Tag: ಶಿವರಾತ್ರಿ

  • ಸ್ಮಶಾನಕ್ಕೆ ಹೋಗಿ ಪೂರ್ವಜರ ಅಸ್ಥಿಪಂಜರ ತಿಂತಾರೆ ಮಕ್ಕಳು, ಮೊಮ್ಮಕ್ಕಳು- ಕೋಲಾರದ ಗಡಿಯಲ್ಲಿ ವಿಚಿತ್ರ ಆಚರಣೆ

    ಸ್ಮಶಾನಕ್ಕೆ ಹೋಗಿ ಪೂರ್ವಜರ ಅಸ್ಥಿಪಂಜರ ತಿಂತಾರೆ ಮಕ್ಕಳು, ಮೊಮ್ಮಕ್ಕಳು- ಕೋಲಾರದ ಗಡಿಯಲ್ಲಿ ವಿಚಿತ್ರ ಆಚರಣೆ

    ಕೋಲಾರ: ಇದು ಜನ ಮರಳೋ ಜಾತ್ರೆ ಮರಳೋ ಗೊತ್ತಿಲ್ಲ. ಮಕ್ಕಳು, ಮರಿ ಮಕ್ಕಳು ಸ್ಮಶಾನಕ್ಕೆ ತೆರಳಿ ಪೂರ್ವಜರ ಅಸ್ಥಿಪಂಜರ ತಿನ್ನುವ ವಿಚಿತ್ರ ಆಚರಣೆ ಕೋಲಾರ ಜಿಲ್ಲೆಯ ಗಡಿಯಲ್ಲಿ ನಡೀತಿದೆ.

    ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆ ದಿನ ಗಡಿಯಲ್ಲಿ ಈ ಆಚರಣೆ ನಡೀತಿದೆ. ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಕೊಲ್ಲಂ ಗ್ರಾಮದಲ್ಲಿ ಅಮವಾಸ್ಯೆ ದಿನ ಕುಟುಂಬಸ್ಥರೆಲ್ಲ ತೆರಳಿ ಪೂರ್ವಜರ ಸಮಾಧಿಗೆ ಪೂಜೆ ಸಲ್ಲಿಸಿ, ನಂತರ ಸಮಾಧಿಯಲ್ಲಿರುವ ಹಿರಿಯರ ಅಸ್ಥಿಪಂಜರ ತೆಗೆದು ಮೂಳೆ ಬುರಡೆ ತಿನ್ನುತ್ತಾರೆ.

    ಯಾವುದೇ ದುಷ್ಟ ಶಕ್ತಿಗಳು ಬರದಂತೆ ಹಾಗೂ ಹಿರಿಯರು ಸದಾ ಕಾಪಾಡುತ್ತಾರೆ ಎಂಬುದು ಇವರ ನಂಬಿಕೆಯಾಗಿದ್ದು, ಪ್ರತಿವರ್ಷ ನಡೆಯುವ ಒಂದು ವಿಶಿಷ್ಟ ಜಾತ್ರೆಯಲ್ಲಿ ಹೀಗೊಂದು ಆಚರಣೆ ಮಾಡ್ತಿದ್ದಾರೆ.

     

  • ಡ್ರೋನ್‍ನಲ್ಲಿ ಮಲೆ ಮಹದೇಶ್ವರ ಜಾತ್ರಾ ವೈಭವ ವೀಕ್ಷಿಸಿ

    ಡ್ರೋನ್‍ನಲ್ಲಿ ಮಲೆ ಮಹದೇಶ್ವರ ಜಾತ್ರಾ ವೈಭವ ವೀಕ್ಷಿಸಿ

    ಚಾಮರಾಜನಗರ: ಕೊಳ್ಳೆಗಾಲ ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ವೈಭವದ ಶಿವರಾತ್ರಿ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಜರುಗಿತು.

    ರಾಜ್ಯದ ನಾನಾ ಭಾಗಗಳಿಂದ ಭಕ್ತ ಸಮೂಹವೇ ಹರಿದು ಬಂದಿತ್ತು. ‘ಉಘೇ ಮಾದಪ್ಪ ಉಘೇ ಮಾದಪ್ಪ’ ಎಂಬ ಉದ್ಗೋಷವನ್ನು ಹೇಳುತ್ತಾ ಭಕ್ತರು ದೇವರ ಜಾತ್ರೆಯಲ್ಲಿ ಭಾಗವಹಿಸಿದ್ದರು.

    ಜಾತ್ರೆಯ ಸಂಭ್ರಮ ಸಡಗರವನ್ನು ಡ್ರೋನ್ ಕ್ಯಾಮರಾ ದಲ್ಲಿ ಸೆರೆಹಿಡಿಯಲಾಗಿದೆ. ಮಲೆ ಮಹದೇಶ್ವರ ಬೆಟ್ಟದ ರಾತ್ರಿ ಮತ್ತು ಹಗಲಿನಲ್ಲಿ ಜಾತ್ರೆಯ ಸೌಂದರ್ಯ ಹೇಗಿರುತ್ತದೆ ಎನ್ನುವುದನ್ನು ನೀವೇ ನೋಡಿ.

    https://www.youtube.com/watch?v=Hpcx0MtV_sk

  • ಮಂಡ್ಯದ ಈ ಹಳ್ಳಿಯ ಜನ ಶಿವರಾತ್ರಿಯಂದು ನೀರಿಗಾಗಿ ಜಾಗರಣೆ ಮಾಡಿದ್ರು!

    ಮಂಡ್ಯದ ಈ ಹಳ್ಳಿಯ ಜನ ಶಿವರಾತ್ರಿಯಂದು ನೀರಿಗಾಗಿ ಜಾಗರಣೆ ಮಾಡಿದ್ರು!

    ಮಂಡ್ಯ: ಶಿವರಾತ್ರಿ ಹಬ್ಬದಂದು ರಾತ್ರಿ ಎಲ್ಲರೂ ಶಿವನ ದೇವಾಲಯದ ಮುಂದೆ ಜಾಗರಣೆ ಮಾಡೋದನ್ನ ನೀವು ಕೇಳಿರ್ತೀರಿ. ಆದ್ರೆ ಮಂಡ್ಯದ ಹಳ್ಳಿಯೊಂದರ ಜನ ಮಾತ್ರ ಬೋರ್‍ವೆಲ್ ಲಾರಿ ಮುಂದೆ ಕುಳಿತು ಜಾಗರಣೆ ಮಾಡಿದ್ದಾರೆ.

    ಹೌದು. ಮಂಡ್ಯ ತಾಲೂಕಿನ ಗುಡಿಗೇನಹಳ್ಳಿ ಗ್ರಾಮಸ್ಥರಿಗೆ ಕುಡಿಯೋಕೆ ನೀರಿಲ್ಲ. ಹೀಗಾಗಿ ಹೊಸ ಬೋರ್ ಕೊರೆಯೋವರೆಗೂ ನಾವು ಜಾಗರಣೆ ಮಾಡ್ತೀವಿ ಅಂತಾ ಗ್ರಾಮಸ್ಥರು ಮಕ್ಕಳ ಸಮೇತ ಪ್ರತಿಭಟನೆ ಮಾಡಿದ್ರು.

    ನೀರಿಲ್ಲದ ಕೊಳವೆ ಬಾವಿಯನ್ನ ಈ ಹಿಂದೆ ಎಷ್ಟು ಅಡಿ ಆಳ ಇತ್ತೋ ಅಷ್ಟೇ ಅಡಿ ಆಳಕ್ಕೆ ಮತ್ತೆ ಕೊರೆಸಿದ್ರೆ ಪ್ರಯೋಜನವಾದ್ರೂ ಏನು. ರೀ ಬೋರ್ ಅನ್ನೋದು ಅಧಿಕಾರಿಗಳ ಹಣ ದೋಚುವ ತಂತ್ರ ಇದಾಗಿದೆ. ನೀರಿಲ್ಲದ ಕಡೆ ಬೋರ್‍ವೆಲ್ ಕೊರೆದು ಅಧಿಕಾರಿಗಳು ಹಣ ದೋಚುತ್ತಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ರು. ಸಿದ್ದರಾಮಯ್ಯ ಸರ್ಕಾರ ಬಂದ ನಂತರ ನಮ್ಮ ಬದುಕೇ ಹಾಳಾಗಿದೆ ಅಂತಾ ಸಿಟ್ಟು ಹೊರಹಾಕಿದ್ರು.

    ಒಟ್ಟಿನಲ್ಲಿ ಈ ಗ್ರಾಮದಲ್ಲಿ ನೀರಿಲ್ಲದೇ 15 ದಿನಗಳೇ ಕಳೆದಿವೆ. ಈ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಹೇಳಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇದೆಲ್ಲ ದಪ್ಪ ಚರ್ಮದ ರಾಜಕಾರಣಿಗಳಿಗೆ ಯಾವಾಗ ಅರ್ಥ ಆಗುತ್ತೋ ತಿಳಿಯದು ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.