Tag: ಶಿಕ್ಷಕ

  • ಕುಡಿಯಲು ನೀರು ಕೇಳಿದ್ರೆ ಎಣ್ಣೆ ಕೊಟ್ರು ಮೇಷ್ಟ್ರು- ವಾಂತಿ ಮಾಡಿ ಸುಸ್ತಾದ ಹೈಸ್ಕೂಲ್ ಮಕ್ಕಳು

    ಕುಡಿಯಲು ನೀರು ಕೇಳಿದ್ರೆ ಎಣ್ಣೆ ಕೊಟ್ರು ಮೇಷ್ಟ್ರು- ವಾಂತಿ ಮಾಡಿ ಸುಸ್ತಾದ ಹೈಸ್ಕೂಲ್ ಮಕ್ಕಳು

    ತುಮಕೂರು: ಶಾಲಾ ಮಕ್ಕಳು ಕುಡಿಯಲು ನೀರು ಕೇಳಿದರೆ ಮದ್ಯವನ್ನ ನೀಡಿ, ಅವರಿಗೂ ಮದ್ಯಪಾನ ಮಾಡಿಸಿರುವ ಗಂಭೀರ ಆರೋಪವೊಂದು ಶಾಲಾ ಶಿಕ್ಷಕರ ಮೇಲೆ ಕೇಳಿಬಂದಿದೆ.

    ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೊಮ್ಮಲದೇವಿಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮೂವರು ಶಿಕ್ಷಕರ ಮೇಲೆ ಈ ಆರೋಪ ಕೇಳಿ ಬಂದಿದೆ. ಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ಶೈಕ್ಷಣಿಕ ಪ್ರವಾಸ ಹೋಗಿದ್ದರು. ಇದೇ ವೇಳೆ ಪ್ರವಾಸ ಮುಗಿಸಿಕೊಂಡು ಭಾನುವಾರ ರಾತ್ರಿ ವಾಪಸ್ಸಾಗುವಾಗ ಮಕ್ಕಳು ಮನೋರಂಜನೆಗಾಗಿ ಬಸ್ ನಲ್ಲಿ ಡ್ಯಾನ್ಸ್ ಮಾಡಿದ್ದರು. ಈ ಸಂದರ್ಭದಲ್ಲಿ ದಣಿದಿದ್ದ 9 ಹಾಗೂ 10ನೇ ತರಗತಿಯ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಶಿಕ್ಷಕರ ಬಳಿ ಕುಡಿಯಲು ನೀರು ಕೇಳಿದ್ದಾರೆ. ಪ್ರವಾಸದುದ್ದಕ್ಕೂ ಮದ್ಯ ಸೇವಿಸಿ, ಮದ್ಯದೊಂದಿಗೆ ಬೆರಸಿದ್ದ ನೀರಿನ ಬಾಟಲಿಯನ್ನು ಬಸ್ ನಲ್ಲಿ ಇಟ್ಟುಕೊಂಡಿದ್ದ ಶಿಕ್ಷಕರು ಅದೇ ಬಾಟಲಿಯನ್ನು ನೀರು ಎಂದು ಮಕ್ಕಳಿಗೆ ಕೊಟ್ಟು ಕುಡಿಸಿದ್ದಾರೆ ಎಂದು ಶಾಲಾ ಮಕ್ಕಳು ಆರೋಪಿಸಿದ್ದಾರೆ.

    ಮುಖ್ಯಶಿಕ್ಷಕ ಸಚ್ಚಿದಾನಂದ್, ಸಹಶಿಕ್ಷಕರಾದ ಶೇಕ್ ಮುಜಾಮಿಲ್ ಹಾಗೂ ರಾಥೋಡ್ ಎನ್ನುವವರ ಮೇಲೆ ಈ ಆರೋಪ ಕೇಳಿಬಂದಿದೆ. ಧರ್ಮಸ್ಥಳ, ಹೊರನಾಡು ಹಾಗೂ ದಕ್ಷಿಣಕನ್ನಡದ ಕೆಲವೆಡೆ ಪ್ರವಾಸ ತೆರಳಿದ್ದು, ಪ್ರವಾಸದಿಂದ ವಾಪಸ್ಸಾಗುವ ಮಾರ್ಗ ಮಧ್ಯೆ ಹಾಸನದ ಬೇಲೂರು ಬಳಿ ಟೀ ಕುಡಿಯಲು ಬಸ್ ನಿಲ್ಲಿಸಿದ್ದ ವೇಳೆ ಮದ್ಯ ತುಂಬಿದ್ದ ನೀರಿನ ಬಾಯಲಿಯನ್ನು ಶಿಕ್ಷಕರು ಮಕ್ಕಳಿಗೆ ಕುಡಿಯಲು ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

    ಇದೇ ವೇಳೆ ಕೆಲ ವಿದ್ಯಾರ್ಥಿಗಳು ಜ್ಞಾನ ತಪ್ಪಿದ್ದು, ನಿದ್ರೆಗೆ ಜಾರಿದ್ದಾರೆ. ಇನ್ನೂ ಕೆಲವರು ವಾಂತಿ ಮಾಡಿಕೊಂಡು ಸುಸ್ತಾಗಿದ್ದಾರೆ. ಮಕ್ಕಳು ಇಷ್ಟೆಲ್ಲಾ ಹೇಳಿದರೂ ನಾವು ಯಾವ ತಪ್ಪು ಮಾಡಿಲ್ಲ. ಬೇಕಿದ್ದರೆ ದೇವರ ಮೇಲೆ ಪ್ರಮಾಣ ಮಾಡುತ್ತೀವಿ ಎಂದು ಶಿಕ್ಷಕ ಶೇಕ್ ಮುಜಾಮಿಲ್ ಪ್ರತಿಕ್ರಿಯೆ ನೀಡಿದ್ದಾರೆ. ವಿಷಯ ತಿಳಿದ ಪೋಷಕರು ಶಾಲೆಯ ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿ ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    +

  • ಪಾಠ ಮಾಡೋದು ಬಿಟ್ಟು ಪೋಲಿ ಕೆಲ್ಸ – ವಿದ್ಯಾರ್ಥಿಗಳಿಗೆ ಬ್ಲೂ ಫಿಲ್ಮ್ ತೋರಿಸಿದ ಶಿಕ್ಷಕನಿಗೆ ಬಿತ್ತು ಗೂಸಾ

    ಪಾಠ ಮಾಡೋದು ಬಿಟ್ಟು ಪೋಲಿ ಕೆಲ್ಸ – ವಿದ್ಯಾರ್ಥಿಗಳಿಗೆ ಬ್ಲೂ ಫಿಲ್ಮ್ ತೋರಿಸಿದ ಶಿಕ್ಷಕನಿಗೆ ಬಿತ್ತು ಗೂಸಾ

    ತುಮಕೂರು: ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಅಶ್ಲೀಲ ದೃಶ್ಯಗಳನ್ನು ತೋರಿಸಿ ವಿಕೃತಿ ಮೆರೆದ ಕಾಮುಕ ಶಿಕ್ಷಕನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಇಲ್ಲಿನ ಕುಣಿಗಲ್ ತಾಲೂಕಿನ ವಡ್ಡರಕುಪ್ಪೆ ಸರ್ಕಾರಿ ಪ್ರಾಥಮಿಕ ಶಾಲೆಯ ಕಾಮುಕ ಶಿಕ್ಷಕನಿಗೆ ಗ್ರಾಮಸ್ಥರು ಪಾಠ ಕಲಿಸಿದ್ದಾರೆ. ಶಿಕ್ಷಕ ದಯಾನಂದ್ ಮಕ್ಕಳಿಗೆ ತನ್ನ ಮೊಬೈಲ್ ನಲ್ಲಿದ್ದ ಅಶ್ಲೀಲ ದೃಶ್ಯಗಳನ್ನು ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ವಿಚಾರವನ್ನು ಮಕ್ಕಳು ಶಾಲೆಯ ಇತರೆ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ತಮ್ಮ ಪೋಷಕರಿಗೂ ಮೆಷ್ಟ್ರು ದಯಾನಂದ್ ನ ಕಿರುಕುಳದ ಬಗ್ಗೆ ದೂರು ಹೇಳಿದ್ದಾರೆ.

    ಇಂದು ಬೆಳಗ್ಗೆ ಶಾಲೆಗೆ ಆಗಮಿಸಿದ ಪೋಷಕರು ಶಿಕ್ಷಕ ದಯಾನಂದ್ ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡು ಚೆನ್ನಾಗಿ ಬುದ್ಧಿ ಹೇಳಿದ್ರು. ಇಷ್ಟಾದ್ರೂ ತನ್ನ ತಪ್ಪು ಒಪ್ಪಿಕೊಳ್ಳದೆ ಭಂಡಾಟ ತೋರಿದ ಶಿಕ್ಷಕನಿಗೆ ಒಂದೆರಡು ಗೂಸಾ ಕೊಟ್ಟು ಕುಣಿಗಲ್ ಪೊಲೀಸರಿಗೆ ಒಪ್ಪಿಸಿದರು.

    ಇದನ್ನೂ ಓದಿ: ವಿದ್ಯಾರ್ಥಿ ಜೊತೆ ಕ್ಯಾಂಡಲ್ ಲೈಟ್ ಸೆಕ್ಸ್ ಗೆ ಸಿದ್ಧತೆ ನಡೆಸ್ತಿದ್ದ ಶಿಕ್ಷಕಿ ಅರೆಸ್ಟ್

  • ಆಧಾರ್ ಮಾಹಿತಿ ನೀಡದ್ದಕ್ಕೆ ಬಾಲಕನಿಗೆ ಶಿಕ್ಷಕರಿಂದ ಹಿಗ್ಗಾಮುಗ್ಗ ಥಳಿತ, ಸರ್ಜರಿಯೇ ಮಾಡಿಸಬೇಕಾಯ್ತು

    ಆಧಾರ್ ಮಾಹಿತಿ ನೀಡದ್ದಕ್ಕೆ ಬಾಲಕನಿಗೆ ಶಿಕ್ಷಕರಿಂದ ಹಿಗ್ಗಾಮುಗ್ಗ ಥಳಿತ, ಸರ್ಜರಿಯೇ ಮಾಡಿಸಬೇಕಾಯ್ತು

    ಪುಣೆ: ಶಾಲೆಯಲ್ಲಿ ಆಧಾರ್ ಕಾರ್ಡ್ ಮಾಹಿತಿ ನೀಡದ್ದಕ್ಕೆ 10 ವರ್ಷದ ಬಾಲಕನನ್ನು ಶಿಕ್ಷಕರು ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಪುಣೆಯಲ್ಲಿ ನಡೆದಿದೆ. ಥಳಿತದ ಪರಿಣಾಮ ಬಾಲಕನಿಗೆ ಮೊಣಕಾಲಿನಲ್ಲಿ ಗಂಭೀರ ಗಾಯವಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ.

    ಇಲ್ಲಿನ ಚಿಂಚವಾಡ ಪ್ರದೇಶದ ಮೋರ್ಯ ಶಿಕ್ಷಣ್ ಸಂಸ್ಥಾದಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದು ವಾರಗಳೇ ಕಳೆದಿದ್ದು, ಬಾಲಕನ ಪೋಷಕರು ಚಿಂಚವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಬೆಳಕಿಗೆ ಬಂದಿದೆ. ಪೊಲೀಸರು ಬಾಲ ನ್ಯಾಯ ಕಾಯ್ದೆಯಡಿ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಶಿಕ್ಷಕರು ನಮ್ಮ ಮಗನಿಗೆ ಆಧಾರ್ ಕಾರ್ಡ್ ಮಾಹಿತಿ ಕೇಳಿದ್ದು ಯಾಕೆ ಎಂಬುದು ಇನ್ನೂ ಗೊತ್ತಾಗಿಲ್ಲ ಎಂದು ಪೋಷಕರು ಹೇಳಿದ್ದಾರೆ.

    ನನಗೆ ಗೊತ್ತಿರೋ ಪ್ರಕಾರ, ಪೋಷಕರಿಗೆ ಸಕ್ರ್ಯೂಲರ್ ಮತ್ತು ಇತರೆ ಮಾಹಿತಿಯನ್ನ ಕಳಿಸಲು ಶಾಲೆ ಮೊಬೈಲ್ ಆ್ಯಪ್‍ವೊಂದನ್ನು ತಯಾರಿಸಲು ಯೋಚಿಸುತ್ತಿದೆ. ಅದಕ್ಕಾಗಿ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಮಾಹಿತಿ ಕೇಳಿರಬಹುದು. ಆದ್ರೆ ಅದ್ಕಕಾಗಿ ನಮ್ಮ ಮಗನಿಗೆ ಈ ರೀತಿ ಥಳಿಸುವ ಅಗತ್ಯವಿರಲಿಲ್ಲ ಎಂದು ಬಾಲಕನ ತಾಯಿ ಸಂಗೀತಾ ಹೇಳಿದ್ದಾರೆ.

    ಬಾಲಕನನ್ನು ಅಕ್ಟೋಬರ್ 6 ರಿಂದ ಅಕ್ಟೋಬರ್ 15ರವರೆಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಶಿಕ್ಷಕರಿಂದ ಥಳಿತಕ್ಕೊಳಗಾದ ನಂತರ ಆತ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು. ಘಟನೆಯ ಬಗ್ಗೆ ನಮಗೆ ಹೇಳಲು ಆತ ಭಯಗೊಂಡಿದ್ದ. ನಡೆದಾಡಲು ಕಷ್ಟಪಡುತ್ತಿದ್ದ. ಆಗ ಚಿಕಿತ್ಸೆಗಾಗಿ ವೈದ್ಯರ ಬಳಿ ಕರೆದುಕೊಂಡು ಹೋದೆವು. ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ ನಂತರವಷ್ಟೇ ನಡೆದ ಘಟನೆಯನ್ನು ವಿವರಿಸಿದ. ನಮಗೆ ಇದರಿಂದ ಶಾಕ್ ಆಯ್ತು ಎಂದು ಅವರು ಹೇಳಿದ್ದಾರೆ.

    ಬಾಲಕನನ್ನು ಡಿಸ್ಚಾರ್ಜ್ ಮಾಡಿಸಿದ ನಂತರ ಪೋಷಕರು ಪೊಲೀಸರ ಮೊರೆ ಹೋಗಿದ್ದು, ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಶಿಕ್ಷಕರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಇದನ್ನೂ ಓದಿ: ಗ್ರಾಮದ 800 ಜನರ ಆಧಾರ್ ಕಾರ್ಡ್‍ನಲ್ಲೂ ಒಂದೇ ಜನ್ಮ ದಿನಾಂಕ 

  • ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಸಾರ್ವಜನಿಕರಿಂದಲೇ ಧರ್ಮದೇಟು

    ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಸಾರ್ವಜನಿಕರಿಂದಲೇ ಧರ್ಮದೇಟು

    ಧಾರವಾಡ: ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕರೇ ಧರ್ಮದೇಟು ನೀಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಗಣಿತ ಶಿಕ್ಷಕ ಗಂಡು ಮಕ್ಕಳನ್ನು ತರಗತಿಯಿಂದ ಹೊರಗೆ ಕಳುಹಿಸಿ, ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಲ್ಲದೇ ತನ್ನ ಕೃತ್ಯವನ್ನು ಪೋಷಕರಿಗೆ ತಿಳಿಸಿದರೆ ಅವರನ್ನು ಕೊಲೆ ಮಾಡುವುದಾಗಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದು ಬಂದಿದೆ.

    ಶಿಕ್ಷಕ ವಿದ್ಯಾರ್ಥಿನಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಕೃತ್ಯದ ಬಗ್ಗೆ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದರೂ ಪ್ರಯೋಜನ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಂಗೆಟ್ಟ ಪೋಷಕರು ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆದರೆ ಆಡಳಿತ ಮಂಡಳಿ ಅಧ್ಯಕ್ಷರು ಗಂಭೀರವಾಗಿ ಪರಿಗಣಿಸದೇ ಶಿಕ್ಷಕನನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಇದರಿಂದ ರೋಸಿ ಹೋದ ಸಾರ್ವಜನಿಕರು ಇದ್ದಕ್ಕಿದ್ದಂತೆ ಶಾಲೆಗೆ ಬಂದು ಶಿಕ್ಷಕನಿಗೆ ಗೂಸಾ ಕೊಟ್ಟಿದ್ದಾರೆ.

    ಈ ವೇಳೆ ಶಿಕ್ಷಕ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ತನ್ನ ತಪ್ಪಿನ ಕುರಿತು ಶಾಲಾ ಆಡಳಿತ ಮಂಡಳಿಗೆ ಲಿಖಿತ ರೂಪದಲ್ಲಿ ಪತ್ರ ಬರೆದುಕೊಟ್ಟಿದ್ದಾನೆ. ಶಾಲಾ ಆಡಳಿತ ಮಂಡಳಿಯು ಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದೆ.

  • ಕಡಿಮೆ ಅಂಕ ಪಡೆದಿದ್ದಕ್ಕೆ ಬೈದರೆಂದು ಶಿಕ್ಷಕರ ಮೇಲೆಯೇ ಹಲ್ಲೆಗೈದ ವಿದ್ಯಾರ್ಥಿ!

    ಕಡಿಮೆ ಅಂಕ ಪಡೆದಿದ್ದಕ್ಕೆ ಬೈದರೆಂದು ಶಿಕ್ಷಕರ ಮೇಲೆಯೇ ಹಲ್ಲೆಗೈದ ವಿದ್ಯಾರ್ಥಿ!

    ಚಂಡೀಗಢ: 12ನೇ ತರಗತಿ ವಿದ್ಯಾರ್ಥಿಯೊಬ್ಬ ಗಣಿತ ಶಿಕ್ಷಕರ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಹರಿಯಾಣ ರಾಜ್ಯದ ಝಜ್ಜರ್ ಜಿಲ್ಲೆಯ ಬಹದ್ದೂರ್‍ಗಢ ಪಟ್ಟಣದ ಖಾಸಗಿ ಶಾಲೆಯಲ್ಲಿ ನಡೆದಿದೆ.

    ಹಿಮಾಂಶು ಗಾರ್ಗ್ ಎಂಬಾತನೇ ಶಿಕ್ಷಕ ರವೀಂದ್ರ ಅವರ ಮೇಲೆ ಹಲ್ಲೆಗೈದ ವಿದ್ಯಾರ್ಥಿ. ಬಹದ್ದೂರ್‍ಗಢ ಪಟ್ಟಣದ ಹರ್‍ದಯಾಳ್ ಪಬ್ಲಿಕ್ ಸ್ಕೂಲ್ ನಲ್ಲಿ ಈ ಘಟನೆ ನಡೆದಿದೆ. ಹಿಮಾಂಶು ಗಣಿತದಲ್ಲಿ ಕಡಿಮೆ ಅಂಕ ಪಡೆದಿದ್ದನು. ಇದನ್ನು ಶಿಕ್ಷಕ ರವೀಂದ್ರ ಪ್ರಶ್ನಿಸಿದ್ದಾರೆ. ಈ ವೇಳೆ ಸಿಟ್ಟುಗೊಂಡ ವಿದ್ಯಾರ್ಥಿ ಹಿಮಾಂಶು, ರವೀಂದ್ರ ಅವರ ಮೇಲೆ ಹರಿತವಾದ ವಸ್ತುವಿನಿಂದ 10ಕ್ಕೂ ಹೆಚ್ಚು ಬಾರಿ ಕುತ್ತಿಗೆ, ತಲೆ ಮತ್ತು ಮುಖದ ಮೇಲೆಲ್ಲಾ ಹಲ್ಲೆ ಮಾಡಿದ್ದಾನೆ. ಹಿಮಾಂಶು ಶಾಲಾ ಕೊಠಡಿಯಲ್ಲಿಯೇ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದು, ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ವಿಡಿಯೋದಲ್ಲಿ ಏನಿದೆ?
    ಕ್ಲಾಸ್ ರೂಮ್‍ನಲ್ಲಿ ಮುಂದಿನ ಬೆಂಚ್ ನಲ್ಲಿ ಗಣಿತ ಶಿಕ್ಷಕ ರವೀಂದ್ರ ಪೇಪರ್ ಗಳನ್ನು ಚೆಕ್ ಮಾಡುತ್ತಿರುತ್ತಾರೆ. ಹಿಂದುಗಡೆ ಕುಳಿತಿರುವ ಹಿಮಾಂಶು ತನ್ನ ಬ್ಯಾಗ್ ನಿಂದ ಹರಿತವಾದ ವಸ್ತುವಿನಿಂದ ಶಿಕ್ಷಕರ ಮೇಲೆ ಹಲ್ಲೆ ನಡೆಸುತ್ತಾನೆ. ವಿದ್ಯಾರ್ಥಿ ಹಲ್ಲೆ ಮಾಡುತ್ತಾ ಶಾಲೆಯ ಕಾರಿಡರ್ ವರೆಗೂ ಬಂದಿದ್ದಾನೆ. ಕೂಡಲೇ ಇನ್ನೊಬ್ಬ ಶಿಕ್ಷಕರು ಹಿಮಾಂಶುನನ್ನು ತಡೆದಿದ್ದಾರೆ.

    ಕ್ಲಾಸ್ ರೂಮ್‍ನಲ್ಲಿ ಗಣಿತ ವಿಷಯದಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಕ್ಕೆ, ಶಿಕ್ಷಕ ರವೀಂದ್ರ ಎಲ್ಲರ ಮುಂದೆಯೇ ನನ್ನನ್ನು ಅವಮಾನಿಸಿದ್ದರು. ಈ ವೇಳೆ ಶಿಕ್ಷಕರು ನನ್ನ ಪೋಷಕರಿಗೆ ಈ ವಿಷಯವನ್ನು ತಿಳಿಸುವುದಾಗಿ ಅಂತಾ ಹೇಳಿದ್ದರು. ಹೀಗಾಗಿ ಅವರಿಗೆ ಬುದ್ದಿ ಕಲಿಸಲು ಅವರ ಮೇಲೆ ಹಲ್ಲೆ ಮಾಡಿದೆ ಎಂದು ಹಿಮಾಂಶು ಹೇಳಿದ್ದಾನೆ.

    ಈ ಕುರಿತು ಪ್ರತಿಕ್ರಿಯಿಸಿರುವ ಪಾಂಶುಪಾಲರು, ಈ ಬಗ್ಗೆ ಪೇರೆಂಟ್ಸ್ ಮೀಟಿಂಗ್ ಕರೆಯಲಾಗಿದ್ದು, ವಿದ್ಯಾರ್ಥಿಗಳ ಈ ತರಹದ ಭಯಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

    ಹಲ್ಲೆಗೈದ ಹಿಮಾಂಶುನನ್ನು ಮತ್ತು ಆತನಿಗೆ ಹರಿತವಾದ ವಸ್ತುವನ್ನು ನೀಡಿದ್ದ ಆತನ ಗೆಳಯನನ್ನು ಬಂಧಿಸಲಾಗಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕ ರವೀಂದ್ರರನ್ನು ಶಾಲಾ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದ ರವೀಂದ್ರರ ತಲೆಯ ಭಾಗಕ್ಕೆ ತೀವ್ರಪೆಟ್ಟು ಬಿದ್ದಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    https://www.youtube.com/watch?time_continue=27&v=b6BZd2FLq08

     

  • ಸರ್ಕಾರದ ಗಮನಕ್ಕೆ ತರದೆ ಅಧಿಕಾರಿಗಳಿಂದಲೇ ಶಿಕ್ಷಕರ ನಿಯೋಜನೆ!

    ಸರ್ಕಾರದ ಗಮನಕ್ಕೆ ತರದೆ ಅಧಿಕಾರಿಗಳಿಂದಲೇ ಶಿಕ್ಷಕರ ನಿಯೋಜನೆ!

    ಯಾದಗಿರಿ: ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಯನ್ನು ಸರ್ಕಾರ ನಿಲ್ಲಿಸಿದೆ. ಆದ್ರೆ ಸರ್ಕಾರದ ಗಮನಕ್ಕೆ ತರದೆ ಅಧಿಕಾರಿಗಳು, ಶಿಕ್ಷಕರ ಹಂತದಲ್ಲಿ ಶಿಕ್ಷಕರ ನಿಯೋಜನೆ ಪದ್ದತಿಯು ಈಗ ಹುಟ್ಟಿದೆ.

    ಯಾದಗಿರಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗರಿ-ಗರಿ ನೋಟು ಕೋಟ್ರೆ ಎಲ್ಲಿಬೇಕಾದ್ರು ಶಿಕ್ಷಕರನ್ನ ನಿಯೋಜನೆ ಮಾಡ್ತಾರೆ. ಇದಕ್ಕೆ ಸಾಕ್ಷಿ ನೋಡಿ ಮಲ್ಕಪನಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ ರಾಘವೇಂದ್ರ.

    ಯಾದಗಿರಿ ತಾಲೂಕಿನ ಆನೂರ(ಕೆ) ಇಂದ ಮಲ್ಕಪನಳ್ಳಿ ಶಾಲೆಗೆ 12/08/2016ರಲ್ಲಿ ಹೆಚ್ಚುವರಿ ವಿಜ್ಞಾನ ಶಿಕ್ಷಕರಾಗಿ ಬಿಇಓ ನೇಮಕವಾಗಿದ್ದರು. ಆದ್ರೆ, ಕರ್ತವ್ಯಕ್ಕೆ ಬಂದು ಮೂರ್ನಾಲ್ಕು ದಿನಗಳಲ್ಲೇ ರಾಘವೇಂದ್ರ ರಜೆ ಮೇಲೆ ತೆರಳಿದ್ದಾರೆ. ಎರಡು ವರ್ಷದಿಂದ ಯಾವ ಶಾಲೆಗೂ ಹೋಗದ ರಾಘವೇಂದ್ರ, ಅಧಿಕಾರಿಗಳಿಗೆ ಬೆಣ್ಣೆ ಹಚ್ಚಿ ಸಂಬಳವನ್ನ ಮಾತ್ರ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾನೆ.

    ಯಾದಗಿರಿ ನೂತನ ಬಿಇಓ ರುದ್ರಗೌಡ ಬಂದ ಮೇಲೆ ರಾಘವೇಂದ್ರ ಮೂಲ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಲು ಆದೇಶ ನೀಡಿದ್ದಾರೆ. ಆದ್ರೆ ರಾಘವೇಂದ್ರನಿಗೆ ರಾಜಕಿಯ ಬೆಂಬಲವಿದೆ ಅಂತ ಆದೇಶ ಪತ್ರಕ್ಕೆ ಕ್ಯಾರೆ ಎಂದಿಲ್ಲ ಅನ್ನೋ ಆರೋಪ ವ್ಯಕ್ತವಾಗಿದೆ.

  • 30 ವರ್ಷಗಳಿಂದ ಶಿಕ್ಷಕರಿಗೆ ಮಧ್ಯಾಹ್ನ ಉಚಿತ ಬಿಸಿಯೂಟ ನೀಡ್ತಿರೋ ಧಾರವಾಡದ ಅಜ್ಜಿ

    30 ವರ್ಷಗಳಿಂದ ಶಿಕ್ಷಕರಿಗೆ ಮಧ್ಯಾಹ್ನ ಉಚಿತ ಬಿಸಿಯೂಟ ನೀಡ್ತಿರೋ ಧಾರವಾಡದ ಅಜ್ಜಿ

    ಧಾರವಾಡ: 86 ವರ್ಷದ ಅಜ್ಜಿ ಸಾವಮ್ಮ ಕಳೆದ 30 ವರ್ಷಗಳಿಂದ ಉಚಿತವಾಗಿ ತಮ್ಮೂರು ಜಿರ್ಗವಾಡದ ಶಾಲೆಯ ಶಿಕ್ಷಕರಿಗೆ ಪ್ರತಿದಿನ ಉಚಿತವಾಗಿ ಮಧ್ಯಾಹ್ನ ಬಿಸಿಯೂಟ ಕೊಡುತ್ತಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕಬೆಳ್ಳಿಕಟ್ಟಿಯವರಾದ ಸಾವಮ್ಮ ಮದುವೆಯಾದ ಮೇಲೆ ಧಾರವಾಡ ತಾಲೂಕಿನ ಜಿರ್ಗವಾಡ ಗ್ರಾಮಕ್ಕೆ ಬಂದಿದ್ದಾರೆ. ಸದ್ಯ 86 ವರ್ಷ ವಯಸ್ಸಾದರೂ ಉತ್ಸಾಹ ಕಡಿಮೆಯಾಗಿಲ್ಲ. ಶಿಕ್ಷಕರು ಅಂದರೆ ಬಹುವಾಗಿ ಗೌರವಿಸುವ ಸಾವಮ್ಮಜ್ಜಿ ಮೊದಲಿಗೆ ಈ ಶಾಲೆಯ ಶಿಕ್ಷಕರಿಗೆ ಊಟ ಕಳಿಸಿಯೇ ಮುಂದಿನ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ತಾವೇ ಶಾಲೆಗೆ ಹೋಗಿ ಶಿಕ್ಷಕರಿಗೆ ಊಟ ಬಡಿಸಿ ಬರುತ್ತಾರೆ.

    ಶಿಕ್ಷಕರು ಎಂದರೆ ಮಕ್ಕಳು ಎನ್ನುವ ಅಜ್ಜಿ, ತಮ್ಮ ಹೊಲದಲ್ಲಿ ಬೆಳೆದ ಬೆಳೆಯಲ್ಲಿ ಮೊದಲ ಬೆಳೆಯನ್ನ ಶಿಕ್ಷಕರಿಗೆ ನೀಡುತ್ತಾರೆ. ಅಜ್ಜಿ ಬಗ್ಗೆ ಶಾಲೆಯ ಶಿಕ್ಷಕರಿಗೂ ಅಷ್ಟೇ ಗೌರವ. ಮನೆಯಿಂದ ಊಟ ತಂದರೂ ಅಜ್ಜಿಯ ಕೈತುತ್ತು ತಿಂದರೆ ಸಮಾಧಾನ. ಅಜ್ಜಿ ನಿಜಕ್ಕೂ ಅನ್ನಪೂರ್ಣೇಶ್ವರಿ ಅಂತ ಶಾಲೆಯ ಶಿಕ್ಷಕರು ಹೊಗಳುತ್ತಾರೆ.

    ಅಜ್ಜಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಮಗ ನಿಧನರಾಗಿದ್ದಾರೆ. ಮತ್ತೊಬ್ಬ ಮಗ ಕೃಷಿಕರಾಗಿದ್ದಾರೆ. ಮನೆಯಲ್ಲಿ ಪ್ರತಿ ದಿನ ಶಿಕ್ಷಕರಿಗೆ ಅಡುಗೆ ಮಾಡುವ ಸೊಸೆಯಂದಿರೂ ಕೂಡಾ ಯಾವತ್ತೂ ಊಟ ಕಳಿಸೋಕೆ ಬೇಸರ ಮಾಡಿಕೊಂಡಿಲ್ಲ.

     

  • ಗಾಂಧಿ ಜಯಂತಿಯಂದೇ ಕುಡಿದು ನಡುರಸ್ತೆಯಲ್ಲಿ ತೂರಾಡಿದ ಶಿಕ್ಷಕ

    ಗಾಂಧಿ ಜಯಂತಿಯಂದೇ ಕುಡಿದು ನಡುರಸ್ತೆಯಲ್ಲಿ ತೂರಾಡಿದ ಶಿಕ್ಷಕ

    ತುಮಕೂರು: ಗಾಂಧಿ ಜಯಂತಿ ಆಚರಣೆಗೆಂದು ಶಾಲೆಗೆ ಹೊರಟ ಶಿಕ್ಷಕ ಕಂಠ ಪೂರ್ತಿ ಕುಡಿದು ನಡುರಸ್ತೆಯಲ್ಲಿ ತೂರಾಡಿದ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ನಡೆದಿದೆ.

    ಭೂಪುರ ಸರ್ಕಾರಿ ಶಾಲೆಯ ಶಿಕ್ಷಕ ರಾಮಾಂಜಿಪ್ಪ ಕುಡಿದು ತೂರಾಡಿದ ಶಿಕ್ಷಕ. ಬೆಳಗಿನ ಜಾವ ಎದ್ದ ಶಿಕ್ಷಕ ರಾಮಾಂಜಿನಪ್ಪ ಶಾಲೆಗೆ ಗಾಂಧಿಜಯಂತಿ ಆಚರಣೆ ಮಾಡಲು ಹೊರಟಿದ್ದ. ದಾರಿ ಮಧ್ಯೆ ಮದ್ಯ ಸೇವಿಸಿ ನಡೆದುಕೊಂಡು ಬಸ್ ನಿಲ್ದಾಣಕ್ಕೆ ಹೋಗಿದ್ದಾನೆ. ಬಸ್ ಹತ್ತಲೂ ಆಗದೇ ಬಸ್ ನಿಲ್ದಾಣದಲ್ಲೇ ಮಲಗಿದ್ದಾನೆ.

    ಬಳಿಕ ಸಾರ್ವಜನಿಕರು ನಶೆ ಏರಿದ ಶಿಕ್ಷಕನ ಮುಖದ ಮೇಲೆ ನೀರು ಸಿಂಪಡಿಸಿ ಎಚ್ಚರಿಸಿದ್ದಾರೆ. ಎಚ್ಚರವಾಗುತಿದ್ದಂತೆ ಕುಡುಕ ಶಿಕ್ಷಕ ಶಾಲೆಗೆ ಹೊರಡದೆ ಮನೆಯತ್ತ ಕಾಲ್ಕಿತಿದ್ದಾನೆ. ಗಾಂಧಿ ಜಯಂತಿಯಂದು ಮಕ್ಕಳಿಗೆ ನೀತಿ ಪಾಠ ಹೇಳಬೇಕಿದ್ದ ಶಿಕ್ಷಕನೇ ಈ ರೀತಿ ಕುಡಿದು ರಸ್ತೆ ಬದಿ ಬಿದ್ದಿದನ್ನು ಕಂಡು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

  • ಶಿಕ್ಷಕರೂ ಇವರೇ.. ಡ್ರೈವರೂ ಇವರೇ-ವೇತನದ ಶೇ.25ರಷ್ಟು ಬಡ ಮಕ್ಕಳಿಗೆ ಮೀಸಲು

    ಶಿಕ್ಷಕರೂ ಇವರೇ.. ಡ್ರೈವರೂ ಇವರೇ-ವೇತನದ ಶೇ.25ರಷ್ಟು ಬಡ ಮಕ್ಕಳಿಗೆ ಮೀಸಲು

    ಬೆಂಗಳೂರು: ಕೆಲ ಬಡ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರೋದು ಹಾಗೂ ವಾಪಾಸ್ ಕರೆದುಕೊಂಡು ಹೋಗೋದೇ ದೊಡ್ಡ ಸಮಸ್ಯೆ. ಕಾರಣ ಹೊಟ್ಟೆಪಾಡಿಗಾಗಿ ಕೆಲಸ ಮಾಡಬೇಕಾಗಿರುತ್ತದೆ. ಇಂತಹ ಬಡವರ ಮಕ್ಕಳನ್ನು ತಾವೇ ಪೋಷಕರಂತೆ ಶಾಲೆಗೆ ಕೆರೆದುಕೊಂಡು ಬಂದು ಪುನಃ ವಾಪಸ್ ಕರೆದುಕೊಂಡು ಬಿಡುತ್ತಾರೆ. ನೆಲಮಂಗಲದ ಅಪರೂಪದ ಮೇಷ್ಟ್ರು ನಮ್ಮ ಇವತ್ತಿನ ಪಬ್ಲಿಕ್ ಹೀರೋ.

    ಮೂಲತಃ ಮಾಗಡಿ ತಾಲೂಕಿನ ಬಿಟ್ಟಸಂದ್ರ ಗ್ರಾಮದ ಮರುಳ ಸಿದ್ದಯ್ಯ ಅವರು ಕಳೆದ 19 ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 5 ವರ್ಷಗಳಿಂದ ನೆಲಮಂಗಲ ತಾಲೂಕಿನ ಪಾಪಬೋವಿಪಾಳ್ಯದ ಶಾಲೆಯಲ್ಲಿ ಮರುಳ ಸಿದ್ದಯ್ಯ ಕೆಲಸ ಮಾಡಿಕೊಂಡಿದ್ದಾರೆ.

    ತಮ್ಮ ಶಾಲೆಗೆ ಬರೋ ಬಡವರ ಮಕ್ಕಳನ್ನು ಇವರೇ ತಮ್ಮ ಬೈಕ್ ಅಥವಾ ಕಾರಿನಲ್ಲಿ ಕರೆದುಕೊಂಡು ಬರುತ್ತಾರೆ. ಸಂಜೆ ಶಾಲೆ ಮುಗಿದ ಬಳಿಕ ಮತ್ತೆ ತಾವೇ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಾರೆ.

    ಕಲ್ಲುಕ್ವಾರಿ, ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳನ್ನೆಲ್ಲಾ ಮರಳಿ ಶಾಲೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಸಂಬಳದಲ್ಲಿಯೇ ಬಡಮಕ್ಕಳಿಗೆ ಶೇ.25 ರಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಇವರ ಸೇವೆಗೆ ಕುಟುಂಬ ಕೂಡಾ ಸಾಥ್ ನೀಡಿದೆ.

  • ಪುಸ್ತಕದಲ್ಲಿ ಹಾಜರ್, ಶಾಲೆಗೆ ಚಕ್ಕರ್- ಕುಡಿದು ಊರೆಲ್ಲಾ ತೂರಾಡೋ ಹೆಡ್ ಮಾಸ್ಟರ್

    ಪುಸ್ತಕದಲ್ಲಿ ಹಾಜರ್, ಶಾಲೆಗೆ ಚಕ್ಕರ್- ಕುಡಿದು ಊರೆಲ್ಲಾ ತೂರಾಡೋ ಹೆಡ್ ಮಾಸ್ಟರ್

    ರಾಯಚೂರು: ಸೆಪ್ಟಂಬರ್ ತಿಂಗಳು ಅಂದ್ರೆ ಅದು ಶಿಕ್ಷಕರಿಗೆ ಮೀಸಲು. ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುವ ಉತ್ತಮ ಶಿಕ್ಷಕರನ್ನ ಗುರುತಿಸಿ ಇಡೀ ತಿಂಗಳು ಸನ್ಮಾನ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಆದರೆ ರಾಯಚೂರಿನ ಸಿಂಧನೂರು ತಾಲೂಕಿನಲ್ಲಿ ಶಿಕ್ಷಕ ಕಂ ಮುಖ್ಯೋಪಾಧ್ಯಾಯನೊಬ್ಬ ಶಾಲೆಗೆ ಬರದೇ ಕಂಠಪೂರ್ತಿ ಮದ್ಯ ಕುಡಿದು ಊರ ತುಂಬೆಲ್ಲಾ ತೂರಾಡುತ್ತಿರುತ್ತಾನೆ.

    ಸಿಂಧನೂರು ತಾಲೂಕಿನ ಮೀರಾಪುರ ಕ್ಯಾಂಪ್‍ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಾರುತಿ ರಾಠೋಡ್‍ನನ್ನ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ನಿತ್ಯ ಕುಡಿದು ಟೈಟಾಗಿ ಶಾಲೆ, ರಸ್ತೆ ಎಲ್ಲೆಂದರಲ್ಲಿ ಮಲಗಿರುತ್ತಾನೆ. ಮಕ್ಕಳಿಗೆ ಪಾಠ ಹೇಳಿ ಅವರ ಭವಿಷ್ಯ ನಿರ್ಮಿಸುವ ಜವಾಬ್ದಾರಿ ಹೊತ್ತಿರೋ ಶಿಕ್ಷಕ ಇವನು. ಶಾಲೆಯ ಮುಖ್ಯೋಪಾಧ್ಯಾಯ ಆಗಿರುವುದರಿಂದ ಮನಸ್ಸಿಗೆ ಬಂದಾಗ ಶಾಲೆಗೆ ಬಂದು ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಕುಡಿದು ಊರೆಲ್ಲಾ ತೂರಾಡಿಕೊಂಡಿರುತ್ತಾನೆ.

    ಮೇಷ್ಟ್ರು ಪಾಠ ಹೇಳ್ತಾರೆ ಅಂತ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ನಿತ್ಯವೂ ನಿರಾಸೆ. ಈ ಕುಡುಕ ಮೇಷ್ಟ್ರಿಗೆ ಟೈಮ್ ಟೇಬಲ್ ಇಲ್ಲ. ಹೀಗಾಗಿ ಶಾಲೆಯ ಎಲ್ಲಾ ಕೋಣೆಗಳಿಗೂ ಯಾವಾಗಲೂ ಬೀಗ ಜಡಿದಿರುತ್ತೆ. ಮಾರುತಿ ರಾಠೋಡ್ ಅವಾಂತರ ಇಷ್ಟಕ್ಕೆ ಮುಗಿದಿಲ್ಲ. ಇವನ ದುರ್ವರ್ತನೆಯಿಂದ ಸಂಬಳ ತಡೆ ಹಿಡಿದರೆ ಕುಡಿದ ಅಮಲಿನಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ಜಗಳ ಆಡುತ್ತಾನೆ.

    ಮುಖ್ಯೋಪಾಧ್ಯಾಯನ ವಿರುದ್ಧ ದೂರು ನೀಡಿ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಈಗ ಕ್ರಮಕ್ಕೆ ಮುಂದಾಗಿರುವ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಗೌಡ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಮೊದಲೇ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನ ಕಳುಹಿಸಲು ಪೋಷಕರು ಹಿಂಜರಿಯುತ್ತಿರುವ ಹೊತ್ತಲ್ಲಿ ಇಂತಹ ಶಿಕ್ಷಕರು ಇನ್ನಷ್ಟು ಬೇಸರ ಮೂಡಿಸುತ್ತಿದ್ದಾರೆ.