Tag: ಶುಭ ಪೂಂಜಾ

  • ‘ಅಂಬುಜ’ ಗೋಸ್ಕರ ಕ್ರೈಮ್ ರಿಪೋರ್ಟರ್ ಆದ ‘ದಾಸ ಪುರಂದರ’ ಶ್ರೀನಿವಾಸ

    ‘ಅಂಬುಜ’ ಗೋಸ್ಕರ ಕ್ರೈಮ್ ರಿಪೋರ್ಟರ್ ಆದ ‘ದಾಸ ಪುರಂದರ’ ಶ್ರೀನಿವಾಸ

    ದಾಸ ಪುರಂದರ ಶ್ರೀನಿವಾಸರ ಬಗ್ಗೆ ನಿಮಗೆಲ್ಲ ತಿಳಿದಿರುತ್ತೆ. ಇತ್ತೀಚೆಗೆ ಕಲರ್ಸ್ ಕನ್ನಡ ಸಂಸ್ಥೆ ಕೂಡ ನವಕೋಟಿ ನಾರಾಯಣ ದಾಸರಾದ ಕತೆಯನ್ನ `ದಾಸ ಪುರಂದರ’ ಧಾರವಾಹಿ ಮೂಲಕ ಇಡೀ ಕರುನಾಡಿಗೆ ತಿಳಿಸುವ ಪ್ರಯತ್ನ ಮಾಡಿತ್ತು. ಈ ಧಾರಾವಾಹಿ ಮೂಲಕ ಕರ್ನಾಟಕದ ತುಂಬೆಲ್ಲಾ ಮೆರವಣಿಗೆ ಹೊರಡುವ ಅವಕಾಶ ರಂಗಭೂಮಿಯ ಅಪ್ಪಟ ಪ್ರತಿಭೆ ದೀಪಕ್ ಸುಬ್ರಹ್ಮಣ್ಯಗೆ (Deepak Subrahmanya) ಸಿಕ್ಕಿತ್ತು. ಶ್ರೀನಿವಾಸನ ಅವತಾರವೆತ್ತಿ ಕನ್ನಡಿಗರಿಂದ ಬಹುಪರಾಕ್ ಹಾಕಿಸಿಕೊಂಡ ದೀಪಕ್ ಈಗ ಅಂಬುಜಗೋಸ್ಕರ ಕ್ರೈಮ್ ರಿಪೋರ್ಟರ್ ಆಗಿದ್ದಾರೆ. ಹಿಂದೆಂದೂ ಕಂಡು ಕೇಳರಿಯರ ವಿಚಿತ್ರ ಕಥಾಹಂದರವನ್ನ ಬಿಚ್ಚಿಟ್ಟು ಕನ್ನಡ ಕಲಾಭಿಮಾನಿಗಳನ್ನು ಬೆಚ್ಚಿಬೀಳಿಸಬೇಕು ಅಂತ ಹೊರಟಿರೋ ಅಂಬುಜಾಗೆ ಅರ್ಜುನ್ ಅಲಿಯಾಸ್ ದೀಪಕ್ ಸುಬ್ರಹ್ಮಣ್ಯ ಸಾಥ್ ಕೊಟ್ಟಿದ್ದಾರೆ.

    ಅಂಬುಜ (Ambuja) ಒಂದು ನೈಜ ಘಟನೆಯಾಧಾರಿತ ಚಿತ್ರ. ಇಲ್ಲಿ ಭೀಕರ ಮತ್ತು ರಣಭಯಂಕರ ಮರ್ಡರ್ ಮಿಸ್ಟ್ರಿಯಿದೆ. ಹಾರರ್-ಥ್ರಿಲ್ಲರ್ ಎಲಿಮೆಂಟ್ಸ್‍ಗಳಿದೆ. ಕಾಶೀನಾಥ್ ಡಿ ಮಡಿವಾಳರ್ (Kashinath Madiwalar) ಎಂಬುವವರು ಆ ಜಾಗದಲ್ಲಿ ಹುದುಗಿದ್ದ ಸಾವಿನ ಸತ್ಯವನ್ನ ಹೊರತೆಗೆದಿದ್ದಾರೆ. ಅನ್‍ಟೋಲ್ಡ್ ಕ್ರೈಮ್ ಸ್ಟೋರಿಯನ್ನ ನಿರ್ದೇಶಕ ಶ್ರೀನಿ ಹನುಮಂತರಾಜು ಅವರು ರಿವರ್ಸ್ ಸ್ಕ್ರೀನ್ ಪ್ಲೇ ಮೂಲಕ ತೆರೆಮೇಲೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್, ಟ್ರೈಲರ್ ನೋಡಿದರೆ ಇದೊಂದು ಯೂನಿಕ್ ಕ್ರೈಮ್ ಸ್ಟೋರಿ ಎಂಬುದು ತಿಳಿಯುತ್ತೆ. ಅಂಬುಜ ಚಿತ್ರದ ಮೇಲೆ ಹೊಸದೊಂದು ಭರವಸೆ ಮೂಡುತ್ತೆ, ಪಾತ್ರವರ್ಗ ಗಮನ ಸೆಳೆಯುತ್ತೆ.

    ಹೌದು, ಅಂಬುಜ ಚಿತ್ರದಲ್ಲಿ ಲಂಬಾಣಿ ವೇಷಭೂಷಣದಲ್ಲಿರುವ ರಜನಿ ಹಾಗೂ ಬೇಬಿ ಆಕಾಂಕ್ಷ ಚಿತ್ರಪ್ರೇಮಿಗಳನ್ನ ಚಿಂತನೆಯ ಓರೆಗೆ ಹಚ್ಚಿದ್ದಾರೆ. ಮಾದಕ ಮದನಾರಿಯಾಗಿ ಕಾಡ್ತಿದ್ದ ಶುಭಪುಂಜಾ ಏಕಾಏಕಿ ಚೂರಿ ಕೈಗೆತ್ತಿಕೊಂಡಿರುವುದನ್ನ ನೋಡಿ ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ. ಕಾಮಿಡಿ ಖಿಲಾಡಿಗಳು ಜಿಜಿ ಶುಭ ಕೇರ್ ಟೇಕರ್ ಅನ್ನೋ ಕಾರಣಕ್ಕೂ ಕುತೂಹಲ ಹೆಚ್ಚಿದೆ. ಪದ್ಮಜ ರಾವ್, ಶರಣಯ್ಯ, ಜಗದೀಶ್ ಹಲ್ಕುಡೆ, ನಿಶಾ ಹೆಗ್ಡೆ, ಗುರುದೇವ ನಾಗರಾಜ್, ಸಂದೇಶ್ ಶೆಟ್ಟಿ ಅಜ್ರಿ ತಾರಾಗಣದಲ್ಲಿದ್ದಾರೆ. ಅಪರಾಧ ವಿಭಾಗದ ವರದಿಗಾರನಾಗಿ ಮುಖ್ಯಭೂಮಿಕೆಯಲ್ಲಿರುವ ದೀಪಕ್ ಸುಬ್ರಹ್ಮಣ್ಯ, ಅಂಬುಜ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುವಾಗೆಲ್ಲಾ ನಾನು ಅದನ್ನು ಥ್ರಿಲ್ಲಿಂಗ್ ಪಾಯಿಂಟ್‍ಗೆ ತಂದು ನಿಲ್ಲಿಸ್ತೇನೆ ಅಂತೇಳುವ ಮೂಲಕ ನಿರೀಕ್ಷೆ ಹೆಚ್ಚಿಸಿದ್ದಾರೆ. ಇದನ್ನೂ ಓದಿ:‘ಲೈಗರ್‌’ ನಟಿ ಜೊತೆ ಆದಿತ್ಯ ಕಪೂರ್ ಕಣ್ ಕಣ್ ಸಲಿಗೆ

    ಅಂದ್ಹಾಗೇ, ದೀಪಕ್ ಇಲ್ಲಿತನಕ ಮಾಡಿರುವುದು ಏಳೇ ಸಿನಿಮಾ. ಆದರೆ, ಪ್ರತಿ ಪಾತ್ರವೂ ವಿಭಿನ್ನ ಮತ್ತು ವಿಶಿಷ್ಟ. ನೀವು ಶುದ್ದಿ ಸಿನಿಮಾದಿಂದ ಈಗೀನ ಅಂಬುಜ ಚಿತ್ರವರೆಗೆ ದೀಪಕ್ ಪಾತ್ರಗಳನ್ನ ಗಮನಿಸಿದರೆ ಗೊತ್ತಾಗುತ್ತೆ ಸಿನಿಮಾದಿಂದ ಸಿನಿಮಾಗೆ ಎಷ್ಟು ಪ್ರಯೋಗ ಮಾಡಿದ್ದಾರೆ ಅಂತ. ಸದಾ ಚಾಲೆಂಜಿಂಗ್ ಕ್ಯಾರೆಕ್ಟರ್ ಗಳನ್ನೇ ಆಯ್ಕೆಮಾಡಿಕೊಳ್ಳುವ ದೀಪಕ್, ತಮಗೆ ಸಿಕ್ಕಂತಹ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡ್ತಾರೆ. ಪಾತ್ರಕ್ಕಾಗಿ ಗುರುತೇ ಸಿಗದಷ್ಟು ಬದಲಾಗ್ತಾರೆ. ಅದು ಸೀರಿಯಲ್ ಆದ್ರೂ ಸರೀ ಸಿನಿಮಾ ಆದ್ರೂ ಸರೀ. ತಮ್ಮನ್ನ ಅರಸಿಕೊಂಡು ಬಂದ ಪಾತ್ರಕ್ಕೆ ನೂರಕ್ಕೆ ನೂರಷ್ಟು ನ್ಯಾಯ ಒದಗಿಸಲು ಶ್ರಮಿಸ್ತಾರೆ. ನಟನೆಗೆ ಪಾತ್ರ ಸೀಮಿತವಾಗದೇ ಬರಹಗಾರನಾಗಿ, ಕಿರುಚಿತ್ರ ನಿರ್ದೇಶಕನಾಗಿ ತಮ್ಮನ್ನ ತಾವು ತೊಡಗಿಸಿಕೊಳ್ತಿದ್ದಾರೆ. ಸಿನಿಮಾ, ಸೀರಿಯಲ್ ಜೊತೆಗೆ ರಂಗಭೂಮಿಯಲ್ಲೂ ದೀಪಕ್ ಸಕ್ರಿಯರಾಗಿದ್ದಾರೆ.

    ಸದ್ಯ ಅಂಬುಜ ಚಿತ್ರದಲ್ಲಿ ಲವ್ವರ್ ಬಾಯ್ ಹಾಗೂ ಕ್ರೈಮ್ ರಿಪೋರ್ಟರ್ ಎರಡು ಪಾತ್ರಗಳನ್ನೂ ಪೋಷಿಸಿದ್ದಾರೆ. ರಿಯಲ್ ಇನ್ಸಿಡೆಂಟ್ ಬೇಸ್ಡ್ ಸಿನಿಮಾ ಇದಾಗಿರುವ ಕಾರಣಕ್ಕೆ ಕ್ರೈಮ್ ರಿಪೋರ್ಟಿಂಗ್ ಕುರಿತು ಅಧ್ಯಯನ ಮಾಡಿಯೇ ಪಾತ್ರಕ್ಕೆ ಬಣ್ಣ ಹಚ್ಚಿರುವುದಾಗಿ ಹೇಳಿಕೊಂಡಿದ್ದಾರೆ. ಶುದ್ದಿ, ಅಯನ, ದಿನಚರಿ, ಪಿಂಕಿ ಎಲ್ಲಿ ಸಿನಿಮಾಗಳಲ್ಲಿ ದೀಪಕ್ ಮಿಂಚಿದ್ದಾರೆ. ಲೈಫೋ ಲೈಫೋ, ಸಾರಾಂಶ, ಮಿಸ್ಟರ್ ರಾಣಿ, ಅಂಬುಜ ಚಿತ್ರಗಳ ಬಿಡುಗಡೆಗಾಗಿ ಕಾಯ್ತಿದ್ದಾರೆ. ಇದೇ ಜುಲೈ 21ರಂದು ಅಂಬುಜ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸಾಗಿದೆ. ಕಾಶಿನಾಥ್, ಲೋಕೇಶ್ ಭೈರವ, ಶಿವಪ್ರಕಾಶ್.ಎನ್ ಸಹಯೋಗದಲ್ಲಿ ಅಂಬುಜ ಅದ್ದೂರಿಯಾಗಿ ಮೂಡಿಬಂದಿದೆ. ವಿಜಯ್ ಎಂ ಕುಮಾರ್ ಸಂಕಲನ, ಮುರುಳೀಧರ್ ಎಂ. ಛಾಯಾಗ್ರಹಣ ಚಿತ್ರಕ್ಕಿದ್ದು, ಪ್ರಸನ್ನ ಕುಮಾರ್ ಮ್ಯೂಸಿಕ್ ಮಾಡಿದ್ದಾರೆ. ತ್ಯಾಗರಾಜ್ ಅವ್ರು ಹಿನ್ನಲೆ ಸಂಗೀತ ಒದಗಿಸಿದ್ದಾರೆ. ಲೈಟಿಂಗ್ ಅಂಡ್ ಕಲರ್ ಗ್ರೇಡಿಂಗ್‍ನಲ್ಲಿ ಪ್ರಯೋಗ ಮಾಡಿದ್ದು, ಅಂಬುಜ ಚಿತ್ರ ತೆರೆಮೇಲೆ ವಿಭಿನ್ನವಾಗಿ ಕಾಣಲಿದೆ. ಮಾರ್ಸ್ ಸುರೇಶ್ ಅವ್ರು ರಾಜಾದ್ಯಂತ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ. ಗ್ರ್ಯಾಂಡ್ ಆಗಿಯೇ ರಿಲೀಸ್ ಮಾಡೋದಕ್ಕೆ ಮುಂದಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟಿ ಶುಭ ಪೂಂಜಾಗೆ ಜಿಜಿ ಕೇರ್ ಟೇಕರ್ ಆಗಿದ್ದೇಕೆ?:  ಕಾಂಪೌಂಡರ್ ಕ್ಯಾರೆಕ್ಟರ್ ಸೀಕ್ರೆಟ್ ರಿವೀಲ್

    ನಟಿ ಶುಭ ಪೂಂಜಾಗೆ ಜಿಜಿ ಕೇರ್ ಟೇಕರ್ ಆಗಿದ್ದೇಕೆ?: ಕಾಂಪೌಂಡರ್ ಕ್ಯಾರೆಕ್ಟರ್ ಸೀಕ್ರೆಟ್ ರಿವೀಲ್

    ಚೆಂದುಳ್ಳಿ ಚೆಲುವೆ ನಟಿ ಶುಭ ಪುಂಜಾಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ್ರು (Govindegowda) ಕೇರ್ ಟೇಕರ್ ಅಂತೆ.  ಕಾಂಪೌಂಡರ್ ಆಗಿ ವೃತ್ತಿ ಆರಂಭಿಸಿರುವ ಜಿಜಿ, ಆ ವ್ಯಕ್ತಿಯ ಆಜ್ಞೆಯ ಮೇರೆಗೆ ಶುಭ ಪುಂಜಾರನ್ನು ಆರೈಕೆ ಮಾಡುವ ಕೆಲಸ ಮಾಡಿದ್ದಾರಂತೆ. ಹೀಗಂತ ನಾವು ಹೇಳ್ತಿಲ್ಲ ಸ್ವತಃ ಜಿಜಿಯವ್ರೇ ಹೇಳಿಕೊಂಡಿದ್ದಾರೆ. ಕನ್ ಫ್ಯೂಸ್ ಆಗ್ಬೇಡಿ ಕೇರ್ ಟೇಕರ್ ಆಗಿದ್ದು, ರಿಯಲ್ ಲೈಫ್‍ನಲ್ಲಿ ಅಲ್ಲ ರೀಲ್ ಲೈಫ್‍ನಲ್ಲಿ ಅಂತಹದ್ದೊಂದು ಪಾತ್ರ ನನ್ನರಸಿಕೊಂಡು ಬಂತು. ಆ ಸಿನಿಮಾದ ಭಾಗವಾಗುವ, ಆ ಪಾತ್ರಕ್ಕೆ ಬಣ್ಣಹಚ್ಚುವ ಅವಕಾಶ ನನ್ನದಾಯ್ತು ಅಂತ ಹೇಳಿಕೊಳ್ತಾರೆ. ಅಷ್ಟಕ್ಕೂ, ಆ ಚಿತ್ರ ಬೇರಾವುದು ಅಲ್ಲ ಶ್ರೀನಿ ಹನುಮಂತರಾಜು (Srini Hanumantharaju) ನಿರ್ದೇಶನದ ಅಂಬುಜ.

    ಗಾಂಧಿನಗರದಲ್ಲಿ ಸೌಂಡ್ ಮಾಡ್ತಿರುವ ಸಿನಿಮಾಗಳ ಪೈಕಿ ಅಂಬುಜ (Ambuja) ಚಿತ್ರ ಕೂಡ ಒಂದು. ಟೈಟಲ್‍ನಿಂದಲೇ ಒಂದಿಷ್ಟು ಕುತೂಹಲ ಮೂಡಿಸಿದ್ದ ಈ ಸಿನಿಮಾ, ಟೀಸರ್, ಟ್ರೈಲರ್, ಹಾಡುಗಳಿಂದ ನಿರೀಕ್ಷೆ ಹೆಚ್ಚಿಸಿದೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ನಟಿ ಶುಭ ಪೂಂಜಾ (Shubha Poonja), ಅಮೃತ ವರ್ಷಿಣಿ ಖ್ಯಾತಿಯ ರಜನಿ ಮುಖ್ಯಭೂಮಿಯಲ್ಲಿದ್ದಾರೆ. ದೀಪಕ್ ಸುಬ್ರಮಣ್ಯ, ಪದ್ಮಜ ರಾವ್, ಶರಣಯ್ಯ, ಬೇಬಿ ಆಕಾಂಕ್ಷ ,ಜಗದೀಶ್ ಹಲ್ಕುಡೆ, ನಿಶಾ ಹೆಗ್ಡೆ, ಗುರುದೇವ ನಾಗರಾಜ್, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದು, ಜಿಜಿ ಅಲಿಯಾಸ್ ಗೋವಿಂದೇಗೌಡ್ರು ಕಾಂಪೌಂಡರ್ ಆಗಿ, ನಟಿ ಶುಭ ಪೂಂಜಾರ ಕೇರ್ ಟೇಕರ್ ಆಗಿ ಗಮನ ಸೆಳೆಯಲಿದ್ದಾರೆ.

    ಕಾಮಿಡಿ ಟೈಮಿಂಗ್‍ನಿಂದ, ತಮ್ಮ ಅಮೋಘ ಅಭಿನಯದಿಂದ ಕನ್ನಡಿಗರ ಮನಸ್ಸು ಗೆದ್ದಿರೋ ಜಿಜಿ, ಹಾಸ್ಯ ಪಾತ್ರಗಳಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ, ಗಂಭೀರ ಪಾತ್ರಗಳಿಗೂ ಸೈ ಎನ್ನುತ್ತಿದ್ದಾರೆ. ತಮ್ಮನ್ನ ಹುಡುಕಿಕೊಂಡು ಬರುವ ಯಾವ ಪಾತ್ರವನ್ನೂ ಕೈಬಿಡಲು ಒಪ್ಪದ ಗೋವಿಂದೇಗೌಡ್ರು, ನಿರ್ದೇಶಕನ ಅಣತಿಯಂತೆ ವರ್ಕ್‍ಶಾಪ್ ಮಾಡಿಯಾದ್ರೂ ಸರೀ, ದೇಹ ದಂಡಿಸಿಯಾದ್ರೂ ಸರೀ ಪಾತ್ರಗಳಿಗೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಸ್ಯಾಂಡಲ್‍ವುಡ್‍ನ ಆಲ್ಮೋಸ್ಟ್ ಆಲ್ ಎಲ್ಲಾ ಸ್ಟಾರ್ ಗಳ ಸಿನಿಮಾಗಳಲ್ಲಿ ಮಿಂಚಿರುವ ಜಿಜಿ ಈಗ ಪರಭಾಷೆಗೂ ಲಗ್ಗೆ ಇಟ್ಟಿದ್ದಾರೆ. ಇದನ್ನೂ ಓದಿ:ಕೊನೆಗೂ ಮಗುವಿನ ತಂದೆ ಯಾರೆಂದು ಗುಟ್ಟು ಬಿಟ್ಟು ಕೊಟ್ಟ ಇಲಿಯಾನಾ

    ನಿಮಗೆಲ್ಲ ಗೊತ್ತಿರುವ ಹಾಗೇ ಕೆಜಿಎಫ್ ಸಿನಿಮಾದಿಂದ ಜಿಜಿಗೆ ಅದೃಷ್ಠ ಖುಲಾಯಿಸ್ತು. ಬಾಲಿವುಡ್‍ನಿಂದಲೂ ಬುಲಾವ್ ಬಂತು. ವೆಬ್‍ಸೀರಿಸ್ ತಂಡ ಕೂಡ ಜಿಜಿನಾ ಸಂಪರ್ಕ ಮಾಡಿದ್ದುಂಟು. ಆದರೆ, ಜಿಜಿ ಕನ್ನಡದಕ್ಕೆ ಮೊದಲ ಆದ್ಯತೆ ಕೊಟ್ಟರು. ಯಶ್, ಸುದೀಪ್, ಪುನೀತ್, ಶಿವಣ್ಣ, ದರ್ಶನ್ ಸೇರಿದಂತೆ ಹಲವು ಕನ್ನಡದ ನಟರುಗಳೊಟ್ಟಿಗೆ ಸ್ಕ್ರೀನ್ ಶೇರ್ ಮಾಡಿದರು. ಹೊಸಬರ ಸಿನಿಮಾದಲ್ಲೂ ಮಿಂಚಿದ್ರು. ಈಗ್ಲೂ ಗೋವಿಂದೇಗೌಡ್ರ ಕೈಯಲ್ಲಿ ಕಿಚ್ಚ-46, ಕರಟಕ ದಮನಕ, ಗ್ರಾಮಾಯಣ ಸೇರಿದಂತೆ ಇನ್ನೂ ಹಲವಾರು ಚಿತ್ರಗಳಿವೆ. ಈ ಮಧ್ಯೆ ಜಿಜಿ ಟಾಲಿವುಡ್‍ಗೆ ಲಗ್ಗೆ ಇಟ್ಟಿದ್ದು, ಮೆಗಾಸ್ಟಾರ್ ಕುಟುಂಬದ ಕುಡಿ ವರುಣ್ ತೇಜಾ ಜೊತೆ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಅಂಬುಜ, ನಮೋ ಭೂತಾತ್ಮ-2, ಜೋಗ್ 101 ಚಿತ್ರದ ರಿಲೀಸ್‍ಗಾಗಿ ಎದುರುನೋಡ್ತಿದ್ದಾರೆ.

    ಅಂಬುಜ ಇದೇ ಜುಲೈ 21 ರಂದು ತೆರೆಗೆ ಬರಲಿದೆ. ಮರ್ಡರ್ ಮಿಸ್ಟ್ರಿ ಹಾರರ್ ಥ್ರಿಲ್ಲರ್ ಎಲಿಮೆಂಟ್ಸ್ ಒಳಗೊಂಡಿರೋ ಚಿತ್ರ ಇದಾಗಿದ್ದು, ಕಾಶಿನಾಥ್ ಡಿ ಮಡಿವಾಳರ್ (Kashinath Madivalar) ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಒದಗಿಸುವುದರ ಜೊತೆಗೆ ಬಂಡವಾಳ ಕೂಡ ಹೂಡಿದ್ದಾರೆ.

     

    ಎಸ್.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಲೋಕೇಶ್ ಭೈರವ, ಶಿವಪ್ರಕಾಶ್.ಎನ್ ಸಹಯೋಗದ ಜೊತೆ ಅಂಬುಜ ಚಿತ್ರವನ್ನ ಅದ್ದೂರಿಯಾಗಿ ತೆರೆಗೆ ತರುತ್ತಿದ್ದಾರೆ. ಪ್ರಸನ್ನ ಕುಮಾರ್ ಮ್ಯೂಸಿಕ್, ತ್ಯಾಗರಾಜ್ ಅವ್ರ ಹಿನ್ನಲೆ ಸಂಗೀತ ಚಿತ್ರಕ್ಕಿದೆ.  ವಿಜಯ್ ಎಂ ಕುಮಾರ್ ಸಂಕಲನ, ಮುರುಳೀಧರ್ ಎಂ ಛಾಯಾಗ್ರಹಣ ಚಿತ್ರಕ್ಕಿದ್ದು, ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಇದೇ ಜುಲೈ 21ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಅಂಬುಜ’ ಕಾಶಿನಾಥ್ ಕೈ ಹಿಡೀತಾಳಾ?:  ಇಲ್ಲಿದೆ `ಅಂಬುಜ’ ಅನ್ನದಾತನ ಅಂತರಾಳ

    `ಅಂಬುಜ’ ಕಾಶಿನಾಥ್ ಕೈ ಹಿಡೀತಾಳಾ?: ಇಲ್ಲಿದೆ `ಅಂಬುಜ’ ಅನ್ನದಾತನ ಅಂತರಾಳ

    ನ್ನಡ ಚಿತ್ರರಂಗ ಕಂಡ ಅಪರೂಪದ ನಟ ಮತ್ತು ನಿರ್ದೇಶಕ ಕಾಶೀನಾಥ್ ಅವರ ಬಗ್ಗೆ ನಿಮಗೆಲ್ಲ ಗೊತ್ತೆಯಿದೆ. ಇದೀಗ ಅದೇ ಹೆಸರಿನ ನಿರ್ಮಾಪಕರೊಬ್ಬರು ಗಂಧದಗುಡಿ ಪ್ರವೇಶ ಮಾಡಿದ್ದಾರೆ. ಅಂಬುಜ ಹೆಸರಿನ ಚಿತ್ರಕ್ಕೆ ಕಥೆ ಬರೆದು, ಸಾಹಿತ್ಯ ರಚಿಸುವುದರ ಜೊತೆಗೆ ಬಂಡವಾಳ ಸುರಿದಿದ್ದಾರೆ. ಅಪರಿಚಿತ, ಅನುಭವ, ಅನಂತನ ಅವಾಂತರ ಸೇರಿದಂತೆ ಅ ಅಕ್ಷರದಿಂದ ಶುರುವಾಗುವ ಸಿನಿಮಾಗಳು ನಟ, ನಿರ್ದೇಶಕ ಕಾಶಿನಾಥ್ ಅವ್ರನ್ನ ಕೈ ಹಿಡಿದಿದ್ವು. ಅದರಂತೆ, ಅ ಅಕ್ಷರದ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿರುವ ಕಾಶಿನಾಥ್ ಡಿ ಮಡಿವಾಳರ್ ಅವ್ರನ್ನ ಅಂಬುಜ (Ambuja) ಚಿತ್ರ ಕೈ ಹಿಡಿಯುತ್ತಾ? ಅನ್ನದಾತನಿಗೆ ಈ ಚಿತ್ರ ವರವಾಗುತ್ತಾ? ಹೀಗೊಂದು ಕುತೂಹಲದ ಪ್ರಶ್ನೆ ಕೆಲವರಲ್ಲಿ ಮೂಡಿದೆ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್ (Kashinath Madiwalar) ತಮ್ಮ ಅಂತರಾಳ ಬಿಚ್ಚಿಟ್ಟಿದ್ದಾರೆ.

    ಅಂಬುಜ ನನ್ನ ನಿರ್ಮಾಣದ ಮೊದಲ ಚಿತ್ರ. ಬಿಜಾಪುರ ಮೂಲದ ತಾಳಿಕೋಟೆ ನಮ್ಮ ನೆಲೆಮೂಲ. ಬಾಲ್ಯದಿಂದಲೂ ಸಿನಿಮಾ ಹಾಗೂ ಸಾಹಿತ್ಯದಲ್ಲಿ ಆಸಕ್ತಿಯಿತ್ತು. ಬಿಡುವಿದ್ದಾಗಲೆಲ್ಲಾ ಬರವಣಿಗೆಯಲ್ಲಿ ತೊಡಗಿಸಿಕೊಳ್ತಿದ್ದೆ. ಆದರೆ, ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ನಿರತನಾಗಿದ್ದರಿಂದ ಸಿನಿಮಾಲೋಕಕ್ಕೆ ಎಂಟ್ರಿಕೊಡಲಿಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೂ ಕಾಲ ಕೂಡಿಬಂದಿದ್ದು ನಾನು ಕೆತ್ತಿದ ಕಥೆ ಶಿಲೆಯಾಗಿ ಬೆಳ್ಳಿಭೂಮಿ ಮೇಲೆ ಮೆರವಣಿಗೆ ಹೊರಟಿದೆ. ಇದೊಂದು ನೈಜ ಘಟನೆಯಾಧರಿತ ಚಿತ್ರ. ಹಿಂದೆಂದೂ ಕೂಡ ನೀವು ಇಂತಹದ್ದೊಂದು ಕಥೆಯುಳ್ಳ ಸಿನಿಮಾವನ್ನ ಬಿಗ್ಸ್ಕ್ರೀನ್ ಮೇಲೆ ನೋಡಿರಲಿಕ್ಕೆ ಸಾಧ್ಯವಿಲ್ಲ. ಫಾರ್ ದಿ ಫಸ್ಟ್ ಟೈಮ್ ನಾನೇ ಈ ಅನ್ಟೋಲ್ಡ್ ಕ್ರೈಮ್ ಸ್ಟೋರಿಯನ್ನ ಕರುನಾಡ ಜನತೆಗೆ ತಿಳಿಸಲಿಕ್ಕೆ ಹೊರಟಿದ್ದೇನೆ. ಲವ್ವು, ಸೆಂಟಿಮೆಂಟ್, ಹಾರರ್, ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಪ್ಲಸ್ ಕಾಮಿಡಿ ಎಲಿಮೆಂಟ್ಸ್ ಚಿತ್ರದಲ್ಲಿದ್ದು, ನಿರ್ದೇಶಕ ಶ್ರೀನಿ ಹನುಮಂತರಾಜು ಅದ್ಭುತವಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ. ಶುಭ ಪೂಂಜಾ (Shubha Poonja), ರಜಿನಿ (Rajini), ಆಕಾಂಕ್ಷ, ಗೋವಿಂದೇಗೌಡ, ದೀಪಕ್ ಸುಬ್ರಹ್ಮಣ್ಯ, ಪದ್ಮಜರಾವ್, ಶರಣಯ್ಯ, ಜಗದೀಶ್ ಹಲ್ಕುಡೆ, ನಿಶಾಹೆಗ್ಡೆ, ಗುರುದೇವ ನಾಗರಾಜ್, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ.

    ಇತ್ತೀಚಿಗಿನ ದಿನಗಳಲ್ಲಿ ಜನ ಥಿಯೇಟರ್ ಗೆ ಬರೋದು ಕಡಿಮೆಯಾಗಿದೆ. ಅದಕ್ಕೆ ಕಾರಣ ನೂರೆಂಟು ಇರಬಹುದು ಆದರೆ ಸಿನಿಮಾಪ್ರೇಮಿಗಳು ದೊಡ್ಡಮನಸ್ಸು ಮಾಡಿ ಚಿತ್ರಮಂದಿರಕ್ಕೆ ಬರಬೇಕು. ಒಂದೇ ಒಂದು ಭಾರಿ ಪಿಕ್ಚರ್ ಟಾಕೀಸ್ಗೆ ಬಂದು ಸಿನಿಮಾ ನೋಡಿದರೆ, ಗ್ಯಾರಂಟಿ ನಮ್ಮ `ಅಂಬುಜ’ ಚಿತ್ರ ಅವರಿಗೆ ಇಷ್ಟವಾಗುತ್ತೆ. ಅದಕ್ಕೆ ನಾನು ಶ್ಯೂರಿಟಿ ಕೊಡ್ತೀನಿ ಎನ್ನುತ್ತಾರೆ ನಿರ್ಮಾಪಕರು. ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸ ಆಗಲ್ಲ. ಮನರಂಜನೆಗೆ ನಮ್ಮ ಚಿತ್ರದಲ್ಲಿ ಬರ ಇಲ್ಲ. ಎಂಟರ್ ಟೈನ್ಮೆಂಟ್ ಜೊತೆಗೆ ಸಂದೇಶ ಕೂಡ ಅಡಗಿದ್ದು, ನಮ್ಮ ಸುತ್ತಮುತ್ತ ಈ ರೀತಿಯ ಘಟನೆಗಳು ನಡೆಯುತ್ತಿದೆಯಾ ಅಂತ ಪ್ರೇಕ್ಷಕರು ಬೆಚ್ಚಿಬೀಳೋದು, ದಿಗ್ದಿಗ್ಭ್ರಾಂತಗೊಳ್ಳೋದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ ಎನ್ನುತ್ತಾರೆ ನಿರ್ಮಾಪಕ ಕಾಶಿನಾಥ್. ಇದನ್ನೂ ಓದಿ:ಕೊನೆಗೂ ಮದುವೆ ಬಗ್ಗೆ ಸಿಕ್ರೇಟ್ ಬಿಟ್ಟುಕೊಟ್ಟ ವಿಜಯ್ ದೇವರಕೊಂಡ

    ಈಗಾಗಲೇ ರಿಲೀಸ್ ಆಗಿರುವ ಟೀಸರ್, ಹಾಗೂ ಟ್ರೇಲರ್ ಅಂಬುಜ ಚಿತ್ರದ ಮೇಲೆ ನಿರೀಕ್ಷೆ ಹುಟ್ಟಿಸಿರೋದಂತೂ ಸತ್ಯ. ರಜನಿ ಹಾಗೂ ಬೇಬಿ ಆಕಾಂಕ್ಷಾಳ ಲಂಬಾಣಿ ವೇಷಭೂಷಣ. ಸರಣಿ ಕೊಲೆ, ಆ ಕೊಲೆ ಹಿಂದಿರೋದು ಮೆಡಿಕಲ್ ಮಾಫಿಯಾನಾ ಅಥವಾ ಸೈಕಲಾಜಿಕಲ್ ಡಿಸಾರ್ಡರ್ ಇರುವ ವ್ಯಕ್ತಿಯಾ ಎನ್ನುವ ಸಂಶಯ. ಕಾವಿ ತೊಟ್ಟಿರುವ ವ್ಯಕ್ತಿ, ಕಾಳಿರೂಪವೆತ್ತಿ ಕೆಂಡಕಾರುವ ಮಹಿಳೆ ಹೀಗೆ ಹಲವು ಪಾತ್ರಗಳು ಅಂಬುಜ ಕಡೆ ಕಣ್ಣರಳಿಸಿ ನೋಡುವಂತೆ ಮಾಡಿವೆ. ಬೆಂಗಳೂರು, ಚಿಕ್ಕಮಂಗಳೂರು, ಗದಗ ಭಾಗದಲ್ಲಿ ಚಿತ್ರೀಕರಣ ನಡೆದಿದ್ದು, ಎತ್ತಿನ ಭುಜ ಬೆಟ್ಟದ ಮೇಲೆ ಹಾಡೊಂದನ್ನ ಕ್ಯಾಪ್ಚರ್ ಮಾಡಿಕೊಳ್ಳುವ ಮೂಲಕ ಅಂಬುಜ ಚಿತ್ರತಂಡ ದಾಖಲೆ ಮಾಡಿದೆ. ಮಗಳು ಅಮ್ಮನಿಗಾಗಿ ಲಾಲಿ ಹಾಡುವ ಗೀತೆ ಸ್ಯಾಂಡಲ್ವುಡ್ ಅಂಗಳದಲ್ಲಿ ಚರಿತ್ರೆ ಸೃಷ್ಟಿಸಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ನಿರ್ಮಾಪಕ ಕಾಶಿನಾಥ್ ಅವರೇ ಸಾಹಿತ್ಯ ರಚಿಸಿದ್ದಾರೆ. ಪ್ರಸನ್ನ ಕುಮಾರ್ ಕ್ಯಾಚಿ ಟ್ಯೂನ್ ಕಂಪೋಸ್ ಮಾಡಿದ್ದು, ತ್ಯಾಗರಾಜ್ ಹಿನ್ನಲೆ ಸಂಗೀತ ಒದಗಿಸಿದ್ದಾರೆ. ಮುರುಲೀಧರ್ ಎನ್ ಕ್ಯಾಮೆರಾ ಕೈಚಳಕ, ವಿಜಯ್ ಎಂ. ಕುಮಾರ್ ಸಂಕಲನ `ಅಂಬುಜಾ’ನ ಅದ್ಭುತವನ್ನಾಗಿಸಿದೆ.

    ಅಂದ್ಹಾಗೇ, ನಿರ್ಮಾಪಕ ಕಾಶಿನಾಥ್ ಅವರು ದುಡ್ಡು ಮಾಡಬೇಕು ಅಂತ ಚಿತ್ರರಂಗಕ್ಕೆ ಬಂದಿಲ್ಲ. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಇವರು, ಎಲೆಕ್ಟ್ರಿಕಲ್ ಅಂಡ್ ಮೆಕ್ಯಾನಿಕಲ್ ಇಂಡಸ್ಟ್ರಿಯಲ್ಲಿ `ಎಸ್ಕೆ ಹೈವೋಲ್ಟೇಜ್ ಎಕ್ವಿಪ್ಮೆಂಟ್, ಎಸ್ ಕೆ ಗ್ರೂಪ್ಸ್, ಪಿಎಸ್ಕೆ, ವಿಎಸ್ಕೆ ಕಂಪೆನಿಗಳನ್ನ ಕಟ್ಟಿ ಬೆಳೆಸಿದ್ದಾರೆ. ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಈಗ ಎಸ್ಕೆ ಸಿನಿಮಾಸ್ ಬ್ಯಾನರ್ ಅಡಿ ಅಂಬುಜ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಹನಿರ್ಮಾಣದಲ್ಲಿ ಲೋಕೇಶ್ ಭೈರವ, ಶಿವಪ್ರಕಾಶ್ ಕೈ ಜೋಡಿಸಿದ್ದಾರೆ. ಮಾರ್ಸ್ ಸುರೇಶ್ ಅವರು ವಿತರಣೆ ಜವಾಬ್ದಾರಿ ಹೊತ್ತಿದ್ದು, ಜುಲೈ 21ರಂದು ಸುಮಾರು 70 ಚಿತ್ರಮಂದಿರಗಳಲ್ಲಿ ಅಂಬುಜಾನ ಬಿಡುಗಡೆ ಮಾಡ್ತಿದ್ದಾರೆ. ಅಂಬುಜ ಕೈ ಹಿಡಿದರೆ ಹತ್ತಾರು ಸಿನಿಮಾ ನಿರ್ಮಿಸುವ ಕನಸು ಕಂಡಿದ್ದೇನೆ. ಕನ್ನಡ ಕಲಾಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡುತ್ತಾ, ಬಣ್ಣದ ಲೋಕವನ್ನ ನಂಬಿ ಬದುಕುತ್ತಿರುವವರಿಗೆ ಕೆಲಸ ಕೊಡುವ ಅಭಿಲಾಷೆ ಹೊಂದಿರುವುದಾಗಿ ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್ ಹೇಳಿಕೊಂಡಿದ್ದಾರೆ. ಅವರಿಗೆ ಒಳ್ಳೆದಾಗಲಿ, ಅಂಬುಜ ಚಿತ್ರ ಅನ್ನದಾತ ಕಾಶಿನಾಥ್ ಅವರ ಕೈಹಿಡಿಯಲಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶುಭಾ ಪೂಂಜಾ ಫ್ಯಾಮಿಲಿ ಜೊತೆ ಮಂಜು ಪಾವಗಡ ಟೆಂಪಲ್ ರನ್

    ಶುಭಾ ಪೂಂಜಾ ಫ್ಯಾಮಿಲಿ ಜೊತೆ ಮಂಜು ಪಾವಗಡ ಟೆಂಪಲ್ ರನ್

    `ಮೊಗ್ಗಿನ ಮನಸ್ಸು’ (Moggina Manassu) ಚಿತ್ರದ ನಟಿ ಶುಭಾ ಪೂಂಜಾ (Shubha Poonja) ಮದುವೆ, ಸಂಸಾರ ಅಂತಾ ಬ್ಯುಸಿಯಾಗಿದ್ದರು. ಈಗ ಕುಟುಂಬದ ಜೊತೆ ಪ್ರವಾಸಕ್ಕೆ ತೆರಳಿದ್ದಾರೆ. ಈ ವೇಳೆ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಮಂಜು ಪಾವಗಡ (Manju Pavagada) ಕೂಡ ಸಾಥ್ ನೀಡಿದ್ದಾರೆ.

    ಚಂಡ, ಮೊಗ್ಗಿನ ಮನಸ್ಸು ಸೇರಿದಂತೆ ಹಲವು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟಿ ಶುಭಾ ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಮಹಾಬಲ ಜೊತೆ ಹಸೆಮಣೆ ಏರಿದ್ದರು. ಈಗ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಟಾಲಿವುಡ್ ನಟ ನಾನಿಗೆ ಮೃಣಾಲ್ ಠಾಕೂರ್ ನಾಯಕಿ

     

    View this post on Instagram

     

    A post shared by shubha Poonja . (@shubhapoonja)

    ಮಾರಿಕಾಂಬಾ ದೇವಸ್ಥಾನ ಶಿರಸಿ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. ನಟಿ ಶುಭಾ ಕುಟುಂಬದ ಜೊತೆ ಮಂಜು ಪಾವಗಡ ಕೂಡ ಜೊತೆಯಾಗಿದ್ದಾರೆ. ಬಳಿಕ `ಮಜಾಭಾರತ’ ಖ್ಯಾತಿಯ ರಾಘವೇಂದ್ರ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಕುರಿತು ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by shubha Poonja . (@shubhapoonja)

    ಇನ್ನೂ ಶುಭಾ ಪೂಂಜಾ ಪೋಸ್ಟ್ ಇದೀಗ ಸಖತ್ ಸದ್ದು ಮಾಡ್ತಿದ್ದು, ನಟಿಯ ಮುಂದಿನ ಸಿನಿಮಾ ಅಪ್‌ಡೇಟ್‌ಗಾಗಿ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅನ್‌ಟೋಲ್ಡ್ ಕ್ರೈಂ ಸ್ಟೋರಿಯಲ್ಲಿ ಶುಭಾ ಪೂಂಜಾ

    ಅನ್‌ಟೋಲ್ಡ್ ಕ್ರೈಂ ಸ್ಟೋರಿಯಲ್ಲಿ ಶುಭಾ ಪೂಂಜಾ

    ಟಿ ಶುಭಾ ಪೂಂಜಾ, `ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ರಜಿನಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ `ಅಂಬುಜಾ'(Ambuja Film) ಸಿನಿಮಾ ಟೀಸರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ನೈಜ ಘಟನೆ ಆಧಾರಿತ ಈ ಚಿತ್ರದ ಟೀಸರ್ ಇದೀಗ ಕುತೂಹಲವನ್ನು ಹುಟ್ಟು ಹಾಕಿದೆ, ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ.

    `ಅಂಬುಜಾ’ ಕ್ರೈಂ ಥ್ರಿಲ್ಲರ್ ಹಾರಾರ್ ಕಥಾಹಂದರ ಒಳಗೊಂಡಿದೆ. ನೈಜ ಘಟನೆ ಆಧಾರಿತ ಈ ಚಿತ್ರಕ್ಕೆ ಕಾಶಿನಾಥ್ ಡಿ ಮಡಿವಾಳರ್ ನಿರ್ಮಾಣ ಮಾಡಿದ್ದಾರೆ. ಮೊದಲ ಬಾರಿ ಸಿನಿಮಾ ನಿರ್ಮಾಣ ಸಾಹಸಕ್ಕೆ ಕೈ ಹಾಕಿರುವ ಇವರು ಚಿತ್ರಕ್ಕೆ ಕಥೆ, ಸಾಹಿತ್ಯ ಕೂಡ ಬರೆದಿದ್ದಾರೆ. ಶ್ರೀನಿ ಹನುಮಂತರಾಜು(Shrini Hanumanthraju) ಚಿತ್ರವನ್ನು ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ.  ರಿಲೀಸ್‌ಗೂ ಮುನ್ನ ಟೀಸರ್‌ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ. 4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಭರ್ಜರಿ ವಿವ್ಸ್‌ ಗಿಟ್ಟಿಸಿಕೊಳ್ಳುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಆಟಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ

    ಗೊತ್ತಿಲ್ಲದ ವಿಚಾರಗಳನ್ನು ಜನರಿಗೆ ಹೇಳಬೇಕು ಎನಿಸಿತು. ಅದಾದ ಮೇಲೆ ನಿರ್ದೇಶಕ ಶ್ರೀನಿ ಅವರ ಜೊತೆ ಮಾತನಾಡಿದಾಗ ಅವರು ಕೂಡ ಕಥೆ ತುಂಬಾ ಚೆನ್ನಾಗಿದೆ ಅಂದ್ರು. ಸಿನಿಮಾ ಮಾಡೋಣ ಎಂದು ನಿರ್ಧರಿಸಿದೆ. ಸಿನಿಮಾಗೆ ಬೇಕಾದ ಪಾತ್ರಗಳು ಸಿಗುತ್ತ ಹೋಯಿತು. ಫೈನಲಿ ಒಂದೊಳ್ಳೆ ಸಿನಿಮಾ ರೆಡಿಯಾಗಿದೆ. `ಅಂಬುಜಾ’  ಮನೆಮಂದಿಯೆಲ್ಲ ಕುಳಿತು ನೋಡಬಹುದು ಎಂದು ಚಿತ್ರದ ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

    ನಟಿ ಶುಭಾ ಪೂಂಜಾ(Shubha Poonja) ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಎಂದೂ ಮಾಡಿರದ ಕ್ರೈಂ ರಿಪೋರ್ಟರ್ ಪಾತ್ರದಲ್ಲಿ ಶುಭಾ ನಟಿಸಿದ್ದಾರೆ. ನಟಿ ರಜನಿ (Rajani), ಲಂಬಾಣಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಪದ್ಮಜಾ ರಾವ್, ಕಾಮಿಡಿ ಕಿಲಾಡಿ ಗೋವಿಂದೇಗೌಡ, ಕಾಮಿಡಿ ಕಿಲಾಡಿ ನಿರ್ದೇಶಕ ಶರಣಯ್ಯ, ಪ್ರಿಯಾಂಕ ಕಾಮತ್, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಗದಗ, ಉಡುಪಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎಸ್ ಕೆ ಸಿನಿಮಾಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ವಿಜಯ್ ಎಂ ಕುಮಾರ್ ಸಂಕಲನ, ಮುರಳೀಧರ್ ಎಂ ಛಾಯಾಗ್ರಹಣ, ಪ್ರಸನ್ನ ಕುಮಾರ್ ಎಂ.ಎಸ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಚಂದನವನದಲ್ಲಿ ಲವ್ಲಿ ವ್ಯಾಲೆಂಟೈನ್ಸ್ ಡೇ – ಅಭಿಮಾನಿಗಳೊಂದಿಗೆ ಹಂಚಿಕೊಂಡ್ರು ಸ್ಪೆಷಲ್ ಫೋಟೋ!

    ಚಂದನವನದಲ್ಲಿ ಲವ್ಲಿ ವ್ಯಾಲೆಂಟೈನ್ಸ್ ಡೇ – ಅಭಿಮಾನಿಗಳೊಂದಿಗೆ ಹಂಚಿಕೊಂಡ್ರು ಸ್ಪೆಷಲ್ ಫೋಟೋ!

    ಬೆಂಗಳೂರು: ಇಂದು ಪ್ರೇಮಿಗಳ ದಿನವಾದ್ದರಿಂದ ನಮ್ಮ ಚಂದವನದ ಲವ್ಲಿ ಕಪಲ್ ತಮ್ಮ ಜೋಡಿ ಜೊತೆ ಲವ್ಲಿಯಾಗಿ ಈ ವಿಶೇಷ ದಿನವನ್ನು ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ. ಅಲ್ಲದೆ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೂ ವಿಶ್ ಮಾಡಿದ್ದಾರೆ.

    ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ:
    ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಆಗಿರುವ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಇಂದು ಕ್ಯೂಟ್ ಆಗಿ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡಿದ್ದು, ನಮ್ಮ ಚಿಕ್ಕ ಸೆಲೆಬ್ರೇಶನ್, ಥ್ಯಾಂಕ್ಸ್ ಕನ್ನ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಪ್ರಜ್ವಲ್ ರಾಗಿಣಿಗೆ ಕಿಸ್ ಕೊಡುತ್ತಿದ್ದು, ‘ಬ್ಲೂ ಥೀಮ್’ ನಲ್ಲಿ ತಮ್ಮ ವಿಶೇಷ ದಿನವನ್ನು ಸೆಲೆಬ್ರೆಟ್ ಮಾಡಿರುವುದು ಫೋಟೋದಲ್ಲಿ ನೋಡಬಹುದು. ಫೋಟೋದಲ್ಲಿ ಇಬ್ಬರು ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಈ ಪೋಸ್ಟ್ ಗೆ ರಾಗಿಣಿ ‘ಲವ್ ಯೂ’ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಮಹೀಂದ್ರಾ ಶೂಟ್‍ನಲ್ಲಿ ತಾಳ್ಮೆ ಕಳೆದುಕೊಂಡ ಅಜಯ್ ದೇವಗನ್!

     

    View this post on Instagram

     

    A post shared by Prajwal Devaraj (@prajwaldevaraj)

    ಪ್ರಜ್ವಲ್ ಬಾಲ್ಯ ಸ್ನೇಹಿತೆ ಆದ ರಾಗಿಣಿ ಚಂದ್ರನ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ರಾಗಿಣಿ ಅವರು ಸಹ ಪ್ರೊಫೆಷನಲ್ ಡ್ಯಾನ್ಸರ್ ಆಗಿದ್ದಾರೆ. ಆಗಾಗ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ಡಾನ್ಸ್ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

    ಶುಭಾ ಪೂಂಜಾ ಮತ್ತು ಸುಮಂತ್:
    ಸ್ಯಾಂಡಲ್‍ವುಡ್ ನಟಿ, ಬಿಗ್‍ಬಾಸ್ ಖ್ಯಾತಿಯ ಶುಭಾ ಪೂಂಜಾ ಮತ್ತು ಸುಮಂತ್ ಮಹಾಬಲ ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಬಳಿಕ ಈ ಜೋಡಿಗೆ ಇಂದು ಮೊದಲ ವ್ಯಾಲೆಂಟೈನ್ಸ್ ಡೇ. ಇನ್‍ಸ್ಟಾಗ್ರಾಮ್ ನಲ್ಲಿ ತಮ್ಮ ಮುದ್ದು ಜೋಡಿಯ ಫೋಟೋ ಶೇರ್ ಮಾಡಿಕೊಂಡಿರುವ ಶುಭಾ, ನಮ್ಮಿಂದ ನಿಮಗೆ ಪ್ರೇಮಿಗಳ ದಿನದ ಶುಭಾಶಯಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by shubha Poonja . (@shubhapoonja)

    ಈ ಪೋಸ್ಟ್ ಮೂಲಕ ಶುಭಾ ತಮ್ಮ ಅಭಿಮಾನಿಗಳಿಗೆ ಪ್ರೇಮಿಗಳ ದಿನದ ಶುಭಾಶಯವನ್ನು ತಿಳಿಸಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಶುಭಾ ಅವರಿಗೂ ಶುಭಾಶಯವನ್ನು ಕೋರಿದ್ದಾರೆ. ಹಲವು ವರ್ಷಗಳಿಂದ ಸಮಾಜ ಸೇವಕ ಸುಮಂತ್ ಅವರನ್ನು ಪ್ರೀತಿಸುತ್ತಿದ್ದ ಶುಭಾ, 2022ರ ಜನವರಿ ಮೊದಲ ವಾರದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಶ್ವೇತಾ ಮತ್ತು ಅಮಿತ್ ಶ್ರೀವಾತ್ಸವ್:
    ಚಂದನವನದ ಸಿಂಪಲ್ ಕ್ವೀನ್ ಶ್ವೇತಾ ಶ್ರೀವಾತ್ಸವ್ ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಮಗಳೊಂದಿಗೆ ಫೋಟೋ ವೀಡಿಯೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇಂದು ವ್ಯಾಲೆಂಟೈನ್ಸ್ ಡೇ ವಿಶೇಷತೆಗೆಂದು ತಮ್ಮ ಪತಿ ಅಮಿತ್ ಶ್ರೀವಾತ್ಸವ್ ಜೊತೆ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಅಮಿತ್ ಶ್ವೇತಾ ಅವರಿಗೆ ಕಿಸ್ ಕೊಡುತ್ತಿದ್ದು, ಪೂಲ್ ಬಳಿ ಕೂಲ್ ಆಗಿ ನಿಂತಿದ್ದಾರೆ. ಈ ಪೋಸ್ಟ್ ಗೆ ಶ್ವೇತಾ ಅವರು, ವ್ಯಾಲೆಂಟೈನ್ #ಎಂದೆಂದಿಗೂ #ಜೋಡಿಗೋಲುಗಳು ಎಂದು ಬರೆದು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಕಂದಮ್ಮನ ಆಗಮನಕ್ಕಾಗಿ ಕಾಯ್ತಿದ್ದೇನೆ- ಅಮೂಲ್ಯಗೆ ಹರಿಪ್ರಿಯಾ ವಿಶ್

     

    View this post on Instagram

     

    A post shared by Shwetha Srivatsav (@shwethasrivatsav)

    ಕೃಷ್ಣ ಮತ್ತು ಮಿಲನಾ:
    ಚಂದನವನದ ಡಾರ್ಲಿಂಗ್ ಕೃಷ್ಣ ಮತ್ತು ಚಂದನವನದ ನಟಿ ಮಿಲನಾ ಕಳೆದ ವರ್ಷ ಮದುವೆಯಾಗಿದ್ದು, ಈ ವರ್ಷ ತಮ್ಮ ಹೊಸ ಸಿನಿಮಾ ‘ಲವ್ ಮಾಕ್‍ಟೇಲ್- 2’ ಸಿನಿಮಾ ಯಶಸ್ಸಿನೊಂದಿಗೆ ಇಂದು ವ್ಯಾಲೆಂಟೈನ್ಸ್ ಡೇ ಆಚರಿಸಿಕೊಳ್ಳುತ್ತಿದ್ದಾರೆ. ಮಿಲನ ಇನ್‍ಸ್ಟಾಗ್ರಾಮ್ ನಲ್ಲಿ, ನನ್ನ ಜೀವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಇದುವರೆಗೆ ಮಾಡಿದ ಅತ್ಯುತ್ತಮ ನಿರ್ಧಾರ! ನನ್ನ ಇಡೀ ಪ್ರಪಂಚ! ಎಂದು ಬರೆದು ಪತಿ ಜೊತೆಗಿನ ಕ್ಯೂಟ್ ಫೋಟೋವನ್ನು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Milana Nagaraj (@milananagaraj)

     

  • ಬಿಗ್‍ಬಾಸ್ ನೀಡಿದ ಟಾಸ್ಕ್ ನಿಂದ್ಲೇ ಹತ್ತಿರವಾಗ್ತಿದ್ದಾರಾ ಅರವಿಂದ್, ದಿವ್ಯಾ?

    ಬಿಗ್‍ಬಾಸ್ ನೀಡಿದ ಟಾಸ್ಕ್ ನಿಂದ್ಲೇ ಹತ್ತಿರವಾಗ್ತಿದ್ದಾರಾ ಅರವಿಂದ್, ದಿವ್ಯಾ?

    – ದಿವ್ಯಾಗೆ ಊಟ ಮಾಡಿಸಿದ ಅರವಿಂದ್

    ಬಿಗ್‍ಬಾಸ್ ನೀಡಿದ ಜೋಡಿ ಟಾಸ್ಕ್ ಮೂಲಕ ಒಂದಾಗಿದ್ದ ಅರವಿಂದ್ ಹಾಗೂ ದಿವ್ಯಾ ಉರುಡುಗ, ಇದೀಗ ಮತ್ತೆ ಬಿಗ್‍ಬಾಸ್ ನೀಡಿದ ಟಾಸ್ಕ್ ಮೂಲಕವೇ ಇನ್ನಷ್ಟು ಹತ್ತಿರವಾಗ್ತಿದ್ದಾರೆ ಅನ್ನೋ ಗುಮಾನಿ ಎದ್ದಿದೆ.

    ನಿನ್ನೆ ಬಿಗ್‍ಬಾಸ್ ಶುಭಾ ಪೂಂಜಾರವರಿಗೆ ಕನ್ಫೆಷನ್ ರೂಮ್‍ಗೆ ಕರೆದು ಒಂದು ಪ್ಲೇಟ್‍ನಲ್ಲಿ ಚಿಕನ್ ನೀಡಿ, ಮುಂದಿನ ಆದೇಶದವರೆಗೂ ಮನೆಯ ಸದಸ್ಯರು ಚಿಕನ್‍ನನ್ನು ಒಬ್ಬೊಬ್ಬರು ಬಜರ್ ಆದ ಬಳಿಕ ವರ್ಗಾಹಿಸಿಕೊಂಡು ಕೆಳಗೆ ಇಡದಂತೆ ನೋಡಿಕೊಳ್ಳಬೇಕು. ಹೀಗೆ ಜಾಗೃತರಾಗಿ ನೋಡಿಕೊಂಡರೆ ಲಕ್ಷುರಿ ಬಜೆಟ್‍ನಲ್ಲಿ ಕಳೆದುಕೊಂಡಿರುವ ಚಿಕನ್‍ನನ್ನು ಹಿಂಪಡೆಯಬಹುದು ಎಂದು ತಿಳಿಸಿದ್ದರು.

    ಅದರಂತೆ ಮೊದಲಿಗೆ ಶುಭಾ ಚಿಕನ್‍ನನ್ನು ಕೈಯಲ್ಲಿ ಇಟ್ಟುಕೊಂಡು ಜೋಪಾನವಾಗಿ ನೋಡಿಕೊಂಡರು. ಬಳಿಕ ಬಜರ್ ಆದನಂತರ ದಿವ್ಯಾ ಉರುಡಗೆ ಚಿಕನ್ ಪ್ಲೇಟ್‍ನನ್ನು ಪಾಸ್ ಮಾಡಿದರು. ಚಿಕನ್ ನೋಡಿ ದಿವ್ಯಾ ಉರುಡಗ ಖುಷಿಖುಷಿಯಿಂದ ಸ್ವೀಕರಿಸಿ ಅರವಿಂದ್ ಪಕ್ಕದಲ್ಲಿ ಕುಳಿತುಕೊಳ್ಳಲು ಬರುತ್ತಾರೆ. ಆಗ ದಿವ್ಯಾ ಕುಳಿತುಕೊಳ್ಳಲು ಮೈಕ್ ಅಡ್ಡ ಬರುತ್ತದೆ ಎಂದು ಅರವಿಂದ್ ದಿವ್ಯಾ ಮೈಕ್‍ನನ್ನು ಪಕ್ಕಕ್ಕೆ ಸರಿಸುತ್ತಾರೆ.

    ನಂತರ ದಿವ್ಯಾ ನನ್ನ ಕೆನ್ನೆ ಮೇಲೆ ಸೊಳ್ಳೆ ಕಚ್ಚುತ್ತಿರುವುದಾಗಿ ತಿಳಿಸಿದಾಗ, ಅರವಿಂದ್ ಕೂಡಲೇ ಎಲ್ಲಿ ಎಂದು ಕೆನ್ನೆ, ಹಣೆ ಹಾಗೂ ಗಲ್ಲದ ಮೇಲೆ ಕೈನಲ್ಲಿ ಸವರುತ್ತಾರೆ. ಬಳಿಕ ಬಾಯಿಯಿಂದ ಗಾಳಿಯನ್ನು ಊದಿ, ಯಾವ ಸೊಳ್ಳೆಯು ಇಲ್ಲ ಎಂದು ಹೇಳುತ್ತಾರೆ. ಇದಾದ ನಂತರ ಮನೆಯಲ್ಲಿ ಎಲ್ಲರೂ ತಮ್ಮ ಪಾಡಿಗೆ ತಾವು ಊಟ ಮಾಡುತ್ತಿರುತ್ತಾರೆ. ಈ ವೇಳೆ ಅರವಿಂದ್ ತಾವು ಊಟ ಮಾಡದೇ ಅನ್ನ, ಸಾಂಬಾರ್ ತಂದು ದಿವ್ಯಾ ಉರುಡುಗಗೆ ಒಂದೊಂದೇ ತುತ್ತು ತಿನ್ನಿಸಿದ್ದಾರೆ.

    ಒಟ್ಟಾರೆ ಈ ಕ್ಯೂಟ್ ಪೇರ್ ಒಬ್ಬರ ಮೇಲೊಬ್ಬರು ಹೊಂದಿರುವ ಕಾಳಜಿ ನೋಡಿ ಫಿದಾ ಆಗಿರುವ ಪ್ರೇಕ್ಷಕರು, ಈ ಜೋಡಿಗೆ ದೃಷ್ಟಿ ತಾಗದಿರಲಿ ಎಂದು ಆಶಿಸುತ್ತಿದ್ದಾರೆ ಎಂದೇ ಹೇಳಬಹುದು.

  • ಟಿ-ಶರ್ಟ್ ಹಾಕಲ್ಲ ಅಂದ್ರೆ ಶುಭಾಗೆ ಬೈಯ್ಯೋದ್ಯಾರು ಗೊತ್ತಾ?

    ಟಿ-ಶರ್ಟ್ ಹಾಕಲ್ಲ ಅಂದ್ರೆ ಶುಭಾಗೆ ಬೈಯ್ಯೋದ್ಯಾರು ಗೊತ್ತಾ?

    ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲಾ ಸ್ಪರ್ಧಿಗಳು ಪ್ರತಿದಿನ ತಮಗೆ ಇಷ್ಟವಾದಂತಹ ಟ್ರೆಂಡಿ ಹಾಗೂ ಡಿಫರೆಂಟ್, ಡ್ರೆಸ್‍ಗಳನ್ನು ಹಾಕಿಕೊಳ್ಳುವ ಮೂಲಕ ಕಂಗೊಳಿಸುತ್ತಿದ್ದಾರೆ. ಸದ್ಯ ಬಿಗ್‍ಬಾಸ್, ಕ್ಯಾಪ್ಟನ್ ಮಂಜು ಸಾರಥ್ಯದಲ್ಲಿ ಮನೆಯ ಸದಸ್ಯರನ್ನು ನಾಲ್ಕು ಗುಂಪುಗಳಾಗಿ ಮಾಡಿ ಟಾಸ್ಕ್ ನೀಡುತ್ತಿದ್ದಾರೆ. ಅಲ್ಲದೆ ಈ ನಾಲ್ಕು ತಂಡದ ಸದಸ್ಯರಿಗೆ ಕೆಂಪು, ಬಿಳಿ, ಪಿಂಕ್ ಹಾಗೂ ಹಸಿರು ಬಣ್ಣದ ಟಿ-ಶರ್ಟ್‍ಗಳನ್ನು ನೀಡಿದ್ದಾರೆ.

    ಹೀಗಾಗಿ ಮನೆಯ ಎಲ್ಲಾ ಸದಸ್ಯರು ಟಿ-ಶರ್ಟ್ ಧರಿಸಿ ಟಾಸ್ಕ್ ಆಡಲು ಮುಂದಾಗಿದ್ದಾರೆ. ಈ ವೇಳೆ ವೈಷ್ಣವಿ ಹಾಗೂ ಶುಭಾ ಪೂಂಜಾ ಕೂಡ ಟಿ-ಶರ್ಟ್ ಧರಿಸಿ ಡ್ರೆಸಿಂಗ್ ಟೇಬಲ್‍ನ ಮೀರರ್ ಮುಂದೆ ನಿಂತು ಮೇಕಪ್ ಮಾಡಿಕೊಳ್ಳುತ್ತಿರುತ್ತಾರೆ. ಆಗ ವೈಷ್ಣವಿ, ಶುಭಾ ಪೂಂಜಾಗೆ ಯಾಕೆ ಟಿ-ಶರ್ಟ್ ಇಷ್ಟ ಇಲ್ವಾ ಅಂತ ಕೇಳ್ತಾರೆ. ಅದಕ್ಕೆ ಶುಭಾ, ಚಿಕ್ಕ ಮಕ್ಕಳಂತೆ ನನಗೆ ಇಷ್ಟ ಇಲ್ಲಾ ವೈಶು, ನನಗೆ ಈ ತರ ಟಿ-ಶಟ್ರ್ಸ್ ಇಷ್ಟ ಆಗಲ್ಲ. ನಾನು ಮನೆಯಲ್ಲೂ ಈ ತರ ಟಿ-ಶಟ್ರ್ಸ್ ಹಾಕಿಕೊಳ್ಳುವುದಿಲ್ಲ ಅಂತಾರೆ. ಅದಕ್ಕೆ ವೈಷ್ಣವಿ ಹಾಗಾದರೆ ಹಾಕಿಕೊಳ್ಳಬೇಡಿ ಬಿಚ್ಚಿಬಿಡಿ. ಗೌನ್ ಹಾಕಿಕೊಳ್ಳಿ ಎಂದು ಹೇಳುತ್ತಾರೆ.

    ಇದಕ್ಕೆ ಶುಭಾ ಇಲ್ಲ,.. ಅವರು ಬೈತಾರೆ, ಹ್ಯಾಸ್ ಇಟ್ ಈಸ್ ಅವರು ನನಗೆ ತುಂಬಾನೇ ಬೈತಿದ್ದಾರೆ ಇತ್ತೀಚಿಗೆ ಅಂತಾ ಹೇಳ್ತಾರೆ. ಆಗ ವೈಷ್ಣವಿ ನಿಮಗೆ ಬೈಯ್ಯಲು ಧೈರ್ಯ ಯಾರಿಗಿದೆ ಹೇಳಿ ಎಂದು ಕೇಳುತ್ತಾರೆ. ಇಲ್ಲ ಬೈತಿದ್ದಾರೆ, ತುಂಬಾ ತುಂಬಾ ಬೈತಿದ್ದಾರೆ, ನಾನು ಏನು ಮಾಡಿದೆ ಎಂದು ಶುಭ ಹೇಳಿದಾಗ, ವೈಷ್ಣವಿ ಮೈಕ್ ಹಾಕಲ್ಲ. ಗ್ಲಾಸ್ ಕದಿತ್ತಿರಾ ಅದಕ್ಕೆ ಬೈಯ್ತಾರೆ ಅಂತಾರೆ. ಇಲ್ಲ ನಾನು ನನ್ನ ಪಾಡಿಗೆ ಆಟ ಆಡ್ತಿದ್ದೀನಿ. ನನಗೆ ಯಾರಾದರೂ ಬೈದರೆ ನನಗೆ ಅರ್ಥನೇ ಆಗುವುದಿಲ್ಲ. ಯಾಕ್ ಬೈಬೇಕು? ನನ್ನ ಪಾಡಿಗೆ ನಾನು ಇದ್ದೇನೆ ಎಂದು ಕ್ಯೂಟ್ ಕ್ಯೂಟ್ ಆಗಿ ಸಣ್ಣ ಮಕ್ಕಳಂತೆ ಶುಭಾ.. ವೈಷ್ಣವಿ ಜೊತೆ ಮಾತನಾಡಿದ್ದಾರೆ.

    ಒಟ್ಟಾರೆ ಮಗುವಿನಂತೆ ಮನಸ್ಸು ಹೊಂದಿರುವ ಶುಭಾ, ನಿಜವಾಗಿಯೂ ಮಗುವಿನಂತೆ ಮುದ್ದು-ಮುದ್ದಾಗಿ ಮಾತನಾಡಿರುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ ಎಂದರೆ ತಪ್ಪಾಗಲಾರದು.

  • ಚಾಕಲೇಟ್ ಮೂಲಕ ‘ಶುಭ’ ಆರಂಭಿಸಿದ ಜಾತ್ರೆ ಟೀಂ!

    ಚಾಕಲೇಟ್ ಮೂಲಕ ‘ಶುಭ’ ಆರಂಭಿಸಿದ ಜಾತ್ರೆ ಟೀಂ!

    ನಿನ್ನೆ ಬಿಗ್‍ಬಾಸ್, ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಭಜಿಸಿ ಇಬ್ಬರನ್ನು ನಾಯಕರಾಗಿ ಸುಚಿಸುವಂತೆ ಕ್ಯಾಪ್ಟನ್ ವಿಶ್ವನಾಥ್‍ಗೆ ಸೂಚಿಸಿದರು. ಅದರಂತೆ ವಿಶ್ವನಾಥ್ ದಿವ್ಯಾ ಉರುಡುಗ ಹಾಗೂ ಶುಭರನ್ನು ನಾಯಕರಾಗಿ ಆಯ್ಕೆ ಮಾಡಿದರು.

    ನಂತರ ದಿವ್ಯಾ ಉರುಡುಗ ತನ್ನ ತಂಡಕ್ಕೆ ಅರವಿಂದ್, ರಾಜೀವ್, ದಿವ್ಯಾ ಸುರೇಶ್, ಶಮಂತ್, ಶಂಕರ್‍ರನ್ನು ಆಯ್ಕೆ ಮಾಡಿಕೊಂಡು ತಂಡಕ್ಕೆ ‘ಅನುಬಂಧ’ ಎಂದು ಹೆಸರಿಟ್ಟರೆ, ಶುಭ ಪೂಂಜಾ, ಮಂಜು, ನಿಧಿ, ಪ್ರಶಾಂತ್, ವೈಷ್ಣವಿ, ರಘುರನ್ನು ಸೇರಿಸಿಕೊಂಡು ತಂಡಕ್ಕೆ ‘ಜಾತ್ರೆ’ ಎಂದು ಹೆಸರಿಡುತ್ತಾರೆ.

    ಬಳಿಕ ಎರಡು ತಂಡಕ್ಕೆ ಬಿಗ್‍ಬಾಸ್, ಗುಂಪು ಚಟುವಟಿಕೆಯನ್ನು ನೀಡುತ್ತಾರೆ. ಗಾರ್ಡನ್ ಏರಿಯದಲ್ಲಿ ಬಲೂನ್‍ಗಳನ್ನು ಇರಿಸಲಾಗಿದ್ದು, ಸದಸ್ಯರು ಬಲೂನ್‍ಗಳ ಮೇಲೆ ಕುಳಿತು ಹೊಡೆದು ಹಾಕಬೇಕು. ಆಗ ಬಲೂನ್‍ನಲ್ಲಿದ್ದ ಬೆಳ್ಳಿ ಹಾಗೂ ಚಿನ್ನದ ಚೀಟಿಗಳನ್ನು ಯಾವ ತಂಡ ಹೆಚ್ಚಾಗಿ ಸಂಗ್ರಹಿಸಿರುತ್ತಾರೋ ಅವರು ವಿಜೇತರಾಗಿರುತ್ತಾರೆ ಹಾಗೂ ಗೆದ್ದ ತಂಡಕ್ಕೆ ಬಹುಮಾನವಾಗಿ ಚಾಕಲೇಟ್ ನೀಡುವುದಾಗಿ ತಿಳಿಸಿರುತ್ತಾರೆ.

    ಅದರಂತೆ ಚಾಕಲೇಟ್ ತಿನ್ನುವ ಆಸೆಯಿಂದ ರೊಚ್ಚಿಗೆದ್ದ ಮನೆಮಂದಿ, ಒಂದು ಬಲೂನ್‍ನನ್ನು ಬಿಡದಂತೆ ಕುಳಿತು ಹೊಡೆದು ಹಾಕಿ ಚಿನ್ನದ ಹಾಗೂ ಬೆಳ್ಳಿಯ ಚೀಟಿಗಳನ್ನು ಸಂಗ್ರಹಿಸುತ್ತಾರೆ. ಈ ಟಾಸ್ಕ್‍ನಲ್ಲಿ ಶುಭ ಪೂಂಜಾರ ಜಾತ್ರೆ ಗ್ಯಾಂಗ್ 29 ಬಂಗಾರದ ಚೀಟಿಗಳನ್ನು ಸಂಗ್ರಹಿಸುವ ಮೂಲಕ ವಿಜೇತರಾಗುತ್ತಾರೆ. ಬಳಿಕ ಬಿಗ್‍ಬಾಸ್ ಜಾತ್ರೆ ತಂಡಕ್ಕೆ ಚಾಕಲೇಟ್ ಕಳುಹಿಸಿಕೊಡುತ್ತಾರೆ.

    ನಂತರ ಜಾತ್ರೆ ತಂಡದವರು ಎದುರಾಳಿ ತಂಡದವರಿಗೆ ಅಣುಕಿಸುತ್ತಾ ಚಾಕಲೇಟ್‍ನನ್ನು ಸವಿದು ಆನಂದಿಸುತ್ತಾರೆ. ಒಟ್ಟಾರೆ ಈ ವಾರದ ಟಾಸ್ಕ್ ಆರಂಭವಾಗುತ್ತಿದ್ದಂತೆಯೇ ಜಾತ್ರೆ ತಂಡ ಸಿಹಿ ತಿನ್ನುವ ಮೂಲಕ ನ್ಯೂ ಗೇಮ್ ಸ್ಟಾರ್ಟ್ ಮಾಡಿದ್ದಾರೆ. ಆದರೆ ಮುಂದೆ ಹೇಗೆ ಆಟ ಆಡುತ್ತಾರೆ ಎಂದು ಕಾದು ನೋಡಬೇಕಾಗಿದೆ.

  • ಅರವಿಂದ್ ದಿವ್ಯಾ ಮದುವೆಗೆ ಸೇತುವೆ ಆಗ್ತಾರಾ ಶುಭಾ!

    ಅರವಿಂದ್ ದಿವ್ಯಾ ಮದುವೆಗೆ ಸೇತುವೆ ಆಗ್ತಾರಾ ಶುಭಾ!

    ಬಿಗ್‍ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ ಆರಂಭವಾದಾಗ ಹೆಚ್ಚು ಸುದ್ದಿ ಮಾಡಿದ ಜೋಡಿ ಅಂದ್ರೆ ಅರವಿಂದ್ ಹಾಗೂ ದಿವ್ಯಾ ಉರುಡುಗ. ಇವರಿಬ್ಬರ ನಡುವಿನ ಆಲೋಚನೆ, ಹೊಂದಾಣಿಕೆ, ಪ್ರೀತಿ ಎಲ್ಲವನ್ನು ನೋಡಿ ದೊಡ್ಮನೆ ಮಂದಿ ಇವರಿಬ್ಬರ ನಡುವೆ ಏನೋ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದರು.

    ಆದರೆ ನಿನ್ನೆ ಶುಭ ಪೂಂಜಾ ದಿವ್ಯಾ ಬಗ್ಗೆ ಅರವಿಂದ್ ಜೊತೆ ಕುಳಿತು ಮಾತನಾಡಿದ್ದಾರೆ. ಈ ವೇಳೆ ಅರವಿಂದ್ ದಿವ್ಯಾ ಬಗ್ಗೆ ತಮ್ಮ ಅಭಿಪ್ರಾಯವನ್ನ ನೇರವಾಗಿ ಶುಭ ಜೊತೆ ಹಂಚಿಕೊಂಡಿದ್ದಾರೆ. ನಿನ್ನೆ ದಿವ್ಯಾ ಉರುಡಗಗೆ ಅರವಿಂದ್‍ನನ್ನು ಮದುವೆ ಆಗ್ತೀನಿ ಅಂದರೆ ನಿಮ್ಮ ಮನೆಯಲ್ಲಿ ಒಪ್ಪಿಕೊಳ್ಳುತ್ತಾರಾ ಎಂದು ಕೇಳಿದ್ದೆ. ಇದಕ್ಕೆ ದಿವ್ಯಾ ಹಾಗೇನಾದರೂ ನಾನು ನಿಜವಾಗಿಯೂ ಇಷ್ಟಪಡುತ್ತಿದ್ದೇನೆ ಅಂದ್ರೆ ನಮ್ಮ ಮನೆಯಲ್ಲಿ ಯಾವುದೇ ಅಭ್ಯಂತರವಿರುವುದಿಲ್ಲ. ಈ ಬಗ್ಗೆ ಮೊದಲಿಗೆ ಅರವಿಂದ್ ಅಭಿಪ್ರಾಯ ಕೇಳಿ ಎಂದು ಹೇಳಿದ್ದಾಳೆ ಎಂದು ಶುಭ ಅರವಿಂದ್‍ಗೆ ಹೇಳುತ್ತಾರೆ.

    ಬಳಿಕ ಶುಭ, ನಾನು ನಿನ್ನನ್ನು ಇದೇ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ನಿಮ್ಮ ಮನೆಯಲ್ಲಿ ದಿವ್ಯಾ ಉರುಡಗರನ್ನು ಮದುವೆಯಾಗ್ತೀನಿ ಎಂದರೆ ಒಪ್ಪಿಕೊಳ್ಳುತ್ತಾರಾ ಎಂದು ಅರವಿಂದ್‍ಗೆ ಕೇಳುತ್ತಾರೆ. ಆಗ ಅರವಿಂದ್ ನಮ್ಮ ಮನೆಯಲ್ಲಿ ನಾನು ಇಷ್ಟಪಡುವುದನ್ನೇ ಅವರು ಬಯಸುತ್ತಾರೆ ಒಪ್ಪಿಕೊಳ್ಳುತ್ತಾರೆ. ನಿನ್ನೆ ಪ್ರಶಾಂತ್ ಅವರು ಕೂಡ ಕೇಳಿದಾಗ, ಹೌದು ಇಲ್ಲಿ ಇರುವವರಲ್ಲಿ ನನಗೆ ಹೊಂದಿಕೊಳ್ಳುವವರು ಎಂದರೆ ದಿವ್ಯಾ, ಇಲ್ಲಿರುವವರಲ್ಲಿ ನಾನು ಬಹಳ ಇಷ್ಟ ಪಡುವ ವ್ಯಕ್ತಿಯೂ ದಿವ್ಯಾ. ಅವಳು ಮಾಡುವ ಕೆಲಸ, ಅವಳು ಇರುವ ರೀತಿ ಎಲ್ಲವೂ ಸರಿಯಾಗಿದೆ. ಅವಳು ನೋಡಲು ಕ್ಯೂಟ್ ಆಗಿ ಕೂಡ ಇದ್ದಾಳೆ. ಮುಂದಿನ ಬಗ್ಗೆ ನಾನು ಇಲ್ಲಿ ಮಾತನಾಡಲು ಆಗುವುದಿಲ್ಲ. ಒಬ್ಬರು ಹೇಗೆ ಏನು ಎಂದು 25 ದಿನಗಳಲ್ಲಿ ನಿರ್ಧರಿಸಲು ಆಗುವುದಿಲ್ಲ. ಹಾಗಾಗಿ ಈಗಲೇ ಅದರ ಬಗ್ಗೆ ಮಾಡನಾಡುವುದು ತಪ್ಪು ಎಂದು ಹೇಳುತ್ತಾರೆ.

    ನಂತರ ಶುಭ ಬಿಗ್‍ಬಾಸ್ ಮನೆಯೊಳಗೆ ಇದ್ದು ನಿಜವಾಗಿಯೂ ನೀವಿಬ್ಬರು ಒಬ್ಬರಿಗೊಬ್ಬರು ಇಷ್ಟಪಟ್ಟರೆ ಹೊರಗಡೆ ಹೋಗಿ ಕೂಡ ನಾಲ್ಕು ತಿಂಗಳು ಸಮಯ ಕಳೆಯಿರಿ. ನಂತರ ನಿಮ್ಮಿಬ್ಬರಿಗೂ ಒಪ್ಪಿಗೆ ಇದ್ದರೆ ಮುಂದುವರೆಸಿಕೊಂಡು ಹೋಗಿ ಎಂದು ಟಿಪ್ಸ್ ನೀಡುತ್ತಾರೆ. ಒಟ್ಟಾರೆ ಬಿಗ್‍ಬಾಸ್ ಮನೆಯಲ್ಲಿ ಸೈಲೆಂಟ್ ಆಗಿ ಅರವಿಂದ್ ದಿವ್ಯಾ ಲವ್‍ಸ್ಟೋರಿ ನಡಿತಿದೆ ಎಂದರೆ ತಪ್ಪಾಗಲಾರದು.