Tag: ಶ್ವಾನ ದಳ

  • ಮೈಸೂರು ಶ್ವಾನ ದಳದ ಹಿರಿಯ ನಾಯಿ ಸೀಮಾ ನಿಧನ

    ಮೈಸೂರು ಶ್ವಾನ ದಳದ ಹಿರಿಯ ನಾಯಿ ಸೀಮಾ ನಿಧನ

    ಮೈಸೂರು: ಸ್ಪೋಟಕ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ಶ್ವಾನ ಸೀಮಾ ನಿಧನವಾಗಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರವನ್ನು ಇಂದು ನೆರವೇರಿಸಲಾಯಿತು.

    2009ರ ನವೆಂಬರ್‌ 14 ರಂದು ಸೂಕ್ತ ತರಬೇತಿಯೊಂದಿಗೆ ಸೀಮಾ ಮೈಸೂರು ನಗರ ಪೊಲೀಸ್‌ ಘಟಕದ ಶ್ವಾನದಳವನ್ನು ಸೇರಿತ್ತು. ಡಾಗ್ ಶೋ, ಮಾಕ್ ಡ್ರಿಲ್( ಅಣುಕು ಕಾರ್ಯಚರಣೆ)ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಶೀಮಾ ಶ್ವಾನ, ಗಣ್ಯ ವ್ಯಕ್ತಿಗಳ ಭದ್ರತೆ ಮತ್ತು ನಾಡಹಬ್ಬ ಭದ್ರತೆ ಬಂದೋಬಸ್ತ್‌ ಕರ್ತವ್ಯದ ಸಂದರ್ಭದಲ್ಲಿ ಎಎಸ್‍ಸಿ ತಂಡದೊಂದಿಗೆ ಉತ್ತಮ ಕರ್ತವ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಿತ್ತು.

     

    2016ನೇ ಸಾಲಿನಲ್ಲಿ ಮೈಸೂರು ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ಬಾಂಬ್ ಸ್ಪೋಟದ ಸಂದರ್ಭದಲ್ಲಿ ಶ್ವಾನವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಪ್ರಶಂಸೆಗಳಿಸಿತ್ತು. ಇಲಾಖೆಯಲ್ಲಿ ಸುಮಾರು 11 ವರ್ಷ 2 ತಿಂಗಳು ಯಶಸ್ವಿಯಾಗಿ ಸೇವೆ ಸಲ್ಲಿಸಿ ವಯೋ ಸಹಜ ಖಾಯಿಲೆಯಿಂದ ಮರಣ ಹೊಂದಿದೆ.

    ಡಿಸಿಪಿ ಸಿಎಆರ್ ಕೇಂದ್ರ ಸ್ಥಾನದ ಶಿವರಾಜು ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಎಸಿಪಿ ಸುದರ್ಶನ್, ಶ್ವಾನದಳದ ಉಸ್ತುವಾರಿ ಅಧಿಕಾರಿ ಮೂರ್ತಿ ಕೆ.ಎಂ, ಆರಕ್ಷಕ ನಿರೀಕ್ಷಕರು, ಸುರೇಶ್ ಉಪ ನಿರೀಕ್ಷಕರು, ಹಾಗೂ ಶ್ವಾನ ದಳದ ಇತರೆ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.

  • ಶ್ವಾನ ದಳದ ಜಾನಿ ನಿಧನ- ಗೆಳೆಯನ ಅಗಲಿಕೆಗೆ ಮೂರು ಶ್ವಾನಗಳು ಮರುಕ

    ಶ್ವಾನ ದಳದ ಜಾನಿ ನಿಧನ- ಗೆಳೆಯನ ಅಗಲಿಕೆಗೆ ಮೂರು ಶ್ವಾನಗಳು ಮರುಕ

    – ಅಂತ್ಯಕ್ರಿಯೆ ನಡೆದ ಸ್ಥಳದ ಬಳಿ ಸುತ್ತಾಟ
    – ಸಕಲ ಗೌರವಗಳೊಂದಿಗೆ ಜಾನಿ ಅಂತ್ಯಕ್ರಿಯೆ

    ಹಾವೇರಿ: ಜಿಲ್ಲಾ ಶ್ವಾನದಳದ ಏಳು ವರ್ಷದ ಜಾನಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಜಾನಿಯ ಅಂತ್ಯಕ್ರಿಯೆಯನ್ನ ಪೊಲೀಸ್ ಇಲಾಖೆ ಶಾಸ್ತ್ರೋಕ್ತವಾಗಿ ನೆರವೇರಿಸಿತ್ತು.

