Tag: ಶಬರೀಶ್ ಶೆಟ್ಟಿ

  • `ಸುದೀಪ್ ಸರ್ ನನ್ನ ದೇವರು’..ಅವ್ರೇನ್ ಮಾಡ್ತಾರೆ – ನಂದಕಿಶೋರ್ ವಿರುದ್ಧ ದೂರು ಕೊಟ್ಟ ಶಬರೀಶ್ ಮಾತು

    `ಸುದೀಪ್ ಸರ್ ನನ್ನ ದೇವರು’..ಅವ್ರೇನ್ ಮಾಡ್ತಾರೆ – ನಂದಕಿಶೋರ್ ವಿರುದ್ಧ ದೂರು ಕೊಟ್ಟ ಶಬರೀಶ್ ಮಾತು

    ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್‌ಗೆ ನಟ ಶಬರೀಶ್ ಶೆಟ್ಟಿ ದೂರು ನೀಡಿದ್ದಾರೆ. ಹಲವು ದಾಖಲೆಗಳನ್ನೊಳಗೊಂಡ ಪ್ರತಿ ಸಮೇತ ಅಧ್ಯಕ್ಷ ನರಸಿಂಹಲು ಬಳಿ ದೂರುಪತ್ರ ನೀಡಿದ್ದಾರೆ ಯುವ ನಟ ಶಬರೀಶ್.

    ನಿರ್ದೇಶಕ ನಂದಕಿಶೋರ್ ಯುವನಟನಿಗೆ 22 ಲಕ್ಷ ಹಣ ವಂಚನೆ ಮಾಡಿರುವ ಪ್ರಕರಣ ಇದಾಗಿದ್ದು, ದೂರು ಸ್ವೀಕರಿಸಿದ ಫಿಲ್ಮ್ ಚೇಂಬರ್ ನಿರ್ದೇಶಕ, ನಂದಕಿಶೋರ್‌ರನ್ನು ಚೇಂಬರ್‌ಗೆ ಕರೆಸಿ ವಿಚಾರಣೆ ನಡೆಸೋದಾಗಿ ತಿಳಿಸಿದ್ದಾರೆ.ಇದನ್ನೂ ಓದಿ: ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟ ಸಲ್ಮಾನ್ ಖಾನ್

    ಶಬರೀಶ್‌ಗೆ ಸುದೀಪ್ ಅವರ ಪರಿಚಯ ಮಾಡಿಸೋದು, ಅವರ ಕ್ಯಾಪ್ಟನ್‌ಶಿಪ್‌ನಲ್ಲಿ ನಡೆಯುವ ಸಿಸಿಎಲ್ ಕ್ರಿಕೆಟ್ ಮ್ಯಾಚ್‌ನಲ್ಲಿ ಅವಕಾಶ ಕೊಡಿಸೋದು, ತಮ್ಮ ನಿರ್ದೇಶನದ ಚಿತ್ರಗಳಲ್ಲಿ ಚಾನ್ಸ್ ಕೊಡಿಸೋದಾಗಿ ಭರವಸೆ ಕೊಡುತ್ತಾ ಬಂದಿದ್ದರಂತೆ ನಂದಕಿಶೋರ್. ಹಣ ಕೇಳ್ದಾಗೆಲ್ಲ ತಪ್ಪಿಸಿಕೊಳ್ಳುತ್ತಾ ಬಂದಿದ್ದರಂತೆ. ಹಿಂದೊಮ್ಮೆ ಕಿಚ್ಚ ಸುದೀಪ್‌ರನ್ನ ಭೇಟಿ ಮಾಡಿಸಿ ವಿಶ್ವಾಸ ಮೂಡಿಸಿದ್ದ ನಂದಕಿಶೋರ್ ಬಳಿಕ ತಮ್ಮನ್ನು ಯಾಮಾರಿಸಿದ್ದಾರೆ ಎಂದು ʻಪಬ್ಲಿಕ್ ಟಿವಿʼಗೆ ಶಬರೀಶ್ ತಿಳಿಸಿದ್ದಾರೆ.

    ಶಬರೀಶ್ ಹೇಳೋದೇನು ?
    ಕಿಚ್ಚ ಸುದೀಪ್ ಅವರ ದೊಡ್ಡ ಅಭಿಮಾನಿ ನಾನು, ಬಹುಶಃ ಈಗ ಅವರಿಗೆ ವಿಷಯ ತಿಳಿದಿರುತ್ತೆ. ಅವರನ್ನ ಮೊದಲು ಭೇಟಿ ಮಾಡಿಸಿ ವಿಶ್ವಾಸ ಗಳಿಸಿದ್ದ ನಂದಕಿಶೋರ್ ಅವರು ಬಳಿಕ ಅವರನ್ನ ಪರಿಚಯ ಮಾಡಿಸಿಕೊಡೋದಾಗಿ ಹೇಳಿ. ಹಣ ಪೀಕುತ್ತಾ ಬಂದಿದ್ರು. ಸುದೀಪ್ ಸರ್ ನನ್ನ ಪಾಲಿನ ದೇವರು, ಅವರ ಬಳಿ ಹೋಗಿ ಕಂಪ್ಲೇಟ್ ಮಾಡುವಷ್ಟು ಸಂಪರ್ಕ ಇಂಡಸ್ಟ್ರೀಯಲ್ಲಿ ನನಗಿಲ್ಲ. ಅವರಿಗೆ ಗೊತ್ತಾದ್ರೂ ಅವ್ರೇನ್ ಮಾಡ್ತಾರೆ ಪಾಪ. ಅವರಿಗೂ ಈ ಪ್ರಕರಣಕ್ಕೂ ಏನೂ ಸಂಬಂಧ ಇಲ್ಲ. ಈಗ ಸಿನಿಮಾ ರಿಲೀಸ್ ಮಾಡುವುದಕ್ಕೂ ನನ್ನ ಬಳಿ ದುಡ್ಡಿಲ್ಲ. ಹೀಗಾಗೇ ದೂರು ಕೊಡಲು ಮುಂದಾಗಿದ್ದೇನೆ. ಫಿಲ್ಮ್ ಚೇಂಬರ್‌ನಲ್ಲಿ ನನ್ನ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಸಮಸ್ಯೆ ಬಗೆಹರಿಯದಿದ್ದರೆ ಕಾನೂನು ಹೋರಾಟ ಮಾಡ್ತೀನಿ ಎಂದು ʻಪಬ್ಲಿಕ್ ಟಿವಿʼಗೆ ಶಬರೀಶ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.ಇದನ್ನೂ ಓದಿ: ಸರ್ದಾರ್ ಜಿ 3 ಸಿನಿಮಾ ವಿರುದ್ಧ ಭುಗಿಲೆದ್ದ ಆಕ್ರೋಶ

  • ಸುದೀಪ್‌ ಹೆಸರು ಹೇಳಿ ಯುವ ನಟನಿಗೆ ನಂದಕಿಶೋರ್‌ 22 ಲಕ್ಷ ವಂಚನೆ!

    ಸುದೀಪ್‌ ಹೆಸರು ಹೇಳಿ ಯುವ ನಟನಿಗೆ ನಂದಕಿಶೋರ್‌ 22 ಲಕ್ಷ ವಂಚನೆ!

    – ನಂದಕಿಶೋರ್‌ ವಿರುದ್ಧ ಶಬರೀಶ್‌ ಶೆಟ್ಟಿ ಆರೋಪ

    ಬೆಂಗಳೂರು: ಸುದೀಪ್‌ (Sudeep) ಹೆಸರು ಹೇಳಿ ಖ್ಯಾತ ನಿರ್ದೇಶಕ ನಂದಕಿಶೋರ್ (Nandakishore) ವಿರುದ್ಧ 22 ಲಕ್ಷ ರೂ. ವಂಚನೆ ಆರೋಪ ಕೇಳಿ ಬಂದಿದೆ.

    9 ವರ್ಷಗಳ ಹಿಂದೆ ನಂದ ಕಿಶೋರ್‌ ನನ್ನಿಂದ 22 ಲಕ್ಷ ರೂ. ಪಡೆದು ಈಗ ಹಣ ನೀಡದೇ ವಂಚಿಸಿದ್ದಾರೆ ಎಂದು ಯುವನಟ ಶಬರೀಶ್ ಶೆಟ್ಟಿ (Shabarish Shetty) ಆರೋಪಿಸಿದ್ದಾರೆ.

    ಶಬರೀಶ್‌ ಶೆಟ್ಟಿ ಆರೋಪ ಏನು?
    9 ವರ್ಷಗಳ ಹಿಂದೆ ನಂದಕಿಶೋರ್‌ 22 ಲಕ್ಷ ರೂ. ಪಡೆದಿದ್ದರು. ದುಡ್ಡು ಕೊಡುವಂತೆ ಕೇಳಿದಾಗ ಚಿತ್ರಗಳಲ್ಲಿ ನಟಿಸುವ ಆಫರ್‌ ನೀಡಿದ್ದರು. ಆದರೆ ನನಗೆ ಯಾವುದೇ ಆಫರ್‌ ನೀಡಿರಲಿಲ್ಲ.

    ಈ ವಿಚಾರವನ್ನು ನಾನು ನಟ ಸುದೀಪ್‌ ಅವರ ಗಮನಕ್ಕೆ ತರಲು ಮುಂದಾಗಿದ್ದೆ. ಈ ವೇಳೆ ಸುದೀಪ್‌ ಬಳಿ ಹೇಳದಂತೆ ತಡೆಯುತ್ತಿದ್ದರು. ನಾನು ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ (CCL) ಆಡುವ ಕನಸ್ಸು ಕಟ್ಟಿಕೊಂಡಿದ್ದೆ. ಕನ್ನಡ ಚಲನಚಿತ್ರ ಕಪ್ (ಕೆಸಿಸಿ)ಟೂರ್ನಿಯಲ್ಲಿ ನಾನು ಎರಡು ಸೀಸನ್ ಆಡಿದ್ದೇನೆ. ಹಣ ಕೇಳಿದರೆ ನಿನ್ನನ್ನು ಕೆಸಿಸಿಯಿಂದ ಹೊರ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು. ನಾನು ಸುದೀಪ್ ಸರ್ ಜೊತೆ ಕ್ರಿಕೆಟ್ ಆಡುವ ಆಸೆಯಿಂದ ಸುಮ್ಮನಾಗುತ್ತಿದ್ದೆ. ಇದನ್ನೂ ಓದಿ: ಯುವ ಗಾಯಕಿ ಅಖಿಲಾ ಪಜಿಮಣ್ಣು ಬಾಳಲ್ಲಿ ಬಿರುಗಾಳಿ – ವಿವಾಹ ವಿಚ್ಛೇದನಕ್ಕೆ ಅರ್ಜಿ

     

    ಈಗ ನನ್ನ ರಾಮಧೂತ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ. ಸಿನಿಮಾ ರಿಲೀಸ್ ಮಾಡಲು ನನ್ನ ಬಳಿ ಹಣ ಇಲ್ಲ. ನನ್ನ ಹಣ ವಾಪಸ್ ಕೊಡಿ ಎಂದು ಕೇಳಿದರೆ ಏನ್ ಮಾಡಿಕೊಳ್ಳುತ್ತೀಯೋ ಮಾಡು ಎನ್ನುತ್ತಿದ್ದಾರೆ.

    ನಮ್ಮಂತ ಪುಟ್ಟ ಕಲಾವಿದರು ಹೇಗೆ ಬದುಕಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ನನ್ನ ಹಣ ನನಗೆ ಕೊಡದಿದ್ದರೆ ನಂದ ಕಿಶೋರ್ ವಿರುದ್ದ ಕಾನೂನು ಮೊರೆ ಹೋಗುತ್ತೇನೆ. ಫಿಲ್ಮ್ ಚೇಂಬರ್‌ಗೆ ದೂರು ಕೊಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರುಕ್ಮಿಣಿ ಸೆಲ್ಫಿ `ಟೈಗರ್’ ಪ್ರಿಂಟ್ ಶರ್ಟ್ ಸೀಕ್ರೆಟ್ ರಿವೀಲ್! ಜೂ.ಎನ್‌ಟಿಆರ್‌ಗೆ ನಾಯಕಿ?

    ಶಬರೀಶ್‌ ಆರೋಪಕ್ಕೆ ಪಬ್ಲಿಕ್‌ ಟಿವಿ ನಂದಕಿಶೋರ್‌ ಅವರನ್ನು ಸಂಪರ್ಕಿಸಿದೆ. ಸದ್ಯಕ್ಕೆ ನಾನು ಈ ಕುರಿತು ಏನೂ ಮಾತಾಡಲಾರೆ. ಕೆಲಸದ ಸಂಬಂಧ ನಾನು ಮುಂಬೈನಲ್ಲಿದ್ದೇನೆ. ಶಬರೀಶ್ ಶೆಟ್ಟಿ ಬಾಯಿಗೆ ಬಂದಂತೆ ಆರೋಪ ಮಾಡುತ್ತಿದ್ದಾರೆ. ಬೇರೆ ಬೇರೆಯವರ ಹೆಸರು ಎಳೆತಂದಿದ್ದಾರೆ. ನನ್ನ ವಿರುದ್ಧ ಮಾಡಿದ ಆರೋಪಕ್ಕೆ ಕಾನೂನು ರೀತಿಯಲ್ಲೇ ಉತ್ತರ ಕೊಡುವೆ. ವಕೀಲರ ಜೊತೆ ಮಾತಾಡಿ, ಈ ಕುರಿತು ಪ್ರತಿಕ್ರಿಯೆ ಕೊಡುವೆ. ನಾನೂ ಕೂಡ ಆತನ ವಿರುದ್ಧ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.