Tag: ಸಂಭ್ರಮಾಚರಣೆ

  • 2018ಕ್ಕೆ ಗುಡ್‍ಬೈ.. 2019ಕ್ಕೆ ವೆಲ್‌ಕಮ್‌

    2018ಕ್ಕೆ ಗುಡ್‍ಬೈ.. 2019ಕ್ಕೆ ವೆಲ್‌ಕಮ್‌

    – ಡ್ಯಾನ್ಸ್ ಮಾಡಿ ಸಂಭ್ರಮಿಸಿದ ಜನ
    – ಸೋಮವಾರ ಸಂಜೆಯಿಂದಲೇ ಬಾರ್‌ಗಳಿಗೆ ಭರ್ಜರಿ ವ್ಯಾಪಾರ

    ಬೆಂಗಳೂರು: 2018ಗೆ ಟಾಟಾ ಹೇಳಿ ಹೊಸ ವರ್ಷ 2019 ಅನ್ನು ರಾಜ್ಯದ ಜನ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಸಾವಿರಾರು ಯುವಕ-ಯುವತಿಯರು ರಸ್ತೆಗೆ ಇಳಿದು ನೃತ್ಯ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

    ಹೊಸ ವರ್ಷದ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದಲೇ ಬೆಂಗಳೂರಿನ ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್, ಕ್ಲಬ್‍ಗಳಲ್ಲಿ ಪಾರ್ಟಿಗಳು ಜೋರಾಗಿತ್ತು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿತ್ತು.

    ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರವಹಿಸಿತ್ತು. ಮಂಗಳವಾರ ಬೆಳಗ್ಗೆ 6 ಗಂಟೆವರೆಗೆ ವಿಮಾನ ನಿಲ್ದಾಣ ರಸ್ತೆ, ತುಮಕೂರು ರೋಡ್‍ನ ಫ್ಲೈಓವರ್ ಹೊರತುಪಡಿಸಿ ಬೆಂಗಳೂರಿನ ಎಲ್ಲಾ ಫ್ಲೈಓವರ್‌ಗಳಲ್ಲಿ ಸಂಚಾರವನ್ನು ರದ್ದು ಮಾಡಲಾಗಿತ್ತು.

    ಬಳ್ಳಾರಿ: ನಗರದ ಹೈದ್ರಾಬಾದ್ ಬಿರಿಯಾನಿ ಹೋಟೆಲ್‍ನಲ್ಲಿ ಹೊಸ ವರ್ಷವನ್ನ ವಿನೂತನವಾಗಿ ಆಚರಣೆ ಮಾಡಲಾಗುತ್ತಿದೆ. ಹೋಟೆಲ್‍ಗೆ ಬಿರಿಯಾನಿ ತಿನ್ನಲು ಬರುವ ಗ್ರಾಹಕರಿಗೆ ಹೈದರಾಬಾದ್ ಮ್ಯಾಂಗೋ ಪಾಯಸ ವಿತರಣೆ ಮಾಡಿ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಹೋಟೆಲ್ ಮಾಲೀಕ ಮೊಹಮ್ಮದ್ ಮುನ್ನಾವರ್ ಗ್ರಾಹಕರಿಗೆ ಹೈದ್ರಾಬಾದ್ ಪಾಯಸ ವಿತರಣೆ ಮಾಡಿ ವಿಶ್ ಮಾಡುತ್ತಿರುವುದು ವಿಶೇಷವಾಗಿದೆ.

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ವಸ್ತ್ರಮಠ ಅವರು ನಗರ ಹೊರವಲಯದ ಗೋನೂರಿನ ನಿರಾಶ್ರಿತರ ಕೇಂದ್ರದಲ್ಲಿ ವಿನೂತನವಾಗಿ ಹೊಸ ವರ್ಷವನ್ನು ಸ್ವಾಗತಿಸಿದರು. ಈ ವೇಳೆ ನಿರಾಶ್ರಿತರಿಗೆ ಹಣ್ಣು, ಹಂಪಲು ಹಂಚಲಾಯಿತು. ಈ ಸಂಭ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಕೂಡ ಭಾಗಿಯಾಗಿದ್ದರು.

