Tag: ವ್ಯಾಲೆಂಟೈನ್ಸ್ ಡೇ

  • ವ್ಯಾಲೆಂಟೈನ್ಸ್ ಡೇ ಸೇರಿ ಬೆಂಗಳೂರಿನಲ್ಲಿ 4 ದಿನ ಮದ್ಯ ಬಂದ್!

    ವ್ಯಾಲೆಂಟೈನ್ಸ್ ಡೇ ಸೇರಿ ಬೆಂಗಳೂರಿನಲ್ಲಿ 4 ದಿನ ಮದ್ಯ ಬಂದ್!

    – ಹೋಟೆಲ್ ಅಸೋಸಿಯೇಷನ್‍ನಿಂದ ವಿರೋಧ

    ಬೆಂಗಳೂರು: ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇ (Valentine’s Day). ಈ ದಿನದಂದು ಪ್ರೇಮಿಗಳ ಪಾರ್ಟಿ, ಸೆಲೆಬ್ರೇಷನ್ ಜೋರಾಗಿರುತ್ತದೆ. ಆದರೆ ಸೆಲೆಬ್ರೇಷನ್ ಮೂಡ್ ನಲ್ಲಿದ್ದ ಪ್ರೇಮಿಗಳಿಗೆ ಈ ಬಾರಿ ನಿರಾಶೆ ಕಾದಿದ್ದು, ಮದ್ಯ ಸಿಗ್ತಿಲ್ಲ. ಜೊತೆಗೆ ಮದ್ಯ ಮಾರಾಟ ನಿಷೇಧಕ್ಕೆ ಹೋಟೆಲ್ ಅಸೋಸಿಯೇಷನ್ ನಿಂದ ವಿರೋಧ ವ್ಯಕ್ತವಾಗಿದೆ.

    ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ವಿಧಾನಪರಿಷತ್ ಉಪಚುನಾವಣೆ ಹಿನ್ನೆಲೆ ವ್ಯಾಲೆಂಟೈನ್ಸ್ ಡೇ ಅಂದ್ರೆ ಫೆಬ್ರವರಿ 14ರ ಸಂಜೆ 5 ಗಂಟೆಯಿಂದ ಫೆಬ್ರವರಿ 17ರ ಬೆಳಗ್ಗೆ 6 ಗಂಟೆವರೆಗೆ ನಗರದ ಕೆಲವು ಭಾಗಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. 14, 15, 16 ಹಾಗೂ 20ನ್ನು ಡ್ರೈ ಡೇ ಅಂತ ಘೋಷಣೆ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಫೆಬ್ರವರಿ 14ನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧರಾಗಿದ್ದ ಯುವಜನತೆಗೆ ನಿರಾಸೆಯಾಗಿದೆ. ಪ್ರೇಮಿಗಳ ದಿನಕ್ಕಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದ್ದ ರೆಸ್ಟೋರೆಂಟ್, ಪಬ್, ಬಾರ್‍ಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಿದೆ. ಇದಕ್ಕೆ ಹೋಟೆಲ್ ಅಸೋಸಿಯೇಷನ್ ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದನ್ನೂ ಓದಿ: ಮೆದುಳು ಜ್ವರಕ್ಕೆ ಬಾಲಕ ಬಲಿ

    ನಾಲ್ಕು ದಿನದ ಮದ್ಯ ಮಾರಾಟ ನಿಷೇಧದಿಂದ ಕಾರ್ಮಿಕರ ಸಂಬಳ, ಕಟ್ಟಡ ಬಾಡಿಗೆ ಮುಂತಾದ ಖರ್ಚುಗಳನ್ನು ನಿಭಾಯಿಸಲು ತೊಂದರೆಯಾಗಲಿದೆ. ಕೇವಲ 16 ಸಾವಿರ ಮತ ಚಲಾವಣೆಯಾಗೋ ಚುನಾವಣೆಗೆ ನಾಲ್ಕು ದಿನ ಮದ್ಯ ಮಾರಾಟ ನಿಷೇಧದ ಆದೇಶವನ್ನು ಪುನರ್ ಪರಿಶೀಲನೆ ನಡೆಸಬೇಕೆಂದು ಬೆಂಗಳೂರು ಚುನಾವಣಾ ಅಧಿಕಾರಿಗಳಿಗೆ ಹೋಟೆಲ್ ಅಸೋಸಿಯೇಷನ್ ಪತ್ರ ಬರೆದು ಮನವಿ ಮಾಡಿದೆ.

    ಒಟ್ಟಿನಲ್ಲಿ ವ್ಯಾಲೆಂಟೆನ್ಸ್ ಡೇ ಖುಷಿಯಲ್ಲಿದ್ದ ಮದ್ಯ ಪ್ರೇಮಿಗಳಿಗೆ ಹಾಗೂ ಆದಾಯದ ನಿರೀಕ್ಷೆಯಲ್ಲಿದ್ದ ಹೋಟೆಲ್, ರೆಸ್ಟೋರೆಂಟ್ ಗಳಿಗೆ ನಿರಾಶೆಯಾಗಿರೋದಂತೂ ಸುಳ್ಳಲ್ಲ.

  • ವ್ಯಾಲೆಂಟೈನ್‌ ವೀಕ್‌ನಲ್ಲಿ ಕಂಗೊಳಿಸಬೇಕೇ? ಇಲ್ಲಿದೆ ಟಿಪ್ಸ್

    ವ್ಯಾಲೆಂಟೈನ್‌ ವೀಕ್‌ನಲ್ಲಿ ಕಂಗೊಳಿಸಬೇಕೇ? ಇಲ್ಲಿದೆ ಟಿಪ್ಸ್

    ಪ್ರತಿ ವರ್ಷದಂತೆ ಈ ವರ್ಷವು ಕೂಡ ಪ್ರೇಮಿಗಳ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಪ್ರೇಮಿಗಳು ಎದುರು ನೋಡ್ತಿದ್ದಾರೆ. ವ್ಯಾಲೆಂಟೈನ್‌ ವೀಕ್‌ನಲ್ಲಿ (Valentine’s Day) ಮಿಂಚಲು ಮಹಿಳಾ ಮಣಿಗಳಿಗೆ ಇಲ್ಲಿದೆ ಬ್ಯೂಟಿ ಟಿಪ್ಸ್. ವ್ಯಾಲೆಂಟೈನ್‌ ವೀಕ್‌ನಲ್ಲಿ ಬ್ಯೂಟಿ ಲೋಕದಲ್ಲಿ ಫೇಸ್ ಮಾಸ್ಕ್ ಸೌಂದರ್ಯವರ್ಧಕದ ಹವಾ ಹೆಚ್ಚಾಗಿದೆ. ಇದನ್ನೂ ಓದಿ:ಆರ್ಟಿಕಲ್ 370 ಟ್ರೈಲರ್ ನಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ

    ವ್ಯಾಲೆಂಟೈನ್‌ ವೀಕ್‌ನಲ್ಲಿ ಚಾಕ್ಲೇಟ್ ಡೇಯಂದು ಪ್ರೇಮಿಗಳಿಗೆ, ಸಂಗಾತಿಗಳಿಗೆ ಚಾಕ್ಲೇಟ್‌ಗಳನ್ನು ಪ್ರೀತಿಯಿಂದ ಕೊಡುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಚಾಕ್ಲೇಟ್ ಫೇಸ್ ಮಾಸ್ಕ್ ರೆಡಿ ಪ್ಯಾಕ್‌ಗಳನ್ನು ಕೊಡುವುದು ಗೊತ್ತೇ! ಅಷ್ಟು ಮಾತ್ರವಲ್ಲ, ಈ ಸೀಸನ್‌ನಲ್ಲಿ ಚಾಕ್ಲೇಟ್ ಫೇಶಿಯಲ್‌ನಂತಹ ನಾನಾ ಫೇಸ್‌ಪ್ಯಾಕ್‌ಗಳು ಬ್ಯೂಟಿ ಸಲೂನ್ ಹಾಗೂ ಬ್ಯೂಟಿ ಪಾರ್ಲರ್‌ನಲ್ಲಿ ದೊರಕುತ್ತಿರುವುದು ತಿಳಿದಿದೆಯೇ.

    ಇದೀಗ ಈ ಕಾನ್ಸೆಪ್ಟ್ ನಿಧಾನಗತಿಯಲ್ಲಿ ಸಾಮಾನ್ಯ ಯುವತಿಯರನ್ನು ತಲುಪಿದೆ. ಇನ್ನು, ದಿನಕಳೆದಂತೆ ಬ್ಯೂಟಿ ಪ್ರಿಯರ ರುಟಿನ್‌ನಲ್ಲಿ ಸೇರುತ್ತಿದೆ ಎನ್ನುತ್ತಾರೆ ಸೌಂದರ್ಯ ವರ್ಧಕರು. ಇದರೊಂದಿಗೆ ಚಾಕ್ಲೇಟ್ ನಿಂದ ಸಿದ್ಧ ಪಡಿಸಿದ ಸೌಂದರ್ಯವರ್ಧಕಗಳಿಗೆ ಇದೀಗ ಮೊದಲಿಗಿಂತ ಬೇಡಿಕೆ ಜಾಸ್ತಿಯಾಗಿದೆ. ಇದಕ್ಕೆ ಪೂರಕ ಎಂಬಂತೆ, ಬ್ಯೂಟಿ ಲೋಕದಲ್ಲಿ ನಾನಾ ಬಗೆಯ ಚಾಕ್ಲೇಟ್ ಫೇಸ್ ಪ್ಯಾಕ್ (Chocolate Face Mask), ಫೇಶಿಯಲ್, ಸ್ಕ್ರಬ್‌ನಂತಹ ಬ್ಯೂಟಿ ಟ್ರೀಟ್‌ಮೆಂಟ್‌ಗಳು ಯುವತಿಯರನ್ನು ಆಕರ್ಷಿಸುತ್ತಿವೆ.

    ಅತ್ಯಧಿಕ ಆಂಟಿ ಆಕ್ಸಿಡೆಂಟ್ಸ್ ಇರುವಂತಹ ಚಾಕ್ಲೇಟ್ ಫೇಸ್ ಮಾಸ್ಕ್ ತ್ವಚೆಯ ಡ್ಯಾಮೆಜನ್ನು ತಡೆಯುತ್ತದೆ. ಮಾತ್ರವಲ್ಲ, ಡೆಡ್ ಸ್ಕಿನ್ ನಿವಾರಣೆ ಮಾಡುತ್ತದೆ. ಅಲ್ಲದೇ, ಚರ್ಮದ ಮಾಯಿಶ್ಚರೈಸರ್ ಅಂಶವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಸೌಂದರ್ಯ ತಜ್ಞೆ ಉಮಾ ಜಯಕುಮಾರ್. ಅವರ ಪ್ರಕಾರ, ಈ ಬಗೆಯ ಫೇಸ್ ಮಾಸ್ಕ್ ವಿದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು ಇದೀಗ ನಮ್ಮಲ್ಲೂ ಸಾಮಾನ್ಯವಾಗುತ್ತಿದೆ ಎನ್ನುತ್ತಾರೆ.

    ರೆಡಿಮೇಡ್ ಪ್ಯಾಕ್ ಹಾಗೂ ಬಾಕ್ಸ್‌ನಲ್ಲೂ ನಾನಾ ಬ್ರಾಂಡ್‌ನಲ್ಲಿ ಇವು ಲಭ್ಯ. ಮೊದಲಿಗೆ ಪ್ಯಾಚ್ ಟೆಸ್ಟ್ ಮಾಡಿ, ತ್ವಚೆಗೆ ಅಲರ್ಜಿಯಾಗದಿದ್ದರೇ ಬಳಸಬಹುದು. ಸಲೂನ್‌ಗೆ ಹೋಗಿ ಹೆಚ್ಚು ಹಣ ಸುರಿದು ಈ ಚಾಕ್ಲೇಟ್ ಫೇಸ್ ಮಾಸ್ಕ್ ಮಾಡಿಸಿಕೊಳ್ಳಲಾಗದಿದ್ದವರು, ಮನೆಯಲ್ಲೆ ತಾವೇ ಇದನ್ನು ಸುಲಭವಾಗಿ ಸಿದ್ಧಪಡಿಸಿಕೊಂಡು ಹಚ್ಚಿಕೊಳ್ಳಬಹುದು.

    ಸಿಂಪಲ್ಲಾಗಿ ಹೇಳಬೇಕೆಂದೆರೇ, ಒಂದು ಬೌಲ್‌ನಲ್ಲಿ ಅಗತ್ಯವಿರುವಷ್ಟು ಚಾಕ್ಲೇಟ್ ಅನ್ನು ಬಿಸಿ ಮಾಡಿ ಕರಗಿಸಿಕೊಂಡು, ಅದಕ್ಕೆ ಕೊಂಚ ಸಕ್ಕರೆ, ಉಪ್ಪು ಹಾಗೂ ಹಾಲನ್ನು ಮಿಶ್ರ ಮಾಡಿ. ಮುಖಕ್ಕೆಲೇಪಿಸಿ. ಒಣಗಿದ ನಂತರ ಮುಖವನ್ನು ವಾಶ್ ಮಾಡಿ ಎಂದು ಸಿಂಪಲ್ ಟಿಪ್ಸ್ ನೀಡುತ್ತಾರೆ ಫ್ಯಾಷನ್ ಪ್ರಿಯರು.

  • Valentine’s Day: `ಹೃದಯವೆ ಬಯಸಿದೆ ನಿನ್ನನೇ…’

    Valentine’s Day: `ಹೃದಯವೆ ಬಯಸಿದೆ ನಿನ್ನನೇ…’

    ಲಕ್ಷಾಂತರ ಹೃದಯಗಳ ನಡುವೆಯೂ ಜೀವದ ಗೆಳತಿಯನ್ನೇ ಅರಸುವ ಹೃದಯ, ಎಂದೂ ತುಟಿಗೆ ತಾಕಿಸದೇ ಇರುವ ಟೀ ಯನ್ನೇ ಬೈಟು ಮಾಡಿಕೊಂಡು ಕುಡಿಯಬೇಕೆನ್ನಿಸುತ್ತದೆ. ಮುಂಜಾನೆ ತಿಳಿಬಿಸಿಲಿನ ಕಿರಣ ಮೈತಾಕುತ್ತಿದ್ದಂತೆ ಉಂಟಾಗುವ ಬೆಚ್ಚನೆಯ ಅನುಭವಕ್ಕೆ ಗೆಳತಿಯ ಗಟ್ಟಿ ಅಪ್ಪುಗೆ ಬೇಕೆಂದು ಮನ ಬಯಸುತ್ತದೆ. ಪ್ರೀತಿಯ (Love) ಕಾಲದಲ್ಲಿ ಕಳೆದ ತುಂಟತನಗಳನ್ನು ನೆನಪಿಸಿಕೊಂಡರೆ, ಮತ್ತೆ ಸಂಗಾತಿಯ ತೋಳಿನಲ್ಲಿ ಕಳೆದುಹೋಗಬೇಕೆನ್ನಿಸುತ್ತದೆ ಇಂತಹ ಸಂದರ್ಭಗಳನ್ನು ಕೂಡಿಡಲೇಬೇಕಾಗುತ್ತದೆ. ಅದಕ್ಕೆಂದೇ ಒಂದು ದಿನವೂ ಬಂದಿದೆ. ಫೆ.14ರ ಪ್ರೇಮಿಗಳ ದಿನ (Valentine’s Day)- ಪ್ರೀತಿ ಹಂಚಿದ ವ್ಯಾಲಂಟೈನ್ಸ್ ದಿನ.

    `ಹೇ ಹೃದಯ
    ಅವಳ ಕಿರುನಗೆ ನೆನಪಿದೆಯ
    ಧರೆಯ ಮೇಲೆ ಅಂತಹ ಹೆಣ್ಣಿರುವಳೇ
    ಹೇ ಹೃದಯ
    ಅವಳ ಸಿಹಿ ನುಡಿ ಕೇಳಿದೆಯ
    ಶೃತಿಯಲ್ಲಿರೊ ಹೆಣ್ಣು ಹುಟ್ಟಿರುವಳೇ
    ಅವಳ ನಾನು ಪ್ರೀತಿಸಬೇಕು, ಹೇ ಹೃದಯ…’

    ಎಂಬ ಎಸ್‌ಪಿಬಿ ಅವರ ಧನಿಯಲ್ಲಿ ಮೂಡಿದ ಹಂಸಲೇಖ ಅವರ ಗೀತೆಯನ್ನು ಪ್ರೇಮಿಗಳು ಯಾರೂ ಮರೆಯುವಂತಿಲ್ಲ. ಏಕೆಂದರೆ ಈ ಗೀತೆಯ ಪ್ರತಿ ಸಾಲಿನಲ್ಲಿ ಮನಸ್ಸು ಮತ್ತು ಹೃದಯದ ಸಂಬಂಧವನ್ನು ನೆನಪಿಸುತ್ತದೆ. ಪ್ರೇಮಿಗಳ ದಿನಾಚರಣೆಯಲ್ಲಿಯಂತೂ ಎಷ್ಟೋ ಜೀವ ಜೋಡಿಗಳ ಕಾಲರ್ ಟ್ಯೂನ್ ಸಹ ಇದೇ ಆಗಿರುತ್ತದೆ. ಅಷ್ಟೇ ಅಲ್ಲದೇ `ಜಗವೇ ನೀನು ಗೆಳತಿಯೇ…., ಸುಮ್ಮನೆ ಹೀಗೆ ನಿನ್ನನೇ ನೋಡುತಾ ಪ್ರೇಮಿಯಾದೆನೆ..’ ಮತ್ತಿತರ ಗೀತೆಗಳು ಪ್ರೇಮಿಗಳ ಮನಸ್ಸನ್ನು ಆಹ್ಲಾದಗೊಳಿಸುತ್ತವೆ.

    ಹೌದು….. ಯುವ ಸಮುದಾಯಕ್ಕೆ ಫೆ.14ರ ಪ್ರೇಮಿಗಳ ದಿನ ಎಂಬುದೇ ವಿಶೇಷ ಅದರಲ್ಲೂ ಬೆಂಗಳೂರಿನಂತಹ (Bengaluru) ಮಹಾನಗರಗಳಲ್ಲಿ ಪ್ರೇಮಿಗಳ ಅಡ್ಡಗಳಿಗೇನು ಕಮ್ಮಿಯಿಲ್ಲ. ಚಿತ್ತಾಕರ್ಷಕ ಉದ್ಯಾನ, ನಂದಿಬೆಟ್ಟ ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಪ್ರತಿಷ್ಟಿತ ಹೋಟೆಲ್‌ಗಳೂ ಪ್ರೇಮಿಗಳ ಪ್ರಮುಖ ಅಡ್ಡಗಳೇ ಆಗಿರುತ್ತವೆ. ಪ್ರೇಮಿಗಳ ದಿನ ಬಂತೆಂದರೆ ಸಾಕು ಇವಿಷ್ಟೂ ತಾಣಗಳಲ್ಲಿ ಯುವ ಪ್ರೇಮಿಗಳ ಕಲರವ ಶುರುವಾಗುತ್ತದೆ. ಕಾಫಿ-ಡೇ ಶಾಫ್‌ಗಳು ಹಾಗೂ ಡಾಲ್ಛಿನ್ ಸೆಂಟರ್‌ಗಳಲ್ಲಿ ಚಳಿ ಬಿಡಿಸುವ ಬಿಸಿ ಕಾಫಿಯೊಂದಿಗೆ ಮನದ ಮಾತನ್ನೂ ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವರು ಕಿ.ಲೋ ಮೀಟರ್‌ಗಳವರೆಗೆ ಜಾಲಿರೈಡ್ ಮಾಡಿ ಪ್ರಕೃತಿ ಸೌಂದರ್ಯದಲ್ಲೇ ಲೀನವಾಗಿಬಿಡುತ್ತಾರೆ. ಇದನ್ನ ಯಾರಾದ್ರೂ ಪ್ರಶ್ನೆ ಮಾಡಿದ್ರೆ ಪ್ರೇಮವನ್ನೂ ಹೀಗೂ ಅರ್ಥಮಾಡಿಕೊಳ್ಳಬಹುದು ಅಂತಾ ಹೇಳಿಬಿಡ್ತಾರೆ. ಇನ್ನೂ ಕೆಲ ಯುವಕರಂತೂ ತೀರಾ ಅತಿರೇಖಕ್ಕೆ ಹೋಗಿ ರಕ್ತದಲ್ಲೇ ತಮ್ಮ ಪ್ರೇಯಸಿಗೆ ಕವಿತೆ ಬರೆದುಕೊಡುತ್ತಾರೆ. ಈ ಹುಚ್ಚಾಟಗಳಿಂದ ಕೆಲವರು ಆಸ್ಪತ್ರೆ ಸೇರಿದ್ದೂ ಉಂಟೂ..

    ಹಿಂದೆಲ್ಲಾ ಪ್ರೇಮಕ್ಕಾಗಿ ಹಂಬಲಿಸುತ್ತಿದ್ದ ಯುವ ಸಮೂಹದಲ್ಲಿ ಕೆಲವರು ಪತ್ರಗಳನ್ನು ಬರೆದು ತಿಂಗಳಾನುಗಟ್ಟಲೇ ಅವರ ಮನೆಯ ಬಳಿಯೆಲ್ಲಾ ಅಲೆದು ಸರ್ಕಸ್ ಮಾಡಿ ಸುಸ್ತಾಗುತ್ತಿದ್ದರು. ಕೊನೆಯಲ್ಲಿ `ಅವಳು ನಮ್ಮಂಥವರಿಗೆಲ್ಲ ಸಿಗಲ್ಲ ಬಿಡು’ ಎಂದು ಬೈದುಕೊಂಡು ಸಮಾಧಾನ ಮಾಡಿಕೊಳ್ತಿದ್ರು. ಆದರೀಗ ಆಧುನಿಕತೆ ಬದಲಾಗಿದ್ದು, ಪ್ರೀತಿ ಹೇಳುವುದು ಕ್ಷಣಮಾತ್ರ ಸುಖವಾಗಿದೆ. ವಾಟ್ಸಾಪ್, ಇ-ಮೇಲ್ ಸಂದೇಶಗಳನ್ನು ಕಳುಹಿಸಿ ಪ್ರೀತಿ ಹಂಚಿಕೊಳ್ಳುತ್ತಾರೆ. ಕೆಲವರು ಮದುವೆಗೆ ಮುನ್ನ ಒಂದಷ್ಟು ದಿನಗಳು ಮಾತ್ರವೇ ಪ್ರೇಮಕಾಲವೆಂದು ಭಾವಿಸುತ್ತಾರೆ. ಆ ದಿನಗಳಲ್ಲಂತೂ ತಾವೂ ಪ್ರೇಮಿಗಳಾಗಿ ಕೈ-ಕೈ ಹಿಡಿದು ಸುತ್ತಾಡುವುದೇನು? ಭವಿಷ್ಯದ ಬಗ್ಗೆ ವಿಚಾರವನ್ನೂ ವಿನಿಮಯವೇನು ಅಬ್ಬಾ! ಹೇಳಲಸಾಧ್ಯ ನಮ್ಮ ಪಡ್ಡೆ ಹುಡುಗರಂತೂ `ಪ್ರಿಯೆ ನಿನಗಾಗಿ ಚಂದ್ರನನ್ನೇ ತಂದುಕೊಡುವೆ’ ಎಂದೂ ಹೇಳಿ ಮರ ಹತ್ತಿಸುವುದು ಉಂಟೂ.. ಈ ದಿನಗಳು ಮನಸ್ಸುಗಳಲ್ಲಿ ತುಂಬುವ ಮರೆಯದ ಕ್ಷಣಗಳೆಂದರೆ ತಪ್ಪಾಗಲಾರದು.

    ಪ್ರೇಮಿಗಳ ದಿನ ಆಚರಿಸುವುದೇಕೆ?
    ಪ್ರೇಮಿಗಳ ದಿನಾಚರಣೆಯು ಕ್ರಿ.ಶ.270ರಲ್ಲಿ 2ನೇ ಕ್ಲಾಡಿಯಸ್‌ನ ಅವಧಿಯಲ್ಲಿ ಜಾರಿಗೆ ಬಂದಿತು. ಕ್ಲಾಡಿಯಸ್‌ಗೆ ತಮ್ಮ ಯುವಕರು ಯುದ್ಧದ ಸಂದರ್ಭದಲ್ಲಿ ಮದುವೆಯಾಗುವುದು ಇಷ್ಟವಿರಲಿಲ್ಲ. ಏಕೆಂದರೆ ಆತನ ಪ್ರಕಾರ ಯುವಕರು ಮದುವೆಯಾಗದೇ ಒಂಟಿಯಾಗಿದ್ದಷ್ಟೂ ಯುದ್ಧದಲ್ಲಿ ಉತ್ತಮ ರೀತಿಯಲ್ಲಿ ಹೋರಾಡುತ್ತಾರೆ ಎಂಬ ಭಾವನೆಯಾಗಿತ್ತು. ಹೀಗಿದ್ದಾಗ ಬಿಷಪ್ ವ್ಯಾಲೇಂಟಿನ್ ಕ್ಲಾಡಿಯಸ್‌ನ ಈ ನಿರ್ಧಾರದ ಬಗ್ಗೆ ಅಸಮಾಧಾನ ಹೊಂದಿದ್ದನು. ಆತನು ಮದುವೆಯಾಗಲು ಇಚ್ಛಿಸುವವರನ್ನು ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದ. ಈ ಅಪರಾಧಕ್ಕಾಗಿ ಅವನನ್ನು ಫೆ.14ರಂದು ಸೆರೆಮನೆಗೆ ತಳ್ಳಲಾಯಿತು. ಈ ಬಿಷಪ್ ತನ್ನ ಸಾವಿಗೆ ಮೊದಲು `ಇಂತಿ ನಿಮ್ಮ ವ್ಯಾಲೇಂಟಿನ್’ ಎಂದು ಸಹಿ ಮಾಡಿದ ಪ್ರೇಮ ಪತ್ರವನ್ನು ಬರೆದು ಮೃತಪಟ್ಟರು. ಅಂದಿನಿಂದ ಪ್ರತಿ ವರ್ಷದ ಫೆ.14ರ ದಿನವನ್ನು `ವ್ಯಾಲೇಂಟಿನ್ಸ್ ಡೇ’ (ಪ್ರೇಮಿಗಳ ದಿನ) ಎಂದು ಆಚರಣೆ ಮಾಡುತ್ತಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲವ್ ಜಿಹಾದ್ V/S ವ್ಯಾಲೆಂಟೈನ್ಸ್ ಡೇ ಲಿಂಕ್..!

    ಲವ್ ಜಿಹಾದ್ V/S ವ್ಯಾಲೆಂಟೈನ್ಸ್ ಡೇ ಲಿಂಕ್..!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • KIALನಿಂದ ವ್ಯಾಲೆಂಟೈನ್ಸ್ ಡೇಗಾಗಿ 5.15 ಲಕ್ಷ ಕೆ.ಜಿ ಗುಲಾಬಿ ರಫ್ತು..!

    KIALನಿಂದ ವ್ಯಾಲೆಂಟೈನ್ಸ್ ಡೇಗಾಗಿ 5.15 ಲಕ್ಷ ಕೆ.ಜಿ ಗುಲಾಬಿ ರಫ್ತು..!

    ಚಿಕ್ಕಬಳ್ಳಾಪುರ: ವ್ಯಾಲೆಂಟೈನ್ಸ್ ಡೇ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 5.15 ಲಕ್ಷ ಕೆಜಿ ಗುಲಾಬಿಗಳನ್ನ ರಫ್ತು ಮಾಡಲಾಗಿದೆ. ದೇಶದಲ್ಲಿಯೇ ಈ ಬಾರಿ ಅತಿ ಹೆಚ್ಚು ಗುಲಾಬಿ ಹೂ ರಫ್ತು ಮಾಡಿದ ಕೀರ್ತಿಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಜನವಾಗಿದೆ.

    ಒಟ್ಟು 18 ಏರ್ ಲೈನ್ಸ್ ಗಳ ಮೂಲಕ 5.15 ಲಕ್ಷ ಕೆ.ಜಿ ಹೂಗಳನ್ನ ಪ್ರಪಂಚದ 25 ಸ್ಥಳಗಳಿಗೆ ರಫ್ತು ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಹೂಗಳನ್ನ ರೈತರು ಬೆಳೆಯುವ ಕಾರಣ ವಿದೇಶಗಳು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ರಾಜ್ಯದ ಗುಲಾಬಿ ಹೂವಿಗೆ ಭಾರೀ ಬೇಡಿಕೆ ಇದೆ.

    ಬೇಡಿಕೆಗೆ ಅನುಗುಣವಾಗಿ ರಫ್ತು ಮಾಡಲು ಸೌಲಭ್ಯ ಕೆಐಎಲ್ ಸಹಕಾರಿಯಾಗಿದ್ದು, ಸಿಂಗಾಪುರ್, ಕೌಲಾಲಂಪುರ್, ಲಂಡನ್, ಆಸ್ಟರ್ ಡ್ಯಾಂ, ಕುವೈತ್, ಆಕ್ಲೆಂಡ್, ಬೈರುತ್, ಮನಿಲಾ, ಮಸ್ಕತ್, ದುಬೈ ರಾಷ್ಟ್ರಗಳಿಗೆ ಗುಲಾಬಿ ರಫ್ತು ಮಾಡಲಾಗಿದೆ. ವಿದೇಶಿ ಮಾರುಕಟ್ಟೆಗಳಿಗೆ 2 ಲಕ್ಷ ಕೆಜಿಯ 7.3 ಮಿಲಿಯನ್ ಗುಲಾಬಿ ಹೂಗಳನ್ನ ರಫ್ತು ಮಾಡಲಾಗಿದೆ. ಇದನ್ನೂ ಓದಿ: ಹಿಜಬ್ ಧರಿಸಿ ಬರಲು ಬಿಡಲ್ಲ: ಸಚಿವ ಅಶ್ವತ್ಥ ನಾರಾಯಣ

    ದೇಶಿಯ ಮಾರುಕಟ್ಟೆಗಳಿಗೆ 3.15 ಕೆಜಿ 6.5 ಮಿಲಿಯನ್ ಗುಲಾಬಿ ಹೂಗಳನ್ನ ರಫ್ತು ಮಾಡಲಾಗಿದೆ. ದೇಶಿ ಮಾರುಕಟ್ಟೆಗಳಾದ ದೆಹಲಿ, ಮುಂಬೈ, ಕೊಲ್ಕತ್ತಾ, ಗುವಾಹಟಿ ಹಾಗೂ ಚಂಡೀಗಢಕ್ಕೆ ರಫ್ತು ಮಾಡಲಾಗಿದೆ. ಇದನ್ನೂ ಓದಿ: ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಅವಘಡ – ವಿದ್ಯುತ್ ಉತ್ಪಾದನೆ ಸ್ಥಗಿತ

  • ದಾಂಪತ್ಯ ಜೀವನಕ್ಕೆ ಗುಡ್‍ಬೈ ಹೇಳಿದ ಬಾಲಿವುಡ್ ನಟಿ ರಾಖಿ ಸಾವಂತ್

    ದಾಂಪತ್ಯ ಜೀವನಕ್ಕೆ ಗುಡ್‍ಬೈ ಹೇಳಿದ ಬಾಲಿವುಡ್ ನಟಿ ರಾಖಿ ಸಾವಂತ್

    ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್, ರಿತೇಶ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವುದಾಗಿ ಸೋಶಿಯಲ್ ಮೀಡಿಯಾ ಮೂಲಕವಾಗಿ ಹೇಳಿದ್ದಾರೆ.

    ಪತಿ ರಿತೇಶ್ ಅವರಿಂದ ತಾವು ಬೇರ್ಪಟ್ಟಿರುವ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಅವರು ತಿಳಿಸಿದ್ದಾರೆ. ವ್ಯಾಲೆಂಟೈನ್ ಡೇ ಆಚರಣೆಗೂ ಒಂದು ದಿನ ಮುನ್ನ ಅಂದರೆ, ಫೆ.13ರಂದು ರಾಖಿ ಸಾವಂತ್ ಅವರು ಗಂಡನಿಂದ ಬೇರೆ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕಂದಮ್ಮನ ಆಗಮನಕ್ಕಾಗಿ ಕಾಯ್ತಿದ್ದೇನೆ- ಅಮೂಲ್ಯಗೆ ಹರಿಪ್ರಿಯಾ ವಿಶ್

     

    View this post on Instagram

     

    A post shared by Rakhi Sawant (@rakhisawant2511)

    ವ್ಯಾಲೆಂಟೈನ್ಸ್ ಡೇ ದಿನಕ್ಕೂ ಮುನ್ನವೇ ಈ ರೀತಿ ಆಗಿದ್ದರ ಬಗ್ಗೆ ನನಗೆ ತೀವ್ರ ಬೇಸರವಿದೆ. ಆದರೆ ಇಂಥ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಆಗಿತ್ತು. ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿದೆವು. ಆದರೆ ನಾವು ದೂರವಾಗುವುದೇ ಉತ್ತಮ ಎನಿಸಿತು. ನನ್ನ ಆರೋಗ್ಯ ಮತ್ತು ವೃತ್ತಿಜೀವನದ ಬಗ್ಗೆ ನಾನು ಗಮನ ಹರಿಸಬೇಕು. ರಿತೇಶ್‍ಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ ಎಂದು ರಾಖಿ ಸಾವಂತ್ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ತುಂಬು ಗರ್ಭಿಣಿ ಅಮೂಲ್ಯಾ ಜೊತೆ ಗೋಲ್ಡನ್ ಸ್ಟಾರ್ ಪತ್ನಿ -ಫೋಟೋ ವೈರಲ್

    ಹಿಂದಿ ಬಿಗ್ ಬಾಸ್ 14ನೇ ಸೀಸನ್‍ನಲ್ಲಿ ರಾಖಿ ಸಾವಂತ್ ಸ್ಪರ್ಧಿಸಿದ್ದರು. ಆಗ ಮೊದಲ ಬಾರಿಗೆ ಗಂಡನ ಬಗ್ಗೆ ಪ್ರಸ್ತಾಪ ಮಾಡಿದ್ದರು. ಜಗತ್ತಿನ ಮುಂದೆ ಬರುವಂತೆ ರಿತೇಶ್ ಬಳಿ ಮನವಿ ಮಾಡಿಕೊಂಡರೂ ಕೂಡ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅಂತಿಮವಾಗಿ ಬಿಗ್ ಬಾಸ್ 15ನೇ ಸೀಸನ್‍ನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ನಟಿ ತಾನು ಪತಿಯಿಂದ ದೂರವಾಗುತ್ತಿರುವ ಕುರಿತಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

  • ವ್ಯಾಲೆಂಟೈನ್ಸ್ ಡೇ ಆಚರಿಸಿದರೆ ಮದುವೆ ಮಾಡಿ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ- ಶಿವಶೇನೆ

    ವ್ಯಾಲೆಂಟೈನ್ಸ್ ಡೇ ಆಚರಿಸಿದರೆ ಮದುವೆ ಮಾಡಿ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ- ಶಿವಶೇನೆ

    ಭೋಪಾಲ್: ಪ್ರೇಮಿಗಳ ದಿನದಂದು ಭೋಪಾಲ್‍ನಲ್ಲಿ ಪ್ರೇಮಿಗಳನ್ನು ತಡೆಯಲು ಶಿವಸೇನೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಲಾಠಿಗಳಿಗೆ ಪೂಜೆ ಮಾಡಲಾಗಿದೆ. ವ್ಯಾಲೆಂಟೈನ್ಸ್ ಡೇ ಆಚರಿಸಿದರೆ ಮದುವೆ ಮಾಡಿ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಮಾಡುತ್ತೇವೆ ಎಂದು ಶೀವಸೆನೆ ಕಾರ್ಯಕರ್ತರು ಹೇಳಿದ್ದಾರೆ.

    ಯಾರಾದರೂ ಪ್ರೇಮಿಗಳು ಪಾರ್ಕ್‍ನಲ್ಲಿ ಕಂಡುಬಂದರೆ, ಲಾಠಿಯಿಂದ ಅವರನ್ನು ದಂಡಿಸುತ್ತೇವೆ. ಪ್ರೀತಿಯ ಜೋಡಿಗಳಿಗೆ ಪಾಠ ಕಲಿಸಲು ಶಿವಸೇನೆ ಕಾರ್ಯಕರ್ತರು ಕಾಳಿಕಾ ಶಕ್ತಿ ಪೀಠದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರಲ್ಲದೆ, ಪ್ರೇಮಿಗಳ ದಿನವನ್ನು ಆಚರಿಸುವ ಯುವಕರಿಗೆ ಎಚ್ಚರಿಕೆ ನೀಡಿದರು. ಇದನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರತೀಕ ಎಂದು ಕರೆದಿರುವ ಶಿವಸೇನೆ ವ್ಯಾಲೆಂಟೈನ್ಸ್ ಡೇ ವಿರೋಧಿಸುವುದಾಗಿ ಶಿವಸೇನ ಕಾರ್ಯಕರ್ತರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ

    ಭೋಪಾಲ್‍ನಲ್ಲಿ ಶಿವಸೇನೆಯು ಪ್ರೇಮಿಗಳ ದಿನದಂದು ಯಾವುದೇ ಕಾರ್ಯಕ್ರಮವನ್ನು ಆಯೋಜಿಸದಂತೆ ಪಬ್, ರೆಸ್ಟೋರೆಂಟ್, ಹೋಟೆಲ್‍ಗಳಿಗೆ ಎಚ್ಚರಿಕೆ ನೀಡಿದೆ. ದೇಶದಲ್ಲಿ ಶಿವಸೇನೆ, ಭಜರಂಗದಳ ಸೇರಿದಂತೆ ಹಲವು ಸಂಘಟನೆಗಳು ವ್ಯಾಲೆಂಟೈನ್ಸ್ ಡೇ ಆಚರಿಸುವುದನ್ನು ವಿರೋಧಿಸುತ್ತಿವೆ ಎಂದು ಹೇಳಿದ್ದಾರೆ.

    ಪ್ರೇಮಿಗಳ ದಿನವನ್ನು ವಿರೋಧಿಸಿದ ಶಿವಸೇನೆ ಕಾರ್ಯಕರ್ತರು, ನಾಳೆ ಲಾಠಿಗಳೊಂದಿಗೆ ನಗರದ ವಿವಿಧ ಭಾಗಗಲ್ಲಿ ಸುತ್ತಲಿದ್ದೇವೆ. ಪ್ರೇಮಿಗಳ ದಿನ ಆಚರಿಸುವುದು ಕಂಡು ಬಂದರೆ ಯುವಕ, ಯುವತಿಯರಿಗೆ ಸ್ಥಳದಲ್ಲೇ ಮದುವೆ ಮಾಡಿ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

  • ವ್ಯಾಲೆಂಟೈನ್ಸ್ ಡೇ ಸ್ಪೆಷಲ್ – ಹುಡುಗಿಯರನ್ನ ಇಂಪ್ರೆಸ್ ಮಾಡಲು ಈ ಶೈಲಿಯ ಶರ್ಟ್, ಬ್ಲೇಜರ್‌ಗಳನ್ನು ಧರಿಸಿ

    ವ್ಯಾಲೆಂಟೈನ್ಸ್ ಡೇ ಸ್ಪೆಷಲ್ – ಹುಡುಗಿಯರನ್ನ ಇಂಪ್ರೆಸ್ ಮಾಡಲು ಈ ಶೈಲಿಯ ಶರ್ಟ್, ಬ್ಲೇಜರ್‌ಗಳನ್ನು ಧರಿಸಿ

    ಪ್ರೇಮಿಗಳ ದಿನಾಚರಣೆಗೆ ಇನ್ನೇನು ಕೌಂಟ್‍ಡೌನ್ ಶುರುವಾಗಿದೆ. ಸಾಮಾನ್ಯವಾಗಿ ಈ ದಿನದಂದು ಯಾವ ರೀತಿಯ ಡ್ರೆಸ್ ಧರಿಸಬೇಕೆಂದು ಪುರುಷರು ಗೊಂದಲದಲ್ಲಿರುತ್ತಾರೆ. ಈ ವಿಶೇಷ ದಿನದಂದು ನಿಮ್ಮ ಪ್ರೇಯಸಿಯ ಜೊತೆಗೆ ಡೇಟಿಂಗ್ ಹೋಗುವುದರೊಂದಿಗೆ ಅವರನ್ನು ಮತ್ತಷ್ಟು ಇಂಪ್ರೆಸ್ ಮಾಡುವುದು ಪುರುಷರು ಧರಿಸುವ ಡ್ರೆಸ್‍ಗಳಾಗಿದೆ.

    ಈ ಬಾರಿಯ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಯೊಂದಿಗೆ ನೀವೆನಾದರೂ ಪ್ಲಾನ್ಸ್ ಹೊಂದಿದ್ದರೆ, ನೀವು ಏನು ಧರಿಸಿದರೆ ಚೆನ್ನಾಗಿ ಕಾಣಿಸಬಹುದು ಎಂದು ಚಿಂತಿಸುತ್ತಿದ್ದರೆ, ನಿಮಗೆ ಒಂದಷ್ಟು ಟಿಪ್ಸ್‌ಗಳನ್ನು ಈ ಕೆಳಗೆ ನೀಡಲಾಗಿದೆ. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ

    ಡೆನಿಮ್
    ಪುರುಷರಿಗೆ ಡೆನಿಮ್ ಜಾಕೆಟ್ ಸುಂದರವಾಗಿ ಕಾಣಿಸುತ್ತದೆ. ಡೆನಿಮ್ ಸ್ಟೈಲಿಶ್ ಲುಕ್ ನೀಡುವುದರ ಜೊತೆಗೆ, ಇದನ್ನು ನೀವು ಯಾವ ಸಮಯದಲ್ಲಿ ಬೇಕಾದರೂ ಧರಿಸಬಹುದಾಗಿದೆ. ವಿಶೇಷವೆಂದರೆ ಡೆನಿಮ್ ಜಾಕೆಟ್ ಎಲ್ಲಾ ರೀತಿಯ ಶರ್ಟ್ ಹಾಗೂ ಟಿ ಶರ್ಟ್‍ಗಳಿಗೆ ಸೂಟ್ ಆಗುತ್ತದೆ.

    ಸಿಂಪಲ್ ಶರ್ಟ್
    ನಿಮ್ಮ ಗೆಳತಿ ಸರಳತೆಯನ್ನು ಹೆಚ್ಚಾಗಿ ಇಷ್ಟಪಡುವ ವ್ಯಕ್ತಿಯಾಗಿದ್ದರೆ, ನೀವು ಅವರನ್ನು ಇಂಪ್ರೆಸ್ ಮಾಡಲು ಸಿಂಪಲ್ ಆಗಿರುವ ಶರ್ಟ್ ಧರಿಸುವುದು ಉತ್ತಮ. ಜೊತೆಗೆ ಸಿಂಪಲ್ ಆಗಿರುವ ಶರ್ಟ್ ನಿಮಗೆ ಧರಿಸಲು ಆರಾಮದಾಯಕವಾಗಿರುತ್ತದೆ. ಇದನ್ನೂ ಓದಿ: ಮುಂಬೈ ಸರಣಿ ಸ್ಫೋಟ ಪ್ರಕರಣದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅರೆಸ್ಟ್

    ವಿಂಟರ್ ಜಾಕೆಟ್
    ಫೆಬ್ರವರಿ ತಿಂಗಳಿನಲ್ಲಿ ಉತ್ತರ ಭಾರತದಲ್ಲಿ ಸಾಕಷ್ಟು ಚಳಿ ಇರುತ್ತದೆ. ಈ ವೇಳೆ ನಿಮಗೆ ಜಾಕೆಟ್ ಬಹಳ ಅಗತ್ಯವಾಗಿರುತ್ತದೆ. ನಿಮ್ಮನ್ನು ಚಳಿಯಿಂದ ಜಾಕೆಟ್ ರಕ್ಷಿಸುವುದರ ಜೊತೆಗೆ ಬೆಚ್ಚಗಿರಿಸುತ್ತದೆ. ಇದನ್ನೂ ಓದಿ: ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್‌ನಲ್ಲಿ ಕೇಂದ್ರ ಸ್ಪಷ್ಟನೆ

    ಬ್ಲೇಜರ್
    ಕೆಲವು ಹುಡುಗಿಯರು ಕ್ಯಾಶುಯಲ್ ಲುಕ್‍ನಲ್ಲಿ ಕಾಣಿಸಿಕೊಳ್ಳುವ ಪುರುಷರನ್ನು ಬಹಳ ಇಷ್ಟಪಡುತ್ತಾರೆ. ನಿಮ್ಮ ಗೆಳತಿ ಕೂಡ ಕ್ಯಾಶುಯಲ್ ಲುಕ್‍ನಲ್ಲಿ ನೋಡಲು ನಿಮ್ಮನ್ನು ಇಷ್ಟಪಟ್ಟರೆ, ನೀವು ಕ್ಲಾಸಿ ಬ್ಲೇಜರ್ ಧರಿಸಲು ಟ್ರೈ ಮಾಡಿ. ಜೊತೆಗೆ ಪಫ್ಯೂಮ್ ಹಾಕಿಕೊಳ್ಳುವುದನ್ನು ಮರೆಯಬೇಡಿ.

    Blazer

  • ವ್ಯಾಲೆಂಟೈನ್ಸ್ ಡೇ ಬದಲಾಗಿ ಪುಲ್ವಾಮಾ ಬಲಿದಾನ್ ದಿವಸ್ ಆಚರಣೆ

    ವ್ಯಾಲೆಂಟೈನ್ಸ್ ಡೇ ಬದಲಾಗಿ ಪುಲ್ವಾಮಾ ಬಲಿದಾನ್ ದಿವಸ್ ಆಚರಣೆ

    – ಹುತಾತ್ಮ ಯೋಧರಿಗೆ ಪುಷ್ಪ ನಮನ

    ಚಿತ್ರದುರ್ಗ: ಪ್ರೇಮಿಗಳ ದಿನಾಚರಣೆ ಬದಲಾಗಿ ಕೋಟೆನಾಡಿನ ಕಾಲೇಜು ವಿದ್ಯಾರ್ಥಿಗಳಿಂದ ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರ ಬಲಿದಾನ ದಿವಸ್ ಆಚರಣೆ ಮಾಡಲಾಗಿದೆ.

    ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದ ಮುಂಭಾಗದಲ್ಲಿ, ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ನಿವೃತ ಯೋಧರು ಸೇರಿ ಪುಲ್ವಾಮಾದಲ್ಲಿ ವೀರ ಮರಣ ಹೊಂದಿದ 40 ಜನ ವೀರಯೋಧರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

    ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಪುಲ್ವಾಮಾ ದಾಳಿ ಕುರಿತು ಮೆಲಕು ಹಾಕಿದ ನಿವೃತ್ತ ಯೋಧ ಸತ್ಯನಾರಾಯಣ, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಅಮೂಲ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಇಂತಹ ಪ್ರೇಮಿಗಳ ದಿನ ಸೇರಿದಂತೆ ದೈನಂದಿನ ಬದುಕಲ್ಲಿ ದುಷ್ಪರಿಣಾಮ ಬೀರುವ ಆಚರಣೆಗಳನ್ನು ಆಚರಿಸುವ ಬದಲಾಗಿ ರಾಷ್ಟ್ರ ಪ್ರೇಮ ಬೆಳಸಿಕೊಂಡು ದೇಶ ಸೇವೆಗೆ ಮುಂದಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

    ಬಲಿದಾನ್ ದಿವಸ್ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಸತ್ಯನಾರಾಯಣ್ ಉಪನ್ಯಾಸಕರಾದ ಲೇಪಾಕ್ಷ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಸಾರ್ವಜನಿಕರು ಭಾಗಿಯಾಗಿದ್ದರು.

  • ಕೊರೊನಾ ಸಂಕಷ್ಟದಲ್ಲಿ ಕಂಗಾಲಾಗಿದ್ದ ಗುಲಾಬಿ ಬೆಳೆಗಾರರಿಗೆ ಪ್ರೇಮ ದಿನದ ಬಂಪರ್- ಕೈ ಹಿಡಿದ ಗುಲಾಬಿ ಬೆಲೆ

    ಕೊರೊನಾ ಸಂಕಷ್ಟದಲ್ಲಿ ಕಂಗಾಲಾಗಿದ್ದ ಗುಲಾಬಿ ಬೆಳೆಗಾರರಿಗೆ ಪ್ರೇಮ ದಿನದ ಬಂಪರ್- ಕೈ ಹಿಡಿದ ಗುಲಾಬಿ ಬೆಲೆ

    ಕೋಲಾರ: ಕೊರೊನಾ ಸಂಕಷ್ಟದಲ್ಲಿ ನೆಲಕಚ್ಚಿದ್ದ ಗುಲಾಬಿ ಬೆಳೆಗಾರರಿಗೆ ಪ್ರೇಮ ದಿನದ ಬಂಪರ್ ಸಿಕ್ಕಿದ್ದು, ಗುಲಾಬಿ ಬೆಲೆಯಲ್ಲಿ ಏರಿಕೆಯಾಗಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಕೊರೊನಾ ಸಂಕಷ್ಟದಿಂದ ಹೂವು ಬೆಳೆಗಾರರಿಗೆ ಮುಳ್ಳಿನ ಹಾಸಿಗೆಯ ಮೇಲೆ ಮಲಗಿದಂತಾಗಿತ್ತು, ಕಳೆದ ಹತ್ತು ತಿಂಗಳಿಂದ ಯಾವುದೇ ಸಭೆ ಸಮಾರಂಭಗಳಿಲ್ಲದೆ, ಜಾತ್ರೆ ಪೂಜೆಗಳಿಲ್ಲದೆ ಹೂವಿಗೆ ಬೇಡಿಕೆ ಇರಲಿಲ್ಲ. ಅಲ್ಲದೆ ವಿದೇಶಗಳಿಗೆ ರಫ್ತು ಮಾಡಲೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಅದರಲ್ಲೂ ಕೋಲಾರ ಜಿಲ್ಲೆಯ ರೈತರು ಭಾರೀ ಸಂಕಷ್ಟಕ್ಕೊಳಗಾಗಿದ್ದರು.

    ಫೆಬ್ರವರಿ ತಿಂಗಳಲ್ಲಿ ಪ್ರೇಮಿಗಳ ದಿನದ ವಿಶೇಷವಾಗಿ ಗುಲಾಬಿ ಹೂವು ಬೆಳೆದ ರೈತರಿಗೆ ಸುಗ್ಗಿ ಹಬ್ಬ ಎನ್ನುವಂತಾಗಿದೆ. ಹತ್ತು ತಿಂಗಳಿಂದ ಮಕಾಡೆ ಮಲಗ್ಗಿದ್ದ ಗುಲಾಬಿ ಹೂವಿಗೆ ಈಗ ಒಳ್ಳೆಯ ಬೆಲೆ ಬಂದಿದೆ ಅನ್ನೋದು ಹೂವು ಬೆಳೆಗಾರರ ಮಾತು. ಅದಕ್ಕಾಗಿಯೇ ಫ್ರೆಬ್ರವರಿ ತಿಂಗಳು ಬಂತೆಂದ್ರೆ ಗುಲಾಬಿ ಹೂವಿಗೆ ಎಲ್ಲಿಲ್ಲದ ಬೇಡಿಕೆ. ನಮ್ಮ ದೇಶಕ್ಕಿಂತ ವಿದೇಶಗಳಲ್ಲಿ ಡಿಮ್ಯಾಂಡ್ ಜಾಸ್ತಿ ಇರುತ್ತದೆ. ಅದಕ್ಕಾಗಿ ಈಗ ಗುಲಾಬಿ ಹೂವಿಗೆ ಒಳ್ಳೆಯ ಬೇಡಿಕೆ ಬಂದಿದೆ. ಒಂದು ಹೂವಿನ ಬೆಲೆ 8 ರಿಂದ 10 ರೂಪಾಯಿ ವರಗೆ ಮಾರಾಟವಾಗುತ್ತಿದೆ.

    ಕೋಲಾರ ಜಿಲ್ಲೆಯಲ್ಲಿ ಒಟ್ಟು 540 ಹೆಕ್ಟೇರ್ ಪ್ರದೇಶದಲ್ಲಿ ಗುಲಾಬಿ ಹೂವು ಬೆಳೆದರೆ, ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ಗುಲಾಬಿ ಹೂವನ್ನು ರೈತರು ಪಾಲಿ ಹೌಸ್‍ನಲ್ಲಿ ಬೆಳೆಯುತ್ತಾರೆ.

    ಅದರಲ್ಲೂ ದೇಶ ಹಾಗೂ ವಿದೇಶಗಳಲ್ಲೂ ಬಹು ಬೇಡಿಕೆ ಇರುವ ತಾಜ್‍ಮಹಲ್, ಗೋಸ್ಟ್ರೈಕ್, ಅವಲಂಚ್ ವೈಟ್, ಎಲ್ಲೋ, ಸೇರಿದಂತೆ ಹಲವು ಬಗೆಯ ಗುಲಾಬಿ ಹೂ ಗಳನ್ನು ಆಸ್ಟ್ರೇಲಿಯಾ, ಜಪಾನ್, ಸಿಂಗಪೂರ್, ಮಲೇಶಿಯಾ ಗಳಿಗೆ ರಫ್ತು ಮಾಡುತ್ತಾರೆ. ಆದರೆ ಈ ವರ್ಷ ಕೊರೊನಾ ಹಿನ್ನೆಲೆ ಹೂವಿಗೆ ಬೇಡಿಕೆ ಇಲ್ಲದೆ ಎಷ್ಟೋ ಜನರು ಹೂವಿನ ತೋಟವನ್ನೇ ನಾಶ ಮಾಡಿದ್ದು, ಶಕ್ತಿ ಇದ್ದವರು ಮಾತ್ರ ತೋಟವನ್ನು ಕಾಪಾಡಿಕೊಂಡಿದ್ದಾರೆ ಅನ್ನೋದು ರೈತರ ಮಾತು. ಹೀಗೆ ತೋಟವನ್ನು ಕಾಪಾಡಿಕೊಂಡವರಿಗೆ ಈಗ ಉಸಿರಾಡೋದಕ್ಕೆ ಒಳ್ಳೆಯ ಬೆಲೆ ಬಂದಿದೆ.