Tag: ಶಾಸಕರಭವನ

  • ಸಿದ್ದರಾಮಯ್ಯ, ಕುಮಾರಸ್ವಾಮಿ ಕರ್ನಾಟಕದ ಬಫೂನ್‍ಗಳು – ಮತ್ತೆ ಕುಟುಕಿದ ಹಳ್ಳಿ ಹಕ್ಕಿ

    ಸಿದ್ದರಾಮಯ್ಯ, ಕುಮಾರಸ್ವಾಮಿ ಕರ್ನಾಟಕದ ಬಫೂನ್‍ಗಳು – ಮತ್ತೆ ಕುಟುಕಿದ ಹಳ್ಳಿ ಹಕ್ಕಿ

    – ಕುರುಬರಿಗೆ ಎಸ್‍ಟಿ ಸಿಗಬೇಕು ಅಷ್ಟೇ

    ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕರ್ನಾಟಕದ ಬಫೂನ್‍ಗಳು. ಅವರು ಯಾಕೆ ಮಾತನಾಡುತ್ತಾರೆ, ಏನು ಮಾತಾಡುತ್ತಾರೆ ಎಂಬುವುದೇ ಅವರಿಗೆ ಅರಿವಿರುವುದಿಲ್ಲ. ಜನ ಅವರನ್ನು ಬಫೂನ್‍ಗಳ ತರ ನೋಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ, ಹಳ್ಳಿ ಹಕ್ಕಿ ಹೆಚ್.ವಿಶ್ವನಾಥ್ ವಾಗ್ದಾಳಿ ಹೇಳಿದ್ದಾರೆ.

    ಶಾಸಕರ ಭವನದಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್ ನಾನು ಮಾಜಿ ಸಿಎಂ ಸಿದ್ದರಾಮಯ್ಯಗೆ ಹೋರಾಟದ ಪಾಠ ಮಾಡಲು ತಯಾರಿದ್ದೇನೆ. ಬರಲಿ ಪಾಠ ಮಾಡೋಣ. ಸಿದ್ದರಾಮಯ್ಯ ಯಾವ ಹೋರಾಟ ಮಾಡಿದ್ದಾರೆ? ದೇವೇಗೌಡರು ಜೆಡಿಎಸ್‍ನಿಂದ ಸಿದ್ದರಾಮಯ್ಯರವರನ್ನು ಹೊರ ಹಾಕಿದರು. ಬಳಿಕ ಕಾಂಗ್ರೆಸ್‍ಗೆ ಬಂದರು ಆಗ ನಾವು ಹೋರಾಟ ಮಾಡಿದ್ದೆವು. ನಮ್ಮೆಲ್ಲರಿಂದ ಅವರು ಸಿಎಂ ಆದರು. ಅಹಿಂದ ಅವರು ಕಟ್ಟಿದ್ರಾ? ಜಿಲ್ಲೆ ತಿರುಗಿ ಮುಖುಡಪ್ಪ, ರೇವಣ್ಣ ಸಂಘಟನೆ ಮಾಡಿದರು. ಸಿದ್ದರಾಮಯ್ಯನವರು ಬಂದು ಭಾಷಣ ಮಾಡಿದರು ಅಷ್ಟೇ. ನೀವು ಸಿಎಂ ಆದ ಮೇಲೆ ಅಹಿಂದ ಏನಾಯ್ತು? ಸಿದ್ದರಾಮಯ್ಯನವರೆ ಸಿಎಂ ಆದ ಮೇಲೆ ಅಹಿಂದವನ್ನು ಮರೆತರು. ನಾವೆಲ್ಲ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಸಹ ಸಿದ್ದರಾಮಯ್ಯ ಅಹಿಂದ ಸಂಘಟನೆಗೆ ಬೆಂಬಲ ಕೊಟ್ಟಿದ್ದೇವು. ನಾವೆಲ್ಲ ಬೆಂಬಲ ಕೊಟ್ಟಿದ್ದರಿಂದ ಅಂದು ಅಹಿಂದ ಸಂಘಟನೆ ಯಶಸ್ವಿ ಆಯ್ತು ಎಂದರು.

    ಸಿದ್ದರಾಮಯ್ಯ ಯಾವ ಹೋರಾಟ ಮಾಡಿದ್ದೀರಿ? ಮೈಸೂರು ಮಹಾರಾಜರು ಖಡ್ಗ, ಗುರಾಣಿ ಎಲ್ಲ ಹಿಡಿದುಕೊಂಡು ಓಡಾಡಿದ್ರು. ನೀವು ಯಾವ ಯುದ್ದ ಮಾಡಿದ್ದೀರಿ? ಮೈಸೂರು ಮಹಾರಾಜರೂ ಯಾವ ಯುದ್ಧ ಮಾಡಲಿಲ್ಲ, ಸಿದ್ದರಾಮಯ್ಯವರೂ ಯಾವ ಹೋರಾಟ ಮಾಡಲಿಲ್ಲ. ಪಿರಾನ್ ನನ್ನನ್ನು ಕಾಂಗ್ರೆಸ್‍ಗೆ ಕರೆತಂದರು ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಸಿದ್ದರಾಮಯ್ಯ ಹೇಳೋ ಪೀರಾನ್ ಯಾರು ಗೊತ್ತಾ? ಸಿದ್ದರಾಮಯ್ಯ ಹೇಳೋ ಪೀರಾನ್ ಮನಿ ಎಕ್ಸಚೇಂಜರ್ ಎಂದು ಹೇಳಿದರು.

     

    ಸಚಿವ ಸಂಪುಟ ವಿಸ್ತರಣೆಯ ಬಗೆಗೆ ಯಾರು ಪದೇ ಪದೇ ಮಾತನಾಡಬಾರದು ಹಿರಿಯ ಸದಸ್ಯನಾಗಿ ನನ್ನ ಅನುಭವದ ಆಧಾರದ ಮೇಲೆ ಹೇಳುತ್ತೇನೆ. ಮುಖ್ಯಮಂತ್ರಿಯಾಗಲಿ ಬೇರೆ ಯಾರೇ ಆಗಲಿ ಅದರ ಬಗ್ಗೆ ದಿನ ಬೆಳಿಗ್ಗೆ ಮಾತನಾಡಬಾರದು. ಹೈಕಮಾಂಡ್ ಯಾವಾಗ ಗ್ರೀನ್ ಸಿಗ್ನಲ್ ಕೊಡುತ್ತದೆಯೋ ಅಂದು ಸಂಪುಟ ವಿಸ್ತರಣೆ ಆಗುತ್ತದೆ. ದಿನ ಬೆಳಿಗ್ಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ರೆ ಮಾತನಾಡುವ ಬದಲು ಅಭಿವೃದ್ಧಿ ಬಗ್ಗೆ ಮಾತಾಡಬೇಕು. ಯಾವಾಗ ಏನು ಆಗಬೇಕು ಅದು ಆ ಸಮಯಕ್ಕೆ ಆಗುತ್ತದೆ ಎಂದು ತಿಳಿಸಿದರು.

    ಕುರುಬ ಸಮುದಾಯದ ಬಗೆಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಕುರುಬ ಸಮುದಾಯದ ಎಸ್.ಟಿ ಹೋರಾಟದ ಹಿಂದೆ ಆರ್‍ಎಸ್‍ಎಸ್ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಎಸ್.ಟಿ ಹೋರಾಟದ ಹಿಂದೆ ಆರ್‍ಎಸ್‍ಎಸ್ ಇದ್ದರೆ ತಪ್ಪೇನು? ಕುರುಬರನ್ನು ಒಡೆಯುತ್ತಿರುವುದು ಸಿದ್ದರಾಮಯ್ಯ. ಕುರುಬರನ್ನು ಆರ್‍ಎಸ್‍ಎಸ್ ಒಡೆಯುತ್ತಿಲ್ಲ. ಆರ್‍ಎಸ್‍ಎಸ್ ಬಗ್ಗೆ ಆರೋಪ ಮಾಡೋದು ಸರಿ ಅಲ್ಲ. ಆರ್‍ಎಸ್‍ಎಸ್ ಏನು ಈ ದೇಶದಲ್ಲಿ ಬ್ಯಾನ್ ಆಗಿದೆಯಾ ಸಂತೋಷ್ ಜೀ ಬಳಿ ಹೋದರೆ ಮಾತನಾಡಿದರೆ ತಪ್ಪೇನು? ಹೊಸಬಾಳೆನೂ ಇದ್ದಾರೆ, ಹಳೇಬಾಳೆ ಕೂಡ ಇದ್ದಾರೆ ಏನೀವಾಗ? ನಮಗೆ ಎಸ್.ಟಿ. ಸಿಗಬೇಕು ಅಷ್ಟೇ ಎಂದು ಆಗ್ರಹಿಸಿದರು.

  • ವಿಶ್ವ ಯೋಗ ದಿನಾಚರಣೆ: ಶಾಸಕರ ಭವನದಲ್ಲಿ ಬೆರಳೆಣಿಕೆಯಷ್ಟೇ ಶಾಸಕರು ಭಾಗಿ!

    ವಿಶ್ವ ಯೋಗ ದಿನಾಚರಣೆ: ಶಾಸಕರ ಭವನದಲ್ಲಿ ಬೆರಳೆಣಿಕೆಯಷ್ಟೇ ಶಾಸಕರು ಭಾಗಿ!

    ಬೆಂಗಳೂರು: ಇಂದು ವಿಶ್ವದಾದ್ಯಂತ ಮೂರನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ದೇಶದೆಲ್ಲೆಡೆ ಯೋಗ ದಿನವನ್ನು ಆಚರಿಸುತ್ತಿದ್ದು, ಬೆಂಗಳೂರಿನ ಯಶವಂತಪುರ, ಕಂಠೀರವ ಸ್ಟುಡಿಯೋ ಹಾಗೂ ಶಾಸಕರ ಭವನ ಸೇರಿದಂತೆ ಹಲವೆಡೆ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

    ವಿಶ್ವ ಯೋಗದಿನಾಚರಣೆ ಹಿನ್ನೆಲೆಯಲ್ಲಿ ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇವಲ ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಭಾಗಿಯಾಗಿದ್ದಾರೆ.

    ಸ್ಪೀಕರ್ ಕೋಳಿವಾಡ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಈಶ್ವರಪ್ಪ, ಬಸವರಾಜ ಹೊರಟ್ಟಿ, ಸಿ.ಟಿ.ರವಿ, ಮಾಜಿ ಆರೋಗ್ಯ ಸಚಿವ ಮಾಲಕರೆಡ್ಡಿ, ಪರಿಷತ್ ಸದಸ್ಯೆಯರಾದ ವೀಣಾ ಅಚ್ಚಯ್ಯ, ಜಯಮ್ಮ ಸೇರಿದಂತೆ 18 ಮಂದಿ ಶಾಸಕರು ಪಾಲ್ಗೊಂಡಿದ್ದರು. ಸ್ಪೀಕರ್ ಕೋಳಿವಾಡ ಅವರು ನೆಲದ ಮೇಲೆ ಕುಳಿತು ಯೋಗಾಸಾನಮಾಡಲು ಸಾಧ್ಯವಿಲ್ಲ ಎಂದು ಕುರ್ಚಿ ಮೇಲೆ ಕುಳಿತು ಯೋಗಾಸಾನ ಮಾಡಿದ್ದಾರೆ. ಯೋಗ ಮಾಡಲು ಶಾಸಕರು ನಿರಾಸಕ್ತಿ ತೋರಿಸಿದ್ದು, ಹೀಗಾಗಿ ಯೋಗಾ ತರಬೇತುದಾರರು ಶಾಸಕರಿಗಾಗಿ ಕಾದು ಕಾದು ಸುಸ್ತಾಗಿದ್ದಾರೆ ಎನ್ನಲಾಗಿದೆ. 299 ವಿಧಾನಮಂಡಲ ಸದಸ್ಯರಲ್ಲಿ 20 ಮಂದಿ ಮಾತ್ರ ಭಾಗಿಯಾಗಿರುವುದು ವಿಶೇಷ.

    ಯಶವಂತಪುರದ ವರ್ಲ್ಡ್ ಟ್ರೇಡ್ ಸೆಂಟರ್‍ನಲ್ಲಿ ಕೂಡ ಅಕ್ಷರ ಪವರ್ ಯೋಗದಿಂದ ಆಯೋಜಿಸಿದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಇನ್ನು ಮಲ್ಲೇಶ್ವರಂನ ಬಿಜೆಪಿ ಕಚೇರಿ ಮುಂದೆ ನಡೆದ ಯೋಗ ದಿನಾಚರಣೆಯಲ್ಲಿ ಬಿಎಸ್ ಯಡಿಯೂರಪ್ಪ, ಶಾಸಕ ಅಶ್ವತ್ ನಾರಾಯಣ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ.

    ಕಂಠೀರವ ಸ್ಟುಡಿಯೋದಲ್ಲಿ ಕೂಡ ಆರೋಗ್ಯ ಇಲಾಖೆಯಿಂದ ಮೂರನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದಾರೆ. ಹಲವಾರು ಯೋಗಪಟುಗಳು ಕೂಡ ಪಾಲ್ಗೊಳ್ಳುವ ಮೂಲಕ ಈ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.