Tag: ಶೌರ್ಯ

  • ಕಣ್ಣೀರ ಕಡಲಲ್ಲಿ ವಿಜಯ ರಾಘವೇಂದ್ರ- ಅಣ್ಣನನ್ನು ತಬ್ಬಿ ಸಂತೈಸಿದ ಶ್ರೀಮುರಳಿ

    ಕಣ್ಣೀರ ಕಡಲಲ್ಲಿ ವಿಜಯ ರಾಘವೇಂದ್ರ- ಅಣ್ಣನನ್ನು ತಬ್ಬಿ ಸಂತೈಸಿದ ಶ್ರೀಮುರಳಿ

    ತ್ನಿ ಸ್ಪಂದನಾ (Spandana) ನಿಧನ ವಿಜಯ ರಾಘವೇಂದ್ರಗೆ (Vijay Raghavendra) ಬರ ಸಿಡಿಲು ಬಡಿದಂತೆ ಆಗಿದೆ. ಅಂತಿಮ ವಿದಾಯಕ್ಕೆ ಕುಟುಂಬ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಕಣ್ಣೀರ ಕಡಲಲ್ಲಿ ಇರೋ ಅಣ್ಣ ವಿಜಯ್‌ಗೆ ಶ್ರೀಮುರಳಿ (Srimurali) ಸಂತೈಸುತ್ತಿದ್ದಾರೆ.

    ಡಾ.ರಾಜ್‌ಕುಮಾರ್ ಕುಟುಂಬಕ್ಕೆ ಒಂದರ ಹಿಂದೆ ಒಂದು ಆಘಾತ ಎದುರಾಗಿದೆ. ಅಪ್ಪು ನಿಧನದ ನಂತರ ಸ್ಪಂದನಾ ಸಾವು ಅರಗಿಸಿಕೊಳ್ಳದ ಆಘಾತವಾಗಿದೆ. ಜೋಡಿ ಹಕ್ಕಿಯಂತೆ ಇದ್ದ ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಜೋಡಿಯೇ ಮೇಲೆ ಅದು ಯಾರ ಕೆಟ್ಟ ಕಣ್ಣು ಬಿತ್ತೋ ಏನೋ ಎಂದು ವಿಜಯ ಆಪ್ತರು ಭಾವುಕರಾಗಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಅಣ್ಣನ ಜೊತೆಯಾಗಿ ಶ್ರೀಮುರಳಿ ನಿಂತಿದ್ದಾರೆ. ಇದನ್ನೂ ಓದಿ:ಆಗಿದ್ದು ಆಯ್ತು, ಮರೆತು ಬಿಡಪ್ಪಾ ಅಂತಾ ರಾಘುಗೆ ಹೇಳೋಕೆ ಆಗುತ್ತಾ- ರಾಘಣ್ಣ

    ಮಗ ಶೌರ್ಯನಿಗೆ ತಂದೆ ಮತ್ತು ಚಿಕ್ಕಪ್ಪ ಶ್ರೀಮುರಳಿ ಸಂತೈಸುತ್ತಿದ್ದಾರೆ. ಸ್ಪಂದನಾ ಇಲ್ಲದೇ ವಿಜಯ ಮುಂದೆ ಬದುಕಿನ ರಥವನ್ನ ಹೇಗೆ ನಡೆಸುತ್ತಾರೆ ಎಂಬುದು ಎಲ್ಲರಿಗೂ ಪ್ರಶ್ನೆ ಮೂಡಿದೆ.

    ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.

    ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಹರಿಶ್ಚಂದ್ರಘಾಟ್‌ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರ್ನಿಂಗ್‌ಗೆ ಸ್ಲಾಟ್ ಬುಕ್ಕಿಂಗ್ ಮಾಡಲಾಗಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪವನ್ ಒಡೆಯರ್ ಅಪೇಕ್ಷಾ ದಂಪತಿ ಮಗನ ಹೆಸರು ಶೌರ್ಯ

    ಪವನ್ ಒಡೆಯರ್ ಅಪೇಕ್ಷಾ ದಂಪತಿ ಮಗನ ಹೆಸರು ಶೌರ್ಯ

    ಬೆಂಗಳೂರು: ಯುವ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ದಂಪತಿ ಗಂಡು ಮಗು ಹುಟ್ಟಿರುವ ವಿಚಾರ ಗೊತ್ತೇ ಇದೆ. ಇದೀಗ ದಂಪತಿ ತಮ್ಮ ಮುದ್ದಿನ ಮಗನಿಗೆ ಹೆಸರಿಟ್ಟಿದ್ದಾರೆ.

     

    ಹೌದು. ತಮ್ಮ ಮಗನ ಹೆಸರನ್ನು ದಂಪತಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮಗನಿಗೆ ಶೌರ್ಯ ಎಂದು ಹೆಸರಿಟ್ಟಿದ್ದಾರೆ.

    ಮುದ್ದಿನ ಮಗನಿಗೆ ಹೆಸರಿಟ್ಟಿರುವುದನ್ನು ಒಂದು ಪುಟ್ಟ ವೀಡಿಯೋ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಮಗನ ನಾಮಕರಣದ ಒಂದು ಫೋಟೋ ಹಾಗೂ ಮಗುವಿನ ಕೆಲವು ಮುದ್ದಾದ ಫೋಟೋಗಳನ್ನು ಕೂಡ ವೀಡಿಯೋದಲ್ಲಿ ಸೇರಿಸಿದ್ದಾರೆ.

     

    View this post on Instagram

     

    A post shared by Pavan wadeyar (@pavanwadeyar)

    2020ರ ಡಿಸೆಂಬರ್ 10 ರಮದು ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಂಪತಿಗೆ ಮಗ ಹುಟ್ಟಿದ್ದನು. ಈ ಸಂತಸದ ವಿಚಾರವನ್ನು ಪವನ್ ಒಡೆಯರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದರು. ಪತ್ನಿ ಹಾಗೂ ಮಗು ಆಸ್ಪತ್ರೆಯಲ್ಲಿರುವ ಫೋಟೋವನ್ನು ಪವನ್ ತಮ್ಮ ಇನ್‍ಸ್ಟಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಅಲ್ಲದೆ ನನ್ನ ಜನ್ಮದಿನದಂದೇ ವಿಶ್ವದ ಅತ್ಯಂತ ಅದ್ಭುತ ಉಡುಗೊರೆ ದೊರೆತಿದ್ದು, ಗಂಡು ಮಗುವಿನ ಜನನವಾಗಿದೆ. ಜೈ ಚಾಮುಂಡೇಶ್ವರಿ ಎಂದು ಬರೆದುಕೊಂಡಿದ್ದರು.

    ಪವನ್ ಒಡೆಯರ್ ಮತ್ತು ನಟಿ ಅಪೇಕ್ಷಾ ಅವರು 2018ರ ಮೇ 20ರಂದು ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿರುವ ಗೌರಿ ಶಂಕರ್ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಅಪೇಕ್ಷಾ ಪುರೋಹಿತ್ ಬಾಗಲಕೋಟೆಯ ಮೂಲದವರಾಗಿದ್ದು, ಕನ್ನಡದ ಕಿರುತೆರೆ ನಟಿಯಾಗಿ ಅಭಿನಯಿಸಿದ್ದಾರೆ.

     

    View this post on Instagram

     

    A post shared by Pavan wadeyar (@pavanwadeyar)

     

  • ದ್ವಿತೀಯ ಹಂತ ಮುಗಿಸಿದ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’

    ದ್ವಿತೀಯ ಹಂತ ಮುಗಿಸಿದ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’

    ಬೆಂಗಳೂರು: ಜನನಿ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಾಪಕ ಬಿ.ಜೆ. ಪ್ರಶಾಂತ್ ನಿರ್ಮಿಸುತ್ತಿರುವ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಚಿತ್ರದ ದ್ವಿತೀಯ ಹಂತದ ಚಿತ್ರೀಕರಣವು ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಮುಕ್ತಾಯಗೊಂಡಿತು.

    8 ದಿವಸಗಳ ಕಾಲ ನಡೆದ ಚಿತ್ರೀಕರಣದಲ್ಲಿ ನಟ ಶೌರ್ಯ ಹಾಗೂ ತ್ರಿವೇಣಿಕೃಷ್ಣ ಅಭಿನಯಿಸಿದ ಹಲವಾರು ಸನ್ನಿವೇಶಗಳನ್ನು ಸತೀಶ್ ರಾಜೇಂದ್ರನ್ ಛಾಯಾಗ್ರಹಣದಲ್ಲಿ ನಿರ್ದೇಶಕ ರತ್ನತೀರ್ಥ ಚಿತ್ರಿಸಿಕೊಂಡರು. ಚಿತ್ರದ ತೃತೀಯ ಹಂತದ ಚಿತ್ರೀಕರಣವು ಬರುವ ವಾರ ಸಕಲೇಶಪುರದಲ್ಲಿ ಆರಂಭವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

    ಚಿತ್ರಕ್ಕೆ ಪ್ರಶಾಂತ್ ವೈ.ಎನ್. ಅಭಿನಂದನ್ ದೇಶಪ್ರಿಯ ಸಂಭಾಷಣೆ, ಸತೀಶ್ ರಾಜೇಂದ್ರನ್ ಛಾಯಾಗ್ರಹಣ, ನಾಗಭೂಷಣ್ ಸಾಹಿತ್ಯ, ವಿಜಯ್ ರಾಜ್ ಸಂಗೀತ, ಉಜ್ವಲ್ ಗೌಡ ಸಂಕಲನ, ಪ್ರದೀಪ್ ನಿರ್ಮಾಣ ನಿರ್ವಹಣೆ, ಬಾಬುಖಾನ್ ಕಲೆ, ಸಿದ್ದು ನಿರ್ದೇಶನ ಸಹಕಾರವಿದ್ದು, ಚಿತ್ರದ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ರತ್ನತೀರ್ಥ.

    ತಾರಾಗಣದಲ್ಲಿ ತ್ರಿವೇಣಿಕೃಷ್ಣ, ಶೌರ್ಯ, ಶಂಕರ್ ಅಶ್ವತ್ಥ್, ನಿಖಿಲ್‍ಗೌಡ, ಸುಮಂತ್, ಭಾರತಿ, ರಘುರಾಮನ್, ಧನು ಮುಂತಾದವರಿದ್ದಾರೆ.