Tag: ಸಂಪಾದನೆ

  • ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳ ಮೊದಲ ಸಂಪಾದನೆ ಎಷ್ಟು ಗೊತ್ತಾ?

    ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳ ಮೊದಲ ಸಂಪಾದನೆ ಎಷ್ಟು ಗೊತ್ತಾ?

    ಣ ಗಳಿಸುವ ಟಾಸ್ಕ್‍ನ್ನು ಬಿಗ್ ಬಾಸ್ ಸ್ಪರ್ಧಿಗಳು ಆಡಿದ್ದಾರೆ. ಇದೇ ವಿಚಾರವಾಗಿ ಕಿಚ್ಚ ಸುದೀಪ್ ಸ್ಪರ್ಧಿಗಳ ಬಳಿ ಪ್ರಶ್ನೆ ಕೇಳಿದ್ದು, ಈ ವೇಳೆ ಸ್ಪರ್ಧಿಗಳ ಮೊದಲ ಸಂಪಾದನೆ ಕುರಿತ ಸೀಕ್ರೇಟ್ ಹೊರ ಬಿದ್ದಿದೆ.

    ಹೌದು ಬಿಗ್ ಬಾಸ್ ಸ್ಪರ್ಧಿಗಳು ತಾವು ಗಳಿಸಿದ ಮೊದಲ ಸಂಪಾದನೆ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ. ಕಿಚ್ಚ ಸುದೀಪ್ ಅವರು ಎಲ್ಲ ಸ್ಪರ್ಧಿಗಳನ್ನು ಈ ಕುರಿತು ಸ್ಪರ್ಧಿಗಳನ್ನು ಪ್ರಶ್ನಿಸಿದ್ದು, ಲೈಫಲ್ಲಿ ನೀವು ಮಾಡಿದ ಹಣದ ಟಾಸ್ಕ್ ಬಗ್ಗೆ ಹೇಳಿ. ಜೀವನದಲ್ಲಿ ಹಣ ಗಳಿಸುವುದು ಒಂದುಕಡೆಯಾದರೆ, ಇದ್ದ ಹಣವನ್ನು ಉಳಿಸುವುದು ಇನ್ನೊಂದು ಟ್ಯಾಲೆಂಟ್, ಎರಡೂ ಕಷ್ಟದ ಕೆಲಸವೇ ಎಂದು ಹೇಳಿದ್ದಾರೆ. ಬಳಿಕ ವೈಷ್ಣವಿ ತಮ್ಮ ಜೀವನದ ಮೊದಲ ಸಂಪಾದನೆ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

    ನೀವು ಮೊದಲ ದುಡಿದ ಸಂಬಳ ಎಷ್ಟು, ಅದನ್ನು ಸಂಪಾದಿಸಲು ಎಷ್ಟು ಸಮಯ ಆಯ್ತು, ಅದನ್ನು ಹೇಗೆ ಖರ್ಚು ಮಾಡಿದಿರಿ ಎಂದು ಪ್ರಶ್ನಿಸಿದ್ದಾರೆ ಇದಕ್ಕೆ ಉತ್ತರಿಸಿದ ವೈಷ್ಣವಿ, ನಾನು ಕ್ಲಾಸಿಕಲ್ ಡ್ಯಾನ್ಸ್ ಮಾಡುತ್ತಿದ್ದೆ, ನನ್ನ ಫಸ್ಟ್ ಶೋಗೆ 1,500 ರೂ.ಚೆಕ್ ನಿಡಿದ್ದರು. ಅದನ್ನು ನಾನು ತಂದೆಗೆ ನೀಡಿದ್ದೆ. ಆಗ 7ನೇ ತರಗತಿಯಲ್ಲಿದ್ದೆ ಎಂದು ಹೇಳಿದ್ದಾರೆ.

    ಬಳಿಕ ಶುಭಾ ಅವರು ನಾನು ಆ್ಯಡ್ ಏಜೆನ್ಸಿಯಲ್ಲಿ ಇಂಟರ್ನ್‍ಶಿಪ್ ಮಾಡಿದೆ, ತಿಂಗಳಿಗೆ 2000 ರೂ. ಸಿಗುತ್ತಿತ್ತು. ಅದು ಪೆಟ್ರೋಲ್‍ಗೇ ಹೊಯಿತು ಎಂದಿದ್ದಾರೆ. ಪ್ರಶಾಂತ್ ಮಾತನಾಡಿ, ಟೆಲಿಕಾಂ ಕಂಪನಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಸಿಕ್ಕಿತು. 3000 ರೂ. ಸಂಬಳ ಸಿಗುತ್ತಿತ್ತು. 2,500 ರೂ. ಮನೆಗೆ ಕೊಡುತ್ತಿದ್ದೆ. 500 ರೂ.ನಾನು ಇಟ್ಟುಕೊಳ್ಳುತ್ತಿದ್ದೆ ಎಂದಿದ್ದಾರೆ.

    ಬಳಿಕ ಶಮಂತ್ ಉತ್ತರಿಸಿ, ನಾನು ಕಾಲೇಜ್ ಆದಮೇಲೆ ಇಂಟರ್‍ಶಿಪ್ ಮಾಡುತ್ತಿದ್ದೆ, ಆಗ ತಿಂಗಳಿಗೆ 3000 ರೂ. ನೀಡಿದ್ದರು. ಅದರಲ್ಲಿ ಮೈಕ್ ಖರೀದಿಸಿದ್ದೆ, ಅದೂ ಇನ್ನು ಹಾಗೇ ಇದೆ ಎಂದಿದ್ದಾರೆ. ಬಳಿಕ ಅರವಿಂದ್ ಮಾತನಾಡಿ, ನನ್ನ ಮೊದಲ ಸಂಬಳ 3,500 ರೂ. ಅದು 3 ತಿಂಗಳಿಗೆ ಒಂದು ಸಲ ನೀಡುತ್ತಿದ್ದರು. 9000ದಲ್ಲಿ ಟಿಡಿಎಸ್ ಕಟ್ ಆಗಿ ಹಣ ಬಂತು ಅದರಲ್ಲಿ, ಅರ್ಧ ದುಡ್ಡಲ್ಲಿ ಬೈಕ್‍ಗೆ ಸ್ಪೇರ್ಸ್ ತೆಗೆದುಕೊಂಡೆ. ಉಳಿದಿದ್ದು, ಚಿಕ್ಕ ಪಾರ್ಟಿ, ಅಮೇಲೆ ಬಟ್ಟೆ ತೆಗೆದುಕೊಂಡೆ ಎಂದಿದ್ದಾರೆ.

    ನಾನು 6ನೇ ತರಗತಿ ಇದ್ದಾಗ ಊರಿಗೆ ಟೆಲಿಫಿಲಂ ಶೂಟಿಂಗ್‍ಗೆ ಸುಮಿತ್ರಾ ಭಾವೆ ಹಾಗೂ ಅವರ ತಂಡ ಬಂದಿತ್ತು. ಇದರಲ್ಲಿ 2 ದಿನ ಚಿಕ್ಕ ಹುಡುಗಿಯ ಪಾತ್ರ ಮಾಡಬೇಕಿತ್ತು. ಅದಕ್ಕೆ ನನ್ನ ಕರೆದುಕೊಂಡು ಹೋಗಿದ್ದರು. ಈ ವೇಳೆ 500ರೂ. ನೀಡಿದ್ದರು. ಅದು ನನ್ನ ಮೊದಲ ಸಂಪಾದನೆ. ಇದರಲ್ಲಿ ನನ್ನ ಕಡೆಯಿಂದ ಮನೆಯವರಿಗೆ ಚಿಕನ್ ತರಲು ಹಣ ನಿಡಿದ್ದೆ ಎಂದಿದ್ದಾರೆ. ಹೀಗೆ ಹಲವರು ತಮ್ಮ ಮೊದಲ ಸಂಪಾದನೆ ಕುರಿತು ತಿಳಿಸಿದ್ದಾರೆ.

  • ಗೋಮೂತ್ರದಿಂದ ಬದುಕು ಕಟ್ಟಿಕೊಂಡು ಕುಟುಂಬ

    ಗೋಮೂತ್ರದಿಂದ ಬದುಕು ಕಟ್ಟಿಕೊಂಡು ಕುಟುಂಬ

    – ತಿಂಗಳಿಗೆ ಗಂಜಲದಿಂದ 40 ಸಾವಿರ ಸಂಪಾದನೆ
    – 18 ವರ್ಷದಿಂದ 23 ಜಾನುವಾರುಗಳ ಲಾಲನೆ ಪೋಷಣೆ

    ಮಡಿಕೇರಿ: ಗೋ ಮೂತ್ರ, ಗಂಜಲ ಇದನ್ನ ನೋಡಿದರೆ ಈಗಿನ ಕಾಲದ ಹೆಚ್ಚಿನ ಮಂದಿ ಅಸಡ್ಡೆ ತೋರಿಸುತ್ತಾರೆ. ಆದರೆ ಗೋ ಮೂತ್ರದಿಂದಲೂ ಬದುಕು ಕಟ್ಟಿಕೊಳ್ಳಬಹುದು, ಗಂಜಲದಿಂದಲೂ ಆದಾಯ ಗಳಿಸಬಹುದು ಎಂದು ಕುಟುಂಬವೊಂದು ನಿರೂಪಿಸಿದೆ.

    ಕೊಡುಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೊದೂರಿನ ದಿವಾಕರ್ ಭಟ್ ಕುಟುಂಬದವರು ಗೋಮೂತ್ರದಿಂದ ಬದುಕು ಕಟ್ಟಿಕೊಂಡಿದ್ದಾರೆ. ದನಗಳನ್ನ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದಾಗ ಹಾಗೇ ಅಪ್ರಯೋಜಕವಾಗಿ ಕೆಳಗೆ ಬಿದ್ದು ಹೊರಹೋಗುವ, ಯಾರೂ ಕೇರ್ ಮಾಡದ ಗೋಮೂತ್ರವನ್ನ ಇವರ ಮನೆಯಲ್ಲಿ ವಿಶೇಷ ಆಸಕ್ತಿಯಿಂದ ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ಗಂಜಲವನ್ನ ಬಟ್ಟಿ ಇಳಿಸುವುದರ ಮೂಲಕ ಅರ್ಕಾ (ಪರಿಷ್ಕರಣೆ ಮಾಡಿದ ಗಂಜಲ) ಮಾಡಿ ಶೇಖರಣೆ ಮಾಡಲಾಗುತ್ತದೆ.

    ಶೇಖರಣೆಯಾದ ಅರ್ಕಾವನ್ನ ಪ್ರತಿ ತಿಂಗಳು ಮಾರಾಟ ಮಾಡಲಾಗುತ್ತದೆ. ಯಾರಿಗೂ ಬೇಡವಾದ ಗೋಮೂತ್ರವನ್ನ ತುಂಬಾ ಜಾಣತನದಿಂದ ಜಾಗೃತೆ ವಹಿಸಿ ಸಂಗ್ರಹಿಸುತ್ತಾರೆ. ಈ ಮೂಲಕ ಗೋ ಮೂತ್ರಕ್ಕೂ ಡಿಮ್ಯಾಂಡ್ ಇದೆ ಅನ್ನೋದನ್ನ ಈ ಕುಟುಂಬ ನಿರೂಪಿಸಿದೆ. ಸದ್ಯ ಇವರ ಮನೆಯಲ್ಲಿ ಗುಜರಾತಿನ ಕಾಂಕ್ರೇಜ್ ದೇಶಿ ತಳಿಯ 23 ಜಾನುವಾರುಗಳಿದ್ದು, ಕಳೆದ 18 ವರ್ಷಗಳಿಂದ ಈ ದನಗಳನ್ನ ಪಾಲನೆ ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ.

    ದಿನಕ್ಕೆ ಏನಿಲ್ಲಾ ಅಂದರೂ ಕನಿಷ್ಠ 25 ಲೀಟರ್ ಅರ್ಕಾವನ್ನ ಶೇಖರಣೆ ಮಾಡಲಾಗುತ್ತದೆ. ಹೀಗೆ ಪರಿಶುದ್ಧ ಗಂಜಲವನ್ನ ರೆಡಿ ಮಾಡಲು ಸುಮಾರು 40 ಲೀಟರ್ ನಷ್ಟು ಗಂಜಲವನ್ನ ನಿರ್ದಿಷ್ಟ ಹಬೆ (ಶಾಕ)ಯನ್ನ ಕೊಟ್ಟು ಕುದಿಸಿದಾಗ 25 ಲೀಟರ್‌ನಷ್ಟು ಅರ್ಕಾ ತಯಾರಾಗುತ್ತದೆ. ಹೀಗೆ ತಿಂಗಳಿಗೆ ಏನಿಲ್ಲಾ ಅಂದರು ಅಂದಾಜು 600 ರಿಂದ 700 ಲೀಟರ್‌ನಷ್ಟು ಪರಿಶುದ್ಧ ಗಂಜಲ ಶೇಖರಣೆಯಾಗುತ್ತೆ. ಮಾರುಕಟ್ಟೆಯಲ್ಲಿ ಒಂದು ಲೀಟರ್‌ಗೆ ಕನಿಷ್ಠ 60ರೂ ಬೆಲೆಯಿದೆ. ಹೀಗಾಗಿ ತಿಂಗಳಿಗೆ ಸುಮಾರು 40 ಸಾವಿರ ಹಣವನ್ನ ಕೇವಲ ಗಂಜಲದಿಂದಲೇ ಗಳಿಸುತ್ತಾರೆ. ಆದ್ದರಿಂದ ನಾವುಗಳು ದನಗಳನ್ನ ಸಾಕಲ್ಲ, ನಮ್ಮನ್ನೇ ದನಗಳು ಸಾಕುತ್ತದೆ ಎಂದು ದಿವಾಕರ್ ಭಟ್ ಪುತ್ರ ಶಿವಶಂಕರ್ ಹೇಳಿದ್ದಾರೆ.

    ಗೋಮೂತ್ರದ ಪ್ರಾಮುಖ್ಯತೆಯನ್ನ ಅರಿತ ಕೊಡಗಿನ ಈ ಕುಟುಂಬ ಎಲ್ಲೋ ಹರಿದು ಕಸದ ಗುಂಡಿ ಸೇರುತ್ತಿದ್ದ ಗಂಜಲದಿಂದಲೂ ಆದಾಯ ಗಳಿಸಬಹುದು ಅನ್ನೋದನ್ನ ಸಾಬೀತು ಮಾಡಿ ತೋರಿಸಿದ್ದಾರೆ.

  • ದುಡ್ಡು ನನಗೆ ಮುಖ್ಯವಲ್ಲ, ಅದು ನನ್ನ ವ್ಯಕ್ತಿತ್ವವೂ ಅಲ್ಲ: ಕಿಚ್ಚ

    ದುಡ್ಡು ನನಗೆ ಮುಖ್ಯವಲ್ಲ, ಅದು ನನ್ನ ವ್ಯಕ್ತಿತ್ವವೂ ಅಲ್ಲ: ಕಿಚ್ಚ

    ಬೆಂಗಳೂರು: ಪೈಲ್ವಾನ್ ಸಿನಿಮಾ ಸಂಪಾದನೆಯ ಬಗ್ಗೆ ಮಾತನಾಡುತ್ತಾ ನನಗೆ ದುಡ್ಡು ಮುಖ್ಯವಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯ ಸಂದರ್ಶನದಲ್ಲಿ ಪೈಲ್ವಾನ್ ಸಿನಿಮಾ ನೂರು ಕೋಟಿ ಹಣ ಮಾಡಿದೆ ಅಭಿಮಾನಿಗಳು ಅದರ ಸಂಭ್ರಮಾಚರಣೆ ಮಾಡಲು ಕಾಯುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದುಡ್ಡು ನನಗೆ ಮುಖ್ಯವಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲ. ನಾಲ್ಕು ಜನಕ್ಕೆ ತೋರಿಸೋಕೆ ಕೇಕ್ ಕಟ್ ಮಾಡಬೇಕು ಅಷ್ಟೇ. ಸಿನಿಮಾ ಚೆನ್ನಾಗಿ ಇದ್ದರೆ ಸಾಕು ಎಂದು ಹೇಳಿದರು.

    ಸಿನಿಮಾ ಜನರಿಗೆ ಇಷ್ಟವಾದರೆ ಸಾಕು. ಅದು ನೂರು ಕೋಟಿ ದಾಟಿದರೆಷ್ಟು ನೂರು ರೂ. ದಾಟಿದರೆಷ್ಟು. ಈ ರೀತಿಯ ಸಮಾರಂಭಗಳು ನನಗೆ ಇಷ್ಟವಾಗಲ್ಲ. ನಾನು ಈ ರೀತಿಯ ವಿಚಾರದಲ್ಲಿ ಭಾಗಿಯೂ ಆಗಲ್ಲ. ಸಿನಿಮಾ ಚೆನ್ನಾಗಿದೆ. ಜನರು ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ಆಗಲೇ ಗೆದ್ದಿದೆ. ಇದರ ಮುಂದೆ ಹಣವನ್ನು ಲೆಕ್ಕಹಾಕಬಾರದು. ಸಿನಿಮಾವನ್ನು ಜನರು ನೋಡುತ್ತಿರುವುದೇ ಸಂಭ್ರಮ ನಮಗೆ ಎಂದು ಕಿಚ್ಚ ತಿಳಿಸಿದರು. ಇದನ್ನು ಓದಿ: ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ: ಸುದೀಪ್

    ನಮ್ಮ ಜೀವದಲ್ಲಿ ಸಿನಿಮಾ ಎಷ್ಟು ಕೋಟಿ ಸಂಪಾದನೆ ಮಾಡಿತು ಎಂಬುದು ಮುಖ್ಯವಲ್ಲ. ನಾವು ವ್ಯಕ್ತಿಗಳಾಗಿ ಎಲ್ಲಿಗೆ ತಲುಪಿದ್ದೇವೆ ಎಂಬುದನ್ನು ನೋಡಿಕೊಳ್ಳೋಣ. ಈ ಸಮಯದಲ್ಲಿ ಕೋಟಿ ಬಗ್ಗೆ ಮಾತನಾಡುವುದು ಚಿಕ್ಕತನ. ದಾಟಿದರೆ ಖುಷಿಯಾಗಿತ್ತೆ ನಿರ್ಮಾಪಕರಿಗೆ ಒಳ್ಳೆಯಾದಗುತ್ತದೆ. ಮುಂದಿನ ಸಿನಿಮಾ ಇನ್ನೂ ಸ್ವಲ್ಪ ಜಾಸ್ತಿ ದುಡ್ಡು ಹಾಕಿ ಚಿತ್ರ ತೆಗೆಯಲು ಹುಮ್ಮಸ್ಸು ಬರುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

    ಇದೇ ವೇಳೆ ಸಂಗೀತ ನಿರ್ದೇಶಕ ಅರ್ಜನ್ ಜನ್ಯ ಮತ್ತು ರವಿಶಂಕರ್ ಬಗ್ಗೆ ಮಾತನಾಡಿ, ಇಬ್ಬರು ಒಳ್ಳೆಯ ಕಲೆ ಇರುವ ವ್ಯಕ್ತಿಗಳು. ಅವರವರ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಈ ಇಬ್ಬರು ಕಲಾವಿದರೂ ನನ್ನ ಕೆಂಪೇಗೌಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯ ಆದರು ಎಂದು ಹೇಳಲು ಬಹಳ ಖುಷಿಯಾಗುತ್ತೆ ಎಂದು ಹೇಳಿದರು ಮತ್ತು ಪೈಲ್ವಾನ್ ರೀತಿ ಇನ್ನೊಂದು ಸಿನಿಮಾ ಬಂದರೆ ಮಾಡುತ್ತೇನೆ ಎಂದು ತಿಳಿಸಿದರು.

  • ವರ್ಷಕ್ಕೆ 444 ಕೋಟಿ ಸಂಪಾದನೆ – ಫೋರ್ಬ್ಸ್  ಪಟ್ಟಿಯಲ್ಲಿ ಅಕ್ಷಯ್ ಕುಮಾರ್‌ಗೆ  ಸ್ಥಾನ

    ವರ್ಷಕ್ಕೆ 444 ಕೋಟಿ ಸಂಪಾದನೆ – ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್‌ಗೆ  ಸ್ಥಾನ

    ಮುಂಬೈ: ವರ್ಷಕ್ಕೆ 444 ಕೋಟಿ ಸಂಪಾದನೆ ಮಾಡುವ ಮೂಲಕ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ಅತಿ ಹೆಚ್ಚು ಸಂಭಾವನೆ ಪಡೆದ ಫೋರ್ಬ್ಸ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    35ನೇ ಸ್ಥಾನ ಪಡೆಯುವ ಮೂಲಕ ಮೂಲಕ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಅಕ್ಷಯ್ ಕುಮಾರ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಹಿಟ್ ಮೇಕರ್ ಟೇಲರ್ ಸ್ವಿಫ್ಟ್ ಅವರು ಮೊದಲ ಸ್ಥಾನ ಪಡೆದಿದ್ದಾರೆ.

    ಅಕ್ಷಯ್ ಕುಮಾರ್ ಅವರನ್ನು “ಬಾಲಿವುಡ್‍ನ ಅತೀ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್” ಎಂದು ಬಣ್ಣಿಸಿದೆ. ಅಕ್ಷಯ್ ಕುಮಾರ್ ಅವರು ಒಂದು ಚಿತ್ರಕ್ಕೆ 35 ರಿಂದ 70 ಕೋಟಿಯವರೆಗೆ ಸಂಭಾವನೆ ಪಡೆಯುತ್ತಾರೆ. ಸಾಲು ಸಾಲು ಉತ್ತಮ ಚಿತ್ರವನ್ನು ಮಾಡುತ್ತಿರುವ ಅಕ್ಷಯ್ ಅವರು ಪ್ರಸ್ತುತ ಜಗನ್ ಶಕ್ತಿಯ ಮಿಷನ್ ಮಂಗಲ್, ಫರ್ಹಾದ್ ಸಂಜಿಯ ಹೌಸ್ ಫುಲ್ 4, ರಾಜ್ ಮೆಹ್ತಾ ಅವರ ಗುಡ್ ನ್ಯೂಸ್, ರಾಘವ ಲಾರೆನ್ಸ್ ಅವರ ಲಕ್ಷ್ಮಿ ಬಾಂಬ್ ಮತ್ತು ರೋಹಿತ್ ಶೆಟ್ಟಿಯ ಸೂರ್ಯವಂಶಿ ಚಿತ್ರಗಳನ್ನು ಮಾಡುತ್ತಿದ್ದಾರೆ.

    ಇದರ ಜೊತೆಗೆ ಅಕ್ಷಯ್ ಕುಮಾರ್ ಅವರು 20 ಕ್ಕೂ ಹೆಚ್ಚಿನ ಉನ್ನತ ಬ್ರಾಂಡ್‍ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಜಾಹೀರಾತಿನಿಂದಲೂ ಹೆಚ್ಚು ಸಂಭಾವನೆ ಸಿಗುತ್ತಿದೆ. ಜೂನ್ 2018 ರಿಂದ ಜೂನ್ 2019 ರವರೆಗೆ ಒಟ್ಟು 444 ಕೋಟಿ ರೂ ಸಂಪಾದನೆ ಮಾಡಿದ ಅಕ್ಷಯ್ ಕುಮಾರ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಎ-ಲಿಸ್ಟರ್‍ ಗಳಾದ ರಿಹಾನ್ನಾ, ಜಾಕಿ ಚಾನ್, ಬ್ರಾಡ್ಲಿ ಕೂಪರ್ ಮತ್ತು ಸ್ಕಾರ್ಲೆಟ್ ಜೋಹಾನ್ಸನ್‍ರನ್ನು ಹಿಂದಿಕ್ಕಿದ್ದಾರೆ.

    ಈ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಿಷನ್ ಮಂಗಳ್ ಚಿತ್ರ ಬಿಡುಗಡೆ ಮಾಡಲು ಅಕ್ಷಯ್ ಸಜ್ಜಾಗಿದ್ದಾರೆ. ಮಂಗಳ ಗ್ರಹದ ಅಧ್ಯಯನಕ್ಕೆ ತೆರಳಿದ ಮಿಷನ್ ಮಾರ್ಸ್ ಸುತ್ತ ಹೆಣೆದಿರುವ ಕಥೆ ಇದಾಗಿದೆ. ಈ ಚಿತ್ರದಲ್ಲಿ ಅಕ್ಷಯ್ ಜೊತೆ ಸೋನಾಕ್ಷಿ ಸಿನ್ಹಾ, ವಿದ್ಯಾ ಬಾಲನ್, ತಾಪ್ಸಿ ಪನ್ನು, ಶರ್ಮನ್ ಜೋಶಿ, ಕೀರ್ತಿ ಕುಲ್ಹಾರಿ ಮತ್ತು ನಿತ್ಯಾ ಮೆನೆನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  • ವಿಡಿಯೋ ಗೇಮ್ ಆಡಿ 1.4 ಕೋಟಿ ರೂ. ಸಂಪಾದಿಸಿದ ಬಾಲಕ

    ವಿಡಿಯೋ ಗೇಮ್ ಆಡಿ 1.4 ಕೋಟಿ ರೂ. ಸಂಪಾದಿಸಿದ ಬಾಲಕ

    ವಾಷಿಂಗ್‍ಟನ್: 14 ವರ್ಷದ ನ್ಯೂಯಾರ್ಕ್ ಬಾಲಕನೊಬ್ಬ ಪ್ರತಿದಿನ 18 ಗಂಟೆ ವಿಡಿಯೋ ಗೇಮ್ ಆಡಿ ಒಂದು ವರ್ಷಕ್ಕೆ 1.4 ಕೋಟಿ ರೂ. ಸಂಪಾದನೆ ಮಾಡಿದ್ದಾನೆ.

    ಗ್ರಿಫಿನ್ ಸ್ಪಿಕೋಸಕಿಗೆ ವಿಡಿಯೋ ಗೇಮ್ ಆಡುವುದೆಂದರೆ ತುಂಬಾನೇ ಇಷ್ಟ. ಆತ ದಿನಕ್ಕೆ 18 ಗಂಟೆ ಫೋರ್ಟ್‍ನೈಟ್ ವಿಡಿಯೋ ಗೇಮ್ ಆಡುತ್ತಿದ್ದನು. ವಿಡಿಯೋ ಗೇಮ್ ಆಡುವುದರ ಜೊತೆಗೆ ಗ್ರಿಫಿನ್ ಆ ವಿಡಿಯೋಗಳನ್ನು ತನ್ನ ಯೂಟ್ಯೂಬ್ ಚಾನೆಲ್‍ನಲ್ಲಿ ಅಪ್ಲೋಡ್ ಮಾಡುತ್ತಾನೆ.

    ಗ್ರಿಫಿನ್ ಅಪ್ಲೋಡ್ ಮಾಡುವ ವಿಡಿಯೋಗಳಿಂದ ಯೂಟ್ಯೂಬ್‍ನಲ್ಲಿ ಹೆಚ್ಚು ಹಣವನ್ನು ಸಂಪಾದಿಸುತ್ತಾನೆ. ಗ್ರಿಫಿನ್‍ನ ಯೂಟ್ಯೂಬ್ ಚಾನೆಲ್‍ನಲ್ಲಿ ಸುಮಾರು 12 ಲಕ್ಷ ಸಬಸ್ಕ್ರೈಬರ್ ಇದ್ದಾರೆ. ಅಲ್ಲದೆ ಗ್ರಿಫಿನ್‍ನ ವಿಡಿಯೋಗಳಿಗೆ 7.1 ಕೋಟಿ ವ್ಯೂ ಸಿಕ್ಕಿದೆ.

    ಗ್ರಿಫಿನ್ ಧ್ಯಾನ ಯಾವಾಗಲೂ ವಿಡಿಯೋ ಗೇಮ್ ಆಡುವುದರಲ್ಲಿ ಇತ್ತು. ವಿಡಿಯೋ ಗೇಮ್‍ನಿಂದ ಆತನಿಗೆ ಇಷ್ಟೊಂದು ಯಶಸ್ಸು ಸಿಕ್ಕಿದೆ ಎಂದು ನಮಗೆ ನಂಬುವುದಕ್ಕೆ ಆಗುತ್ತಿಲ್ಲ. ಅಲ್ಲದೆ ನಮ್ಮ ಮಗನ ಸಂಪಾದನೆ ನೋಡಿ ನಾವು ಆತನಿಗಾಗಿ ಫೈನಾನಿಶಿಯರ್ ಅಡ್ವೈಸರ್ ಹಾಗೂ ಅಕೌಂಟೆಂಟ್ ಕೂಡ ಇಟ್ಟಿದ್ದೇವೆ ಎಂದು ಗ್ರಿಫಿನ್ ಪೋಷಕರು ತಿಳಿಸಿದ್ದಾರೆ.

    ಗ್ರಿಫಿನ್ ಮೂರು ವರ್ಷ ಇದ್ದಾಗಲೇ ವಿಡಿಯೋ ಗೇಮ್ ಆಡಲು ಶುರು ಮಾಡಿದ್ದಾನೆ. ವಿಡಿಯೋ ಗೇಮ್ ಮೇಲಿರುವ ಪ್ರೀತಿಯನ್ನು ನೋಡಿ ನಾವು ಆತನನ್ನು ಶಾಲೆಯಿಂದ ಬಿಡಿಸಿದ್ದೇವೆ. ಗ್ರಿಫಿನ್ ಈಗ ಮನೆಯಲ್ಲೇ ಆನ್‍ಲೈನ್ ಮೂಲಕ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಜೊತೆಗೆ ವಿಡಿಯೋ ಗೇಮ್ ಆಡಿ ಕೋಟಿ ರೂ. ಸಂಪಾದಿಸುತ್ತಿದ್ದಾನೆ.

    2018ರಲ್ಲಿ ಗ್ರಿಫಿನ್ ಫೋರ್ಟ್‍ನೈಟ್ ವಿಡಿಯೋ ಗೇಮ್‍ನ ಪ್ರಮುಖ ಆಟಗಾರನನ್ನು ಸೋಲಿಸಿ ಆ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಆ ವಿಡಿಯೋ ಸುಮಾರು 75 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿತ್ತು. ಈ ವಿಡಿಯೋದಿಂದ ಗ್ರಿಫಿನ್ 100 ಡಾಲರ್ ಅಂದರೆ ಸುಮಾರು 7,000 ರೂ. ಸಿಕ್ಕಿತ್ತು. ಇದು ಆತನ ಮೊದಲ ಸಂಪಾದನೆ.

  • ಕಲ್ಲು ಗುಡ್ಡವನ್ನು ಕೃಷಿ ಭೂಮಿಯನ್ನಾಗಿ ಮಾಡಿದ್ರು- ವರ್ಷಕ್ಕೆ 15 ಲಕ್ಷ ರೂ. ಸಂಪಾದಿಸ್ತಾರೆ ರೈತ

    ಕಲ್ಲು ಗುಡ್ಡವನ್ನು ಕೃಷಿ ಭೂಮಿಯನ್ನಾಗಿ ಮಾಡಿದ್ರು- ವರ್ಷಕ್ಕೆ 15 ಲಕ್ಷ ರೂ. ಸಂಪಾದಿಸ್ತಾರೆ ರೈತ

    ಬೀದರ್: ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮುಸ್ತರಿವಾಡಿ ಗ್ರಾಮದ ರೈತ, ಕಲ್ಲು ಬಂಡೆಗಳಿಂದ ಕೂಡಿದ ಜಾಗವನ್ನು ಕೃಷಿ ಭೂಮಿಯಾಗಿ ಮಾಡಿಕೊಂಡು ಪ್ರತಿ ವರ್ಷ 10 ರಿಂದ 15 ಲಕ್ಷ ರೂ. ಸಂಪಾದನೆ ಮಾಡುವ ಮೂಲಕ ರಾಜ್ಯದ ರೈತರಿಗೆ ಮಾದರಿಯಾಗಿದ್ದಾರೆ.

    ಮುಸ್ತರಿವಾಡಿ ಗ್ರಾಮದ ರೈತ ವೀರರಡ್ಡಿ ಜಿಲ್ಲೆಯ ಮಾದರಿ ರೈತರಾಗಿದ್ದಾರೆ. ರಾಜ್ಯದಲ್ಲಿ ಅನ್ನದಾತರು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ದಿನಗಳಲ್ಲಿ ಬರಡು ಭೂಮಿಯಲ್ಲಿ ಬಂಪರ್ ಬೆಳೆ ಬೆಳೆದು ರೈತರಿಗೆ ಸ್ಫೂರ್ತಿಯಾಗಿದ್ದಾರೆ. ತನ್ನ 2.5 ಎಕ್ರೆ ಭೂಮಿಯಲ್ಲಿ ಕಡಿಮೆ ಬಂಡವಾಳದಲ್ಲಿ ಪಪ್ಪಾಯ, ಮೂಸಂಬಿ ಬೆಳೆಗಳನ್ನು ಬೆಳೆದು ಪ್ರತಿ ವರ್ಷ 10 ರಿಂದ 15 ಲಕ್ಷ ರೂ. ಸಂಪಾದನೆ ಮಾಡುತ್ತಾರೆ.

    ಮೊದಲು ಈ ಭೂಮಿ ಬರಡು ಭೂಮಿಯಾಗಿತ್ತು. 5 ವರ್ಷಗಳ ಸತತ ಪರಿಶ್ರಮದಿಂದಾಗಿ ಕಲ್ಲು ಗುಡ್ಡವನ್ನು ಕೃಷಿ ಭೂಮಿಯನ್ನಾಗಿ ಮಾಡಿಕೊಂಡಿದ್ದೆ. ಬಳಿಕ ಕಷ್ಟ ಪಟ್ಟು ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದೇನೆ. ಕಷ್ಟ ಪಟ್ಟು ಕೆಲಸ ಮಾಡಿದರೆ ಎಲ್ಲಾ ಸಿಗುತ್ತದೆ. ಮನಸಿದ್ದರೆ ಮಾರ್ಗ ಎಂದು ಮಾದರಿ ರೈತ ವೀರರೆಡ್ಡಿ ಹೇಳಿದ್ದಾರೆ.

    ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟು ಈ ರೀತಿಯ ಸತತ ಪರಿಶ್ರಮ ಪಟ್ಟರೆ ಏನಾದರು ಮಾಡಬಹದು ಎಂಬುದನ್ನು ರಾಜ್ಯಕ್ಕೆ ತೋರಿಸಿಕೊಟ್ಟಿದ್ದಾರೆ. ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ರೂ ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ನಮ್ಮ ತಂದೆಯ ಸ್ಫೂರ್ತಿ ಪಡೆದು ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ. ನಮ್ಮನ್ನು ಕೃಷಿಯಲ್ಲಿ ತೊಡಿಸಿಕೊಂಡು ಕೃಷಿ ಬಗ್ಗೆ ಪಾಠ ಹೇಳಿಕೊಡುತ್ತಿದ್ದಾರೆ. ಈ ಬೆಳೆಗೆ ಯಾವುದೇ ರಾಸಾಯಿನಿಕ ಗೊಬ್ಬರ ಹಾಕದೆ ಸಾವಯವ ಗೊಬ್ಬರ ಹಾಕಿ ಇಳುವರಿ ಜಾಸ್ತಿ ತೆಗೆಯುತ್ತಾರೆ. ನಮ್ಮ ತಂದೆಯ ಕೃಷಿ ಮಾದರಿಯನ್ನು ನೋಡಿದ ಜಿಲ್ಲೆಯ ರೈತರು ಸಲಾಂ ಎನ್ನುತ್ತಿದ್ದಾರೆ. ಭೂಮಿತಾಯಿಯನ್ನು ನಂಬಿದವರಿಗೆ ಯಾವತ್ತೂ ಮೋಸವಾಗುವುದಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮಾದರಿ ರೈತನ ಮಗ ಸಿದ್ದಾರೆಡ್ಡಿ ತಿಳಿಸಿದ್ದಾರೆ.

    ಒಬ್ಬ ರೈತ ಮನಸು ಮಾಡಿದ್ರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಈ ಬರಡು ಭೂಮಿಯನ್ನು ಸತತ ಪರಿಶ್ರಮದಿಂದ ಕೃಷಿ ಭೂಮಿಯನ್ನಾಗಿ ಮಾಡಿಕೊಂಡ ಈ ಮಾದರಿ ರೈತನನ್ನು ನಾವು ಮೆಚ್ಚಬೇಕು. ಈ ರೈತನ ಸಾಧನೆಯನ್ನು ನೋಡಿಯಾದರು ರಾಜ್ಯದಲ್ಲಿಯಾಗುವ ರೈತರ ಸರಣಿ ಆತ್ಮಹತ್ಯೆಗಳು ಕಡಿಮೆಯಾಗಲಿ ಎನ್ನುವುದು ನಮ್ಮ ಆಶಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಟಿಕೆ ಆಡಿ ವರ್ಷಕ್ಕೆ 70 ಕೋಟಿ ರೂ. ಸಂಪಾದಿಸಿದ 6ರ ಪೋರ!

    ಆಟಿಕೆ ಆಡಿ ವರ್ಷಕ್ಕೆ 70 ಕೋಟಿ ರೂ. ಸಂಪಾದಿಸಿದ 6ರ ಪೋರ!

    ವಾಷಿಂಗ್ಟನ್: ಚಿಕ್ಕ ಮಕ್ಕಳು ಆಟಿಕೆಗಳ ಜೊತೆ ಆಟವಾಡುತ್ತಾರೆ. ಆದರೆ ಅಮೆರಿಕದ 6 ವರ್ಷದ ಬಾಲಕ ಆಟಿಕೆಗಳ ಜೊತೆ ಆಟವಾಡಿ ಸುಮಾರು 70 ಕೋಟಿ ರೂ. ಸಂಪಾದನೆ ಮಾಡಿದ್ದಾನೆ.

    ಇತ್ತೀಚೆಗೆ ಫೋರ್ಬ್ಸ್ ಅತೀ ಹೆಚ್ಚು ಸಂಪಾದನೆ ಮಾಡುವ ಯೂಟ್ಯೂಬ್‍ರ್ಸ್ ಪಟ್ಟಿಯನ್ನ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಅಮೆರಿಕದ 6 ವರ್ಷದ ಬಾಲಕ ರಯಾನ್ ಹೆಸರಿದೆ. ಈತ ತನ್ನ ಆಟಿಕೆಗಳು ಮತ್ತು ಮಿಠಾಯಿಗಳ ವಿಮರ್ಶೆ ಮಾಡುವುದರ ಮೂಲಕ ಒಂದು ವರ್ಷದಲ್ಲಿ 11 ದಶಲಕ್ಷ ಡಾಲರ್ (ಅಂದಾಜು 70 ಕೋಟಿ ರೂ.) ಸಂಪಾದನೆ ಮಾಡಿದ್ದಾನೆ.

    ಫೋರ್ಬ್ಸ್ ನ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲಿ ರಯಾನ್ 8 ನೇ ಸ್ಥಾನದಲ್ಲಿದ್ದಾನೆ. ಯೂಟ್ಯೂಬ್‍ನಲ್ಲಿ “ರಯಾನ್ ಟಾಯ್ಸ್ ರಿವೀವ್” ಚಾನೆಲ್ ನನ್ನು ಈತನ ಪೋಷಕರು ಆರಂಭಿಸಿದ್ದು, ಹಲವಾರು ಟಾಯ್ಸ್ ಗಳ ವಿಮರ್ಶೆ ಮಾಡಿ ಅದರ ವಿಡಿಯೋಗಳನ್ನು ಯೂಟ್ಯೂಬ್‍ಗೆ ಅಪ್ಲೋಡ್ ಮಾಡಲಾಗಿದೆ.

    ಈ ಬಾಲಕನಿಗೆ ಕಾರ್‍ಗಳು, ರೈಲುಗಳು, ಥಾಮಸ್ ಅಂಡ್ ಫ್ರೆಂಡ್ಸ್, ಲೀಗೋ, ಸೂಪರ್‍ಹೀರೋಸ್, ಡಿಸ್ನಿ ಆಟಿಕೆ ಇತ್ಯಾದಿಗಳನ್ನು ತುಂಬಾ ಪ್ರೀತಿಸುತ್ತಾನೆ. ಜೊತೆಗೆ ಕುಟುಂಬದ ಮೋಜು, ಸಾಹಸಗಳನ್ನು ಇಷ್ಟಪಟ್ಟಿದ್ದಾನೆ. ಅಷ್ಟೇ ಅಲ್ಲದೇ ಮಕ್ಕಳಿಗಾಗಿ ಮೋಜು ಮತ್ತು ಸುಲಭವಾದ ವಿಜ್ಞಾನ ಪ್ರಯೋಗಳನ್ನು ಮಾಡುತ್ತಾನೆ.

    ರಯಾನ್ ಪೋಷಕರು 2015 ಮಾರ್ಚ್ ನಲ್ಲಿ ಈ ಚಾನೆಲ್ ಪ್ರಾರಂಭಿಸಿದ್ದರು. ಪ್ರಾರಂಭವಾದ 4 ತಿಂಗಳಲ್ಲಿ ದೈತ್ಯ ಮೊಟ್ಟೆಯ ಜೊತೆಗೆ ಡಾಯ್ಸ್ ಡಿಸ್ನಿ ಕಾರುಗಳು ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಆ ವಿಡಿಯೋ ಡಿಸೆಂಬರ್ 2017 ಕ್ಕೆ ಸುಮಾರು 800 ಮಿಲಿಯನ್ ವೀಕ್ಷಣೆಯಾಗಿತ್ತು. ನಂತರ ಏಪ್ರಿಲ್ 2016 ರಲ್ಲಿ ಇನ್ನೊಂದು ವಿಡಿಯೋ ಅಪ್ಲೋಡ್ ಮಾಡಿದ್ದರು. ಅದು ಸುಮಾರು 100 ಕೋಟಿ ಬಾರಿ ವೀಕ್ಷಣೆಯಾಗಿದೆ.

    ರಯಾನ್ ಟಾಯ್ಸ್ ರಿವೀವ್ ಚಾನೆಲ್‍ಗೆ ಸುಮಾರು 1 ಕೋಟಿ (10 ಮಿಲಿಯನ್) ಜನರು ಸಬ್ಸ್ ಸ್ಕ್ರೈಬ್ ಆಗಿದ್ದು, ಅವನು ಅಪ್ಲೋಡ್ ಮಾಡಿದ ಡಜನ್ಸ್ ವಿಡಿಯೋಗಳನ್ನು ಸುಮಾರು 1,600 ಕೋಟಿ (16 ಬಿಲಿಯನ್) ಬಾರಿ ವೀಕ್ಷಣೆ ಮಾಡಲಾಗಿದೆ.

    ಈಗ ಮತ್ತೆ ಈ ಕುಟುಂಬ “ರಯಾನ್ ಫ್ಯಾಮಿಲಿ ರಿವೀವ್” ಎಂಬ ಎರಡನೇ ಚಾನೆಲ್ ಪ್ರಾರಂಭಿಸಿದ್ದಾರೆ. ಇದು ಕುಟುಂಬದ ಪ್ರತಿದಿನ ಸಾಹಸ ಮತ್ತು ರಯಾನ್ ಸಹೋದರಿಯರಾದ ಎಮ್ಮಾ ಮತ್ತು ಕೇಟ್ ಅವರ ಮೇಲೆ ಕೇಂದ್ರಿಕರಿಸಲಾಗಿದೆ. 10 ಲಕ್ಷಕ್ಕೂ ಅಧಿಕ ಮಂದಿ ಚಾನೆಲ್ ಸಬ್ಸ್ ಸ್ಕ್ರೈಬ್ ಮಾಡಿದ್ದಾರೆ.