Tag: ಶಾಸಕ ಸೋಮಶೇಖರ್ ರೆಡ್ಡಿ

  • ಧರಣಿ ಮಾಡಿದಾಕ್ಷಣ ದೊಡ್ಡ ನಾಯಕನಾಗುತ್ತೀಯಾ?- ಜಮೀರ್‌ಗೆ ಸಚಿವ ಶ್ರೀರಾಮುಲು ತಿರುಗೇಟು

    ಧರಣಿ ಮಾಡಿದಾಕ್ಷಣ ದೊಡ್ಡ ನಾಯಕನಾಗುತ್ತೀಯಾ?- ಜಮೀರ್‌ಗೆ ಸಚಿವ ಶ್ರೀರಾಮುಲು ತಿರುಗೇಟು

    – ವಾಚ್‍ಮ್ಯಾನ್ ಆಗ್ತೀನಿ ಎಂದ ಮಾತು ಎಲ್ಲಿ ಹೋಯ್ತು?

    ಚಿತ್ರದುರ್ಗ: ಬಿಎಸ್‍ವೈ ಸಿಎಂ ಆದ್ರೆ ಅವರ ಮನೆ ಎದುರು ವಾಚ್‍ಮ್ಯಾನ್ ಆಗುತ್ತೀನಿ. ವಿಧಾನಸೌಧದ ಗೋಡೆಯನ್ನು ಒಡೆಯುತ್ತೇನೆ ಎಂದಿದ್ದ ಜಮೀರ್ ತಮ್ಮ ಮಾತುಗಳನ್ನು ಮರೆತಿದ್ದಾರೆ, ಆದರೆ ಇಂದು ಬಿಜೆಪಿ ಶಾಸಕರ ಮನೆ ಎದುರು ಧರಣಿ ನಡೆಸಿದ ಮಾತ್ರಕ್ಕೆ ಅವರು ದೊಡ್ಡ ನಾಯಕನಾಗುತ್ತೀಯಾ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಆರೋಗ್ಯ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.

    ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಇಂದು ಮಾಜಿ ಸಚಿವ, ಜಮೀರ್ ಅಹ್ಮದ್ ಧರಣಿ ಮಾಡಲು ಆಗಮಿಸಿದ್ದಾರೆ. ಆದರೆ ಮಾತು ಆಡಿದಂತೆ ನಡೆದುಕೊಳ್ಳೋದು ಅವರಿಂದ ಅಸಾಧ್ಯವಾಗಿದೆ. ಬಿಎಸ್‍ವೈ ಅವರು ಸಿಎಂ ಆದರೆ ಜಮೀರ್ ಅವರು ವಾಚ್ ಮ್ಯಾನ್ ಆಗುತ್ತೇನೆ ಹಾಗೂ ವಿಧಾನಸೌಧದ ಗೋಡೆ ಒಡೆಯುತ್ತೇನೆ ಎಂದು ಹೇಳಿದ್ದರು. ಆದರೆ ಜಮೀರ್ ಅಹ್ಮದ್ ನುಡಿದಂತೆ ನಡೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು. ಇದನ್ನು ಓದಿ: ಸಿಎಂ ಮನೆಯ ವಾಚ್ ಮ್ಯಾನ್- ಜಮೀರ್ ಫೋಟೋ ವೈರಲ್

    ಕೆಲ ಸಂದರ್ಭದಲ್ಲಿ ಸೋಮಶೇಖರರೆಡ್ಡಿ ಮಾತಾಡಿರಬಹುದು. ಆದರೆ ಜಮೀರ್ ಅಹ್ಮದ್ ಅವರೇನು ಕಡಿಮೆ ಇಲ್ಲ. ಅವರೂ ಸಹ ಮಾತಾಡಿದ್ದಾರೆ. ಜಮೀರ್ ಹಾಗೂ ಸಿದ್ಧರಾಮಯ್ಯ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈಗ ನಮ್ಮ ಶಾಸಕರ ಮನೆ ಬಳಿ ಧರಣಿ ನಡೆಸುತ್ತಿದ್ದಾರೆ. ಆ ಮೂಲಕ ಹಿಂದೂ-ಮುಸ್ಲಿಂರ ನಡುವೆ ಜಗಳ ಆರಂಭಿಸಲು ಕಾಂಗ್ರೆಸ್ ನಾಯಕರು ಧರಣಿ ನಡೆಸಿದ್ದಾರೆ ಎಂದು ಆರೋಪಿಸಿದರು.

    ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿದ್ದೇ ತಪ್ಪೆಂದು ವಿರೋಧಿಸಿ ಶಾಸಕರ ಮನೆ ಬಳಿ ಧರಣಿ ಮಾಡಲು ಜಮೀರ್ ಆಗಮಿಸಿದ್ದಾರೆ. ಆದರೆ ಶಾಸಕರ ಮನೆ ಮುಂದೆ ಧರಣಿ ಮಾಡಿದಾಕ್ಷಣ ನೀನು ದೊಡ್ಡ ನಾಯಕನಾಗ್ತಿಯಾ? ಎಂದು ರಾಮುಲು ಏಕವಚನದಲ್ಲೇ ಪ್ರಶ್ನಿಸಿದರು. ಅಲ್ಲದೇ ಸಿದ್ಧರಾಮಯ್ಯ ಕೂಡ ವಕೀಲರಾಗಿದ್ದರೂ ಸಿಎಎ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲಿ. ಅದನ್ನು ಬಿಟ್ಟು ಕಾಂಗ್ರೆಸ್ ನಾಯಕರು ಜಾತಿ, ಜನರನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

    ಕನಕಪುರದಲ್ಲಿ ನಿರ್ಮಾಣ ಮಾಡಲು ಹೊರಟಿರುವ ಏಸು ಪ್ರತಿಮೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಶ್ರೀರಾಮುಲು, ಧರ್ಮದ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ಎಲ್ಲಾ ದೇವರು ಒಬ್ಬರೇ. ಆದರೆ ಇಂದು ದೇವರನ್ನು ಬೇರೆ ಬೇರೆ ಮಾಡಿ ಮಾತನಾಡುವವರು ಸ್ವಾರ್ಥಕ್ಕಾಗಿ ಅಷ್ಟೇ. ಸದ್ಯ ಕಾಂಗ್ರೆಸ್ ನಾಯಕರಿಗೆ ಯಾವುದೇ ವಿಷಯ ಇಲ್ಲವಾಗಿದೆ ಹೀಗಾಗಿ ಹೊಸ ವಿವಾದ ಸೃಷ್ಟಿಸುತಿದ್ದಾರೆಂದರು.

  • ನಾಳೆ ಜನಾರ್ದನ ರೆಡ್ಡಿ ಸಿಸಿಬಿ ಮುಂದೆ ಹಾಜರಾಗ್ತಾರೆ: ಸಹೋದರ ಸೋಮಶೇಖರ್ ರೆಡ್ಡಿ

    ನಾಳೆ ಜನಾರ್ದನ ರೆಡ್ಡಿ ಸಿಸಿಬಿ ಮುಂದೆ ಹಾಜರಾಗ್ತಾರೆ: ಸಹೋದರ ಸೋಮಶೇಖರ್ ರೆಡ್ಡಿ

    ಬೆಂಗಳೂರು: ಅಂಬಿಡೆಂಟ್ ವಂಚನೆ ಆರೋಪ ಎದುರಿಸುತ್ತಿರುವ ಜನಾರ್ದನ ರೆಡ್ಡಿ ನಾಳೆ ಸಿಸಿಬಿ ವಿಚಾರಣೆ ಹಾಜರಾಗಲಿದ್ದಾರೆ ಎಂದು ಸಹೋದರ ಹಾಗೂ ಶಾಸಕ ಸೋಮಶೇಖರ್ ರೆಡ್ಡಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಮಗೆ ನ್ಯಾಯಾಲಯದ ಮೇಲೆ ನಂಬಿಕೆಯಿದ್ದು, ಕಾನೂನಿಗೆ ಗೌರವ ಕೊಡುತ್ತೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಹೆದರುವ ಅವಶ್ಯಕತೆಯೇ ಇಲ್ಲ. ಆದರೆ ಪ್ರಕರಣದ ಮೂಲಕ ಜನಾರ್ದನ ರೆಡ್ಡಿ ಇಮೇಜ್‍ಗೆ ಮಸಿ ಬಳಿಯುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

    ನಾಯಕರ ಜೊತೆಗೆ ಸಾರ್ವಜನಿಕರು ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ಅಂಬಿಡೆಂಟ್ ಕಂಪೆನಿಯ ಫರೀದ್ ಕೂಡ ಹೀಗೆ ಮಾಡಿದ್ದಾರೆ ಎಂದ ಅವರು, ನಮ್ಮ ಮನೆಯ ಸ್ವಾಮೀಜಿಯೊಬ್ಬರು ನಿಮಗೆ ಸದ್ಯದಲ್ಲಿಯೇ ಸಂಕಷ್ಟ ಎದುರಾಗಲಿದೆ ಎಂದಿದ್ದರು. ಅದು ನಿಜವಾಯಿತು. ಜನಾರ್ದನ ರೆಡ್ಡಿ ಮೇಲೆ ಇಲ್ಲದ ಆರೋಪಗಳನ್ನು ಹಾಕುತ್ತಿದ್ದಾರೆ. ಜೊತೆಗೆ ಅಂಬಿಡೆಂಟ್ ಕಂಪೆನಿಯೊಂದಿಗೆ ಜನಾರ್ದನ ರೆಡ್ಡಿ ಹೆಸರು ಸೇರಿಸುತ್ತಿದ್ದಾರೆ ಎಂದು ದೂರಿದರು.

    ಈ ಎಲ್ಲ ಬೆಳವಣಿಗೆಗೆ ಸೂಕ್ತ ಉತ್ತರ ನೀಡಲು ಜನಾರ್ದನ ರೆಡ್ಡಿ ನಾಳೆ ಸಿಸಿಬಿ ಅಧಿಕಾರಿಗಳನ್ನು ಭೇಟಿ ಆಗುತ್ತಾರೆ. ಸದ್ಯ ಸಹೋದರ ಎಲ್ಲಿದ್ದಾನೆ ಎನ್ನುವುದು ಗೊತ್ತಿಲ್ಲ. ಸಿಸಿಬಿಯಿಂದ ನಮಗೆ ಮೊದಲು ಯಾವುದೇ ನೋಟಿಸ್ ಬಂದಿಲ್ಲ. ನನಗೆ ಈ ಬಗ್ಗೆ ಹೆಚ್ಚು ಮಾಹಿತಿಯಿಲ್ಲ ಎಂದು ರೆಡ್ಡಿ ಸಹೋದರ ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews