Tag: ಸಂಚಾರ ಬಂದ್

  • ಉಕ್ಕಿ ಹರಿಯುತ್ತಿರೋ ಮೂಲೆಹೊಳೆ – ಕೇರಳ ಕರ್ನಾಟಕ ಸಂಚಾರ ಬಂದ್

    ಉಕ್ಕಿ ಹರಿಯುತ್ತಿರೋ ಮೂಲೆಹೊಳೆ – ಕೇರಳ ಕರ್ನಾಟಕ ಸಂಚಾರ ಬಂದ್

    ಚಾಮರಾಜನಗರ: ಕೇರಳದ ವೈನಾಡಿನಲ್ಲಿ ಭಾರೀ ಪ್ರಮಾಣದ ಮಳೆ ಬೀಳುತ್ತಿದ್ದು, ಜಿಲ್ಲೆಯ ಮೂಲೆಹೊಳೆ ಹಳ್ಳ ತುಂಬಿ ಹರಿಯುತ್ತಿದೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮೂಲೆಹೊಳೆ ಹಳ್ಳ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕರ್ನಾಟಕ-ಕೇರಳ ಸಂಚಾರ ಬಂದ್ ಮಾಡಿದ್ದಾರೆ.

    ಕೇರಳ-ಕರ್ನಾಟಕದ ಗಡಿಯಾದ ಮೂಲೆಹೊಳೆಯಲ್ಲಿ ರಸ್ತೆ ತುಂಬೆಲ್ಲಾ ನೀರು ಹರಿಯುತ್ತಿದೆ. ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಿರುವ ಅರಣ್ಯಾಧಿಕಾರಿಗಳು ವಾಹನ ಸಂಚಾರ ಬಂದ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಕರ್ನಾಟಕಕ್ಕೆ ಸಂಚರಿಸುವ ಸರಕು ಸಾಗಣೆ ಮಾಡುವ ವಾಹನಗಳು ಮದ್ದೂರು ಚೆಕ್ ಪೋಸ್ಟ್ ನಲ್ಲಿ ಸಾಲುಗಟ್ಟಿ ನಿಂತಿವೆ.

    ಜಿಲ್ಲೆಯ ಮಳೆಯ ಅರ್ಭಟ ಕಡಿಮೆಯಾಗುವವರೆಗೆ ಯಾವುದೇ ವಾಹನ ಬಿಡದಿರಲೂ ಅರಣ್ಯಾಧಿಕಾರಿಗಳು ನಿರ್ಧಾರ ಮಾಡಿದ್ದಾರೆ.

  • ಅ.23ರಂದು ಶೃಂಗೇರಿ, ಹೊರನಾಡು, ಕಳಸ ಸಂಚಾರ ಬಂದ್

    ಅ.23ರಂದು ಶೃಂಗೇರಿ, ಹೊರನಾಡು, ಕಳಸ ಸಂಚಾರ ಬಂದ್

    ಚಿಕ್ಕಮಗಳೂರು: ಬಾಳೆಹೊನ್ನೂರು ಸೇತುವೆ ಕುಸಿಯೋ ಹಂತದಲ್ಲಿರುವುದರಿಂದ ಶೃಂಗೇರಿ, ಹೊರನಾಡು ಮತ್ತು ಕಳಸ ವಾಹನ ಸಂಚಾರವನ್ನು ಬಂದ್ ಮಾಡಲಾಗುತ್ತದೆ.

    ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸೇತುವೆ ಮೇಲೆ ವಾಹನ ಸಂಚಾರಕ್ಕೆ ಸುಮಾರು 3 ಗಂಟೆಗಳ ಕಾಲ ನಿರ್ಬಂಧ ಹಾಕಲಾಗುತ್ತದೆ. ಅಕ್ಟೋಬರ್ 23ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಸೇತುವೆ ಮೇಲೆ ವಾಹನ ಸಂಚಾರವನ್ನು ಬಂದ್ ಮಾಡಿ ಎಂದು ಡಿ.ಸಿ ಬಗಾದಿ ಗೌತಮ್ ಸೂಚನೆ ಕೊಟ್ಟಿದ್ದಾರೆ.

    ಬಾಳೆಹೊನ್ನೂರು ಸೇತುವೆ ಕುಸಿಯೋ ಹಂತದಲ್ಲಿರುವುದರಿಂದ ಅಧಿಕಾರಿಗಳು ವೀಕ್ಷಣೆ ಮಾಡಲಿದ್ದಾರೆ. ಬ್ರಿಡ್ಜ್ ಟೆಸ್ಟಿಂಗ್ ಮೆಷಿನ್ ಬಳಸಿ ಪರಿವೀಕ್ಷಣೆ ನಡೆಸಲಿದ್ದಾರೆ. ಈ ವೇಳೆ ವಾಹನ ಸವಾರರಿಗೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಡಿ.ಸಿ ಆದೇಶ ಹೊರಡಿಸಿದ್ದಾರೆ.

    ಬಾಳೆಹೊನ್ನೂರು ಸೇತುವೆಯನ್ನು ವಿರಾಜಪೇಟೆ ಮತ್ತು ಬೈಂದೂರ್ ರಾಷ್ಟ್ರೀಯ ಹೆದ್ದಾರಿ 27ರಲ್ಲಿ ಭದ್ರಾ ನದಿಗೆ ನಿರ್ಮಿಸಲಾಗಿದೆ.

  • ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ – 3 ದಿನ ಸಂಚಾರ ಬಂದ್

    ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ – 3 ದಿನ ಸಂಚಾರ ಬಂದ್

    ಬೆಂಗಳೂರು: ಟ್ರಿನಿಟಿ ಮೆಟ್ರೋ ಸ್ಟೇಷನ್ ಬಳಿ ಪಿಲ್ಲರ್ ನಲ್ಲಿ ಬಿರುಕು ಬಿಟ್ಟ ನಂತರ ಅದಕ್ಕೆ ಕಬ್ಬಿಣದ ಪಿಲ್ಲರನ್ನು ಇಟ್ಟು ತಾತ್ಕಲಿಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಬಿಎಂಆರ್ ಸಿಎಲ್ ಮೆಟ್ರೋ ಪಿಲ್ಲರ್ ದುರಸ್ಥಿ ಕಾರ್ಯವನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮೆಟ್ರೋ ಸಂಚಾರ ಬಂದ್ ಆಗಲಿದೆ.

    ಡಿಸೆಂಬರ್ 28 ಅಂದರೆ ಶುಕ್ರವಾರ ರಾತ್ರಿಯಿಂದ 29, 30 ಅಂದರೆ ಭಾನುವಾರದ ವರೆಗೂ ಮೆಟ್ರೋ ಸಂಚಾರ ಬಂದ್ ಆಗಲಿದೆ. ಎಂಜಿ ರಸ್ತೆಯಿಂದ ಇಂದಿರಾನಗರಕ್ಕೆ ಓಡಾಡುವ ಮೆಟ್ರೋ ಸಂಚಾರ 28 ರಿಂದ 30 ರವರೆಗೂ ಬಂದ್ ಆಗಲಿದೆ. ಆದರೆ ಇಂದಿರಾನಗರ ಟು ಬೈಯಪ್ಪನಹಳ್ಳಿ ಮೆಟ್ರೋ ಹಾಗೂ ಮೈಸೂರ್ ರಸ್ತೆಯಿಂದ ಎಂಜಿ ರಸ್ತೆ ಮೆಟ್ರೋ ಸಂಚಾರ ಎಂದಿನಂತೆ ಇರುತ್ತದೆ.

    ಕೆಲವು ದಿನಗಳ ಹಿಂದೆ ಟ್ರಿನಿಟಿ ಸರ್ಕಲ್ ಬಳಿ ಇರುವ ಮೆಟ್ರೋ ಪಿಲ್ಲರ್ ನ ಮೇಲ್ಭಾಗದ ಸ್ಲೈಡರ್ ಸ್ವಲ್ಪ ಮಟ್ಟಿಗೆ ಜರಗಿತ್ತು. ಹೀಗಾಗಿ ಅದಕ್ಕೆ ಕಬ್ಬಿಣದ ಸ್ಲೈಡರ್ ಸಪೋರ್ಟ್ ಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಒಂದು ಬದಿಯ ಸಂಚಾರವನ್ನು ತಡೆದು ವಾಹನಗಳಿಗೆ ಏಕಮುಖದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

    ಬಿಎಂಆರ್ ಸಿಎಲ್ ಸಿಬ್ಬಂದಿ ರಾತ್ರಿಯಿಂದ ಮುಂಜಾನೆವರೆಗೂ ದುರಸ್ಥಿ ಕಾರ್ಯ ಮಾಡಿದ್ದರು. ಪಿಲ್ಲರ್ ಬಿರಕು ಬಿಟ್ಟಿರುವ ಸ್ಥಳದ ಎರಡು ಕಡೆ ರಸ್ತೆ ಬ್ಲಾಕ್ ಮಾಡಿ ಕೆಲಸ ಮಾಡಲಾಗಿತ್ತು. ಬಿರಕು ಕಾಣಿಸಿಕೊಂಡಿರುವ ಪಿಲ್ಲರ್ ಸುತ್ತಲೂ ನಾಲ್ಕು ಸಪೋರ್ಟಿಂಗ್ ಸ್ಟಕ್ಚರ್ ಗಳನ್ನ ಅಳವಡಿಸಲಾಗಿತ್ತು.

    ಪದೇ ಪದೇ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗುವ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv