲ್ಲಿ ಜಾರಿ ನಿರ್ದೇಶನಲಯ(ಇಡಿ) ಸಲ್ಲಿಸಿದ್ದ ಚಾರ್ಜ್ ಶೀಟ್‍ನಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಎ1 ಆರೋಪಿ ಎಂದು ಉಲ್ಲೇಖಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಅವರು, ಸಿದ್ದು ಕ್ರಿಕೆಟ್ ಕಾಮೆಂಟ್ರಿ ತರಹ ಒಂದು ಸೈಕಲ್ ಬಿದ್ದರೆ ಎಲ್ಲಾ ಉದುರಿ ಹೋಗುತ್ತವೆ ಎನ್ನುತ್ತಾರೆ ಅಲ್ವಾ, ಅದರಂತೆ ಕಾಂಗ್ರೆಸ್ಸಿನ ಒಂದೊಂದು ಭ್ರಷ್ಟರ ವಿಕೆಟ್ ಗಳು ಉದುರಿ ಹೋಗುತ್ತವೆ. ಪಿ.ಚಿದಂಬರಂ ಅವರು ಮತ್ತೆ ಲೆಟರ್ ಆಪ್ ಅಂಡರ್ ಸ್ಟ್ಯಾಂಡಿಂಗ್ ಕೊಟ್ಟಿದ್ದರೂ ಹೆಚ್ಚಿನ ಸಾಲ ಕೊಡಿ ಎಂದು ಆರ್‍ಬಿಐ ನವರಿಗೆ ಯಾಕೆ ನಿರ್ದೇಶನಕ ಕೊಟ್ಟರು ಎನ್ನುವುದನ್ನು ಮುಂದೆ ಬಯಲು ಮಾಡುತ್ತೇನೆ ಎಂದರು.

    ವೀರಶೈವ-ಲಿಂಗಾಯತ ವಿಚಾರದಲ್ಲಿ ಡಿಕೆಶಿ, ಸಿದ್ದು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರದ್ದು ಪಶ್ಚಾತ್ತಾಪದ ಹೇಳಿಕೆ ಅಲ್ಲ. ಸೋಲಿನ ಭಯದಿಂದ ನಾಟಕ ಆಡುತ್ತಿದ್ದಾರೆ. ಕಾಂಗ್ರೆಸ್ ಧರ್ಮ ಒಡೆಯುವ ಕೆಲಸಕ್ಕೆ ಜನರು ಪಾಠ ಕಲಿಸಿದ್ದಾರೆ. ಈಗ ಉಪ ಚುನಾವಣೆಯಲ್ಲಿ ಸೋಲಿನ ಭಯದಿಂದ ತಪ್ಪು ಮಾಡಿದ್ದೇವು ಎನ್ನುವ ನಾಟಕ ಮಾಡುತ್ತಾರೆ. ಸಿಎಂ ಮಾಡುತ್ತೇನೆ. ಅಂದರೆ ಯಡಿಯೂರಪ್ಪ ದೇವೇಗೌಡರ ಕಾಲು ಹಿಡಿತಾರೆ ಅಂದಿದ್ದ ದಿನೇಶ್ ಗುಂಡೂರಾವ್ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪ್ ಸಿಂಹ, ಅಪ್ಪನಾಣೆಗೂ ಕುಮಾರಸ್ವಾಮಿ ಸಿಎಂ ಆಗಲ್ಲ ಎಂದು ಹೇಳಿದವರು ಅವರಪ್ಪನ ಬಳಿಯೇ ಹೋಗಿ ಮಗನನ್ನ ಸಿಎಂ ಮಾಡುತ್ತೇನೆ ಎಂದು ಮನೆಗೆ ಹೋದವರು ಯಾರು? ಯಡಿಯೂರಪ್ಪನಾ? ಸಿದ್ದರಾಮಯ್ಯನಾ? ಮೊದಲು ಹೇಳಲಿ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ದೇವೇಗೌಡರ ಮನೆ ಹೋಗಿ ಕುಳಿತು ಕೊಂಡಿದ್ದು ಇದೇ ಗುಂಡೂರಾವ್ ಹಾಗೂ ಅವರ ಗುರು ಸಿದ್ದರಾಮಯ್ಯ ಅಲ್ವೇ ಎಂದು ಪ್ರಶ್ನಿಸಿ ಟಾಂಗ್ ನೀಡಿದರು.

    ಇದೇ ವೇಳೆ ನೀರವ್ ಮೋದಿ ಆಸ್ತಿ ಜಪ್ತಿ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಪ್ರತಾಪ್ ಸಿಂಹ, ನಿಮ್ಮ ಮಾಧ್ಯಮಕ್ಕೆ ಬಂದು ಈ ಕುರಿತು ಸವಿಸ್ತಾರವಾಗಿ ಮಾತನಾಡುತ್ತೇನೆ ಎಂದು ಉತ್ತರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನಲ್ಲಿ Most Popular Politician ಯಾರು ಕೇಳಿದ್ರೆ ನಿಮಗೆ ಗೊತ್ತಾಗತ್ತೆ- ಪ್ರತಾಪ್ ಸಿಂಹ

    ಕೊಡಗಿನಲ್ಲಿ Most Popular Politician ಯಾರು ಕೇಳಿದ್ರೆ ನಿಮಗೆ ಗೊತ್ತಾಗತ್ತೆ- ಪ್ರತಾಪ್ ಸಿಂಹ

    ಮೈಸೂರು: ಕೊಡಗಿಗೆ ಹೋಗಿ ಅಲ್ಲಿನ ಜನರಲ್ಲಿ ಇಲ್ಲಿಯ ಮೋಸ್ಟ್ ಪಾಪ್ಯುಲರ್ ಪೊಲಿಟೀಶಿಯನ್ ಯಾರು ಅಂತಾ ಕೇಳಿ ಆಗ ನಿಮಗೆ ಅಲ್ಲಿಂದಲೇ ಉತ್ತರ ಸಿಗುತ್ತೆ ಅಂತ ಸಂಸದ ಪ್ರತಾಪ್ ಸಿಂಹ ಅವರು ಹೇಳಿದ್ದಾರೆ.

    ಇತ್ತೀಚೆಗೆ ಕೊಡಗಿನಲ್ಲಿ ಬಿಜೆಪಿ ಮುಖಂಡ ಎಂ.ಬಿ ದೇವಯ್ಯ ಅವರು ಸಂಸದರ ವಿರುದ್ಧ ಹರಿಹಾಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನೆರೆ ಪ್ರವಾಹ ಹಾಗೂ ಭೂಕುಸಿತವಾದ ಬಳಿಕ ಮಡಿಕೇರಿಯಲ್ಲಿ ಪ್ರತೀ ದಿನ ಕುಳಿತುಕೊಂಡು, ಪ್ರತೀ ದಿನ ಆಯಾ ಪ್ರದೇಶಗಳಿಗೆ ಹೋಗಿ ಕೆಲಸ ಮಾಡಿರುವಂತದ್ದು ಕೇಂದ್ರದ ರಕ್ಷಣಾ ಕಾತೆ ಸಚಿವರನ್ನು ಕರೆದುಕೊಂಡು ಬಂದಿದ್ದು, ಈ ಎಲ್ಲವೂ ಕೂಡ ಕೊಡಗಿನ ಜನಕ್ಕೆ ಗೊತ್ತು. ಅಲ್ಲಿನ ಜನರಿಗೋಸ್ಕರ ಏನ್ ಕೆಲಸ ಮಾಡಿದ್ದೇನೆಂದು ಗೊತ್ತು ಅಂತ ತಿಳಿಸಿದ್ರು.

    ಕೊಡಗಿನಲ್ಲಿ ಮೋಸ್ಟ್ ಪಾಪ್ಯುಲರ್ ಪೊಲಿಟೀಶಿಯನ್ ಯಾರು ಅಂತಾ ಕೇಳಿ ಆಗ ನಿಮಗೆ ಅಲ್ಲಿಂದಲೇ ಉತ್ತರ ಸಿಗುತ್ತೆ. ಯಾಕಂದ್ರೆ ಅಷ್ಟು ನಾನು ಕೊಡಗಿನ ಜನರ ಜೊತೆ ಇದ್ದೇನೆ. ಟಿಪ್ಪು ಜಯಂತಿ ಇದ್ದಾಗಲೂ ವಿರೋಧಿಸಿದವನೂ ನಾನೇ. ಅವತ್ತೂ ಕೂಡ ನಾನು ಪ್ರಬಲವಾದ ಹೋರಾಟ ಮಾಡಿದ್ದೆ. ಇಷ್ಟು ಮಾತ್ರವಲ್ಲದೇ ಕೊಡಗಿನಲ್ಲಿ ಆಕ್ರಮಣಗಳಾದಗಲೂ ಮುಂದೆ ನಿಂತಿದ್ದೆ. ಈ ಎಲ್ಲಾ ಕಾರಣಗಳಿಂದ ಕೊಡಗಿನ ಜನಕ್ಕೆ ನಾನು ಏನ್ ಅನ್ನೋದು ಚೆನ್ನಾಗಿ ಗೊತ್ತಿದೆ. ಹೀಗಾಗಿ ಅಪ್ರಸ್ತುತ ವ್ಯಕ್ತಿಗಳ ವ್ಯರ್ಥ ಆಲಾಪಗಳಿಗೆ ನಾನು ಉತ್ತರಿಸಲ್ಲ ಅಂತ ಅವರು ಹೇಳಿದ್ರು.

    ಇದೇ ವೇಳೆ ಮೈಸೂರಿನಲ್ಲಿ ಬಿಜೆಪಿಯವರು ಆಪರೇಷನ್ ಕಮಲ ಮಾಡ್ತಿದ್ದಾರೆ ಅನ್ನೋ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ನರಸಿಂಹರಾವ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಛಾದ ಸಂಸದರಿಗೆ ಸೂಟ್ ಕೇಸ್ ಕೊಟ್ಟು ಖರೀದಿ ಮಾಡಿದ ಹಿನ್ನೆಲೆ ಕಾಂಗ್ರೆಸ್‍ನದ್ದಾಗಿದೆ ಎಂದು ತಿರುಗೇಟು ಕೊಟ್ಟರು.

    2008ರಲ್ಲಿ ಅಮೆರಿಕದ ಜೊತೆ ನಾಗರಿಕ ಅಣು ಒಪ್ಪಂದ ಸಹಿ ಹಾಕಿದ ಸಂದರ್ಭದಲ್ಲಿ ಎಡ ಪಕ್ಷಗಳು ಸರ್ಕಾರಕ್ಕೆ ನೀಡಿದದ್ದ ಬೆಂಬಲ ವಾಪಸ್ ಪಡೆದಾಗ ನಮ್ಮ ಪಕ್ಷದಲ್ಲೇ ಇದ್ದಂತಹ ಉಡುಪಿಯ ಸಂಸದರಿಗೆ ಚಾಮರಾಜನಗರದಲ್ಲಿರುವಂತಹ ಜೆಡಿಎಸ್ ನ ಸಂಸದರಿಗೆ, ಬಿಜೆಪಿಯ ಉತ್ತರದ ಸಂಸದರಿಗೆ ಸೂಟ್ ಕೇಸ್ ಕೊಟ್ಟು ಖರೀದಿ ಮಾಡಿ ಇಡೀ ದೇಶದಲ್ಲಿ ಕೆಟ್ಟ ಚಾಳಿಯನ್ನು ಆರಂಭ ಮಾಡಿದ್ದೇ ಕಾಂಗ್ರೆಸ್ ಅಂತ ಅವರು ಗಂಭೀರವಾಗಿ ಆರೋಪಿಸುವ ಮೂಲಕ ತಿರುಗೇಟು ನೀಡಿದರು.

    ಕಾಂಗ್ರೆಸ್ ಪಕ್ಷದ ಶಾಸಕರೇ ದುರ್ಬಲ ಮನಸ್ಥಿತಿಯನ್ನು ಹೊಂದಿದ್ದಾರೆ ಎಂಬ ಭಾವನೆ ಹಾಗೂ ಭಯ ಅವರನ್ನು ಕಾಡುತ್ತಿದೆ. ಹೀಗಾಗಿ ಅವರು ಈ ರೀತಿ ವಿನಾಕಾರಣವಾದ ಆರೋಪಗಳನ್ನು ಮಾಡುತ್ತಿದ್ದಾರೆ ಅಂತ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=bxDEU8M2bRY

  • ಕೊಡಗಿನ ಸಂಪೂರ್ಣ ಸಾಲಮನ್ನಾ ಮಾಡಿ- ಸರ್ಕಾರಕ್ಕೆ ಪ್ರತಾಪ್ ಸಿಂಹ ಮನವಿ

    ಕೊಡಗಿನ ಸಂಪೂರ್ಣ ಸಾಲಮನ್ನಾ ಮಾಡಿ- ಸರ್ಕಾರಕ್ಕೆ ಪ್ರತಾಪ್ ಸಿಂಹ ಮನವಿ

    ಮಡಿಕೇರಿ: ಗುಡ್ಡ ಕುಸಿತ ಹಾಗೂ ಮಳೆಯಿಂದ ಭಾರೀ ಅನಾಹುತ ಸೃಷ್ಟಿತಯಾಗಿದ್ದ ಕೊಡಗಿನ ಜನರ ಸಂಪೂರ್ಣ ಸಾಲಮನ್ನಾ ಮಾಡಿಕೊಡುವಂತೆ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರಲ್ಲಿ ಮನವಿಮಾಡಿಕೊಂಡಿದ್ದಾರೆ.

    ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ಕೊಡಗಿನಲ್ಲಿ 1709 ಮನೆಗಳಿಗೆ ಪರಿಹಾರ ಕಾರ್ಯವನ್ನು ಎನ್‍ಡಿಆರ್‍ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ)ದಿಂದ ಕೊಡಲಾಗಿದೆ. ಅದು ಗರಿಷ್ಠ ಅಂದ್ರೆ 1 ಲಕ್ಷ ಅರೆಬರೆ ಡ್ಯಾಮೇಜ್ ಆದವರಿಗೆ 50,00 ಅಥವಾ 75,000 ಇರಬಹುದು. ಹೀಗೆ ಒಟ್ಟಾರೆ ಮೊತ್ತ 5,45,37,541 ರೂ. ವನ್ನು ಎನ್ ಡಿಆರ್ ಎಫ್  ನಲ್ಲಿ ಅನುದಾನ ಕೊಡಲಾಗಿದೆ ಅಂತ ವಿವರಿಸಿದ್ರು.

    ಮುಂದಿನ 3 ತಿಂಗಳ ಕಾಲ ಕ್ರಾಪ್ ಲೋನ್ ಅಥವಾ ಟರ್ಮ್ ಲೋನ್ ವಸೂಲಾತಿಗೆ ಇಡೀ ಕೊಡಗಿನಲ್ಲಿ ಎಲ್ಲೂ ಹೋಗಕೂಡದು. ಕೊಡಗಿನಲ್ಲಿ 6 ಪಂಚಾಯ್ತಿ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿತ ಹಾಗೂ ಮಳೆಯಿಂದಾದ ಅನಾಹುತಗಳು ಜಾಸ್ತಿ ಇವೆ. ಇಡೀ ಕೊಡಗಿನಾದ್ಯಂತ ಧಾರಕಾರವಾಗಿ ಸುರಿದಂತಹ ಮಳೆಯಿಂದಾಗಿ ಕಾಫಿ, ಮೆಣಸು ಎಲ್ಲವೂ ಸಂಪೂರ್ಣವಾಗಿ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಒಕ್ಕೋರಲಿನಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ ಅಂತ ಹೇಳಿದ್ರು.

    3 ತಿಂಗಳ ಕಾಲ ಸಾಲ ವಸೂಲಾತಿಗೆ ಹೋಗಬೇಡಿ ಅಂತ ಈಗಾಗಲೇ ಹೇಳಿದ್ದೇವೆ. ಈ ಮೂರು ತಿಂಗಳೊಳಗೆ ಕೊಡಗಿಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಗಳನ್ನು ಮಾಡಿ, ಈ ವರ್ಷ ಕೊಡಗಿನ ಸಂಪೂರ್ಣ ಸಾಲ ಮನ್ನಾ ಮಾಡಿ ಅಂತ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಳೆಯಿಂದ ಉಂಟಾದ ನಷ್ಟಕ್ಕೆ ನೀಡುತ್ತಿರುವ ಪರಿಹಾರ ಮೊತ್ತವನ್ನು ಹೆಚ್ಚಿಸಿ – ಸಂಸದ ಪ್ರತಾಪ್ ಸಿಂಹ ಮನವಿ

    ಮಳೆಯಿಂದ ಉಂಟಾದ ನಷ್ಟಕ್ಕೆ ನೀಡುತ್ತಿರುವ ಪರಿಹಾರ ಮೊತ್ತವನ್ನು ಹೆಚ್ಚಿಸಿ – ಸಂಸದ ಪ್ರತಾಪ್ ಸಿಂಹ ಮನವಿ

    ನವದೆಹಲಿ: ಕೊಡಗು ಹಾಗೂ ಕರಾವಳಿ ಕರ್ನಾಟಕ ಭಾಗದಲ್ಲಿ ಸತತ ಎರಡು ತಿಂಗಳಿನಿಂದ ಭಾರೀ ಮಳೆಯಿಂದಾಗಿ ಆಗಿರುವ ನಷ್ಟವನ್ನು ಸರಿಪಡಿಸಲು ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ(ಎನ್‍ಡಿಆರ್‍ಎಫ್) ಯಿಂದ ನೀಡುತ್ತಿರುವ ಸಹಾಯದ ಮೊತ್ತವನ್ನು ಹೆಚ್ಚಿಸುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.

    ಲೋಕಸಭಾ ಕಲಾಪದಲ್ಲಿ ಮಾತನಾಡಿದ ಅವರು, ತಮಿಳುನಾಡು ಸರ್ಕಾರ ಕರ್ನಾಟಕದ ಕೊಡಗು ಜಿಲ್ಲೆಗೆ ಋಣಿಯಾಗಿರಬೇಕು. ಕಾವೇರಿ ನದಿ ಹುಟ್ಟುವುದು ನಮ್ಮ ಕ್ಷೇತ್ರದಲ್ಲಿ. ಈ ಬಾರಿ ಕರಾವಳಿ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ತಮಿಳುನಾಡು-ಕರ್ನಾಟಕ ನಡುವಿನ ನೀರಾವರಿ ಸಮಸ್ಯೆಗೆ ವಿರಾಮ ಬಿದ್ದಿದೆ. ಉತ್ತಮ ಮಳೆಯಿಂದ ಕ್ಷೇತ್ರದ 4 ಡ್ಯಾಂ ಗಳು ತುಂಬಿದ್ದು, ತಮಿಳುನಾಡಿಗೆ ಹೆಚ್ಚಿನ ನೀರು ಹರಿದುಹೋಗುತ್ತಿದೆ. ಎಷ್ಟೇ ಮಳೆಯಾದರು ತಮ್ಮ ಕ್ಷೇತ್ರದ ಜನರು ಅದನ್ನು ಸ್ವಾಗತಿಸುತ್ತಾರೆ. ಆದರೆ ಭಾರೀ ಮಳೆಯಿಂದ ಈ ಭಾಗದ ಜನರು ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ದೇಶದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ 30% ರಷ್ಟು ಬೆಳೆಯನ್ನು ಕೊಡಗಿನಲ್ಲಿ ಬೆಳೆಯಲಾಗುತ್ತದೆ. ಅಲ್ಲದೇ ದೇಶದಲ್ಲಿ ಉತ್ಪಾದನೆಯಾಗುವ 15% ರಷ್ಟು ಕಾಳು ಮೆಣಸು ಸಹ ಇಲ್ಲಿ ಬೆಳೆಯಲಾಗುತ್ತಿದೆ. ಆದರೆ ಈ ಬಾರಿ ಮಳೆಯಿಂದ ಹೆಚ್ಚಿನ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

    ಕರ್ನಾಟಕದಲ್ಲಿ ಈ ಬಾರಿ ಮಳೆಯಿಂದ ಉಂಟಾದ ಅನಾಹುತ ಬಗ್ಗೆಯೂ ಮಾಹಿತಿ ನೀಡಿದ ಸಚಿವರು, ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಚಿಕ್ಕಮಗಳೂರು, ಬೆಳಗಾವಿ, ಬೀದರ್, ಚಾಮರಾಜನಗರ, ದಕ್ಷಿಣ ಕನ್ನಡ, ಧಾರವಾಡ, ಗದಗ, ಕೊಡಗು, ಕೊಪ್ಪಳ, ಮೈಸೂರು ಜಿಲ್ಲೆಗಳಲ್ಲಿ 9,163 ಮನೆಗಳು ನಾಶವಾಗಿದ್ದು, 130 ಮಂದಿ ಸಾವನ್ನಪ್ಪಿದ್ದಾರೆ. ಅಧಿಕ ಪ್ರಮಾಣದ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಜಿಲ್ಲೆಯ ಪ್ರಮುಖ ರಸ್ತೆಗಳು ನಾಶವಾಗಿದೆ. ಇದರಿಂದ ರಸ್ತೆ ಸಂಪರ್ಕ ಮಾರ್ಗ ಹಲವು ಪ್ರದೇಶಗಳಲ್ಲಿ ಕಷ್ಟಸಾಧ್ಯವಾಗಿದೆ. ಹೀಗಾಗಿ ಸದ್ಯ ಕೇಂದ್ರ ಸರ್ಕಾರದಿಂದ ಎನ್‍ಡಿಆರ್‍ಎಫ್ ನಿಂದ ಪರಿಹಾರವಾಗಿ ಕೇವಲ 1 ಲಕ್ಷ ರೂ. ನೀಡುತ್ತಿದ್ದು, ಹೆಚ್ಚಿನ ಮೊತ್ತ ನೀಡುವಂತೆ ಮನವಿ ಮಾಡಿದ್ದಾರೆ.

    ಸಮ್ಮಿಶ್ರ ಸರ್ಕಾರ ವಿರುದ್ಧ ವಾಗ್ದಾಳಿ: ತಮ್ಮ ಭಾಷಣದ ನಡುವೇ ರಾಜ್ಯ ಸಮ್ಮಿಶ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, ರಾಜ್ಯ ಸರ್ಕಾರಕ್ಕೆ ಕಳೆದ 4 ವರ್ಷಗಳಿಂದ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದ್ದೇನೆ. ಇದುವರೆಗೂ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಅನುದಾನ ನೀಡುವಲ್ಲಿಯೂ ರಾಜ್ಯ ಸರ್ಕಾರ ಹಿಂದೆ ಉಳಿದಿದ್ದು, ನಮಗೇ ಯಾವುದೇ ಬೆಂಬಲ ನೀಡಿಲ್ಲ. ಕಳೆದ 2 ವರ್ಷಗಳಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿದ ವೇಣುಗೋಪಾಲ್ ಅವರು ಈ ಕುರಿತು ಗಮನ ಹರಿಸದೆ ಸದನದಲ್ಲಿ ಕೇವಲ ಆರೋಪಗಳನ್ನು ಮಾತ್ರ ಮಾಡುತ್ತಾರೆ ಎಂದು ದೂರಿದರು.

    ಕರ್ನಾಟಕದ ಸಿಎಂ ತಾವು ವಿಷಕಂಠ ಎಂದು ಹೇಳಿದ್ದಾರೆ. ಅಧಿಕಾರಕ್ಕಾಗಿ ವಿಷನುಂಗುತ್ತಿದ್ದಾರೆ. ಕಾಂಗ್ರೆಸ್ ಅವರೊಂದಿಗೆ ಸೇರಿ ಅಧಿಕಾರಿಕ್ಕಾಗಿ ಮೈತ್ರಿ ಮಾಡಿಕೊಂಡಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆಯೂ ರೈತರ ಸಾವು ಅಧಿಕ ಪ್ರಮಾಣದಲ್ಲಿ ಇತ್ತು ಎಂದು ಆರೋಪಿಸಿ ಕಿಡಿಕಾರಿದರು.

  • ನೂತನ ಡಿಸಿಎಂಗೆ ವಿಶ್ ಮಾಡಿ ಕುತೂಹಲ ಮೂಡಿಸಿದ್ರು ಪ್ರತಾಪ್ ಸಿಂಹ!

    ನೂತನ ಡಿಸಿಎಂಗೆ ವಿಶ್ ಮಾಡಿ ಕುತೂಹಲ ಮೂಡಿಸಿದ್ರು ಪ್ರತಾಪ್ ಸಿಂಹ!

    ಮೈಸೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಜಿ. ಪರಮೆಶ್ವರ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ನೂತನ ಡಿಸಿಎಂ ಗೆ ಶುಭಾಶಯ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, `ಡಿಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿರುವ ಜಿ ಪರಮೇಶ್ವರ್ ಅವರಿಗೆ ಶುಭಾಶಯಗಳು. ಅಲ್ಲದೆ ಡಿಸಿಎಂ ಆಗಲು ಪರಮೇಶ್ವರ್ ಅವರೇ ಸರಿಯಾದ ವ್ಯಕ್ತಿ ಅಂತ ಹೇಳಿದ್ದಾರೆ. ಒಟ್ಟಿನಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಪರಮೇಶ್ವರ್ ಅವರಿಗೆ ಪ್ರತಾಪ್ ಸಿಂಹ ಶುಭಾಶಯ ಕೋರಿರುವುದು ಇದೀಗ ಅಚ್ಚರಿ ಮೂಡಿಸಿದೆ.

    ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಭಾರೀ ಹೈಡ್ರಾಮಾವೇ ನಡೆದುಹೋಗಿದ್ದು, ಇದೀಗ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಅವರು ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀರಿಸುವ ಮೂಲಕ ಫುಲ್ ಸ್ಟಾಪ್ ಬಿದ್ದಿದೆ.

    ರಾಜ್ಯ ವಿಧಾನಸಭಾ ಫಲಿತಾಂಶದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರೂ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ವಿಫಲವಾಯಿತು. ಆದ್ರೂ ನಾನೇ ಸಿಎಂ ಎಂದು ಹೇಳಿಕೊಂಡು ಬಂದಿದ್ದ ಯಡಿಯೂರಪ್ಪ ಅವರು ರಾಜ್ಯಪಾಲರ ಅನುಮತಿ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಈ ಮಧ್ಯೆ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಹೀಗಾಗಿ ಎರಡು ಪಕ್ಷಗಳ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚನೆ ನೀಡಿತ್ತು.

    ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿಯವರು ತಮ್ಮ ತೆಕ್ಕೆಗೆ ಎಳೆದುಕೊಳ್ಳಲು ಪ್ರಯತ್ನಿಸಿದ್ದರು. ಹೀಗಾಗಿ ಭಾರೀ ಹೈಡ್ರಾಮಾವೇ ನಡೆದಿತ್ತು. ಆದ್ರೆ ಸಂಜೆ ನಡೆದ ವಿಧಾನ ಸಭಾ ಕಲಾಪದಲ್ಲಿ ಯಡಿಯೂರಪ್ಪ ಅವರು ಭಾವನಾತ್ಮಕ ಭಾಷಣ ಮಾಡಿ ಬಳಿಕ ನೇರವಾಗಿ ರಾಜ್ಯಪಾಲರ ಬಳಿ ತೆರಳಿ ತನ್ನ ರಾಜೀನಾಮೆ ಪತ್ರವನ್ನು ನೀಡಿದ್ದರು.

  • ಹೋರಾಟ ಮುಂದುವರೆಯುತ್ತೇ – ಫೇಸ್‍ಬುಕ್ ಲೈವ್‍ನಲ್ಲಿ ಭಾವುಕರಾದ ಪ್ರತಾಪ್ ಸಿಂಹ

    ಹೋರಾಟ ಮುಂದುವರೆಯುತ್ತೇ – ಫೇಸ್‍ಬುಕ್ ಲೈವ್‍ನಲ್ಲಿ ಭಾವುಕರಾದ ಪ್ರತಾಪ್ ಸಿಂಹ

    ಬೆಂಗಳೂರು: ವಿಧಾನಸಭೆಯಲ್ಲಿ ಬಹುಮತಯಾಚಿಸದೆ ಸಿಎಂ ಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ವೇಳೆ ಭಾವುಕರಾಗಿದ್ದಾರೆ.

    ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆ ಏಕಾಂಗಿಯಾಗಿ ಕಾರಿನಲ್ಲಿ ಕುಳಿತು ಫೇಸ್‍ಬುಕ್ ಲೈವ್ ಮಾಡಿದ ಸಂಸದ ಪ್ರತಾಪ್‍ಸಿಂಹ. ಬಿಎಸ್‍ವೈ ಅವರು ಅಧಿಕಾರ ಕಳೆದುಕೊಂಡರು ಎಂದು ಅವರಿಗೆ ನೋವಾಗಿಲ್ಲ. ಆದರೆ ರಾಜ್ಯದ ಜನರ ಬಗ್ಗೆ ಕಂಡಿದ್ದ ಕನಸು ನುಚ್ಚು ನೂರಾಯ್ತು ಎಂಬ ನೋವಿದೆ ಎಂದು ಹೇಳಿದರು.

    ಇಷ್ಟಾದರೂ ಬಿಎಸ್‍ವೈ ಅವರು ಸಮಚಿತ್ತ ಕಾಯ್ದುಕೊಂಡು, ಕಣ್ಣಲ್ಲಿ ನೀರು ಬಂದರೂ ಕಣ್ಣಿರಿಡದೆ ಸದನದಿಂದ ಹೊರ ನಡೆದರು. ಇಂದಿನ ಯಡಿಯೂರಪ್ಪ ಅವರ ಭಾಷಣ ಅಂದಿನ ವಾಜಪೇಯಿ ಅವರ ಭಾಷಣದಂತಿತ್ತು. ತಮ್ಮ ಭಾಷಣದ ಉದ್ದಕ್ಕೂ ಬಿಎಸ್‍ವೈ ಪ್ರಧಾನಿ ಮೋದಿ ಹಾಗೂ ರೈತರ ಬಗ್ಗೆ ಪ್ರಸ್ತಾಪ ಮಾಡಿದ್ದರು. ಕಾರಣಾಂತರಗಳಿಂದ ನಾವು ಸರ್ಕಾರ ಉಳಿಸಿಕೊಂಡಿಲ್ಲ. ಆದರೆ ಈ ಮೈತ್ರಿ ಸರ್ಕಾರ 6 ತಿಂಗಳು ಇರುವುದಿಲ್ಲ. ಆಗ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಬಿಎಎಸ್‍ವೈ ಮತ್ತೆ ಸಿಎಂ ಆಗುತ್ತಾರೆ. ಅಲ್ಲಿಯವರೆಗೂ ನಾವೆಲ್ಲರು ಬಿಎಸ್‍ವೈ ಅವರಿಗೆ ಬೆಂಬಲಿಸೋಣ ಎಂದು ತಮ್ಮ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡ್ರು.

  • ವಿಜಯೇಂದ್ರ ಸ್ಪರ್ಧೆ ಅನಿವಾರ್ಯ, ಟಿಕೆಟ್ ನೀಡುವಂತೆ ಹೈಕಮಾಂಡ್‍ಗೆ ಒತ್ತಾಯ: ಪ್ರತಾಪ್ ಸಿಂಹ

    ವಿಜಯೇಂದ್ರ ಸ್ಪರ್ಧೆ ಅನಿವಾರ್ಯ, ಟಿಕೆಟ್ ನೀಡುವಂತೆ ಹೈಕಮಾಂಡ್‍ಗೆ ಒತ್ತಾಯ: ಪ್ರತಾಪ್ ಸಿಂಹ

    ಮೈಸೂರು: ವರುಣಾ ಕ್ಷೇತ್ರ ಟಿಕೆಟ್ ಹಂಚಿಕೆ ಬಿಜೆಪಿ ನಾಯಕರಲ್ಲಿ ಗೊಂದಲವನ್ನು ಉಂಟು ಮಾಡಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್ ಸಿಂಹ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಅನಿವಾರ್ಯ ಎಂದು ಹೇಳಿದ್ದಾರೆ.

    ನಗರದ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೊಂದು ಅನಿವಾರ್ಯ ಸುದ್ದಿಗೋಷ್ಠಿಯಾಗಿದ್ದು ಮೈಸೂರು ಹಾಗೂ ಚಾಮರಾಜನಗರದ 15 ಮಂದಿ ಬಿಜೆಪಿ ಮುಖಂಡರ ಭವಿಷ್ಯಕ್ಕೆ ಕುತ್ತು ಬಂದಿದೆ. ನಾನು ಹೈಕಮಾಂಡ್‍ಗೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

    ನಾವು ಈಗಾಗಲೇ ಜಾವಡೇಕರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದೇವೆ. ರಾಜ್ಯಾಧ್ಯಕ್ಷ ಬಿಎಸ್‍ವೈ ಅವರನ್ನು ಒತ್ತಾಯಿಸಿದ್ದೇವೆ. ಅವರು ಕಾರ್ಯಕರ್ತರ ಮನವಿಗೆ ಮಣಿಯಲೇ ಬೇಕು. ವಿಜಯೇಂದ್ರ ತಂದೆಯಾಗಿ ಟಿಕೆಟ್ ನೀಡದೇ ಇದ್ದರೂ ಕ್ಷೇತ್ರದ ಕಾರ್ಯಕರ್ತರ ಒತ್ತಾಯಕ್ಕೆ ನೀಡಬೇಕು. ಕೇಂದ್ರ ಸಚಿವರಾದ ಅನಂತ್ ಕುಮಾರ್ ಹಾಗೂ ಬಿಜೆಪಿ ನಾಯಕರಾದ ರಾಮ್ ದಾಸ್ ಅವರ ಬಳಿಯೂ ಮಾತನಾಡುತ್ತೇವೆ ಎಂದರು. ಇದನ್ನೂ ಓದಿ: ವಿಜಯೇಂದ್ರನಿಗೆ ಸ್ಪರ್ಧೆಯಿಂದ ನಿರ್ಗಮಿಸುವಂತೆ ಹೇಳಿದ್ದು ನಾನೇ: ಬಿಎಸ್‍ವೈ

    ವಿಜಯೇಂದ್ರ ಅವರು ಕ್ಷೇತ್ರದಲ್ಲಿ ಮಾಡಿರುವ ಪ್ರಭಾವದಿಂದ ಸಿದ್ದರಾಮಯ್ಯ ಅವರ ಮಗ ಸೋಲುವುದು ನಿಶ್ಚಿತ. ಸಿಎಂ ಅವರು ಸಹ ಸೋಲುವುದು ಖಚಿತ. ಕ್ಷೇತ್ರದಲ್ಲಿನ ಎಲ್ಲಾ ನಾಯಕರು, ಟಿಕೆಟ್ ಆಕಾಂಕ್ಷಿಗಳು ಸಹ ವಿಜಯೇಂದ್ರ ಅವರಿಗೆ ಬೆಂಬಲ ನೀಡಿದ್ದಾರೆ. ನಾಳೆ ಬೆಳಗ್ಗೆಯವರೆಗೂ ಸಮಯವಿದೆ ಎಲ್ಲವೂ ಸೂಕ್ತವಾಗಿ ನಡೆಯಲಿದೆ. ವಿಜಯೇಂದ್ರ ಅವರಿಗೆ ಟಿಕೆಟ್ ಸಿಗುತ್ತದೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?

     

     

  • ಬಿಜೆಪಿ ಕಾರ್ಯಕರ್ತ ರಾಜು ಕುಟುಂಬಕ್ಕೆ ಪರಿಹಾರ- ಗುಂಡೂರಾವ್ ಆರೋಪಕ್ಕೆ ಪ್ರತಾಪ್ ಸಿಂಹ ಕೆಂಡಾಮಂಡಲ

    ಬಿಜೆಪಿ ಕಾರ್ಯಕರ್ತ ರಾಜು ಕುಟುಂಬಕ್ಕೆ ಪರಿಹಾರ- ಗುಂಡೂರಾವ್ ಆರೋಪಕ್ಕೆ ಪ್ರತಾಪ್ ಸಿಂಹ ಕೆಂಡಾಮಂಡಲ

    ಮೈಸೂರು: ಬಿಜೆಪಿ ಕಾರ್ಯಕರ್ತ ರಾಜು ಕುಟುಂಬಕ್ಕೆ ಬಿಜೆಪಿ ಪರಿಹಾರ ನೀಡಿದೆ ಅಂತ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಮಾಡಿರುವ ಆರೋಪಕ್ಕೆ ಸಂಸದ ಪ್ರತಾಪ್ ಸಿಂಹ ಕೆಂಡಾಮಂಡಲರಾಗಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಹ, ಅಮಿತ್ ಶಾ ಅವರನ್ನು ಕ್ರಿಮಿನಲ್ ಅಂತ ಕರೆದು ಗಡಿಪಾರು ಮಾಡಬೇಕುಂತ ಹೇಳಿ ಕರೆ ಕೊಟ್ಟು ಚುನಾವಣಾ ಆಯೋಗಕ್ಕೆ ದಿನೇಶ್ ಗುಂಡೂರಾವ್ ಅವರು ದೂರು ಕೊಟ್ಟಿದ್ದಾರೆ. ಇದರ ಜೊತೆಗೆ ಬಿಜೆಪಿ ನಾಯಕರು ಇಲ್ಲಿಯವರೆಗೆ ಏನ್ ಮಾಡಿದ್ದಾರೆ ಅನ್ನೋ ಪ್ರಶ್ನೆಯನ್ನು ಕೂಡ ಹಾಕಿದ್ದಾರೆ. ನಾನು ಮೈಸೂರಿನವನು, ಮೈಸೂರು ಬಗ್ಗೆ ಪ್ರೀತಿಯಿದೆ ಅಂತ ಬಾಡೂಟ, ಮೀನೂಟ ಹಾಗೂ ಮದುವೆ ಮುಂಜಿ ಅಂತ ಮೈಸೂರಿಗೆ ಆಗಾಗ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜು ಹತ್ಯೆಯಾಗಿ ಒಂದೂವರೆ ವರ್ಷ ಕಳೆದ್ರೂ, ಅವರ ತಾಯಿಯ ಕಣ್ಣೀರು ಒರೆಸುವ ಅಥವಾ ಸಾಂತ್ವಾನ ಹೇಳುವ ಕೆಲಸವನ್ನು ಮಾಡಿದ್ದಾರೆಯೇ ಅಂತ ಗುಂಡೂರಾವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಜುವನ್ನು ಹತ್ಯೆ ಮಾಡಿದ ಅಬೀಬ್ ಪಾಷಾ ಮೇಲಿನ ಚಾರ್ಜ್ ಶೀಟನ್ನು ವೀಕ್ ಮಾಡಿ ಆತನ ಬಿಡುಗಡೆಯಾಗುವವರೆಗೆ ನೋಡಿಕೊಂಡರು. ಅಲ್ಲದೇ ಆತ ಜೈಲಿನಿಂದ ಬಿಡುಗಡೆಯಾದ ಬಳಿಕ ಆತನನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿದ್ದಾರೆ. ಈ ಎಲ್ಲಾ ಘಟನೆಗಳನ್ನು ನೋಡಿಯೂ ಕಣ್ಮುಚ್ಚಿಕೊಂಡು ಕುಳಿತಿದ್ದಾರೆ. ಇಂದು ಅದೇ ಅಬೀಬ್ ಪಾಷಾ ಯಾರೋ ಒಬ್ಬ ಸಂಸದರನ್ನು ಹತ್ಯೆ ಮಾಡಲು ಹೊಂಚುಹಾಕಿದ್ದಾನೆ ಎಂಬುವುದನ್ನು ಮಾಧ್ಯಮಗಳು ವರದಿ ಮಾಡಿದ್ದವು. ದಿನೇಶ್ ಗುಂಡೂರಾವ್ ಅವರಿಗೆ ಕನಿಷ್ಠ ಸೌಜನ್ಯ, ನೈತಿಕತೆ ಇದ್ದಿದ್ದೇ ಆದ್ರೆ ಅವರ ಮುಖ್ಯಮಂತ್ರಿ ನಡೆದುಕೊಳ್ಳುವ ರೀತಿಯ ಬಗ್ಗೆ ಮಾತನಾಡಲಿ ಅಂತ ಸಚಿವರ ವಿರುದ್ಧ ಕೆಂಡಾಮಂಡಲರಾದ್ರು.  ಇದನ್ನೂ ಓದಿ: ಅಮಿತ್ ಶಾ ರಿಂದ ನೀತಿ ಸಂಹಿತೆ ಉಲ್ಲಂಘನೆ – ಗಡಿಪಾರಿಗೆ ಆಗ್ರಹಿಸಿದ ದಿನೇಶ್ ಗುಂಡೂರಾವ್

    ಚುನಾವಣಾ ಆಯೋಗಕ್ಕೆ ದೂರು: ರಾಜು ಕುಟುಂಬಕ್ಕೆ ಪರಿಹಾರ ಕೊಟ್ಟಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಡ್ತೀವಿ ಅಂತ ಹೇಳ್ತಾ ಇರೋ ನೀವುಗಳು, ನಮ್ಮ ಕಾರ್ಯಕರ್ತ ಸತ್ತಾಗ ಅವರ ಬೆಂಬಲಕ್ಕೆ ಯಾರು ನಿಂತಿದ್ದರು ಎಂಬುವುದು ನಿಮಗೆ ತಿಳಿದಿದೆಯಾ?. ನಿನ್ನೆ ಅಮಿತ್ ಶಾ ಅವರು ಏನೂ ಪರಿಹಾರ, ದುಡ್ಡು ಕೊಟ್ಟಿಲ್ಲ. ಒಂದು ವೇಳೆ ಕೊಟ್ಟಿದ್ದೇವೆ ಅಂತಾನೇ ತಿಳ್ಕೊಳ್ಳಿ. ನಾವು ಕಾಂಗ್ರೆಸ್ ಅಥವಾ ಸಾರ್ವಜನಿಕರ ಹಣ ಕೊಟ್ಟಿಲ್ಲ. ನಮ್ಮ ಪಕ್ಷದ ಕಾರ್ಯಕರ್ತನ ಕಷ್ಟಕ್ಕೆ ಸ್ಪಂದಿಸುವುದು ನಮ್ಮ ಜವಾಬ್ದಾರಿ. ಹೀಗಾಗಿ ನಮ್ಮ ಪಕ್ಷದ ಹಣವನ್ನೇ ನೀಡಿದ್ದೇವೆ ಅಂತ ತಿಳ್ಕೊಳ್ಳಿ. ಇದರಿಂದ ನಿಮಗೇನು ತೊಂದ್ರೆ ಅಂತ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ರು.

    ಅಬೀಬ್ ಪಾಷಾನನ್ನು ಬಿಡುಗಡೆಗೊಳಿಸಿ ಇದೀಗ ಆತ ಮತ್ತೊಂದು ಹತ್ಯೆ ಮಾಡಿದ್ರೆ ನಿಮ್ಮ ನೀತಿ ಸಂಹಿತೆ ತಡೆಯುತ್ತಾ ಅಂತ ಮರುಪ್ರಶ್ನೆ ಹಾಕಿದ ಅವರು ದಿನೇಶ್ ಗುಂಡೂರಾವ್ ಅವರು ಸ್ವಲ್ಪ ಎಚ್ಚರಿಕೆಯಿಂದ ಮಾತನಾಡುವಂತೆ ತಿಳಿಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ರಾಜು ಹತ್ಯೆಯ ಪ್ರಮುಖ ಆರೋಪಿಗೆ ಜಾಮೀನು-ಹಾರ, ತುರಾಯಿ ಹಾಕಿ ಭರ್ಜರಿ ಸ್ವಾಗತ

    ಕಾಂಗ್ರೆಸ್ ನ ರಾಜಕಾರಣ ಏನು ಎಂಬುದು ನಮಗೆ ತಿಳಿದಿದೆ. ಒಬ್ಬ ಮಗನನ್ನು ಕಳೆದುಕೊಂಡ ತಾಯಿಯ ಆ ದುಃಖವನ್ನು ಅರ್ಥಮಾಡಿಕೊಳ್ಳಿ. ಚುನಾವಣೆಗೂ ಈ ವಿಚಾರಕ್ಕೂ ಸಂಬಂಧ ಕಲ್ಪಿಸಬೇಡಿ. ರಾಷ್ಟ್ರೀಯ ಅಧ್ಯಕ್ಷರು ಇಲ್ಲಿಗೆ ಬಂದಿರುವ ಸಂದರ್ಭದಲ್ಲಿ ರಾಜು ಮನೆಗೆ ಭೇಟಿ ನೀಡಿ ಅವರ ತಾಯಿಗೆ ಸಾಂತ್ವಾನ ಹೇಳಿ, ಧೈರ್ಯ ತುಂಬಿದ್ದಾರೆ ಅಷ್ಟೇ ಅಂತ ಸ್ಪಷ್ಟಪಡಿಸಿದ್ದಾರೆ.

    24 ಜನರನ್ನ ಕಳೆದುಕೊಂಡ ನೋವು ನಮಗಿದೆ: ಒಟ್ಟಿನಲ್ಲಿ ಶಾ ಅವರು ರಾಜು ಮನೆಗೆ ಭೇಟಿ ನೀಡಿದ್ದರ ಕುರಿತು ಕೇಸ್ ಹಾಕೋದಾದ್ರೆ ಹಾಕಿ. ಇದರಿಂದ ನಮಗೇನೂ ಬೇಜಾರಿಲ್ಲ. 24 ಜನ ಕಾರ್ಯಕರ್ತರನ್ನು ಕಳೆದುಕೊಂಡ ನಮ್ಮ ನೋವು ಬೇರೆ ಇದೆ. ಹೀಗಾಗಿ ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಲು ಯಾವ ನೀತಿ ಸಂಹಿತೆಗೂ ಸಾಧ್ಯವಿಲ್ಲ. ಸಿಎಂ ಅವರು ಅರ್ಧ ಗಂಟೆ ಸಮಯ ನಿಗದಿ ಮಾಡಿಕೊಂಡು ರಾಜು ಮನೆಗೆ ಹೊಗಿಲ್ಲ. 8 ಕೊಲೆ ಪ್ರಕರಣದ ಆರೋಪಿಯಾಗಿರುವ ಅಬೀಬ್ ಪಾಷಾ ಬಿಡುಗಡೆಗೆ ಅನುಕೂಲ ಮಾಡಿದ್ರಿ ಅಂತ ಸಿಎಂ ಅವರನ್ನು ಪ್ರಶ್ನಿಸಿದ್ರು.  ಇದನ್ನೂ ಓದಿರಾಜಮಾತೆ ಪ್ರಮೋದಾ ದೇವಿ ಜೊತೆ ಶಾ ಮಹತ್ವದ ಚರ್ಚೆ – ಇನ್‍ಸೈಡ್ ಸ್ಟೋರಿ ಇಲ್ಲಿದೆ

    ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಿನ್ನೆ ಮೈಸೂರಿಗೆ ಬೇಟಿ ನಿಡಿದ್ದು, ಇದೇ ವೇಳೆ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ರಾಜು ಮನೆಗೆ ಭೇಟಿ ನೀಡಿ ಅವರ ತಾಯಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದ್ದರು. ಈ ಸಂದರ್ಭದಲ್ಲಿ ರಾಜು ಕುಟುಂಬಕ್ಕೆ ಬಿಜೆಪಿ ಪರಿಹಾರ ನೀಡಿದೆ ಅಂತ ಕಾಂಗ್ರೆಸ್ ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿತ್ತು.

  • ನಟ ಪ್ರಕಾಶ್ ರೈಗೆ 9 ರೂ. ಡಿಡಿ ಕಳುಹಿಸಿದ ಪ್ರತಾಪ್ ಸಿಂಹ ಅಭಿಮಾನಿ

    ನಟ ಪ್ರಕಾಶ್ ರೈಗೆ 9 ರೂ. ಡಿಡಿ ಕಳುಹಿಸಿದ ಪ್ರತಾಪ್ ಸಿಂಹ ಅಭಿಮಾನಿ

    ಮೈಸೂರು: ಸಂಸದ ಪ್ರತಾಪದ ಸಿಂಹ ಅಭಿಮಾನಿಯೊಬ್ಬರು ನಟ ಪ್ರಕಾಶ್ ರೈ ಗೆ 9 ರೂಪಾಯಿ ಡಿಡಿ ಕಳುಹಿಸಿದ್ದಾರೆ.

    ಪ್ರತಾಪ್ ಸಿಂಹ ವಿರುದ್ಧ ನಟ ಪ್ರಕಾಶ್ ರೈ 1 ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿರುವುದಕ್ಕೆ ಅಭಿಮಾನಿ ಸಂದೇಶ್ ಎಂಬವರು ಈ ಡಿಡಿಯನ್ನು ಕಳುಹಿಸಿದ್ದಾರೆ. ತಮಿಳು ಚಿತ್ರರಂಗದ ನಿರ್ಮಾಪಕರ ಸಂಘದ ಉಪಾಧ್ಯಕ್ಷರ ಕಚೇರಿ ವಿಳಾಸಕ್ಕೆ ಡಿಡಿ ಕಳುಹಿಸಲಾಗಿದೆ. ಪ್ರಕಾಶ್ ರೈ ತಮಿಳು ಚಿತ್ರರಂಗದ ನಿರ್ಮಾಪಕರ ಸಂಘದ ಉಪಾಧ್ಯಕ್ಷ ಆಗಿರೋ ಕಾರಣ ಈ ವಿಳಾಸಕ್ಕೆ ಡಿಡಿ ಕಳುಹಿಸಲಾಗಿದೆ. ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಪ್ರಕಾಶ್ ರೈ

    ನೀವು ಒಂದು ರುಪಾಯಿ ಕೇಳಿದ್ದೀರಿ. ನಾನು ನಿಮಗೆ 9 ರೂಪಾಯಿ ಕಳುಹಿಸಿದ್ದೇನೆ ತೆಗೆದುಕೊಳ್ಳಿ. ನಿಮ್ಮ ಮೌಲ್ಯ 1 ರೂಪಾಯಿ ಅಷ್ಟೆ ಅಂತಾ ನೀವೇ ಹೇಳಿದ್ದೀರಿ. ಆದರೆ, ನಾನು ಅದನ್ನು ಸ್ಪಲ್ಪ ಹೆಚ್ಚು ಮಾಡಿ 9 ರೂಪಾಯಿ ಕಳುಹಿಸಿದ್ದೇನೆ ಎಂದು ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ಇದನ್ನೂ ಓದಿ: ನಾನು ಪ್ರಕಾಶ್ ರೈ ಅವರನ್ನ ತುಂಬು ಹೃದಯದಿಂದ ಅಭಿನಂದಿಸುತ್ತೇನೆ- ನಟರಿಗೆ ಪ್ರತಾಪ್ ಸಿಂಹ ತಿರುಗೇಟು

    ಮಾನನಷ್ಟ ಹೂಡಿದ್ದು ಯಾಕೆ?
    ಅಕ್ಟೋಬರ್ 2 ರಂದು ಪ್ರತಾಪ್ ಸಿಂಹ ವೆಬ್‍ಸೈಟ್ ಒಂದರಲ್ಲಿ ಬಂದಿದ್ದ ಸುದ್ದಿಯನ್ನು ಟ್ವೀಟ್ ಮಾಡಿದ್ದರು. “ಮಗನ ಸಾವಿನ ದು:ಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ರೈಯಂತಹವನು ಮೋದಿ? ಯೋಗಿಗೆ ಹೇಳುವಷ್ಟು ಯೋಗ್ಯತೆಯಿರುವವನಾ?” ಎನ್ನುವ ಹೆಡ್‍ಲೈನ್ ಈ ಸುದ್ದಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರಕಾಶ್ ರೈ ಅವರು 1 ರೂ. ಪರಿಹಾರ ಕೋರಿ ಮೈಸೂರಿನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.