Tag: ಶಾಸಕ ವರ್ತೂರ್ ಪ್ರಕಾಶ್

  • ಶಾಸಕ ವರ್ತೂರ್ ಪ್ರಕಾಶ್ ರನ್ನು ಮಣಿಸಲು ಪಣ- ಕಾಂಗ್ರೆಸ್-ಜೆಡಿಎಸ್ ನಿಂದ ಸಿದ್ಧವಾಗಿದೆ `ಟಾರ್ಗೆಟ್ ವರ್ತೂರು’ ಟೀಂ

    ಶಾಸಕ ವರ್ತೂರ್ ಪ್ರಕಾಶ್ ರನ್ನು ಮಣಿಸಲು ಪಣ- ಕಾಂಗ್ರೆಸ್-ಜೆಡಿಎಸ್ ನಿಂದ ಸಿದ್ಧವಾಗಿದೆ `ಟಾರ್ಗೆಟ್ ವರ್ತೂರು’ ಟೀಂ

    ಕೋಲಾರ: ಚುನಾವಣೆಗೆ ದಿನಗಣನೆ ಆರಂಭವಾಗಿದ್ರೂ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ಗೊಂದಲಕ್ಕೆ ಮಾತ್ರ ತೆರೆಬಿದ್ದಿಲ್ಲ. ಈ ಮಧ್ಯೆ ಹಾಲಿ ಶಾಸಕರನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅತೃಪ್ತರ ತಂಡವೊಂದು ಸಿದ್ಧವಾಗಿದೆ. ಟಾರ್ಗೆಟ್ ವರ್ತೂರು ಅನ್ನೋ ಹೆಸರಲ್ಲಿ ಟೀಂ ಒಂದು ಸಖತ್ ಪ್ಲಾನ್ ಮಾಡುತ್ತಿದೆ.

    ಕೋಲಾರ ವಿಧಾನಸಭಾ ಕ್ಷೇತ್ರ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿರುವ ಕ್ಷೇತ್ರ, ಮೂರು ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ವಿಚಾರದಿಂದ ಹಿಡಿದು ಬಂಡಾಯದವರೆಗೆ ಕ್ಷೇತ್ರದಲ್ಲಿ ಇನ್ನು ಭಿನ್ನಮತ ಶಮನವಾಗಿಲ್ಲ. ಈ ನಡುವೆ ಕೋಲಾರ ಕ್ಷೇತ್ರದಲ್ಲಿ ಹೊಸದೊಂದು ಆನ್ ಲೈನ್ ಟೀಂ ಸಿದ್ಧವಾಗುತ್ತಿದೆ. ಆ ಟೀಂನ ಅಜೆಂಡಾ ಒಂದೇ ಕೋಲಾರದ ಹಾಲಿ ಶಾಸಕ ವರ್ತೂರ್ ಪ್ರಕಾಶ್ ರನ್ನು ಕೋಲಾರ ಕ್ಷೇತ್ರದಿಂದ ಸೋಲಿಸಬೇಕು ಅನ್ನೋದೆ ಆಗಿದೆ.

    ಇದೇ ಉದ್ದೇಶದೊಂದಿಗೆ ಕಾಂಗ್ರೆಸ್ ಪಕ್ಷದ ಅತೃಪ್ತರು ಹಾಗೂ ಜೆಡಿಎಸ್ ಪಕ್ಷದ ಅತೃಪ್ತರು, ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಬೆಂಬಲಿಗರು ಸೇರಿದಂತೆ ಕೋಲಾರ ಸಂಸದ ಕೆ.ಹೆಚ್.ಮುನಿಯಪ್ಪ ವಿರೋಧಿ ಬಣ ಒಗ್ಗಟ್ಟಾಗಿ ಒಬ್ಬ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಪ್ಲಾನ್ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಘೋಷಣೆ ಮಾಡಿದ ಬೆನ್ನಲ್ಲೇ ಈ ಎಲ್ಲಾ ಅತೃಪ್ತರು ಒಂದಾಗಿದ್ದು, ಪಕ್ಷಾತೀತವಾಗಿ ಒಂದಾಗಿ ಈ ಚುನಾವಣೆಯಲ್ಲಿ ವರ್ತೂರ್ ಪ್ರಕಾಶ್‍ರನ್ನು ಸೋಲಿಸಲು ಮುಂದಾಗಿದ್ದಾರೆ. ಆದರೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಘೋಷಣೆಯಾಗದ ಹಿನ್ನೆಲೆ ಜೆಡಿಎಸ್‍ಗೆ ಬೆಂಬಲಿಸಿ ಚುನಾವಣೆ ಎದುರಿಸುವ ಪ್ಲಾನ್ ಕೂಡಾ ನಡೆದಿದೆ ಎನ್ನಲಾಗಿದೆ.

    ಅತೃಪ್ತರ ಟೀಂ ನಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಮಾಜಿ ಎಂಎಸ್‍ಐಎಲ್ ಅಧ್ಯಕ್ಷ ಅನಿಲ್‍ಕುಮಾರ್, ಮಾಜಿ ಸಚಿವ ನಿಸಾರ್ ಅಹಮದ್ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಟಿಕೆಟ್ ವಂಚಿತರು. ವರ್ತೂರ್ ಪ್ರಕಾಶ್‍ರವರ ವಿರೋಧಿ ಬಣ ಹಾಗೂ ಸಂಸದ ಕೆ.ಹೆಚ್. ಮುನಿಯಪ್ಪರ ವಿರೋಧಿ ಬಣ ಎಲ್ಲರೂ ಒಂದಾಗಿ ಈಗಾಗಲೇ ತಮ್ಮ ತಮ್ಮ ಬೆಂಬಲಿಗರ ಸಭೆಗಳನ್ನು ನಡೆಸಿ ರಣತಂತ್ರ ರೂಪಿಸಿದ್ದಾರೆ. ಮಾತ್ರವಲ್ಲದೆ ಇದಕ್ಕೆ ಪರೋಕ್ಷವಾಗಿ ಉಸ್ತುವಾರಿ ಸಚಿವ ರಮೇಶ್ ಕುಮಾರ್ ಬೆಂಬಲ ಕೂಡ ಇದೆ ಎನ್ನಲಾಗಿದೆ. ಶೀಘ್ರವೇ ಈ ಟೀಂನ ಅಧಿಕೃತ ಅಭ್ಯರ್ಥಿ ಹೆಸರು ಹೊರಬೀಳಲಿದೆ. ಈ ಮಧ್ಯೆ ಶಾಸಕ ವರ್ತೂರ್ ಪ್ರಕಾಶ್ ಮಾತ್ರ ಈ ಬಾರಿ ಗೆಲುವು ನಮ್ಮದೇ ಅನ್ನೋ ಉತ್ಸಾಹದಲ್ಲಿದ್ದಾರೆ.

  • ಅಣ್ಣನ ಮಗನ ಹೆಸರಿಗೆ ದಲಿತರ ಭೂಮಿ ಸ್ವಾಹ – ಎಂಎಲ್‍ಎ ವರ್ತೂರು ವಿರುದ್ಧ ರೊಚ್ಚಿಗೆದ್ದ ಮಹಿಳೆ

    ಅಣ್ಣನ ಮಗನ ಹೆಸರಿಗೆ ದಲಿತರ ಭೂಮಿ ಸ್ವಾಹ – ಎಂಎಲ್‍ಎ ವರ್ತೂರು ವಿರುದ್ಧ ರೊಚ್ಚಿಗೆದ್ದ ಮಹಿಳೆ

    ಕೋಲಾರ: ಶಾಸಕ ಅರ್ ವರ್ತೂರು ಪ್ರಕಾಶ್ ದಲಿತರನ್ನ ವಂಚಿಸಿ ಅಕ್ರಮವಾಗಿ ತನ್ನ ಅಣ್ಣನ ಮಗನ ಹೆಸರಲ್ಲಿ ಬೇನಾಮಿ ಆಸ್ತಿ ಗಳಿಕೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

    ಜೀವ ಬೆದರಿಕೆ ಹಾಕಿ, ತಮ್ಮ ಪ್ರಭಾವ ಬಳಸಿಕೊಂಡು ದಲಿತರಿಂದ ಅಕ್ರಮವಾಗಿ ಭೂಕಬಳಿಕೆ ಮಾಡಿದ್ದಾರೆ ಎಂದು ಆರ್‍ಟಿಐ ಮುಖಂಡ ಅಂಬರೀಶ್ ಆರೋಪಿಸಿದ್ದಾರೆ.

    ಬೆಗ್ಲಿಹೊಸಹಳ್ಳಿ ಗ್ರಾಮದ ದಲಿತ ಮುನಿಯಪ್ಪ ಎಂಬವರ ಒಂದು ಎಕರೆ 30 ಗುಂಟೆ ಜಮೀನನ್ನ, 2009ರಲ್ಲಿ ದಿನೇಶ್ ಬಾಬು ಎಂಬವನಿಗೆ ಮಾಡಿಕೊಟ್ಟು, ಆನಂತರ 2013ರಲ್ಲಿ ಶಾಸಕರ ಅಣ್ಣನ ಮಗ ರಕ್ಷಿತ್ ಹೆಸರಿಗೆ ಮಾಡಿಸಿಕೊಳ್ಳಲಾಗಿದೆ. ಆದ್ರೆ ಮುನಿಯಪ್ಪ 2001ರಲ್ಲಿ ಮರಣ ಪಟ್ಟಿದ್ದು, ದಿನೇಶ್ ಬಾಬು ಕೂಡ ಬದುಕಿಲ್ಲ. ಇದನ್ನೇ ದುರುಪಯೋಗ ಮಾಡಿಕೊಂಡ ಶಾಸಕರು ಹಾಗೂ ಅವರ ಆಪ್ತರು ಭೂಕಬಳಿಕೆ ಮಾಡಿದ್ದಾರೆ ಅಂಥ ಆರೋಪಿಸುತ್ತಿರುವ ಮುನಿಯಪ್ಪ ಪತ್ನಿ ಚೆನ್ನಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.

    ಶಾಸಕರ ಬೇನಾಮಿ ಆಸ್ತಿ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಮಹಿಳೆ ಮನವಿ ಮಾಡಿದ್ದಾರೆ.

     

  • ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಬಾಡೂಟ ಪಾಲಿಟಿಕ್ಸ್- ಶಾಸಕ ವರ್ತೂರ್ ಪ್ರಕಾಶ್‍ರಿಂದ ಭರ್ಜರಿ ಊಟ

    ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಬಾಡೂಟ ಪಾಲಿಟಿಕ್ಸ್- ಶಾಸಕ ವರ್ತೂರ್ ಪ್ರಕಾಶ್‍ರಿಂದ ಭರ್ಜರಿ ಊಟ

    ಕೋಲಾರ: 2018ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಲಾರ ಜಿಲ್ಲೆಯ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಕಳೆದ ಕೆಲವು ದಿನಗಳ ಹಿಂದೆ ಚಿಂತಾಮಣಿ ಶಾಸಕರಾದ ಜೆ.ಕೆ ಕೃಷ್ಣ ರೆಡ್ಡಿ ತಮ್ಮ ಮತದಾರರನ್ನು ಸೆಳೆಯಲು ಬಾಡೂಟ ಕಾರ್ಯಕ್ರಮ ಏರ್ಪಡಿಸಿದಂತೆ. ಇಂದು ಕೋಲಾರ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅವರು ಟಿಪ್ಪು ಜಯಂತಿ ಆಚರಣೆಯ ಪೂರ್ವಭಾವಿ ಸಭೆ ಹೆಸರಲ್ಲಿ ಬಾಡೂಟ ಏರ್ಪಡಿಸಿದ್ದಾರೆ.

    ಕೋಲಾರದ ಬೈರೇಗೌಡ ನಗರದ ಶಾಸಕರ ನಿವಾಸದ ಬಳಿ ಮುಸ್ಲಿಂ ಮುಖಂಡರಿಗೆ ಸಭೆಗೆ ಆಹ್ವಾನಿಸಿದ್ದಾರೆ. ಸಭೆಯಲ್ಲಿ ಭಾಗವಹಿಸುವ ಮುಖಂಡರಿಗಾಗಿ ಮಧ್ಯಾಹ್ನದ ಊಟಕ್ಕೆ ಭರ್ಜರಿ ಬಾಡೂಟ ತಯಾರಿ ಮಾಡಿಸಿದ್ದು, ಸುಮಾರು 300 ಕೆ.ಜಿ ಚಿಕನ್ ಧಮ್ ಬಿರಿಯಾನಿ ಮಾಡಿಸಲಾಗಿದೆ.

    ಆದರೆ ಇಂದು 11 ಗಂಟೆಗೆ ನಿಗಧಿಯಾಗಿದ್ದ ಸಭೆಗೆ ಒಂದು ಗಂಟೆಯಾದರು ಯಾವ ಮುಖಂಡರೂ ಬಾರದ ಹಿನ್ನೆಲೆ ಶಾಸಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. 2013 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕ ವರ್ತೂರ್ ಪ್ರಕಾಶ್ ಅವರಿಗೆ ಮುಸ್ಲಿಂ ಸಮುದಾಯದ ಮತಗಳು ದೊರೆತಿರಲಿಲ್ಲ. ಅದ್ದರಿಂದಲೇ ಈ ಬಾರಿ ಮುಸ್ಲಿಂ ಮತಗಳನ್ನು ಸೆಳೆಯಲು ಭರ್ಜರಿ ತಯಾರಿ ನಡೆಸಲಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

  • ಯಡಿಯೂರಪ್ಪ ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ: ವರ್ತೂರ್ ಪ್ರಕಾಶ್

    ಯಡಿಯೂರಪ್ಪ ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ: ವರ್ತೂರ್ ಪ್ರಕಾಶ್

    ರಾಯಚೂರು: ಉತ್ತರ ಕರ್ನಾಟಕದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಎಲ್ಲೇ ಸ್ಪರ್ಧಿಸಿದರೂ ಅವರ ವಿರುದ್ಧ ಎದುರಾಳಿಯಾಗಿ ಸ್ಪರ್ಧಿಸುತ್ತೇನೆ ಎಂದು ಕೋಲಾರದ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಹೇಳಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತನಗೆ ಟಿಕೆಟ್ ಕೊಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಆಶ್ವಾಸನೆಯನ್ನು ನೀಡಿದ್ದಾರೆ ಎಂದು ಶಾಸಕ ವರ್ತೂರ್ ಪ್ರಕಾಶ ಹೇಳಿದ್ದಾರೆ.

    ರಾಯಚೂರಿನಲ್ಲಿ ಈ ಕುರಿತು ಮಾತನಾಡಿದ ಶಾಸಕ ಪ್ರಕಾಶ್, ಯಡಿಯೂರಪ್ಪನವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರು ಅಲ್ಲಿ ಲಿಂಗಾಯತ ಮತಗಳ 50 ಸಾವಿರದಿಂದ ಶುರವಾಗುತ್ತದೆ. ನಮ್ಮ ಅಹಿಂದ ಸಮುದಾಯದ ಮತಗಳು 75%ರಷ್ಟಿದ್ದು ಅದರಿಂದ ನಮ್ಮ ಗೆಲುವು ಸುಲಭಸಾಧ್ಯ ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ಮುಂದಿನ ಅವಧಿಗೂ ರಾಜ್ಯದಲ್ಲಿ ಸಿದ್ದರಾಮಯ್ಯ ಅವರೆ ಸಿಎಂ ಆಗಬೇಕು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೂ ಸಿದ್ದರಾಮಯ್ಯನವರಿಗೂ ಯಾವ ಸಂಬಂಧವಿಲ್ಲ. ಬುದ್ಧಿವಂತ ಸಮಾಜದವರು ತಾವೇ ಬೀದಿಗಿಳಿದು ಹೋರಾಟ ನಡೆಸಿದ್ದಾರೆ ಎಂದರು.

    ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಿರುವುದನ್ನ ಲಾಲಿಪಪ್‍ಗೆ ಹೋಲಿಸಿರುವ ಕೇಂದ್ರ ಸಚಿವ ಜಾವೇಡಕರ್ ಗೆ ಸವಾಲು ಎಸೆದ ಶಾಸಕರು, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಮನ್ನಾ ಮಾಡಿ ಬಿರಿಯಾನಿ ಕೊಡಿಸಲಿ ಅಂತ ಹೇಳಿದರು.