Tag: ಶಾರೂಕ್ ಖಾನ್

  • ಎದುರಾಗುತ್ತಿರೋ ಝೀರೋ ಬಗ್ಗೆ ಯಶ್ ಹೇಳಿದ್ದು ಹೀಗೆ

    ಎದುರಾಗುತ್ತಿರೋ ಝೀರೋ ಬಗ್ಗೆ ಯಶ್ ಹೇಳಿದ್ದು ಹೀಗೆ

    ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಇದೇ ತಿಂಗಳು 21ರಂದು ರಿಲೀಸ್ ಆಗಲಿದೆ. ಇದೇ ದಿನ ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ ‘ಝೀರೋ’ ಬಿಡುಗಡೆಯಾಗುತ್ತಿದ್ದು, ಈ ಬಗ್ಗೆ ನಟ ಯಶ್ ಅವರು ಮಾತನಾಡಿದ್ದಾರೆ.

    ನಟ ಯಶ್ ಕೆಜಿಎಫ್ ಸಿನಿಮಾದ ಡ್ಯಾನ್ಸ್ ಶೂಟಿಂಗ್ ಗೆಂದು ಮುಂಬೈಗೆ ಹೋಗಿದ್ದರು. ಈ ವೇಳೆ ಸಂದರ್ಶನದಲ್ಲಿ ತಮ್ಮ ಸಿನಿಮಾಗೆ ಎದುರಾಗುತ್ತಿರುವ ನಟ ಶಾರೂಖ್ ಖಾನ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

    ಸಂದರ್ಶನದಲ್ಲಿ ಯಶ್ ಗೆ ನಿಮ್ಮ ಸಿನಿಮಾದ ದಿನವೇ ಬಾಲಿವುಡ್ ನ ‘ಝೀರೋ’ ಸಿನಿಮಾ ರಿಲೀಸ್ ಆಗಲಿದೆ. ಈ ಬಗ್ಗೆ ನೀವು ಏನು ಹೇಳುತ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಯಶ್ ಇದು ಸ್ಯಾಂಡಲ್‍ವುಡ್, ಬಾಲಿವುಡ್ ಸಿನಿಮಾ ಅಂತ ಅಲ್ಲ. ಎಲ್ಲವೂ ಭಾರತೀಯ ಸಿನಿಮಾವಾಗಿದೆ. ಪೈಪೋಟಿ ನೀಡಲು ಸಿನಿಮಾ ಬಿಡುಗಡೆ ಮಾಡುತ್ತಿಲ್ಲ. ಪ್ರೇಕ್ಷಕರು ಎರಡು ಸಿನಿಮಾವನ್ನು ವೀಕ್ಷಣೆ ಮಾಡಲಿ ಎಂದು ನಮ್ಮ ಆಶಯವಾಗಿದೆ ಎಂದು ಹೇಳಿದ್ದಾರೆ.

    ಒಂದು ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾದರೆ ಅದೇ ಖುಷಿಯಲ್ಲಿ ಇನ್ನೊಂದು ಸಿನಿಮಾವನ್ನು ನೋಡುತ್ತಾರೆ. ಒಂದು ವೇಳೆ ಒಂದು ಸಿನಿಮಾ ಇಷ್ಟವಾಗದೇ ಇದ್ದರೂ ಆಗಲೂ ಬೇರೆ ಸಿನಿಮಾ ನೋಡುತ್ತಾರೆ. ಒಟ್ಟಿನಲ್ಲಿ ಎರಡು ಭಾರತೀಯ ಸಿನಿಮಾಗಳಾಗಿದ್ದು, ಅಭಿಮಾನಿಗಳು ನೋಡುತ್ತಾರೆ. ಅಷ್ಟೇ ಅಲ್ಲದೇ ಶಾರೂಖ್ ಖಾನ್ ಅವರು ನನಗೆ ಸ್ಪೂರ್ತಿಯಾಗಿದ್ದಾರೆ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.

    ಇದೇ ಡಿಸೆಂಬರ್ 21 ರಂದು ಕೆಜಿಎಫ್ ಪಂಚಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಸ್ಯಾಂಡಲ್‍ವುಡ್‍ನಲ್ಲಿ ರಾಕಿಂಗ್ ಸ್ಟಾರ್ ದಾಖಲೆ ಬರೆಯಲು ಸಿದ್ಧವಾಗುತ್ತಿದೆ. ಈಗಾಗಲೇ ಸಿನಿಮಾದ ಎರಡು ಟ್ರೇಲರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಲ್ಲಿ ಸದ್ದು ಮಾಡುತ್ತಿದ್ದು, ವ್ಯಾಪಕ ಮೆಚ್ಚುಗೆಯನ್ನು ಗಳಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ವಿರುದ್ಧ ದೂರು ದಾಖಲು

    ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ವಿರುದ್ಧ ದೂರು ದಾಖಲು

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ವಿರುದ್ಧ ಸಿಖ್ ಸಮುದಾಯದವರು ದೂರು ದಾಖಲಿಸಿದ್ದಾರೆ.

    ‘ಝೀರೋ’ ಚಿತ್ರದ ಟ್ರೇಲರ್ ನಲ್ಲಿ ಶಾರೂಕ್ ‘ಕಿರ್ ಪನ್’ ಧರಿಸಿದ್ದಕ್ಕೆ ದೆಹಲಿಯ ಸಿಖ್ ಗುರುದ್ವಾರ ಮ್ಯಾನೇಜ್‍ಮೆಂಟ್ ಕಮಿಟಿಯ ಜನರಲ್ ಸೆಕ್ರೆಟರಿ ಮಂಜಿದರ್ ಸಿಂಗ್ ಸಿರಸಾ ಶಾರೂಕ್ ಹಾಗೂ ನಿರ್ದೇಶಕ ಆನಂದ್ ಎಲ್ ರೈ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.

    ಸಿಖ್ ಸಮುದಾಯದವರು ಝೀರೋ ಚಿತ್ರದ ಟ್ರೈಲರ್ ತಮ್ಮ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೂರು ನೀಡುತ್ತಿದ್ದರು. ಹಾಗಾಗಿ ದೆಹಲಿಯ ನಾರ್ತ್ ಆವೆನ್ಯೂ ಪೊಲೀಸ್ ಠಾಣೆಯಲ್ಲಿ ಶಾರೂಕ್ ಹಾಗೂ ಆನಂದ್ ವಿರುದ್ಧ ದೂರು ದಾಖಲಾಗಿದೆ.

    ಚಿತ್ರದ ಟ್ರೈಲರ್ ನಲ್ಲಿ ಶಾರೂಕ್ ಗತ್ರಾ ಕಿರ್ ಪನ್ ಧರಿಸಿದ್ದಾರೆ. ವಿಶ್ವಾದ್ಯಂತ ಸಿಖ್ ಸಮುದಾಯದವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಖ್ ಸಂಪ್ರದಾಯದ ಪ್ರಕಾರ ಗತ್ರ ಕಿರ್ ಪನ್ ಕೇವಲ ಅಮ್ರಿತ್‍ದರಿ ಸಿಖ್ ಜನರು ಧರಿಸುವುದು. ಹಾಗಾಗಿ ಶಾರೂಕ್ ಹಾಗೂ ಆನಂದ್ ವಿರುದ್ಧ ದೂರು ದಾಖಲಿಸಬೇಕೆಂದು ಪೊಲೀಸರಿಗೆ ಮಂಜಿದರ್ ಒತ್ತಾಯಿಸಿದ್ದಾರೆ.

     

    View this post on Instagram

     

    @zero21dec @iamsrk @katrinakaif @anushkasharma #zeroposter

    A post shared by Rana Usama (@ranausama182) on

    ಝೀರೋ ಚಿತ್ರದ ಟ್ರೈಲರ್ ನಲ್ಲಿ ಶಾರೂಕ್ ಗತ್ರ ಕಿರ್ ಪನ್ ಧರಿಸಿದ ಕಾರಣ ವಿಳಂಬ ಮಾಡದೇ ಈ ಟ್ರೇಲರ್ ಪ್ರದರ್ಶನ ಮಾಡುವುದನ್ನು ನಿಲ್ಲಿಸಬೇಕೆಂದು ಮಂಜಿದರ್ ಸಿಂಗ್ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಈ ಚಿತ್ರದಲ್ಲಿ ನಟಿ ಶ್ರೀದೇವಿ, ರಾಣಿ ಮುಖರ್ಜಿ, ಕಾಜೋಲ್, ಅಲಿಯಾ ಭಟ್, ಅಭಯ್ ಡಿಯೋಲ್, ಆರ್. ಮಾಧವನ್ ಹಾಗೂ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಾರೂಕ್‍ಗೆ ನಾಯಕಿಯಾಗಿ ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಕೈಫ್ ನಟಿಸಿದ್ದು, ಡಿಸೆಂಬರ್ 21ರಂದು ಚಿತ್ರ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾಲಿವುಡ್ ಬಾದ್‍ಶಾ ಮನೆಯಲ್ಲಿ ದೀಪಾವಳಿ ಸಂಭ್ರಮ: ಫೋಟೋಗಳಲ್ಲಿ ನೋಡಿ

    ಬಾಲಿವುಡ್ ಬಾದ್‍ಶಾ ಮನೆಯಲ್ಲಿ ದೀಪಾವಳಿ ಸಂಭ್ರಮ: ಫೋಟೋಗಳಲ್ಲಿ ನೋಡಿ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಶನಿವಾರ ತಮ್ಮ ಮನೆಯಲ್ಲಿ ಬಾಲಿವುಡ್‍ನ ಎಲ್ಲ ಕಲಾವಿದರ ಜೊತೆ ಸೇರಿ ದೀಪಾವಳಿ ಹಬ್ಬದ ಪಾರ್ಟಿ ಆಯೋಜಿಸಿ ಸಂಭ್ರಮಿಸಿದ್ದಾರೆ. ಈಗ ದೀಪಾವಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಕಲಾವಿದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಶಾರೂಕ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್ ಶನಿವಾರ ರಾತ್ರಿ ದೀಪಾವಳಿ ಪಾರ್ಟಿಗೆ ನಿರೂಪಕರಾಗಿ ಮಿಂಚಿದ್ದಾರೆ. ಈ ಪಾರ್ಟಿಯಲ್ಲಿ ನಟಿ ಕತ್ರಿನಾ ಕೈಫ್, ಕರೀನಾ ಕಪೂರ್ ಸಾಂಸ್ಕೃತಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಇನ್ನೂ ಬಾಲಿವುಡ್ ಮಿ. ಪರ್ಫೆಕ್ಟ್ ಅಮಿರ್ ಖಾನ್ ಕ್ಯಾಶುಯಲ್ ಉಡುಪಿನಲ್ಲಿ ಮಿಂಚಿದ್ದಾರೆ.

    ಶಾರೂಕ್ ಅವರ ದೀಪಾವಳಿ ಪಾರ್ಟಿಯಲ್ಲಿ ಶಾಹಿದ್ ಕಪೂರ್ ಕೂಡ ಕಾಣಿಸಿಕೊಂಡಿದ್ದಾರೆ. ಶಾಹಿದ್ ತಮ್ಮ ಪತ್ನಿ ಮೀರಾ ರಜ್‍ಪುತ್ ಹಾಗೂ ತಮ್ಮ ಸಹೋದರ ಇಶಾನ್ ಕತ್ತರ್ ಬಿಳಿ ಶರ್ಟ್ ಧರಿಸಿದ್ದರು. ಶಾರೂಕ್ ಹಾಗೂ ಅವರ ಪತ್ನಿ ಗೌರಿ ಈ ಪಾರ್ಟಿಯಲ್ಲಿ ಕಪ್ಪು ಹಾಗೂ ಗೋಲ್ಡನ್ ಬಣ್ಣದ ಔಟ್‍ಫಿಟ್ ಧರಿಸಿದ್ದರು.

    ಗೌರಿ ಖಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಪತಿ ಜೊತೆಯಿರುವ ಫೋಟೋ ಹಾಕಿ ಅದಕ್ಕೆ, “ಆಕಾಶದಲ್ಲಿ ನಕ್ಷತ್ರಗಳು. ದೀಪಾವಳಿಯ ಶುಭವಾಗಲಿ” ಎಂದು ಪೋಸ್ಟ್ ಮಾಡಿದ್ದಾರೆ. ಶಾರೂಕ್ ಅವರ ಸ್ನೇಹಿತರಾದ ಕರಣ್ ಜೋಹರ್, ಅಲಿಯಾ ಭಟ್, ಕಾಜೋಲ್, ಶಿಲ್ಪಾ ಶೆಟ್ಟಿ, ಜೂಹಿ ಚಾವ್ಲಾ, ವಿದ್ಯಾ ಬಾಲನ್ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

     

    View this post on Instagram

     

    Stars in the sky… Happy Diwali!

    A post shared by Gauri Khan (@gaurikhan) on

     

    View this post on Instagram

     

    Abundant love and affection always….

    A post shared by Kajol Devgan (@kajol) on

     

    View this post on Instagram

     

    How does this get any better!?? ???????? ♥️Sandwiched between the 2 SRKs ♥️!! #SiddharthRoyKapur & @iamsrk

    A post shared by Vidya Balan (@balanvidya) on

  • ಶಾರೂಕ್ ಬರ್ತ್ ಡೇ ಪಾರ್ಟಿಯನ್ನು ತಡೆದ ಪೊಲೀಸರು

    ಶಾರೂಕ್ ಬರ್ತ್ ಡೇ ಪಾರ್ಟಿಯನ್ನು ತಡೆದ ಪೊಲೀಸರು

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಶುಕ್ರವಾರ ತಮ್ಮ 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಲ್ಲದೇ ಶುಕ್ರವಾರ ರಾತ್ರಿ ಸ್ನೇಹಿರಿಗೆ ಪಾರ್ಟಿ ನೀಡಿದರು. ಆದರೆ ಶಾರೂಕ್ ಅವರ ಪಾರ್ಟಿಯನ್ನು ಪೊಲೀಸರು ತಡೆದಿದ್ದಾರೆ.

    ಶಾರೂಕ್ ಮುಂಬೈನ್ ಬಾಂದ್ರಾದಲ್ಲಿರುವ ‘ಅರ್ತ್’ ನೈಟ್‍ಕ್ಲಬ್‍ನಲ್ಲಿ ತನ್ನ ಸ್ನೇಹಿತರಿಗೆ ಲೇಟ್‍ನೈಟ್ ಪಾರ್ಟಿ ಆಯೋಜಿಸಿದ್ದರು. ಮುಂಬೈನ ರೆಸ್ಟೋರೆಂಟ್‍ಗಳು ಶುಕ್ರವಾರ ನಸುಕಿನ ಜಾವದವರೆಗೂ ತೆರೆದಿರುವುದಿಲ್ಲ. ಆದರೆ ಶಾರೂಕ್ ಹುಟ್ಟುಹಬ್ಬಕ್ಕಾಗಿ ಅರ್ತ್ ಕ್ಲಬ್ ನಸುಕಿನ ಜಾವ 3 ಗಂಟೆವರೆಗೂ ತೆರೆದಿತ್ತು ಹಾಗೂ ಜೋರಾಗಿ ಮ್ಯೂಸಿಕ್ ಹಾಕಲಾಗಿತ್ತು.

    ಈ ವಿಚಾರ ತಿಳಿದು ಮುಂಬೈ ಪೊಲೀಸರು ರೆಸ್ಟೋರೆಂಟ್‍ಗೆ ಭೇಟಿ ನೀಡಿ ಮ್ಯೂಸಿಕ್ ಆಫ್ ಮಾಡಿಸಿದ್ದಾರೆ. ಪೊಲೀಸರು ರೆಸ್ಟೋರೆಂಟ್‍ಗೆ ಹೋಗಿದ್ದಾಗ ಶಾರೂಕ್ ತನ್ನ ಸ್ನೇಹಿತರ ಜೊತೆ ನೈಟ್‍ಕ್ಲಬ್‍ನಿಂದ ಹೊರಬರುತ್ತಿದ್ದರು. ಪೊಲೀಸರು ರೆಸ್ಟೋರೆಂಟ್ ಹೋಗಿ ಎಚ್ಚರಿಕೆ ಕೊಡುವ ಮೊದಲೇ ಕೆಲ ತಾರೆಯರು ಅಲ್ಲಿಂದ ಹೊರಟು ಹೋಗಿದ್ದರು.

    ಸಾಮಾನ್ಯ ಜನರಿಗಾಗಿ ಕ್ಲಬ್ 1 ಗಂಟೆಯವರೆಗೂ ತೆರೆದಿರುತ್ತದೆ. ಆದರೆ ಶಾರೂಕ್ ಹುಟ್ಟುಹಬ್ಬಕ್ಕಾಗಿ ತಮ್ಮ ಸ್ನೇಹಿತರನ್ನು ಪಾರ್ಟಿಗೆ ಆಹ್ವಾನಿಸಿದ ಕಾರಣ ಶುಕ್ರವಾರ ರಾತ್ರಿ ಕ್ಲಬ್‍ಗೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾಲಿವುಡ್ ಬಾದ್‍ಶಾಗಿಂದು 53ನೇ ಹುಟ್ಟುಹಬ್ಬದ ಸಂಭ್ರಮ

    ಬಾಲಿವುಡ್ ಬಾದ್‍ಶಾಗಿಂದು 53ನೇ ಹುಟ್ಟುಹಬ್ಬದ ಸಂಭ್ರಮ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಇಂದು ತಮ್ಮ 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯ ಶಾರೂಕ್ ಅವರ ಮನ್ನತ್ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಭೇಟಿ ನೀಡಿ ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

    ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಶಯ ತಿಳಿಸಲು ಮುಂಬೈನ ಮನ್ನತ್ ಮನೆಗೆ ಭೇಟಿ ನೀಡಿದರು. ಇದೇ ವೇಳೆ ಶಾರೂಕ್ ಮನೆಯಿಂದ ಹೊರಗೆ ಬಂದು ತನ್ನ ಅಭಿಮಾನಿಗಳತ್ತ ಕೈ ಬೀಸಿದ್ದಾರೆ.

    ಸದ್ಯ ಶಾರೂಕ್ ತಮ್ಮ ಹುಟ್ಟುಹಬ್ಬದ ದಿನವೂ ಕೆಲಸದಲ್ಲಿ ತೊಡಗಲಿದ್ದಾರೆ. ಶಾರೂಕ್ ತಮ್ಮ ಮುಂಬರುವ ‘ಝೀರೋ’ ಚಿತ್ರದ ಟ್ರೈಲರ್ ಲಾಂಚ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಟ್ರೈಲರ್ 3 ನಿಮಿಷ 13 ಸೆಕೆಂಡ್‍ಗಳಿದೆ. ಚಿತ್ರದ ಟ್ರೈಲರ್ ಅನ್ನು ಮುಂಬೈನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಲಿದ್ದಾರೆ.

    ಝೀರೋ ಚಿತ್ರವನ್ನು ನಿರ್ದೇಶಕ ಆನಂದ್ ಎಲ್ ರೈ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಾರೂಕ್‍ಗೆ ನಾಯಕಿಯಾಗಿ ಕತ್ರಿನಾ ಕೈಫ್ ಹಾಗೂ ಅನುಷ್ಕಾ ಶರ್ಮಾ ನಟಿಸಿದ್ದು, ಈ ಮೂವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾರೂಕ್ ಖಾನ್‍ನಿಂದಾಗಿ ನನ್ನ ಜೀವನ ಹಾಳಾಯ್ತು: ಮುಂಬೈ ಯುವತಿ

    ಶಾರೂಕ್ ಖಾನ್‍ನಿಂದಾಗಿ ನನ್ನ ಜೀವನ ಹಾಳಾಯ್ತು: ಮುಂಬೈ ಯುವತಿ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ನನ್ನ ಜೀವನ ಹಾಳು ಮಾಡಿದ್ದಾರೆ ಎಂದು ಮುಂಬೈನ ಯುವತಿಯೊಬ್ಬಳು ತನ್ನ ಇನ್‍ಸ್ಟಾಗ್ರಾಂನಲ್ಲಿ ಬರೆದು ಪೋಸ್ಟ್ ಮಾಡಿದ್ದು, ಈಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆಯಾಗುತ್ತಿದೆ.

    ಮುಂಬೈ ಮೂಲದ ಯುವತಿಯೊಬ್ಬಳ ‘ಹ್ಯುಮನ್ಸ್ ಆಫ್ ಬಾಂಬೆ’ ಎಂಬ ಪೇಜ್‍ನಲ್ಲಿ ಆಕೆಯ ಪ್ರೇಮಕಥೆಯನ್ನು ಪೋಸ್ಟ್ ಮಾಡಲಾಗಿತ್ತು. ಅದರಲ್ಲಿ ಶಾರೂಕ್ ಖಾನ್ ನನ್ನ ಜೀವನವನ್ನು ಹಾಳು ಮಾಡಿದ್ದಾರೆ ಎಂದು ಯುವತಿ ಹೇಳಿದ್ದಾಳೆ. ಶಾರೂಖ್ ಖಾನ್

    ಶಾರೂಕ್ ಖಾನ್ ನನ್ನ ಜೀವನವನ್ನು ಹಾಳು ಮಾಡಿದ್ದಾರೆ. ನಾನು ಚಿಕ್ಕವಳಿದ್ದಾಗಿಂದಲೂ ಒಂದು ಒಳ್ಳೆಯ ವ್ಯಕ್ತಿಯಿಂದ ಅದ್ಭುತ ಲವ್ ಪ್ರಪೋಸಲ್ ಪಡೆಯುವ ಕನಸು ಕಂಡಿದ್ದೆ. ನಮ್ಮ ಬ್ಯಾಕ್‍ಗ್ರೌಂಡ್‍ನಲ್ಲಿ ವಯಲಿನ್ ನುಡಿಯುತ್ತಿರಬೇಕು. ಆಗ ನಿಧಾನವಾಗಿ ಆತ ನನ್ನ ಹತ್ತಿರ ಬರುವಾಗ ನನ್ನ ಕೂದಲು ಗಾಳಿಯಲ್ಲಿ ಹಾರಾಡುತ್ತಿರಬೇಕು. ಆಗ ಆತ ನನ್ನ ಮುಂದೆ ಮಂಡಿಯೂರಿ, ನನ್ನ ಬೆರಳಿಗೆ ಉಂಗುರ ತೊಡಿಸಬೇಕು ಎಂಬ ಕನಸನ್ನು ಕಂಡಿದ್ದೆ. ಆದರೆ ಅದು ಸಾಧ್ಯವಾಗಲೇ ಇಲ್ಲ.

    “Shahrukh Khan ruined my life! Since I was a little girl, I always dreamed of having the ‘perfect proposal’ from the perfect man. Violins would start playing in the background, he would walk up to me slowly, while the wind blew in my hair, fall to his knees and hand me the ring. But that never happened. In fact, we found ourselves in the middle of this mess where I was trying to convince my Bengali parents to let me marry a Punjabi Baniya! We’d been dating for 3 years, but the majority of that time was spent on bringing our families together. At one point in our relationship, we were sure that we were going to get married –so he never even tried to ‘surprise’ me with a proposal. Amidst all this drama of a big, fat Indian wedding, I realised– I never had my filmy moment! So, on his birthday, I decided to take the matter into my own hands. I planned a surprise party at the restaurant where we had our first date, and as soon as he walked in– I asked the DJ to play “Marry Me” by Bruno Mars and fell to my knees when he walked in. I said ‘Ashish Aggrawal– I want to spend the rest of my life laughing, crying and fighting with you– will you marry me?’ He looked at me, smirked, pulled me in for a hug and whispered – ‘let’s hope our kids aren’t as filmy!’ And just like that, I created the moment I’d been waiting for..why do women have to wait for the guy to propose? It’s a new day, new age– if you like him, then maybe you should put a ring on it!”

    A post shared by Humans of Bombay (@officialhumansofbombay) on

    ನಾವು ನಮ್ಮ ಕುಟುಂಬದವರ ಮಧ್ಯೆ ಸಿಲುಕಿಗೊಂಡಿದ್ದೆವು. ನಾನು ನನ್ನ ಬೆಂಗಾಲಿ ಪೋಷಕರಿಗೆ ಪಂಜಾಬಿ ಯುವಕನ ಜೊತೆ ಮದುವೆಯಾಗಲೂ ಒಪ್ಪಿಸುತ್ತಿದ್ದೆ. ನಾವಿಬ್ಬರು 3 ವರ್ಷದಿಂದ ಡೇಟಿಂಗ್ ನಡಿಸುತ್ತಿದ್ದೆವು, ಅದರಲ್ಲಿ ನಮ್ಮ ಕುಟುಂಬದವರನ್ನು ಒಪ್ಪಿಸುವುದರಲ್ಲೇ ಸ್ವಲ್ಪ ಕಾಲ ಕಳೆಯಿತು. ಆದರೆ ನಮ್ಮ ಪ್ರೀತಿಯನ್ನು ನೋಡಿದ್ದಾಗ ನಮ್ಮ ಮದುವೆಯಾಗುತ್ತದೆ ಎಂಬ ನಂಬಿಕೆ ಇತ್ತು. ಹಾಗಾಗಿ ಆತ ನನಗೆ ಯಾವುದೇ ‘ಸರ್ಪ್ರೈಸ್’ ಪ್ರಪೋಸ್ ಮಾಡಿಲ್ಲ ಎಂದು ಯುವತಿ ಹೇಳಿದ್ದಾಳೆ.

    ಈ ಭಾರತದ ದೊಡ್ಡ ಸಂಪ್ರದಾಯದ ಮದುವೆಯಲ್ಲಿ ನನ್ನ ಫಿಲ್ಮಿ ಕನಸು ನನಸಾಗಿಲ್ಲ ಎಂಬುದು ತಿಳಿಯಿತು. ಆಗ ನಾನು ಆತನ ಹುಟ್ಟುಹಬ್ಬಕ್ಕೆ ನಾನೇ ಸರ್ಪ್ರೈಸ್ ನೀಡಲು ನಿರ್ಧರಿಸಿದೆ. ಆಗ ನಾನು ಒಂದು ರೆಸ್ಟೊರೆಂಟ್‍ನಲ್ಲಿ ಆತನಿಗೆ ಸರ್ಪ್ರೈಸ್ ಪಾರ್ಟಿ ನೀಡಿದೆ. ಅಲ್ಲಿಗೆ ಹೋಗುತ್ತಿದ್ದ ಹಾಗೆ ನಮ್ಮ ಮೊದಲ ಡೇಟ್ ನಡೀತು. ಆಗ ನಾನು ಡಿಜೆ ‘ಮ್ಯಾರಿ ಮೀ’ ಹಾಡನ್ನು ಹಾಕಲು ಹೇಳಿದೆ. ನಂತರ ಆತ ಒಳಗೆ ಬರುತ್ತಿದ್ದ ಹಾಗೇ ನಾನೇ ಮಂಡಿಯೂರಿದೆ ಎಂದು ಯುವತಿ ಪೋಸ್ಟ್ ನಲ್ಲಿ ತಿಳಿಸಿದ್ದಾಳೆ.

    ಆತನ ಮುಂದೆ ಮಂಡಿಯೂರಿ ಆಶೀಶ್ ಅಗರ್‍ವಾಲ್ ನಾನು ನನ್ನ ಮುಂದಿನ ಜೀವನವನ್ನು ನಿನ್ನ ಜೊತೆ ನಗುತ್ತಾ, ಅಳುತ್ತಾ ಹಾಗೂ ಜಗಳವಾಡುತ್ತಾ ಬದುಕಲು ಇಷ್ಟಪಡುತ್ತೇನೆ. ನನ್ನನ್ನು ಮದುವೆಯಾಗುತ್ತೀಯ? ಎಂದು ಕೇಳಿದೆ. ಆಗ ಆತ ನನ್ನನ್ನು ನೋಡಿ ಮೇಲೆತ್ತಿ ಅಪ್ಪಿಕೊಂಡು, ನಮ್ಮ ಮಕ್ಕಳು ಫಿಲ್ಮಿ ರೀತಿ ಇರಲ್ಲ ಎಂದು ಆಶಿಸುತ್ತೇನೆ ಎಂದು ಹೇಳಿದನು. ನಾನು ಯಾವುದ್ದಕ್ಕೆ ಕಾಯುತ್ತಿದ್ದನೋ ಅದನ್ನು ನಾನೇ ಮಾಡಿದೆ. ಆಗ ನನಗೆ ತಿಳಿಯಿತು ಯುವತಿಯರು ಯಾಕೆ ಹುಡುಗರ ಪ್ರಪ್ರೋಸಲ್‍ಗಾಗಿ ಕಾಯುತ್ತಾರೆ? ಇದು ಹೊಸ ದಿನ, ಹೊಸ ಯುಗ. ನಿಮಗೆ ಆ ಯುವಕ ಇಷ್ಟವಾದರೆ, ಆತನ ಬೆರಳಿಗೆ ಉಂಗುರ ಹಾಕಿ ಎಂದು ಬರೆದು ಆಕೆ ಪೋಸ್ಟ್ ಮಾಡಿದ್ದಾಳೆ.

  • ಶಾರೂಕ್ ಮನೆಗೆ ನುಗ್ಗಿ ಸ್ವಿಮ್ಮಿಂಗ್ ಪೂಲ್‍ನಲ್ಲಿ ಬಿದ್ದ ಹುಚ್ಚು ಅಭಿಮಾನಿ

    ಶಾರೂಕ್ ಮನೆಗೆ ನುಗ್ಗಿ ಸ್ವಿಮ್ಮಿಂಗ್ ಪೂಲ್‍ನಲ್ಲಿ ಬಿದ್ದ ಹುಚ್ಚು ಅಭಿಮಾನಿ

    ಮುಂಬೈ: ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಶಾರೂಕ್ ಖಾನ್ ತನ್ನ ಮನೆಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದ್ದ ಅಭಿಮಾನಿಯೊಬ್ಬನ ಹುಚ್ಚಿನ ಕಥೆಯನ್ನು ತಿಳಿಸಿದ್ದಾರೆ.

    ನನ್ನ ಬದುಕಿನಲ್ಲಿ ಎಲ್ಲ ರೀತಿಯ ಅಭಿಮಾನಿಯನ್ನು ನೋಡಿದ್ದೇನೆ. ಆದರೆ ಕೆಲ ದಿನಗಳ ಹಿಂದೆ ಅಭಿಮಾನಿಯೊಬ್ಬ ನೇರವಾಗಿ ನನ್ನ ಮನ್ನತ್ ಮನೆಗೆ ನುಗ್ಗಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿದ್ದಿದ್ದ. ಆಟೋಗ್ರಾಫ್, ಫೋಟೋಗ್ರಾಫ್ ಪಡೆಯದೇ ಬಟ್ಟೆ ಬಿಚ್ಚಿ ಸ್ವಿಮ್ಮಿಂಗ್ ಪೂಲ್‍ಗೆ ಬಿದ್ದಿದ್ದು ಯಾಕೆ ಎಂದು ಕೇಳಿದ್ದಕ್ಕೆ ಶಾರೂಕ್ ಸ್ನಾನ ಮಾಡಿದ್ದ ನೀರಿನಲ್ಲಿ ಸ್ನಾನ ಮಾಡಬೇಕೆಂದು ನಾನು ಬಯಸಿದ್ದೆ. ಹೀಗಾಗಿ ನಾನು ಪೂಲ್‍ನಲ್ಲಿ ಬಿದ್ದೆ ಎಂದು ಉತ್ತರಿಸಿದ್ದ ಎನ್ನುವ ವಿಚಾರವನ್ನು ಹೇಳಿಕೊಂಡಿದ್ದಾರೆ.

    ಆ ವ್ಯಕ್ತಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಬೀಳುತ್ತಿದ್ದ ಹಾಗೇ ಸೆಕ್ಯೂರಿಟಿ ಪ್ರಶ್ನಿಸಿದ್ದಾಗ ಆತನ ಉತ್ತರ ಕೇಳಿ ಸ್ವತಃ ನನಗೆ ಶಾಕ್ ಆಯ್ತು ಎಂದು ಹುಚ್ಚು ಅಭಿಮಾನಿಯ ಕಥೆಯನ್ನು ಕಿಂಗ್ ಖಾನ್ ಬಿಚ್ಚಿಟ್ಟರು.