Tag: ಶಿಕ್ಷಕ

  • ಅಮ್ಮ ಬೇಕು ಅಂತ ಹಠಹಿಡಿದಿದ್ದ 4ರ ಕಂದಮ್ಮನ ಬೆನ್ನಿಗೆ ಬರೆ ಎಳೆದ ಶಿಕ್ಷಕ, ಆಯಾ!

    ಅಮ್ಮ ಬೇಕು ಅಂತ ಹಠಹಿಡಿದಿದ್ದ 4ರ ಕಂದಮ್ಮನ ಬೆನ್ನಿಗೆ ಬರೆ ಎಳೆದ ಶಿಕ್ಷಕ, ಆಯಾ!

    ಹುಬ್ಬಳ್ಳಿ: ಅಮ್ಮ ಬೇಕು ಅಮ್ಮ ಎಂದು ಹಠಹಿಡಿದಿದ್ದ 4 ವರ್ಷದ ಮಗುವಿನ ಬೆನ್ನಿಗೆ ನರ್ಸರಿ ಶಾಲೆಯ ಶಿಕ್ಷಕ ಹಾಗೂ ಆಯಾ ಬರೆ ಎಳೆದ ಅಮಾನವೀಯ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಹೆಗ್ಗೇರಿ ಪ್ರದೇಶದ ಬಾಲಾಜಿ ನರ್ಸರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ನನಗೆ ಅಮ್ಮ ಬೇಕು ಎಂದು ಹಠ ಮಾಡಿದ್ದಕ್ಕೆ ಶಾಲೆಯ ಶಿಕ್ಷಕ ಹಾಗೂ ಆಯಾ ನನ್ನ ಮಗನ ಬೆನ್ನ ಮೇಲೆ ಬರೆ ಎಳೆದಿದ್ದಾರೆ ಎಂದು ಮಗುವಿನ ತಾಯಿ ಕಾವೇರಿ ಆರೋಪಿಸಿದ್ದಾರೆ.

    ಹೆಗ್ಗೇರಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಸತೀಶ್ ನಾಯ್ಡು ಈ ನರ್ಸರಿ ಶಾಲೆಯನ್ನು ಆರಂಭಿಸಿದ್ದು, 35ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅಲ್ಲದೇ ಕಾವೇರಿ ಅವರು ಈಗಷ್ಟೇ ಒಂದು ವಾರದ ಹಿಂದೆ ತನ್ನ ಮಗನನ್ನು ಶಾಲೆಗೆ ಸೇರಿಸಿದ್ದಾರೆ. ಶಾಲೆಗೆ ಪ್ರತಿನಿತ್ಯ ಆಗಮಿಸುವ ಬಾಲಕ ಪ್ರತಿದಿನ ಅಮ್ಮ ಬೇಕು ಅಮ್ಮ ಬೇಕು ಅಂತ ಹಠ ಮಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಕುಪಿತಗೊಂಡ ಶಾಲೆಯ ಆಯಾ ಬಾಲಕನ ಬೆನ್ನಿಗೆ ಬರೆ ಎಳೆದು ಗಾಯಗೊಳಿಸಿದ್ದಾಳೆ ಅಂತ ತಾಯಿ ಕಣ್ಣೀರು ಹಾಕಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಬಂದಿರುವ ಆರೋಪವನ್ನು ಶಿಕ್ಷಕ ಸತೀಶ್ ನಾಯ್ಡು ಅಲ್ಲಗಳೆದಿದ್ದು, ಆ ರೀತಿ ನಡೆದುಕೊಂಡಿಲ್ಲ ಎಂದಿದ್ದಾರೆ. ಆದರೆ ಈ ಕುರಿತಂತೆ ಮಗುವಿನ ತಾಯಿ ಕಾವೇರಿ, ಶಿಕ್ಷಕ ಸತೀಶ ಹಾಗೂ ಆಯಾ ಮೇಲೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐವರು ಮಕ್ಕಳಿದ್ದರೂ ಅನಾಥ – ಆಶ್ರಯವಿಲ್ಲದೆ ಅಪ್ಪನಿಗೆ ಬಸ್ ನಿಲ್ದಾಣವೇ ಆಶ್ರಮ

    ಐವರು ಮಕ್ಕಳಿದ್ದರೂ ಅನಾಥ – ಆಶ್ರಯವಿಲ್ಲದೆ ಅಪ್ಪನಿಗೆ ಬಸ್ ನಿಲ್ದಾಣವೇ ಆಶ್ರಮ

    -ಮಗ-ಸೊಸೆ ಶಿಕ್ಷಕರಾದ್ರೂ ತಂದೆ ಮಾತ್ರ ಬೀದಿಪಾಲು

    ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವಲಬಾಪುರದ ನಿವಾಸಿಯಾದ 63 ವರ್ಷದ ಸಂಗಯ್ಯ ಸೊಪ್ಪಿನಮಠ ಎಂಬವರ ಕರುಣಾಜನಕ ಕಥೆ. ಸಂಗಯ್ಯ ಅವರಿಗೆ ಮೂರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಇಂದು ಯಾವ ಮಕ್ಕಳ ಆಶ್ರಯ ಸಿಗದೇ ಬಸ್ ನಿಲ್ದಾಣದಲ್ಲಿ ವಾಸವಾಗಿದ್ದಾರೆ. ಸಂಗಯ್ಯರ ಹಿರಿಯ ಮಗ ಜಗದೀಶ್ ವ್ಯಾಪಾರಿ, ಪರಮೇಶ್ವರಯ್ಯ ವೃತ್ತಿಯಲ್ಲಿ ಶಿಕ್ಷಕ, ಮತ್ತೊಬ್ಬ ಮಗ ಹೇಮಯ್ಯ ಖಾಸಗಿ ಕಂಪೆನಿ ಉದ್ಯೋಗಿ ಹಾಗೂ ಎರಡು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದಾರೆ.

    ತುಂಬು ಕುಟುಂಬದಲ್ಲಿ ನೆಮ್ಮದಿಯಾಗಿದ್ದ ವೃದ್ಧ ತಂದೆ ಸಂಗಯ್ಯ ಅನ್ಯೋನ್ಯವಾಗಿದ್ದರು. ಆದ್ರೆ ಕೆಲವು ದಿನಗಳ ಹಿಂದೆ ಸಂಗಯ್ಯ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆಸ್ಪತ್ರೆ ವೆಚ್ಚಕ್ಕಾಗಿ ಇದ್ದ ಸೈಟ್ ಮಾರಿ ಬಂದ ಹಣದಿಂದ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಹೀಗಾಗಿ ನಮಗೆ ಆಸ್ತಿ ಮಾಡಲಿಲ್ಲ, ಇದ್ದ ಸೈಟ್‍ನ್ನು ಮಾರಿಕೊಂಡಿದ್ದಾರೆಂದು ಮಕ್ಕಳು ಮನೆಯಿಂದ ದೂರ ತಳ್ಳಿದ್ದಾರೆ.

    ಎಲ್ಲರೂ ಇದ್ದೂ ಯಾರೂ ಇಲ್ಲದಂತೆ ಅನಾಥವಾಗಿರುವ ಸಂಗಯ್ಯನವರು ಗ್ರಾಮದಲ್ಲಿ ಅವರಿವರು ನೀಡುವ ಊಟವನ್ನು ಮಾಡುತ್ತಾರೆ. ಕತ್ತಲಾಗುತ್ತಿದ್ದಂತೆ ಬಸ್ ನಿಲ್ದಾಣಕ್ಕೆ ಬಂದು ಕೊರೆಯುವ ಚಳಿಯಲ್ಲಿ ರಾತ್ರಿ ಕಳೆಯುತ್ತಿದ್ದಾರೆ.

    ಸುಮಾರು 10 ವರ್ಷಗಳಿಂದ ಹೀಗೆ ಜೀವನ ಮಾಡುತ್ತಿರುವ ಸಂಗಯ್ಯನವರು ನನಗೆ ಮಕ್ಕಳ ಆಶ್ರಯ ಬೇಕು ಅಂತ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದಾರೆ. ನ್ಯಾಯಾಲಯ ತಂದೆಗೆ ಆಶ್ರಯ ನೀಡಲು ಸೂಚಿಸಿದೆ. ಹಾಗಾಗಿ ಒಬ್ಬ ಮಗ 2 ಸಾವಿರ, ಇನ್ನೊಬ್ಬ ಮಗ 1 ಸಾವಿರ ರೂ. ಕೊಡುವುದಾಗಿ ಕೋರ್ಟ್ ನಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ ವೃದ್ಧ ತಂದೆಯ ಜೀವನ ನಿರ್ವಹಣೆಗೆ ಮಕ್ಕಳು ಹಣ ನೀಡದೇ, ಮನೆಯಲ್ಲಿ ಆಶ್ರಯವನ್ನೂ ನೀಡದೇ ಬೀದಿ ಪಾಲು ಮಾಡಿದ್ದಾರೆ.

    ಮಕ್ಕಳಿಗೆ ಆಸ್ತಿ ಮಾಡಲಿಲ್ಲ, ಮಕ್ಕಳಿಗಾಗಿ ಆಸ್ತಿ ಉಳಿಸಲಿಲ್ಲವೆಂದು ಹೆತ್ತ ತಂದೆಯನ್ನ ದೂರ ಮಾಡಿ ಅನಾಥ ಮಾಡಿರೋ ಮಕ್ಕಳ ವರ್ತನೆ ನಿಜಕ್ಕೂ ದುರಂತ. ಕರುಳ ಬಳ್ಳಿಗಳ ಬದುಕಿಗಾಗಿ ತಮ್ಮ ಜೀವವನ್ನೆ ಮುಡಿಪಿಡುವ ಹೆತ್ತವರನ್ನು ಮಕ್ಕಳು ಕನಿಷ್ಠ ಸೌಜನ್ಯದಿಂದ ನೋಡಿಕೊಳ್ಳಲಿ ಎಂಬವುದೇ ಬೆಳಕು ಕಾರ್ಯಕ್ರಮದ ಉದ್ದೇಶ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=4zIbqnSClTo

  • ತರಗತಿಯಲ್ಲೇ ನೇಣು ಬಿಗಿದು ದಾವಣಗೆರೆಯ ಮುಖ್ಯ ಶಿಕ್ಷಕ ಆತ್ಮಹತ್ಯೆ

    ತರಗತಿಯಲ್ಲೇ ನೇಣು ಬಿಗಿದು ದಾವಣಗೆರೆಯ ಮುಖ್ಯ ಶಿಕ್ಷಕ ಆತ್ಮಹತ್ಯೆ

    ದಾವಣಗೆರೆ: ಶಾಲಾ ಮುಖ್ಯ ಶಿಕ್ಷಕರೊಬ್ಬರು ತರಗತಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹರಪ್ಪನಹಳ್ಳಿ ತಾಲೂಕಿನ ಕಮ್ಮತಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಲ್ಲೇಶಪ್ಪ(56) ಎಂಬವರು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ. ಹರಪ್ಪನಹಳ್ಳಿ ತಾಲೂಕಿನ ಕಮ್ಮತಹಳ್ಳಿ ಗ್ರಾಮದ ಖಾಸಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಎಂದಿನಂತೆ ಬೆಳಗ್ಗೆ ಮುಖ್ಯ ಶಿಕ್ಷಕ ಮಲ್ಲೇಶಪ್ಪ ಅವರು ಶಾಲೆಗೆ ಬಂದಿದ್ದರು. ಈ ವೇಳೆ ಸಹ ಶಿಕ್ಷಕರೊಬ್ಬರು ಬಂದು ನೋಡಿದಾಗ ತರಗತಿಯಲ್ಲೇ ನೇಣಿಗೆ ಶರಣಾನಾಗಿದ್ದಾರೆ. ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ ಎನ್ನುವ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಅರಸೀಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ವಂತ ಖರ್ಚಿನಲ್ಲಿ 120 ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ಪ್ರತಿದಿನ ಉಪಹಾರ!

    ಸ್ವಂತ ಖರ್ಚಿನಲ್ಲಿ 120 ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ಪ್ರತಿದಿನ ಉಪಹಾರ!

    ಚೆನ್ನೈ: ಗುರುಗಳು ತಮ್ಮ ವಿದ್ಯಾರ್ಥಿಗಳು ಕಲಿತು ದೇಶದಲ್ಲಿ ಉತ್ತಮ ಪ್ರಜೆಯಾಗಬೇಕೆಂದು ಅವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಆದರೆ ತಮಿಳುನಾಡಿನಲ್ಲಿ ಶಿಕ್ಷಕರೊಬ್ಬರು ಪ್ರತಿದಿನ ತಮ್ಮ ಸ್ವಂತ ಹಣದಲ್ಲಿ 120 ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರವನ್ನು ಒದಗಿಸುತ್ತಿದ್ದಾರೆ.

    ಕೊಡುಂಗಾಯೂರಿನಲ್ಲಿರುವ ಚೆನ್ನೈ ಹೈಸ್ಕೂಲಿನ ಶಿಕ್ಷಕ ಪಿ.ಕೆ. ಇಲಾಮಾರನ್ ಅವರು ಪ್ರತಿದಿನ 120 ಮಕ್ಕಳಿಗೆ ಬೆಳಗ್ಗಿನ ಉಪಹಾರವನ್ನು ನೀಡುತ್ತಿದ್ದಾರೆ. ಮುಂಜಾನೆ ಶಾಲೆಗೆ ಬರುವ ಆತುರದಲ್ಲಿ ವಿದ್ಯಾರ್ಥಿಗಳು ತಿಂಡಿ ತಿನ್ನದೇ ಬರುವುದು ಅಥವಾ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದೇ ಬೆಳಗ್ಗೆ ಖಾಲಿ ಹೊಟ್ಟೆಯಿಂದ ಬರೋದನ್ನು ಕಂಡು ಇಲಾಮಾರನ್ ಈ ಕೆಲಸಕ್ಕೆ ಮುಂದಾಗಿದ್ದಾರೆ. ಇಲಾಮಾರನ್ ಅವರು ಸುಮಾರು 2 ವರ್ಷದಿಂದ ವಿದ್ಯಾರ್ಥಿಗಳಿಗೆ ಉಪಹಾರ ನೀಡುತ್ತಿದ್ದಾರೆ.

    ಮುಂಜಾನೆ ವಿದ್ಯಾರ್ಥಿಗಳಿಗೆ ತಿಂಡಿ ಬಡಿಸುವಾಗ ಅವರ ಜೊತೆ ಇದ್ದು ಸ್ವಲ್ಪ ಸಮಯ ಕಳೆಯುತ್ತೇನೆ. ಇದು ನನಗೆ ತುಂಬಾ ಖುಷಿ ತಂದಿದೆ. ಶಾಲೆಯ ಸಮೀಪದ ಅಂಗಡಿಯಿಂದ ಪ್ರತಿದಿನ ಇಡ್ಲಿ ಮತ್ತು ಪೊಂಗಲ್ ತಿಂಡಿಯನ್ನು ತಂದು ಬಡಿಸುತ್ತೇವೆ ಎಂದು ಇಲಾಮಾರನ್ ಹೇಳಿದ್ದಾರೆ.

    ಶಿಕ್ಷಕ ಇಲಾಮಾರನ್ 7 ಮತ್ತು 9ನೇ ತರಗತಿಗೆ ಪಾಠ ಮಾಡುತ್ತಿದ್ದು, ಇವರು ಶಿಕ್ಷಕರ ಸಂಘದ ಅಧ್ಯಕ್ಷರು ಆಗಿದ್ದಾರೆ. ಆದರೆ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಮಕ್ಕಳಿಗೆ ಉಚಿತ ಉಪಹಾರ ನೀಡುತ್ತಾರೆ. ಬೆಳಗ್ಗೆ 7.30 ರಿಂದ 8 ಗಂಟೆಯವರೆಗೆ 10 ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಉಪಹಾರ ನೀಡಿದರೆ, ಉಳಿದ ವಿದ್ಯಾರ್ಥಿಗಳಿಗೆ 8.20 ರಿಂದ 8.50 ರ ವರೆಗೂ ನೀಡುತ್ತಾರೆ. ಇದು ಶಾಲೆ ಮತ್ತು ಅಲ್ಲಿನ ಶಿಕ್ಷಕರು ಅನುಸರಿಸುವ ಅನೇಕ ಉಪಕ್ರಮಗಳಲ್ಲಿ ಒಂದಾಗಿದೆ.

    ನಾನು ಈ ಶಾಲೆಗೆ ಸೇರಿಕೊಂಡಾಗ ಕೇವಲ 370 ವಿದ್ಯಾರ್ಥಿಗಳು ಮಾತ್ರ ಇದ್ದರು. ಆದರೆ ನಾಲ್ಕು ವರ್ಷದಲ್ಲಿ ಈ ಸಂಖ್ಯೆ 270 ರಿಂದ 980ಕ್ಕೆ ಹೆಚ್ಚಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರ ಸಂಖ್ಯೆಯೂ ಅಧಿಕವಾಗಿದ್ದು, 11 ರಿಂದ 35ಕ್ಕೆ ಏರಿದೆ ಎಂದು ಶಾಲೆಯ ಪ್ರಿನ್ಸಿಪಾಲ್ ಮುನಿರಾಮಯ್ಯ ಹೇಳಿದ್ದಾರೆ.

    ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ಪ್ಲಾನ್ ಹಾಕಿಕೊಂಡಿರುವ ಇವರು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಶನ್ ನೀಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಶಾಲೆಯ ಆಡಳಿತ ಮಂಡಳಿ ಸಹಾಯದಿಂದ ಶಾಲೆಯ ಎಂಟು ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶಿಕ್ಷಕ ಮತ್ತು ವಿದ್ಯಾರ್ಥಿ ಹಾಜರಾತಿಗಳನ್ನು ಮೇಲ್ವಿಚಾರಣೆ ಮಾಡಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಬಳಸುವ ಏಕೈಕ ಸರ್ಕಾರಿ ಶಾಲೆ ನಮ್ಮದಾಗಿದೆ ಎಂದ ಮುನಿರಾಮಯ್ಯ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೀಟರ್ ಬಡ್ಡಿವ್ಯವಹಾರ ಮಾಡುತ್ತಾ ಶಾಲೆಗೆ ಬಾರದ ಶಿಕ್ಷಕನ ವಿರುದ್ಧ ಪ್ರತಿಭಟನೆ!

    ಮೀಟರ್ ಬಡ್ಡಿವ್ಯವಹಾರ ಮಾಡುತ್ತಾ ಶಾಲೆಗೆ ಬಾರದ ಶಿಕ್ಷಕನ ವಿರುದ್ಧ ಪ್ರತಿಭಟನೆ!

    ಕೋಲಾರ: ಮೀಟರ್ ಬಡ್ಡಿವ್ಯವಹಾರ ಮಾಡಿಕೊಂಡು ಶಾಲೆಗೆ ಬಾರದ ಶಿಕ್ಷಕನನ್ನು ವರ್ಗಾವಣೆ ಮಾಡಿ, ಬೇರೆ ಶಿಕ್ಷರನ್ನು ನೇಮಿಸುವಂತೆ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

    ಕೋಲಾರ ತಾಲೂಕಿನ ನಂದಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಂಜುಂಡಗೌಡ, ಊರಿನಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದು, ಶಾಲೆಗೆ ಸರಿಯಾಗಿ ಹಾಜರಾಗುತ್ತಿಲ್ಲ. ಅಲ್ಲದೇ ಕಳೆದ 5 ವರ್ಷಗಳಿಂದಲೂ ಶಿಕ್ಷಕ ಶಾಲೆಗೆ ಸರಿಯಾಗಿ ಬಾರದೆ ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

    ಶಾಲೆಯಲ್ಲಿ ಸುಮಾರು 70 ಮಕ್ಕಳು ಕಲಿಯುತ್ತಿದ್ದು, ಶಿಕ್ಷಕನ ವರ್ತನೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಹೈರಾಣಾಗಿದ್ದಾರೆ. ಅಲ್ಲದೇ ಇದನ್ನು ಪ್ರಶ್ನಿಸುವ ಸಹ ಶಿಕ್ಷಕರ ಮೇಲೆಯೂ ರಾಜಕೀಯ ಪ್ರಭಾವ ಬಳಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಶಿಕ್ಷಕನ ವರ್ತನೆಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಶಿಕ್ಷಕನನ್ನು ಕೂಡಲೇ ವರ್ಗಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬ್ಯಾಗ್‍ನಲ್ಲಿದ್ದ 500 ರೂ. ಕಾಣಿಸದಕ್ಕೆ 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹಲ್ಲೆಗೈದ ಶಿಕ್ಷಕರು!

    ಬ್ಯಾಗ್‍ನಲ್ಲಿದ್ದ 500 ರೂ. ಕಾಣಿಸದಕ್ಕೆ 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹಲ್ಲೆಗೈದ ಶಿಕ್ಷಕರು!

    ಬಾಗಲಕೋಟೆ: ಬ್ಯಾಗ್‍ನಲ್ಲಿದ್ದ 500 ರೂ. ಕಾಣದ ಹಿನ್ನೆಲೆ ವಿಧ್ಯಾರ್ಥಿಗಳನ್ನು ಶಿಕ್ಷಕ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ರಾಘಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಅಶ್ವಿನಿ ಅಂಗಡಿ ಮತ್ತು ಶಿಕ್ಷಕ ಚಂದ್ರು ದಾಸರ ಐದನೇ ತರಗತಿಯ 10ಕ್ಕೂ ಹೆಚ್ಚು ವಿಧ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಬೆನ್ನು, ತೊಡೆ, ಸೊಂಟದ ಭಾಗದಲ್ಲಿ ಬಾಸುಂಡೆಗಳು ಕಾಣಿಸಿಕೊಂಡಿವೆ.

    ವಿದ್ಯಾರ್ಥಿಗಳು ಹಣ ಕದ್ದಿದ್ದಾರೆ ಎಂದ ಆರೋಪಿಸಿ ಸಾಮೂಹಿಕವಾಗಿ ವಿದ್ಯಾರ್ಥಿಗಳಿಗೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಪೋಷಕರು ಶಿಕ್ಷಕ ಚಂದ್ರು ದಾಸರ ಮತ್ತು ಶಿಕ್ಷಕಿ ಅಶ್ವಿನಿ ಅಂಗಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶನಿವಾರ ಈ ಘಟನೆ ನಡೆದಿದ್ದು, ಗ್ರಾಮದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿ ವಿಷಯ ಮುಂದುವರೆಸದೆ ಮುಚ್ಚಿ ಹಾಕಲಾಗಿದೆ. ಇಬ್ಬರೂ ಶಿಕ್ಷಕ ಶಿಕ್ಷಕಿಗೆ ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.

  • ವಿದ್ಯಾರ್ಥಿನಿಯರಿಂದ ಮನೆ ಕೆಲಸ – ತಪ್ಪೊಪ್ಪಿಕೊಂಡ ಕೊಪ್ಪಳ ಸ್ಕೂಲ್ ಮಾಸ್ಟರ್

    ವಿದ್ಯಾರ್ಥಿನಿಯರಿಂದ ಮನೆ ಕೆಲಸ – ತಪ್ಪೊಪ್ಪಿಕೊಂಡ ಕೊಪ್ಪಳ ಸ್ಕೂಲ್ ಮಾಸ್ಟರ್

    ಕೊಪ್ಪಳ: ಪಾಠ ಹೇಳಬೇಕಾದ ಶಿಕ್ಷಕನೊಬ್ಬ ಗಂಗಾವತಿ ತಾಲೂಕಿನ ಹೊಸಳ್ಳಿಯ ಕಲ್ಮಠ ಗ್ರಾಮದಲ್ಲಿ ಮಕ್ಕಳಿಂದ ಮನೆ ಕೆಲಸ ಮಾಡಿಸಿಕೊಂಡಿದ್ದಾನೆ.

    ದೈಹಿಕ ಶಿಕ್ಷಕನಾದ ಚಂದ್ರಶೇಖರ್ ಶಾಲೆಯಲ್ಲಿ ಓದುತ್ತಿರುವ ಆರನೇ ತರಗತಿ ಇಬ್ಬರು ವಿದ್ಯಾರ್ಥಿನಿಯರ ಕೈಯಲ್ಲಿ ಮನೆಯ ಬಟ್ಟೆಯನ್ನು ಒಗೆಸಿದ್ದಾನೆ. ಪುಟ್ಟ ಮಕ್ಕಳು ಬಟ್ಟೆ ಒಗೆದು ತಗೆದುಕೊಂಡು ಹೋಗುತ್ತಿರೋದನ್ನ ಹೊಸಳ್ಳಿಯ ಗ್ರಾಮಸ್ಥರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಶಿಕ್ಷಕ ಚಂದ್ರಶೇಖರ್‍ನನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಯಾಕೆ ಬಟ್ಟೆ ಒಗೆದಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿನಿಯರು, ಶಿಕ್ಷಕರೇ ನಮ್ಮನ್ನ ಬಟ್ಟೆ ಒಗೆಯಲು ಕಳುಹಿಸಿದ್ದರು. ನಂತರ ಅದನ್ನು ಮನೆಗೆ ಇಟ್ಟು ಬರಲು ಹೇಳಿದರು ಎಂದು ತಿಳಿಸಿದ್ದಾರೆ.

    ಸೋಮವಾರ ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾಮದಲ್ಲಿ ಶಾಲಾ ಮಕ್ಕಳನ್ನ ಕಂಪೌಂಡ್ ಕಟ್ಟಲು ಬಳಕೆ ಮಾಡಿಕೊಂಡಿದ್ದರು. ಆ ಪ್ರಕರಣ ಮಾಸುವ ಮುನ್ನವೇ ಗಂಗಾವತಿಯಲ್ಲಿ ಶಿಕ್ಷಕರು ಇದೀಗ ಮಕ್ಕಳನ್ನ ಮನೆಗೆಲಸಕ್ಕೆ ಬಳಸಿಕೊಂಡಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

    ದೈಹಿಕ ಶಿಕ್ಷಕರಾದ ಚಂದ್ರಶೇಖರ್ ನಿನ್ನೆ ಬಟ್ಟೆ ಒಗೆಯಲು ಬಳಸಿಕೊಂಡಿದ್ದರ ಹೊರತಾಗಿಯೂ ಹೊಸಹಳ್ಳಿಯ ಬಹುತೇಕ ಶಿಕ್ಷಕರು ತಮ್ಮ ಮನೆ ಕೆಲಸಕ್ಕೆ ಮಕ್ಕಳನ್ನೇ ಬಳಸಿಕೊಳ್ಳುತ್ತಿದ್ದಾರೆ ಅನ್ನೊ ಆರೋಪವು ಕೇಳಿ ಬಂದಿದೆ. ಈ ಕುರಿತು ಚಂದ್ರಶೇಖರ್ ನನ್ನು ಕೇಳಿದ್ರೆ ಉದ್ದೇಶಪೂರ್ವಕವಾಗಿ ಮಾಡಿಸಿಲ್ಲ. ಮಕ್ಕಳು ಚಾವಿ ತರಲು ಬಂದಾಗ ಸ್ವಲ್ಪ ಬಟ್ಟೆ ತೆಗೆದುಕೊಂಡು ಹೋಗಲು ಹೇಳಿದೆ. ಅದು ತಪ್ಪು ನಾನು ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು ಹೇಳಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸರ್ಕಾರಿ ಶಾಲೆಗೆ ಸೇರಿದ ಜಾಗಕ್ಕಾಗಿ ವಾಗ್ವಾದ- ಆಟವಾಡ್ತಿದ್ದ ಮಕ್ಳನ್ನೂ ಗದರಿಸಿದ!

    ಸರ್ಕಾರಿ ಶಾಲೆಗೆ ಸೇರಿದ ಜಾಗಕ್ಕಾಗಿ ವಾಗ್ವಾದ- ಆಟವಾಡ್ತಿದ್ದ ಮಕ್ಳನ್ನೂ ಗದರಿಸಿದ!

    ಮಂಡ್ಯ: ಸರ್ಕಾರಿ ಶಾಲೆಗೆ ಸೇರಿದ ಜಾಗ ನಮ್ಮದೆಂದು ಗ್ರಾಮದ ವ್ಯಕ್ತಿಯೊಬ್ಬರು ಶಿಕ್ಷಕರ ಜೊತೆ ವಾಗ್ವಾದ ನಡೆಸಿದ್ದಲ್ಲದೆ, ಶಾಲಾ ಮೈದಾನದಲ್ಲಿ ಆಟವಾಡುತ್ತಿರುವ ಮಕ್ಕಳನ್ನೂ ಗದರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಗ್ರಾಮದ ಸರ್ವೆ ನಂಬರ್ 196ರಲ್ಲಿ ಸರ್ಕಾರಿ ಶಾಲೆಗೆ ಮೀಸಲಿರಿಸಿದ 98 ಗುಂಟೆ ಜಾಗವಿದೆ. 1950ನೇ ಇಸವಿಯಿಂದಲೂ ಈ ಜಾಗ ಶಾಲೆಯ ಒಡೆತನದಲ್ಲೇ ಇದೆ.

    ಆದರೆ ಕಳೆದ ನಾಲ್ಕು ವರ್ಷಗಳಿಂದ ಗ್ರಾಮದ ಲಕ್ಷ್ಮಣ ಮತ್ತು ತಂಗ್ಯಮ್ಮ ಶಾಲೆಗೆ ಸೇರಿದ ಜಾಗ ನಮ್ಮದು ಎಂದು ದನಕರುಗಳನ್ನು ಕಟ್ಟುತ್ತಿದ್ದಾರೆ. ಜೊತೆಗೆ ಶಾಲಾ ಮೈದಾನದಲ್ಲಿ ಗಿಡ ನೆಡಲು ಹೋದರೆ ಅಥವಾ ಕ್ರೀಡಾಕೂಟ ನಡೆದರೆ ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಶಿಕ್ಷಕರ ಮೇಲೂ ಜೋರು ಧ್ವನಿಯಲ್ಲಿ ಗಲಾಟೆ ಮಾಡಿದ್ದಾರೆ. ಅಲ್ಲದೇ ಮೈದಾನದಲ್ಲಿ ಆಟವಾಡುತ್ತಿರುವ ಮಕ್ಕಳನ್ನೂ ಗದರಿದ್ದಾರೆ.

    ಈ ಎಲ್ಲ ದೃಶ್ಯಗಳನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಜೊತೆಗೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲವೆಂದು ಶಿಕ್ಷಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಲ್ಲದೇ ಈ ಕೂಡಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸರ್ಕಾರಿ ಶಾಲೆಗೆ ಸೇರಿದ ಜಾಗವನ್ನು ಅಳತೆ ಮಾಡಿಸಿ ಬಂದೋಬಸ್ತ್ ಮಾಡಬೇಕು. ಅನವಶ್ಯಕವಾಗಿ ಯಾವುದೇ ವ್ಯಕ್ತಿ ಸರ್ಕಾರಿ ಶಾಲೆಯ ಜಾಗವನ್ನು ಅತಿಕ್ರಮವಾಗಿ ಪ್ರವೇಶಿಸಬಾರದು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಕ್ಕಳ ಅಭಿವೃದ್ಧಿಯೇ ನಮ್ಮ ಪ್ರಗತಿ- ಶಾಲೆಗಾಗಿಯೇ ಅರ್ಧ ಸಂಬಳ ಮೀಸಲಿಡ್ತಾರೆ ರೋಣಾದ ಶರಣಪ್ಪ ಮೇಷ್ಟ್ರು

    ಮಕ್ಕಳ ಅಭಿವೃದ್ಧಿಯೇ ನಮ್ಮ ಪ್ರಗತಿ- ಶಾಲೆಗಾಗಿಯೇ ಅರ್ಧ ಸಂಬಳ ಮೀಸಲಿಡ್ತಾರೆ ರೋಣಾದ ಶರಣಪ್ಪ ಮೇಷ್ಟ್ರು

    ಗದಗ: ಸರ್ಕಾರಿ ಕೆಲಸ ತಿಂಗಳಿಗೆ ಸಂಬಳ ಎಣಿಸಿಕೊಂಡು ಮನೆಗೆ ಹೋಗೋವ್ರೇ ಜಾಸ್ತಿ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ರೋಣಾ ತಾಲೂಕಿನ ಕಳಕಾಪುರದ ಮೇಷ್ಟ್ರು ಶರಣಪ್ಪ ಅವರು ತಮ್ಮ ಅರ್ಧ ಸಂಬಳವನ್ನು ವಿದ್ಯಾರ್ಥಿಗಳಿಗಾಗಿ ಖರ್ಚು ಮಾಡ್ತಿದ್ದಾರೆ.

    ಗದಗ ಜಿಲ್ಲೆಯ ರೋಣ ತಾಲೂಕಿನ ಕಳಕಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಶರಣಪ್ಪ ಮೇಸ್ಟ್ರು ಕಾರ್ಯನಿರ್ವಹಿಸುತ್ತಿದ್ದಾರೆ. ತಮಗೆ ಬರುವ ಶೇಕಡಾ ಅರ್ಧದಷ್ಟು ಸಂಬಳ ಬಡಮಕ್ಕಳ ಶಿಕ್ಷಣ, ಪರಿಸರ, ಕ್ರೀಡೆ, ಗ್ರಾಮದ ಆರೋಗ್ಯಕರ ಕೆಲಸಕ್ಕೆ ಮೀಸಲಿಡುತ್ತಿದ್ದಾರೆ.

    ಕಳೆದ ಎಂಟು ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲಿ-ನಲಿ ಈ ಶರಣಪ್ಪ ಮೆಸ್ಟ್ರು, ಕೇವಲ ಶಾಲೆಗೆ ಸೀಮಿತರಾಗಿಲ್ಲ. ಊರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರಮಜೀವಿ. ಕ್ರೀಡಾ, ಸಂಗೀತ, ಶಿಕ್ಷಣ, ಪರಿಸರ, ಆರೋಗ್ಯ ಗ್ರಾಮ ಹೀಗೆ ನಾನಾ ಬಗೆಯ ಕಾರ್ಯಗಳ ಮೂಲಕ ಕಳಕಾಪುರ ಗ್ರಾಮಕ್ಕೆ ಕಳೆ ತುಂಬುತ್ತಿದ್ದಾರೆ. ತಮ್ಮ ಹಿರಿಯ ವಿದ್ಯಾರ್ಥಿ ಬಳಗ ಕಟ್ಟಿಕೊಂಡು “ಸ್ನೇಹಜೀವಿ ಕಲಾತಂಡ”ವನ್ನು ಸ್ಥಾಪಿಸಿದ್ದಾರೆ.

    ಪ್ರತಿ ತಿಂಗಳಿಗೊಮ್ಮೆ ಗ್ರಾಮದ ಅಭಿವೃದ್ಧಿ, ಸ್ವಚ್ಛತೆ, ಆರೋಗ್ಯ ಬಗ್ಗೆ ಜನಜಾಗ್ರತಿ ಮೂಡಿಸುವ ವಿಶೇಷ ಶಿಬಿರ ಹಮ್ಮಿಕೊಳ್ಳುವ ಮೂಲಕ ಏನನ್ನಾದರೂ ಸಾಧನೆ ಮಾಡಬೇಕೆಂಬ ಬಯಕೆ ಶಿಕ್ಷಕ ಶರಣಪ್ಪ ಹೆಬ್ಬಳ್ಳಿಯವರದ್ದಾಗಿದೆ. ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಯ ಚಹರೆಯನ್ನೇ ಬದಲಿಸಿದ್ದಾರೆ. ಶಾಲಾ ಸೌಂದರ್ಯಕ್ಕೆ ಸುಣ್ಣ, ಬಣ್ಣ, ಚಿತ್ರಕಲೆ, ನಕಾಶೆ, ಮಕ್ಕಳ ಶಿಕ್ಷಣಕ್ಕೆ ಬೇಕಾದ ವಸ್ತುಚಿತ್ರ, ಪ್ರಾಜೆಕ್ಟರ್ ಹೀಗೆ ಅನೇಕ ವಿಷಯಕ್ಕೆ ತಮ್ಮ ಸ್ವಂತ ಹಣ ಖರ್ಚುಮಾಡಿದ್ದಾರೆ. ಪ್ರಾಥಮಿಕ ಮಕ್ಕಳಿಗೆ ಪ್ರೊಜೆಕ್ಟರ್ ಮೂಲಕ ಶಿಕ್ಷಣ, ಕುಳಿತುಕೊಳ್ಳಲು ರೌಂಡ್ ಟೆಬಲ್ ಹಾಗೂ ಖುರ್ಚಿಗೆ ಸರ್ಕಾರ ಹಾಗೂ ಸ್ಥಳೀಯರ ಸಹಾಯ ಬಯಸದೇ ತಾವೇ ಖರ್ಚುಮಾಡ್ತಾರೆ.

    ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ಓದುವ ಮಕ್ಕಳ ಮನೆಗೆ ನಿತ್ಯ ಭೇಟಿ ನೀಡಿ ವಿಚಾರಿಸಿ ಓದಿನ ಉಪಚಾರ ಮಾಡ್ತಾರೆ. ಸಾಯಂಕಾಲ 6 ರಿಂದ 9 ಗಂಟೆವರೆಗೆ ಟಿವಿ ಹಾಕದಂತೆ ಪಾಲಕರಿಗೆ ಸೂಚನೆ ನೀಡ್ತಾರೆ. ಇವರು ಪ್ರಾಥಮಿಕ ಶಾಲೆ ಶಿಕ್ಷಕರಾದ್ರೂ ಗ್ರಾಮದ ಹೈಸ್ಕೂಲ್ ಹಾಗೂ ಕಾಲೇಜ್ ವಿದ್ಯಾರ್ಥಿಗಳಿಗೆ ಶಿಕ್ಷಣದ ಸಿಹಿ ಉಣಬಡಿಸುವ ಮಹಾನ್ ಮೆಸ್ಟ್ರು. ಇವರ ಈ ಕಾರ್ಯ ಇಡೀ ಗ್ರಾಮದ ಪ್ರತಿಯೊಬ್ಬರ ಮೆಚ್ಚುಗೆ ಹಾಗೂ ಅಭಿಮಾನಕ್ಕೂ ಕಾರಣವಾಗಿದೆ.

    ಮಕ್ಕಳು ದೇವರ ಸಮಾನ, ಮಕ್ಕಳಿಂದ ಬರುವ ವೇತನದಲ್ಲೆ ಮಕ್ಕಳಿಗಾಗಿ ಖರ್ಚು ಮಾಡಿದರೆ ತಮಗೆ ಒಳಿತಾಗುತ್ತೆ ಅನ್ನೋ ನಂಬಿಕೆ ಶರಣಪ್ಪ ಅವರದ್ದಾಗಿದ್ದು, ಶಿಕ್ಷಕ ರಾಷ್ಟ್ರ ರಕ್ಷಕ ಅನ್ನೋ ಮಾತು ಶರಣಪ್ಪ ಗುರುಗಳಿಗೆ ಹೇಳಿ ಮಾಡಿಸಿವೆ. ಶರಣಪ್ಪ ಅವರ ಶಿಕ್ಷಣ ಕಾಳಜಿ ಇತರ ಶಿಕ್ಷಕರಿಗೆ ಮಾದರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

    https://www.youtube.com/watch?v=ff_hhrXot4o

  • ಉಡುಪಿ ಸರ್ಕಾರಿ ಶಿಕ್ಷಕನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ವಿವಿಎಸ್ ಲಕ್ಷ್ಮಣ್

    ಉಡುಪಿ ಸರ್ಕಾರಿ ಶಿಕ್ಷಕನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ವಿವಿಎಸ್ ಲಕ್ಷ್ಮಣ್

    ಹೈದರಾಬಾದ್/ಉಡುಪಿ: ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಲು ತಾವೇ ಬಸ್ ಚಾಲಕರಾಗಿರುವ ಫೋಟೋ ಟ್ವೀಟ್ ಮಾಡಿ ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರಾಳಿ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು 6 ಕಿ.ಮೀ. ನಡೆದು ಹೋಗುವ ಅನಿವಾರ್ಯತೆ ಇತ್ತು. ಈ ಸಮಸ್ಯೆಯಿಂದ ಶಾಲೆಗೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಿತ್ತು. ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಲು ಮುಂದಾದ ಶಾಲೆಯ ಶಿಕ್ಷಕ ರಾಜರಾಮ್ ತಾವೇ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

    ಬಸ್ ಖರೀದಿಗೆ ಯೋಚನೆ ಮಾಡಿದ್ದ ರಾಜರಾಮ್ ಅವರು ತಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳ, ಶಿಕ್ಷಕರ ಸಹಾಯ ಪಡೆದು ಖರೀದಿ ಮಾಡಿದ್ದಾರೆ. ಖರೀದಿ ಏನೋ ಆಯ್ತು ಚಾಲಕನನನ್ನು ನೇಮಿಸಬೇಕಾದರೆ ಪ್ರತಿ ತಿಂಗಳು 7 ಸಾವಿರ ರೂ. ಸಂಬಳ ನೀಡಬೇಕಿತ್ತು. ಸದ್ಯದ ಆರ್ಥಿಕ ಸಂಪನ್ಮೂಲದಲ್ಲಿ ಇದು ಕಷ್ಟವಾದ ಕಾರಣ ರಾಜರಾಮ್ ಅವರೇ ಚಾಲಕರಾಗಿದ್ದಾರೆ. ಶಾಲೆಯಲ್ಲಿ ಮುಖ್ಯ ಶಿಕ್ಷಕರು ಒಳಗೊಂಡಂತೆ ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

    ಶಾಲೆಯ ಅವಧಿ ಮುಕ್ತಾಯವಾಗುತ್ತಿದ್ದಂತೆ ರಾಜರಾಮ್ ತಾವೇ ಶಾಲಾ ಬಸ್ಸನ್ನು ಚಲಾಯಿಸಿಕೊಂಡು ಪ್ರತಿ ವಿದ್ಯಾರ್ಥಿಯನ್ನು ಮನೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ ಶಾಲೆಯ ಬಸ್ಸಿನ ಇಂಧನ ಹಾಗೂ ಇತರೇ ಖರ್ಚುಗಳನ್ನು ಅವರೇ ಭರಿಸುತ್ತಿದ್ದಾರೆ.

    ಶಾಲೆಯ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ಪಾಠ ಮಾಡುವುದರೊಂದಿಗೆ ದೈಹಿಕ ಶಿಕ್ಷಕರು ಸಹ ಆಗಿದ್ದಾರೆ. ಬೆಳಗ್ಗೆ 5.30ಕ್ಕೆ ಕಾರ್ಯ ಪ್ರವೃತ್ತರಾಗುವ ರಾಜರಾಮ್ 6 ಗಂಟೆಯಿಂದ ವಿದ್ಯಾರ್ಥಿಗಳಿಗೆ ಹೈಜಂಪ್, ಬ್ಯಾಡ್ಮಿಂಟನ್ ತರಬೇತಿ ನೀಡುತ್ತಾರೆ. ಬಳಿಕ 7.30ಕ್ಕೆ ಸಿದ್ಧರಾಗಿ 8 ಗಂಟೆಗೆ ಬಸ್ಸಿನ ಚಾಲಕನ ಸೀಟ್‍ನಲ್ಲಿ ಕೂತರೇ ಮತ್ತೆ ಮನೆಗೆ ಹಿಂದಿರುಗುವುದು ಸಂಜೆ 5.30ಕ್ಕೆ. ಶಾಲೆಗೆ ಸುತ್ತಲಿನ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದು, ಶಿರಿಯಾರ ಕಲ್ಲುಬೆಟ್ಟು, ಹೊರಳಿಜೆಡ್ಡು, ಅಲ್ತಾರು ಕಾರ್ತಿಬೆಟ್ಟು, ಕಾಜ್ರಳ್ಳಿ, ಮುಸಪುರಿ ಗ್ರಾಮಗಳಿಂದ ತಾವೇ ವಿದ್ಯಾರ್ಥಿಗಳನ್ನು ಕರೆತರುತ್ತಾರೆ.

    ಶಾಲಾ ವಾಹನ ಚಾಲನೆ ಮಾಡಲು ಶಿಕ್ಷಕರು ಪರವಾನಗಿ ಸಹ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಮುಂದಾದ ಬಳಿಕ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಪೋಷಕರು ಸಹ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದು, ಶಾಲೆಯಲ್ಲಿ 90 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.