Tag: ಶೇಖರ್ ಕಪೂರ್

  • ಪ್ರೀತಿ ಜಿಂಟಾರಿಂದ ನನ್ನ ಸಂಸಾರ ಕೊನೆಯಾಯಿತು ಎಂದು ದೂರಿದ ನಟಿ

    ಪ್ರೀತಿ ಜಿಂಟಾರಿಂದ ನನ್ನ ಸಂಸಾರ ಕೊನೆಯಾಯಿತು ಎಂದು ದೂರಿದ ನಟಿ

    ಟಿ- ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ (Suchitra Krishnamoorthy) ಅವರು ಕೆಲ ವರ್ಷಗಳ ಹಿಂದೆ ಹಿಂದಿ ನಿರ್ದೇಶಕ ಶೇಖರ್ ಕಪೂರ್ ಅವರನ್ನು ಮದುವೆಯಾಗಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಂದ 2007ರಲ್ಲಿ ಡಿವೋರ್ಸ್ ಪಡೆದರು. ಇದೀಗ ಚೆನ್ನಾಗಿದ್ದ ನಮ್ಮ ಸಂಸಾರ ಹಾಳಾಗಿದ್ದಕ್ಕೆ ಕಾರಣ ನಟಿ ಪ್ರೀತಿ ಜಿಂಟಾ (Preity Zinta) ಎಂದು ಸುಚಿತ್ರಾ ಆರೋಪ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ನಟಿ ಹೇಳಿರುವ ಮಾತು ಈಗ ಭಾರೀ ವೈರಲ್ ಆಗುತ್ತಿದೆ.

    ಗಾಯಕಿ ಸುಚಿತ್ರಾ ಅವರು 1999ರಲ್ಲಿ ಬಾಲಿವುಡ್ ನಿರ್ದೇಶಕ ಶೇಖರ್ ಕಪೂರ್ (Shekar Kapoor) ಅವರನ್ನು ಮದುವೆಯಾದರು. ವಯಸ್ಸಿನಲ್ಲಿ ತಮಗಿಂತ ೩೦ ವರ್ಷ ದೊಡ್ಡವರಾದ ಶೇಖರ್ ಕಪೂರ್ ಅವರನ್ನು ಪ್ರೀತಿಸುತ್ತಿದ್ದರು. ಈ ದಂಪತಿಗೆ ಹೆಣ್ಣು ಮಗು ಜನಿಸಿತು. ಇಬ್ಬರೂ 2007ರಲ್ಲಿ ಡಿವೋರ್ಸ್ ಪಡೆದರು. ಮದುವೆಗೂ ಮುನ್ನ ಸಾಕಷ್ಟು ಬೇಡಿಕೆ ಹೊಂದಿದ್ದ ಸುಚಿತ್ರಾ ಮದುವೆಯ ನಂತರ ತಮಗೆ ಸೂಕ್ತ ಎನಿಸುವಂತಹ ಪಾತ್ರದಲ್ಲಿ ನಟಿಸಲು ಶುರು ಮಾಡಿದರು. ಡಿವೋರ್ಸ್ ಆಗಿ ಎರಡು ದಶಕ ಕಳೆಯುತ್ತಾ ಬಂದರೂ ಕಹಿ ಘಟನೆಯನ್ನ ನಟಿ ಮರೆತಿಲ್ಲ. ಇದನ್ನೂ ಓದಿ:ಕ್ಲಬ್, ಪಬ್ಬು ಸುತ್ತಾಟ ನಿಹಾರಿಕಾಗೆ ಮುಳುವಾಯ್ತಾ?: ಮಾವನ ಗುರುತರ ಆರೋಪ

    ಶೇಖರ್ ಕಪೂರ್ ಪ್ರೀತಿಯಲ್ಲಿ ಪ್ರಾಮಾಣಿಕತೆ ಇರಲಿಲ್ಲ. ನಟಿ ಪ್ರೀತಿ ಜಿಂಟಾ ಅವರೊಂದಿಗೆ ಶೇಖರ್ ಕ್ಲೋಸ್ ಆಗಿದ್ದರು. ನಾನು ಪ್ರೀತಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದಿದ್ದಾರೆ. ಈ ಮೂಲಕ ಪ್ರೀತಿ ಜಿಂಟಾ ಅವರೇ ಡಿವೋರ್ಸ್ಗೆ ಕಾರಣ ಎಂದು ಅವರು ಹೇಳಿದ್ದಾರೆ. ಈ ಮೊದಲು ಕೂಡ ಸುಚಿತ್ರಾ ಇದೇ ರೀತಿಯ ಆರೋಪ ಮಾಡಿದ್ದರು. ಆದರೆ, ಪ್ರೀತಿ ಜಿಂಟಾ ಈ ಆರೋಪಗಳನ್ನು ನಿರಾಕರಿಸಿದ್ದರು. ಸುಚಿತ್ರಾ ಅವರೇ ನನ್ನ ಬಗ್ಗೆ ಹಾಗೆ ಮಾತಾಡಬೇಡಿ. ನಿಮ್ಮ ಮನಸ್ಥಿತಿ ಸರಿಯಿಲ್ಲ. ನೀವು ಮನೋವೈದ್ಯರನ್ನು ಭೇಟಿ ಮಾಡುವುದು ಉತ್ತಮ ಎಂದು ಪ್ರೀತಿ ಪ್ರತಿಕ್ರಿಯೆ ನೀಡಿದ್ದರು. ಈ ಬಗ್ಗೆಯೂ ಸುಚಿತ್ರಾಗೆ ಕೇಳಲಾಯಿತು.

    ನನಗೆ ಅವರ ಪ್ರತಿಕ್ರಿಯೆ ಬೇಕಿಲ್ಲ. ಇದು ಮುಕ್ತ ಜಗತ್ತು. ಅವರಿಗೆ ಏನು ಅನ್ನಿಸಿತೋ ಅದನ್ನು ಅವರು ಹೇಳಬಹುದು. ನಾನು ಗೃಹಿಣಿ ಆಗಿರುವುದಕ್ಕೆ ಖುಷಿ ಇದೆ. ಕಳೆದ 20 ವರ್ಷದಿಂದ ತಾಯಿ ಆಗಿದ್ದೇನೆ. ಆ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಸುಚಿತ್ರಾ ಹೇಳಿದ್ದಾರೆ. ತಾನು ನಟನಾ ಕ್ಷೇತ್ರದಲ್ಲಿರೋದು ಪತಿ ಶೇಖರ್‌ಗೆ ಇಷ್ಟವಿರಲಿಲ್ಲ. ಅವರ ಪತ್ನಿ ಆಕ್ಟ್‌ ಮಾಡೋದನ್ನ ಅವರು ಇಷ್ಟಪಡುತ್ತಿರಲಿಲ್ಲ. ಹಾಗಾಗಿ ಸಿನಿಮಾ ಮಾಡೋದನ್ನ ನಿಲ್ಲಿಸಿದೆ ಎಂದು ಮಾಜಿ ಪತಿ ಬಗ್ಗೆ ಸುಚಿತ್ರಾ ಕಿಡಿಕಾರಿದ್ದಾರೆ.ಈ ವೇಳೆ, ಮಗಳು ಕಾವೇರಿ ಕಪೂರ್ ಬಾಲಿವುಡ್‌ಗೆ ಎಂಟ್ರಿ ಕೊಡುವ ಬಗ್ಗೆ ಸುಚಿತ್ರಾ ಮಾತನಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರೀದೇವಿಗೆ ಉತ್ತಮ ನಟಿ ಪ್ರಶಸ್ತಿ ನೀಡಿದಕ್ಕೆ ಬೇಸರ ವ್ಯಕ್ತಪಡಿಸಿದ ನಿರ್ದೇಶಕ

    ಶ್ರೀದೇವಿಗೆ ಉತ್ತಮ ನಟಿ ಪ್ರಶಸ್ತಿ ನೀಡಿದಕ್ಕೆ ಬೇಸರ ವ್ಯಕ್ತಪಡಿಸಿದ ನಿರ್ದೇಶಕ

    ಮುಂಬೈ: 2018 ರ 65ನೇ ನ್ಯಾಷನಲ್ ಆವಾರ್ಡ್ ನಲ್ಲಿ ಬಾಲಿವುಡ್ ಸಿನಿಮಾದ ‘ಮಾಮ್’ ನಲ್ಲಿ ನಟಿಸಿರುವ ಶ್ರೀದೇವಿ ಅವರಿಗೆ ಉತ್ತಮ ನಟಿ ಪ್ರಶಸ್ತಿ ದೊರಕಿದೆ. ಆದ್ರೆ ಈ ಪ್ರಶಸ್ತಿಯನ್ನು ಶ್ರೀದೇವಿ ಅವರಿಗೆ ನೀಡಬಾರದಿತ್ತು ಅಂತಾ ನಿರ್ದೇಶಕ ಮತ್ತು ನ್ಯಾಷನಲ್ ಅವಾರ್ಡ್ ಜ್ಯೂರಿ ಹೆಡ್ ಶೇಖರ್ ಕಪೂರ್‍ರವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಾವೆಲ್ಲರೂ ಶ್ರೀದೇವಿ ಅವರನ್ನು ಭಾವನಾತ್ಮಕವಾಗಿ ಹಚ್ಚಿಕೊಂಡಿದ್ದೇವೆ. ಶ್ರೀದೇವಿ ಮರಣ ಹೊಂದಿದ ಕಾರಣ ಅವರಿಗೆ ಪ್ರಶಸ್ತಿ ನೀಡಿರುವ ತೀರ್ಮಾನ ಸೂಕ್ತವಲ್ಲ. ಈ ನಿರ್ಧಾರದಿಂದ ಇತರ ನಟಿಯರಿಗೆ ಮೋಸವಾಗಿದೆ. ಬೇರೆಯವರು ಸಹ 10-12 ವರ್ಷ ಗಳಿಂದಲೂ ಬಾಲಿವುಡ್‍ನಲ್ಲಿ ಶ್ರಮಿಸುತ್ತಿದ್ದು, ವೃತ್ತಿ ಜೀವನವನ್ನು ಹೊಂದಿದ್ದಾರೆ ಎಂದು ಶೇಖರ್ ಕಪೂರ್ ಅವರ ವಾದವಾಗಿದೆ.

    ಅತ್ಯತ್ತಮ ಸಿನಿಮಾ ‘ಮಾಮ್’ ಗಾಗಿ ನಟಿ ಶ್ರೀದೇವಿ ಮತ್ತು ನಾನು ಅವರೊಂದಿಗೆ ನನ್ನ ಸಂಬಂಧವಿಲ್ಲ ಎಂದು ನಾನು ಭರವಸೆ ಮಾಡುತ್ತೇನೆ. ಪ್ರತಿ ಬೆಳಗ್ಗೆ ನಾನು ಉತ್ತಮ ನಟಿಯ ಆಯ್ಕೆಯ ಕಮೀಟಿಗೆ ಬಂದಾಗ ಎಲ್ಲ ಜ್ಯೂರಿಗಳಿಗೆ ಮತ ಚಲಾಯಿಸಲು ಕೇಳುತ್ತಿದೆ. ಆದರೆ ಪದೇ ಪದೇ ಶ್ರೀದೇವಿಗೆ ಹೆಚ್ಚಿನ ಮತಗಳು ಬರುತ್ತಿದ್ದವು. ಆದ್ದರಿಂದ ಆಕೆಗೆ ಕೊಡಬಾರದೆಂದು ಹೋರಾಡಿದವನು ನಾನು ಎಂದರು

    ಮತ್ತೊಂದೆಡೆ ಕಪೂರ್ ಕುಟುಂಬ, ಶ್ರೀದೇವಿ ಕೇವಲ ಸೂಪರ್ ಆಕ್ಟರ್ ಮಾತ್ರವಲ್ಲ, ಸೂಪರ್ ವೈಫ್ ಮತ್ತು ಸೂಪರ್ ಮಾಮ್. ಆಕೆಯ ಜೀವನ ಮತ್ತು ಸಾಧನೆಗಳನ್ನು ಆಚರಿಸಲು ಸಮಯ ಬಂದಿದೆ. ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವಳ ಪರಂಪರೆಯೂ ಯಾವಾಗಲೂ ಬದುಕಲಿದೆ ಎಂಬ ಹೇಳಿಕೆಯನ್ನು ನೀಡಿತ್ತು.

  • ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಆಕ್ರೋಶ ಹೊರ ಹಾಕಿದ ಬಾಲಿವುಡ್ ಗಣ್ಯರು

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಆಕ್ರೋಶ ಹೊರ ಹಾಕಿದ ಬಾಲಿವುಡ್ ಗಣ್ಯರು

    ಮುಂಬೈ: ಮಂಗಳವಾರ ರಾತ್ರಿ ಮನೆಯ ಬಾಗಿಲು ತೆಗೆಯುತ್ತಿದ್ದಾಗ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದ ಘಟನೆ ಇಡೀ ದೇಶ ಬೆಚ್ಚಿಬೀಳುವಂತೆ ಆಗಿದೆ. ಇದಕ್ಕೆ ಬಾಲಿವುಡ್ ಮಂದಿ ಪ್ರತಿಕ್ರಿಯಿಸಿ ಟ್ವಿಟ್ಟರ್ ನಲ್ಲಿ ಖಂಡಿಸಿ ಕಂಬನಿ ಮಿಡಿದಿದ್ದಾರೆ.

    ಬಾಲಿವುಡ್ ನ ಸೋನಮ್ ಕಪೂರ್, ಫರಾನ್ ಅಕ್ತರ್, ಶಬಾನಾ ಅಜ್ಮಿ, ಶೇಖರ್ ಕಪೂರ್, ಮಹೇಶ್ ಭಟ್ ಹಾಗೂ ವಿಶಾಲ್ ದದ್ಲಾನಿ ಟ್ವಿಟ್ಟರ್ ನಲ್ಲಿ ಹತ್ಯೆಯನ್ನು ಖಂಡಿಸಿದ್ದಾರೆ. ಪ್ರಜಾಪ್ರಭುತ್ವ ಹೆಸರಲ್ಲಿ ಈ ಘಟನೆಗಳನ್ನು ನಡೆಸುತ್ತಿದ್ದಾರೆ. ಗೌರಿ ಲಂಕೇಶ್ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಸಾವಿಗೆ ನ್ಯಾಯ ಸಿಗಲಿ ಎಂದು ಬಾಲಿವುಡ್ ಪ್ರತಿಕ್ರಿಸಿದ್ದಾರೆ.

    ಗೌರಿ ಲಂಕೇಶ್ ಹತ್ಯೆಯ ಕುರಿತು ಕೆಲವು ಟ್ವೀಟ್ ಗಳು ಇಲ್ಲಿವೆ