Tag: ಶಾಸಕ ಅಮೃತ ದೇಸಾಯಿ

  • ಪುನೀತ್‌ ಪ್ರೇರಣೆ- ನೇತ್ರ ದಾನಕ್ಕೆ ಧಾರವಾಡ ಶಾಸಕ ದಂಪತಿ ಒಪ್ಪಿಗೆ

    ಪುನೀತ್‌ ಪ್ರೇರಣೆ- ನೇತ್ರ ದಾನಕ್ಕೆ ಧಾರವಾಡ ಶಾಸಕ ದಂಪತಿ ಒಪ್ಪಿಗೆ

    ಧಾರವಾಡ: ಪುನೀತ್ ರಾಜಕುಮಾರ್‌ ಅವರು ಕಣ್ಣು ದಾನ ಮಾಡಿದ್ದನ್ನು ಪ್ರೇರಣೆಯಾಗಿ ತೆಗೆದುಕೊಂಡು ರಾಜ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ನೇತ್ರ ದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಧಾರವಾಡದ ಶಾಸಕ ದಂಪತಿ ಕೂಡ ಕಣ್ಣು ದಾನಕ್ಕೆ ಒಪ್ಪಿಗೆ ನೀಡಿದ್ದಾರೆ.

    ಹೌದು, ಶಾಸಕ ಅಮೃತ ದೇಸಾಯಿ ಅವರು 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬದ ಸಂಭ್ರಮದ ಸಂದರ್ಭದಲ್ಲಿ ಪತ್ನಿ ಪ್ರಿಯಾ ಅವರೊಂದಿಗೆ ನೇತ್ರದಾನಕ್ಕೆ ಒಪ್ಪಿ ಸಹಿ ಮಾಡಿದ್ದಾರೆ. ಇದನ್ನೂ ಓದಿ: ಕಲ್ಲಂಗಡಿ ಹಣ್ಣಿನ ಮೇಲೆ ಅರಳಿದ ಪುನೀತ್ ಭಾವಚಿತ್ರ

    ಶಾಸಕ ಅಮೃತ ದೇಸಾಯಿ ಅವರ ಹುಟ್ಟುಹಬ್ಬದ ಅಂಗವಾಗಿ ಶಾಸಕರ ಬೆಂಬಲಿಗರು ರಕ್ತ ದಾನ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಶಾಸಕ ಅಮೃತ ದೇಸಾಯಿ ಅವರು, ನಾನು ಹಾಗೂ ನನ್ನ ಪತ್ನಿ ಪ್ರಿಯಾ ಕಣ್ಣು ದಾನ ಮಾಡುತ್ತೇವೆ. ಪುನೀತ್ ರಾಜಕುಮಾರ್ ಅವರ ನಿಧನದ ನಂತರವೂ ಆ ಕಣ್ಣು ದಾನ ಪಡೆದವರ ಮನದಲ್ಲಿ ಇರುತ್ತಾರೆ. ಅದೇ ರೀತಿ ನಾವು ಕೂಡ ಜನರ ಮನದಲ್ಲಿ ಇರಬೇಕಾದರೆ, ನಮ್ಮ ಕಣ್ಣು ದಾನ ಮಾಡಬೇಕು ಎಂದು ಶಾಸಕರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ನಟಿ ಭಾವನಾ ಕಾಂಗ್ರೆಸ್‌ಗೆ ಸೇರ್ಪಡೆ

    ಶಾಸಕರು ನೇತ್ರ ದಾನ ಮಾಡುತ್ತಿದ್ದಾರೆ ಎಂದು ತಿಳಿದ ಅವರ ಬೆಂಬಲಿಗರೂ ಕೂಡಾ ಕಣ್ಣು ದಾನ ಮಾಡಿದ್ದಾರೆ. ಸದ್ಯ 200 ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ನೇತ್ರ ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

  • ನಮ್ಮ ಯುವಕರಿಗೆ ಕೆಲಸ ಕೊಡಡಿದ್ರೆ ನಿಮ್ಗೆ ನೀರು ಬಿಡಲ್ಲ: ಶಾಸಕ ಅಮೃತ ದೇಸಾಯಿ

    ನಮ್ಮ ಯುವಕರಿಗೆ ಕೆಲಸ ಕೊಡಡಿದ್ರೆ ನಿಮ್ಗೆ ನೀರು ಬಿಡಲ್ಲ: ಶಾಸಕ ಅಮೃತ ದೇಸಾಯಿ

    -ಇಬ್ಬರು ಸಚಿವರ ಎದುರಲ್ಲೇ ಖಡಕ್ ಮಾತು

    ಧಾರವಾಡ: ಸರ್ಕಾರದ ಜಲಶುದ್ಧೀಕರಣ ಘಟಕದಲ್ಲಿ ಸ್ಥಳೀಯ ಯುವಕರಿಗೆ ನೌಕರಿ ಕೊಟ್ಟರೇ ಮಾತ್ರ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೀರು ಬಿಡೋದಾಗಿ ತಮ್ಮದೇ ಪಕ್ಷದ ಕೇಂದ್ರ ಮತ್ತು ರಾಜ್ಯ ಸಚಿವರಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಎಚ್ಚರಿಕೆ ಕೊಟ್ಟಿದ್ದಾರೆ.

    ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಳಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೀರು ಪೂರೈಸುವ 40 ದಶಲಕ್ಷ ಲೀಟರ್ ಸಾಮರ್ಥ್ಯದ ಜಲಶುದ್ಧೀಕರಣ ಘಟಕ ನಿರ್ಮಿಸಲಾಗಿದ್ದು, ಶನಿವಾರ ಉದ್ಘಾಟನೆ ಸಮಾರಂಭವಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಈ ಘಟಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ಈ ಘಟಕ ಇರೋದು ಅಮ್ಮಿನಬಾವಿ ಮತ್ತು ಮರೇವಾಡ ಗ್ರಾಮದ ವ್ಯಾಪ್ತಿಯಲ್ಲಿ, ಹೀಗಾಗಿ ಇಲ್ಲಿ ಸ್ಥಳೀಯ ಯುವಕರನ್ನೇ ನೌಕರಿಗೆ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಇಲ್ಲಿಂದ ನೀರು ಹೋಗೋದಕ್ಕೆ ನಾವು ಬಿಡುವುದೇ ಇಲ್ಲ ಎನ್ನುವ ಖಡಕ್ ಮಾತುಗಳನ್ನಾಡಿದರು.

    ಈ ಮೊದಲು ಹೇಳಿದಾಗ ಅಧಿಕಾರಿಗಳು ಸರಿ ಸರ್, ಎನ್ನುತ್ತಲೇ ಹೊರಗಿನವರನ್ನು ತೆಗೆದುಕೊಂಡಿದ್ದಾರೆ ಎಂದಿರುವ ಅಮೃತ ದೇಸಾಯಿ, ಹೊರಗಿನವರನ್ನು ತೆಗೆದು ಒಗೆಯಿರಿ. ನಮ್ಮ ಸ್ಥಳೀಯರಿಗೆ ನೌಕರಿ ಕೊಡಿ ಎನ್ನುತ್ತ ಶೆಟ್ಟರ್ ಮತ್ತು ಜೋಶಿಯವರನ್ನ ನೋಡಿದ ಶಾಸಕ, ನೀವು ನಮ್ಮ ಹಿರಿಯ ಮಾರ್ಗದರ್ಶಕರು ಇದ್ದೀರಿ. ನಾವು ನೊಂದು ಈ ಮಾತು ಹೇಳುತ್ತಿದ್ದೇವೆ. ದಯಮಾಡಿ ನಮ್ಮ ಯುವಕರಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.