Tag: ಶ್ರೀರಾಮ್ ಸೇನೆ

  • ಕಟ್ಟುನಿಟ್ಟಾಗಿ ಸಿಎಎ ಕಾಯ್ದೆ ಜಾರಿಗಾಗಿ ಶ್ರೀರಾಮ್ ಸೇನೆ ಒತ್ತಾಯ

    ಕಟ್ಟುನಿಟ್ಟಾಗಿ ಸಿಎಎ ಕಾಯ್ದೆ ಜಾರಿಗಾಗಿ ಶ್ರೀರಾಮ್ ಸೇನೆ ಒತ್ತಾಯ

    ಕಲಬುರಗಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಗಾಗಲೇ ದೇಶದಾದ್ಯಂತ ತೀವ್ರ ಸ್ವರೂಪದ ಹೋರಾಟಗಳು ನಡೆಯುತ್ತಿವೆ. ಇತ್ತ ಕಲಬುರಗಿಯಲ್ಲಿಯೂ ಸಿಎಎ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ.

    ಆದರೆ ಕಲಬುರಗಿಯ ಶ್ರೀರಾಮ್ ಸೇನೆ ಜಿಲ್ಲಾ ಘಟಕ ಪೌರತ್ವ ತಿದ್ದುಪಡಿ ಕಾಯ್ದೆ ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿದೆ. ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ ಪೌರತ್ವ ವಿರುದ್ಧದ ಹೋರಾಟಕ್ಕೆ ಮಣಿದು ಯಾವುದೇ ಕಾರಣಕ್ಕೂ ಮಸೂದೆ ಹಿಂಪಡೆಯಬಾರದು. ಸಿಎಎ ಮಸೂದೆಯನ್ನು ಯಥಾವತ್ತಾಗಿ ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

    ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಲು ಶ್ರೀರಾಮ್ ಸೇನೆ ಮುಖಂಡರು, ಕಾರ್ಯಕರ್ತರು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಪೊಲೀಸರು ಮೆರವಣಿಗೆಗೆ ಅವಕಾಶ ನೀಡದ ಕಾರಣ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮುಖಾಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

  • ಶ್ರೀರಾಮನ ಬಗ್ಗೆ ಕೆ.ಎಸ್ ಭಗವಾನ್ ಹೇಳಿಕೆಗೆ ಮುತಾಲಿಕ್ ಹೀಗಂದ್ರು

    ಶ್ರೀರಾಮನ ಬಗ್ಗೆ ಕೆ.ಎಸ್ ಭಗವಾನ್ ಹೇಳಿಕೆಗೆ ಮುತಾಲಿಕ್ ಹೀಗಂದ್ರು

    ಬೆಳಗಾವಿ: ಮೈಸೂರಿನಲ್ಲಿ ಸಾಹಿತಿ ಭಗವಾನ್ ರಾಮನ ಕುರಿತು ನೀಡಿರುವ ಹೇಳಿಕೆ ರಾಮಾಯಣವನ್ನು ಬರೆದಿರುವ ವಾಲ್ಮೀಕಿ ಅವರಿಗೆ ಮಾಡಿರುವ ಅಪಮಾನ. ಭಗವಾನ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಗ್ರಹಿಸಿದ್ದಾರೆ.

    ಭಗವಾನ್ ಹೇಳಿಕೆ ಕುರಿತು ಇಂದು ಪ್ರತಿಕ್ರಿಯಿಸಿದ ಮುತಾಲಿಕ್, ರಾಮನ ಬಗ್ಗೆ ಕೀಳಾಗಿ ಮಾತನಾಡಿರುವ ಭಗವಾನ್ ರಾಮಾಯಣವನ್ನು ಬರೆದಿರುವ ವಾಲ್ಮೀಕಿಗೆ ಅಪಮಾನವನ್ನು ಮಾಡಿದ್ದಾರೆ. ವಾಲ್ಮೀಕಿ ಜನಾಂಗದವರು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಬೇಕು. ದಲಿತ ಜನಾಂಗಕ್ಕೆ ಅಪಮಾನ ಮಾಡಿದ್ದು ಸರಿಯಲ್ಲ. ಭಗವಾನ್ ಭಗವಾನ ಅಲ್ಲ ಅವನೊಬ್ಬ ಸೈತಾನ್ ಎಂದು ವಾಗ್ದಾಳಿ ನಡೆಸಿದರು.

    ಇದೇ ಸಂದರ್ಭದಲ್ಲಿ ಮಹಿಷ ದಸರಾ ಆಚರಣೆ ಮಾಡುವವರು ರಕ್ಷಸ ಕುಲದವರು, ರಾವಣನ ವಂಶಸ್ಥರು. ಮಹಿಷ ದಸರಾವನ್ನು ಆಚರಣೆ ಮಾಡುವುದಕ್ಕೆ ಶ್ರೀರಾಮಸೇನೆಯ ವಿರೋಧವಿದೆ ಎಂದು ಹೇಳಿದರು. ರೋಹಿಂಗ್ಯಾ ಮುಸ್ಮಿಮರಿಗೆ ಭಾರತದಲ್ಲಿ ಆಶ್ರಯವನ್ನು ನೀಡುವುದಕ್ಕೆ ಭಾರತದ ಮುಸ್ಮಿಮರು ಒತ್ತಾಯ ಮಾಡುವುದು ಮೂರ್ಖತನ ಅಂದ್ರು.

    ಎರಡು ದಿನಗಳ ಹಿಂದೆ ಮೈಸೂರಿನ ದಸರಾ ಪ್ರಯುಕ್ತ ನಡೆದ ವಿಶಿಷ್ಟ ಕವಿ ಗೋಷ್ಠಿಯಲ್ಲಿ ಪ್ರೋ. ಕೆಎಸ್ ಭಗವಾನ್ ಮಾತನಾಡಿ, ರಾಮನ ನಿಜ ಬಣ್ಣ ವಾಲ್ಮೀಕಿ ಬರೆದಿರುವ ರಾಮಾಯಾಣದಲ್ಲಿ ತಿಳಿದು ಬಂದಿದೆ. ವಾಲ್ಮೀಕಿ ಎಲ್ಲಿಯೂ ರಾಮನನ್ನು ದೇವರು ಎಂದು ಕರೆದಿಲ್ಲ. ಬ್ರಾಹ್ಮಣರ ಮಾತು ಕೇಳಿ ರಾಮ ಶಂಭೂಕನ ತಲೆಯನ್ನು ಕತ್ತರಿಸಿದ. ತುಂಬು ಗರ್ಭಿಣಿಯನ್ನು ಕಾಡಿಗೆ ಕಳುಹಿಸಿದ. ಇಂತಹ ವ್ಯಕ್ತಿಗೆ ರಾಮಮಂದಿರ ನಿರ್ಮಿಸುವ ಮೊದಲು ಯೋಚಿಸಿ ಎಂದು ಹೇಳಿ ವಿವಾದದ ಕಿಡಿ ಹಬ್ಬಿಸಿದ್ದರು.