Tag: ಶಾರುಖ್ ಖಾನ್

  • Gadar 2: ಮುನಿಸು ಮರೆತು 16 ವರ್ಷಗಳ ನಂತರ ಒಂದಾದ ಶಾರುಖ್-ಸನ್ನಿ ಡಿಯೋಲ್

    Gadar 2: ಮುನಿಸು ಮರೆತು 16 ವರ್ಷಗಳ ನಂತರ ಒಂದಾದ ಶಾರುಖ್-ಸನ್ನಿ ಡಿಯೋಲ್

    ಸ್ಯಾಂಡಲ್‌ವುಡ್ ಸ್ಟಾರ್ಸ್ ಸುದೀಪ್- ದರ್ಶನ್ (Darshan) ಮತ್ತೆ ಜೊತೆಯಾಗ್ತಾರಾ ಎಂಬ ಕಾಯುವಿಕೆಯ ನಡುವೆ ಬಾಲಿವುಡ್‌ನ ಸ್ಟಾರ್‌ಗಳ ನಡೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಮುನಿಸು ಮರೆತು 16 ವರ್ಷಗಳ ನಂತರ ಶಾರುಖ್ ಖಾನ್- ಸನ್ನಿ ಡಿಯೋಲ್ (Sunny Deol) ಮತ್ತೆ ಜೊತೆಯಾಗಿದ್ದಾರೆ. ಗದರ್ 2 ಸಕ್ಸಸ್‌ಗೆ ಶಾರುಖ್, ಸನ್ನಿ ಡಿಯೋಲ್‌ನ ತಬ್ಬಿಕೊಂಡು ಶುಭಹಾರೈಸಿರುವ ವಿಡಿಯೋ ಸಖತ್ ಸದ್ದು ಮಾಡ್ತಿದೆ.

     

    View this post on Instagram

     

    A post shared by Viral Bhayani (@viralbhayani)

    ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ಗದರ್ 2 (Gadar 2) ಸಿನಿಮಾ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸನ್ನಿ ಡಿಯೋಲ್- ಆಮೀಷಾ ಪಟೇಲ್ ಜೋಡಿಯಾಗಿ ಸಿನಿಮಾದಲ್ಲಿ ಮೋಡಿ ಮಾಡಿದ್ದಾರೆ. ಗದರ್ 2 ಸಕ್ಸಸ್ ಆಗಿರೋದ್ದಕ್ಕೆ ಬಾಲಿವುಡ್ (Bollywood) ಸ್ಟಾರ್ ನಟ-ನಟಿಯರ ಜೊತೆ ಚಿತ್ರತಂಡ ಪಾರ್ಟಿ ಮಾಡಿದೆ. ಈ ಸಂಭ್ರಮದಲ್ಲಿ ಪಠಾಣ್ (Pathaan) ಸ್ಟಾರ್ ಶಾರುಖ್ ಖಾನ್ ದಂಪತಿ ಕೂಡ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಕಮಲ್‌ ಹಾಸನ್‌ ಆಪ್ತ, ನಟ ಆರ್‌.ಎಸ್ ಶಿವಾಜಿ ನಿಧನ

    ಗದರ್ 2 ಸಕ್ಸಸ್ ಪಾರ್ಟಿಗೆ ಶಾರುಖ್ ಸಾಕ್ಷಿಯಾಗುವ ಮೂಲಕ ಸನ್ನಿ ಡಿಯೋಲ್ ಜೊತೆಗಿನ 16 ವರ್ಷಗಳ ಮುನಿಸಿಗೆ ಅಂತ್ಯ ಹಾಡಿದ್ದಾರೆ. ಸನ್ನಿ ಕೆರಿಯರ್ ಸಕ್ಸಸ್‌ಗೆ ತಬ್ಬಿಕೊಂಡು ಶಾರುಖ್ ಖಾನ್ (Sharukh Khan) ಶುಭಕೋರಿದ್ದಾರೆ. ಇಬ್ಬರ ಖುಷಿ ನೋಡಿ ಬಿಟೌನ್ ಮಂದಿ ಭೇಷ್ ಎಂದಿದ್ದಾರೆ.

    1993ರಲ್ಲಿ ‘ಡರ್’ (Darr) ಎಂಬ ಸಿನಿಮಾ ಸನ್ನಿ ಡಿಯೋಲ್, ಶಾರುಖ್ ಖಾನ್, ಜೂಹ್ಲಿ ಚಾವ್ಲಾ (Juhi Chawla) ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಸನ್ನಿ ಹೀರೋ ಆಗಿ ಮಿಂಚಿದ್ದರು. ಶಾರುಖ್ ರೋಲ್‌ಗೆ ಅಷ್ಟಾಗಿ ಮನ್ನಣೆ ಸಿಗಲಿಲ್ಲ. ವೈಯಕ್ತಿಕ ಮನಸ್ತಾಪಗಳಿಂದ ಅಂದು ಶಾರುಖ್- ಸನ್ನಿ ದೂರವಾಗಿದ್ದರು. ಡರ್ ಸಿನಿಮಾದಲ್ಲಿ ಇಬ್ಬರು ಕೊನೆಯದಾಗಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಈಗ ಇಬ್ಬರು ಒಂದಾಗುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಜವಾನ್’ ಚಿತ್ರದ ಟ್ರೈಲರ್ ಗೆ ಸಖತ್ ರೆಸ್ಪಾನ್ಸ್: ಶಾರುಖ್ ಪಾತ್ರವೇನು?

    ‘ಜವಾನ್’ ಚಿತ್ರದ ಟ್ರೈಲರ್ ಗೆ ಸಖತ್ ರೆಸ್ಪಾನ್ಸ್: ಶಾರುಖ್ ಪಾತ್ರವೇನು?

    ಮೊದಲ ನೋಟದಿಂದ ಪ್ರೇಕ್ಷಕರ ಗಮನವನ್ನು ತನ್ನೆಡೆಗೆ ಸೆಳೆದಂತಹ ಶಾರೂಖ್ ಖಾನ್ (Shah Rukh Khan) ಅಭಿನಯದ ‘ಜವಾನ್’ (Jawaan) ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಬಿಡುಗಡೆಗೆ ಇನ್ನೊಂದೇ ವಾರವಿದ್ದರೂ, ಚಿತ್ರದ ಟ್ರೈಲರ್ (Trailer) ಬಿಡುಗಡೆಯಾಗಿಲ್ಲ ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗಾಗಿ ಚಿತ್ರತಂಡದವರು ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಆ ಕುತೂಹಲವನ್ನು ತಣಿಸುತ್ತಾರೆ.

    ವಿಶೇಷವೆಂದರೆ ಈ ಟ್ರೈಲರ್ ಬಿಡುಗಡೆ ಮಾಡಿರುವುದು ಚಿತ್ರದ ನಾಯಕಿ ನಯನತಾರಾ (Nayantara).  ಇನ್ಸ್ಟಾಗ್ರಾಮ್ ನಲ್ಲಿ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ನಯನತಾರಾ ಸೋಷಿಯಲ್ ಮೀಡಿಯಾಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ನೆಚ್ಚಿನ ನಟಿಯ ಚಿತ್ರವೊಂದರ ಟ್ರೇಲರ್ ಬಿಡುಗಡೆ ಆಗಿರುವುದು ಖುಷಿಯಾದರೆ, ನಯನತಾರಾ ಸೋಷಿಯಲ್ ಮೀಡಿಯಾಗೆ ಬಂದಿರುವುದು ಅವರ ಅಭಿಮಾನಿಗಳ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ.

    ಈ ಟ್ರೈಲರ್ ನಲ್ಲಿ ರೋಚಕವೆನಿಸುವಂತಹ ಸಾಹಸಮಯ ದೃಶ್ಯಗಳು, ಎದೆ ಝಲ್ಲೆನಿಸುವ ಆಕ್ಷನ್ ದೃಶ್ಯಗಳು ಹೆಚ್ಚಿದ್ದು, ‘ಜವಾನ್’ ಪ್ರಪಂಚವನ್ನು ತೆರೆದಿಟ್ಟಿದೆ. ಕಣ್ಣು ಸೆಳೆಯುವ ದೃಶ್ಯಗಳಿರುವ ಈ ಟ್ರೈಲರ್ ಪ್ರೇಕ್ಷಕರ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಾಗಿಸಿದ್ದು, ಚಿತ್ರ ಬಿಡುಗಡೆಗೆ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

     

    ‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಡಿಯಲ್ಲಿ ಗೌರಿ ಖಾನ್ ನಿರ್ಮಿಸಿದರೆ, ಗೌರವ್ ವರ್ಮ ಸಹನಿರ್ಮಾಪಕರಾಗಿದ್ದಾರೆ. ಚಿತ್ರವು ಸೆ.07ರಂದು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟಿ ಆಲಿಯಾ ಭಟ್ ಗಾಗಿ ಮೆಟ್ರೋ ರೈಲು ಹೈಜಾಕ್ ಮಾಡಿದ ನಟ

    ನಟಿ ಆಲಿಯಾ ಭಟ್ ಗಾಗಿ ಮೆಟ್ರೋ ರೈಲು ಹೈಜಾಕ್ ಮಾಡಿದ ನಟ

    ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಗಾಗಿ ಮೆಟ್ರೋ ರೈಲು ಹೈಜಾಕ್ ಮಾಡಿದ ಘಟನೆ ‘ಜವಾನ್’ (Jawaan) ಸಿನಿಮಾದಲ್ಲಿ ನಡೆದಿದೆ. ಆಲಿಯಾ ಭಟ್ ಗಾಗಿ ಮೆಟ್ರೋ ರೈಲು ಹೈಜಾಕ್ (Hijack) ಮಾಡುವ ಆ ನಟ, ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ವಾಪಸ್ಸು ಆ ನಟನನ್ನು ಸಂಪರ್ಕಿಸಿ ‘ನಿನಗೇನು ಬೇಕು?’ ಎಂದು ಕೇಳುತ್ತಾರೆ. ‘ನನಗೆ ಆಲಿಯಾ ಭಟ್’ ಬೇಕು ಎಂದು ಕೇಳಿ ಬೆಚ್ಚಿಬೀಳಿಸುತ್ತಾನೆ.

    ಇದು ನಿಜವಾಗಿಯೂ ನಡೆದ ಘಟನೆಯಲ್ಲ. ಶಾರುಖ್ ಖಾನ್ (Shahrukh Khan) ನಟನೆಯ ಜವಾನ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಈ ಟ್ರೈಲರ್  (Trailer) ನಲ್ಲಿ ಇಂಥದ್ದೊಂದು ಸಂಭಾಷಣೆ ಇದೆ. ಆಲಿಯಾ ಭಟ್ ಗಾಗಿ ಶಾರುಖ್ ರೈಲು ಹೈಜಾಕ್ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿಸುತ್ತದೆ. ಈ ಸಿನಿಮಾದಲ್ಲಿ ಆಲಿಯಾ ಇರದೇ ಇದ್ದರೂ, ಅವರ ಹೆಸರನ್ನು ಯಾಕೆ ತೆಗೆದುಕೊಂಡರು ಎನ್ನುವುದನ್ನು ಸಿನಿಮಾ ರಿಲೀಸ್ ಆದ ನಂತರವೇ ಗೊತ್ತಾಗಲಿದೆ. ಇದನ್ನೂ ಓದಿ:ಮದುವೆ ಬಳಿಕ ಅಮೆರಿಕಾಗೆ ಹಾರಿದ ಹರ್ಷಿಕಾ ದಂಪತಿ

    ಈ ಕುರಿತು ಆಲಿಯಾ ಭಟ್ ಪ್ರತಿಕ್ರಿಯೆ ನೀಡಿದ್ದು, ‘ಇಡೀ ಜಗತ್ತೇ ಶಾರುಖ್ ಖಾನ್ ಅವರಿಗಾಗಿ ಕಾಯುತ್ತಿದೆ’ ಎಂದಷ್ಟೇ ಹೇಳಿದ್ದಾರೆ. ಈ ಮೂಲಕ ಸಿನಿಮಾಗಾಗಿ ಇಡೀ ಜಗತ್ತೇ ಕಾಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ‘ಆಲಿಯಾ ಭಟ್ ಬೇಕು’ ಎಂದು ಹೇಳುವ ಡೈಲಾಗ್ ಸಖತ್ ವೈರಲ್ ಕೂಡ ಆಗಿದೆ.

     

    ನಟ ಶಾರುಖ್ ಜವಾನ್ ಸಿನಿಮಾದ ಪ್ರಚಾರವನ್ನು ದುಬೈನಲ್ಲೂ ಪ್ರಾರಂಭಿಸಿದ್ದಾರೆ. ಪ್ರಚಾರದ ಮೊದಲ ಭಾಗವಾಗಿ ಜಗತ್ತಿನ ಅತೀ ಎತ್ತರದ ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾದಲ್ಲಿ ಜವಾನ್ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ, ಅಭಿಮಾನಿಗಳಿಗೆ ತೋರಿಸಿದ್ದಾರೆ. ನಿನ್ನೆ ರಾತ್ರಿ ಬುರ್ಜ್ ಖಲೀಫಾದ ಮೇಲೆ ಜವಾನ್ ಟ್ರೈಲರ್ ಪ್ರದರ್ಶನವಾಗಿ ಸಾವಿರಾರು ಅಭಿಮಾನಿಗಳನ್ನು ರಂಜಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದುಬೈ ಬುರ್ಜ್ ಖಲೀಫಾದಲ್ಲಿ ‘ಜವಾನ್’ ಚಿತ್ರದ ಟ್ರೈಲರ್

    ದುಬೈ ಬುರ್ಜ್ ಖಲೀಫಾದಲ್ಲಿ ‘ಜವಾನ್’ ಚಿತ್ರದ ಟ್ರೈಲರ್

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ತಮ್ಮ ಜವಾನ್ ಸಿನಿಮಾದ ಪ್ರಚಾರವನ್ನು ದುಬೈನಲ್ಲೂ (Dubai) ಪ್ರಾರಂಭಿಸಿದ್ದಾರೆ. ಪ್ರಚಾರದ ಮೊದಲ ಭಾಗವಾಗಿ ಜಗತ್ತಿನ ಅತೀ ಎತ್ತರದ ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾದಲ್ಲಿ (Burj Khalifa) ಜವಾನ್ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ, ಅಭಿಮಾನಿಗಳಿಗೆ ತೋರಿಸಿದ್ದಾರೆ. ನಿನ್ನೆ ರಾತ್ರಿ ಬುರ್ಜ್ ಖಲೀಫಾದ ಮೇಲೆ ಜವಾನ್ ಟ್ರೈಲರ್ ಪ್ರದರ್ಶನವಾಗಿ ಸಾವಿರಾರು ಅಭಿಮಾನಿಗಳನ್ನು ರಂಜಿಸಿದೆ.

    ಟೆಂಪನ್ ರನ್

    ‘ಪಠಾಣ್'(Pathaan) ಸಿನಿಮಾದ ಸೂಪರ್ ಸಕ್ಸಸ್ ನಂತರ ಜವಾನ್ (Jawan) ಚಿತ್ರ ಕೂಡ ಗೆಲ್ಲಲೇಬೇಕು ಎಂದು ನಟ ಶಾರುಖ್ ಖಾನ್ (Sharukh Khan) ಪಣ ತೊಟ್ಟಿದ್ದಾರೆ. ಜವಾನ್ ಸಿನಿಮಾ ಸೆ.7ಕ್ಕೆ ತೆರೆಗೆ ಬರುವ ಮುನ್ನ ವೈಷ್ಣೋದೇವಿ ದೇವಾಲಯಕ್ಕೆ(Vaishnodevi Temple) ಶಾರುಖ್ ಮಧ್ಯರಾತ್ರಿ ಭೇಟಿ ನೀಡಿದ್ದಾರೆ.

    ಜವಾನ್ (Jawan) ರಿಲೀಸ್‌ಗೆ ಒಂದು ವಾರ ಬಾಕಿಯಿದೆ. ಇದೇ ಸೆ.7ಕ್ಕೆ ಪಠಾಣ್ ಸ್ಟಾರ್ ಶಾರುಖ್ ನಟನೆಗೆ ಜವಾನ್ ತೆರೆಗೆ ಬರಲು ಸಜ್ಜಾಗಿದೆ.ಶಾರುಖ್ ಖಾನ್ ಅವರು ಜಮ್ಮ ಕಾಶ್ಮೀರದಲ್ಲಿರುವ ವೈಷ್ಣೋ ದೇವಿ ದೇವಸ್ಥಾನಗೆ ಭೇಟಿ ನೀಡಿದ್ದಾರೆ. ಅದೂ ಮಧ್ಯರಾತ್ರಿ ಸಂದರ್ಭದಲ್ಲಿ ಅನ್ನೋದು ವಿಶೇಷ. ಈ ವಿಡಿಯೋ ನೋಡಿದ ಅಭಿಮಾನಿಗಳು ಹಲವು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

    ಶಾರುಖ್ ಖಾನ್ ಅವರು ಮುಸ್ಲಿಂ ಧರ್ಮಕ್ಕೆ ಸೇರಿದವರು. ಆದಾಗ್ಯೂ ಅವರ ಮನೆಯಲ್ಲಿ ಹಲವು ಹಿಂದೂ ಹಬ್ಬಗಳನ್ನು ಆಚರಿಸಲಾಗುತ್ತದೆ. ಅವರಿಗೆ ಹಿಂದೂ ದೇವರ ಬಗ್ಗೆಯೂ ಅಪಾರ ಭಕ್ತಿ ಇದೆ. ಇದು ಈಗ ಮತ್ತೊಮ್ಮೆ ಸಾಬೀತಾಗಿದೆ. ಹಿಂದೂಗಳ ಪ್ರಮುಖ ದೇವಾಲಯವಾದ ವೈಷ್ಣೋ ದೇವಿಗೆ ಶಾರುಖ್ ಖಾನ್ ಭೇಟಿ ನೀಡಿದ್ದಾರೆ. ತಮ್ಮ ಗುರುತು ಸಿಗದಂತೆ ನಟ ಎಂಟ್ರಿ ಕೊಟ್ಟು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅವರನ್ನು ಭದ್ರತಾ ಸಿಬ್ಬಂದಿಗಳು ಸುತ್ತುವರಿದಿದ್ದರು.

     

    ಶಾರುಖ್ ಖಾನ್ ಅವರು ವೈಷ್ಣೋ ದೇವಿ ಟೆಂಪಲ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲೇನೂ ಅಲ್ಲ. ಪ್ರತಿ ಸಿನಿಮಾದ ರಿಲೀಸ್‌ಗೂ ಮುನ್ನ ಶಾರುಖ್ ಇಲ್ಲಿ ಭೇಟಿ ನೀಡುತ್ತಾರೆ. ಶಾರುಖ್ ಖಾನ್ ಅವರು ಹಿಂದೂ ದೇವರ ಮೇಲೆ ಅಪಾರ ನಂಬಿಕೆ ಇಟ್ಟಿರುವುದನ್ನು ಅನೇಕರು ಶ್ಲಾಘಿಸಿದ್ದಾರೆ. ಶಾರುಖ್ ಖಾನ್ ಭಕ್ತಿ ನಿಜಕ್ಕೂ ಮೆಚ್ಚುವಂಥದ್ದು ಎಂದಿದ್ದಾರೆ. ಇನ್ನೂ ಕೆಲವರು ಅವರನ್ನು ಟೀಕಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಜವಾನ್’ ರಿಲೀಸ್‌ಗೂ ಮುನ್ನ ವೈಷ್ಣೋದೇವಿ ದೇವಸ್ಥಾನಕ್ಕೆ ಶಾರುಖ್ ಖಾನ್ ಭೇಟಿ

    ‘ಜವಾನ್’ ರಿಲೀಸ್‌ಗೂ ಮುನ್ನ ವೈಷ್ಣೋದೇವಿ ದೇವಸ್ಥಾನಕ್ಕೆ ಶಾರುಖ್ ಖಾನ್ ಭೇಟಿ

    ‘ಪಠಾಣ್'(Pathaan) ಸಿನಿಮಾದ ಸೂಪರ್ ಸಕ್ಸಸ್ ನಂತರ ಜವಾನ್ (Jawan) ಚಿತ್ರ ಕೂಡ ಗೆಲ್ಲಲೇಬೇಕು ಎಂದು ನಟ ಶಾರುಖ್ ಖಾನ್ (Sharukh Khan) ಪಣ ತೊಟ್ಟಿದ್ದಾರೆ. ಜವಾನ್ ಸಿನಿಮಾ ಸೆ.7ಕ್ಕೆ ತೆರೆಗೆ ಬರುವ ಮುನ್ನ ವೈಷ್ಣೋದೇವಿ ದೇವಾಲಯಕ್ಕೆ(Vaishnodevi Temple) ಆಗಸ್ಟ್ 29ರಂದು ಮಧ್ಯರಾತ್ರಿ ಭೇಟಿ ನೀಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಜವಾನ್ (Jawan) ರಿಲೀಸ್‌ಗೆ ಒಂದು ವಾರ ಬಾಕಿಯಿದೆ. ಇದೇ ಸೆ.7ಕ್ಕೆ ಪಠಾಣ್ ಸ್ಟಾರ್ ಶಾರುಖ್ ನಟನೆಗೆ ಜವಾನ್ ತೆರೆಗೆ ಬರಲು ಸಜ್ಜಾಗಿದೆ.ಶಾರುಖ್ ಖಾನ್ ಅವರು ಜಮ್ಮ ಕಾಶ್ಮೀರದಲ್ಲಿರುವ ವೈಷ್ಣೋ ದೇವಿ ದೇವಸ್ಥಾನಗೆ ಭೇಟಿ ನೀಡಿದ್ದಾರೆ. ಅದೂ ಮಧ್ಯರಾತ್ರಿ ಸಂದರ್ಭದಲ್ಲಿ ಅನ್ನೋದು ವಿಶೇಷ. ಈ ವಿಡಿಯೋ ನೋಡಿದ ಅಭಿಮಾನಿಗಳು ಹಲವು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಸಿನಿಮಾ ಬಿಟ್ಟು ರಾಜಕೀಯದತ್ತ ರಮ್ಯಾ ಕೃಷ್ಣನ್? ಸ್ಪಷ್ಟನೆ ನೀಡಿದ ನಟಿ

    ಶಾರುಖ್ ಖಾನ್ ಅವರು ಮುಸ್ಲಿಂ ಧರ್ಮಕ್ಕೆ ಸೇರಿದವರು. ಆದಾಗ್ಯೂ ಅವರ ಮನೆಯಲ್ಲಿ ಹಲವು ಹಿಂದೂ ಹಬ್ಬಗಳನ್ನು ಆಚರಿಸಲಾಗುತ್ತದೆ. ಅವರಿಗೆ ಹಿಂದೂ ದೇವರ ಬಗ್ಗೆಯೂ ಅಪಾರ ಭಕ್ತಿ ಇದೆ. ಇದು ಈಗ ಮತ್ತೊಮ್ಮೆ ಸಾಬೀತಾಗಿದೆ. ಹಿಂದೂಗಳ ಪ್ರಮುಖ ದೇವಾಲಯವಾದ ವೈಷ್ಣೋ ದೇವಿಗೆ ಶಾರುಖ್ ಖಾನ್ ಅವರು ಮಂಗಳವಾರ (ಆಗಸ್ಟ್ 29) ರಾತ್ರಿ 11:40ರ ಸಮಯದಲ್ಲಿ ಭೇಟಿ ನೀಡಿದ್ದಾರೆ. ತಮ್ಮ ಗುರುತು ಸಿಗದಂತೆ ನಟ ಎಂಟ್ರಿ ಕೊಟ್ಟು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅವರನ್ನು ಭದ್ರತಾ ಸಿಬ್ಬಂದಿಗಳು ಸುತ್ತುವರಿದಿದ್ದರು.

    ಶಾರುಖ್ ಖಾನ್ ಅವರು ವೈಷ್ಣೋ ದೇವಿ ಟೆಂಪಲ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲೇನೂ ಅಲ್ಲ. ಪ್ರತಿ ಸಿನಿಮಾದ ರಿಲೀಸ್‌ಗೂ ಮುನ್ನ ಶಾರುಖ್ ಇಲ್ಲಿ ಭೇಟಿ ನೀಡುತ್ತಾರೆ. ಶಾರುಖ್ ಖಾನ್ ಅವರು ಹಿಂದೂ ದೇವರ ಮೇಲೆ ಅಪಾರ ನಂಬಿಕೆ ಇಟ್ಟಿರುವುದನ್ನು ಅನೇಕರು ಶ್ಲಾಘಿಸಿದ್ದಾರೆ. ಶಾರುಖ್ ಖಾನ್ ಭಕ್ತಿ ನಿಜಕ್ಕೂ ಮೆಚ್ಚುವಂಥದ್ದು ಎಂದಿದ್ದಾರೆ. ಇನ್ನೂ ಕೆಲವರು ಅವರನ್ನು ಟೀಕಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾರುಖ್ ‘‌ಜವಾನ್ʼ ಕಾಳಗಕ್ಕೆ ಯಶ್- ಪೃಥ್ವಿರಾಜ್ ಸುಕುಮಾರನ್ ಸಾಥ್

    ಶಾರುಖ್ ‘‌ಜವಾನ್ʼ ಕಾಳಗಕ್ಕೆ ಯಶ್- ಪೃಥ್ವಿರಾಜ್ ಸುಕುಮಾರನ್ ಸಾಥ್

    ಶಾರುಖ್ ಖಾನ್ (Sharukh Khan) ಮತ್ತೆ ಕನ್ನಡದ ರಾಕಿಭಾಯ್‌ಗೆ (Rocky Bhai) ಶರಣಾಗಿದ್ದಾರೆ. ಜವಾನ್ ಸಿನಿಮಾ ಕಾಪಾಡು ಎಂದಿದ್ದಾರೆ. ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಜವಾನ್ ಸಿನಿಮಾಕ್ಕೂ ಯಶ್‌ಗೂ ಏನು ಸಂಬಂಧ? ಇದೇನಿದು ರಹಸ್ಯ? ಜವಾನ್ ನಿರ್ಮಾಪಕಿ ಗೌರಿ ಖಾನ್‌, ಯಶ್‌ಗೆ (Yash) ಧನ್ಯವಾದ ತಿಳಿಸಿದ್ದೇಕೆ? ಇಲ್ಲಿದೆ ಮಾಹಿತಿ.

    ಶಾರುಖ್‌ಖಾನ್ ‘ಜವಾನ್’ (Jawan) ಇನ್ನೇನು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಮುಂದಿನ ತಿಂಗಳು ವಿಶ್ವಾದ್ಯಂತ ಮೆರವಣಿಗೆ ಹೊರಡಲಿದೆ. ಕನ್ನಡದಲ್ಲೂ ಡಬ್ ಆಗಿ ತೆರೆ ಕಾಣುತ್ತಿದೆ. ಈ ಹೊತ್ತಲ್ಲಿ ಜವಾನ್ ನಿರ್ಮಾಪಕಿ ಗೌರಿ ಖಾನ್, ಯಶ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್‌ಗೂ ಧನ್ಯವಾದ ಎಂದಿದ್ದಾರೆ. ಇದಕ್ಕೆ ಕಾರಣ ಏನು? ಹುಡುಕುತ್ತಾ ಹೊರಟರೆ ಗಾಳಿ ಪಟ ಹಾರುವುದು ಇದು. ಜವಾನ್ ಸಿನಿಮಾದ ಕತೆ ನಿರೂಪಣೆಗೆ ಯಶ್ ಹಿನ್ನೆಲೆ ಧ್ವನಿ ನೀಡಿದ್ದಾರಂತೆ. ಇದನ್ನೂ ಓದಿ:ಸರ್ಕಾರಿ ಭೂಮಿ ಒತ್ತುವರಿ – ಪ್ರಕಾಶ್ ರಾಜ್‌ಗೆ ನೋಟಿಸ್

    ಕನ್ನಡದಲ್ಲಿ ಯಶ್ ಹಿನ್ನೆಲೆ ಧ್ವನಿ (Voice) ನೀಡಿದರೆ, ಮಲಯಾಳಂನಲ್ಲಿ(Malyalam) ಇದೆ ಕೆಲಸವನ್ನು ಪೃಥ್ವಿರಾಜ್ ಸುಕುಮಾರನ್‌ (Prithviraj Sukumaran) ಮಾಡಿದ್ದಾರೆ. ಕನ್ನಡದ ಡಬ್ಬಿಂಗ್ ಜವಾನ್‌ನಲ್ಲಿ ಕನ್ನಡದ ಯಶ್ ಧ್ವನಿ ಇದ್ದರೆ ವರ್ಕ್ಔಟ್ ಆಗುತ್ತದೆ ಎನ್ನುವ ನಂಬಿಕೆ. ಅದು ಸತ್ಯ ಕೂಡ. ಕೆಲವು ವರ್ಷಗಳ ಹಿಂದೆ ಶಾರುಖ್ ಅಭಿನಯದ ಜೀರೊ ತೆರೆ ಕಂಡಿತ್ತು. ಅದೇ ದಿನ ಕೆಜಿಎಫ್ ಮೊದಲ ಭಾಗ ಅಖಾಡಕ್ಕಿಳಿದಿತ್ತು. ಶಾರುಖ್ ಮುಂದೆ ಉಳೀತಾರಾ ಯಶ್? ಕಾಲೆಳೆದಿತ್ತು ಬಾಲಿವುಡ್. ಈಗ ಅದೇ ಯಶ್ ಮುಂದೆ ಮಂಡಿ ಊರಿದೆ ಹಿಂದಿ ಸಿನಿಮಾರಂಗ. ಎಲ್ಲವೂ ಕಾಲಾಯ ತಸ್ಮೈ ನಮಃ ಅಷ್ಟೇ ಅಂತಾರೆ ಸಿನಿ ಪಂಡಿತರು.

    ಕನ್ನಡದ ಜವಾನ್‌ಗೆ (Jawan Kannada Film) ಯಶ್ ಹಿನ್ನೆಲೆ ಧ್ವನಿ ನೀಡಿರುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಯಶ್ ಸಿನಿಮಾ ಯಾವಾಗ ನೋಡ್ತಿವೋ ಗೊತ್ತಿಲ್ಲ. ಆದರೆ ಅವರ ಧ್ವನಿ ಕೇಳಲು ಚಿತ್ರಮಂದಿರಕ್ಕೆ ಹೋಗ್ತೀವಿ ಅಂತಿದ್ದಾರೆ ಅಭಿಮಾನಿಗಳು. ಸೆಪ್ಟೆಂಬರ್ 7ಕ್ಕೆ ತೆರೆ ಕಾಣ್ತಿರೋ ಜವಾನ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡುತ್ತಾ? ಶಾರುಖ್-ನಯನತಾರಾ(Nayanatara) ನಟನೆ, ಯಶ್ ಕಂಠ ಸಿರಿ ಎಲ್ಲವೂ ಮೋಡಿ ಮಾಡುತ್ತಾ? ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾರುಖ್ ಖಾನ್ ಮನೆಗೆ ಹೆಚ್ಚಿನ ಭದ್ರತೆ: ಮನೆ ಮುಂದೆ ಪ್ರತಿಭಟನೆ

    ಶಾರುಖ್ ಖಾನ್ ಮನೆಗೆ ಹೆಚ್ಚಿನ ಭದ್ರತೆ: ಮನೆ ಮುಂದೆ ಪ್ರತಿಭಟನೆ

    ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ (Shah Rukh Khan) ಮನೆಗೆ ಭಾರೀ ಭದ್ರತೆ ನೀಡಲಾಗಿದೆ. ಮುಂಬೈನಲ್ಲಿರುವ (Mumbai) ಮನ್ನತ್ ನಿವಾಸಕ್ಕೆ ಮುಂಬೈ ಪೊಲೀಸರು ಹೆಚ್ಚಿನ ಭದ್ರತೆ ನೀಡಲಾಗಿದ್ದು, ಮನೆ ಮುಂದೆ ಜನರು ಜಮಾಯಿಸಬಾರದು ಎಂದು ಸೂಚನೆ ನೀಡಲಾಗಿದೆ. ಮನೆ ಮುಂದೆ ಭಾರೀ ಪ್ರತಿಭಟನೆ (Protest) ವ್ಯಕ್ತವಾಗಿದ್ದರೆ, ಶಾರುಖ್ ತಮ್ಮ ಸಿನಿಮಾದ ಪ್ರಮೋಷನ್ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ.

    ಶಾರುಖ್ ಖಾನ್ ಮನೆಗೆ ಭದ್ರತೆ ನೀಡಿದ್ದಕ್ಕೆ ಕಾರಣವೂ ಇದೆ. ಶಾರುಖ್ ಖಾನ್ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಆನ್ ಲೈನ್ ಆಟಗಳ ಜಾಹೀರಾತುಗಳನ್ನು ಒಪ್ಪಿಕೊಂಡಿದ್ದಾರೆ. ಆ ಆಟಗಳನ್ನು ಆಡಿದ ಹಲವರ ಜೀವನವೇ ನಾಶವಾಗಿದೆ. ಇಂತಹ ಜಾಹೀರಾತುಗಳನ್ನು ಒಪ್ಪಿಕೊಳ್ಳಬಾರದು ಎನ್ನುವುದು ಅನ್ ಟಚ್ ಯೂತ್ ಫೆಡರೇಷನ್ ಆಗ್ರಹ. ಇವರೇ ಶಾರುಖ್ ಖಾನ್ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಟ್ರೆಂಡಿಂಗ್ ಬಗ್ಗೆಯೇ ಹಾಡು ಮಾಡಿದ ‘ಸೂತ್ರಧಾರಿ’ ಚಂದನ್ ಶೆಟ್ಟಿ

    ಅನ್ ಟಚ್ ಯೂತ್ ಫೆಡರೇಷನ್ ನ ಅಧ್ಯಕ್ಷ ಕೃಷ್ಣ ಚಂದ್ರ ಅಡಾಲ್ (Krishna Chandra Adal) ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸಾಕಷ್ಟು ಜನರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿಯೇ ಶಾರುಖ್ ಮನೆಗೆ ಭದ್ರತೆ ನೀಡಲಾಗಿದೆ. ಹೋರಾಟಗಾರರ ಮನವೊಲಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.

     

    ಶಾರುಖ್ ನಟಿಸಿ, ನಿರ್ಮಾಣ ಮಾಡುತ್ತಿರುವ ಜವಾನ ಸಿನಿಮಾದ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಶಾರುಖ್ ಮತ್ತು ಟೀಮ್ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಅತ್ತ ಶಾರುಖ್ ನಾನಾ ರಾಜ್ಯಗಳಿಗೆ ಭೇಟಿ ನೀಡಿ ಸಿನಿಮಾ ಪ್ರಚಾರ ಮಾಡುತ್ತಿದ್ದರೆ, ಇತ್ತ ಮನೆಯ ಮುಂದೆ ಪ್ರತಿಭಟನೆ ನಡೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನ ಹೆಂಡತಿಯನ್ನೇ ಸಂಭಾಳಿಸಲಿಕ್ಕೆ ಆಗುತ್ತಿಲ್ಲ- ಫ್ಯಾನ್ಸ್‌ ಎದುರು ಅಳಲು ತೋಡಿಕೊಂಡ ಶಾರುಖ್

    ನನ್ನ ಹೆಂಡತಿಯನ್ನೇ ಸಂಭಾಳಿಸಲಿಕ್ಕೆ ಆಗುತ್ತಿಲ್ಲ- ಫ್ಯಾನ್ಸ್‌ ಎದುರು ಅಳಲು ತೋಡಿಕೊಂಡ ಶಾರುಖ್

    ಬಾಲಿವುಡ್ (Bollywood) ಪಠಾಣ್ ಸ್ಟಾರ್ ಶಾರುಖ್ ಖಾನ್ (Sharukh Khan) ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳ ಜೊತೆ ಆಗಾಗ ಪ್ರಶ್ನಾವಳಿ ನಡೆಸುತ್ತಿರುತ್ತಾರೆ. ಇದೀಗ ನನಗೆ ನನ್ನ ಹೆಂಡತಿಯನ್ನೇ ಸಂಭಾಳಿಸಲಿಕ್ಕೆ ಆಗುತ್ತಿಲ್ಲ ಎಂದು ಫ್ಯಾನ್ಸ್ ಎದುರು ಶಾರುಖ್ ವೇದನೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಕಟುಮಸ್ತಾದ ದೇಹ ಪ್ರದರ್ಶಿಸಿದ ಸುದೀಪ್-‌ K 46 ಬಗ್ಗೆ ಕಿಚ್ಚ ಅಪ್‌ಡೇಟ್

    ಪಠಾಣ್ (Pathaan) ಸಕ್ಸಸ್ ನಂತರ ಜವಾನ್ (Jawan) ಆಗಿ ದರ್ಶನ ಕೊಡುತ್ತಿರುವ ಶಾರುಖ್‌ಗೆ ತಮ್ಮ ಹೆಂಡತಿಯಿಂದ ಆದ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಹೆಂಡತಿಯ ಕಾರಣದಿಂದ ಸರಿಯಾದ ಸಮಯಕ್ಕೆ ಚಿತ್ರಮಂದಿರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಶಾರುಖ್ ಖಾನ್ ಬಳಿ ಸಮಸ್ಯೆ ಹೇಳಿಕೊಂಡಿದ್ದಾರೆ. ಹೆಂಡತಿ ಜೊತೆ ಜವಾನ್ ಸಿನಿಮಾ ನೋಡಬೇಕು ಅಂತ ಪ್ಲ್ಯಾನ್ ಮಾಡಿದ್ದೇನೆ ಸರ್. ಆದರೆ ಪ್ರತಿ ಬಾರಿ ನನ್ನ ಪತ್ನಿ ಲೇಟ್ ಮಾಡುತ್ತಾಳೆ. ಪಠಾಣ್ ನೋಡಲು ಹೋದಾಗಲೂ ಹೀಗೆಯೇ ಆಗಿತ್ತು. ಬೇಗ ಚಿತ್ರಮಂದಿರವನ್ನು ತಲುಪಲು ಏನಾದರೂ ಟಿಪ್ಸ್ ಕೊಡಿ ಎಂದು ಅಭಿಮಾನಿ ಮನವಿ ಮಾಡಿದ್ದಾರೆ.

    ಅಭಿಮಾನಿ ಕೇಳಿದ ಪ್ರಶ್ನೆಗೆ ಶಾರುಖ್ ತಮಾಷೆಯಾಗಿ ಉತ್ತರ ನೀಡಿದ್ದಾರೆ. ದಯವಿಟ್ಟು ಹೆಂಡತಿಗೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸುವಂತಹ ಪ್ರಶ್ನೆಗಳನ್ನು ಇನ್ಮುಂದೆ ಕೇಳಬೇಡಿ. ನನಗೆ ನನ್ನ ಹೆಂಡತಿಯನ್ನೇ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನೀವು ನಿಮ್ಮ ಸಮಸ್ಯೆಯನ್ನೂ ನನ್ನ ಮೇಲೆ ಹಾಕುತ್ತಿದ್ದೀರಿ. ಎಲ್ಲ ಹೆಂಡತಿಯರೇ ಯಾವುದೇ ಚಿಂತೆ ಇಲ್ಲದೇ ಜವಾನ್ ಸಿನಿಮಾ ನೋಡಲು ಹೋಗಿ ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ. ತಮಾಷೆಯಾಗಿ ಅಭಿಮಾನಿಗೆ ಶಾರುಖ್ ಉತ್ತರ ನೀಡಿದ್ದಾರೆ. ಈ ಟ್ವೀಟ್ ಈಗ ಸಖತ್ ವೈರಲ್ ಆಗುತ್ತಿದೆ.

    ‘ಜವಾನ್'(Jawan) ಸಿನಿಮಾ ಇದೇ ಸೆಪ್ಟೆಂಬರ್ 7ರಂದು ತೆರೆಗೆ ಬರುತ್ತಿದೆ. ಗೌರಿ ಖಾನ್‌ ನಿರ್ಮಾಣದ ಈ ಚಿತ್ರದಲ್ಲಿ ಶಾರುಖ್‌ಗೆ ನಾಯಕಿಯಾಗಿ ನಯನತಾರಾ(Nayanatara) ನಟಿಸಿದ್ದಾರೆ. ಸಿನಿಮಾದಲ್ಲಿ ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ(Deepika Padukone), ಸಾನ್ಯಾ ಮಲ್ಹೋತ್ರಾ ಸೇರಿದಂತೆ ಹಲವರು ನಟಿಸಿದ್ದಾರೆ. ಪಠಾಣ್ ರೀತಿಯೇ ಜವಾನ್ ಸಿನಿಮಾ ಕೂಡ ಗಲ್ಲಾಪೆಟ್ಟಿಗೆ ಶೇಕ್ ಮಾಡುತ್ತಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಜವಾನ್’ ಚಿತ್ರದಲ್ಲಿ 6 ಹೆಸರಾಂತ ಸಾಹಸ ನಿರ್ದೇಶಕರು

    ‘ಜವಾನ್’ ಚಿತ್ರದಲ್ಲಿ 6 ಹೆಸರಾಂತ ಸಾಹಸ ನಿರ್ದೇಶಕರು

    ಶಾರುಖ್ ಖಾನ್ (Shah Rukh Khan) ಅಭಿನಯದ ‘ಜವಾನ್’ (Jawaan) ಚಿತ್ರವು ಮುಂದಿನ ತಿಂಗಳು ಮೊದಲ ವಾರದಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಜಗತ್ತಿನ ಆರು ಅತ್ಯುತ್ತಮ ಮತ್ತು ಜನಪ್ರಿಯ ನಿರ್ದೇಶಕರು ಈ ಚಿತ್ರಕ್ಕಾಗಿ ಸಾಹಸ ಸಂಯೋಜನೆ ಮಾಡಿದ್ದಾರೆ.

    ಮೂಲಗಳ ಪ್ರಕಾರ ಅಂತಾರಾಷ್ಟ್ರೀಯ ಮಟ್ಟದ ಸಾಹಸ (Fights) ನಿರ್ದೇಶಕರಾದ ಸ್ಪೈರೋ ರಾಝಾಟೋಸ್, ಯಾನಿಕ್ ಬೆನ್, ಕ್ರೇಗ್ ಮೆಕ್ರೆ, ಕೆಚಾ ಕೆಂಪಾಕ್ಡಿ, ಸುನೀಲ್ ರಾಡ್ರಿಗ್ಸ್ ಮತ್ತು ಅನಲ್ ಅರಸ್ ಅವರು ‘ಜವಾನ್’ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿ ಫೈಟ್, ಚೇಸ್, ಪಾರ್ಕರ್  ಸೇರಿದಂತೆ ವಿಭಿನ್ನ ರೀತಿಯ ಸಾಹಸ ದೃಶ್ಯಗಳಿದ್ದು, ಆ ಪ್ರಕಾರದಲ್ಲಿ ಪರಿಣಿತಿ ಹೊಂದಿರುವ ಒಬ್ಬೊಬ್ಬ ಸಾಹಸ ನಿರ್ದೇಶಕರು ಈ ಚಿತ್ರಕ್ಕೆ ಕೆಲಸ ಮಾಡಿರುವುದು ವಿಶೇಷ. ಇದನ್ನೂ ಓದಿ:ಎಲ್ಲೆಲ್ಲೂ ‘ಜೈಲರ್’ ಚಿತ್ರದ ಹವಾ, ನಿಲ್ಲುತ್ತಿಲ್ಲ ರಜನಿ ತಾಕತ್ತು

    ಈ ಸಾಹಸ ನಿರ್ದೇಶಕರು ಬರೀ ಹಾಲಿವುಡ್ ಅಷ್ಟೇ ಅಲ್ಲ, ಹಲವು ಅಂತಾರಾಷ್ಟ್ರೀಯ ಸಿನಿಮಾಗಳಿಗೆ ಕೆಲಸ ಮಾಡಿ ತಮ್ಮ ಛಾಪನ್ನೊತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ವಿಭಾಗದಲ್ಲಿ ಪರಿಣಿತಿ ಹೊಂದಿದ್ದಾರೆ. ಜಗತ್ತಿನ ಜನಪ್ರಿಯ ಆಕ್ಷನ್ ಚಿತ್ರಗಳಲ್ಲಿ ಮೈ ಜುಂ ಎನಿಸುವಂತಹ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

    ಈ ಪೈಕಿ ಸ್ಪೈರೋ ರಾಝಾಟೋಸ್, ‘ಫಾಸ್ಟ್ ಅಂಡ್ ಫ್ಯೂರಿಯಸ್’, ‘ಕ್ಯಾಪ್ಟೇನ್ ಅಮೇರಿಕಾ’ ಮುಂತಾದ ಚಿತ್ರಗಳಿಗೆ ಕೆಲಸ ಮಾಡಿದ್ದರು. ಈ ಹಿಂದೆ, ಶಾರುಖ್ ಅಭಿನಯದ ‘ರಾ ಒನ್’ ಚಿತ್ರಕ್ಕೂ ಅವರು ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು. ಯಾನಿಕ್ ಬೆನ್ ಅವರು ಪಾರ್ಕರ್ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ಜನಪ್ರಿಯರು. ಇನ್ನು, ಸುನೀಲ್ ರಾಡ್ರಿಗ್ಸ್, ಅನಲ್ ಅರಸು ಮುಂತಾದವರು ಭಾರತದ ಬೇರೆಬೇರೆ ಭಾಷೆಯ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡುವ ಮೂಲಕ ಖ್ಯಾತಿ ಗಳಿಸಿದವರು.

    ಈ ಸಾಹಸ ದೃಶ್ಯಗಳನ್ನು ಸಾಕಷ್ಟು ಅಧ್ಯಯನ ನಡೆಸುವುದಷ್ಟೇ ಅಲ್ಲ, ರೋಚಕವಾಗಿ ಸೆರೆಹಿಡಿಯಲಾಗಿದ್ದು, ಒಟ್ಟಾರೆ ಸಾಹಸ ಭಾಗವೇ ಚಿತ್ರವನ್ನು ಇನ್ನೊಂದು ಮಟ್ಟಕ್ಕೆ ಕರೆದೊಯ್ಯಲಿದೆ ಎಂದು ಹೇಳಲಾಗುತ್ತಿದೆ. ಈ ದೃಶ್ಯಗಳು ಕಥೆಗೆ ಪೂರಕವಾಗಿರುವುದಷ್ಟೇ ಅಲ್ಲ, ನೈಜವಾಗಿ ಮೂಡಿಬಂದಿದ್ದು, ಚಿತ್ರದ ಬಗೆಗಿನ ಪ್ರೇಕ್ಷಕರ ಕುತೂಹಲ ಮತ್ತು ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಾಗಿಸಿದೆ.

     

    ‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಡಿ ಗೌರಿ ಖಾನ್ (Gauri Khan) ನಿರ್ಮಿಸಿದರೆ, ಗೌರವ್ ವರ್ಮ ಸಹ ನಿರ್ಮಾಪಕರಾಗಿದ್ದಾರೆ. ಅಟ್ಲಿ (Atlee) ನಿರ್ದೇಶಿಸಿರುವ ಈ ಚಿತ್ರವು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಹಯ್ಯೋಡಾ’ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಶಾರುಖ್ ಖಾನ್

    ‘ಹಯ್ಯೋಡಾ’ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಶಾರುಖ್ ಖಾನ್

    ಲವು ಪ್ರೇಮಕಥೆಯಾಧಾರಿತ ಚಿತ್ರಗಳು ಮತ್ತು ಹಾಡುಗಳಲ್ಲಿ ಅಭಿನಯಿಸುವ ಮೂಲಕ ‘ಕಿಂಗ್ ಆಫ್ ರೊಮ್ಯಾನ್ಸ್’ ಎಂಬ ಬಿರುದಿಗೆ ಭಾಜನರಾದವರು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan). ಆ ಬಿರುದನ್ನು ನಿಜಗೊಳಿಸುವಂತೆ ಅವರು ಇನ್ನೊಮ್ಮೆ ಒಂದು ಅದ್ಭುತ ಗೀತೆಯೊಂದಿಗೆ (Song) ವಾಪಸ್ಸಾಗಿದ್ದಾರೆ.

    ‘ಜವಾನ್’ (Jawan) ಚಿತ್ರದ ‘ಹಯ್ಯೋಡಾ’ (Hayoda) ಎಂಬ ಹಾಡು ಇಂದು ಬಿಡುಗಡೆಯಾಗಿದ್ದು, ಭಾರತೀಯ ಚಿತ್ರರಂಗದದಲ್ಲೇ ಹಲವು ರೊಮ್ಯಾಂಟಿಕ್ ಮತ್ತು ಮಧುರಗೀತೆಗಳಿಗೆ ಜನಪ್ರಿಯರಾದ ಶಾರುಖ್ ಖಾನ್ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಅನಿರುದ್ಧ್ ರವಿಚಂದರ್ ಸಂಯೋಜಿಸಿದ್ದು, ಅನಿರುದ್ಧ್ ಮತ್ತು ಪ್ರಿಯಾ ಮಾಲಿ ಹಾಡಿದ್ದಾರೆ. ಈ ಸುಮಧುರ ಹಾಡಿಗೆ ವಿವೇಕ್ ಸಾಹಿತ್ಯ ರಚಿಸಿದ್ದಾರೆ. ಇದನ್ನೂ ಓದಿ:Bigg Boss Kannada 10: ಬಿಗ್‌ ಬಾಸ್‌ ಶೋನಲ್ಲಿ ಯಾರೆಲ್ಲಾ ಇದ್ದಾರೆ?

    ಇದೇ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡಿರುವ ಶಾರುಖ್ ಖಾನ್ ಮತ್ತು ನಯನತಾರಾ, ತೆರೆಯ ಮೇಲೆ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಮ್ಮ ಅಭಿನಯದಿಂದ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು, ಭಾರತೀಯ ಚಿತ್ರರಂಗದ ಜನಪ್ರಿಯ ಕೊರಿಯೋಗ್ರಾಫರ್ ಆಗಿರುವಂತಹ ಫರಾ ಖಾನ್ ನೃತ್ಯ ನಿರ್ದೇಶನ ಮಾಡಿದ್ದಾರೆ.

     

    ‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸಿದರೆ, ಗೌರವ್ ವರ್ಮಾ ಸಹನಿರ್ಮಾಪಕರಾಗಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶಿಸಿರುವ ಈ ಚಿತ್ರವು ಜಗತ್ತಿನಾದ್ಯಂತ ಸೆಪ್ಟೆಂಬರ್ 7ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]