Tag: ಶಹರ ಪೊಲೀಸ್ ಠಾಣೆ

  • ಆಟವಾಡಲು ಹೋದ ಬಾಲಕ ನಾಪತ್ತೆ – ಮಗನಿಗಾಗಿ ಬೀದಿ ಬೀದಿ ಅಲೆಯುತ್ತಿರುವ ಪೋಷಕರು

    ಆಟವಾಡಲು ಹೋದ ಬಾಲಕ ನಾಪತ್ತೆ – ಮಗನಿಗಾಗಿ ಬೀದಿ ಬೀದಿ ಅಲೆಯುತ್ತಿರುವ ಪೋಷಕರು

    ಗದಗ: ಶಾಲೆ ಮುಗಿಸಿಕೊಂಡು ಆಟವಾಡಲು ಹೋದ ಬಾಲಕ ನಾಪತ್ತೆಯಾದ (Missing) ಘಟನೆ ಗದಗ (Gadag) ಜಿಲ್ಲೆಯಲ್ಲಿ ನಡೆದಿದೆ.

    ನಗರದ ಹೊಂಬಳ ನಾಕಾ ಬಳಿ ಜನತಾ ಜಾಲೋನಿಯ ಬಾಲಕ ಅಫ್ಜಲ್ ಮೌಲಾಸಾಬ್ ದಾವಲಖಾನವರ್ (9) ನಾಪತ್ತೆಯಾಗಿದ್ದಾನೆ. ಮೌಲಾಸಾಬ್ ಹಾಗೂ ಖಾಜಾಬಿ ದಂಪತಿಯ ಏಕೈಕ ಪುತ್ರನಾಗಿದ್ದ ಈತ 3ನೇ ತರಗತಿ ಓದುತ್ತಿದ್ದ. ಮಂಗಳವಾರ ಶಾಲೆ ಮುಗಿಸಿಕೊಂಡು ಸಂಜೆ ಮನೆಗೆ ಬಂದಿದ್ದಾನೆ. ಮನೆಯಲ್ಲಿ ಬ್ಯಾಗ್ ಇಟ್ಟು ಮಾವಿನ ಹಣ್ಣು ತೆಗೆದುಕೊಂಡು ಆಟವಾಡಲು ಹೋದಾತ ಮತ್ತೆ ಮನೆಗೆ ಹಿಂತಿರುಗಿಲ್ಲ. ಇದನ್ನೂ ಓದಿ: ನಿರ್ಗತಿಕರನ್ನು ಕೆಲಸಕ್ಕೆಂದು ಕರೆದುಕೊಂಡು ಬಂದು ಕೂಡಿಹಾಕಿದ್ದ ದುರುಳ ಅರೆಸ್ಟ್ – 18 ಕಾರ್ಮಿಕರ ರಕ್ಷಣೆ

    ಕುಟುಂಬಸ್ಥರು ಮಂಗಳವಾರ ರಾತ್ರಿಯಿಂದ ಅನೇಕ ಕಡೆಗಳಲ್ಲಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ. ಮಗುವಿನ ಫೋಟೋ ಹಿಡಿದುಕೊಂಡು ಆತನ ಪೋಷಕರು ಕಣ್ಣೀರಿಡುತ್ತಾ ಬೀದಿ ಬೀದಿ ಅಲೆಯುತ್ತಿದ್ದಾರೆ. ಒಬ್ಬನೇ ಗಂಡು ಮಗ ದಯವಿಟ್ಟು ಹುಡುಕಿಕೊಡಿ ಎಂದು ಅಂಗಲಾಚುತ್ತಾ, ಕಣ್ಣೀರಿಡುತ್ತಾ ಅಲೆಯುತ್ತಿದ್ದಾರೆ. ಬಾಲಕನ ನಾಪತ್ತೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ- ತಪ್ಪಿದ ಭಾರೀ ಅನಾಹುತ

    ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ (Shahara Police Station) ದೂರು ದಾಖಲಾಗಿದೆ. ಅನೇಕ ಕಡೆಗಳಲ್ಲಿ ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಹುಡುಕುತ್ತಿದ್ದಾರೆ. ನಿನಗಾಗಿ ಕುಟುಂಬ ಕಾಯುತ್ತಿದೆ, ಬೇಗ ಬಾ ಮಗ ಎಂದು ಕುಟುಂಬಸ್ಥರು ಹಂಬಲಿಸುತ್ತಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಗೋಸ್ಕರ ಗಂಡನಿಗೇ ಸ್ಕೆಚ್‌ ಹಾಕಿ ಮುಗಿಸಿದ್ಲು ಕೋಲಾರದ ಖತರ್ನಾಕ್ ಲೇಡಿ

  • ಬೇಲ್ ಪಡೆದು 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್

    ಬೇಲ್ ಪಡೆದು 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್

    ಹುಬ್ಬಳ್ಳಿ: ಕಳ್ಳತನ ಪ್ರಕರಣದಲ್ಲಿ ಜಾಮೀನು ಪಡೆದು 21 ವರ್ಷದಿಂದ ಪರಾರಿಯಾಗಿದ್ದ ಕಳ್ಳನನ್ನು ಹುಬ್ಬಳ್ಳಿ ಶಹರ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಅಮರಗೋಳದ ಚಿಕ್ಕೇರಿ ಫ್ಲಾಟ್ ಸುಣಗಾರಬಟ್ಟಿ ನಿವಾಸಿಯಾಗಿದ್ದ ಶಿದ್ಲಿಂಗಪ್ಪ ಚಂದ್ರಾಮಪ್ಪ ಬಾಗಲಕೋಟೆ ಅಲಿಯಾಸ್ ಬಾಗಲೇ ಬಂಧಿತ ಆರೋಪಿಯಾಗಿದ್ದಾನೆ. ಈತ ಹುಬ್ಬಳ್ಳಿಯ ರಾಧಾಕೃಷ್ಣನಗರದಲ್ಲಿ ಮಹೇಶ ಟೇಲರ್ ಅಂಗಡಿ ಕೀಲಿ ಮುರಿದು ಕಳ್ಳತನ ಮಾಡಿದ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಆದರೆ ಬಳಿಕ ಹೆಸರು ಬದಲಿಸಿಕೊಂಡು ಪೊಲೀಸರ ಕಣ್ತಪ್ಪಿಸಿ ಅಲೆಮಾರಿಯಾಗಿ ಜೀವನ ನಡೆಸುತ್ತಿದ್ದ. ಸದ್ಯ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಕಳ್ಳತನ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಮತ್ತೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆತಪ್ಪಿಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಎಸ್.ಬಿ.ಕಟ್ಟಿಮನಿ ಯಶಸ್ವಿಯಾಗಿದ್ದಾರೆ. ಆತನ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಕಲೆ ಹಾಕಿ, ಆತನ ಫಿಂಗರ್ ಪ್ರಿಂಟ್ ಮೂಲಕ ಸಿದ್ದಪ್ಪನಾಗಿದ್ದ ಶಿದ್ಲಿಂಗಪ್ಪನನ್ನು ಪತ್ತೆ ಮಾಡಿದ್ದಾರೆ.

    ಹುಬ್ಬಳ್ಳಿ ಶಹರ ಪೊಲೀಸ ಠಾಣೆಯ ಪೊಲೀಸ ಇನ್‍ಸ್ಪೆಕ್ಟರ್ ಎಂ.ಎಸ್.ಪಾಟೀಲ ನೇತೃತ್ವದಲ್ಲಿ ಠಾಣೆಯ ಪಿಎಸ್‍ಐ ಬಿ.ಎನ್.ಸಾತನ್ನವರ, ಎಎಸ್‍ಐ ಆರ್.ಬಿ.ಚಪ್ಪರಮನಿ ಹಾಗೂ ಸಿಬ್ಬಂದಿಯವರಾದ ಎಸ್.ಬಿ.ಕಟ್ಟಿಮನಿ, ಕೆ.ಎಚ್.ರಗಣಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಪತ್ತೆ ಮಾಡಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಪೊಲೀಸರ ತನಿಖೆಗೆ ಮೆಚ್ಚುಗೆ ಸೂಚಿಸಿರುವ ಪೊಲೀಸ್ ಆಯುಕ್ತ ಆರ್.ದಿಲೀಪ್ ಬಹುಮಾನ ಘೋಷಣೆ ಮಾಡಿದ್ದಾರೆ.