Tag: ಶ್ರೀ ಕೃಷ್ಣ ಮಠ

  • ಉಡುಪಿಯಲ್ಲಿ ವಿಜೃಂಭಣೆಯಿಂದ ನಡೆಯಿತು ಮಕರ ಸಂಕ್ರಾಂತಿ ತೇರುಗಳ ಉತ್ಸವ

    ಉಡುಪಿಯಲ್ಲಿ ವಿಜೃಂಭಣೆಯಿಂದ ನಡೆಯಿತು ಮಕರ ಸಂಕ್ರಾಂತಿ ತೇರುಗಳ ಉತ್ಸವ

    ಉಡುಪಿ: 800 ವರ್ಷಗಳ ಹಿಂದೆ ಮಧ್ವಾಚಾರ್ಯ ರಿಂದ ಸ್ಥಾಪನೆಯಾದ ಶ್ರೀಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿಯ ದಿನದಂದು ಸಂಭ್ರ ಏಕಕಾಲದಲ್ಲಿ ಮೂರು ತೇರುಗಳ ಉತ್ಸವ ನಡೆಯಿತು.

    ಆರಂಭದಲ್ಲಿ ತೆಪ್ಪೋತ್ಸವ, ನಂತರ ಪಲ್ಲಕ್ಕಿಯಲ್ಲಿ ದೇವರನ್ನು ತಂದು ಮೂರು ರಥಗಳಲ್ಲಿ ಉತ್ಸವ ಮಾಡಲಾಯ್ತು. ಸಾವಿರಾರು ಮಂದಿ ಈ ದಿನದ ಆಚರಣೆಗೆ ಸಾಕ್ಷಿಯಾದರು. ಎಂಟು ಮಠದ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. ವಿದ್ಯುದ್ದೀಪಾಲಂಕಾರ, ಸಾಂಪ್ರದಾಯಿಕ ಪಟಾಕಿ, ವೈಭವದ ಮೆರವಣಿಗೆ ಸಂಕ್ರಾಂತಿಯ ವಿಶೇಷವಾಗಿತ್ತು.

    ಈ ಬಾರಿ ತೆಪ್ಪವನ್ನು ರಥದ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಸಂಕ್ರಾಂತಿ ಸಂದರ್ಭದಲ್ಲಿ ನಡೆದ ತೆಪ್ಪೋತ್ಸವದಲ್ಲಿ ಸ್ವಾಮೀಜಿಗಳು ತೆಪ್ಪ ನಡೆಸಿದ್ದು ವಿಶೇಷವಾಗಿತ್ತು. ಪರ್ಯಾಯ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಮಧ್ವ ಸರೋವರದಲ್ಲಿ ತೆಪ್ಪಕ್ಕೆ ಹುಟ್ಟು ಹಾಕಿದರು. ಮಧ್ವ ಸರೋವರದಲ್ಲಿ ನಡೆದ ದೇವರ ತೆಪ್ಪೋತ್ಸವಕ್ಕೆ ಸ್ವಾಮೀಜಿಗಳೇ ದೋಣಿ ಚಲಾಯಿಸಿದ್ದು ವಿಶೇಷವಾಗಿತ್ತು.

    ಶ್ರೀ ಕೃಷ್ಣ ಮಠದಲ್ಲಿ ನಡೆದ ಮಕರ ಸಂಕ್ರಮಣದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಶಿರೂರು ಮಠಾಧೀಶರಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಮಂತ್ರಾಲಯದ ಮಠಾಧೀಶರಾದ ಶ್ರೀ ವಿಬುಧೇಂದ್ರ ತೀರ್ಥ ಶ್ರೀಪಾದರು, ರಾಮೋಹಳ್ಳಿಯ ಶ್ರೀ ವಿಶ್ವಭೂಷಣ ಶ್ರೀಪಾದರು ಉಪಸ್ಥಿತರಿದ್ದರು.

