Tag: ಶಕ್ತಿ ಕಪೂರ್

  • ಮಗ ಡ್ರಗ್ಸ್ ಸೇವಿಸಿದ್ದಾನೆ ಅನ್ನುವುದು ಪಿತೂರಿ : ಬಾಲಿವುಡ್ ನಟ ಶಕ್ತಿ ಕಪೂರ್

    ಮಗ ಡ್ರಗ್ಸ್ ಸೇವಿಸಿದ್ದಾನೆ ಅನ್ನುವುದು ಪಿತೂರಿ : ಬಾಲಿವುಡ್ ನಟ ಶಕ್ತಿ ಕಪೂರ್

    ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದಿದೆ ಎನ್ನಲಾದ ಡ್ರಗ್ಸ್ ಪಾರ್ಟಿಯಲ್ಲಿ ಬಾಲಿವುಡ್ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ ಕಪೂರ್ ಬಂಧನಕ್ಕೆ ಒಳಗಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅವರಿಗೆ ಜಾಮೀನು ಸಿಕ್ಕರೂ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ಈ ಕುರಿತು ಸಿದ್ಧಾಂತ ತಂದೆ ಶಕ್ತಿ ಕಪೂರ್ ಪ್ರಕರಣದ ಕುರಿತು ಮಾತನಾಡಿದ್ದಾರೆ.

    ನನ್ನ ಮಗ ಡ್ರಗ್ಸ್ ತಗೆದುಕೊಳ್ಳುವುದಿಲ್ಲ. ನಮ್ಮದು ಸಂಪ್ರದಾಯಸ್ಥ ಕುಟುಂಬ. ಅವನು ಡಾನ್ಸ್ ಡಿಜೆ ಆಗಿರುವುದರಿಂದ ಇಂತಹ ಪಾರ್ಟಿಗಳಲ್ಲಿ ಭಾಗಿ ಆಗುತ್ತಾನೆ. ಆದರೆ, ಅವನು ಯಾವತ್ತೂ ಡ್ರಗ್ಸ್ ಸೇವಿಸುವುದಿಲ್ಲ. ಅವನ ಬಂಧನ ಮತ್ತು ವಿಚಾರಣೆ ಎಲ್ಲವೂ ಪಿತೂರಿಯ ಭಾಗ. ನನ್ನ ಮಕ್ಕಳನ್ನು ನಾನು ಆ ರೀತಿಯಲ್ಲಿ ಬೆಳೆಸಿಲ್ಲ ಎಂದಿದ್ದಾರೆ ಶಕ್ತಿ ಕಪೂರ್. ಅಲ್ಲದೇ, ಅವನು ಈ ಪ್ರಕರಣದಲ್ಲಿ ಆತಂಕ ಪಡುವುದು ಬೇಡ. ನಿರಪರಾಧಿಯಾಗಿ ಅವನು ಆಚೆ ಬರುತ್ತಾನೆ ಎಂದು ನುಡಿದಿದ್ದಾರೆ ಕಪೂರ್. ಇದನ್ನೂ ಓದಿ:ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

    ಸಿದ್ಧಾಂತ ಕಪೂರ್ ಡ್ರಗ್ಸ್ ಕೇಸ್ ನಲ್ಲಿ ವಿಚಾರಣೆಗೆ ಒಳಗಾಗುತ್ತಿರುವುದು ಇದೆ ಮೊದಲೇನೂ ಅಲ್ಲ. 2008ರಲ್ಲಿ ಮುಂಬೈನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ 240 ಜನರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆಯಲ್ಲಿ ಸಿದ್ಧಾಂತ ಕೂಡ ಇದ್ದರು. ಕೆಲ ಪೆಡ್ಲರ್ ಗಳನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಡ್ರಗ್ಸ್ ಅಂದು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ, ಕಪೂರ್ ಪುತ್ರಿಯನ್ನು ಸಹ ಇಂಥದ್ದೇ ಕೇಸ್ ನಲ್ಲಿ ವಿಚಾರಣೆ ಮಾಡಲಾಗಿದೆ.

  • ಶ್ರದ್ಧಾಳನ್ನ ಚಿತ್ರೀಕರಣಕ್ಕೆ ಕಳಿಸಲ್ಲ: ಶಕ್ತಿ ಕಪೂರ್

    ಶ್ರದ್ಧಾಳನ್ನ ಚಿತ್ರೀಕರಣಕ್ಕೆ ಕಳಿಸಲ್ಲ: ಶಕ್ತಿ ಕಪೂರ್

    -ಮುಂದಿವೆ ಕೊರೊನಾ ಸಂಕಷ್ಟದ ದಿನಗಳು

    ಮುಂಬೈ: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಪುತ್ರಿ, ನಟಿ ಶ್ರದ್ಧಾಳಿಗೆ ಚಿತ್ರೀಕರಣಕ್ಕೆ ಕಳಿಸಲ್ಲ ಎಂದು ಹಿರಿಯ ನಟ ಶಕ್ತಿ ಕಪೂರ್ ಹೇಳಿದ್ದಾರೆ.

    ಕೊರೊನಾದಿಂದಾಗಿ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿವೆ. ನಿರ್ಮಾಪಕರು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದು, ಕಲಾವಿದರು ಶೂಟಿಂಗ್‍ನಲ್ಲಿ ತೊಡಗಿಕೊಳ್ಳಲು ಸಿದ್ಧರಾಗುತ್ತಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಕುಟುಂಬಸ್ಥರೊಂದಿಗೆ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಆದ್ರೆ ಶಕ್ತಿ ಕಪೂರ್ ಇನ್ನು ಚಿತ್ರೀಕರಣಕ್ಕಾಗಿ ತಾವು ಮಾನಸಿಕವಾಗಿ ಸಿದ್ಧವಾಗಿಲ್ಲ ಅನ್ನೋ ಸಂದೇಶವನ್ನು ರವಾನಿಸಿದ್ದಾರೆ.

    ನಾನು ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡಲು ಇಚ್ಛಿಸುವದಿಲ್ಲ. ಹಾಗೆ ಪುತ್ರಿ ಶ್ರದ್ಧಾಳಿಗೂ ಚಿತ್ರೀಕರಣಕ್ಕೆ ತೆರಳಲು ನಾನು ಅನುಮತಿ ನೀಡಲ್ಲ. ಕೊರೊನಾ ಅಪಾಯ ಕಡಿಮೆ ಆಗಿದೆ ಅಂತ ಹೇಳಲು ಅಸಾಧ್ಯ. ನನ್ನ ಪ್ರಕಾರ ಮುಂದಿನ ದಿನಗಳಲ್ಲಿ ಇದಕ್ಕಿಂತ ಕಷ್ಟದ ದಿನಗಳ ಬರಲಿವೆ. ಹಾಗಾಗಿ ಮಕ್ಕಳನ್ನು ಮನೆಯಿಂದ ಕಳಿಸಲು ನನಗೆ ಇಷ್ಟವಿಲ್ಲ ಅಂತ ಶಕ್ತಿ ಕಪೂರ್ ಹೇಳಿದ್ದಾರೆ.

    ಜೀವನ ನಡೆಸಲು ಕೆಲಸ ಅವಶ್ಯಕ ಎಂಬುವುದು ನನಗೆ ತಿಳಿದಿದೆ. ಜೀವನ ಇದ್ರೆ ತಾನೇ ಕೆಲಸ ಎಂಬ ವಿಷಯವೂ ನನ್ನ ಮನದಲ್ಲಿದೆ. ಒಂದು ವೇಳೆ ಶೂಟಿಂಗ್ ಆರಂಭವಾದ್ರೆ ಅನಕೂಲಗಳಿಗಿಂತ ಹೆಚ್ಚು ಅನಾನೂಕಲಗಳು ಆಗಲಿವೆ. ಕ್ಯೂನಲ್ಲಿ ನಿಂತು ಆಸ್ಪತ್ರೆಯ ಬಿಲ್ ಪಾವತಿಸುವದಕ್ಕಿಂತ ಇನ್ನಷ್ಟು ದಿನ ತಾಳ್ಮೆಯಿಂದ ಇರಬೇಕು ಎಂದು ನಮ್ಮ ಉದ್ಯಮದವರಿಗೆ ಹೇಳುತ್ತೇನೆ ಅಂದಿದ್ದಾರೆ.

  • ಶ್ರದ್ಧಾ ಮದುವೆಗೆ ಪ್ಲೀಸ್ ನನ್ನನ್ನೂ ಕರೀರಿ ಎಂದ ತಂದೆ

    ಶ್ರದ್ಧಾ ಮದುವೆಗೆ ಪ್ಲೀಸ್ ನನ್ನನ್ನೂ ಕರೀರಿ ಎಂದ ತಂದೆ

    ಮುಂಬೈ: ಬಿಟೌನ್ ಬೆಡಗಿ ಶ್ರದ್ಧಾ ಕಪೂರ್ ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಸದ್ಯ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಈ ಸುದ್ದಿ ಕೇಳಿ ಸ್ವತಃ ಶ್ರದ್ಧಾರ ತಂದೆ ಶಕ್ತಿ ಕಪೂರ್ ಶಾಕ್ ಆಗಿದ್ದು, ಮದುವೆಗೆ ನನ್ನನ್ನು ಕರೆಯಲು ಮರೆಯಬೇಡಿ ಎಂದಿದ್ದಾರೆ.

    ಹೌದು, ಸದ್ಯ ಬಾಲಿವುಡ್ ನಲ್ಲಿ ಶ್ರದ್ಧಾರ ಮದುವೆ ವಿಚಾರ ಸುದ್ದಿಯಲ್ಲಿದೆ. ಖ್ಯಾತ ಫೋಟೋಗ್ರಾಫರ್ ರೋಹನ್ ಶ್ರೇಷ್ಠ ಜೊತೆಗೆ ಶ್ರದ್ಧಾ ಡೇಟಿಂಗ್ ಮಾಡುತ್ತಿದ್ದಾರೆ, 2020ರಲ್ಲಿ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.

    ಈ ಬಗ್ಗೆ ಶಕ್ತಿ ಕಪೂರ್ ಪ್ರತಿಕ್ರಿಯಿಸಿ, “ನಿಜವೇ? ನನ್ನ ಮಗಳು ಮದುವೆಯಾಗುತ್ತಿದ್ದಾಳಾ? ಮದುವೆಗೆ ನನ್ನನ್ನು ಕರೆಯಲು ಮರೆಯಬೇಡಿ. ಮದುವೆ ಎಲ್ಲಿ ಎಂದು ಮೊದಲೇ ತಿಳಿಸಿ. ನಾನೂ ಬರುತ್ತೇನೆ. ನಾನು ಆಕೆಯ ತಂದೆಯಾಗಿದ್ದರೂ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿ ತಮ್ಮದೇ ಶೈಲಿಯಲ್ಲಿ ವ್ಯಂಗ್ಯವಾಡಿದ್ದಾರೆ.

    ಈ ಹಿಂದೆ ಕೂಡ ಶ್ರದ್ಧಾರ ಮದುವೆ ವಿಚಾರದ ಬಗ್ಗೆ ಶಕ್ತಿ ಕಪೂರ್ ಮಾತನಾಡಿ, ತಮ್ಮ ಮಗಳು ಒಳ್ಳೆಯ ಕುಟುಂಬಕ್ಕೆ ಸೊಸೆಯಾಗಿ ಹೋಗಬೇಕೆಂದು ಪ್ರತಿ ತಂದೆಗೂ ಆಸೆ ಇರುತ್ತದೆ. ನನಗೂ ಈ ಆಸೆ ಇದೆ. ಆದರೆ ಈಗ ನನ್ನ ಮಕ್ಕಳ ವಿಚಾರದಲ್ಲಿ ನಾನು ಮೂಗು ತೂರಿಸದಿರುವುದೇ ಒಳ್ಳೆಯದು. ಯಾಕೆಂದರೆ ತಂದೆ-ತಾಯಿ ತೋರಿಸಿದವರನ್ನು ಮಕ್ಕಳು ಮದುವೆಯಾಗುವ ಸ್ಥಿತಿ ಈಗಿಲ್ಲ. ಇಷ್ಟವಾದ ಹುಡುಗನನ್ನೇ ಶ್ರದ್ಧಾ ಮದುವೆಯಾಗಲಿ, ನನ್ನದೇನು ಅಡ್ಡಿಯಿಲ್ಲ ಎಂದು ಹೇಳಿಕೆ ನೀಡಿದರು.

    ಇಷ್ಟೆಲ್ಲಾ ಗಾಸಿಪ್ ಹರಿದಾಡುತ್ತಿದ್ದರೂ ಕೂಡ ಶ್ರದ್ಧಾ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಸ್ಟ್ರೀಟ್ ಡ್ಯಾನ್ಸರ್ 3ಡಿ, ಬಾಘಿ 3 ಚಿತ್ರಗಳಲ್ಲಿ ಶ್ರದ್ಧಾ ಬ್ಯುಸಿಯಾಗಿದ್ದು, ಶ್ರದ್ಧಾ ನಟಿಸಿರುವ ಬಹುನಿರೀಕ್ಷಿತ ಸಿನಿಮಾ `ಸಾಹೋ’ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.