Tag: ಶಾಸಕಿ ಸೌಮ್ಯ ರೆಡ್ಡಿ

  • ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದ ಶಾಸಕಿ ಸೌಮ್ಯರೆಡ್ಡಿ 

    ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದ ಶಾಸಕಿ ಸೌಮ್ಯರೆಡ್ಡಿ 

    ಬೆಂಗಳೂರು: ಜಯನಗರದ ಕಾಂಗ್ರೆಸ್ ಶಾಸಕಿ ಸೌಮ್ಯ ರ್‍ಯಾಂಪ್  ಮೇಲೆ ಹೆಜ್ಜೆ ಹಾಕಿದ್ದಾರೆ.

    ಇಂದಿನಿಂದ ಮೂರು ದಿನಗಳ ಕಾಲ [ಶುಕ್ರವಾರದಿಂದ ಭಾನುವಾರದವರೆಗೆ] ಬೆಂಗಳೂರಿನ ಅಶೋಕ್ ಲಲಿತ್ ನಲ್ಲಿ ಪುರಾತನ, ಪಾರಂಪರಿಕ ಆಭರಣಗಳ ಮಾರಾಟ, ಪ್ರದರ್ಶನವನ್ನು ಆಯೋಜಿಸಲಾಗಿದೆ.

    ಕೋವಿಡ್ 19 ಸಾಂಕ್ರಮಿಕ ರೋಗ ನಗರದಲ್ಲಿ ಕಾಣಿಸಿಕೊಂಡ ಹಿನ್ನೆಲೆ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ಇದೀಗ ಸೋಂಕು ಕಡಿಮೆಯಾಗಿರುವುದರಿಂದ ಮತ್ತೆ ಬೆಂಗಳೂರಲ್ಲಿ ಏರ್ಪಡಿಸಿತ್ತಿರುವ ಅತೀ ದೊಡ್ಡ ಆಭರಣ ಮೇಳ ಕಾರ್ಯಕ್ರಮವಾಗಿದೆ. ದೇಶದ ನೂರಕ್ಕೂ ಹೆಚ್ಚು ಪ್ರಮುಖ ಆಭರಣ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ವಿಶಿಷ್ಟ ಆಭರಣಗಳನ್ನು ಪ್ರದರ್ಶಿಸುತ್ತಿದ್ದಾರೆ.

    ಈ ವೇಳೆ ಸಮಾರಂಭಕ್ಕೆ ಆಗಮಿಸಿದ ಬಿಜೆಪಿ ಶಾಸಕಿ ಸೌಮ್ಯ ರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪುರಾತನ ಆಭರಣಗಳನ್ನು ತೊಟ್ಟು ರ್‍ಯಾಂಪ್  ಮೇಲೆ ಹೆಜ್ಜೆ ಹಾಕಿದರು. ಜೊತೆಗೆ ಟ್ರೆಂಡಿ ಜುವೆಲರ್ಸ್‍ಗಳನ್ನು ಜವ್ವನೆಯರು ಧರಿಸಿ ರ್‍ಯಾಂಪ್ ವಾಕ್‌ ಮಾಡುವ ಮೂಲಕ ಪ್ರದರ್ಶಿಸಿದರು. ಅಂದಹಾಗೇ ಈ ಪಾರಂಪರಿಕ, ವೈಶಿಷ್ಟ್ಯಪೂರ್ಣ, ವಿನೂತನ ಆಭರಣ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

  • ನನ್ನ ಸ್ನೇಹಿತೆ ತಂದೆಗೆ ಬೆಡ್ ಸಿಗದೆ ಸತ್ತೇ ಹೋದ್ರು: ಸೌಮ್ಯ ರೆಡ್ಡಿ

    ನನ್ನ ಸ್ನೇಹಿತೆ ತಂದೆಗೆ ಬೆಡ್ ಸಿಗದೆ ಸತ್ತೇ ಹೋದ್ರು: ಸೌಮ್ಯ ರೆಡ್ಡಿ

    ಬೆಂಗಳೂರು: ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಜನ ಇವತ್ತು ಬೆಡ್, ಆಕ್ಸಿಜನ್ ಇಲ್ಲದೆ ಸಾಯುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಸರ್ಕಾರದ ಕಿಡಿಕಾರಿದರು.

    ಆಸ್ಪತ್ರೆಗಳಲ್ಲಿ ಇಂದಿಗೂ ಬೆಡ್ ಸಿಗುತ್ತಿಲ್ಲ. ನಾನೇ ಎಷ್ಟೇ ಬಾರಿ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ. ಇದುವರೆಗೂ ನಮ್ಮ ಯಾವುದೇ ಸಲಹೆಯನ್ನು ಸರ್ಕಾರ ಸ್ವೀಕರಿಸಿಲ್ಲ. ಕೇವಲ ನಮ್ಮನ್ನು ಕರೆದು ಕುರಿಸಿ ಕಳುಹಿಸಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

    ನನ್ನ ಸ್ನೇಹಿತೆ ತಂದೆಗೆ ಬೆಡ್ ಸಿಗದೆ ಸತ್ತೇ ಹೋದರು. ನಾನೇ ಅಲ್ಲಿಗೆ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ನೋಡಿದ್ದೇನೆ. ಬಿಬಿಎಂಪಿ ದೃಢಿಕರಿಸಿದ ಬಳಿಕವೂ 2 ಗಂಟೆಯಾದರೂ ಆಕ್ಸಿಜನ್ ನೀಡಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಸರಿ ಸುಮಾರು 16 ಲಕ್ಷದ ವರೆಗೂ ಹಣ ಲೂಟಿ ಮಾಡುತ್ತಿದ್ದಾರೆ. ಕೊರೊನಾ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು 3 ರಿಂದ 4 ಲಕ್ಷ ರೂ. ಪ್ಯಾಕೇಜ್ ಮಾಡುತ್ತಿವೆ. ಖಾಸಗಿ ಆಸ್ಪತ್ರೆ ನಿಯಂತ್ರಿಸುವ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಸರ್ಕಾರ ಏನು ಉತ್ತರ ನೀಡುತ್ತೆ ಉತ್ತರಿಸಲಿ ಎಂದು ಪ್ರಶ್ನಿಸಿದರು.

  • ಎಚ್‍ಡಿಕೆಯೇ ನಮ್ಮ ಸಿಎಂ: ಯೂಟರ್ನ್ ಹೊಡೆದ ಎಂಟಿಬಿ ನಾಗರಾಜ್

    ಎಚ್‍ಡಿಕೆಯೇ ನಮ್ಮ ಸಿಎಂ: ಯೂಟರ್ನ್ ಹೊಡೆದ ಎಂಟಿಬಿ ನಾಗರಾಜ್

    – ಈ ಹಿಂದಿದ್ದ ಅಸಮಾಧಾನ ಈಗ ಇಲ್ಲ : ಸೌಮ್ಯಾ ರೆಡ್ಡಿ
    – ಸಿಎಲ್‍ಪಿ ಸಭೆಗೆ ಎಲ್ಲರೂ ಬರುತ್ತಾರೆ : ಎಂ.ಬಿ.ಪಾಟೀಲ್

    ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಎಚ್.ಡಿ.ಕುಮಾರಸ್ವಾಮಿಯವರೇ ನಮ್ಮ ಮುಖ್ಯಮಂತ್ರಿ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ನಮ್ಮ ಸಿಎಂ ಎಂದು ಹೇಳಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ನಾನು ಸಿದ್ದರಾಮಯ್ಯ ಅವರ ಅಭಿಮಾನಿ. ಅವರು ಸಿಎಲ್‍ಪಿ ನಾಯಕರು. ಆದರೆ ಕುಮಾರಸ್ವಾಮಿ ಅವರೇ ನಮ್ಮ ಮುಖ್ಯಮಂತ್ರಿ ಎಂದರು.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿಚಾರವಾಗಿ ಮಾತನಾಡಿದ ಎಂಟಿಬಿ ನಾಗರಾಜ್, ರಮೇಶ್ ಜಾರಕಿಹೊಳಿ ನನ್ನ ಸ್ನೇಹಿತರು. ಅವರನ್ನು ಸೇರಿದಂತೆ ಅನೇಕ ಶಾಸಕರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ವಿಪ್ ಉಲ್ಲಂಘಿಸಿದವರ ವಿರುದ್ಧ ಪಕ್ಷದ ನಾಯಕರು ಕ್ರಮ ಕೈಗೊಳ್ಳುತ್ತಾರೆ ಎಂದರು.

    ಅಧಿವೇಶನದ ಮೊದಲ ದಿನ ಗೈರು ಆಗಿರುವ ಕುರಿತು ಸ್ಪಷ್ಟನೆ ನೀಡಿದ ಶಾಸಕಿ ಸೌಮ್ಯಾ ರೆಡ್ಡಿ ಅವರು, ಕಾಂಗ್ರೆಸ್‍ನ ರಾಷ್ಟ್ರೀಯ ಮಹಿಳಾ ಘಟಕದ ಸಭೆ ನಿಮಿತ್ತವಾಗಿ ದೆಹಲಿಗೆ ಹೋಗಿದ್ದೆ. ಆದರೆ ಅಲ್ಲಿಂದ ವಾಪಾಸ್ ಬರುವಾಗ ಫ್ಲೈಟ್ ಮಿಸ್ ಆಯಿತು. ಹೀಗಾಗಿ ಸದನಕ್ಕೆ ಹಾಜರಾಗಿರಲಿಲ್ಲ ಎಂದು ತಿಳಿಸಿದರು.

    ಫ್ಲೈಟ್ ಮಿಸ್ ಆಗಿರುವ ಕುರಿತು ಪಕ್ಷದ ನಾಯಕರಿಗೆ ಫೋನ್ ಮಾಡಿ ವಿಷಯ ತಿಳಿಸಿ ಅನುಮತಿ ಪಡೆದಿದ್ದೇನೆ. ನನಗೆ ಯಾವುದೇ ಅತೃಪ್ತಿ ಇಲ್ಲ. ನಮ್ಮ ತಂದೆ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದ್ದಕ್ಕೆ ಅಸಮಾಧಾನ ಇತ್ತು. ಆದರೆ ಈಗ ಇಲ್ಲ. ಅವರಿಗೆ ಸಚಿವ ಸ್ಥಾನ ಕೊಡುತ್ತಾರೆ ಎನ್ನವ ನಂಬಿಕೆ ಇದೆ ಎಂದು ಪಬ್ಲಿಕ್ ಟಿವಿಗೆ ತಿಳಿಸಿದರು.

    ಕಾಂಗ್ರೆಸ್ ಶಾಸಕಾಂಗ ಸಭೆಗೆ ಎಲ್ಲರೂ ಬರುತ್ತಾರೆ. ಯಾವುದೇ ಶಾಸಕರು ನಮ್ಮ ಪಕ್ಷ ಬಿಟ್ಟು ಹೋಗುವುದಿಲ್ಲ. ಬಿಜೆಪಿಯವರ ಆಪರೇಷನ್ ಕಮಲ ಯಶಸ್ವಿಯಾಗುವುದಿಲ್ಲ. ಅವರು ಈ ಹಿಂದೆ ಡೆಡ್ ಲೈನ್ ಕೊಟ್ಟಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ನಾಗೇಂದ್ರ ಅವರಿಗೆ ಫೋನ್ ಮಾಡಿ ಮಾತಾಡಿದ್ದೇನೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಟುಂಬದಲ್ಲಿ ಅಸಮಾಧಾನ ಸಾಮಾನ್ಯ, ನಾಳೆ ಹಾಜರಾಗುತ್ತೇನೆ: ಶಾಸಕಿ ಸೌಮ್ಯಾ ರೆಡ್ಡಿ

    ಕುಟುಂಬದಲ್ಲಿ ಅಸಮಾಧಾನ ಸಾಮಾನ್ಯ, ನಾಳೆ ಹಾಜರಾಗುತ್ತೇನೆ: ಶಾಸಕಿ ಸೌಮ್ಯಾ ರೆಡ್ಡಿ

    ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಮೊದಲ ದಿನ ಬಜೆಟ್ ಅಧಿವೇಶನಕ್ಕೆ ಗೈರಾಗಿದ್ದೇನೆ ಎಂದು ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

    ಗೈರು ಹಾಜರಿ ಬಗ್ಗೆ ಪಬ್ಲಿಕ್ ಟಿವಿಗೆ ದೂರವಾಣಿ ಮೂಲಕ ಸ್ಪಷ್ಟನೆ ನೀಡಿದ ಸೌಮ್ಯ ರೆಡ್ಡಿ ಅವರು, ಪಕ್ಷದಿಂದ ಸದನಕ್ಕೆ ಹಾಜರು ಆಗವಂತೆ ವಿಪ್ ಜಾರಿ ಮಾಡಿದ್ದಾರೆ. ಆದರೆ ಈ ಬಗ್ಗೆ ನಾನು ಪಕ್ಷದ ಮುಖಂಡರಿಗೆ ಮಾಹಿತಿ ನೀಡಿ ಗೈರಾಗುವ ಬಗ್ಗೆ ಪೂರ್ವಾನುಮತಿ ಪಡೆದಿದ್ದೇನೆ ಎಂದು ತಿಳಿಸಿದರು.

    ಸದನದ ಮೊದಲ ದಿನವಾಗಿದ್ದು, ನನಗೆ ಅನಾರೋಗ್ಯದ ಸಮಸ್ಯೆ ಇದೆ. ಒಂದು ದಿನ ಬರಲಿಲ್ಲ ಎಂದರೆ ಅಸಮಾಧಾನ ಎಂದು ಪರಿಗಣಿಸಬಾರದು, ಆದರೆ ಪಕ್ಷದ ವಲಯದಲ್ಲಿ ಈ ಬಗ್ಗೆ ನಾಯಕರಿಗೆ ಸ್ಪಷ್ಟವಾಗಿ ಮಾಹಿತಿ ನೀಡಿದ್ದೇನೆ. ನಾಳೆ ಸದನಕ್ಕೆ ಆಗಮಿಸುತ್ತೇನೆ ಎಂದರು. ಇದೇ ವೇಳೆ ಅಸಮಾಧಾನದ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಮೊದಲು ಸಚಿವ ಸ್ಥಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ. ಆದರೆ ಒಂದು ಕುಟುಂಬ ಎಂದರೆ ಇದೆಲ್ಲ ಸಾಮಾನ್ಯ. ಸದ್ಯ ಅಂತಹ ಯಾವುದೇ ಅಸಮಾಧಾನ ಇಲ್ಲ, ಎಲ್ಲರೂ ಒಟ್ಟಾಗಿ ನಡೆಯುತ್ತೇವೆ ಎಂದರು.

    ಇತ್ತ ಸದನಕ್ಕೆ ಎರಡು ಗಂಟೆ ತಡವಾಗಿ ಆಗಮಿಸಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದರು. ಪಕ್ಷದ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಸದನಕ್ಕೆ ಬರುವುದು ಸ್ವಲ್ಪ ತಡ ಆಯಿತು ಅಷ್ಟೇ. ಆದರೆ ಬಿಜೆಪಿ ಶಾಸಕರು ಸದನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಿದ್ದು ಸರಿ ಅಲ್ಲ. ಅವರ ಭಾಷಣ ಮುಗಿದ ಮೇಲೆ ಮಾತನಾಡಲು ವಿಪಕ್ಷಕ್ಕೆ ಅವಕಾಶ ಇರುತ್ತದೆ. ನಾವು ವಿರೋಧ ಪಕ್ಷದಲ್ಲಿ ಇದ್ದ ವೇಳೆ ಇಂತಹ ವರ್ತನೆ ತೋರಿರಲಿಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈ ಮನದಲ್ಲಿ ದೇಶಾಭಿಮಾನ-ರಂಗೋಲಿಯಲ್ಲಿ ರಿಪಬ್ಲಿಕ್ ಡೇ

    ಮೈ ಮನದಲ್ಲಿ ದೇಶಾಭಿಮಾನ-ರಂಗೋಲಿಯಲ್ಲಿ ರಿಪಬ್ಲಿಕ್ ಡೇ

    ಬೆಂಗಳೂರು: ನಾಳೆ ಗಣರಾಜ್ಯೋತ್ಸವದ ಸುದಿನ. ಈ ಸಂಭ್ರಮ, ಸಡಗರ ರಾಜ್ಯ ರಾಜಧಾನಿಯಲ್ಲಿ ಈಗಾಗಲೇ ಕಳೆಗಟ್ಟಿದೆ. ಇಡೀ ನಗರ ತಿರಂಗದ ಓಕುಳಿಯಲ್ಲಿ ಮಿಂದೆದ್ದಿದೆ.

    ಸಿಲಿಕಾನ್ ಸಿಟಿ ಜನ ಡಿಫೆರೆಂಟ್ ಡಿಫೆರೆಂಟ್ ಸ್ಟೈಲ್ ಗಳನ್ನು ಮಾಡೋದ್ರಲ್ಲಿ ಎತ್ತಿದ ಕೈ. ಹಾಗೆಯೇ ಐಟಿ-ಬಿಟಿ ಬೆಡಗಿಯರು ಡಿಫರೆಂಟ್ ಆಗಿ ರಿಪಬ್ಲಿಕ್ ಡೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಗಾರ್ಡನ್ ಸಿಟಿ ಹುಡುಗಿಯರು ತಿರಂಗ ವರ್ಣದಲ್ಲಿ ಮಿಂಚುತ್ತಿದ್ದಾರೆ. ಕೇಸರಿ, ಬಿಳಿ, ಹಸಿರು ಬಣ್ಣದ ಉಡುಗೆಗಳನ್ನು ತೊಟ್ಟು ಸಂಭ್ರಮಿಸುತ್ತಿದ್ದಾರೆ.

    ತಿರಂಗಾ ಫೇಸ್ ಪೇಂಟ್, ತಿರಂಗಾ ನೇಲ್ ಆರ್ಟ್, ತಿರಂಗಾ ಬಿಂದಿ, ತಿರಂಗಾ ಐ ಮೇಕಪ್, ಫೇಸ್ ಟ್ಯಾಟೂ ಹೀಗೆ ತ್ರಿವರ್ಣ ಧ್ವಜದ ಬಣ್ಣಗಳನ್ನು ಮೈ-ಮನದಲ್ಲಿ ಪ್ರರ್ದಶಿಸಿ, ಖದರ್ ತೋರಿಸುತ್ತಿದ್ದಾರೆ.

    ಇನ್ನೂ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ 2 ಸಾವಿರ ಚದರ ಅಡಿಯಲ್ಲಿ ಬೃಹತ್ ತ್ರಿವರ್ಣ ಧ್ವಜವನ್ನು ರಂಗೋಲಿಯಲ್ಲಿ ಹಾಕಲಾಗಿದೆ. ಇದ್ರ ಮೇಲೆ ರಾಷ್ಟ್ರ ಪ್ರಾಣಿ ಹುಲಿ, ರಾಷ್ಟ್ರ ಪಕ್ಷಿ ನವಿಲು, ಕಾಡನ್ನು ಚಿತ್ರೀಕರಿಸಲಾಗಿದೆ. ಈ ರಂಗೋಲಿಯನ್ನು ಎಲ್ ಐಸಿ ಕಾಲೋನಿಯ ಸುಮಾರು 150ಕ್ಕೂ ಹೆಚ್ಚು ಮಹಿಳೆಯರು 1 ಸಾವಿರ ಕೆ.ಜಿ ಬಣ್ಣದಲ್ಲಿ ರಂಗೋಲಿ ಹಾಕಿದ್ದಾರೆ. ಇದು ಕಾಡು ಬೆಳೆಸಿ, ನಾಡು ಉಳಿಸಿ ಎಂಬ ಸಂದೇಶವನ್ನು ಸಾರುತ್ತಿದೆ. ಇಡೀ ಆಟದ ಮೈದಾನ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಓಕುಳಿಯಲ್ಲಿ ಮಿಂದೆದ್ದಂತೆ ಭಾಸವಾಗುತ್ತಿದೆ. ಇಡೀ ರಾಜ್ಯದಲ್ಲಿ ಅತಿ ದೊಡ್ಡ ಪ್ರಮಾಣದ ರಂಗೋಲಿಯಾಗಿದೆ.

    ಸಂವಿಧಾನದ ಮಹತ್ವ ಸಾರುವ ಜತೆಗೆ ಪರಿಸರವೇ ನಮ್ಮ ಭವಿಷ್ಯ, ಪರಿಸರ ಸಂರಕ್ಷಿಸಿ ಎಂಬುದನ್ನು ಸಾರುತ್ತಿದೆ. ಈ ಸಂಭ್ರಮದಲ್ಲಿ ಶಾಸಕಿ ಸೌಮ್ಯ ರೆಡ್ಡಿ ಸಹ ಭಾಗಿಯಾಗಿದ್ದರು. ಒಟ್ನಲ್ಲಿ ಸಿಲಿಕಾನ್ ಸಿಟಿಯಲ್ಲಿ ತಮ್ಮ ತಮ್ಮ ಕೆಲಸದಲ್ಲಿಯೇ ಬ್ಯುಸಿಯಾಗಿರೋ ಮಹಿಳೆಯರೇ ಹೆಚ್ಚು. ಅಂಥದ್ದರಲ್ಲಿ ಈ ಮಹಿಳೆಯರು ಡಿಫರೆಂಟ್ ಸ್ಟೈಲ್ ನಲ್ಲಿ ಭಾರತಾಂಬೆಗೆ ನಮನ ಸಲ್ಲಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv