Tag: ಶ್ರೀ ಶಿವಕುಮಾರ ಸ್ವಾಮೀಜಿಗಳು

  • ಸಿದ್ದಗಂಗಾ ಶ್ರೀಗಳ 114ನೇ ಹುಟ್ಟುಹಬ್ಬ – ಪ್ರಧಾನಿಗಳಿಂದ ಗೌರವ ಸಲ್ಲಿಕೆ

    ಸಿದ್ದಗಂಗಾ ಶ್ರೀಗಳ 114ನೇ ಹುಟ್ಟುಹಬ್ಬ – ಪ್ರಧಾನಿಗಳಿಂದ ಗೌರವ ಸಲ್ಲಿಕೆ

    ನವದೆಹಲಿ: ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 114ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ.

    ಶಿವಕುಮಾರ ಸ್ವಾಮೀಜಿಯವರು ಪ್ರಖ್ಯಾತ ಲಿಂಗಾಯತ ವಿದ್ವಂಸರು, ಶಿಕ್ಷಣತಜ್ಞರು ಮತ್ತು ಪ್ರಸಿದ್ಧ ಸಿದ್ಧಗಂಗ ಮಠದ ಆಧ್ಯಾತ್ಮಿಕ ನಾಯಕರಾಗಿದ್ದರು. ಶಿವಕುಮಾರ ಸ್ವಾಮೀಜಿಯವರ ಉದಾತ್ತ ಆಲೋಚನೆಗಳು ಮತ್ತು ಆದರ್ಶಗಳು ಸ್ಪೂರ್ತಿದಾಯಕವಾದವುಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    ಪವಿತ್ರವಾದಂತಹ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಯವರ ಜಯಂತಿಯಂದು ನಾನು ಅವರಿಗೆ ನಮಸ್ಕರಿಸುತ್ತೇನೆ. ಸಮಾಜಕ್ಕೆ ಸೇವೆ ಸಲ್ಲಿಸಲು ಹಾಗೂ ಬಡವರ ಆರೈಕೆಗಾಗಿ ಅವರು ಮಾಡಿದ ಅಸಂಖ್ಯಾತ ಪ್ರಯತ್ನಗಳು ವ್ಯಾಪಕವಾಗಿ ನೆನಪಿನಲ್ಲಿವೆ. ಅವರ ಉದಾತ್ತ ಆಲೋಚನೆಗಳು ಮತ್ತು ಆದರ್ಶಗಳಿಂದ ನಾವು ಆಳವಾಗಿ ಪ್ರೇರಿತರಾಗಿದ್ದೇವೆ ಎಂದು ಕ್ಯಾಪ್ಷನ್ ಹಾಕುವ ಮೂಲಕ ಟ್ವೀಟ್ ಮಾಡಿದ್ದಾರೆ.

  • ಕೇಶ ಮುಂಡನ ಮಾಡಿ ಶ್ರೀಗಳಿಗೆ ನಮನ ಸಲ್ಲಿಸಲಿದ್ದಾರೆ 10 ಸಾವಿರ ವಿದ್ಯಾರ್ಥಿಗಳು!

    ಕೇಶ ಮುಂಡನ ಮಾಡಿ ಶ್ರೀಗಳಿಗೆ ನಮನ ಸಲ್ಲಿಸಲಿದ್ದಾರೆ 10 ಸಾವಿರ ವಿದ್ಯಾರ್ಥಿಗಳು!

    ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದ 10 ಸಾವಿರ ವಿದ್ಯಾರ್ಥಿಗಳು ಕೇಶ ಮುಂಡನೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.

    ಜನವರಿ 29ರಂದು ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿದ್ದ ಶ್ರೀ ಶಿವಕುಮಾರ ಸ್ವಾಮಿಜಿ ಅವರ ಪುಣ್ಯಸ್ಮರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತಮಗೆ ಅನ್ನ, ಅಕ್ಷರ, ಆಶ್ರಯ ಕೊಟ್ಟು ಬಾಳಿಗೆ ಬೆಳಕಾಗಿದ್ದ ಶ್ರೀಗಳ ಪುಣ್ಯಸ್ಮರಣೆಯ ದಿನದಂದು ಸಿದ್ದಗಂಗಾ ಮಠದ ವಿದ್ಯಾರ್ಥಿಗಳು ಸಾಮೂಹಿಕ ಕೇಶ ಮುಂಡನೆ ಮಾಡಲಿದ್ದಾರೆ.

    ಸಿದ್ದಗಂಗಾ ಮಠದಲ್ಲಿದ್ದ ಮಕ್ಕಳಿಗೆ ಶ್ರೀ ಶಿವಕುಮಾರ ಸ್ವಾಮೀಜಿಗಳು ಯಾವುದೇ ಕೊರತೆಯಾಗದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ನೋಡಿಕೊಳ್ಳುತ್ತಿದ್ದರು. ಆದರಿಂದ ಶ್ರೀಗಳು ಅಗಲಿದ ಬಳಿಕ ವಿದ್ಯಾರ್ಥಿಗಳಲ್ಲಿ ಅನಾಥ ಭಾವದಿಂದ ನೊಂದಿಕೊಂಡಿದ್ದರು. ಈಗ ತಮ್ಮ ಕೇಶ ಮುಂಡನೆ ಮಾಡಿಸುವ ಮೂಲಕ ವಿದ್ಯಾರ್ಥಿಗಳು ಶ್ರೀಗಳಿಗೆ ನಮನ ಸಲ್ಲಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಇಷ್ಟೊಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಕೇಶ ಮುಂಡನೆಯನ್ನು ಉಚಿತವಾಗಿ ಮಾಡಲು ಅಖಿಲ ಕರ್ನಾಟಕ ಸವಿತಾ ಸಮಾಜ ಯುವಕರ ಸಂಘದವರು ಮುಂದಾಗಿದ್ದಾರೆ. ಇದಕ್ಕಾಗಿ ಅಖಿಲ ಕರ್ನಾಟಕ ಸವಿತಾ ಸಮಾಜ ಯುವಕರ ಸಂಘದವರಿಗೆ ಸಿದ್ದಗಂಗಾ ಮಠದಿಂದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಆಶೀರ್ವಾದ ಪತ್ರವನ್ನು ಬರೆದಿದ್ದಾರೆ. ಇದನ್ನೂ ಓದಿ: ಭಾರತ ರತ್ನ – ಲತಾಗಿಲ್ಲದ ನಿಯಮಾವಳಿ ಸಿದ್ದಗಂಗಾ ಶ್ರೀಗಳಿಗೆ ಮಾತ್ರ ಯಾಕೆ?

    ಪತ್ರದಲ್ಲಿ ಏನಿದೆ?
    ಅಖಿಲ ಭಾರತ ಸವಿತಾ ಸಮಾಜ ಯುವಕರ ಸಂಘದವರು ಜನವರಿ 29ರ ಮಂಗಳವಾರದಂದು ಶ್ರೀಕ್ಷೇತ್ರದ ವಿದ್ಯಾರ್ಥಿಗಳಿಗೆ ಉಚಿತ ಕೇಶ ಮುಂಡನ ಸೇವೆ ಮಾಡಲು ಮುಂದೆ ಬಂದಿರುವುದು ತುಂಬಾ ಸಂತೋಷದ ವಿಷಯ.

    ಸವಿತಾ ಸಮಾಜದ ಎಲ್ಲಾ ಕಾರ್ಯಕರ್ತರಿಗೆ ಪರಮಾತ್ಮನು ಹಾಗೂ ಶ್ರೀ ಸಿದ್ದಗಂಗಾ ಗುರುಪರಂಪರೆ ಸಕಲ ಸನ್ಮಂಗಳವನ್ನುಂಟು ಮಾಡಲೆಂದು ಹಾರೈಸುತ್ತೇವೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಆಶೀರ್ವಾದ ಪತ್ರ ಬರೆದಿದ್ದಾರೆ.

    ಶ್ರೀಗಳ ಪುಣ್ಯಸ್ಮರಣೆಯ ದಿನವೇ ಮಕ್ಕಳು ಕೇಶ ಮುಂಡನೆ ಮಾಡಿಕೊಳ್ಳಲಿದ್ದು, ಈ ಮೂಲಕ ಜೀವನದ ದಾರಿ ತೋರಿಸಿದ ದೇವರನ್ನು ಸ್ಮರಿಸಲು ವಿದ್ಯಾರ್ಥಿಗಳು ನಿರ್ಧಾರ ಮಾಡಿ ಭಕ್ತಿಯಲ್ಲಿ ಜಗತ್ತಿಗೆ ಮಾದರಿಯಾಗಿದ್ದಾರೆ. ಗುರುವಿಗೆ ನಮನ ಸಲ್ಲಿಸಲೆಂದು ಮಠದಲ್ಲಿರುವ 10 ಸಾವಿರ ವಿದ್ಯಾರ್ಥಿಗಳು ಸಾಮೂಹಿಕ ಕೇಶ ಮುಂಡನೆ ಕಾರ್ಯವು ವಿಶ್ವದಾಖಲೆಯಾಗುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗದ್ದುಗೆ ಪ್ರವೇಶಿಸಲು ಶಲ್ಯ, ಪಂಚೆ ತೊಟ್ಟ 8 ಜನ ಪೊಲೀಸರು

    ಗದ್ದುಗೆ ಪ್ರವೇಶಿಸಲು ಶಲ್ಯ, ಪಂಚೆ ತೊಟ್ಟ 8 ಜನ ಪೊಲೀಸರು

    ತುಮಕೂರು: ನಡೆದಾಡುವ ದೇವರು, ಶಿವಕುಮಾರ ಶ್ರೀಗಳ ಕ್ರಿಯಾ ವಿಧಿವಿಧಾನ ಸಮಾಧಿಯ ಬಳಿ ಭದ್ರತೆ ನೀಡುವುದಕ್ಕಾಗಿ 8 ಜನ ಪೊಲೀಸರು ಸಮವಸ್ತ್ರ ಬಿಚ್ಚಿ ಪಂಚೆ ಹಾಗೂ ಶಲ್ಯ ಧರಿಸಿದ್ದಾರೆ.

    ಗದ್ದುಗೆ ಬಳಿ ಹೋಗುವಾಗ ಪೊಲೀಸರ ಸಮವಸ್ತ್ರ ಬದಲಾಗಬೇಕಾಗುತ್ತದೆ. ಹೀಗಾಗಿ ಭದ್ರತೆ ಹಾಗೂ ಶ್ರೀ ಮಠದ ಶಿಷ್ಠಾಚಾರದಂತೆ ಪೊಲೀಸರು ಶಲ್ಯ ಹಾಗೂ ಪಂಚೆ ಧರಿಸಿ ಗದ್ದುಗೆಯನ್ನು ಪ್ರವೇಶಿಸಿದ್ದಾರೆ. ಇದನ್ನೂ ಓದಿ: 70ರ ದಶಕದಲ್ಲೇ ಗದ್ದುಗೆ ನಿರ್ಮಾಣಕ್ಕೆ ಜಾಗ ಸೂಚಿಸಿದ್ದ ಶ್ರೀ: ಭವನದ ವಿಶೇಷತೆ ಏನು?

    ಸಮಾಧಿ ಸ್ಥಳಕ್ಕೆ ಅನೇಕ ರಾಜಕಾರಣಿಗಳು, ಗಣ್ಯರು, ಸ್ವಾಮೀಜಿಗಳು ಬಂದಿರುತ್ತಾರೆ. ಅವರಿಗೆ ಭದ್ರತೆ ನೀಡುವ ಉದ್ದೇಶದಿಂದ ಸದ್ಯ 8 ಜನ ಪೊಲೀಸರನ್ನು ನೇಮಿಸಲಾಗಿದೆ. ಜೊತೆಗೆ ಮಠದ ಆವರಣದಲ್ಲಿ, ಅಂತಿಮ ಯಾತ್ರೆ ಮಾರ್ಗದಲ್ಲಿ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

    ಸಾರ್ವಜನಿಕರಿಗೆ ನಿಗಧಿಯಾಗಿದ್ದ ಅಂತಿಮ ದರ್ಶನದ ಸಮಯವನ್ನು 4.30 ಗಂಟೆಗೆ ವಿಸ್ತರಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀಗಳ ದರ್ಶನ ಪಡೆಯಲು ಬರುತ್ತಿದ್ದಾರೆ. ಇದರಿಂದಾಗಿ ಮತ್ತೆ 30 ನಿಮಿಷ ಅವಕಾಶ ಮಾಡಿಕೊಡಲಾಗಿದೆ.

    https://youtu.be/HST1y7OsenU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೇಷ್ಠ ನ್ಯಾಯಮೂರ್ತಿಗಳು – ವರ್ಷಗಟ್ಟಲೇ ನ್ಯಾಯಾಲಯದಲ್ಲಿ ಮುಗಿಯದ ಪ್ರಕರಣ ಒಂದೇ ದಿನದಲ್ಲಿ ಇತ್ಯರ್ಥ!

    ಶ್ರೇಷ್ಠ ನ್ಯಾಯಮೂರ್ತಿಗಳು – ವರ್ಷಗಟ್ಟಲೇ ನ್ಯಾಯಾಲಯದಲ್ಲಿ ಮುಗಿಯದ ಪ್ರಕರಣ ಒಂದೇ ದಿನದಲ್ಲಿ ಇತ್ಯರ್ಥ!

    ಳ್ಳಿಗಳಲ್ಲಿ ತಂಟೆ ತಕರಾರು, ವ್ಯಾಜ್ಯಗಳು ಏನೇ ಇದ್ರೂ ಸಿದ್ದಗಂಗಾ ಮಠದಲ್ಲಿ ಬಗೆಹರಿಯುತಿತ್ತು. ಇದ್ರಿಂದ ಕೋರ್ಟ್ ಕಚೇರಿಗಳಿಗೆ ಹೋಗಿ ಅಪಾರ ಹಣ ವೆಚ್ಚ ಮಾಡೋದು ತಪ್ಪುತಿತ್ತು. ಕೆಲವೊಮ್ಮೆ ಜಟಿಲವಾದ ಸಮಸ್ಯೆಯನ್ನು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಬಗೆಹರಿಸುತ್ತಿದ್ರು.

    ಸಿದ್ದಗಂಗಾ ಶ್ರೀಗಳು ವಾದಿ, ಪ್ರತಿವಾದಿಗಳನ್ನು ಕರೆದರೆ ಯಾರೂ ಹಿಂದೇಟು ಹೊಡೆದು ತಪ್ಪಿಸಿಕೊಳ್ಳುತ್ತಿರಲಿಲ್ಲ. ಹತ್ತು ಹನ್ನೆರಡು ವರ್ಷ ನ್ಯಾಯಾಲಯದಲ್ಲಿ ಬಗೆಹರಿಯದ ಸಾಕಷ್ಟು ಸಮಸ್ಯೆಗಳನ್ನು ಶ್ರೀಗಳು ಒಂದೇ ದಿನದಲ್ಲಿ ಬಗೆಹರಿಸುತ್ತಿದ್ದರು. ಸಾಮಾಜಿಕ ನ್ಯಾಯಮೂರ್ತಿಗಳಾಗಿದ್ದ ಶ್ರೀಗಳ ಹಿತನುಡಿ ಉಭಯ ಪಕ್ಷಗಳಿಗೂ ಅಭಯ ರಕ್ಷೆ. ಇದನ್ನೂ ಓದಿ: ಓದುವುದರ ಜೊತೆಗೆ ಸಿದ್ದಗಂಗಾ ವಿದ್ಯಾರ್ಥಿಗಳು ಗದ್ದೆ ಕೆಲಸಕ್ಕೂ ಸೈ!

    ಪ್ರಕರಣದಲ್ಲಿ ಸೋಲು, ಗೆಲುವುಗಳ ಪ್ರಶ್ನೆಯಿಲ್ಲ, ಲಾಭ ನಷ್ಟಗಳ ದೃಷ್ಟಿಯಿಲ್ಲ, ಗುರುಗಳ ಆಶೀರ್ವಾದವೊಂದೇ ಇಲ್ಲಿ ಮುಖ್ಯ. ಗುಲಗಂಜಿಯಷ್ಟು ಶ್ರೀಗಳ ತೀರ್ಪಿನಲ್ಲಿ ಅನ್ಯಾಯಕ್ಕೆ ಅವಕಾಶವಿರಲ್ಲ ಅನ್ನೋದು ಜನಮನದ ಅಚಲ ನಂಬಿಕೆ. ಅವರ ಲೋಕಪ್ರಜ್ಞೆಯಿಂದಲೇ, ಆಗಾಧ ವಿದ್ವತ್ತಿನಿಂದಲೇ ಪೂಜ್ಯರು ನಮ್ಮನ್ನು ಕೈಹಿಡಿದು ನಡೆಸುತ್ತಾರೆ ಅನ್ನವ ನಂಬಿಕೆ ಎಲ್ಲರಲ್ಲಿತ್ತು. ಇದನ್ನೂ ಓದಿ:  ದೇವರಿಗಾಗಿ ಮುಗಿಲುಮುಟ್ಟಿದ ಆಕ್ರಂದನ – ಸುಡುಬಿಸಿಲಿನಲ್ಲೇ ಅಳುತ್ತಿದ್ದಾರೆ ಮಕ್ಕಳು

    ಜಾತ್ರಿಯ ಸಮಯದಲ್ಲಿ ಸೌದೆಗಾಗಿ ಕೊಡಲಿ ಹಿಡಿದ್ರು!
    ಶಿವರಾತ್ರಿ ಸಮಯದಲ್ಲಿ ಮಠದ ಜಾತ್ರೆ ವೀಕ್ಷಿಸಲು ಲಕ್ಷಾಂತರ ಮಂದಿ ಬರ್ತಾರೆ. ಮೂರು ಹೊತ್ತು ದಾಸೋಹ ನಿರಂತರವಾಗುತ್ತೆ. ಭೀಮ ಕಾಯದ ಕೊಳಗದಲ್ಲಿ ಪಾಯಸ, ಕೊಪ್ಪರಿಗೆಯಲ್ಲಿ ಮುದ್ದೆ, ಅನ್ನ ಬಸಿಯಲು ನಾಲ್ಕು ತಪ್ಪಲೆ ಹೀಗೆ ಅಡುಗೆ ಪಾಡಲು ಎಷ್ಟು ಗಾಡಿ ಸೌದೆಯೂ ಸಾಲುತ್ತಿರಲಿಲ್ಲವಂತೆ.

    ಸೌದೆಯ ಅಭಾವದಿಂದ ಸಿದ್ದಗಂಗಾ ಶ್ರೀಗಳೇ 200- 300 ವಿದ್ಯಾರ್ಥಿಗಳ ಜೊತೆ ದೇವರಾಯ ದುರ್ಗದ ಕಾಡಲ್ಲಿ ಅಲೆದು, ಖುದ್ದು ಕೊಡಲಿ ಹಿಡಿದು ಸೌದೆ ಹೊಂದಿಸುತ್ತಿದ್ದರು. ಒಲೆಯ ಅಡುಗೆಯನ್ನಷ್ಟೇ ಇಲ್ಲಿ ಮಾಡಲಾಗುತ್ತೆ. ಉರಿದ ಒಲೆ ಇಂದಿಗೂ ಮಠದಲ್ಲಿ ಆರಿಲ್ಲ ಅನ್ನೋದು ಪ್ರಚಲಿತ ಮಾತು.  ಇದನ್ನೂ ಓದಿ:ಸಿದ್ದಗಂಗಾ ಮಠದ ದಾಸೋಹ ಒಂದು ಪವಾಡ – ಒಲೆಯ ಬೆಂಕಿ ಒಂದು ದಿನವೂ ಆರಿಲ್ಲ

    ಜೋಳಿಗೆಯಲ್ಲಿ ಬಿಕ್ಷೆ ಬೇಡಿದ್ರು:
    ಆರಂಭದಲ್ಲಿ ಮಠದ ಏಳಿಗೆಗಾಗಿ ಮಠವನ್ನು ನಂಬಿ ಬರುವ ಜನರಿಗಾಗಿ ದಾಸೋಹಕ್ಕಾಗಿ ಶ್ರೀಗಳು ಪ್ರಾರಂಭದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಬಿಕ್ಷಾಟನೆ ಮಾಡಿ ಖರ್ಚುವೆಚ್ಚಗಳಿಗೆ ದುಡ್ಡು ಹೊಂದಿಸುತ್ತಿದ್ದರು.

    ಸಿದ್ದಗಂಗಾ ಶ್ರೀಗಳು ಮಠಾಧೀಶರಾದ ಮೇಲೆ ಅನೇಕ ಜನ ಜಾಗವನ್ನು ದಾನವಾಗಿ ನೀಡಿದ್ದಾರೆ. ಶ್ರೀಗಳು ಬಿಕ್ಷಾಟನೆಗೆ ಹೋದರೆ ಒಂದೊಂದು ಊರಲ್ಲಿ ಒಂದು ಅಥವಾ ಎರಡು ದಿನ ತಂಗಿ ಅಲ್ಲಿ ಪೂಜಾದಿಗಳನ್ನು ಮುಗಿಸುತ್ತಿದ್ರು. ಊರಿನವರೆಲ್ಲ ಸ್ವಾಮೀಜಿ ಬಂದ್ರೆ ಸಂಭ್ರಮ. ಸ್ವಾಮೀಜಿಯ ಜೋಳಿಗೆ ತುಂಬಿಸಿ, ಮಠಕ್ಕೂ ಒಂದಿಷ್ಟು ಗಾಡಿಯಲ್ಲಿ ಕಳುಹಿಸುತ್ತಿದ್ದರು. ವಿಶೇಷ ಅಂದ್ರೆ ಮಲೆನಾಡಿನ ಭಾಗವಾದ ಸಕಲೇಶಪುರಕ್ಕೂ ಹೋಗಿಬರುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv