Tag: ಶುಶ್ರೂಷಕಿ

  • ಸ್ವಂತ ಖರ್ಚಿನಲ್ಲಿ 20 ಶುಶ್ರೂಷಕಿಯರ ನೇಮಿಸಿ ಆಕ್ಸಿಜನ್ ಸಿಲಿಂಡರ್ ನೀಡಿದ ವೈ.ಸಂಪಂಗಿ

    ಸ್ವಂತ ಖರ್ಚಿನಲ್ಲಿ 20 ಶುಶ್ರೂಷಕಿಯರ ನೇಮಿಸಿ ಆಕ್ಸಿಜನ್ ಸಿಲಿಂಡರ್ ನೀಡಿದ ವೈ.ಸಂಪಂಗಿ

    ಕೋಲಾರ: ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಕಷ್ಟು ಜನರು ಬೇರೆ ಬೇರೆ ರೀತಿಯಲ್ಲಿ ದಾನ ಧರ್ಮ ಮಾಡಿ ಜನರಿಗೆ ನೆರವಾಗುತ್ತಿದ್ದಾರೆ. ಈ ಮಧ್ಯೆ ಜಿಲ್ಲೆಯ ಮಾಜಿ ಶಾಸಕ ವೈ.ಸಂಪಂಗಿ ಕೆಜಿಎಫ್‍ನ ಸರ್ಕಾರಿ ಆಸ್ಪತ್ರೆಗೆ ಕೊರೊನಾ ವಾರಿಯರ್ಸ್ ಹಾಗೂ ಬೇಕಾದ ಆಕ್ಸಿಜನ್ ಸಿಲಿಂಡರ್‍ನ್ನು ಸ್ವತಂ ಖರ್ಚಿನಲ್ಲಿ ನೀಡುವ ಮೂಲಕ ನೆರವಾಗಿದ್ದಾರೆ.

    ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ಅವಶ್ಯಕವಾಗಿ ಬೇಕಾಗಿದ್ದ 16 ಆಕ್ಸಿಜನ್ ಸಿಲಿಂಡರ್ ಹಾಗೂ 20 ಶುಶ್ರೂಷಕಿಯರನ್ನು ನೇಮಕ ಮಾಡಿ ಕೊರೊನಾ ಸಂಕಷ್ಟಕ್ಕೆ ಮಿಡಿದಿದ್ದಾರೆ. ಸ್ವಂತ ಹಣದಿಂದ 20 ಮಂದಿ ಶುಶ್ರೂಷಕಿಯರಿಗೆ ಸಂಬಳ ನೀಡುವ ಮೂಲಕ ಆಸ್ಪತ್ರೆಗೆ ಬೇಕಾದ ಕೊರೊನಾ ವಾರಿಯರ್ಸ್ ಹಾಗೂ ಅವರಿಗೆ ಬೇಕಾದ ದಿನಸಿ ಕಿಟ್‍ಗಳನ್ನು ಇಂದು ವಿತರಣೆ ಮಾಡಲಾಯಿತು.

    ಇಂದಿನಿಂದ ಕೋವಿಡ್ ಕರ್ತವ್ಯ ನಿರ್ವಸಲಿರುವ ನುರಿತ 20 ಶುಶ್ರೂಷಕಿಯರು ಹಾಗೂ ಅವರಿಗೆ ಬೇಕಾದ ದಿನಸಿ ಕಿಟ್‍ಗಳ ಜೊತೆಗೆ 16 ಆಕ್ಸಿಜನ್ ಸಿಲೆಂಡರ್‍ ಗಳನ್ನು ಆಸ್ಪತ್ರೆಗೆ ಸಂಸದ ಮುನಿಸ್ವಾಮಿ ಅವರ ಸಮ್ಮುಖದಲ್ಲಿ ನೀಡಲಾಯಿತು. ಕಳೆದ ಹಲವು ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಸೇರಿದಂತೆ ಸಾಕಷ್ಟು ಜನರಿಗೆ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದರು ಇದರಿಂದ ಎಚ್ಚೆತ್ತ ಸಂಪಂಗಿ ಅವರು ಇಂದು ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಸರ್ಕಾರಿ ಆಸ್ಪತ್ರೆಗೆ ಅವಶ್ಯಕವಾಗಿ ಬೇಕಾದ ಆಕ್ಸಿಜನ್ ಸಿಲಿಂಡರ್ ಹಾಗೂ ಕೊರೊನಾ ವಾರಿಯರ್ಸ್ ಗಳನ್ನು ನೇಮಕ ಮಾಡುವ ಮೂಲಕ ಕೊರೊನಾ ಕಷ್ಟ ಕಾಲದಲ್ಲಿ ನೆರವಾಗಿದ್ದಾರೆ.

  • 1 ತಿಂಗ್ಳ ವೇತನದ ಜೊತೆಗೆ ಪತಿಯ ಪಿಂಚಣಿ ಸೇರಿ ಶುಶ್ರೂಷಕಿಯಿಂದ 64 ಸಾವಿರ ದೇಣಿಗೆ

    1 ತಿಂಗ್ಳ ವೇತನದ ಜೊತೆಗೆ ಪತಿಯ ಪಿಂಚಣಿ ಸೇರಿ ಶುಶ್ರೂಷಕಿಯಿಂದ 64 ಸಾವಿರ ದೇಣಿಗೆ

    – ಕೊರೊನಾ ಹೋರಾಟದಲ್ಲಿ ಹಗಲಿರುಳು ಆಸ್ಪತ್ರೆಯಲ್ಲಿ ಸೇವೆ

    ಶಿವಮೊಗ್ಗ: ಕೊರೊನಾ ವೈರಸ್ ನಿರ್ಮೂಲನೆಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಜೊತೆಗೆ ಕೊರೊನಾ ಮುಖ್ಯಮಂತ್ರಿ ಪರಿಹಾರ ನಿಧಿಗೆ ಶುಶ್ರೂಷಕಿಯೊಬ್ಬರು ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡಿದ್ದಾರೆ.

    ಶುಶ್ರೂಷಕಿ ಗೀತಾ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಇವರು ಜಿಲ್ಲೆಯ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಒಂದು ತಿಂಗಳ ವೇತನದ ಜೊತೆಗೆ ಪತಿಯ ಒಂದು ತಿಂಗಳ ಪಿಂಚಣಿ ಹಣವನ್ನು ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಗೀತಾ ಅವರ ಪತಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಗೀತಾ ಅವರ ಒಂದು ತಿಂಗಳ ವೇತನ 51 ಸಾವಿರ ಹಾಗೂ ಪತಿಯ ಒಂದು ತಿಂಗಳ ಪಿಂಚಣಿ ಹಣ 13 ಸಾವಿರ. ಒಟ್ಟು 64 ಸಾವಿರ ರೂಪಾಯಿಯ ಚೆಕನ್ನು ಇಂದು ಶಾಸಕ ಅರಗ ಜ್ಞಾನೇಂದ್ರ ಹಾಗೂ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರಿಗೆ ನೀಡಿದ್ದಾರೆ. ಈ ಮೂಲಕ ಗೀತಾ ಇತರರಿಗೂ ಮಾದರಿಯಾಗಿದ್ದಾರೆ.

    ಕೊರೊನಾ ಕಾಣಿಸಿಕೊಂಡ ದಿನದಿಂದಲೂ ಗೀತಾ ಅವರು ಆಸ್ಪತ್ರೆಯಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಅವರ ಒಂದು ತಿಂಗಳ ಸಂಪೂರ್ಣ ವೇತನ ನೀಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.