Tag: ಸಂಶೋಧನೆ

  • ಅಂತರಿಕ್ಷ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ – ಭಾರತದಿಂದ ‘ಸಪ್ತ ಸಂಶೋಧನೆ’

    ಅಂತರಿಕ್ಷ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ – ಭಾರತದಿಂದ ‘ಸಪ್ತ ಸಂಶೋಧನೆ’

    ನವದೆಹಲಿ: ಬಹುನಿರೀಕ್ಷಿತ ಆಕ್ಸಿಯಮ್-4 ಮಿಷನ್‌ನ (Axiom-4 Mission) ಸ್ಪೇಸ್‌ಎಕ್ಸ್ ಫಾಲ್ಕನ್-9 ರಾಕೆಟ್ ಸುದೀರ್ಘ ಪ್ರಯಾಣದ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಿದೆ. ಭಾರತೀಯ ಕಾಲಮಾನ ಸಂಜೆ 5:50ರ ಹೊತ್ತಿಗೆ ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ (Shubhanshu Shukla) ಪಾತ್ರವಾಗಿದ್ದಾರೆ.

    ಅಂತರಿಕ್ಷ ತಲುಪಿದ ಗಗನಯಾತ್ರಿಗಳಿಗೆ ವೆಲ್‌ಕಮ್ ಡ್ರಿಂಕ್ ಕೊಟ್ಟು ಬರ ಮಾಡಿಕೊಳ್ಳಲಾಯಿತು. ನಾಲ್ವರು ಗಗನಯಾತ್ರಿಗಳು 14 ದಿನ ಅಂತರಿಕ್ಷದಲ್ಲಿ ಉಳಿಯಲಿದ್ದಾರೆ. ಈ ಅವಧಿಯಲ್ಲಿ ವೈಜ್ಞಾನಿಕ ಸಂಶೋಧನೆ, ತಂತ್ರಜ್ಞಾನ ಪ್ರದರ್ಶನ, ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಿದೆ. ಈ ತಂಡವು 31 ದೇಶಗಳನ್ನು ಒಳಗೊಂಡ 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದೆ. ಇದನ್ನೂ ಓದಿ: ಇಲ್ಲಿಂದ ಭೂಮಿಯನ್ನು ನೋಡುವುದೇ ಸೌಭಾಗ್ಯ – ಬಾಹ್ಯಾಕಾಶ ನಿಲ್ದಾಣದಿಂದ ಶುಭಾಂಶು ಮೊದಲ ಸಂದೇಶ!

    ಇವುಗಳಲ್ಲಿ ಜೈವಿಕ ವಿಜ್ಞಾನ, ಭೂಮಿಯ ವೀಕ್ಷಣೆ, ಮತ್ತು ವಸ್ತು ವಿಜ್ಞಾನ ಸೇರಿವೆ. ಭಾರತ ಇಲ್ಲಿ ಏಳು ಸಂಶೋಧನೆಗಳನ್ನು ಮಾಡಲಿದ್ದು ಇದು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

    ಆಕ್ಸಿಯಮ್-4 ಭಾರತದ ಮೈಕ್ರೋಗ್ರಾವಿಟಿ ಪ್ರಯೋಗಗಳು
    1.ತಿನ್ನಬಹುದಾದ ಸೂಕ್ಷ್ಮಪಾಚಿ ಅಧ್ಯಯನ (ಐಸಿಜಿಇಬಿ& ಬ್ರಿಕ್-ನವದೆಹಲಿ)
    *ತಿನ್ನಬಹುದಾದ ಸೂಕ್ಷ್ಮಪಾಚಿ ಜಾತಿಗಳ ಬೆಳವಣಿಗೆ ಅಧ್ಯಯನ
    *ಆಹಾರ ಉತ್ಪಾದನೆ, ಇಂಗಾಲ, ಆಮ್ಲಜನಕ ಉತ್ಪಾದನೆ ಸಾಮರ್ಥ್ಯಗಳ ಪರೀಕ್ಷೆ

    2.ಮೊಳಕೆ ಕಾಳುಗಳ ಅಧ್ಯಯನ (ಯುಎಸ್, ಐಐಟಿ ಧಾರವಾಡ)
    *ಮೊಳಕೆ ಕಾಳುಗಳ ಬೆಳವಣಿಗೆ & ಪೋಷಕಾಂಶಗಳ ಅಧ್ಯಯನ
    *ಚಂದ್ರ, ಇತರೆ ಗ್ರಹಗಳಲ್ಲಿ ಬೆಳೆ ಬೆಳೆಯುವ ಸಾಧ್ಯತೆಯ ಅನ್ವೇಷಣೆ

    3.ಸ್ನಾಯುಗಳ ಅಧ್ಯಯನ (ಬ್ರಿಕ್,ಇನ್‌ಸ್ಟೆಮ್ ಬೆಂಗಳೂರು)
    *ಸ್ನಾಯುಗಳ ಅಧ್ಯಯನ & ಸ್ನಾಯು ನಷ್ಟ ಪರಿಹಾರಗಳ ಅಭಿವೃದ್ಧಿ
    *ದೀರ್ಘಕಾಲೀನ ಬಾಹ್ಯಾಕಾಶ ಪ್ರಯಾಣದಲ್ಲಿ ಸಂಭವಿಸುವ ಸ್ನಾಯು ಕ್ಷಯ ಅಧ್ಯಯನ

    4.ಟಾರ್ಡಿಗ್ರೇಡ್ಸ್ – ನೀರಿನ ಕರಡಿಗಳು (ಐಐಎಸ್‌ಸಿ ಬೆಂಗಳೂರು)
    *ನೀರಿನ ಕರಡಿಗಳ ಜೀವನ ಮತ್ತು ಪ್ರಯೋಜನ ಸಾಮರ್ಥ್ಯ ಅಧ್ಯಯನ
    *ಮಾನವರ ಬಾಹ್ಯಾಕಾಶ ಉಳಿವಿಗೆ ತಂತ್ರಗಳ ಅಭಿವೃದ್ಧಿಗೆ ಸಹಾಯ

    5.ಎಲೆಕ್ಟ್ರಾನಿಕ್ ಡಿಸ್‌ಪ್ಲೇ (ಐಐಎಸ್‌ಸಿ, ಬೆಂಗಳೂರು)
    *ಮಾನವ-ಯಂತ್ರ ಸಂವಾದ & ಎಲೆಕ್ಟಾçನಿಕ್ ಡಿಸ್‌ಪ್ಲೇಗಳ ಪರಿಣಾಮ ಅಧ್ಯಯನ
    *ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವಾಗ ಎದುರಿಸುವ ಸವಾಲುಗಳ ಅನ್ವೇಷಣೆ

    6.ಸಯಾನೋಬ್ಯಾಕ್ಟೀರಿಯಾ – ನೀಲಿ, ಹಸಿರು ಪಾಚಿ (ಐಸಿಜಿಇಬಿ, ನವದೆಹಲಿ)
    *ಸಯಾನೋಬ್ಯಾಕ್ಟೀರಿಯಾ ಬೆಳವಣಿಗೆ & ನೈಟ್ರೋಜನ ಮೂಲದೊಂದಿಗೆ ಸಂವಾದ
    *ಬಾಹ್ಯಾಕಾಶದಲ್ಲಿ ನೈಟ್ರೋಜನ ಚಕ್ರೀಕರಣದ ಸಾಮರ್ಥ್ಯವನ್ನು ಅನ್ವೇಷಿಸುತ್ತದೆ

    7.ಆಹಾರ ಬೀಜಗಳು (ಐಐಎಸ್‌ಟಿ&ಕೆಎಯು, ತಿರುವನಂತಪುರ)
    *ಮೆಣಸು, ಕಾಳು, ಟೊಮೋಟೋ, ಬೀಜಗಳ ಬೆಳವಣಿಗೆ ಅಧ್ಯಯನ
    *ಬಾಹ್ಯಾಕಾಶ ಕೃಷಿಗೆ ಮಾರ್ಗ ತೋರಿಸುವ ಅಧ್ಯಯನ

  • ಜರ್ಮನಿ ಸಚಿವರ ಭಾರತ ಪ್ರವಾಸ – ಹಲವು ಒಪ್ಪಂದಗಳಿಗೆ ಇಂದು ಸಹಿ

    ಜರ್ಮನಿ ಸಚಿವರ ಭಾರತ ಪ್ರವಾಸ – ಹಲವು ಒಪ್ಪಂದಗಳಿಗೆ ಇಂದು ಸಹಿ

    ನವದೆಹಲಿ: ಚೀನಾ (China), ರಷ್ಯಾದೊಂದಿಗೆ (Russia) ಭಾರತದ ಸಂಬಂಧಗಳು ಹಾಗೂ ಭಾರತ ಮತ್ತು ಜರ್ಮನಿ ನಡುವಿನ ಅಭಿವೃದ್ಧಿ ಸಹಕಾರ ಕುರಿತು ಚರ್ಚೆ ನಡೆಸಲು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ (Annalena Baerbock) ಅವರು ಭಾರತದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

    ಅನ್ನಾಲೆನಾ ಬೇರ್ಬಾಕ್ ಎರಡು ದಿನಗಳ ಭೇಟಿಯಾಗಿ ಭಾರತಕ್ಕೆ ಆಗಮಿಸಿದ್ದು, ವಿದೇಶಾಂಗ ಸವಿವ ಜೈಶಂಕರ್ (Jaishankar) ಜೊತೆಗೆ ಮಾತುಕತೆ ನಡೆಸಲಿದ್ದಾರೆ. ರಷ್ಯಾ-ಉಕ್ರೆನ್ ಸಂಘರ್ಷದ (Russia Ukraine War) ಜಾಗತಿಕ ಪರಿಣಾಮಗಳು, ಗಾಲ್ವಾನ್ ಕಣಿವೆ ಘಟನೆಗಳು, ಚೀನಾದೊಂದಿಗೆ ಭಾರತದ ಸಂಬಂಧಗಳ ಕುರಿತು ಉಭಯ ದೇಶಗಳ ಸಚಿವರು ಚರ್ಚೆ ಮಾಡಲಿದ್ದಾರೆ. ಇದನ್ನೂ ಓದಿ: ಸ್ವಂತ ಮಗಳು ಸೇರಿ 20ಕ್ಕೂ ಹೆಚ್ಚು ಯುವತಿಯರ ಮದುವೆ- ಸ್ವಘೋಷಿತ ಪ್ರವಾದಿ ಅರೆಸ್ಟ್

    ಇದೇ ವೇಳೆ ಎರಡೂ ಕಡೆಯವರು ವಿವಿಧ ಚಲನಶೀಲತೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಇದರಿಂದ ಪರಸ್ಪರ ದೇಶದ ಜನರು ಎರಡೂ ದೇಶಗಳಲ್ಲಿ ಅಧ್ಯಯನ, ಸಂಶೋಧನೆ ಹಾಗೂ ಉದ್ಯೋಗ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದನ್ನೂ ಓದಿ: ಸತತ 1 ವರ್ಷ ಡ್ರಮ್‌ನಲ್ಲಿತ್ತು ಮಹಿಳೆ ದೇಹದ ಪೀಸ್‌ಗಳು – ಮನೆ ಬಾಡಿಗೆ ಕೊಟ್ಟಿದ್ದ ಮಾಲೀಕ ಶಾಕ್‌!

    ಭಾರತ ಜಿ7 ರಾಷ್ಟ್ರಗಳ (G7 Nations) ಅಧ್ಯಕ್ಷತೆ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ಜರ್ಮನ್ ಸಚಿವರು ಭೇಟಿ ನೀಡಿದ್ದಾರೆ. ಜಿ20 ಶೃಂಗ ಸಭೆಯಲ್ಲಿ ಭಾರತವು ಜಾಗತಿಕವಾಗಿ ತನ್ನ ಸಾಮರ್ಥ್ಯ ನಿರ್ವಹಿಸಲು ಸಿದ್ಧವಾಗಿದೆ ಎಂಬುದನ್ನು ತೋರಿಸಿದೆ. ಎಲ್ಲಾ ಆಂತರಿಕ ಹಾಗೂ ಸಾಮಾಜಿಕ ಸವಾಲುಗಳ ನಡುವೆಯೂ ಭಾರತ ವಿಶ್ವದ ಇತರ ದೇಶಗಳಿಗೆ ಮಾದರಿಯಾಗಿದೆ. ಅಲ್ಲದೇ ಕಳೆದ 15 ವರ್ಷಗಳಲ್ಲಿ ಭಾರತವು 400 ಮಿಲಿಯನ್ ಜನರನ್ನು ಸಂಪೂರ್ಣ ಬಡತನದಿಂದ ಹೊರತರುವಲ್ಲಿ ಯಶಸ್ವಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಲಿಂಗಿಗಳ ಸೆಕ್ಸ್‌ನಿಂದಲೇ ಮಂಕಿಪಾಕ್ಸ್ ಹೆಚ್ಚಳ – ಸೆಕ್ಸ್ ಪಾಲುದಾರರನ್ನು ಮಿತಿಗೊಳಿಸುವಂತೆ WHO ಸೂಚನೆ

    ಸಲಿಂಗಿಗಳ ಸೆಕ್ಸ್‌ನಿಂದಲೇ ಮಂಕಿಪಾಕ್ಸ್ ಹೆಚ್ಚಳ – ಸೆಕ್ಸ್ ಪಾಲುದಾರರನ್ನು ಮಿತಿಗೊಳಿಸುವಂತೆ WHO ಸೂಚನೆ

    ವಾಷಿಂಗ್ಟನ್: ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್ ಲೈಂಗಿಕ ಸಂಪರ್ಕದಿಂದಲೂ ಹರಡುತ್ತದೆ ಎಂಬ ಆಘಾತಕಾರಿ ಅಂಶವನ್ನು ಸಂಶೋಧಕರು ಹೊರ ಹಾಕಿದ್ದಾರೆ. ನಿಕಟ ದೈಹಿಕ ಸಂಪರ್ಕದ ಮೂಲಕ ಹರಡುತ್ತವೆ ಎಂಬುದನ್ನು ಹಲವು ವರದಿಗಳು ಹೇಳಿವೆ.

    ಈ ನಡುವೆ ಅಚ್ಚರಿಯ ಸಂಶೋಧನಾ ಮಾಹಿತಿ ಹೊರಬಿದ್ದಿದ್ದು, ಈ ಕುರಿತು, ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಾತನಾಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಸೆಕ್ಸ್ಗೆ ಪ್ರಭಾವಿತರಾದ ಗುಂಪನ್ನು ಕರೆದಿದ್ದು, ಪುರುಷ-ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವವರು ತಮ್ಮ ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಮಿತಿಗೊಳಿಸಬೇಕು ಎಂದು ಹೇಳಿದೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ- ಬಂಧಿತ ಕೆಲಸ ಮಾಡುತ್ತಿದೆ ಅಂಗಡಿಗೆ ಮುತ್ತಿಗೆ

    ಕಳೆದವಾರ ಮಂಕಿಪಾಕ್ಸ್ ಪ್ರಕರಣ ಹೆಚ್ಚಿದ ಸಂಖ್ಯೆಯಿಂದಾಗಿ ಜಾಗತೀಕ ತುರ್ತುಪರಿಸ್ಥಿತಿ ಎಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಲಿಂಗಿಗಳು ತಮ್ಮ ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಕಡಿಮೆ ಮಾಡುವುದು, ಹೊಸ ಪಾಲುದಾರರೊಂದಿಗೆ ಲೈಂಗಿಕತೆ ಮರು ಪರಿಶೀಲಿಸುವುದು ಮೊದಲಾದ ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ದ್ರೌಪದಿ ಮುರ್ಮುಗೆ ರಾಷ್ಟ್ರಪತ್ನಿ ಎಂದಿದ್ದಕ್ಕೆ ಕ್ಷಮೆ ಕೋರಿದ ಅಧೀರ್ ರಂಜನ್ ಚೌಧರಿ

    ನಿನ್ನೆವರೆಗೆ 78 ದೇಶಗಳಲ್ಲಿ 18 ಸಾವಿರ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಶೇ.25 ರಷ್ಟು ಅಮೆರಿಕದಲ್ಲಿ ವರದಿಯಾಗಿದ್ದರೆ ಉಳಿದ ಶೇ.75 ರಷ್ಟು ಪ್ರಕರಣಗಳು ಯುರೋಪಿಯನ್ ದೇಶಗಳಲ್ಲಿ ಕಾಣಿಸಿಕೊಂಡಿವೆ. ಕಳೆದ ಮೇ ತಿಂಗಳಿನಿಂದ 5 ಮರಣ ಪ್ರಕರಣಗಳು ವರದಿಯಾಗಿವೆ. ಈ ಬೆನ್ನಲ್ಲೇ ಶೇ.98 ರಷ್ಟು ಮಂಕಿಪಾಕ್ಸ್ ಸಲಿಂಗಿಗಳ ಲೈಂಗಿಕ ಕ್ರಿಯೆಯಿಂದಲೇ ಹರಡುತ್ತಿದೆ ಎಂಬ ಅಂಶ ಹೊರಬಿದ್ದಿದೆ. ಇಂಗ್ಲೆಂಡ್‌ನ ಜರ್ನಲ್ ಆಫ್ ಮಡಿಸನ್ ಈ ಅಂಶವನ್ನು ಪ್ರಕಟಿಸಿದೆ.

    ಅದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ಲೈಂಗಿಕವಾಗಿ ಹರಡುವ ಸೋಂಕುಗಳ ಜಾಗೃತಿ ಕಾರ್ಯಕ್ರಮದ ಅಡಿಯಲ್ಲಿ ಸಲಿಂಗಿಗಳು ತಮ್ಮ ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುವಂತೆ ಅವರಿಗೆ ಸಂದೇಶಗಳನ್ನು ತಿಳಿಸಲಾಗುತ್ತಿದೆ ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೆಂಪು ಸಮುದ್ರದ ತಳಭಾಗದಲ್ಲೊಂದು ಡೆಡ್ಲಿ ಪೂಲ್ – ಇಲ್ಲಿ ಈಜುವ ಪ್ರತಿ ಜೀವಿಗೂ ಕಾದಿದೆ ಅಪಾಯ

    ಕೆಂಪು ಸಮುದ್ರದ ತಳಭಾಗದಲ್ಲೊಂದು ಡೆಡ್ಲಿ ಪೂಲ್ – ಇಲ್ಲಿ ಈಜುವ ಪ್ರತಿ ಜೀವಿಗೂ ಕಾದಿದೆ ಅಪಾಯ

    ನವದೆಹಲಿ: ಮಿಯಾಮಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಕೆಂಪು ಸಮುದ್ರದ ತಳಭಾಗದಲ್ಲಿ ಡೆಡ್ಲಿ ಪೂಲ್ (ಮಾರಣಾಂತಿಕ ಕೊಳ) ಪತ್ತೆಯಾಗಿದ್ದು, ಇದು ಪೂಲ್‌ನಲ್ಲಿ ಈಜುವ ಜೀವಿಯನ್ನು ಕೊಲ್ಲುತ್ತದೆ ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ವಿಜ್ಞಾನಿಗಳು ತಮ್ಮ ರಿಮೋಟ್ ಚಾಲಿತ ವಾಹನ ಬಳಸಿಕೊಂಡು ಕೆಂಪು ಸಮುದ್ರದ ತಳಭಾಗದಲ್ಲಿ 1.7 ಕಿ.ಮೀ ನಷ್ಟು ಉಪ್ಪು ನೀರಿನ ಡೆಡ್ಲಿ ಪೂಲ್ ಅನ್ನು ಕಂಡು ಹಿಡಿದ್ದಾರೆ. 10 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಕೊನೆಯ 5 ನಿಮಿಷ ಇರುವಾಗ ಈ ಕೊಳವನ್ನು ಕಂಡುಹಿಡಿದಿದ್ದಾರೆ. ಈ ಪೂಲ್ ಅತಿಹೆಚ್ಚು ಉಪ್ಪು ನೀರಿನ ಕೇಂದ್ರೀಕೃತವಾಗಿದೆ. ಜೊತೆಗೆ ರಾಸಾಯನಿಕ ಅಂಶಗಳಿಂದ ಕೂಡಿದ್ದು, ಸುತ್ತಮುತ್ತಲಿನ ಎಲ್ಲ ಸಾಗರಗಳಿಗಿಂತಲೂ ಹೆಚ್ಚು ಉಪ್ಪು ನೀರನ್ನು ಹೊಂದಿದೆ ಎಂದು ಸಂಶೋಧಕರು ವಿವರಿದ್ದಾರೆ. ಇದನ್ನೂ ಓದಿ: ನಾಲ್ವರು ಕಾಂಗ್ರೆಸ್ ಸಂಸದರು ಲೋಕಸಭೆಯಿಂದ ಅಮಾನತು

    ಅಲ್ಲದೇ ಈ ಪೂಲ್ ಜಲಚರ ಜೀವರಾಶಿಗಳನ್ನು ದಿಗ್ಭ್ರಮೆಗೊಳಿಸುತ್ತದೆ, ಜೊತೆಗೆ ಕೊಲ್ಲಲೂಬಹುದು ಎಚ್ಚರಿಸಿದ್ದಾರೆ. ಈ ಕುರಿತು ಮಾತನಾಡಿರುವ ಪ್ರಮುಖ ಸಂಶೋಧಕ ಸ್ಯಾಮ್ ಪುರ್ಕಿಸ್, ಈ ಪೂಲ್‌ಗಳು ಭೂಮಿಯ ಮೇಲ್ಮೈಗಿಂತಲೂ ಮಾರಣಾಂತಿಕ ಪರಿಸರ ವಾತಾವರಣವನ್ನು ಒಳಗೊಂಡಿರುತ್ತವೆ. ದಾರಿತಪ್ಪಿದ ಯಾವುದೇ ಪ್ರಾಣಿಗಳು ಅಥವಾ ಜಲಚರಗಳು ಈ ಪೂಲ್‌ಗಳನ್ನು ಪ್ರವೇಶಿಸಿದರೆ ಅವುಗಳ ಸಾವು ನಿಶ್ಚಿತ ಎಂದು ಹೇಳಿದ್ದಾರೆ.

    ಮೀನು, ಸೀಗಡಿ ಹಾಗೂ ಈಲ್‌ಗಳು ತಮ್ಮ ಆಹಾರಕ್ಕಾಗಿ ಭೇಟೆಯಾಡಲು ಈ ಡೆಡ್ಲಿಪೂಲ್‌ಗಳ ಸಮೀಪದ ಸ್ಥಳಗಳನ್ನು ಬಳಸಿಕೊಳ್ಳುತ್ತವೆ. ತಮ್ಮ ಆಹಾರಕ್ಕಾಗಿ ಕೊಳದ ಬಳಿ ಅಡಗಿಕೊಳ್ಳುತ್ತವೆ. ಆದರೆ ಕೊಳವನ್ನು ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಡಿಲಲ್ಲಿ ಮಗುವಿಗೆ ಹಾಲುಣಿಸುತ್ತಿರುವಾಗಲೇ ಕೊನೆಯುಸಿರೆಳೆದ ತಾಯಿ

    ಇಂತಹ ಪೂಲ್‌ಗಳು ನಮ್ಮ ಭೂಮಿಯ ಗ್ರಹದಲ್ಲಿ ಮೊದಲು ಸಾಗರಗಳು ಹೇಗೆ ರೂಪು ಗೊಂಡವು? ಎಂಬುದನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತವೆ. ಉಪ್ಪು ನೀರಿನ ಪೂಲ್‌ಗಳು ಹೆಚ್ಚಿನ ಸಂಖ್ಯೆಯ ಸೂಕ್ಷ್ಮಜೀವಿಗಳ ನೆಲೆಯಾಗಿದೆ. ವೈವಿಧ್ಯತೆಗಳಿಂದ ಸಮೃದ್ಧವಾಗಿದೆ. ಆದರೆ ಇದೇ ರೀತಿ ಪ್ರತಿಕೂಲ ಪರಿಸ್ಥಿತಿಯನ್ನು ಹೊಂದಿರುವ ಅನ್ಯಗ್ರಹಗಳು ಯಾವುದೇ ಜೀವಿಗಳಿಗೆ ಆತಿಥ್ಯ ನೀಡಬಹುದೇ ಎಂಬುದನ್ನು ನಿರ್ಧರಿಸಲು ಇಂತಹ ಆವಿಷ್ಕಾರಗಳು ಅಗತ್ಯವಾಗಿದೆ ಎಂದು ವಿವರಿಸಿದ್ದಾರೆ.

    ವಿಜ್ಞಾನಿಗಳು ಕಂಡುಹಿಡಿದ ಮೊದಲ ಉಪ್ಪುನೀರಿನ ಪೂಲ್ ಇದಲ್ಲ. ಕಳೆದ 30 ವರ್ಷಗಳಲ್ಲಿ ಸಮುದ್ರಶಾಸ್ತ್ರಜ್ಞರು ಕೆಂಪು ಸಮುದ್ರ, ಮೆಡಿಟರೇನಿಯನ್ ಸಮುದ್ರ ಮತ್ತು ಮೆಕ್ಸಿಕೋ ಕೊಲ್ಲಿಗಳಲ್ಲಿ ಸಾಕಷ್ಟು ಮಾರಣಾಂತಿಕ ಕೊಳಗಳನ್ನು ಕಂಡುಹಿಡಿದಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಚಂದ್ರನ ಮಣ್ಣಿನಿಂದ ಆಮ್ಲಜನಕ, ಇಂಧನ ಉತ್ಪಾದಿಸಬಹುದು: ಚೀನಾ

    ಚಂದ್ರನ ಮಣ್ಣಿನಿಂದ ಆಮ್ಲಜನಕ, ಇಂಧನ ಉತ್ಪಾದಿಸಬಹುದು: ಚೀನಾ

    ಬೀಜಿಂಗ್: ಚಂದ್ರನ ಮೇಲೆ ಮನುಷ್ಯರಿಗೆ ವಾಸಯೋಗ್ಯ ಪರಿಸ್ಥಿತಿಯನ್ನು ಸೃಷ್ಟಿಸಲು ತೀವ್ರ ಶೋಧನೆ ನಡೆಯುತ್ತಿದೆ. ಬಾಹ್ಯಾಕಾಶದಲ್ಲಿ ಮಾನವನಿಗೆ ಜೀವಿಸಲು ಅಗತ್ಯವಾದ ನೀರು, ಗಾಳಿ, ಶಕ್ತಿಯ ಮೂಲಗಳನ್ನು ಹುಡುಕುವ, ಉತ್ಪಾದಿಸುವ, ಸೃಷ್ಟಿಸುವ ಬಗ್ಗೆ ಹಲವು ದೇಶಗಳು ತಾಮುಂದು-ನಾಮುಂದು ಎನ್ನುತ್ತಲೇ ಇವೆ. ಇದೀಗ ಚೀನಾ ಚಂದ್ರನ ಮಣ್ಣಿನಲ್ಲಿ ಆಮ್ಲಜನಕ ಹಾಗೂ ಇಂಧನ ಉತ್ಪಾದನೆ ಸಾಧ್ಯವಿದೆ ಎಂದಿದೆ.

    ಕಳೆದ ವರ್ಷ ಚೀನಾ ತನ್ನ ಮಾನವ ರಹಿತ ಮಿಷನ್‌ನಲ್ಲಿ ಚಂದ್ರನಿಂದ ಭೂಮಿಗೆ ತರಲಾದ ಮಣ್ಣಿನ ಮಾದರಿಗಳ ತನಿಖೆಯಲ್ಲಿ ಹೊಸ ಫಲಿತಾಂಶ ಹೊರ ಬಿದ್ದಿದೆ. ಇಂಗಾಲದ ಡೈಆಕ್ಸೈಡ್ ಬಳಸಿ, ಚಂದ್ರನ ಮಣ್ಣಿನಲ್ಲಿ ಆಮ್ಲಜನಕ ಹಾಗೂ ಇಂಧನವನ್ನು ಉತ್ಪಾದಿಸುವ ಅಂಶಗಳಿವೆ ಎಂದು ಚೀನಾದ ವಿಜ್ಞಾನಿಗಳು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬೀಚ್‍ನಲ್ಲಿ ಬೇಬಿ ಡೈನೋಸಾರ್?- ವೀಡಿಯೋ ವೈರಲ್

    ಚೀನಾ ವಿಜ್ಞಾನಿಗಳ ಈ ವರದಿಯನ್ನು ಜೂಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಇದೀಗ ಸಂಶೋಧಕರು ಚಂದ್ರ ಮಾನವ ಅನ್ವೇಷಣೆಗೆ ಉಪಯುಕ್ತವಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಚಂದ್ರನಿಂದ ಭೂಮಿಗೆ ತರಲಾದ ಮಣ್ಣಿನಲ್ಲಿ ಕಬ್ಬಿಣ ಹಾಗೂ ಟೈಟಾನಿಯಂ ಸಮೃದ್ಧವಾಗಿದೆ ಎಂದು ಕಂಡುಹಿಡಿಯಲಾಗಿದೆ. ಇವು ಸೂರ್ಯನ ಬೆಳಕು ಹಾಗೂ ಇಂಗಾಲದ ಡೈಆಕ್ಸೈಡ್‌ನಿಂದ ಆಮ್ಲಜನಕ ಬಿಡುಗಡೆ ಮಾಡುವ ಶಕ್ತಿ ಹೊಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪತಿ ಆಸೆ ಈಡೇರಿಸಿದ ಮಡದಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್

    ಈ ತಂತ್ರದಲ್ಲಿ ಸೂರ್ಯನ ಬೆಳಕನ್ನು ಹೊರತುಪಡಿಸಿ ಬೇರೆ ಯಾವುದೇ ಬಾಹ್ಯ ಶಕ್ತಿಯನ್ನು ಬಳಸಲಾಗುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಇದು ನೀರು, ಆಮ್ಲಜನಕ ಹಾಗೂ ಇಂಧನದಂತಹ ವಿವಿಧ ಉತ್ಪನ್ನಗಳನ್ನು ನೀಡುತ್ತದೆ. ಚಂದ್ರನ ಮೇಲೆ ಮಾನವನ ವಾಸಕ್ಕೆ ಇದೊಂದು ಉಪಯುಕ್ತ ಸಂಶೋಧನೆ ಎಂದು ಚೀನಾ ಹೇಳಿದೆ.

  • 180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ

    180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ

    ಲಂಡನ್: ಇಂಗ್ಲೆಂಡ್ ಸಂಶೋಧಕರು 180 ಮಿಲಿಯನ್ ವರ್ಷಗಳಷ್ಟು ಹಳೆಯದಾದ ‘ಸೀ ಡ್ರ್ಯಾಗನ್’ ಪಳೆಯುಳಿಕೆಯನ್ನು ಕಂಡುಹಿಡಿದಿದ್ದಾರೆ.

    ಯುಕೆ ಸಂಶೋಧಕರು ಇಚ್ಥಿಯೋಸಾರ್‍ನ ಬೃಹತ್ ಪಳೆಯುಳಿಕೆ ಅವಶೇಷವನ್ನು ಕಂಡುಹಿಡಿದಿದ್ದಾರೆ. ಇದನ್ನು ಆಡುಮಾತಿನಲ್ಲಿ ‘ಸಮುದ್ರ(ಸೀ) ಡ್ರ್ಯಾಗನ್’ ಎಂದು ಕರೆಯಲಾಗುತ್ತದೆ. ಈ ಪಳೆಯುಳಿಕೆಯು ಅತ್ಯಂತ ದೊಡ್ಡದಾಗಿದ್ದು, ಇದರ ದೇಹವು ಸಂಪೂರ್ಣ ಅಸ್ಥಿಪಂಜರವಾಗಿರುವುದರಿಂದ ಸಂಶೋಧಕರು ಇದನ್ನು ಈ ಪ್ರದೇಶದಲ್ಲಿನ ಅತ್ಯಂತ ಮಹತ್ವದ ಸಂಶೋಧನೆಯಲ್ಲಿ ಒಂದಾಗಿದೆ ಎಂದು ವಿವರಿಸುತ್ತಾರೆ. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್

    ಇಚ್ಥಿಯೋಸಾರ್‍ಗಳ ದೇಹದ ಆಕಾರ ಡಾಲ್ಫಿನ್‍ಗಳನ್ನು ಹೋಲುತ್ತವೆ. ಈ ತಳಿಯು 250 ದಶಲಕ್ಷ ವರ್ಷಗಳ ಹಿಂದೆ ಮೊದಲು ಕಾಣಿಸಿಕೊಂಡಿದ್ದು, ನಂತರ ಸುಮಾರು 90 ದಶಲಕ್ಷ ವರ್ಷಗಳ ಹಿಂದೆಯೇ ಅಳಿದುಹೋದವು ಎಂದು ಸಂಶೋಧಕರು ವಿವರಿಸಿದ್ದಾರೆ.

    ಲೀಸೆಸ್ಟರ್‌ಶೈರ್ ಮತ್ತು ರಟ್‌ಲ್ಯಾಂಡ್ ವೈಲ್ಡ್ ಲೈಫ್ ಟ್ರಸ್ಟ್ ನ ಸಂರಕ್ಷಣಾ ತಂಡದ ನಾಯಕ ಜೋ ಡೇವಿಸ್, ಮಾಲೀಕ ಆಂಗ್ಲಿಯನ್ ವಾಟರ್ ಸಹಭಾಗಿತ್ವದಲ್ಲಿ ಈ ಶೋಧ ಕಾರ್ಯ ನಡೆದಿದೆ. ರಟ್ಲ್ಯಾಂಡ್ ಕೌಂಟಿಯ ಜಲಾಶಯದಲ್ಲಿ ಸುಮಾರು 10 ಮೀಟರ್ ಉದ್ದದ ಅಸ್ಥಿಪಂಜರ ಪತ್ತೆಯಾಗಿದೆ. ಇದನ್ನೂ ಓದಿ: ಹಿಟ್ಟಿನ ಮೇಲೆ ಉಗುಳಿ ರೊಟ್ಟಿ ಮಾಡಿದವನು ಸೇರಿ 5 ಜನ ಅರೆಸ್ಟ್ 

    ತಮ್ಮ ಸಂಶೋಧನೆ ಕುರಿತು ಮಾತನಾಡಿದ ಡೇವಿಸ್, ಈ ಸಂಶೋಧನೆಯು ನನ್ನ ವೃತ್ತಿಜೀವನದ ಪ್ರಮುಖ ಅಂಶವಾಗಿದೆ. ಈ ಜೀವಿ ಸಮುದ್ರದಲ್ಲಿ ಈಜಿದೆ ಎಂದು ಯೋಚಿಸಿದರೆ ರೋಮಾಂಚನವಾಗುತ್ತೆ. ಇದು ಅಸಾಧಾರಣವಾದ ದೇಹದ ಗಾತ್ರವನ್ನು ಹೊಂದಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

  • ಚಿಲಿಯಲ್ಲಿ ವಿಭಿನ್ನ ಬಾಲ ಹೊಂದಿರುವ ಡೈನೋಸಾರ್ ಪ್ರಭೇದ ಪತ್ತೆ

    ಚಿಲಿಯಲ್ಲಿ ವಿಭಿನ್ನ ಬಾಲ ಹೊಂದಿರುವ ಡೈನೋಸಾರ್ ಪ್ರಭೇದ ಪತ್ತೆ

    ಸ್ಯಾಂಟಿಯಾಗೊ: 7.5 ಕೋಟಿ ವರ್ಷಗಳ ಹಿಂದೆ ಭೂಮಿಯಲ್ಲಿ ಬದುಕಿತ್ತು ಎನ್ನಲಾಗುತ್ತಿರುವ ಡೈನೋಸಾರ್ ಒಂದರ 80% ದಷ್ಟು ಅಸ್ತಿಪಂಜರ ಪತ್ತೆಯಾಗಿದೆ.

    ಚಿಲಿಯ ಪ್ಯಾಟಗೋನಿಯಾದಲ್ಲಿ ಮೂರು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಸಂಶೋಧನೆಯ ಮಾಹಿತಿಯನ್ನು ಇತ್ತೀಚೆಗೆ ಪ್ಯಾಲಿಯಂಟಾಲಜಿಸ್ಟ್ ಗಳು ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ ಈ ಡೈನೋಸಾರ್‌ನ ಬಾಲ ವಿಭಿನ್ನವಾಗಿದ್ದು, ಹೊಸದೊಂದು ಪ್ರಭೇಧದ ಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

    ಇದು ಡೈನೋಸಾರ್‌ನ ಹೊಸ ಪ್ರಭೇದ ಎಂಬುದಾಗಿ ಗುರುತಿಸಲಾಗಿದೆ. ಇದರ ಬಾಲ ಇಲ್ಲಿಯ ವರೆಗೆ ಗುರುತಿಸಲಾಗಿರುವ ಪ್ರಭೇದಗಳಿಗಿಂತಲೂ ಭಿನ್ನವಾಗಿದೆ ಎಂಬುದನ್ನು ಕಂಡುಹಿಡಿದಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ 7 ಜನರಿಗೆ ಓಮಿಕ್ರಾನ್ ಪತ್ತೆ – 12ಕ್ಕೆ ಏರಿದ ಕೇಸ್

    ಈ ಹೊಸ ಜಾತಿಯ ಡೈನೋಸಾರ್ ಅನ್ನು ಸ್ಟೆಗೌರೋಸ್ ಎಲೆಂಗಸ್ಸೆನ್ ಎಂದು ಕರೆಯಲಾಗಿದ್ದು, ಇದರ ಪಳೆಯುಳಿಕೆಯನ್ನು 2018ರಲ್ಲಿ ಕಂಡುಹಿಡಿಯಲಾಗಿತ್ತು. ಹೊಸ ರೀತಿಯ ದೇಹ ರಚನೆಯುಳ್ಳ ಡೈನೋಸಾರ್‌ನ ಪತ್ತೆಯಾಗಿರವುದು ನಿಜವಾಗಿಯೂ ಅದ್ಭುತ ಎಂದು ಸಂಶೊಧಕ ಅಲೆಗ್ಸಾಂಡರ್ ವರ್ಗಾಸ್ ತಿಳಿಸಿದ್ದಾರೆ.

    ಈ ಪ್ರಭೇದದ ಬಾಲದಲ್ಲಿ ಏಳು ಜತೆ ಆಸ್ಟಿಯೋಡರ್ಮ್‍ಗಳು ಇದ್ದು, ಇದು ಡೈನೋಸಾರ್‍ಗೆ ಆಯುಧವಾಗಿ ಕೆಲಸ ಮಾಡಲು ಸಹಾಯ ಮಾಡುತ್ತಿತ್ತು ಎಂದು ತಿಳಿದುಬಂದಿದೆ. ಇಲ್ಲಿಯವರೆಗೆ ಪತ್ತೆಯಾಗಿರುವ ಡೈನೋಸಾರ್‌ಗಳಿಗಿಂತ ಇದು ವಿಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಜರತಾರಿ ಸೀರೆ, ಆಭರಣ ಧರಿಸಿ ರೈಲ್ವೇ ನಿಲ್ದಾಣದಲ್ಲಿ ಊಟ ಹಂಚಿದ ಮಹಿಳೆ

    ಇದು ಜರಿ ಗಿಡವನ್ನು ಹೋಲುವ ಬಾಲದ ರಚನೆ ಹೊಂದಿದ್ದು, ಅಸ್ಥಿಪಂಜರದ 80% ದಷ್ಟು ಭಾಗಗಳನ್ನು ಕಂಡುಹಿಡಿಯಲಾಗಿದೆ. ಸುಮಾರು 7 ಅಡಿ ಉದ್ದ ಹಾಗೂ 150 ಕೆಜಿ ತೂಗಬಹುದಾದ ಪ್ರಭೇದ ಸಸ್ಯಾಹಾರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.

     

  • ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!

    ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!

    ನ್ಯೂಯಾರ್ಕ್: ಕೊರೊನಾ ವೈರಸ್ ನಿಯಂತ್ರಿಸಲು ವಿಜ್ಞಾನಿಗಳು ಈಗಾಗಲೇ ಅನೇಕ ಲಸಿಕೆಗಳನ್ನು ಕಂಡು ಹಿಡಿದಿದ್ದು, ಇನ್ನು ವಿಜ್ಞಾನಿಗಳು ಈ ಕುರಿತಾಗಿ ಸಂಶೋಧನೆ ಮಾಡುತ್ತಿದ್ದಾರೆ. ಆದರೆ ಇದೀಗ ವೈರಸ್‍ಗೆ ಪರಿಹಾರ ಕಂಡುಕೊಳ್ಳಲು ವಿಜ್ಞಾನಿಗಳು ಚೂಯಿಂಗಮ್ ಮೊರೆ ಹೋಗಿದ್ದಾರೆ.

    ಸಸ್ಯಜನ್ಯ ಪ್ರೊಟೀನ್‌ ಲೇಪಿತ ಚೂಯಿಂಗಮ್‍ನ್ನು ಸೇವಿಸುವ ಮೂಲಕ ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ನ್ಯಾಷನಲ್ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ಇದನ್ನು ಸಾಬೀತು ಪಡಿಸಿದೆ. ಇದನ್ನೂ ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ

    ಸಸ್ಯಜನ್ಯ ಪ್ರೊಟೀನ್‌ ಲೇಪಿತ ಚೂಯಿಂಗಮ್‍ನ್ನು ಜಗಿಯುವ ಮೂಲಕ ಕೊರೊನಾ ಹರಡುವುದನ್ನು ತಡೆಯಬಹುದು ಎಂದು ಹೇಳಲಾಗಿದೆ. ವೈರಸ್ ಬಾಯಿಯ ಲಾಲಾರಸದಲ್ಲಿ ಅಡಗಿರುತ್ತದೆ. ಇದು ಕೆಮ್ಮಿದಾಗ, ಸೀನಿದಾಗ ವೇಗವಾಗಿ ಪ್ರಸರಣ ಹೊಂದುತ್ತದೆ. ಸಂಶೋಧಿಸಲಾದ ಚೂಯಿಂ ಗಮ್ ಅಗೆಯುವ ಮೂಲಕ ಲಾಲಾರಸದಲ್ಲಿನ ವೈರಸ್‍ಗಳನ್ನು ಕೊಲ್ಲಬಹುದು ಎಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕ ಹೆನ್ರಿ ಡೆನೀಯಲ್ ಹೇಳಿದ್ದಾರೆ. ಇದನ್ನೂ ಓದಿ: ಪಾಸಿಟಿವ್ ಬಂದಿದ್ದ ವಿದ್ಯಾರ್ಥಿಗಳಿಗೆ ಎರಡೇ ದಿನದಲ್ಲಿ ನೆಗೆಟಿವ್ ರಿಪೋರ್ಟ್!

    ಕೋವಿಡ್ ರೋಗಿಗಳಿಗೆ ಈ ಗಮ್ ಅನ್ನು ನೀಡಿದಾಗ ಅವರ ಲಾವಾರಸದಲ್ಲಿನ ಕೊರೊನಾ ವೈರಸ್‍ನ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಕಂಡು ಬಂದಿದೆ. ಇದನ್ನು ಕ್ಲಿನಿಕಲ್ ಟ್ರಯಲ್‍ಗೆ ನೀಡಬೇಕಾಗಿದೆ ಎಂದು ಹೆನ್ರಿ ಡೇನಿಯಲ್ ಹೇಳಿದ್ದಾರೆ.

  • ಕೋವಿಡ್‍ನಿಂದ ಕಡಿಮೆಯಾಯ್ತು ಜೀವಿತಾವಧಿ – ಹೊಸ ಅಧ್ಯಯನದಲ್ಲಿ ಭಾರತೀಯರಿಗೆ ಶಾಕಿಂಗ್ ನ್ಯೂಸ್

    ಕೋವಿಡ್‍ನಿಂದ ಕಡಿಮೆಯಾಯ್ತು ಜೀವಿತಾವಧಿ – ಹೊಸ ಅಧ್ಯಯನದಲ್ಲಿ ಭಾರತೀಯರಿಗೆ ಶಾಕಿಂಗ್ ನ್ಯೂಸ್

    ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದಿಂದ ಭಾರತೀಯರ ಜೀವಿತಾವಧಿ ಎರಡು ವರ್ಷ ಕಡಿಮೆಯಾಗಿದೆ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ. 2019ಕ್ಕೆ ಹೋಲಿಸಿದರೇ 2020ಕ್ಕೆ ಎರಡು ವರ್ಷಗಳ ಜೀವಿತಾವಧಿ ಕಡಿಮೆಯಾಗಿದೆ ಎಂದು ಹೊಸ ಸಂಶೋಧನೆ ಹೇಳಿದೆ.

    ಮುಂಬೈ ಮೂಲದ ಇಂಟರ್‌ನ್ಯಾಶನಲ್ ಇನ್‍ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸ್ಟಡೀಸ್‍ನಿಂದ ಈ ಅಧ್ಯಯನ ನಡೆದಿದ್ದು, 145 ರಾಷ್ಟ್ರಗಳ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (ಜಿಬಿಡಿ) ಅಧ್ಯಯನ ಮತ್ತು ಕೋವಿಡ್ ಇಂಡಿಯಾ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (ಎಪಿಐ) ಪೋರ್ಟಲ್ ವಿಶ್ಲೇಷಣೆಗಾಗಿ ಸಂಗ್ರಹಿಸಿದ ಡೇಟಾವನ್ನು ಬಳಸಿ ಸಂಶೋಧನೆ ನಡೆಸಲಾಗಿದೆ.  ಇದನ್ನೂ ಓದಿ:  ಅಮಿತ್ ಶಾ ಜಮ್ಮು & ಕಾಶ್ಮೀರ ಭೇಟಿ – ತೀವ್ರ ಕುತೂಹಲ

    ಈ ಅಧ್ಯಯನ ವರದಿ BMC ಪಬ್ಲಿಕ್ ಹೆಲ್ತ್‌ನಲ್ಲಿ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದು, ವರದಿಯಲ್ಲಿ ಭಾರತೀಯರ ಜೀವಿತಾವಧಿ ಎರಡು ವರ್ಷ ಕಡಿಮೆಯಾಗಿದೆ ಎಂದು ಉಲ್ಲೇಖಿಸಿದೆ. ಅಧ್ಯಯನದ ಪ್ರಕಾರ 2020 ರಲ್ಲಿ ಮಹಿಳೆಯರ ಜೀವಿತಾವಧಿ 67.5 ಮತ್ತು 69.8 ವರ್ಷಕ್ಕೆ ಕುಸಿತ ಕಂಡಿದೆ. ಇದು 2019 ರಲ್ಲಿ 69.5 ವರ್ಷಗಳು ಮತ್ತು 72 ವರ್ಷಗಳಿತ್ತು.  ಇದನ್ನೂ ಓದಿ:  ಪ್ರಜ್ವಲ್ ರೇವಣ್ಣಗಿನ್ನೂ ಮದ್ವೆನೇ ಆಗಿಲ್ಲ, ತಾತನಿಂದ ಒಳ್ಳೇದನ್ನ ತಿಳ್ಕೋಬೇಕು: ಸೋಮಣ್ಣ ವ್ಯಂಗ್ಯ

    35-69 ವರ್ಷದ ನಡುವಿನ ಮಹಿಳೆಯರಲ್ಲಿ, 35-79 ವರ್ಷದ ಪುರುಷರಲ್ಲಿ ಕೊರೊನಾ ಹೆಚ್ಚು ಪತ್ತೆಯಾಗಿತ್ತು. ಕೊರೊನಾದಿಂದ ಈ ವಯೋಮಾನದ ಜನರು ಸಾವನ್ನಪ್ಪಿದರು. ಹೀಗಾಗಿ ಇದೇ ವಯೋಮಾನದ ಜನರ ಜೀವಿತಾವಧಿ ಕಡಿಮೆಯಾಗಿದೆ ಎನ್ನಲಾಗಿದೆ. ಇನ್ನು ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಪರಿಸ್ಥಿತಿ ಉತ್ತಮ ಎನ್ನಲಾಗಿದ್ದು ಅಮೆರಿಕಾ, ಇಂಗ್ಲೆಂಡ್ ಸೇರಿ ಹಲವು ದೇಶಗಳಲ್ಲಿ 2.28 ವರ್ಷಕ್ಕೆ ಜೀವಿತಾವಧಿ ಕುಸಿದಿದೆ ಎಂದು ವರದಿ ಹೇಳಿದೆ.

  • ಕರಾವಳಿಯಲ್ಲಿ ಪತ್ತೆಯಾದ ಹಾಕ್ಸ್ ಬಿಲ್ ಆಮೆ ಕಳೆಬರ

    ಕರಾವಳಿಯಲ್ಲಿ ಪತ್ತೆಯಾದ ಹಾಕ್ಸ್ ಬಿಲ್ ಆಮೆ ಕಳೆಬರ

    ಕಾರವಾರ: ಪಶ್ಚಿಮ ಕರಾವಳಿಯಲ್ಲಿ ಮೊದಲ ಬಾರಿ ಸಮುದ್ರ ಆಮೆಗಳಲ್ಲಿ ಅತೀ ಚಿಕ್ಕ ಆಮೆಗಳ ಪ್ರಭೇದ ಎಂದು ಕರೆಸಿಕೊಳ್ಳುವ ಹಾಕ್ಸ್ ಬಿಲ್ ಜಾತಿಯ, ಸ್ಥಳೀಯ ಭಾಷೆಯಲ್ಲಿ ‘ಗಿಡುಗ ಆಮೆ’ ಎಂದು ಕರೆಯಲ್ಪಡುವ ಅಪರೂಪದ ಆಮೆ ಪತ್ತೆಯಾಗಿದೆ.

    ಕಾರವಾರದ ತಿಳುಮಾತಿ ಬೀಚ್ ಬಳಿ ಅದರ ಕಳೆಬರವನ್ನು ಕಡಲಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಂಚಮಿಯವರು ಪತ್ತೆ ಮಾಡಿದ್ದಾರೆ. ಈ ಆಮೆಯು ಸಮುದ್ರ ಆಮೆಗಳಲ್ಲಿಯೇ ಗಾತ್ರದಲ್ಲಿ ಅತೀ ಚಿಕ್ಕದಾಗಿದ್ದು, ಇದರ ಮುಖವು ಗಿಡಗನ ಮುಖದಂತೆ ಹೋಲುತ್ತದೆ. ದೇಹದ ಮೇಲೆ ಹುಲಿಯ ದೇಹದಂತೆ ಪಟ್ಟೆಗಳಿದ್ದು, ಕಾಲುಗಳಲ್ಲಿ ಎರಡು ಉಗುರುಗಳಿವೆ. ನೋಡಲು ತುಂಬಾ ಸುಂದರವಾಗಿ ಕಾಣುವ ಈ ಆಮೆ ಹೆಚ್ಚಾಗಿ ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರಗಳಲ್ಲಿ ಹಾಗೂ ಅಂಡಮಾನ್, ನಿಕೋಬಾರ್‌ನ ಆಳವಿಲ್ಲದ ಕಡಲಲ್ಲಿ, ಹವಳದ ದಿಬ್ಬಗಳ ನಡುವೆ ಕಂಡು ಬರುತ್ತದೆ.

     Hawksbill Turtle

    ಇದು 4,000 ಕಿಲೋಮೀಟರ್‌ಗೂ ಹೆಚ್ಚು ದೂರ ಸಮುದ್ರದಲ್ಲಿ ಪ್ರಯಾಣ ಬೆಳೆಸುವ ಸಾಮರ್ಥ್ಯ ಹೊಂದಿದೆ. ಒಂದು ಮೀಟರ್ ಉದ್ದ, 100 ಕಿಲೋಗ್ರಾಂ ತೂಕವಿರುವ ಈ ಆಮೆ 2ರಿಂದ 3 ವರ್ಷಗಳಿಗೊಮ್ಮೆ ಮಿಲನದ ನಂತರ ಮೊಟ್ಟೆಯಿಡುತ್ತದೆ. ಇದರ ಬಗ್ಗೆ ಈವರೆಗೂ ಹೆಚ್ಚು ಅಧ್ಯಯನಗಳು ಆಗಿರುವುದಿಲ್ಲ. ಬಂಗಾಳ ಕೊಲ್ಲಿ ಸೇರಿದಂತೆ ಇತರ ಭಾಗದಲ್ಲಿ ಕಂಡುಬರುವ ‘ಆಲಿವ್ ರಿಟ್ಟಿ’ ಜಾತಿಯ ಆಮೆಗಳಂತೆ ಬಹುತೇಕ ಇದರ ಜೀವನಕ್ರಮ ಹೋಲುತ್ತದೆ. ಇದನ್ನೂ ಓದಿ:ಮನೆ ಮೇಲ್ಛಾವಣಿ, ಗೋಡೆ ಕುಸಿತ- ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು

    ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ಕಳೆದ ಒಂದು ವಾರದ ಹಿಂದೆ ಎರಡು ಆಮೆಗಳ ಕಳೆಬರ ಪತ್ತೆಯಾಗಿತ್ತು. ಇದರ ನಂತರ ಇದೀಗ ಮತ್ತೆ ಆಮೆಯ ಕಳೆಬರ ಕಂಡುಬಂದಿದೆ. ಅತೀ ಹೆಚ್ಚು ಆಯುಷ್ಯವನ್ನು ಹೊಂದಿರುವ ಆಮೆಗಳು ಹೀಗೇ ಒಂದಾದ ಮೇಲೊಂದರಂತೆ ಸತ್ತು ಕಡಲತೀರಗಳಿಗೆ ಬರತೊಡಗಿದೆ. ಹೀಗಾಗಿ ಇವುಗಳ ಸಾವಿನ ಬಗ್ಗೆ ಹೆಚ್ಚು ಅಧ್ಯಯನದ ಅವಶ್ಯಕತೆ ಇದೆ. ಇದನ್ನೂ ಓದಿ:ಮುಖ್ಯಮಂತ್ರಿ ಆಗುವ ಕಾಲ ಬಂದೇ ಬರುತ್ತೆ- ಯತ್ನಾಳ್ ಸಿಎಂ ಆಗುವ ಇಂಗಿತ

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾರವಾರದ ಡಿ.ಸಿ.ಎಫ್ ವಸಂತ್ ರೆಡ್ಡಿಯವರು ಇದೇ ಮೊದಲ ಬಾರಿಗೆ ಹಾಕ್ಸ್ ಬಿಲ್ ಜಾತಿಯ ಆಮೆ ಪತ್ತೆಯಾಗಿದೆ. ಇದರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಇದು ಹೇಗೆ ಸಾವಾಗಿದೆ ಎಂಬುದು ತಿಳಿಯಲಿದೆ ಎಂದು ತಿಳಿಸಿದ್ದಾರೆ.