Tag: ಶಾಸಕ ನಾಗನಗೌಡ ಕಂದಕೂರ

  • ಯಾದಗಿರಿಯಲ್ಲಿ ಮೊದಲ ಬಾರಿಗೆ ಸ್ಯಾನಿಟೈಸರ್ ಸ್ಪ್ರೇ ಟನಲ್ ಆರಂಭ

    ಯಾದಗಿರಿಯಲ್ಲಿ ಮೊದಲ ಬಾರಿಗೆ ಸ್ಯಾನಿಟೈಸರ್ ಸ್ಪ್ರೇ ಟನಲ್ ಆರಂಭ

    ಯಾದಗಿರಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಮುಂಜಾಗ್ರತೆ ಕ್ರಮವಾಗಿ ಕಲ್ಯಾಣ ಕರ್ನಾಟಕದ ಯಾದಗಿರಿಯಲ್ಲಿ ಮೊದಲ ಬಾರಿಗೆ ಸ್ಯಾನಿಟೈಸರ್ ಸ್ಪ್ರೇ ಟನಲ್ ಆರಂಭಿಸಲಾಗಿದೆ.

    ತಮ್ಮ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ತಮ್ಮ ಸ್ವಂತ ಖರ್ಚಿನಲ್ಲಿ ಈ ಟೆನಲ್‍ಗಳನ್ನು ಆರಂಭಿಸಿದ್ದಾರೆ. ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜು ಆವರಣದಲ್ಲಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಹೊಸದಾಗಿ ತರಕಾರಿ ಮಾರುಕಟ್ಟೆ ಆರಂಭಿಸಲಾಗಿದೆ. ಈ ಮಾರುಕಟ್ಟೆ ಮುಖ್ಯ ದ್ವಾರದಲ್ಲಿ ಈ ಸ್ಯಾನಿಟೈಸರ್ ಸ್ಪ್ರೇ ಟನಲ್ ನಿರ್ಮಾಣ ಮಾಡಲಾಗಿದೆ.

    ತರಕಾರಿ ಮಾರುಕಟ್ಟೆಗೆ ನಿತ್ಯ ಬರುವ ನೂರಾರು ಮಂದಿ ಸ್ಪ್ರೇ ಸಿಂಪಡಣೆ ಆದ ಬಳಿಕವೇ ಒಳಗಡೆ ಹೋಗಬೇಕು ಮತ್ತು ವಾಪಸ್ ಬರವಾಗಲೂ ಸ್ಪ್ರೇ ಟನಲ್‍ನಿಂದಲೇ ಹೊರಗಡೆ ಬರಬೇಕು ಎಂದು ಸೂಚಿಸಲಾಗಿದೆ. ಈ ಮೂಲಕ ಯಾದಗಿರಿಯಲ್ಲಿ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ.

  • ಮೋದಿ, ಶಾ ಇಬ್ಬರಿಗೂ ಮುಂದೆ ಕಾದಿದೆ ಮಾರಿ ಹಬ್ಬ – ಜೆಡಿಎಸ್ ಶಾಸಕ ನಾಗನಗೌಡ

    ಮೋದಿ, ಶಾ ಇಬ್ಬರಿಗೂ ಮುಂದೆ ಕಾದಿದೆ ಮಾರಿ ಹಬ್ಬ – ಜೆಡಿಎಸ್ ಶಾಸಕ ನಾಗನಗೌಡ

    ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ದುರ್ಯೋಧನ ಮತ್ತು ದುಶ್ಶಾಸನ ಇದ್ದ ಹಾಗೆ ಎಂದು ಯಾದಗಿರಿಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ, ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಹೇಳಿದ್ದಾರೆ.

    ಯಾದಗಿರಿಯ ತಮ್ಮ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ದುರ್ಯೋಧನ ಮತ್ತು ದುಶ್ಶಾಸನ ದ್ರೌಪದಿಯ ವಸ್ತ್ರಾಪಹರಣ ಮಾಡುವಾಗ ನಾವು ಮಾಡುವ ಕೆಲಸಕ್ಕೆ ಎಲ್ಲರೂ ಸಂತೋಷ ಪಡುತ್ತಾರೆ ಎಂದು ಇಬ್ಬರೂ ನಕ್ಕರು. ಆಗ ಅವರು ಮಾಡುತ್ತಿರುವ ತಪ್ಪಿನ ಅರಿವು ಅವರಿಗೆ ಆಗಿರಲಿಲ್ಲ. ಮುಂದೆ ನಮಗಾಗಿ ಮಾರಿ ಹಬ್ಬ ಕಾದಿದೆ ಎಂದು ತಿಳಿದುಕೊಂಡಿರಲಿಲ್ಲ. ಈಗ ಮೋದಿ ಮತ್ತು ಅಮಿತ್ ಶಾ ಸಹ ಅದೇ ತರ ವರ್ತನೆ ಮಾಡುತ್ತಿದ್ದಾರೆ. ಮುಂದೆ ಅವರಿಗೂ ಮಾರಿ ಹಬ್ಬ ಕಾದಿದೆ ಎಂಬುದು ಅವರಿಗೆ ತಿಳಿದಿಲ್ಲ ಎಂದು ಹರಿಹಾಯ್ದರು.

    ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಆದರೂ ಅವರು ಮಾಡಿದ್ದೇ ಸರಿ ಎಂದು ಓಡಾಡುತ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಇತ್ತೀಚಿನ ಕೆಲಸಗಳಿಗೆ ಹೋಲಿಸಿ ದುರ್ಯೋಧನ ಹಾಗೂ ದುಶ್ಶಾಸನ ಇದ್ದಂತೆ ಎಂದು ಉದಾಹಣೆ ನೀಡಿದ್ದೇನೆ. ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ, ಒಡಿಶಾಗೆ 3 ಸಾವಿರ ಕೋಟಿ ನೀಡಿದ್ದಾರೆ. ಆದರೆ ರಾಜ್ಯದ ನೆರೆ ಸಂತ್ರಸ್ತರಿಗೆ ಎಷ್ಟು ನೀಡಿದ್ದಾರೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

    ಸ್ವತಂತ್ರ ಭಾರತ ಇತಿಹಾಸದಲ್ಲಿ ಚುನಾವಣೆ ವೇಳೆ ನಮ್ಮ ಸೈನಿಕರು ಮತ್ತು ಗಡಿ ವಿಚಾರವನ್ನು ಯಾರು ಬಳಸಿಕೊಂಡಿರಲಿಲ್ಲ. ಆದರೆ, ಪುಲ್ವಾಮಾ ದಾಳಿಯ ವಿಚಾರ ಬಳಸಿಕೊಂಡು ಜನರನ್ನು ಮೂಖ ಪ್ರೇಕ್ಷಕರನ್ನಾಗಿ ಮಾಡಿ ಭಾವನಾತ್ಮಕವಾಗಿ ಮತ ಸೆಳೆದುಕೊಂಡರು. ಚುನಾವಣೆ ವೇಳೆ ರಾಮ ಭೂಮಿ ಅಂತಾರೆ, ರಾಮನ ಮಂದಿರ ಅಂತಿದ್ದರು. ಎಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದರು ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.