    ಕಳೆದ ಏಳು ವರ್ಷಗಳಿಂದ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ 60 ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಜಾನಿ ಸೇವೆ ಸಲ್ಲಿಸಿದೆ. ಹೀಗಾಗಿ ನಾಯಿ ತೀರಿಕೊಂಡ ಬಳಿಕ ಪೊಲೀಸ್ ಇಲಾಖೆ ಸಿಬ್ಬಂದಿ ಗಾಡ್ ಆಪ್ ಹಾನರ್ ಸಲ್ಲಿಸಿ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತ್ಯಕ್ರಿಯೆ ನಡೆಸಿದರು. ಆದರೆ ಜಾನಿ ಸಾವನ್ನಪ್ಪಿದ ಬಳಿಕ ಆತನ ಸ್ನೇಹಿತರಾಗಿದ್ದ ಮೂರು ನಾಯಿಗಳು ಇದೀಗ ಬೇಸರ ವ್ಯಕ್ತಪಡಿಸಿವೆ.

    ಜಾನಿ ಅಂತ್ಯಕ್ರಿಯೆ ನಡೆದ ಸ್ಥಳದ ಬಳಿ ಕುಳಿತು ಗೆಳೆಯನ ಅಗಲಿಕೆಗೆ ಮೂರು ಶ್ವಾನಗಳು ಮರುಕ ವ್ಯಕ್ತಪಡಿಸಿವೆ. ಒಂದು ಶ್ವಾನ ಸಮಾಧಿಯ ಮೇಲೆ ಮಲಗಿದರೆ, ಇನ್ನೂ ಎರಡು ಶ್ವಾನಗಳು ಸಮಾಧಿಯ ಮುಂದೆ ಕುಳಿತು ಬೇಸರ ವ್ಯಕ್ತಪಡಿಸಿವೆ. ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

  • ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಾಹುಲ್ ಗಾಂಧಿ ಟ್ವೀಟ್

    ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಾಹುಲ್ ಗಾಂಧಿ ಟ್ವೀಟ್

    ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಭಾರತೀಯ ಸೇನಾಪಡೆಯ ಶ್ವಾನದಳದಿಂದ ಯೋಗ ಮಾಡುವ ಚಿತ್ರವನ್ನು ಪೋಸ್ಟ್ ಮಾಡಲಾಗಿತ್ತು. ಈ ಚಿತ್ರವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಇದು ನವಭಾರತ (ನ್ಯೂ ಇಂಡಿಯಾ) ಎಂದು ಕ್ಯಾಪ್ಷನ್ ಹಾಕುವ ಮೂಲಕ ಟ್ರೋಲ್ ಆಗಿದ್ದಾರೆ.

    ಟ್ವೀಟ್ ಮಾಡಿರುವ ಚಿತ್ರಗಳಲ್ಲಿ ಸೈನ್ಯದ ಶ್ವಾನ ಘಟಕ ಮತ್ತು ತರಬೇತುದಾರರು ಯೋಗ ನಮಸ್ಕಾರ ಮಾಡುತ್ತಿದ್ದಾರೆ.

    ರಾಹುಲ್ ಗಾಂಧಿ ಅವರ ಟ್ವೀಟ್ ಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ತಮ್ಮ ಸಾಕು ನಾಯಿಯ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದೆ. ರಾಹುಲ್ ಗಾಂಧಿ ತಮ್ಮ ಸಾಕು ನಾಯಿಯ ಕುರಿತು ಪೋಸ್ಟ್ ಮಾಡುತ್ತಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನವ ಭಾರತ ನಿರ್ಮಾಣವಾಗುತ್ತಿದ್ದರೆ, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹೊಸ ಕಾಂಗ್ರೆಸ್ ಹೊರಹೊಮ್ಮುತ್ತಿದೆ ಎಂದು ಟೀಕಿಸಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನವ ಭಾರತ ನಿರ್ಮಾಣವಾಗುತ್ತಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಹೊಸ ಕಾಂಗ್ರೆಸ್ ಹೊರಹೊಮ್ಮುತ್ತಿರುವುದು ಅವರ ಟ್ವೀಟ್ ಮೂಲಕ ತಿಳಿದಿದೆ ಎಂದು ಬಿಜೆಪಿ ಕಿಡಿ ಕಾರಿದೆ. ಬಹುಶಃ ಅವರಿಗೆ ಜೀವನವೇ ಒಂದು ನಿರಂತರ ತಮಾಷೆಯಾಗಿದ್ದು, ಅವರ ನೆಚ್ಚಿನ ಪಿಡಿ(ಮುದ್ದಿನ ನಾಯಿ)ಯನ್ನು ನೆನಪಿಸುವ ಚಿತ್ರಗಳನ್ನು ಪೋಸ್ಟ್ ಮಾಡಲು ಅವಕಾಶ ಹುಡುಕುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಟೀಕಿಸಿದ್ದಾರೆ.

    ಟ್ವಿಟ್ಟರ್ ನಲ್ಲಿಯೂ ಸಹ ರಾಹುಲ್ ಗಾಂಧಿ ಟ್ರೋಲ್‍ಗೆ ಒಳಗಾಗಿದ್ದು, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಚಿತ್ರಗಳನ್ನು ಎಡಿಟ್ ಮಾಡಿ ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ. ಈ ಮೂಲಕ ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಟ್ರೋಲ್‍ಗೆ ಗುರಿಯಾಗಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]