Tag: ವ್ಯಾಪಾರಿ

  • ಬ್ಯಾಂಕ್‍ನಿಂದ ಡ್ರಾ ಮಾಡಿ ಹೊರಬರ್ತಿದ್ದಂತೆಯೇ 15 ಲಕ್ಷ ರೂ. ದೋಚಿದ್ರು!

    ಬ್ಯಾಂಕ್‍ನಿಂದ ಡ್ರಾ ಮಾಡಿ ಹೊರಬರ್ತಿದ್ದಂತೆಯೇ 15 ಲಕ್ಷ ರೂ. ದೋಚಿದ್ರು!

    ವಿಜಯಪುರ: ವ್ಯಾಪಾರಿಯ ಗಮನವನ್ನು ಬೇರೆ ಕಡೆ ಸೆಳೆದ ಕಳ್ಳರು 15 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ವಿಜಯಪುರ ನಗರದ ಕೆನರಾ ಬ್ಯಾಂಕ್ ಬಳಿ ನಡೆದಿದೆ.

    ನಗರದ ನಿವಾಸಿ ಕುಣಾಲ ಪೋರವಾಲ ಹಣ ಕಳೆದುಕೊಂಡ ವ್ಯಾಪಾರಿ. ಕುಣಾಲ ಅವರು ಆಗ ತಾನೇ ಕೆನರಾ ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ಹೊರ ಬಂದಿದ್ದರು. ಇದನ್ನು ನೋಡಿ ಕುಣಾಲ ಅವರ ಬಳಿಗೆ ಬಂದ ಕಳ್ಳರು, ಸ್ಕೂಟರ್ ಕೆಳಗೆ ಹಣ ಬಿದ್ದಿದೆ ಎಂದು ಹೇಳಿದ್ದಾರೆ. ಕುಣಾಲ ಪೋರವಾಲ ಅವರು ಕೆಳಗೆ ನೋಡುತ್ತಿದ್ದಂತೆಯೇ ಕಳ್ಳರು ಹಣದ ಬ್ಯಾಗ್ ಎಗರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.

    ಕುಣಾಲ ಪೋರವಾಲ ಅವರು ಬೇಳೆಕಾಳು ವ್ಯಾಪಾರಿಯಾಗಿದ್ದು, ತಮ್ಮ ವ್ಯವಹಾರಕ್ಕಾಗಿ 15 ಲಕ್ಷ ರೂ. ವನ್ನು ಬ್ಯಾಂಕ್‍ನಿಂದ ಪಡೆದಿದ್ದರು. ಆದರೆ ಇದೀಗ ಆ ಹಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

    ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕತ್ತಿಯಿಂದ ಕುತ್ತಿಗೆಯನ್ನು ಇರಿದು ವ್ಯಾಪಾರಿ ಬರ್ಬರ ಹತ್ಯೆ -ಸ್ಥಳೀಯರ ಸಮಯ ಪ್ರಜ್ಞೆಯಿಂದ ಆರೋಪಿಗಳು ಸೆರೆ

    ಕತ್ತಿಯಿಂದ ಕುತ್ತಿಗೆಯನ್ನು ಇರಿದು ವ್ಯಾಪಾರಿ ಬರ್ಬರ ಹತ್ಯೆ -ಸ್ಥಳೀಯರ ಸಮಯ ಪ್ರಜ್ಞೆಯಿಂದ ಆರೋಪಿಗಳು ಸೆರೆ

    ಮಡಿಕೇರಿ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ದಲ್ಲಾಳಿಯನ್ನು ಮೂವರು ವ್ಯಕ್ತಿಗಳು ಕತ್ತಿಯಿಂದ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ.

    ಶಫೀಕ್ ಮೃತ ದುರ್ದೈವಿ. ಕಳೆದ ರಾತ್ರಿ 10.30 ಗಂಟೆಗೆ ವಿರಾಜಪೇಟೆಯ ಶಫೀಕ್ ಅವರನ್ನು ಆರೋಪಿಗಳು ಕೊಲೆ ಮಾಡಿದ್ದಾರೆ. ಅಸ್ಸಾಂ ಮೂಲದ ವ್ಯಕ್ತಿಯೊಬ್ಬನ ಜೊತೆ ಮತ್ತೊಬ್ಬ ಪ್ರಮುಖ ಆರೋಪಿ ಕೆದಮುಳ್ಳೂರಿನ ಮಾಳೇಟಿರ ದರ್ಶನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

    ಹತ್ಯೆಗೊಳಗಾಗಿರುವ ಶಫೀಕ್ ರಿಯಲ್ ಎಸ್ಟೇಟ್ ದಲ್ಲಾಳಿ ವೃತ್ತಿಯೊಂದಿಗೆ ಹೋಟೆಲ್ ನಡೆಸುತ್ತಿದ್ದು, ಪತ್ನಿ ಹಾಗೂ ತಾಯಿಯೊಂದಿಗೆ ವಿರಾಜಪೇಟೆ-ಗೋಣಿಕೊಪ್ಪ ರಸ್ತೆಯಲ್ಲಿರುವ ಮಂಜುನಾಥ ನಗರದಲ್ಲಿ ನೆಲೆಸಿದ್ದರು.

    ಎರಡು ದಿನಗಳ ಹಿಂದೆಯಷ್ಟೆ ಶಫೀಕ್ ಪತ್ನಿ ತವರು ಮನೆಗೆ ಹೋಗಿದ್ದರು. ಅಲ್ಲದೇ ಅವರ ತಾಯಿ ಕೃತ್ಯ ನಡೆಯುವ ಸ್ವಲ್ಪ ಹೊತ್ತಿನ ಮೊದಲು ಪಕ್ಕದ ಮನೆಗೆ ತೆರಳಿದ್ದಾರೆ. ಈ ಸಮಯ ಸಾಧಿಸಿ ಶಫೀಕ್ ಒಬ್ಬರೇ ಇರುವುದನ್ನು ಖಾತರಿ ಪಡಿಸಿಕೊಂಡಿರುವ ಕೆದಮುಳ್ಳೂರಿನ ಮಾಳೆಯಂಡ ದರ್ಶನ್ ಹಾಗೂ ಇನ್ನಿಬ್ಬರು ಮನೆಯೊಳಗೆ ಬಂದಿದ್ದಾರೆ. ಇವರ ನಡುವೆ ಮಾತುಕತೆ ನಡೆಯುತ್ತಿದ್ದಂತೆಯೇ ಹಂತಕರು ಶಫೀಕ್ ಅವರ ಮೇಲೆ ಎರಗಿ ಹಲ್ಲೆ ಮಾಡಿ ಕತ್ತಿಯಿಂದ ಕುತ್ತಿಗೆಯ ಭಾಗಕ್ಕೆ ಕಡಿದಿದ್ದಾರೆ. ಕತ್ತಿಯ ಪ್ರಹಾರಕ್ಕೆ ಸಿಲುಕಿ ಶಫೀಕ್ ಸ್ಥಳದಲ್ಲಿಯೇ ಜೀವತೆತ್ತಿದ್ದಾರೆ.

    ಸ್ಥಳೀಯರ ಸಮಯಪ್ರಜ್ಞೆ – ಆರೋಪಿಗಳ ಸೆರೆ:
    ಶಫೀಕ್ ಅವರನ್ನು ಹತ್ಯೆ ಮಾಡುತ್ತಿದ್ದ ಸಂದರ್ಭ ಕಿರುಚಾಟ ಕೇಳಿಬಂದಿದೆ. ಇದರಿಂದ ಎಚ್ಚೆತ್ತ ಸ್ಥಳೀಯರು ಮನೆಯೊಳಗೆ ಏನೋ ಅನಾಹುತ ನಡೆಯುತ್ತಿದೆ ಎಂದು ಊಹಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿ ಮನೆಯನ್ನು ಸುತ್ತುವರಿದಿದ್ದಾರೆ. ಇದರಿಂದಾಗಿ ಆರೋಪಿಗಳ ಪೈಕಿ ಇಬ್ಬರು ಪರಾರಿಯಾಗಲು ಸಾಧ್ಯವಾಗಲಿಲ್ಲ. ಕೂಡಲೇ ಸ್ಥಳಕ್ಕೆ ಧಾವಿಸಿದ ವಿರಾಜಪೇಟೆ ಪೊಲೀಸರು ಆರೋಪಿಗಳಾದ ಮಾಳೇಟಿರ ದರ್ಶನ್ ಹಾಗೂ ಅಸ್ಸಾಂ ಮೂಲದ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸ್ ವೇಷದಲ್ಲಿ ಬಂದು ವ್ಯಾಪಾರಿಯಿಂದ ಚಿನ್ನಾಭರಣ ದೋಚಿದ ಖದೀಮರು

    ಪೊಲೀಸ್ ವೇಷದಲ್ಲಿ ಬಂದು ವ್ಯಾಪಾರಿಯಿಂದ ಚಿನ್ನಾಭರಣ ದೋಚಿದ ಖದೀಮರು

    ಮೈಸೂರು: ಖದೀಮರ ಗುಂಪೊಂದು ಪೊಲೀಸರ ಸೋಗಿನಲ್ಲಿ ಬಂದು ವ್ಯಾಪಾರಿಯೊಬ್ಬರನ್ನು ನಂಬಿಸಿ ಅವರ ಬಳಿಯಿದ್ದ ವಾಚ್, ಚಿನ್ನದ ಚೈನ್ ಹಾಗೂ ಉಂಗುರವನ್ನು ಪಡೆದು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಜಿಲ್ಲೆಯ ಎಂ.ಜಿ ರಸ್ತೆಯ ಜೆ.ಎಸ್.ಎಸ್ ಆಸ್ಪತ್ರೆ ಬಳಿ ನಂಜನಗೂಡು ಮೂಲದ ಗೋಪಾಲ್ ರಸ್ತೆ ಬದಿಯಲ್ಲಿ ನಿಂತಿರುವಾಗ ನಕಲಿ ಪೊಲೀಸರು ಅವರ ಬಳಿ ಬಂದಿದ್ದಾರೆ. ಈ ವೇಳೆ, ಈ ಪ್ರದೇಶದ ಸುತ್ತಾಮುತ್ತಾ ವಂಚಕರ ಹಾವಳಿ ಹೆಚ್ಚಾಗಿದೆ. ನಾವು ಪೊಲೀಸ್ ಸ್ಕ್ವಾಡ್, ವಂಚಕರನ್ನು ಪತ್ತೆ ಮಾಡಲು ಬಂದಿದ್ದೇವೆ ಎಂದು ನಂಬಿಸಿದ್ದಾರೆ.

    ವ್ಯಾಪಾರಿಯನ್ನು ಮರಳುಮಾಡಿದ ಗುಂಪು ನಂತರ, ಮೊದಲು ನಿಮ್ಮ ಕೈಯಲ್ಲಿರೋ ವಾಚ್, ಕೊರಳಲ್ಲಿ ಇರುವ ಚಿನ್ನದ ಸರ ಹಾಗೂ ಉಗುರವನ್ನು ಬಿಚ್ಚಿ ಕಾರಿನಲ್ಲಿಡಿ ಎಂದು ಸೂಚಿಸಿದ್ದಾರೆ.

    ತದನಂತರ ವ್ಯಾಪಾರಿ ಬಳಿ ಇದ್ದ ಚಿನ್ನಾಭರಣವನ್ನು ಬಿಚ್ಚಿಸಿಕೊಂಡು ಕಾರಿನಲ್ಲಿ ಇಡುವ ರೀತಿ ನಾಟಕ ಮಾಡಿ, ಲಪಟಾಯಿಸಿ ಪರಾರಿಯಾಗಿದ್ದಾರೆ. ವಂಚನೆ ಅರಿವಿಗೆ ಬಂದ ಬಳಿಕ ಮೋಸಹೋದ ವ್ಯಾಪಾರಿ ಪೊಲೀಸರ ಮೊರೆ ಹೋಗಿ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ.

    ಸದ್ಯ ಘಟನಾ ಸ್ಥಳಕ್ಕೆ ನಗರದ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೈಸೂರಿನ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹೊರ ರಾಜ್ಯದಿಂದ ಬಂದ ನಿರ್ಗತಿಕರಿಗೆ ವ್ಯಾಪಾರಿಯಿಂದ ಸ್ವೆಟರ್ ದಾನ

    ಹೊರ ರಾಜ್ಯದಿಂದ ಬಂದ ನಿರ್ಗತಿಕರಿಗೆ ವ್ಯಾಪಾರಿಯಿಂದ ಸ್ವೆಟರ್ ದಾನ

    ದಾವಣಗೆರೆ: ಚಳಿಯನ್ನು ಲೆಕ್ಕಿಸದೇ ಬೀದಿಯಲ್ಲಿ ಮಲಗಿಕೊಂಡು ಸಣ್ಣ ಪುಟ್ಟ ವ್ಯಾಪಾರ ನಡೆಸುತ್ತಿದ್ದ ಹೊರ ರಾಜ್ಯದಿಂದ ಬಂದ ನಿರ್ಗತಿಕರಿಗೆ ದಾವಣಗೆರೆಯ ವ್ಯಾಪಾರಿ ಸೋಗಿ ಆರ್ ಶಿವಯೋಗಿ ಎಂಬವರು ಸ್ವೆಟರ್ ನೀಡಿ ಮಾನವೀಯತೆ ಮೆರೆದಿದ್ದಾರೆ.

    ನಗರದ ಗುಂಡಿ ಸರ್ಕಲ್ ಬಳಿ ಅಸ್ಸಾಂ, ಬಿಹಾರದಿಂದ ಬಂದಂತಹ ಹತ್ತಾರು ಕುಟುಂಬಗಳು ಗೃಹ ಉಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಅವರನ್ನೇ ನಂಬಿಕೊಂಡು ಬಂದಿರುವ ಮಕ್ಕಳ ಪ್ರತಿನಿತ್ಯ ಚಳಿಯಲ್ಲಿ ಬೀದಿ ಬದಿಯಲ್ಲಿ ಮಲಗಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು.

    ಇದನ್ನು ನೋಡಿದ ವ್ಯಾಪಾರಿ ಸೋಗಿ ಆರ್ ಶಿವಯೋಗಿ ಹಾಗೂ ಅವರ ಕುಟುಂಬದವರು ಮಕ್ಕಳಿಗೆ ಸೇರಿದಂತೆ ಬಡ ಕುಟುಂಬದವರಿಗೆ ಸ್ವೆಟರ್ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಸುಮಾರು 80ಕ್ಕೂ ಹೆಚ್ಚು ನಿರ್ಗತಿಕರಿಗೆ ಸ್ವೆಟರ್ ದಾನ ಮಾಡಿದ್ದಾರೆ.

    ಮನೆ ಇರುವವರು ಬೆಚ್ಚಗೆ ಮನೆಯಲ್ಲಿ ಮಲಗಿಕೊಳ್ಳುತ್ತಾರೆ. ಆದರೆ ಮನೆ ಇಲ್ಲದೇ ಬೀದಿ ಬದಿ ವ್ಯಾಪಾರವನ್ನೇ ನಂಬಿಕೊಂಡು ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬಂದಿರುವ ಜನರು ಚಳಿಯಲ್ಲೇ ಮಲಗಿಕೊಳ್ಳುತ್ತಿದ್ದರು. ಅಂತಹವರಿಗೆ ನಮ್ಮದೊಂದು ಸಣ್ಣ ಕಾಣಿಕೆಯಾಗಿ ಈ ರೀತಿಯ ಸಹಾಯ ಮಾಡಿದ್ದೇವೆ. ಇದರಲ್ಲಿ ನಮಗೆ ತೃಪ್ತಿ ತಂದಿದೆ ಎಂದು ಆನಂದ ವ್ಯಕ್ತಪಡಿಸಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಸಿಬಿ ಅಧಿಕಾರಿಗಳ ಅಮಾನವೀಯ ವರ್ತನೆ ಖಂಡಿಸಿ ಬಳ್ಳಾರಿಯಲ್ಲಿ ನಾಳೆ ಪ್ರತಿಭಟನೆ

    ಸಿಸಿಬಿ ಅಧಿಕಾರಿಗಳ ಅಮಾನವೀಯ ವರ್ತನೆ ಖಂಡಿಸಿ ಬಳ್ಳಾರಿಯಲ್ಲಿ ನಾಳೆ ಪ್ರತಿಭಟನೆ

    ಬಳ್ಳಾರಿ: ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಅಂಬಿಡೆಂಟ್ ಪ್ರಕರಣ ಸಂಬಂಧ ರಾಜ್ ಮಹಲ್ ಜ್ಯುವೆಲ್ಲರ್ಸ್ ಮಾಲೀಕ ರಮೇಶ್ ಸತ್ರಸಾಲ್ ಮೇಲೆ ಸಿಸಿಬಿ ಪೊಲೀಸರು ಹಲ್ಲೆ ಮಾಡಿರುವುದನ್ನು ಖಂಡಿಸಿ ಬಳ್ಳಾರಿ ವ್ಯಾಪಾರಸ್ಥರು ಸೋಮವಾರ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.

    ಚೇಂಬರ್ ಆಪ್ ಕಾರ್ಮಸ್ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ವ್ಯಾಪಾರಿಗಳು ಮುಂದಾಗಿದ್ದಾರೆ. ಪ್ರತಿಭಟನೆ ಬಳಿಕ ಎಸ್‍ಪಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದಾಗಿ ಬಳ್ಳಾರಿ ವ್ಯಾಪಾರಸ್ಥರು ತಿಳಿಸಿದ್ದಾರೆ. ಇದನ್ನು ಓದಿ: ಹೊಡೆದು ಜನಾರ್ದನ ರೆಡ್ಡಿ ಹೆಸರು ಹಾಕಿಸಿದ್ದಾರೆ- ಡೀಲ್ ಪ್ರಕರಣಕ್ಕೆ ಸ್ಫೋಟಕ ತಿರುವು

    ಏನಿದು ಪ್ರಕರಣ?:
    ಇಡಿ ಅಧಿಕಾರಿಗಳಿಂದ ಪಾರು ಮಾಡಲು ಅಂಬಿಡೆಂಟ್ ನ ಫರೀದ್ ಗೆ ಜನಾರ್ದನ ರೆಡ್ಡಿ 57 ಕೆ.ಜಿ. ಚಿನ್ನ ಬೇಡಿಕೆ ಇಟ್ಟಿದ್ದರು. ಹೀಗಾಗಿ ಫರೀದ್ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಮೂಲಕ ಬಳ್ಳಾರಿಯ ರಮೇಶ ಸತ್ರಸಾಲ್ ಗೆ ಚಿನ್ನ ನೀಡಲು ತಿಳಿಸಿದ್ದರು. ಇದನ್ನು ಒಪ್ಪಿಕೊಂಡಿದ್ದ ರಮೇಶ್ ಸತ್ರಸಾಲ್, ಬೆಂಗಳೂರಿನ ಚಿನ್ನದ ವ್ಯಾಪಾರಿ ರಮೇಶ್ ಕೊಠಾರಿಗೆ ಡೀಲ್ ಕೊಟ್ಟಿದ್ದರು. ಈ ಮೂಲಕ ಅಕ್ರಮವಾಗಿ ರಮೇಶ್ ಸತ್ರಸಾಲ್ ಜನಾರ್ದನ ರೆಡ್ಡಿಗೆ ಚಿನ್ನ ತಲುಪಿಸಿದ್ದರು. ಈ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು ರಮೇಶ್ ಅವರನ್ನು ವಿಚಾರಣೆಗೆ ಒಳಪಡಿಸಿ ಹಲ್ಲೆ ಮಾಡಿದ್ದಾರೆ.

    ಪ್ರಕರಣದ ಎ4 ಆರೋಪಿ ರಮೇಶ್ ಅವರನ್ನು ಬಳ್ಳಾರಿಯಿಂದ ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಬಂದು, ಹಲ್ಲೆ ಮಾಡಿದ್ದಾರೆ. ಅಲ್ಲದೇ ಜನಾರ್ದನ ರೆಡ್ಡಿ ಹಾಗೂ ಅಲಿಖಾನ್ ಅವರ ಹೆಸರು ಹೇಳುವಂತೆ ದೌರ್ಜನ್ಯ ನೀಡಿದ್ದಾರೆ. ರಮೇಶ್ ಮೇಲೆ ಹಲ್ಲೆ ಮಾಡಿರುವಂತಹ ಫೋಟೋಗಳು ನಮ್ಮಲ್ಲಿದೆ. ರಾಜಕೀಯ ಒತ್ತಡದಿಂದ ಜನಾರ್ದನ ರೆಡ್ಡಿ ಹೆಸರು ಇದರಲ್ಲಿ ತಳುಕು ಹಾಕಿಕೊಂಡಿದೆ. ಜನಾರ್ದನ ರೆಡ್ಡಿ ಅವರನ್ನು ಬಂಧಿಸಲೇಬೇಕೆಂದು ಈ ಪ್ರಕರಣದ ಹಿಂದೆ ದೊಡ್ಡ ಮಟ್ಟದಲ್ಲಿ ಇರುವಂತಹ ರಾಜಕಾರಣಿಗಳ ಕೈಗಳ ಕೈವಾಡವಿದೆ ಎಂದು ವಕೀಲ ಚಂದ್ರಶೇಖರ್ ಗಂಭೀರವಾಗಿ ಆರೋಪಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 2.5 ಕೋಟಿ ರೂ. ಮೌಲ್ಯದ ಭತ್ತ ಖರೀದಿಸಿ ಎಸ್ಕೇಪ್

    2.5 ಕೋಟಿ ರೂ. ಮೌಲ್ಯದ ಭತ್ತ ಖರೀದಿಸಿ ಎಸ್ಕೇಪ್

    ಕೊಪ್ಪಳ: ಕಳೆದೆರಡು ತಿಂಗಳಿನಿಂದ ಮಳೆ ಕೈ ಕೊಟ್ಟಿದ್ದರಿಂದ ಜಿಲ್ಲೆಯ ಮಳೆಯಾಶ್ರಿತ ಕೃಷಿಕರು ಕಂಗಾಲಾಗಿದ್ದಾರೆ. ಶಿವಮೊಗ್ಗ ಭಾಗದಲ್ಲಿ ಮಳೆಯಾಗಿ ತುಂಗಭದ್ರಾ ಡ್ಯಾಂ ತುಂಬಿದ್ದು, ಆ ಜಿಲ್ಲೆಯ ಒಂದಷ್ಟು ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಒಂದು ಕಡೆ ಕೊಪ್ಪಳದ ಗಂಗಾವತಿ ಹಾಗೂ ಕಾರಟಗಿ ಭಾಗದ ಭತ್ತ ಬೆಳೆಗಾರರಿಗೆ ತಮ್ಮ ಭತ್ತ ಮಾರಾಟ ಮಾಡಿದ್ದ ಹಣ ಸಿಕ್ಕಿಲ್ಲ. ಭತ್ತ ಖರೀದಿಸಿದ್ದ ವ್ಯಾಪಾರಿ ಉತ್ಪನ್ನದ ಜೊತೆ ಪರಾರಿಯಾಗಿದ್ದಾನೆ.

    ಬಳ್ಳಾರಿ ಮೂಲದ ವೀರೇಶ್ ಎಂಬಾತ ರೈತರಿಗೆ ಮೋಸ ಮಾಡಿದ ವ್ಯಾಪಾರಿ. ವೀರೇಶ್ ಎರಡು ವರ್ಷಗಳಿಂದ ಗಂಗಾವತಿಯ ರಾಂಪುರದಲ್ಲಿ ವಿಶ್ವಾಸ್ ಟ್ರೇಡರ್ಸ್ ಹೆಸರಿನಲ್ಲಿ ಭತ್ತ ವ್ಯಾಪಾರ ನಡೆಸುತ್ತಿದ್ದನು. ಈ ವರ್ಷದ ಜನವರಿ ತಿಂಗಳಿಂದ ಜೂನ್‍ವರೆಗೆ ಸುಮಾರು 100ಕ್ಕೂ ಹೆಚ್ಚು ರೈತರಿಂದ 2.5 ಕೋಟಿ ಮೌಲ್ಯದ ಭತ್ತ ಖರೀದಿಸಿದ್ದ. ಮಾರುಕಟ್ಟೆಯಲ್ಲಿ ಪ್ರತಿ ಭತ್ತದ ಚೀಲಕ್ಕೆ 1100 ರೂಪಾಯಿ ಇತ್ತು. ಆದರೆ ವೀರೇಶ್ 1,250 ರೂಪಾಯಿಗೆ ಭತ್ತ ಖರೀದಿ ಮಾಡಿದ್ದನು.

    ಭತ್ತ ಖರೀದಿಸುವ ವೇಳೆ ಸ್ಥಳೀಯರಾದ ನಾಸೀರ್ ಮತ್ತು ನಾಗೇಶ್ವರ್ ರಾವ್ ಇಬ್ಬರು ವೀರೇಶ್‍ನಿಗೆ ಸಾಥ್ ನೀಡಿದ್ದರು. ರೈತರಿಗೆ ಹಣ ನೀಡುವ ಬದಲು ವೀರೇಶ್ ಚೆಕ್ ನೀಡಿದ್ದನು. ಎರಡು ತಿಂಗಳ ನಂತರ ಹಣ ಡ್ರಾ ಮಾಡುವಂತೆ ಹೇಳಿ ನಾಪತ್ತೆಯಾಗಿದ್ದಾನೆ.

    ಎರಡು ತಿಂಗಳು ನಂತರ ಬ್ಯಾಂಕಿಗೆ ಹೋದಾಗ ಚೆಕ್ ಬೌನಸ್ ಆಗಿದೆ. ನಂತರ ರೈತರು ವೀರೇಶ್‍ನನ್ನು ಸಂಪರ್ಕಿಸಿದ್ರೆ ಆತ ಊರು ತೊರೆದಿರುವ ವಿಚಾರ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ರೈತರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ನಾಸಿರ್ ಮತ್ತು ನಾಗೇಶ್ವರರಾವ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ನಿಲ್ಲದ ಮಕ್ಕಳ ಕಳ್ಳರ ವದಂತಿ: ಉದ್ದಿನ ಬೇಳೆ ಮಾರಾಟ ಮಾಡಲು ಬಂದವನನ್ನ ಥಳಿಸಿದ ಗ್ರಾಮಸ್ಥರು

    ನಿಲ್ಲದ ಮಕ್ಕಳ ಕಳ್ಳರ ವದಂತಿ: ಉದ್ದಿನ ಬೇಳೆ ಮಾರಾಟ ಮಾಡಲು ಬಂದವನನ್ನ ಥಳಿಸಿದ ಗ್ರಾಮಸ್ಥರು

    ಹಾವೇರಿ: ರಾಜ್ಯದಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚಾಗುತ್ತಿದ್ದು, ಅನೇಕ ಅಮಾಯಕರು ಬಲಿಯಾಗುತ್ತಿದ್ದಾರೆ. ಇಂತಹದ್ದೊಂದು ಘಟನೆ ಹಾವೇರಿ ತಾಲೂಕಿನ ಗೌರಾಪುರ ಗ್ರಾಮದಲ್ಲಿ ನಡೆದಿದೆ.

    ಗುರುವಾರ ಗೌರಾಪುರ ಗ್ರಾಮಕ್ಕೆ ಉದ್ದಿನ ಬೇಳೆ ಮಾರಾಟ ಮಾಡಲು ಬಂದಿದ್ದ ಯುವಕನನ್ನ ಮಕ್ಕಳ ಕಳ್ಳನೆಂದು ಶಂಕಿಸಿ ಗ್ರಾಮಸ್ಥರು ಥಳಿಸಿದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಇದನ್ನು ಓದಿ: ರಾತ್ರಿಯಿಡೀ ಖಾರದಪುಡಿ, ದೊಣ್ಣೆ ಹಿಡಿದುಕೊಂಡು ಓಡಾಡಿದ ಮಹಿಳೆಯರು!

    ಯುವಕನ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಆದರೆ ಗುರುವಾರ ಹಲ್ಲೆಗೊಳಗಾದ ಯುವಕ ಗ್ರಾಮಕ್ಕೆ ಉದ್ದಿನ ಬೇಳೆ ಮಾರಾಟಕ್ಕೆ ಬಂದಿದ್ದರು. ಮಾರಾಟಗಾರನಿಗೆ ಕನ್ನಡ ಭಾಷೆ ಬಾರದಿರುವುದರಿಂದ ಗ್ರಾಮಸ್ಥರಲ್ಲಿ ಶಂಕಿಸಿ, ಮೊದಲು ಮಕ್ಕಳ ಕಳ್ಳನೆಂದು ತಿಳಿದು ಹಲ್ಲೆ ಮಾಡಿದ್ದಾರೆ. ಬಳಿಕ ಉದ್ದಿನ ಬೇಳೆ ಚೀಲವನ್ನು ತಗೆದು ಪರಿಶೀಲನೆ ನಡೆಸಿದಾಗ ಮಕ್ಕಳ ಬಟ್ಟೆ ಸಿಕ್ಕಿವೆ. ಮಕ್ಕಳ ಬಟ್ಟೆ ಕಳ್ಳ ಎಂದು ಮತ್ತೇ ಹೊಡೆದಿದ್ದಾರೆ. ಇದನ್ನು ಓದಿ: ನಿಲ್ಲದ ಮಕ್ಕಳ ಕಳ್ಳರ ವದಂತಿ – ಐವರು ಭಿಕ್ಷುಕಿಯರನ್ನು ಕೂಡಿ ಹಾಕಿದ್ರು!

    ವಿಚಾರಣೆ ಬಳಿಕ ಯುವಕ ಮಕ್ಕಳ ಕಳ್ಳನಲ್ಲ ಎನ್ನುವುದು ತಿಳಿದು ಆತನನ್ನು ಕೈಬಿಟ್ಟು ಕಳಿಸಿದ್ದಾರೆ. ಉದ್ದಿನ ಬೇಳೆ ಚೀಲದಲ್ಲಿ ಮಕ್ಕಳ ಬಟ್ಟೆ ಸಿಕ್ಕಿದ್ದೇ ಶಂಕೆಗೆ ಕಾರಣವಾಗಿದೆ. ಹಾವೇರಿ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • 8.64 ಲಕ್ಷ ರೂ. ಕರೆಂಟ್ ಬಿಲ್ – ಆತ್ಮಹತ್ಯೆಗೆ ಶರಣಾದ ತರಕಾರಿ ವ್ಯಾಪಾರಿ

    8.64 ಲಕ್ಷ ರೂ. ಕರೆಂಟ್ ಬಿಲ್ – ಆತ್ಮಹತ್ಯೆಗೆ ಶರಣಾದ ತರಕಾರಿ ವ್ಯಾಪಾರಿ

    ಮುಂಬೈ: ಮಹಾರಾಷ್ಟ್ರ ವಿದ್ಯುತ್ ಸರಬರಾಜು ನಿಗಮವು ತರಕಾರಿ ವ್ಯಾಪಾರ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬರಿಗೆ 8.64 ಲಕ್ಷ ರೂ. ವಿದ್ಯುತ್ ಬಿಲ್ ನೀಡಿದ್ದು, ಭಾರೀ ಮೊತ್ತದ ಮೊತ್ತವನ್ನು ಕಂಡು ಹೆದರಿದ ವ್ಯಾಪಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಔರಂಗಬಾದ್ ಪ್ರದೇಶದಲ್ಲಿ ನಡೆದಿದೆ.

    40 ವರ್ಷ ವಯಸ್ಸಿನ ಜಗನ್ನಾಥ್ ಆತ್ಮಹತ್ಯೆಗೆ ಶರಣಾಗಿರುವ ವ್ಯಾಪಾರಿ. ಮಹಾರಾಷ್ಟ್ರ ರಾಜ್ಯ ವಿದ್ಯುತ್ ಸರಬರಾಜು ನಿಗಮವು (ಎಂಎಸ್‍ಇಡಿಸಿಎಲ್) ಏಪ್ರಿಲ್ ತಿಂಗಳ ಅಂತ್ಯಕ್ಕೆ ಭಾರೀ ಮೊತ್ತದ ವಿದ್ಯುತ್ ಬಿಲ್ ನೀಡಿತ್ತು. ಇದನ್ನು ಕಂಡ ಜಗನ್ನಾಥ್ ಗುರುವಾರ ಬೆಳಗ್ಗೆ ಔರಂಗಬಾದ್ ಪ್ರದೇಶದ ಭರತ್ ನಗರದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸದ್ಯ ಪ್ರಕರಣದ ಕುರಿತು ತನಿಖೆ ನಡೆಸಿರುವ ಎಂಎಸ್‍ಇಡಿಸಿಎಲ್ ಭಾರೀ ಮೊತ್ತದ ಬಿಲ್ ನೀಡಿ ತಪ್ಪು ಮಾಡಿದ್ದ ತನ್ನ ಅಧಿಕಾರಿಯನ್ನು ಅಮಾನತು ಮಾಡಿದೆ. ಅಂದಹಾಗೇ ಜಗನ್ನಾಥ್ ಅವರಿಗೆ ನೀಡಿದ ಬಿಲ್ ನಲ್ಲಿ ಎರಡು ಕೊಠಡಿಯ ಶೆಡ್ ನಲ್ಲಿ 55,519 ಯೂನಿಟ್ಸ್ ವಿದ್ಯುತ್ ಬಳಕೆ ಮಾಡಲಾಗಿದ್ದು, 8,64,781 ರೂ ಪಾವತಿ ಮಾಡಬೇಕು ಎಂದು ನಮೂದಿಸಿಲಾಗಿತ್ತು. ಈ ಶೆಡ್ ನಲ್ಲಿ ಜಗನ್ನನಾಥ್ ಕಳೆದ 20 ವರ್ಷಗಳಿಂದ ತರಕಾರಿ ವ್ಯಾಪಾರ ನಡೆಸುತ್ತಿದ್ದರು.

    ಮೀಟರ್ ರೀಡಿಂಗ್ ವೇಳೆ ಅಧಿಕಾರಿ ಬಳಕೆ ಮಾಡಿದ್ದ 6,117.8 ಕಿಲೋವ್ಯಾಟ್ ಬದಲಾಗಿ 61,178 ಕಿಲೋ ವ್ಯಾಟ್ ಎಂದು ನಮೂದಿಸಿದ್ದು ಈ ಅವಘಡಕ್ಕೆ ಕಾರಣವಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ವಿದ್ಯುತ್ ನಿಗಮ ತಿಳಿಸಿದೆ. ಅಲ್ಲದೇ ಮೀಟರ್ ಕಾರ್ಯನಿರ್ವಹಿಸುತ್ತಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಪುಂಡಲೀಕ ನಗರದಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಧಾರವಾಡದಲ್ಲಿ ಬರೋಬ್ಬರಿ 4.5 ಕೆ.ಜಿ ಚಿನ್ನ ಪೊಲೀಸರಿಂದ ವಶ!

    ಧಾರವಾಡದಲ್ಲಿ ಬರೋಬ್ಬರಿ 4.5 ಕೆ.ಜಿ ಚಿನ್ನ ಪೊಲೀಸರಿಂದ ವಶ!

    ಧಾರವಾಡ: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇರುವ ಬೆನ್ನಲ್ಲೇ ಧಾರವಾಡದಲ್ಲಿ ಬರೋಬ್ಬರಿ 4.5 ಕೆ.ಜಿ ಚಿನ್ನ ಸಿಕ್ಕಿದೆ. ವಿಚಾರಣೆ ನಡೆಸಿದ ವೇಳೆ ಪತ್ತೆಯಾದ ಚಿನ್ನ ನಕಲಿ ಎನ್ನುವ ವಿಚಾರ ಪತ್ತೆಯಾಗಿದೆ.

    ಹೌದು. ಗುಜರಾತ್ ಮೂಲದ ವ್ಯಾಪಾರಿಯೊಬ್ಬ ಈ ಚಿನ್ನವನ್ನ ಅಹದಾಬಾದ್‍ದಿಂದ ಹುಬ್ಬಳ್ಳಿ ತೆಗೆದುಕೊಂಡು ಹೋಗುತ್ತಿದ್ದ. ಚುನಾವಣೆ ಇರುವ ಹಿನ್ನೆಲೆ ಧಾರವಾಡ ನರೇಂದ್ರ ಕ್ರಾಸ್ ಬಳಿ ಪೊಲೀಸರು ತಪಾಸಣೆ ಮಾಡಿದರು. ನಂತರ ಈ ಚಿನ್ನವನ್ನು ವಶಕ್ಕೆ ಪಡೆದಿದ್ದರು.

    ನಂತರ ಇದನ್ನು ತೂಕ ಮಾಡಿದಾಗ 4.5 ಕೆಜಿ ಇತ್ತು. ಇದನ್ನು ನೋಡಿದ ಚುನಾವಣಾಧಿಕಾರಿಗಳು ಚಿನ್ನವನ್ನು ಪರಿಶೀಲನೆ ಮಾಡಿದಾಗ ಅದು ನಕಲಿ ಚಿನ್ನ ಎಂದು ಗೊತ್ತಾಗಿದೆ. ಇನ್ನು ಈ ರೋಲ್ಡ್ ಗೋಲ್ಡ್ ನ್ನು ತೆಗೆದುಕೊಂಡು ಹೋಗುತ್ತಿದ್ದ ವ್ಯಾಪಾರಿಗೆ ಕೇಳಿದರೆ ಇದು 5 ಸಾವಿರದ ನಕಲಿ ಚಿನ್ನವಾಗಿದ್ದು, ಸ್ಯಾಂಪಲ್ ತೋರಿಸಲು ಹೊರಟಿದ್ದೆ ಎಂದು ಉತ್ತರಿಸಿದ್ದಾನೆ.

    ಸದ್ಯ ಪೊಲೀಸರು ಆ ವ್ಯಾಪಾರಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ದೀಪಕ್ ಹತ್ಯೆ ನಡೆದ ರಾತ್ರಿ ಮಂಗ್ಳೂರಿನಲ್ಲಿ ವ್ಯಾಪಾರಿಯ ಮೇಲೆ ಮಾರಣಾಂತಿಕ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ

    ದೀಪಕ್ ಹತ್ಯೆ ನಡೆದ ರಾತ್ರಿ ಮಂಗ್ಳೂರಿನಲ್ಲಿ ವ್ಯಾಪಾರಿಯ ಮೇಲೆ ಮಾರಣಾಂತಿಕ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ

    ಮಂಗಳೂರು: ದೀಪಕ್ ರಾವ್ ಹತ್ಯೆಯಾದ ಬುಧವಾರದಂದು ಮಂಗಳೂರಿನ ಕೊಟ್ಟಾರಚೌಕಿಯಲ್ಲಿ ವ್ಯಾಪಾರಿ ಬಶೀರ್ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆಯ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.

    ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಶೀರ್ ರಾತ್ರಿ 11.30ರ ಸುಮಾರಿಗೆ ತನ್ನ ಮನೆಯತ್ತ ತೆರಳುತ್ತಿದ್ದರು. ಈ ವೇಳೆ 3 ಬೈಕ್‍ನಲ್ಲಿ ಬಂದ 7 ಜನರ ತಂಡ ಏಕಾಏಕಿ ಬಶೀರ್ ಮೇಲೆ ತಲ್ವಾರ್ ದಾಳಿ ನಡೆಸಿ ಪರಾರಿಯಾಗಿದ್ದರು.

    ಈ ದಾಳಿ ಭಯಾನಕವಾಗಿದ್ದು ಅಂಬುಲೆನ್ಸ್ ಚಾಲಕ ಶೇಖರ್ ಎಂಬುವವರು ಬಶೀರ್ ಅವರನ್ನು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಶೀರ್ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ.

    ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಶೇಖರ್, ರಾತ್ರಿ  ನಾನು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದೆ. ಈ ವೇಳೆ ದಾರಿ ಮಧ್ಯೆ ವ್ಯಕ್ತಿ ಒಬ್ಬರು ಬಿದ್ದಿದ್ದರು. ಅಪಘಾತವಾಗಿ ರಸ್ತೆಗೆ ಬಿದ್ದಿರಬಹುದು ಎಂದು ಭಾವಿಸಿ ಅವರನ್ನು ಅಂಬುಲೆನ್ಸ್ ಹಾಕಿ ಆಸ್ಪತ್ರೆಗೆ ದಾಖಲಿಸಿದೆ. 5, 10 ನಿಮಿಷ ತಡವಾಗಿದ್ದರೂ ಅವರು ಬದುಕಿ ಉಳಿಯುವುದು ಕಷ್ಟವಾಗಿತ್ತು. ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇವತ್ಯಾಕೆ ಬಂದೆ..ನೀನ್ ಹೋಗು ಮೊದ್ಲು, ಚೆಕ್ ಬೇಡ ಏನು ಬೇಡ – ಶಾಸಕ ಬಾವಾಗೆ ದೀಪಕ್ ಕುಟುಂಬಸ್ಥರ ಬೈಯ್ಗುಳ

    https://youtu.be/prf8LAzRcus