    ಕಾರವಾರ: ಹೊಸ ವರ್ಷವನ್ನು ಬರಮಾಡಿಕೊಳ್ಳಲು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ್ ಟಾಗೋರ್ ಬೀಚ್‍ನಲ್ಲಿ ಸಾವಿರಾರು ಜನರು ಸೇರಿದ್ದರು. ನಗರ ಹಾಗೂ ವಿವಿಧ ಪ್ರದೇಶದ ಪ್ರವಾಸಿಗರು, ಬೀಚ್‍ನಲ್ಲಿ ಹಾಡಿಗೆ ಹೆಜ್ಜೆ ಹಾಕುತ್ತ, ಕುಣಿದು ಕುಪ್ಪಳಿಸಿದರು.

    ಹುಬ್ಬಳ್ಳಿ: ನಗರದ ಉಣಕಲ್ ಕೆರೆ ದಂಡೆಯ ಮೇಲಿರುವ ನವೀನ್ ಹೋಟೆಲ್‍ನಲ್ಲಿ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಚನ್ನಮ್ಮ ಸರ್ಕಲ್, ದುರ್ಗದ ಬೈಲು ಸೇರಿದಂತೆ ವಿವಿಧ ಕಡೆಗಳಲ್ಲಿ ಸಾರ್ವಜನಿಕರು ಸೇರಿ ನ್ಯೂವ್ ಇಯರ್ ಸೆಬ್ರೆಷನ್ ಮಾಡಿದರು.

    ಶಿವಮೊಗ್ಗ: ನಗರದ ಕಂಟ್ರಿ ಕ್ಲಬ್‍ನಲ್ಲಿ ಫ್ಯಾಷನ್ ಶೋ, ಫ್ಯಾಮಿಲಿ ಗೇಮ್ಸ್, ಹಾಡು ನೃತ್ಯದ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.

    ಬಾಗಲಕೋಟೆ: ನಗರದ ಹರಿಪ್ರಿಯಾ ಹಾಗೂ ಕಂಠಿ ಹೋಟೆಲ್‍ನಲ್ಲಿ ವೇದಿಕೆ ನಿರ್ಮಿಸಿ, ಯುವಕ- ಯುವತಿಯರು ಡ್ಯಾನ್ಸ್ ಮಾಡಿದರು. ನಗರದ ವಿವಿಧ ಪ್ರದೇಶದಲ್ಲಿ ಮಹಿಳೆಯರು, ಮಕ್ಕಳು, ಯುವಕ ಯುವತಿಯರು ಡ್ಯಾನ್ಸ್ ಮಾಡಿ ಹೊಸ ವರ್ಷವನ್ನು ಸಂಭ್ರಮಿಸಿದರು.

    ಉಡುಪಿ: ಉಡುಪಿಯ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ನ್ಯೂ ಇಯರ್ ಪಾರ್ಟಿ ಆಯೋಜಿಸಲಾಗಿತ್ತು. ದಂಪತಿಗೆ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇದು ಪ್ರಜಾಪ್ರಭುತ್ವದ ಗೆಲುವು – ಕಾಂಗ್ರೆಸ್ ಸಂಭ್ರಮಾಚರಣೆ

    ಇದು ಪ್ರಜಾಪ್ರಭುತ್ವದ ಗೆಲುವು – ಕಾಂಗ್ರೆಸ್ ಸಂಭ್ರಮಾಚರಣೆ

    ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಜಾಪ್ರಭುತ್ವದ ಗೆಲುವೆಂದು ಹೇಳಿ ಕಾಂಗ್ರೆಸ್ ಸಂಭ್ರಮಿಸಿದೆ.

    ಇಂದು ಭಾರತವು ದ್ವೇಷವನ್ನು ಬಿಟ್ಟು ಪ್ರೀತಿ ಮತ್ತು ಸ್ನೇಹವನ್ನು, ಹಿಂಸೆಯನ್ನು ಬಿಟ್ಟು ಶಾಂತಿಯನ್ನು, ಸುಳ್ಳನ್ನು ಬಿಟ್ಟು ಸತ್ಯವನ್ನು ಆಯ್ಕೆ ಮಾಡಿಕೊಂಡಿದೆ. ಈ ಜಯ ನಿಮ್ಮದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    5 ರಾಜ್ಯಗಳ ಫಲಿತಾಂಶ ದೇಶದ ಜನತೆ ಬಿಜೆಪಿ ಆಡಳಿತದಲ್ಲಿ ವಿಶ್ವಾಸ ಕಳೆದುಕೊಂಡಿರುವುದು ತೋರಿಸುತ್ತದೆ. ಸುಳ್ಳುಗಳು, ಕೋಮು ದ್ವೇಷ ಹರಡುವ ವಿಷಯಗಳ ಮೇಲಿನ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ. ನೈಜ ವಿಚಾರಗಳು ಮತ್ತು ಅಭಿವೃದ್ಧಿ ಬಯಸಿ ಮತ ಚಲಾವಣೆಯಾಗಿದೆ. ಈ ಬದಲಾವಣೆ 2019ರ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

    ಮೂರು ರಾಜ್ಯಗಳ ಭರ್ಜರಿ ಜಯದಿಂದಾಗಿ ದೆಹಲಿಯ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಅಲ್ಲದೇ ಕಾಂಗ್ರೆಸ್ ಮತದಾರರಿಗೆ ಟ್ವೀಟ್ ಮೂಲಕ ಧನ್ಯವಾದವನ್ನು ಸಲ್ಲಿಸಿದೆ.

    ಈ ಗೆಲುವು ಪ್ರಜಾಪ್ರಭುತ್ವದ ಗೆಲುವಾಗಿದೆ. ದ್ವೇಷದ ಮೇಲಿನ ಪ್ರೀತಿಯನ್ನು, ಹಿಂಸೆಯ ಮೇಲಿನ ಶಾಂತಿಯನ್ನು ಹಾಗೂ ಸುಳ್ಳಿನ ಮೇಲಿನ ಸತ್ಯವನ್ನು ಆಯ್ಕೆಮಾಡಿಕೊಂಡ ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತದೆ. ಈ ಜಯ ನಿಮ್ಮದು ಎಂದು ಬರೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮನೆಯಲ್ಲಿ ಇಂದು ಡಬಲ್ ಧಮಾಕಾ!

    ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮನೆಯಲ್ಲಿ ಇಂದು ಡಬಲ್ ಧಮಾಕಾ!

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ಮನೆಯಲ್ಲಿ ಇಂದು ಡಬಲ್ ಧಮಾಕಾ ನಡೆಯಲಿದೆ. ಶಿವರಾಜ್‍ಕುಮಾರ್ ಇಂದು ತಮ್ಮ 32ನೇ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಮತ್ತೊಂದೆಡೆ ‘ಓಂ’ ಚಿತ್ರ ಬಿಡುಗಡೆಗೊಂಡು 23 ವರ್ಷಗಳು ಆಗಿದೆ.

    ಶಿವರಾಜ್‍ಕುಮಾರ್ ತನ್ನ ಪತ್ನಿ ಗೀತಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 32 ವರ್ಷ ಆಗಿದೆ. ಮೇ 19, 1986ರಲ್ಲಿ ಶಿವರಾಜ್‍ಕುಮಾರ್ ಪತ್ನಿ ಗೀತಾ ಅವರನ್ನು ಮದುವೆಯಾಗಿದ್ದರು. 32 ವರ್ಷದಲ್ಲಿ ಗೀತಾ ನಟ ಶಿವರಾಜ್‍ಕುಮಾರ್ ಅವರಿಗೆ ಅತ್ಯುತ್ತಮ ಪತ್ನಿ ಎನಿಸಿಕೊಂಡಿದ್ದಾರೆ. ಮನೆಗೆಲಸ ಅಲ್ಲದೇ ಶಿವರಾಜ್ ಕುಮಾರ್ ಅವರ ಸಿನಿಮಾಗೆ ಸಂಬಂಧಪಟ್ಟಂತ ಕೆಲಸಗಳಲೂ ಗೀತಾ ಶಿವಣ್ಣನಿಗೆ ಸಾಥ್ ನೀಡಿದ್ದಾರೆ.

    ಮೇ 19, 1986ರಲ್ಲಿ ಶಿವರಾಜ್‍ಕುಮಾರ್ ಗೀತಾ ಅವರ ಜೊತೆ ಆರೇಂಜ್ ಮ್ಯಾರೇಜ್ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ನಿವೇದಿತಾ ಹಾಗೂ ನಿರೂಪಮಾ ಇಬ್ಬರೂ ಹೆಣ್ಣು ಮಕ್ಕಳಿದ್ದು, ನಿರೂಪಮಾ ಆಗಸ್ಟ್ 31, 2015ರಂದು ದಿಲೀಪ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಜ್‍ಕುಮಾರ್ ಮೊಮ್ಮಕ್ಕಳಲ್ಲಿ ನಿರೂಪಮಾ ಅವರ ಮೊದಲ ಮದುವೆಯಾಗಿದ್ದು, ಶಿವರಾಜ್‍ಕುಮಾರ್ ಅದ್ಧೂರಿಯಾಗಿ ತಮ್ಮ ಮಗಳ ಮದುವೆಯನ್ನು ನಡೆಸಿಕೊಟ್ಟಿದ್ದರು.

    ಇನ್ನೊಂದೆಡೆ ಸೂಪರ್ ಸ್ಟಾರ್ ಉಪೇಂದ್ರ ನಿರ್ದೇಶಿಸಿದ್ದ ಶಿವರಾಜ್‍ಕುಮಾರ್ ನಟನೆಯ ‘ಓಂ’ ಚಿತ್ರ ತೆರೆಗೆ ಬಂದು ಇಂದು 23 ವರ್ಷಗಳು ಆಗಿದೆ. ಮೇ 19, 1995ರಲ್ಲಿ ಓಂ ಚಿತ್ರ ಬಿಡುಗಡೆಯಾಗಿದ್ದು, ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಓಂ ಚಿತ್ರ 550 ಬಾರಿ ರೀ ರಿಲೀಸ್ ಆಗಿ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದಿದೆ. ಓಂ ಚಿತ್ರಕ್ಕಾಗಿ ಶಿವರಾಜ್‍ಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.

    ಓಂ ಚಿತ್ರ ಮಾಸ್ ಸಿನಿಮಾ ಹಾಗೂ ಅಂಡರ್ ವರ್ಲ್ಡ್ ಕಥೆಯನ್ನು ಹೊಂದಿದೆ. ಈ ಚಿತ್ರವನ್ನು ಉಪೇಂದ್ರ ಅವರು ನಿರ್ದೇಶನ ಮಾಡಿದ್ದು, ಶಿವರಾಜ್‍ಕುಮಾರ್ ಅವರಿಗೆ ನಟಿ ಪ್ರೇಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

     

  • ಫಲಿತಾಂಶಕ್ಕೂ ಮೊದ್ಲೇ ಬಿಜೆಪಿ ಅಭ್ಯರ್ಥಿಯಿಂದ ವಿಜಯೋತ್ಸವ!

    ಫಲಿತಾಂಶಕ್ಕೂ ಮೊದ್ಲೇ ಬಿಜೆಪಿ ಅಭ್ಯರ್ಥಿಯಿಂದ ವಿಜಯೋತ್ಸವ!

    ಕಲಬುರಗಿ: ಸಂಗೋಳಗಿ (ಜಿ) ಗ್ರಾಮದಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ವಿಜಯೋತ್ಸವ ಆಚರಿಸಿದ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನಲ್ಲಿ ನಡೆದಿದೆ.

    ಆಳಂದ ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಗೆಲುವು ನಿಶ್ಚಿತ ಎಂದು ವಿಜಯೋತ್ಸವ ಆಚರಿಸುತ್ತಿದ್ದಾರೆ. ಅಲ್ಲದೇ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

    ಆಳಂದ ತಾಲೂಕಿನಾದ್ಯಂತ ಬಿಜೆಪಿ ಅಲೆಯಿದ್ದು, ಗೆಲುವು ಖಚಿತ ಎಂದು ಸಂಭ್ರಮಿಸುತ್ತಿದ್ದಾರೆ.

  • ಧಾರವಾಡದಲ್ಲಿ ಶಿವಾಜಿ ಜಯಂತಿ ಸಂಭ್ರಮಾಚರಣೆ – ಗಾಳಿಯಲ್ಲಿ ಗುಂಡು ಹಾರಿಸಿದ ಮುಖಂಡ

    ಧಾರವಾಡದಲ್ಲಿ ಶಿವಾಜಿ ಜಯಂತಿ ಸಂಭ್ರಮಾಚರಣೆ – ಗಾಳಿಯಲ್ಲಿ ಗುಂಡು ಹಾರಿಸಿದ ಮುಖಂಡ

    ಧಾರವಾಡ: ಶಿವಾಜಿ ಜಯಂತಿ ಹಿನ್ನೆಲೆಯಲ್ಲಿ ಮರಾಠಾ ಸಮಾಜದ ಸಂಭ್ರಮಾಚರಣೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ನಗರದ ಮರಾಠಾ ಕಾಲೋನಿಯ ಶಿವಾಜಿ ಪುತ್ಥಳಿ ಬಳಿ ನಡೆದ ಕಾರ್ಯಕ್ರಮದಲ್ಲಿ ಮಂಜುನಾಥ ಕದಂ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮರಾಠಾ ಸಮಾಜದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ನಾಮನಿರ್ದೇಶಿತ ಪಾಲಿಕೆ ಸದಸ್ಯರಾಗಿರುವ ಮಂಜುನಾಥ್ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ತಮ್ಮ ರಿವಾಲ್ವರ್ ನಿಂದ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

    ಈ ವೇಳೆ ಪಾಲಿಕೆ ಸದಸ್ಯರಾದ ರಾಜು ಅಂಬೋರೆ ಹಾಗೂ ಅಲ್ತಾಫ್ ಕಿತ್ತೂರ ಕೂಡಾ ಸ್ಥಳದಲ್ಲಿ ಉಪಸ್ಥಿತರಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತರಿಗೆ ಮಾಧ್ಯಮಗಳು ಪ್ರಶ್ನಿಸಿದರೆ, ಮರಾಠಾ ಮಂಡಳಿಯವರು ಪ್ರತಿ ವರ್ಷ ಶಿವಾಜಿ ಜಯಂತಿಗೆ ಈ ರೀತಿ ಆಚರಣೆ ಮಾಡುತ್ತಾ ಬಂದಿದ್ದಾರೆ. ಅದೇ ರೀತಿ ಅವರು ಇಂದು ಕೂಡಾ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಉತ್ತರಿಸಿದ್ದಾರೆ.

  • ಸಂಭ್ರಮಾಚರಣೆಯ ವೇಳೆ ಗುಂಡೇಟಿಗೆ 7ರ ಬಾಲಕಿ ಬಲಿ

    ಸಂಭ್ರಮಾಚರಣೆಯ ವೇಳೆ ಗುಂಡೇಟಿಗೆ 7ರ ಬಾಲಕಿ ಬಲಿ

    ಭೋಪಾಲ್: ಇತ್ತೀಚಿನ ದಿನಗಳಲ್ಲಿ ಮದುವೆ ಮನೆಯಲ್ಲಿ ನಡೆಯುವ ಗುಂಡು ಹಾರಿಸಿ ಸಂಭ್ರಮಾಚರಿಸುವುದಕ್ಕೆ ಹಲವಾರು ಮಂದಿ ಬಲಿಯಾಗುತ್ತಿದ್ದಾರೆ. ಇಂತಹದ್ದೇ ಘಟನೆಯೊಂದು ಇದೀಗ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

    ಹೌದು. ಮದುವೆ ಸಂಭ್ರಮಾಚರಣೆಯ ವೇಳೆ ನಡೆಸಿದ ಗುಂಡೇಟಿಗೆ 7 ವರ್ಷದ ಬಾಲಕಿ ಸೆಜಲ್ ಜಾದೌನ್ ಎಂಬಾಕೆ ಬಲಿಯಾಗಿದ್ದಾಳೆ. ಇದನ್ನೂ ಓದಿ: ವಧುವಿನ ತಂದೆ ಹಾರಿಸಿದ ಗುಂಡಿಗೆ ಟೆರೇಸ್ ಮೇಲಿದ್ದ ನೆರೆಮನೆಯ ಯುವತಿ ಬಲಿ!

    ಸಂಬಂಧಿಕರ ಮನೆಯಲ್ಲಿನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬಾಲಕಿ ತನ್ನ ತಂದೆಯ ಜೊತೆ ತೆರಳಿದ್ದಳು. ಎಲ್ಲರೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಬಾಲಕಿ ತನ್ನ ತಂದೆ ಸತೇಂದ್ರ ಜಾದೌನ್ ಜೊತೆ ನಿಂತಿದ್ದಳು. ಸಂಭ್ರಮಚಾಚರಣೆಯಲ್ಲಿ ಭಾಗಿಯಾಗಿದ್ದವರು ಸಂಭ್ರಮವನ್ನು ಇಮ್ಮಡಿಗೊಳಿಸಲು ಗುಂಡು ಹಾರಿಸಿದ್ದಾರೆ. ಈ ವೇಳೆ ಅವುಗಳಲ್ಲಿ ಒಂದು ಗುಂಡು ಬಾಲಕಿ ಹೊಟ್ಟೆಗೆ ಬಂದು ಬಿದ್ದಿದೆ.

    ಘಟನೆ ನಡೆದ ಕೂಡಲೇ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ. ಈ ಕುರಿತು ಸೊಂಡ ಕೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಬ್ಯಾಚುಲರ್ ಪಾರ್ಟಿಯಲ್ಲಿ ವರನ ಮರ್ಮಾಂಗಕ್ಕೆ ಗೆಳೆಯನಿಂದ್ಲೇ ಬಿತ್ತು ಗುಂಡೇಟು!


    ಕೆಲ ದಿನಗಳ ಹಿಂದೆಯಷ್ಟೇ 28 ವರ್ಷದ ಯೋಧರೊಬ್ಬರು ತನ್ನ ಗೆಳೆಯನ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಗುಂಡೇಟು ತಗುಲಿ ಗಂಭೀರ ಗಾಯಗೊಂಡಿದ್ದರು.

  • ಸಂಗೀತ್ ಕಾರ್ಯಕ್ರಮದ ಆಚರಣೆ ವೇಳೆ ಗುಂಡು ತಾಗಿ ವರ ಸಾವು

    ಸಂಗೀತ್ ಕಾರ್ಯಕ್ರಮದ ಆಚರಣೆ ವೇಳೆ ಗುಂಡು ತಾಗಿ ವರ ಸಾವು

    ಚಂಢೀಘಢ: ಮದುವೆ ಮನೆಯಲ್ಲಿ ಸಂಭ್ರಮಾಚರಣೆ ನಡೆಸುವಾಗ ಗಾಳಿಯಲ್ಲಿ ಹಾರಿಸಿದ ಗುಂಡು ಅಚಾನಕ್ ಆಗಿ ಮಧುಮಗನಿಗೆ ತಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವರ ಸಾವನ್ನಪ್ಪಿದ್ದ ಘಟನೆ ಶನಿವಾರ ಹರಿಯಾಣಾದ ಕೈತಲ್ ನಲ್ಲಿ ನಡೆದಿದೆ.

    ವಿಕ್ರಮ್ ವೋಹರಾ (36) ಸಾವನ್ನಪ್ಪಿದ್ದ ವರ. ವಿಕ್ರಮ್ 12 ವರ್ಷದಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ವಿಕ್ರಮ್ ಸಂಗೀತ್ ಕಾರ್ಯಕ್ರಮದಲ್ಲಿ ತನ್ನ ಸಂಬಂಧಿಕರ ಜೊತೆ ಕುಣಿಯುತ್ತಿದ್ದರು. ಆಗ ಆತನ ಕುಟುಂಬದವರೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಕಸ್ಮಿಕವಾಗಿ ಗುಂಡು ವರನಿಗೆ ತಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವಿಕ್ರಮ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ವಿಕ್ರಮ್ ಸಾವನ್ನಪ್ಪಿದ್ದಾರೆ.

    ವರನ ಸಂಬಂಧಿ ನವತೇಜ್ ಸಿಂಗ್ ಗೆ ಕೂಡ ಗಾಯವಾಗಿದ್ದು ಅವರನ್ನು ಚಂಢೀಘಢ್‍ನ ಪಿಜಿಐಗೆ ರವಾನಿಸಲಾಗಿದೆ.

    ಘಟನೆ ಬಗ್ಗೆ ಮಾತನಾಡಿದ ಕೈತಲ್ ನ ಎಸ್‍ಪಿ ಅಸ್ತಾ ಮೋದಿ, ನಾವು ಈ ಘಟನೆ ಬಗ್ಗೆ ತನಿಖೆ ಶುರು ಮಾಡಿದ್ದೇವೆ ಹಾಗೂ ಗುಂಡು ಹಾರಿಸಿದ್ದು ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ. ಕಾರ್ಯಕ್ರಮದ ವಿಡಿಯೋಗಳನ್ನು ಪರಿಶೀಲಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಐಪಿಸಿ ಸೆಕ್ಷನ್ 304 ಹಾಗೂ ಸೆಕ್ಷನ್ 308 ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ಎಸ್‍ಪಿ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಡೆದ ನಂತರ ವರನ ದೇಹವನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ

    ಭಾನುವಾರದಂದು ವಿಕ್ರಮ್ ಮದುವೆ ನಡೆಯಬೇಕಿತ್ತು.