Tag: ವೈಷ್ಣವ್ ತೇಜ್

  • ರೀತು ವರ್ಮಾ ಜೊತೆ ವೈಷ್ಣವ್ ತೇಜ್ ಮದುವೆ

    ರೀತು ವರ್ಮಾ ಜೊತೆ ವೈಷ್ಣವ್ ತೇಜ್ ಮದುವೆ

    ಮೆಗಾಸ್ಟಾರ್ ಕುಟುಂಬದ ಕುಡಿ ವರುಣ್ ತೇಜ್ (Varun Tej) ಇತ್ತೀಚೆಗೆ ಲಾವಣ್ಯ ತ್ರಿಪಾಠಿ ಜೊತೆ ಹಸೆಮಣೆ ಏರಿದ್ದರು. ಇದೀಗ ಈ ಬೆನ್ನಲ್ಲೇ ವೈಷ್ಣವ್ ತೇಜ್ ಮದುವೆ ಬಗ್ಗೆ ಗುಸು ಗುಸು ಶುರುವಾಗಿದೆ. ತೆಲುಗು ನಟಿ ರೀತು ವರ್ಮಾ ಜೊತೆ ವೈಷ್ಣವ್ (Vaishnav Tej) ಮದುವೆ ಎಂಬ ಸುದ್ದಿ ಸಖತ್ ಸೆನ್ಸೇಷನ್ ಕ್ರಿಯೆಟ್ ಮಾಡಿದೆ.

    ನಟಿ ರೀತು ಜೊತೆ ಹಲವು ವರ್ಷಗಳಿಂದ ವೈಷ್ಣವ್ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ವರುಣ್- ಲಾವಣ್ಯ ಮದುವೆಗೆ ರೀತು (Reethu Varma) ಹಾಜರಿ ಹಾಕಿದ್ದರು. ಮೆಗಾಸ್ಟಾರ್ ಕುಟುಂಬದ ಖಾಸಗಿ ಪಾರ್ಟಿಗಳಲ್ಲೂ ರೀತು ಕಾಣಿಸಿಕೊಂಡಿದ್ದರು.

    ವರುಣ್ ಬಳಿಕ ವೈಷ್ಣವ್-ರೀತು ಮದುವೆ ಎಂದೇ ಸಖತ್ ವೈರಲ್ ಆಗುತ್ತಿದೆ. ಈ ಸುದ್ದಿ ಹಬ್ಬುತ್ತಿದ್ದಂತೆ ಲಾವಣ್ಯ ತ್ರಿಪಾಠಿ ಅವರ ಸ್ನೇಹಿತೆ ರೀತು ಹಾಗಾಗಿ ನಮ್ಮ ಮನೆಯ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಎಂದು ವೈಷ್ಣವ್ ಸ್ಪಷ್ಟನೆ ನೀಡಿದ್ದರು. ರೀತು ಜೊತೆಗಿನ ಮದುವೆ ವಿಚಾರವನ್ನ ತಳ್ಳಿಹಾಕಿದ್ದರು. ಇದನ್ನೂ ಓದಿ:ಒಟಿಟಿಯತ್ತ ಮುಖ ಮಾಡಿದ ಕೀರ್ತಿ ಸುರೇಶ್

    ಸದ್ಯ ಶ್ರೀಲೀಲಾ ಜೊತೆ ನಟಿಸಿರುವ ಆದಿಕೇಶವ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ. ಇಬ್ಬರ ಕೆಮಿಸ್ಟ್ರಿಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಅಂತೆ ಕಂತೆ ಸುದ್ದಿನೆಲ್ಲಾ ಸೈಡಿಗಿಟ್ಟು ಸಿನಿಮಾಗಳ ಕಡೆ ವೈಷ್ಣವ್ ಗಮನ ಕೊಡುತ್ತಿದ್ದಾರೆ.

  • ಜನಾರ್ದನ್ ರೆಡ್ಡಿಗೂ ‘ಆದಿಕೇಶವ’ ಸಿನಿಮಾ ಕಥೆಗೂ ಸಂಬಂಧ ಇದೆಯಾ?

    ಜನಾರ್ದನ್ ರೆಡ್ಡಿಗೂ ‘ಆದಿಕೇಶವ’ ಸಿನಿಮಾ ಕಥೆಗೂ ಸಂಬಂಧ ಇದೆಯಾ?

    ವೈಷ್ಣವ್ ತೇಜ್ (Vaishnav Tej) ನಟನೆಯ ‘ಆದಿಕೇಶವ’ (Adikesava) ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಸಮಯದಲ್ಲಿ ಗ್ಲಿಂಪ್ಸ್ ಗೆ (Glimpse) ರಿಲೀಸ್ ಆಗಿತ್ತು. ಆ ಗ್ಲಿಂಪ್ಸ್ ನ ವಿಡಿಯೋ ತುಣುಕೊಂದು ಭಾರೀ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಜನಾರ್ದನ್ ರೆಡ್ಡಿ ಸಿರಿತನದ ಅವನತಿಗೆ ಕಾರಣವಾದ ಸುಗ್ಗಳಮ್ಮ ದೇವಿಯ ಹೆಸರು ಪ್ರಸ್ತಾಪವಾಗುತ್ತಿದೆ. ಈ ಕಾರಣದಿಂದಾಗಿಯೇ ರೆಡ್ಡಿಗೂ ಈ ಸಿನಿಮಾಗೂ (Cinema) ಸಂಬಂಧವಿದೆ ಎಂದು ಹೇಳಲಾಗುತ್ತಿದೆ.

    ರಿಲೀಸ್ ಆದ ಗ್ಲಿಂಪ್ಸ್ ಡೈಲಾಗ್ ಗಳು ಸಖತ್ ಆಗಿದ್ದು, ಗಾಲಿ ಜನಾರ್ದನ್ ರೆಡ್ಡಿ (Janardhan Reddy) ಜೀವನದಲ್ಲಿ ನಡೆದ ಘಟನೆಗಳನ್ನು ನೆನಪಿಸುತ್ತಿವೆ. ಗ್ಲಿಂಪ್ಸ್ ನಲ್ಲಿ ಊರಲ್ಲೊಂದು ದೇವಸ್ಥಾನ. ಅದರ ಸುತ್ತ ನಡೆಯುವ ಗಣಿಗಾರಿಕೆಯನ್ನು ತೋರಿಸಲಾಗುತ್ತದೆ. ಗಣಿಗಾರಿಕೆಯ ನೆಪದಲ್ಲಿ ದೇವಸ್ಥಾನವನ್ನು ಕೆಡವಲು ತಯಾರಾಗುತ್ತಾರೆ. ಆಗ ದೇವಸ್ಥಾನ ರಕ್ಷಣೆಗೆ ನಾಯಕ ಬರುತ್ತಾನೆ. ಈ ದೃಶ್ಯವೇ ಜನಾರ್ದನ್ ರೆಡ್ಡಿ ಅವರನ್ನು ನೆನಪಿಸುತ್ತದೆ. ಇದನ್ನೂ ಓದಿ:ಲಂಡನ್‌ನಲ್ಲಿ ‘ಸಲಾರ್’ ನಟಿ ಶ್ರುತಿ ಹಾಸನ್ ನ್ಯೂ ಫೋಟೋಶೂಟ್

     

    ಜನಾರ್ದನ್ ರೆಡ್ಡಿ ಮೈನಿಂಗ್ ನಡೆಸುತ್ತಿರುವ ಸಂದರ್ಭದಲ್ಲಿ ಆಂಧ್ರ- ಕರ್ನಾಟಕ ಗಡಿ ಭಾಗದಲ್ಲಿರುವ ಸುಗ್ಗಳಮ್ಮ ದೇವಸ್ಥಾನವನ್ನು ಕೆಡವುತ್ತಾರೆ. ಯಾರು ಹೇಳಿದರೂ, ಅವರು ಕೇಳುವುದಿಲ್ಲ. ಆ ದೇವಸ್ಥಾನವನ್ನು ಕೆಡವಿದ ನಂತರವೇ ರೆಡ್ಡಿ ಅವನತಿ ಶುರುವಾಯಿತು ಎಂದು ಈಗಲೂ ಆ ಊರಿನ ಜನತೆ ಮಾತಾಡುತ್ತಾರೆ. ಆ ದೃಶ್ಯವನ್ನೇ ಆದಿಕೇಶವ ಸಿನಿಮಾದಲ್ಲಿ ತರಗಾಲಿದೆ ಎಂದು ಹೇಳಲಾಗುತ್ತಿದೆ.