Tag: ಶಾಕಿಂಗ್ ನ್ಯೂಸ್

  • ಮಂಡ್ಯ ಬಸ್ ದುರಂತ ಮಾಸುವ ಮುನ್ನವೇ ಕರುನಾಡಿನ ಜನತೆಗೆ ಶಾಕಿಂಗ್ ಸುದ್ದಿ

    ಮಂಡ್ಯ ಬಸ್ ದುರಂತ ಮಾಸುವ ಮುನ್ನವೇ ಕರುನಾಡಿನ ಜನತೆಗೆ ಶಾಕಿಂಗ್ ಸುದ್ದಿ

    ಬೆಂಗಳೂರು: ಮಂಡ್ಯದ ಬಸ್ ದುರಂತದಲ್ಲಿ ಕಣ್ಣೆದುರೇ 30 ಮಂದಿ ಸಾವನ್ನಪ್ಪಿದ್ದ ಘೋರ ದುರಂತ ಮರೆಯಾಗುವ ಮುನ್ನವೇ ಕರುನಾಡು ಬೆಚ್ಚಿ ಬೀಳುವ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

    ರಾಜ್ಯದಲ್ಲಿ ಬರೋಬ್ಬರಿ 21 ಸಾವಿರ ಬಸ್‍ಗಳು ಹದಿನೈದು ವರ್ಷ ಹಳೆಯದಾಗಿದ್ದರೂ ರಸ್ತೆಯಲ್ಲಿ ಯಮನಂತೆ ಓಡಾಡುತ್ತಿದೆ. ಮಂಡ್ಯ ದುರಂತದ ಬಳಿಕ ಸಿಎಂ ಆದೇಶದಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಫೀಲ್ಡ್ ಗಿಳಿದಾಗ ಈ ಬೆಚ್ಚಿಬೀಳುವ ಸತ್ಯ ಬಯಲಾಗಿದೆ. ಇದನ್ನೂ ಓದಿ: ಮಂಡ್ಯ ಬಸ್ ದುರಂತದ ಕರಾಳ ನೆನಪು- ವಿದ್ಯಾರ್ಥಿಗಳನ್ನು ನೆನೆದು ಕಣ್ಣೀರಿಟ್ಟ ಸಹಪಾಠಿಗಳು

    ಕರ್ನಾಟಕದಲ್ಲಿ ಸಾವಿರಾರು ಡಕೋಟಾ ಎಕ್ಸ್ ಪ್ರೆಸ್ ಡೆಡ್ಲಿ ಬಸ್‍ಗಳು ಇನ್ನೂ ಬಲಿಗಾಗಿ ಕಾಯುತ್ತಿರುವುದು ಒಂದಡೆಯಾದರೆ, ಬರೋಬ್ಬರಿ ನಾಲ್ಕು ಸಾವಿರ ಸ್ಕೂಲ್ ಬಸ್‍ಗಳು ಕೂಡ 15 ವರ್ಷ ಹಳೆಯದಾಗಿದ್ದು, ಇಂದಿಗೂ ಓಡಾಡುತ್ತಿದೆ. ಇದರಿಂದ ಪೋಷಕರು ಕೂಡ ಮಕ್ಕಳನ್ನು ಸ್ಕೂಲ್ ವ್ಯಾನ್‍ನಲ್ಲಿ ಕಳುಹಿಸಲು ಭಯಪಡುವಂತಾಗಿದೆ. ಇದನ್ನೂ ಓದಿ: ಸಾರಿಗೆ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ – ಸಾವಿನ ಜೊತೆ ಸವಾರಿಗೆ ಬೀಳುತ್ತಾ ಬ್ರೇಕ್?

    ಕೇವಲ ಬಸ್ ಮಾತ್ರವಲ್ಲದೇ ರಾಜ್ಯದಲ್ಲಿ ಒಂದು ಕೋಟಿ ವಾಹನದಲ್ಲಿ ಬರೋಬ್ಬರಿ 45 ಲಕ್ಷ ವಾಹನಗಳು ಔಟ್ ಡೇಟೆಡ್ ಆಗಿದೆ. ಇದರಿಂದ ಮಾಲಿನ್ಯ ಹಾಗೂ ಆಕ್ಸಿಡೆಂಟ್ ಪ್ರಕರಣವೂ ಹೆಚ್ಚಳವಾಗಲಿದೆ. ಬಸ್ ಮಾಲೀಕರ ದುರಾಸೆಗೆ ಜನರ ಜೀವ ಬಲಿಯಾಗುತ್ತಿದೆ.

    ಬಸ್ ನಿರ್ವಹಣೆ ಸರಿಯಿಲ್ಲದೇ ಇದರೆ, ಹಳೆಯ ಬಸ್‍ಗಳನ್ನು ರೋಡಿಗಿಳಿಸಿದ್ರೆ ಸಾರಿಗೆ ಇಲಾಖೆ ಈಗಾಗಲೇ ಬಸ್ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ. ಆದರೆ ಪ್ರತಿವರ್ಷ ಲೈಸೆನ್ಸ್ ನವೀಕರಣ ಮಾಡುವಾಗ ಸಾರಿಗೆ ಇಲಾಖೆ ಕ್ರಮ ಕೈಗೊಂಡರೆ ಈ ರೀತಿಯ ದುರಂತಗಳು ನಡೆಯುತ್ತಾನೆ ಇರಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದ್ವಿಚಕ್ರ ವಾಹನ, ಕಾರಿನಲ್ಲಿ ಕಾಲೇಜಿಗೆ ಹೋಗೋರಿಗೆ ಶಾಕಿಂಗ್ ನ್ಯೂಸ್!

    ದ್ವಿಚಕ್ರ ವಾಹನ, ಕಾರಿನಲ್ಲಿ ಕಾಲೇಜಿಗೆ ಹೋಗೋರಿಗೆ ಶಾಕಿಂಗ್ ನ್ಯೂಸ್!

    ಬೆಂಗಳೂರು: ಕಾಲೇಜಿಗೆ ದ್ವಿಚಕ್ರ ವಾಹನ ಹಾಗೂ ಕಾರಿನಲ್ಲಿ ಹೋಗುವವರಿಗೆ ಶಿಕ್ಷಣ ಇಲಾಖೆ ಶಾಕಿಂಗ್ ನ್ಯೂಸ್ ಪ್ರಕಟವಾಗುವ ಸಾಧ್ಯತೆಯಿದೆ.

    ಉನ್ನತ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ನಿರ್ಬಂಧಿಸಲು ಚಿಂತನೆ ನಡೆಸುತ್ತಿದೆ. ಸಾರ್ವಜನಿಕ ಸಾರಿಗೆ ಉತ್ತೇಜಿಸಿ, ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಕಾಲೇಜು ಶಿಕ್ಷಣ ಇಲಾಖೆ ಈ ಪ್ರಸ್ತಾವನೆ ಸಿದ್ಧಪಡಿಸುತ್ತಿದೆ.

    ಉನ್ನತ ಶಿಕ್ಷಣ ಇಲಾಖೆ ಸಚಿವರಾದ ಜಿ.ಟಿ.ದೇವೇಗೌಡ ಅವರು ಕಾಲೇಜಿನ ಕ್ಯಾಂಪಸ್ ಒಳಗೆ ವಿದ್ಯಾರ್ಥಿಗಳ ವಾಹನ ನಿಷೇಧಿಸುವ ಬಗ್ಗೆ ಕಾಲೇಜು ಮಂಡಳಿಗಳೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಭೆಯಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು, ಖಾಸಗಿ ಮತ್ತು ಡೀಮ್ಡ್ ವಿ.ವಿ ಪ್ರತಿನಿಧಿಗಳು, ವೃತ್ತಿಪರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಭಾಗಿಯಾಗಲಿದ್ದಾರೆ.

    ಇಲಾಖೆ ನೀಡುವ ಪ್ರಸ್ತಾವನೆಯ ಆಧಾರದಲ್ಲಿ ಆಡಳಿತ ಮಂಡಳಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ. ಸದ್ಯ ಈ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪೋಷಕರ ಹಾಗೂ ಪಾಲಕರ ಮನವೊಲಿಸಬೇಕಾಗಿದೆ.

    ವಿದ್ಯಾರ್ಥಿಗಳ ವಾಹನಗಳು ಅಪಘಾತಗಳಾಗುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿನ ಕ್ಯಾಂಪಸ್ ಒಳಗಡೆ ದ್ವಿಚಕ್ರ ಮತ್ತು ಕಾರುಗಳನ್ನು ನಿರ್ಬಂಧಿಸಲು ಇಲಾಖೆ ಚಿಂತನೆ ನಡೆಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv