Tag: ವ್ಯಾಲೆಂಟೈನ್ಸ್ ಡೇ

  • ಪ್ರೇಮಿಗಳ ದಿನದಂದು ನಂದಿಹಿಲ್ಸ್ ನಲ್ಲಿ ಹೈ ಅಲರ್ಟ್

    ಪ್ರೇಮಿಗಳ ದಿನದಂದು ನಂದಿಹಿಲ್ಸ್ ನಲ್ಲಿ ಹೈ ಅಲರ್ಟ್

    – ಸಾಮಾನ್ಯ ದಿನಗಳಿಗಿಂತಲೂ ಹೆಚ್ಚಿನ ಪೊಲೀಸರು

    ಚಿಕ್ಕಬಳ್ಳಾಪುರ: ಪ್ರೇಮಿಗಳ ಪಾಲಿನ ಸ್ವರ್ಗಧಾಮ, ಪ್ರೇಮಧಾಮವಾಗಿರುವ ವಿಶ್ವವಿಖ್ಯಾತ ನಂದಿಗಿರಿಧಾಮ ಪ್ರೇಮಿಗಳನ್ನ ಬರ ಮಾಡಿಕೊಳ್ಳೊಕೆ ಕಾತುರದಿಂದ ಕಾಯ್ತಿದೆ. ಹೀಗಾಗಿ ವ್ಯಾಲೆಂಟೈನ್ಸ್ ಡೇ ಗಾಗಿ ಲವರ್ಸ್ ಲವ್ಲಿ ಹಿಲ್ಸ್ ನಂದಿ ಹಿಲ್ಸ್ ನಲ್ಲಿ ಸಜ್ಜಾಗುತ್ತಿದ್ದು ಪ್ರೇಮಿಗಳ ರಕ್ಷಣೆಗೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ.

     

    ಪ್ರೇಮಿಗಳ ಪ್ರೇಮ ನಿವೇದನಗೆ ಲವ್ಲಿ ಪ್ಲೇಸ್ ಹಾಗೂ ಲವರ್ಸ್ ಹಾಟ್ ಫೇವರೆಟ್ ಸ್ಪಾಟ್ ನಂದಿಗಿರಿಧಾಮವಾಗಿದೆ. ವಿಶ್ವವಿಖ್ಯಾತ ನಂದಿಗಿರಿಧಾಮ ಪ್ರೇಮಿಗಳ ಪಾಲಿನ ಅಚ್ಚು ಮೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಯುವಕ-ಯುವತಿಯರಿಗೆ ಅತ್ಯಾಕರ್ಷಿಣೀಯ ತಾಣವಾಗಿದೆ. ಇಂತಹ ಬ್ಯುಟಿಪುಲ್ ನಂದಿಬೆಟ್ಟದಲ್ಲಿ ವ್ಯಾಲೆಂಟೈನ್ಸ್ ಡೇ ದಿನದಂದು ತಮ್ಮ ಪ್ರೀತಿಯ ಗೆಳಯ ಗೆಳತಿ ಜೊತೆಗೆ ದಿನ ಕಳೆಯಬೇಕು ಅನ್ನೋದು ಹಲವರ ಕನಸು ಆಗಿರುತ್ತದೆ.

    ನಂದಿಬೆಟ್ಟಕ್ಕೆ ಬರೋ ಪ್ರವಾಸಿಗರಲ್ಲಿ ಹದಿಹರೆಯದ ಯುವಕ-ಯುವತಿ ಪ್ರೇಮಿಗಳ ಪಾಲೇ ಹೆಚ್ಚು. ಹೀಗಾಗಿ ಈ ಬಾರಿಯ ವ್ಯಾಲೆಂಟೈನ್ಸ್ ಡೇ ಗೆ ನಂದಿಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಮಿಗಳ ಬರುವ ಸಾಧ್ಯತೆ ಹಿನ್ನೆಲೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ನಂದಿಗಿರಿಧಾಮ ವಿಶೇಷಾಧಿಕಾರಿ ಗೋಪಾಲ್ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

    ವಿಕೇಂಡ್ ದಿನಗಳಾದ ಶನಿವಾರ-ಭಾನುವಾರ ನಂದಿಬೆಟ್ಟ ಪ್ರವಾಸಿಗರಿಂದ ತುಂಬಿ ತುಳುಕತ್ತದೆ. ಟ್ರಾಫಿಕ್ ಜಾಮ್ ಉಂಟಾಗಿ ಬೆಟ್ಟವೇ ಹೌಸ್ ಪುಲ್ ಎಂಬಂತಾಗುತ್ತೆ. ಈ ಬಾರಿ ವ್ಯಾಲೆಂಟೈನ್ಸ್ ಡೇ ಸಹ ಭಾನುವಾರ ಬಂದಿರುವ ಕಾರಣ ನಂದಿಬೆಟ್ಟಕ್ಕೆ ನೀರಿಕ್ಷೆ ಮೀರಿ ಪ್ರವಾಸಿಗರು-ಪ್ರೇಮಿಗಳು ಬರುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಮುನ್ನೆಚ್ಚರಿಕೆಯಾಗಿ ಪೊಲೀಸ್ ಇಲಾಖೆ ಕೂಡ ಪ್ರವಾಸಿಗರ ಹಾಗೂ ಪ್ರೇಮಿಗಳ ರಕ್ಷಣೆಗೆ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಲು ನಿರ್ಧಾರ ಮಾಡಿದೆ.

    ಬೆಟ್ಟದ ಮೂಲೆ ಮೂಲೆಯಲ್ಲೂ ಪೊಲೀಸರನ್ನ ನಿಯೋಜನೆ ಮಾಡುವ ಮೂಲಕ ಪ್ರೇಮಿಗಳಿಗೆ ಕೆಲ ಪುಂಡ ಪೋಕರಿಗಳ ಕಾಟ ತಪ್ಪಿಸಿ ಪ್ರೇಮಿಗಳಿಗೆ ರಕ್ಷಣೆ ನೀಡಲಿದೆ. ನಾಳೆ ನಂದಿಗಿರಿಧಾಮಕ್ಕೆ ಯಾವುದೇ ಭಯ ಅಳಕು ಅಂಜಿಕೆಯಿಲ್ಲದೆ ಪ್ರೇಮಿಗಳ ಬಂದು ಹೋಗಬಹುದಾಗಿದೆ.

    ವಾಹನಗಳಲ್ಲಿ ಬರುವರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸ್ ಇಲಾಖೆ ಹೇಳಿದೆ. ಇತ್ತ ನಂದಿಗಿರಿಧಾಮದ ಅಧಿಕಾರಿಗಳು ಸಹ ನಂದಿಬೆಟ್ಟಕ್ಕೆ ಬರೋ ಪ್ರೇಮಿಗಳು ಅಸಭ್ಯ ವರ್ತನೆ ತೋರದೆ ಸಭ್ಯರಾಗಿ ವರ್ತಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

  • ನಾಳೆ ಪ್ರೇಮಿಗಳ ದಿನ ಅಲ್ಲ, ಬಲಿದಾನ ದಿನ- ಭಜರಂಗದಳ

    ನಾಳೆ ಪ್ರೇಮಿಗಳ ದಿನ ಅಲ್ಲ, ಬಲಿದಾನ ದಿನ- ಭಜರಂಗದಳ

    ಉಡುಪಿ: ನಾಳೆ ಬಲಿದಾನ ದಿನವಾಗಿದ್ದು, ಯಾರೂ ಪ್ರೇಮಿಗಳ ದಿನ ಆಚರಿಸಬಾರದು ಎಂದು ಭಜರಂಗದಳ ಕರೆ ನೀಡಿದೆ.

    ಭಜರಂಗದಳ ಕರ್ನಾಟಕ ದಕ್ಷಿಣ ಸಂಯೋಜಕ ಸುನಿಲ್ ಕೆ.ಆರ್. ಈ ಕುರಿತು ಮಾತನಾಡಿದ್ದು, ಎರಡು ವರ್ಷಗಳ ಹಿಂದೆ ಇದೇ ದಿನ ಪುಲ್ವಾಮಾದಲ್ಲಿ ದಾಳಿಯಾಗಿತ್ತು. ಭಯೋತ್ಪಾದಕರು ನಮ್ಮ ಯೋಧರನ್ನು ಹತ್ಯೆ ಮಾಡಿದ್ದರು. ಹೀಗಾಗಿ ಫೆಬ್ರವರಿ 14 ಪ್ರೇಮಿಗಳ ದಿನ ಅಲ್ಲ, ಬಲಿದಾನ ದಿನವನ್ನಾಗಿ ಆಚರಿಸಬೇಕು ಎಂದರು.

    ಜಗತ್ತಿಗೆ ಸಂಸ್ಕೃತಿಯನ್ನು ಕಳಿಸಿಕೊಟ್ಟ ದೇಶ ಭಾರತ. ಭಾರತದ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿಯ ದಾಳಿ ನಡೆಯುತ್ತಲೇ ಬಂದಿದೆ. ವ್ಯಾಲೆಂಟೈನ್ಸ್ ಡೇ ಯಿಂದ ನಮ್ಮ ಸಂಸ್ಕೃತಿ ನಾಶವಾಗುತ್ತದೆ. ಪ್ರೇಮಿಗಳ ದಿನಾಚರಣೆ ಮಾಡಿದರೆ ಯುವಜನಾಂಗ ಭಾರತೀಯ ಸಂಸ್ಕೃತಿಯಿಂದ ದೂರವಾಗುತ್ತದೆ. ಪ್ರೇಮಿಗಳ ದಿನಾಚರಣೆಯಿಂದ ಅನೈತಿಕ ಚಟುವಟಿಕೆ ಹೆಚ್ಚುತ್ತದೆ ಎಂದು ಸುನಿಲ್ ಕೆ.ಆರ್. ಹೇಳಿದ್ದಾರೆ.

  • ಪಾರ್ಕಿನಲ್ಲಿ ಸಿಕ್ಕಿಬಿದ್ದ ಜೋಡಿಗೆ ಮದ್ವೆ

    ಪಾರ್ಕಿನಲ್ಲಿ ಸಿಕ್ಕಿಬಿದ್ದ ಜೋಡಿಗೆ ಮದ್ವೆ

    ಹೈದರಾಬಾದ್: ಸ್ವಯಂ ಘೋಷಿತ ಬಜರಂಗದಳದ ಕಾರ್ಯಕರ್ತರು ಪ್ರೇಮಿಗಳ ದಿನದ ಪಾರ್ಕ್ ನಲ್ಲಿದ್ದ ಯುವಕ-ಯುವತಿಗೆ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಹೈದರಾಬಾದ್ ನಲ್ಲಿ ಬಜರಂಗದಳದ ಕಾರ್ಯಕರ್ತರು ಪ್ರೇಮಿಗಳ ದಿನವನ್ನು ವಿರೋಧಿಸಿ ಅಂಗಡಿ, ಪಬ್ ಮತ್ತು ಕಚೇರಿಗಳನ್ನು ಮುಂಚಿತವಾಗಿ ಮುಚ್ಚಿಸಿ ರ‍್ಯಾಲಿ ಮತ್ತು ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಈ ವೇಳೆ ಹೈದರಾಬಾದಿನ ಕೊಂಡಲಕೋಯ ಆಕ್ಸಿಜನ್ ಪಾರ್ಕ್ ನಲ್ಲಿ ಕುಳಿತು ಮಾತನಾಡುತ್ತಿದ್ದ ಯುವಕ-ಯುವತಿಯನ್ನು ನೋಡಿದ್ದಾರೆ.

    ಕಾರ್ಯಕರ್ತರು ಅವರು ಬಳಿ ಹೋಗಿ ನೀವು ನಿಜವಾಗಿಯೂ ಪ್ರೀತಿಸುತ್ತಿದ್ದರೆ ಮದುವೆಯಾಗಿ ಎಂದು ಬಲವಂತದಿಂದ ಯುವಕನಿಂದ ಯುವತಿಗೆ ಅರಿಶಿಣದ ದಾರ ಕಟ್ಟಿಸುವ ಮೂಲಕ ಮದುವೆ ಮಾಡಿಸಿದ್ದಾರೆ. ಈ ಎಲ್ಲ ದೃಶ್ಯವನ್ನು ಕಾರ್ಯಕರ್ತರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಇದೀಗ ಆ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

    ಹೈದರಾಬಾದ್ ನಲ್ಲಿ ವ್ಯಾಲೆಂಟೈನ್ಸ್ ಡೇ ಆಚರಿಸುವ ಜೋಡಿಯ ಮೇಲೆ ಕಣ್ಣಿಡಲು ರಾಜ್ಯದಾದ್ಯಂತ ಸುಮಾರು 30 ತಂಡಗಳನ್ನು ಕಳುಹಿಸುವ ಯೋಜನೆ ಇದೆ ಎಂದು ಮುಂಚಿತವಾಗಿವೇ ವಿಶ್ವ ಹಿಂದೂ ಪರಿಷತ್ ತಿಳಿಸಿತ್ತು. ಅಷ್ಟೇ ಅಲ್ಲದೇ ಪಾರ್ಕ್, ಶಾಪಿಂಗ್ ಮಳಿಗೆ ಹಾಗೂ ಮುಂತಾದ ಪ್ರತಿದಿನ ಓಡಾಡುವ ಸ್ಥಳಗಳನ್ನು ಹೊರತುಪಡಿಸಿ ಆಫೀಸ್ ಹೊರಗಡೆಯೂ ಪ್ರತಿಭಟನೆ ನಡೆಸುತ್ತೇವೆ ಎಂದು ಘೋಷಿಸಿತ್ತು.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೆದ್ಕಲ್ ಪೊಲೀಸರು ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ದಂಪತಿ ತಾವು ಸ್ವ ಇಚ್ಛೆಯಿಂದ ವಿವಾಹವಾಗಿದ್ದೇವೆ ಎಂದು ಹೇಳಿ ದೂರು ನೀಡಲಿಲ್ಲ. ಆದರೂ ನವದಂಪತಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಉಪ ಆಯುಕ್ತ ಪಿವಿ ಪದ್ಮಜಾ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನ ಮದ್ವೆಯಾಗಲು ಈ ನಂಬರಿಗೆ ಕರೆ ಮಾಡಿ ಎಂದಿದ್ದ ನಟನಿಗೆ ಕೊನೆಗೂ ಮ್ಯಾರೇಜ್ ಫಿಕ್ಸ್

    ನನ್ನ ಮದ್ವೆಯಾಗಲು ಈ ನಂಬರಿಗೆ ಕರೆ ಮಾಡಿ ಎಂದಿದ್ದ ನಟನಿಗೆ ಕೊನೆಗೂ ಮ್ಯಾರೇಜ್ ಫಿಕ್ಸ್

    ಹೈದರಾಬಾದ್: ನನ್ನನ್ನು ಮದುವೆಯಾಗಲು ಯಾವುದೇ ಷರತ್ತುಗಳಿಲ್ಲ, ಈ ನಂಬರಿಗೆ ಕರೆ ಮಾಡಿ ಎಂದು ವಿಡಿಯೋ ಕಾಲ್ ಮೂಲಕ ಹೇಳಿಕೊಂಡಿದ್ದ ತಮಿಳು ನಟ ಆರ್ಯನಿಗೆ ಕೊನೆಗೂ ಮದುವೆ ಫಿಕ್ಸ್ ಆಗಿದೆ.

    ಹೌದು. ಪ್ರೇಮಿಗಳ ದಿನದಂದೇ ನಟ ತಮ್ಮ ಮದುವೆ ಹಾಗೂ ತಾನೂ ವಿವಾಹವಾಗುತ್ತಿರುವ ಹುಡುಗಿಯ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ತಾವು ಮದುವೆಯಾಗುತ್ತಿರುವ ಹುಡುಗಿ ಜೊತೆಗಿನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯಾವುದೇ ಷರತ್ತಿಲ್ಲ, ನನ್ನನ್ನು ಮದ್ವೆಯಾಗಲು ಈ ನಂಬರಿಗೆ ಕರೆ ಮಾಡಿ: ನಟ ಆರ್ಯ

    ಟ್ವೀಟ್ ನಲ್ಲೇನಿದೆ..?
    ನಟ ಆರ್ಯ ಅವರು ಸಯ್ಯೇಷಾ ಸೈಗಲ್ ಜೊತೆ ಮಾರ್ಚ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿರುವ ಕುರಿತು ಟ್ವಿಟ್ ಮಾಡುವ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. “ಹ್ಯಾಪಿ ವ್ಯಾಲೆಂಟೈನ್ಸ್ ಡೇ ಮತ್ತು ಆಶೀರ್ವಾದಿಸಿ” ಎಂದು ಬರೆದು ತಾವು ಮದುವೆಯಾಗುತ್ತಿರುವ ಹುಡುಗಿ ಜೊತೆಗಿರುವ ಫೋಟೋ ಹಾಕಿದ್ದಾರೆ.

    “ನಮ್ಮ ಪೋಷಕರು ಮತ್ತು ಕುಟುಂಬದ ಆಶೀರ್ವಾದದಿಂದ, ನಿಮ್ಮೊಂದಿಗೆ ನಮ್ಮ ಬಾಳಿನ ಅತ್ಯಂತ ಸುಂದರವಾದ ದಿನವನ್ನು ಹಂಚಿಕೊಳ್ಳಲು ನಾವು ಬಯಸುತ್ತೇವೆ. ನಾವು ಮುಂದಿನ ತಿಂಗಳು ಮಾರ್ಚ್ ನಲ್ಲಿ ಮದುವೆಯಾಗುತ್ತಿದ್ದೇವೆ. ನಮ್ಮ ಹೊಸ ಜೀವನ ಪ್ರಯಾಣಕ್ಕೆ ನಿಮ್ಮ ಪ್ರೀತಿಯ ಆಶೀರ್ವಾದ ಬೇಕೆಂದು” ದಂಪತಿ ಮನವಿ ಮಾಡಿಕೊಂಡಿದ್ದಾರೆ.

    ಆರ್ಯ ಮತ್ತು ಸಯ್ಯೇಷಾ ಮದುವೆಯಾಗುತ್ತಿರುವ ಬಗ್ಗೆ ತಿಳಿಸಿದ್ದು, ಆದರೆ ತಮ್ಮ ಮದುವೆಯ ದಿನಾಂಕವನ್ನು ಮಾತ್ರ ಬಹಿರಂಗಪಡಿಸಲಿಲ್ಲ. ಕಳೆದ ತಿಂಗಳಿನಿಂದ ಆರ್ಯ ಮತ್ತು ಸಯ್ಯೇಷಾ ಮದುವೆಯಾಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಈಗ ಸ್ವತಃ ಆರ್ಯ ಅವರೇ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಮಾರ್ಚ್ 9 ರಂದು ಆರ್ಯ ಹಾಗೂ ಸಯ್ಯೇಷಾ ಮದುವೆ ಮುಸ್ಲಿಂ ಸಂಪ್ರದಾಯದಂತೆ ನಡೆಯಲಿದೆ ಎಂದು ತಿಳಿದುಬಂದಿದೆ.

    ಸಯ್ಯೇಷಾ ಸೈಗಲ್ ಯಾರು?
    ಸಯ್ಯೇಷಾ ಅವರು ನಟ-ನಿರ್ಮಾಪಕ ಸುಮೇತ್ ಸೈಗಲ್ ಮತ್ತು ನಟಿ ಶಹೀನ್ ಬಾನು ಅವರ ಮಗಳಾಗಿದ್ದು, ಶಹೀನ್ ಅವರು ‘ಮಹಾ-ಸಂಗ್ರಮ್’ ಮತ್ತು’ ಆಯಿ ಮಿಲಾನ್ ಕಿ ರಾತ್’ ನಂತಹ ಸಿನಿಮಾಗಲ್ಲಿ ಹೆಸರುವಾಸಿಯಾಗಿದ್ದಾರೆ. 2018 ರ ‘ಘಜಿನಿಕಾಂತ್’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಯ್ಯೇಷಾ ಅವರು ನಟ ಆರ್ಯರನ್ನು ಭೇಟಿಯಾಗಿದ್ದರು.

    ಸದ್ಯಕ್ಕೆ ಈ ಜೋಡಿಯು ಮೋಹನ್ ಲಾಲ್ ಮತ್ತು ಸೂರ್ಯ ಅಭಿನಯಿಸಿರುವ ‘ಕಾಪ್ಪಾನ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಕಾಪ್ಪಾನ್’ ಅಕ್ಟೋಬರ್ 2019 ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವ್ಯಾಲೆಂಟೈನ್ಸ್ ಡೇ ದಿನವೇ ಕಾಲೇಜ್ ಕಟ್ಟಡದಿಂದ ಹಾರಿದ ವಿದ್ಯಾರ್ಥಿ

    ವ್ಯಾಲೆಂಟೈನ್ಸ್ ಡೇ ದಿನವೇ ಕಾಲೇಜ್ ಕಟ್ಟಡದಿಂದ ಹಾರಿದ ವಿದ್ಯಾರ್ಥಿ

    ಬೆಳಗಾವಿ: ಪ್ರೀತಿ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬ ಕಾಲೇಜಿನ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಶಿವಪ್ರಸಾದ್ ಪವಾರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗಜಪರವಾಡಿ ಗ್ರಾಮದ ನಿವಾಸಿಯಾಗಿದ್ದು, ಬೆಳಗಾವಿಯ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಾಲ್ಕನೇ ಸೆಮಿಸ್ಟರ್ ನಲ್ಲಿ ಸಿವಿಲ್ ವಿಭಾಗದಲ್ಲಿ ಓದುತ್ತಿದ್ದನು. ಪ್ರೀತಿಸಿದ ಹುಡುಗಿ ಪ್ರೇಮ ನಿವೇದನೆಯನ್ನ ತಿರಸ್ಕರಿಸಿದ್ದಕ್ಕೆ ಕಾಲೇಜಿನ ನಾಲ್ಕನೇ ಮಹಡಿಯ ಮೇಲಿಂದ ಬಿದ್ದು ಶಿವಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ತರಗತಿಯಲ್ಲಿದ್ದಾಗ ಕೆಳಗೆ ಏನೋ ವಸ್ತು ಬಿದ್ದ ಶಬ್ದ ಕೇಳಿಬಂದಿತ್ತು. ಹೊರಗೆ ಬಂದು ನೋಡಿದಾಗ ಶಿವಪ್ರಸಾದ್ ಬಿದ್ದಿದ್ದನು ತಕ್ಷಣ ಆತನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿಯೇ ಶಿವಪ್ರಸಾದ್ ಮೃತಪಟ್ಟಿದ್ದನು ಎಂದು ವಿದ್ಯಾರ್ಥಿ ಪ್ರಕಾಶ್ ಹೇಳಿದ್ದಾನೆ.

    ಶಿವಪ್ರಸಾದ್ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯೊಬ್ಬಳನ್ನ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದನು. ಈ ಬಗ್ಗೆ ಯುವತಿ ತಮ್ಮ ಮನೆಯಲ್ಲಿ ಪ್ರೀತಿಯನ್ನು ಒಪ್ಪುವುದಿಲ್ಲ ಎಂದು ಹೇಳಿ ಈತನ ಪ್ರೀತಿಯನ್ನು ನಿರಾಕರಿಸಿದ್ದಳು. ಇದೇ ವಿಚಾರಕ್ಕೆ ಕಳೆದ ಒಂದು ವರ್ಷದಿಂದ ಶಿವಪ್ರಸಾದ್ ತಲೆಕೆಡಿಸಿಕೊಂಡಿದ್ದನು. ಆಗಾಗ ಅವಳು ನನಗೆ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಡ ಹೇಳುತ್ತಿದ್ದನು. ಆದರೆ ಕಳೆದ ಒಂದು ತಿಂಗಳಿನಿಂದ ಬಹಳ ಆರಾಮಾಗಿದ್ದು, ಚೆನ್ನಾಗಿ ವ್ಯಾಸಂಗ ಮಾಡುತ್ತಿದ್ದನು. ತನ್ನ ಪ್ರೀತಿಯ ಬಗ್ಗೆ ಏನು ಹೇಳುತ್ತಿರಲಿಲ್ಲ. ಆದರೆ ಇಂದು ಪ್ರೇಮಿಗಳ ದಿನ ಹಿನ್ನೆಲೆಯಲ್ಲಿ ಮತ್ತೊಮ್ಮೆ ಆಕೆಗೆ ಪ್ರಪೋಸ್ ಮಾಡಿದ್ದು, ಮತ್ತೆ ಆಕೆಯಿಂದ ಅದೇ ಉತ್ತರ ಬಂದಿರಬಹುದು. ಇದರಿಂದ ತನಗೆ ಸಿಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದು ಶಿವಪ್ರಸಾದ್ ಕಾಲೇಜಿನ ನಾಲ್ಕನೇ ಮಹಿಡಿಯಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಶಿವಪ್ರಸಾದ್ ರೂಮ್ ಮೇಟ್ ಕುಮಾರ್ ತಿಳಿಸಿದ್ದಾನೆ.

    ಸದ್ಯಕ್ಕೆ ಶಿವಪ್ರಸಾದ್ ಪ್ರೀತಿ ಮಾಡುವ ವಿಚಾರವನ್ನ ಆತನ ಗೆಳೆಯರು ಬಾಯಿ ಬಿಟ್ಟಿದ್ದಾರೆ. ಆದರೆ ನಿಜವಾಗಿಯೂ ಇಂದು ಆತ ಪ್ರೀತಿ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡನಾ ಅಥವಾ ಆತ ಮೇಲಿಂದ ಹಾರುವ ಸಂದರ್ಭದಲ್ಲಿ ಆತನೊಂದಿಗೆ ಯುವತಿಯೂ ಇದ್ದಳೇ ಎನ್ನುವ ಅನುಮಾನಗಳು ಮೂಡುತ್ತಿವೆ. ಈ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಪೋಸ್ ವಿಚಾರದಲ್ಲಿ ಗಲಾಟೆ – ಪ್ರೇಯಸಿಗಾಗಿ ಸ್ನೇಹಿತನಿಗೆ ಚಾಕು

    ಪ್ರಪೋಸ್ ವಿಚಾರದಲ್ಲಿ ಗಲಾಟೆ – ಪ್ರೇಯಸಿಗಾಗಿ ಸ್ನೇಹಿತನಿಗೆ ಚಾಕು

    ಚೆನ್ನೈ: ಒಂದೇ ಹುಡುಗಿಗೆ ಪ್ರಪೋಸ್ ಮಾಡುವ ವಿಚಾರದಲ್ಲಿ ಜಗಳ ನಡೆದಿದ್ದು, ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದಿರುವ ಘಟನೆ ತಮಿಳುನಾಡಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಕ್ಯಾಂಪಸ್ ನಲ್ಲಿ ನಡೆದಿದೆ.

    ಪ್ರಮೋದ್ ಕೌಶಿಕ್ ಹಲ್ಲೆಗೊಳಗಾದ ವಿದ್ಯಾರ್ಥಿ. ಮನೋಜ್ ಸ್ನೇಹಿತನಿಗೆ ಚಾಕು ಹಾಕಿದ ವಿದ್ಯಾರ್ಥಿ. ಇಬ್ಬರು ಮೂಲತಃ ಹರಿಯಾಣದವರಾಗಿದ್ದು, ಎಮ್‍ಟೆಕ್ ವ್ಯಾಸಂಗ ಮಾಡುತ್ತಿದ್ದರು. ಬುಧವಾರ ಸಂಜೆ ಸುಮಾರು 5.30ರ ಸಮಯದಲ್ಲಿ ಚೆನ್ನೈನ ಸೆಂಟ್ರಲ್ ಲೈಬ್ರರಿ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಮೋದ್ ಕೌಶಿಕ್ ಮತ್ತು ಮನೋಜ್ ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಇಂದು ಪ್ರೇಮಿಗಳ ದಿನವಾದ್ದರಿಂದ ತಮ್ಮ ಪ್ರೇಯಸಿಗೆ ಪ್ರಮೋಸ್ ಮಾಡಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಬುಧವಾರ ಸಂಜೆ ಲೈಬ್ರರಿ ಆವರಣದಲ್ಲಿ ಹುಡುಗಿಯ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ತಾರಕ್ಕೇರಿದ್ದು, ಕೋಪಗೊಂಡ ಮನೋಜ್ ಚಾಕುವಿನಿಂದ ಕೌಶಿಕ್ ಗೆ ಇರಿದಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಘಟನೆ ನಡೆದ ಸ್ಥಳದಲ್ಲಿದ್ದ ಸ್ನೇಹಿತರು ಕೂಡಲೇ ಹಲ್ಲೆಗೊಳಗಾದ ಕೌಶಿಕ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಕೌಶಿಕ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಮಾಹಿತಿ ತಿಳಿದು ಕೊಟ್ಟೂರು ಪುರಂ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಘಟನೆಯ ಸಂಪೂರ್ಣ ತನಿಖೆ ಮಾಡಲು ಪೊಲೀಸರು ಆರೋಪಿ ಮನೋಜ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದ್ವೆ

    ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದ್ವೆ

    ಹುಬ್ಬಳ್ಳಿ/ಧಾರವಾಡ: ಇಂದು ಪ್ರೇಮಿಗಳ ದಿನಾಚರಣೆಯಾಗಿದ್ದು, ಎಲ್ಲೆಡೆ ಪ್ರೇಮಿಗಳು ತಮ್ಮ ಪ್ರೀತಿಯ ದಿನವನ್ನು ಸಂಭ್ರಮಿಸುತ್ತಿರುತ್ತಾರೆ. ಆದರೆ ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದುವೆ ಮಾಡಿಸಲು ಹುಬ್ಬಳ್ಳಿಯಲ್ಲಿ ಕೆಲವು ಸಂಘಟನೆ ಸಿದ್ಧವಾಗಿವೆ.

    ಹೌದು. ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ ಯುವತಿಯರ ವಿರುದ್ಧ ಕ್ರಮ ಜಾರಿಗೊಳಿಸುವ ಮೂಲಕ ಪಾಲಕರ ಸಮ್ಮುಖದಲ್ಲಿ ಮದುವೆ ಮಾಡಿಸಲು ಹುಬ್ಬಳ್ಳಿಯಲ್ಲಿ ಕೆಲವು ಸಂಘಟನೆ ಸಿದ್ಧವಾಗಿವೆ. ಇಂದಿನ ಯುವಕ-ಯುವತಿಯರು ನಾಳಿನ ದೇಶದ ಭದ್ರಬುನಾದಿಯ ಆಧಾರ ಸ್ತಂಭವಾಗಿದ್ದಾರೆ. ಆದರೆ ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಅನೈತಿಕ ಕೃತ್ಯಗಳಿಗೆ ಕೈ ಜೋಡಿಸುತ್ತಿದ್ದು, ಅವರ ವಿರುದ್ಧ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಘಟನೆಕಾರರು ಹೇಳಿದ್ದಾರೆ.

    ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ ಅನುಸರಿಸುವ ಮೂಲಕ ಭಾರತದ ಸಂಸ್ಕೃತಿ ಹಾಳು ಮಾಡುವಂತ ಯುವಕರಿಗೆ ಈ ರೀತಿ ಮದುವೆ ಮಾಡಿಸುವ ಮೂಲಕ ಎಚ್ಚರಿಕೆ ನೀಡಲಾಗುತ್ತದೆ. ಈ ಹಿಂದೆ ನಗರದ ಸಂಜೀವಿನಿ ಹಾಗೂ ನೃಪತುಂಗ ಬೆಟ್ಟದ ಪಾರ್ಕ್‌ಗಳಲ್ಲಿ ಇಂತಹ ವ್ಯವಸ್ಥೆಗಳನ್ನು ನೋಡಿದ್ದೇವೆ. ಹೀಗಾಗಿ ಇದರಿಂದ ಬೇಸತ್ತು ವ್ಯಾಲೆಂಟೈನ್ಸ್ ಡೇ ಪ್ರಯುಕ್ತವಾಗಿ ಪ್ರೇಮಿಗಳಿಗೆ ಅವರ ಪಾಲಕರ ಸಮ್ಮುಖದಲ್ಲಿಯೇ ಮದುವೆ ಮಾಡಿಸಿ ಪಾಶ್ಚಾತ್ಯ ಸಂಪ್ರದಾಯಗಳನ್ನು ನಿಯಂತ್ರಣಕ್ಕೆ ತರುವ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಮಾಂಗಲ್ಯ ಹಾಗೂ ವಸ್ತ್ರಗಳನ್ನು ತೆಗೆದುಕೊಂಡು ಬಂದಿದ್ದು, ಅನೈತಿಕವಾಗಿ ವರ್ತಿಸಿದವರಿಗೆ ಮದುವೆ ಮಾಡಿಸಲಾಗುತ್ತದೆ ಎಂದು ಸಂಘಟನೆ ಮುಖಂಡ ವಿಠ್ಠಲ ಪವಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವ್ಯಾಲೆಂಟೈನ್ಸ್ ಡೇ ದಿನ ಪ್ರೇಮಿಗಳಿಗಾಗಿ ಬಂತು ಲವ್ ಬರ್ಡ್ಸ್

    ವ್ಯಾಲೆಂಟೈನ್ಸ್ ಡೇ ದಿನ ಪ್ರೇಮಿಗಳಿಗಾಗಿ ಬಂತು ಲವ್ ಬರ್ಡ್ಸ್

    ಬೆಂಗಳೂರು: ಫೆಬ್ರವರಿ ತಿಂಗಳನ್ನು ಪ್ರೀತಿಯ ಮಾಸ ಎಂದು ಕರೆಯುತ್ತಾರೆ. ಮನಸ್ಸಲ್ಲಿ ಬಚ್ಚಿಟ್ಟ ಪ್ರೀತಿಯನ್ನು ಹೇಳಿಕೊಳ್ಳುವ ಇರುವ ಸಮಯ ಇದಾಗಿದೆ. ನನ್ನ ಹುಡುಗಿಗೆ ಏನ್ ಗಿಫ್ಟ್ ಕೊಡಲಿ ಎಂದು ಹುಡುಗರು ಫುಲ್ ಕನ್ಫ್ಯೂಸ್ ಆಗಿದ್ದರೆ, ಇತ್ತ ಹುಡುಗಿಯರು ಕ್ಯಾಂಡಲ್ ಲೈಟ್ ಡಿನ್ನರ್ ಗೆ ಬಂಕ್ ಆಗಿ ರೆಡಿಯಾಗಬೇಕು ಎಂದು ಭರ್ಜರಿ ಶಾಪಿಂಗ್ ನಡೆಸಿದ್ದಾರೆ.

    ಈಗ ಲವ್ ಬರ್ಡ್ಸ್ ಕೊಟ್ಟು ಪ್ರಪೋಸ್ ಮಾಡುವುದು ಹೊಸ ಟ್ರೇಂಡ್ ಆಗಿದೆ. ಹೀಗಾಗಿ ಮಾರ್ಕೆಟ್ ನಲ್ಲಿ ಕಲರ್ ಕಲರ್ ಜೋಡಿ ಹಕ್ಕಿಗಳು ಎಂಟ್ರಿ ಕೊಟ್ಟಿದ್ದು, ಪ್ರೇಮಚಿತ್ತಾರ ಮೂಡಿಸಿವೆ. ಇವುಗಳನ್ನೇ ನೀವು ಎಂದುಕೊಂಡು ನಿಮ್ಮ ಪ್ರಿಯತಮ ಅಥವಾ ಪ್ರಿಯತಮೆ ಮುದ್ದಾಡುತ್ತಾರೆ.

    ಇವುಗಳ ಜೊತೆಗೆ ಕಪಲ್ ಶೋ ಪೀಸ್, ಪೇರ್ ಲವ್ ಕೋಟ್ಸ್ ಮಗ್, ಸ್ಕ್ರಾಪ್ ಅಲ್ಬಂಗಳಿಗೂ ಲವರ್ಸ್ ಮುಗಿಬಿದ್ದು ಕೊಳ್ಳುತ್ತಿದ್ದಾರೆ. ಪ್ರಣಯದ ಸಂಕೇತವಾದ ದಿಂಬಿನ ಮೇಲೆ ಲವ್ ಕೋಟ್ಸ್ ಗಳನ್ನು ಬರೆಯಲಾಗಿದೆ. ಸ್ಪೆಷಲ್ ಆಗಿ ಗೊಂಬೆಗಳ ಗ್ರೀಟಿಂಗ್ಸ್ ಗಳಲ್ಲಿ ಪ್ರೇಮ ಪತ್ರ ಮೂಡಿದೆ.

    ಪೋರಟಿಂಥ್‍ಗೆ ಕ್ಯಾಂಡಲ್ ಲೈಟ್ ಡಿನ್ನರ್ ಫಿಕ್ಸ್ ಆಗಿದೆ. ಆ ದಿನ ನಾನು ಬಬ್ಲಿಯಾಗಿ ಕಾಣುವ ಡ್ರೆಸ್ ಹಾಕಬೇಕು ಎಂದು ಹುಡುಗಿಯರು ಫುಲ್ ಶಾಪಿಂಗ್ ಮಾಡುತ್ತಿದ್ದಾರೆ. ಕೆಲ ಹುಡುಗಿಯರು ನಾನು ಧರಿಸುವ ರೆಡ್ ಡ್ರೆಸ್ ನೋಡಿ, ನಮ್ಮ ಹುಡುಗ ಕ್ಲೀನ್ ಬೋಲ್ಡ್ ಆಗಬೇಕು ಎಂದು ಫುಲ್ ಪ್ರಿಪರೇಷನ್ ನಡೆಸಿದ್ದಾರೆ. ಅದಕ್ಕೆ ತಕ್ಕಂತೆ ಮಾರ್ಕೆಟ್‍ನಲ್ಲಿ ಕೆಂಪು ಬಣ್ಣದ ಡ್ರೆಸ್ ಗಳು ಹವಾ ಎಬ್ಬಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಮ ಲೋಕಕ್ಕೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಕೊಟ್ಟ ಪಡ್ಡೆಹುಲಿ ಚಿತ್ರ ತಂಡ

    ಪ್ರೇಮ ಲೋಕಕ್ಕೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಕೊಟ್ಟ ಪಡ್ಡೆಹುಲಿ ಚಿತ್ರ ತಂಡ

    ಬೆಂಗಳೂರು: ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಅಭಿನಯಿಸಿರುವ ಪಡ್ಡೆಹುಲಿ ಚಿತ್ರ ತಂಡ ಪ್ರೇಮ ಲೋಕಕ್ಕೆ ವ್ಯಾಲೆಂಟೆನ್ಸ್ ಡೇಗೆ ಹಾಡನ್ನು ಬಿಡುಗಡೆ ಮಾಡುವ ಮೂಲಕ ಭರ್ಜರಿ ಗಿಫ್ಟ್ ಕೊಟ್ಟಿದೆ.

    ‘ಒಂದು ಮಾತಲಿ ನೂರು ಹೇಳಲೇ’ ಎಂದಿರುವ ಶ್ರೇಯಸ್ ಹಾಗೂ ನಟಿ ನಿಶ್ವಿಕಾ ನಾಯ್ಡು ಜೋಡಿ ಮುದ್ದಾಗಿ ಹಾಡಿನಲ್ಲಿ ಕಾಣಿಸುತ್ತಿದ್ದು, ಪ್ರೇಮಿಗಳ ದಿನದ ಸಂಭ್ರಮಕ್ಕೆ ಯುವ ಜನತೆಗೆ ಅತ್ಯತ್ತಮ ಗಿಫ್ಟ್ ಎನ್ನಬಹುದು. ಕಾಲೇಜಿನಲ್ಲಿ ಹುಡುಗಿಯ ಹಿಂದೆ ಸುತ್ತುವ ಪ್ರೇಮಿಯ ದೃಶ್ಯಗಳಲ್ಲಿ ಶ್ರೇಯಸ್ ಇಷ್ಟವಾಗುತ್ತಾರೆ.

    ಹಾಡಿಗೆ ನಾಗರ್ಜುನ ಶರ್ಮಾ ಅವರು ಸಾಹಿತ್ಯ ಬರೆದಿದ್ದು, ಸರಿಗಮಪ ಖ್ಯಾತಿಯ ಸಂಜೀತ್ ಹೆಗ್ಡೆ ಧ್ವನಿ ಕೇಳುಗರಿಗೆ ಇಷ್ಟವಾಗಿದ್ದು, ಮತ್ತೆ ಕೇಳಬೇಕೆನಿಸುತ್ತದೆ. ಹಾಡು ಪೂರ್ಣಗೊಂಡರು ಕೂಡ ಕೇಳುಗ ಅದೇ ಗುಂಗಿನಲ್ಲಿ ಇರುವಂತೆ ಮಾಡಲು ಸಂಜೀತ್ ಹೆಗ್ಡೆ ಯಶಸ್ವಿಯಾಗಿದ್ದಾರೆ. ಇನ್ನು ಹಾಡಿನ ಆರಂಭದಲ್ಲಿ ಸ್ಯಾಂಡಲ್‍ವುಡ್ ನ ಹಲವು ನಟಿಯರು ಚಿತ್ರಕ್ಕೆ ಶುಭಕೋರಿದ್ದು, ಹಾಡನ್ನು ಕೇಳಿ ಭರ್ಜರಿ ಯಶಸ್ಸು ಕಾಣುತ್ತದೇ ಎಂದಿದ್ದಾರೆ. ಈ ಮೊದಲು ಹೇಳಿದಂತೆ ಪ್ರೇಮ ಪರೀಕ್ಷೆಯನ್ನ ಯಶಸ್ವಿಯಾಗಿ ಬೇಕಾದ ಅಮೂಲ್ಯ ಟಿಪ್ಸ್ ಗಳನ್ನೂ ನಟಿಯರ ಮೂಲಕ ನೀಡಿದ್ದಾರೆ.

    ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ನಿರ್ಮಾಪಕ ಕೆ.ಮಂಜುರವರ ಪುತ್ರನನ್ನು ನಾಯಕ ನಟನಾಗಿ ಸ್ಯಾಂಡಲ್‍ವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ತನ್ನದೇ ಆದ ವಿಭಿನ್ನ ಚಾಪನ್ನು ಸ್ಯಾಂಡಲ್‍ವುಡ್ ನಲ್ಲಿ ಮೂಡಿಸಿದು, ಈ ಹಿಂದೆ ಬಿಡುಗಡೆಯಾಗಿದ್ದ ಹುಲಿ ಹುಲಿ ಹಾಗೂ ಹಾಡು ಕೂಡ ಕೇಳುಗರ ಮನ ಗೆದ್ದಿತ್ತು.

    ವಿಭಿನ್ನ ಲುಕ್, ಪೋಸ್ಟರ್, ಹಾಡುಗಳ ಮೂಲಕ ಸಿನಿ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹುಟ್ಟು ಹಾಕಲು ಚಿತ್ರ ತಂಡ ಯಶಸ್ವಿಯಾಗಿದ್ದು, ನೋಡುವರು ಸಿನಿಮಾ ಡಿಫರೆಂಟ್ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಚಿತ್ರಕ್ಕೆ ಎಂ.ರಮೇಶ್ ರೆಡ್ಡಿ(ನಂಗ್ಲಿ) ಬಂಡವಾಳ ಹೂಡಿದ್ದು, ಗುರು ದೇಶಪಾಂಡೆ ಅವರದ್ದೇ ನಿರ್ದೇಶನವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹಳೇ ಫೋಟೋ ಹಾಕಿ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ ಮಿಸಸ್ ರಾಮಾಚಾರಿ- ಪತ್ನಿ ಜೊತೆಗಿರಲು ಅಮೆರಿಕಗೆ ಹಾರಿದ್ರು ಯಶ್

    ಹಳೇ ಫೋಟೋ ಹಾಕಿ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ ಮಿಸಸ್ ರಾಮಾಚಾರಿ- ಪತ್ನಿ ಜೊತೆಗಿರಲು ಅಮೆರಿಕಗೆ ಹಾರಿದ್ರು ಯಶ್

    ಬೆಂಗಳೂರು: ತೆರೆಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಲವ್ ಮಾಡಿ, ಮದುವೆ ಆದವರು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್. `ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಅಂತಲೇ ಕರೆಯಿಸಿಕೊಳ್ಳುವ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷದ ಮೇಲಾಗಿದೆ.

    ಧಾರಾವಾಹಿಯಲ್ಲಿ ತೆರೆ ಹಂಚಿಕೊಂಡ ಈ ಜೋಡಿ, ಬಳಿಕ ಬೆಳ್ಳಿತೆರೆ ಮೇಲೂ ಯಶಸ್ವಿಯಾಗಿದ್ದಾರೆ. ಈ ಜೋಡಿ ವರ್ಷಗಳ ಕಾಲ ಪ್ರೇಮ ಪಾಶದಲ್ಲಿ ಸಿಲುಕಿದ್ದವರು. ದಂಪತಿಯಾಗಿರುವ ಯಶ್ ಹಾಗೂ ರಾಧಿಕಾ ಪಂಡಿತ್ ಗೆ `ಪ್ರೇಮಿಗಳ ದಿನ’ ಅಂದರೆ ತುಂಬಾ ಸ್ಪೆಷಲ್. ಆದ್ದರಿಂದ ಈ ಬಾರಿ ಪ್ರೇಮಿಗಳ ದಿನವನ್ನ ಯಶ್ ಹಾಗೂ ರಾಧಿಕಾ ಪಂಡಿತ್ ಅಮೆರಿಕದ ಚಿಕಾಗೋದಲ್ಲಿ ಆಚರಿಸಿದ್ದಾರೆ.

    ಪ್ರೇಮಿಗಳ ದಿನದಂದು ರಾಧಿಕಾ ಪಂಡಿತ್ ಒಂದು ಅಪರೂಪದ ಫೋಟೋವನ್ನ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ದಶಕದ ಹಿಂದೆ ಅಂದರೆ 2006 ರಲ್ಲಿ ಕ್ಲಿಕ್ ಆದ ಈ ಫೋಟೋವನ್ನ ರಾಧಿಕಾ ಪಂಡಿತ್ `ವ್ಯಾಲೆಂಟೈನ್ಸ್ ಡೇ’ ಪ್ರಯುಕ್ತ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

    “ಈ ಫೋಟೋ ತೆಗೆದಿದ್ದಾಗ ನಾನು ಮತ್ತು ಯಶ್ ಒಳ್ಳೆಯ ಸ್ನೇಹಿತರಾಗಿದ್ದೆವು. ಆದರೆ ಈ ಫೋಟೋನ ಈಗ ನೋಡಿದರೆ ಆಗಲೇ ನಮ್ಮ ಪ್ರೀತಿ ಹೃದಯಾಳದಲ್ಲಿ ಅಡಗಿತ್ತು. ಅದು ನಮ್ಮ ಅರಿವಿಗೆ ಬಂದಿರಲಿಲ್ಲವೇನೋ ಎಂಬ ಭಾವನೆ ಮೂಡುತ್ತದೆ” ಎಂದು ಫೇಸ್ ಬುಕ್ ನಲ್ಲಿ ಬರೆದು ಫೋಟೋ ಜೊತೆ ಪೋಸ್ಟ್ ಮಾಡಿದ್ದಾರೆ.

    ಸದ್ಯಕ್ಕೆ ರಾಧಿಕಾ ಪಂಡಿತ್ ಅಮೆರಿಕಾದ ಚಿಕಾಗೋದಲ್ಲಿದ್ದಾರೆ. ಪ್ರೇಮಿಗಳ ದಿನದಂದು ಪತ್ನಿಯ ಜೊತೆಗಿರಲು ಯಶ್ ಕೂಡ ಅಮೆರಿಕಗೆ ಹೋಗಿದ್ದಾರೆ. ರಾಧಿಕಾ ಪಂಡಿತ್ ಸಹೋದರನಿಗೆ ಹೆಣ್ಣು ಮಗುವಾಗಿದೆ. ರಾಧಿಕಾ ಸಹೋದರ ನೆಲೆಸಿರುವುದು ಚಿಕಾಗೋದಲ್ಲಿ. ಕುಟುಂಬಕ್ಕೆ ಹೊಸ ಅತಿಥಿಯ ಆಗಮನ ಆಗಿರುವುದರಿಂದ ಕೆಲ ದಿನಗಳ ಹಿಂದೆಯಷ್ಟೇ ರಾಧಿಕಾ ಅಮೆರಿಕಗೆ ಹಾರಿದ್ದರು. ಈಗ ಯಶ್ ಕೂಡ ಚಿಕಾಗೋಗೆ ಹೋಗಿದ್ದು, ಯಶ್ ಜೊತೆಗಿನ ಫೋಟೋವನ್ನೂ ಕೂಡ ರಾಧಿಕಾ ಹಂಚಿಕೊಂಡಿದ್ದಾರೆ.