  • ಉಡುಪಿ ಶ್ರೀಕೃಷ್ಣಮಠದಲ್ಲಿ ನರಕ ಚತುರ್ದಶಿ, ಎಣ್ಣೆಸ್ನಾನದ ಸಂಭ್ರಮ

    ಉಡುಪಿ ಶ್ರೀಕೃಷ್ಣಮಠದಲ್ಲಿ ನರಕ ಚತುರ್ದಶಿ, ಎಣ್ಣೆಸ್ನಾನದ ಸಂಭ್ರಮ

    ಉಡುಪಿ: ದೇಶಾದ್ಯಂತ ಬೆಳಕಿನ ಹಬ್ಬದ ಸಂಭ್ರಮ ಶುರುವಾಗಿದೆ. ದೀಪಾವಳಿಯ ಮೊದಲ ದಿನ ನರಕ ಚತುರ್ದಶಿ. ನರಕ ಚತುರ್ದಶಿಯಂದು ಎಣ್ಣೆ ಸ್ನಾನ ಮಾಡುವ ಮೂಲಕ ಹಬ್ಬಕ್ಕೆ ಚಾಲನೆ ಸಿಗುತ್ತದೆ. ಕೃಷ್ಣ ಪರಮಾತ್ಮ ನರಕಾಸುರನನ್ನು ಸಂಹಾರ ಮಾಡಿದ ಹಿನ್ನೆಲೆಯಲ್ಲಿ ನರಕ ಚತುರ್ದಶಿ ಆಚರಿಸಲಾಗುತ್ತದೆ.

    ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗಿನಿಂದ ಆಚರಣೆ ಶುರುವಾಗಿದೆ. ಪರ್ಯಾಯ ಪೇಜಾವರ ಮಠಾಧೀಶ ವಿಶ್ವೆಶತೀರ್ಥ ಸ್ವಾಮೀಜಿ ಬೆಳಗ್ಗೆ ಪಶ್ಚಿಮ ಜಾಗರ ಪೂಜೆ ನೆರವೇರಿಸಿದರು. ನಂತರ ಕೃಷ್ಣಾಪುರ ಸ್ವಾಮೀಜಿ, ಸೋದೆ-ಕಾಣಿಯೂರು ಶ್ರೀಗಳು ಪರ್ಯಾಯ ನಡೆಸುತ್ತಿರುವ ಇಬ್ಬರೂ ಶ್ರೀಗಳು ಒಬ್ಬರಿಗೊಬ್ಬರು ಎಣ್ಣೆ ಪ್ರಸಾದ ವಿನಿಮಯ ಮಾಡಿಕೊಂಡರು.

    ಮಠದ ಚಂದ್ರಶಾಲೆಯಲ್ಲಿ ಭಕ್ತರಿಗೂ ಸ್ವಾಮೀಜಿ ದೀಪಾವಳಿಯ ಎಣ್ಣೆಪ್ರಸಾದ ನೀಡಿದರು. ಮಠದ ಭಕ್ತರು ಸ್ವಾಮೀಜಿಗೆ ಎಣ್ಣೆ ಹಚ್ಚಿದರು. ಹತ್ತಾರು ಮಂದಿ ಎಣ್ಣೆ ಮಾಲೀಶ್ ಮಾಡಿದರು. ಮಠದ ಸಿಬ್ಬಂದಿ ಪರಸ್ಪರ ಎಣ್ಣೆ ಹಚ್ಚಿಕೊಂಡು ಸಂಭ್ರಮಿಸಿದರು.

    ಇದೇ ವೇಳೆ ಮಾತನಾಡಿದ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ನರಕಾಸುರ ವಿವಿಧ ರಾಜ್ಯದ ಮೇಲೆ ದಾಳಿ ಮಾಡಿ ಯುವತಿಯರನ್ನು ಎತ್ತಿಕೊಂಡು ಹೋಗಿ ಸೆರೆಯಲ್ಲಿ ಇರಿಸಿಕೊಂಡಿದ್ದ. ಇಂದ್ರಲೋಕದ ಮೇಲೆ ದಾಳಿ ಮಾಡಿ ಅದಿತಿ ದೇವಿಯ ಕರ್ಣ ಕುಂಡಲ ಅಪಹರಿಸಿದ್ದ. ದಾರಿ ಕಾಣದಾಗದ ದೇವೇಂದ್ರ, ಶ್ರೀಕೃಷ್ಣನಲ್ಲಿ ವಿಚಾರವನ್ನೆಲ್ಲ ಒಪ್ಪಿಸಿದ. ಶ್ರೀಕೃಷ್ಣ ಸತ್ಯಭಾಮ ಸಮೇತ ಗರಡಾರೂಢನಾಗಿ ನರಕಾಸುರನ ನಗರದ ಮೇಲೆ ದಾಳಿ ಮಾಡಿದ. ಮಂತ್ರಿಗಳ ಸಂಹಾರ ಮಾಡಿ, ನರಕಾಸುರ ವಧೆ ಮಾಡಿದ. ರಾಜಕುವರಿಯರನ್ನೆಲ್ಲಾ ಬಿಡುಗಡೆಗೊಳಿಸಿದ. ನರಕಾಸುರನ ವಧೆ ಮಾಡಿ, ಕೃಷ್ಣಪರಮಾತ್ಮ ಅಭ್ಯಂಜನ ಮಾಡಿದ ದಿನ ಇವತ್ತು. ಭಗವಂತ ಲೋಕಕ್ಕೆ ಮಾಡಿದ ಮಹಾ ಉಪಕಾರವನ್ನು ನಾವೆಲ್ಲಾ ನೆನೆಯಬೇಕು ಎಂದರು.

    ಯುವತಿಯರನ್ನು ಲೋಕ ತೊರೆದಾಗ ಮಾರ್ಗದರ್ಶನ ಮಾಡಿ, ಭಗವಂತನೇ ಅವರನ್ನು ಸ್ವೀಕರಿಸಿದ. ಸಮಾಜದಲ್ಲಿ ಗೌರವದ ಸ್ನಾನ ನೀಡಿದ ದಿನ ಇಂದು. ಭಗವಂತನನ್ನು ಪ್ರಾರ್ಥನೆ ಮಾಡಿ, ಅವನ ಪರೋಪಕಾರ ಗುಣ ಅಳವಡಿಸಿಕೊಂಡು ನಾವು ಕೂಡಾ ಅದೇ ಸನ್ಮಾರ್ಗದಲ್ಲಿ ನಡೆಯಬೇಕಿದೆ. ದಣಿವಿನ ಜೊತೆ ದುರ್ಗಂದ-ಕೊಳೆ ಕೂಡಾ ದೂರವಾಗುತ್ತದೆ. ಈ ಮೂಲಕ ಈ ದಿನ ಮನಸ್ಸಿನ ಕೊಳೆಯೂ ದೂರವಾಗಲಿ ಅಂತ ಭಗವಂತನಲ್ಲಿ ಪ್ರಾರ್ಥನೆ ಮಾಡುವುದಾಗಿ ಹೇಳಿದ್ರು.

  • ಪಾಕ್ ದುರ್ಯೋಧನ, ಚೀನಾ ದುಶ್ಯಾಶನನಂತೆ ಭಾರತಾಂಬೆಯನ್ನು ಕಾಡುತ್ತಿವೆ: ಪೇಜಾವರ ಶ್ರೀ

    ಪಾಕ್ ದುರ್ಯೋಧನ, ಚೀನಾ ದುಶ್ಯಾಶನನಂತೆ ಭಾರತಾಂಬೆಯನ್ನು ಕಾಡುತ್ತಿವೆ: ಪೇಜಾವರ ಶ್ರೀ

    ಉಡುಪಿ: ನಮ್ಮ ದೇಶಕ್ಕೆ ಬಂದಿರುವ ಆಂತರಿಕ ತೊಂದರೆ ಹಾಗು ಬಾಹ್ಯ ತೊಂದರೆಯನ್ನು ನಿವಾರಿಸಲು ದೇವರಲ್ಲಿ ವಿಶೇಷ ಪ್ರಾರ್ಥನೆಯನ್ನು ಭಾರತೀಯರು ಮಾಡಬೇಕು. ಬಾಹ್ಯವಾಗಿ ಪಾಕಿಸ್ತಾನ ಹಾಗೂ ಚೈನಾ ದೇಶಗಳು ದುರ್ಯೋಧನ ಮತ್ತು ದುಶ್ಯಾಸನ ರೀತಿಯಲ್ಲಿ ವರ್ತಿಸಿ ಭಾರತ ಮಾತೆಯನ್ನು ಕಾಡುತ್ತ ಇದ್ದಾರೆ ಅಂತ ಪೇಜಾವರ ಶ್ರೀ ಹೇಳಿದ್ದಾರೆ.

    ಅವರು ಇಂದು ಸ್ವಾತಂತ್ರ್ಯೋತ್ಸವದ ಅಂಗವಾಗಿ ಶ್ರೀಕೃಷ್ಣ ಮಠದಲ್ಲಿ ಧ್ವಜಾರೋಹಣ ಮಾಡಿ ಬಳಿಕ ಮಾತನಾಡಿ, ಶ್ರೀಕೃಷ್ಣನು ಪಾಂಚಾಲಿಗೆ ಅಕ್ಷಯ ವಸ್ತ್ರ ನೀಡಿದ ಹಾಗೆ ಭಾರತ ಮಾತೆಗೆ ಅಕ್ಷಯ ಶಕ್ತಿಯನ್ನು ಕೊಟ್ಟು ದೇಶಾಭಿವೃದ್ಧಿಯಾಗಿ ದೇಶ ಪ್ರಗತಿ ಪಥದಲ್ಲಿ ಮುನ್ನಡೆಯುವಂತೆ ಅನುಗ್ರಹಿಸಲಿ. ನೀರು, ಗಾಳಿ, ಮನುಷ್ಯರು, ಪ್ರಾಣಿಗಳೆಲ್ಲ ಸೇರಿ ಭಾರತ ಮಾತೆಯ ಪ್ರಕೃತಿ ನಿರ್ಮಾಣವಾಗಿದೆ. ಇದನ್ನು ಕಲುಷಿತ ಮಾಡದೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂದೇಶ ನೀಡಿದರು.

    1947ರ ಆಗಸ್ಟ್ 15ರ ಮಧ್ಯರಾತ್ರಿ ರಥಬೀದಿಯಲ್ಲಿ ಪುತ್ತಿಗೆ ಮಠದ ಶತಾಯುಷಿ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾಸಮುದ್ರ ತೀರ್ಥ ಸ್ವಾಮೀಜಿಯವರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಮಾನ್ಯ ತೀರ್ಥ ಸ್ವಾಮೀಜಿಯವರು ಹಾಗೂ ಉಳಿದ ಅಷ್ಟಮಠಾಧೀಶರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಿರುವುದನ್ನು ನೆನಪಿಸಿದರು.

    ಪೇಜಾವರ ಕಿರಿಯ ಸ್ವಾಮೀಜಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಿದರು. ಕೇಸರಿ ಮುಂಡಾಸು-ಬಿಳಿ ಅಂಗಿ- ಹಸಿರು ಕಚ್ಚೆಯಲ್ಲಿ ಕಡೆಗೋಲಿನಲ್ಲಿ ಶ್ರೀಕೃಷ್ಣ ಕಂಗೊಳಿಸುತ್ತಿದ್ದಾನೆ.

  • ಸಿಎಂ ಸಿದ್ದರಾಮಯ್ಯ ಓತ್ಲಾ ರೈತ, ಮೀರಾ ಕುಮಾರ್‍ಗೆ ನಮ್ಮ ಬೆಂಬಲ- ಉಡುಪಿಯಲ್ಲಿ ಎಚ್‍ಡಿಕೆ

    ಸಿಎಂ ಸಿದ್ದರಾಮಯ್ಯ ಓತ್ಲಾ ರೈತ, ಮೀರಾ ಕುಮಾರ್‍ಗೆ ನಮ್ಮ ಬೆಂಬಲ- ಉಡುಪಿಯಲ್ಲಿ ಎಚ್‍ಡಿಕೆ

    ಉಡುಪಿ: ರೈತರ ಬಗ್ಗೆ ಮಾತನಾಡೋ ನೈತಿಕತೆ ಕುಮಾರಸ್ವಾಮಿಗೆ ಇಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಉಡುಪಿಯಲ್ಲಿ ಎಚ್‍ಡಿಕೆ ತಿರುಗೇಟು ನೀಡಿದ್ದಾರೆ. ಸಿಎಂ ಅವರನ್ನು ಓತ್ಲಾ ರೈತ ಅಂತ ಲೇವಡಿ ಮಾಡಿದ್ದಾರೆ. ಸಾಲ ಮನ್ನಾದ ಕಥೆ ಒಂದು ತಿಂಗಳೊಳಗೆ ಬಯಲಾಗಲಿದೆ ಎಂದಿದ್ದಾರೆ.

    ಉಡುಪಿ ಶ್ರೀಕೃಷ್ಣಮಠಕ್ಕೆ ಭಾನುವಾರ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗೂ ಕುಟುಂಬ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ಪರ್ಯಾಯ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿದ ಕುಮಾರಸ್ವಾಮಿ ಸ್ವಾಮೀಜಿಯನ್ನು ಗೌರವಿಸಿದರು. ಇದೇ ಸಂದರ್ಭ ಕೃಷ್ಣಮಠದ ಕಡೆಯಿಂದ ಎಚ್‍ಡಿಕೆ ಕುಟುಂಬವನ್ನು ಗೌರವಿಸಲಾಯ್ತು. ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಎಚ್‍ಡಿಕೆ ಸಿದ್ದರಾಮಯ್ಯ ಓತ್ಲಾ ರೈತ ಅಂತ ಜರಿದರು.

    ನಾವು ನಿಜವಾದ ರೈತರು, ರೈತರ ಮಕ್ಕಳು. ರಾಜಕೀಯಕ್ಕೆ ಬರುವವರೆಗೂ ಬೇಸಾಯ ಮಾಡುತ್ತಿದ್ದೆವು. ತಿಪ್ಪೆ ಗುಂಡಿಯಿಂದ ಗೊಬ್ಬರ ಎತ್ತಿದ್ದೇನೆ. 50 ಸಾವಿರ ರೂಪಾಯಿ ಸಾಲ ಮನ್ನಾದ ಕಥೆ ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತೆ ಎಂದರು.

    ರಾಷ್ಟ್ರಪತಿಗಳು ಕೃಷ್ಣಮಠಕ್ಕೆ ಬಂದಾಗ ಸಿಎಂ ಬರಬೇಕಿತ್ತು. ಸಿಎಂ ಬಾರದಿರುವುದರಿಂದ ಕೃಷ್ಣಮಠಕ್ಕೆ, ಸ್ವಾಮೀಜಿಗಳಿಗೆ ನಷ್ಟವಿಲ್ಲ. ನಷ್ಟ ಆಗಿರೋದು ಸಿಎಂ ಸಿದ್ದರಾಮಯ್ಯಗೆ. ಅವರ ಇಂತಹ ಉದ್ಧಟತನದಿಂದಲೇ ರಾಜ್ಯ ಈ ಪರಿಸ್ಥಿತಿಯಲ್ಲಿದೆ. ಈ ಬಾರಿಯೂ ಮಳೆಯಾಗದಿರುವುದಕ್ಕೂ ಇದೇ ಕಾರಣ ಎಂದು ಸಿಎಂರನ್ನು ಕೆಣಕಿದರು.

    ಗುಲಾಂ ನಬಿ ಆಜಾದ್ ಫೋನ್ ಮಾಡಿದ್ದರು. ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್‍ಗೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದು, ಮೀರಾರನ್ನು ಬೆಂಬಲಿಸುವುದಾಗಿ ಹೇಳಿದರು. ಕುಮಾರಸ್ವಾಮಿ ಕರಾವಳಿ ದೇಗುಲಗಳ ದರ್ಶನ ನಡೆಸುತ್ತಿದ್ದು ಪತ್ನಿ ಅನಿತಾಕುಮಾರಸ್ವಾಮಿ, ಪುತ್ರ ನಿಖಿಲ್ ಜೊತೆಗಿದ್ದರು.