Tag: ವೈಶಾಲಿ ಠಕ್ಕರ್‌

  • ಖ್ಯಾತ ನಟಿ ವೈಶಾಲಿ ಆತ್ಮಹತ್ಯೆಗೆ ಕಾರಣನಾದವ ಎಸ್ಕೇಪ್: ಬಲೆ ಬೀಸಿದ ಪೊಲೀಸ್

    ಖ್ಯಾತ ನಟಿ ವೈಶಾಲಿ ಆತ್ಮಹತ್ಯೆಗೆ ಕಾರಣನಾದವ ಎಸ್ಕೇಪ್: ಬಲೆ ಬೀಸಿದ ಪೊಲೀಸ್

    ಹಿಂದಿ ಕಿರುತೆರೆಯ ಖ್ಯಾತ ನಟಿ ವೈಶಾಲಿ ಠಕ್ಕರ್ (Vaishali Thakkar) ಮೂರು ದಿನಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದರು. ತನ್ನ ಮೋಹಕ ನೋಟದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಈ ನಟಿ, ಯಶಸ್ಸಿನ ತುತ್ತತುದಿಯಲ್ಲಿ ಇರುವಾಗ ಆತ್ಮಹತ್ಯೆ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ಮೂಡಿಸಿದ್ದಾರೆ. ತಾವು ವಾಸವಿದ್ದ ಇಂಡೋರ್ ಅಪಾರ್ಟ್ ಮೆಂಟ್ ವೊಂದರಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

    ವೈಶಾಲಿ ಸೂಸೈಡ್ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆಯೇ ಅಪಾರ್ಟ್ಮೆಂಟ್ ಗೆ ಧಾವಿಸಿದ್ದ ತೇಜಾಜಿ ನಗರ ಪೊಲೀಸ್ ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಂಡಿದ್ದರು. ಆ ನಟಿಯ ಬಳಿ ಇದ್ದ ಡೆತ್ ನೋಟ್ ವಶಪಡಿಸಿಕೊಂಡಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ ಪ್ರೇಮ ವೈಫಲ್ಯವೇ ಸಾವಿಗೆ ಕಾರಣ ಎಂದು ಹೇಳಲಾಗಿತ್ತು. ಅದೀಗ ಕನ್ಫರ್ಮ್ ಕೂಡ ಆಗಿದೆ. ಈ ಹುಡುಗಿಗೆ ಟಾರ್ಚರ್ ಕೊಟ್ಟ ವ್ಯಕ್ತಿ ಯಾರು ಎನ್ನುವುದನ್ನು ಆಕೆಯೇ ಡತ್ ನೋಟ್ ನಲ್ಲಿ ಉಲ್ಲೇಖಸಿದ್ದಾಳೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ವೈಶಾಲಿ ಆತ್ಮಹತ್ಯೆಗೆ ಖಿನ್ನತೆ ಕಾರಣ ಎಂದು ಹೇಳಲಾಗಿತ್ತು. ಕಳೆದ ಕೆಲವು ತಿಂಗಳ ಹಿಂದೆ ತಮಗೆ ನಿಶ್ಚಾತಾರ್ಥ ಆಗಿರುವ ವಿಚಾರವನ್ನು ಇನ್ಸ್ಟಾದಲ್ಲಿ ಅವರು ಬಹಿರಂಗ ಪಡಿಸಿದ್ದರು. ಕೀನ್ಯಾದ ಡೆಂಟಲ್ ಸರ್ಜನ್ ಅಭಿನಂದನ್ ಸಿಂಗ್ (Abhinandan Singh) ಜೊತೆ ತಾವು ಮದುವೆ ಆಗುತ್ತಿರುವುದಾಗಿಯೂ ತಿಳಿಸಿದ್ದರು. ಇದಾದ ಕೆಲವು ದಿನಗಳ ನಂತರ ಫೋಟೋ ಡಿಲಿಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಆ ನಿಶ್ಚಿತಾರ್ಥ ಕೂಡ ಮುರಿದು ಬಿದ್ದಿದೆ ಎಂದು ಹೇಳಲಾಗಿದೆ. ಸಾವಿಗೆ ಅದೇ ಕಾರಣ ಅಂತ ಹೇಳಲಾಗಿತ್ತು.

    ಆದರೆ, ವೈಶಾಲಿಗೆ ತುಂಬಾ ದಿನಗಳಿಂದಲೂ ನೆರೆ ಮನೆಯ ವ್ಯಕ್ತಿಯೊಬ್ಬ ಬಹಳ ಕಿರುಕುಳ (Harassment) ನೀಡುತ್ತಿದ್ದನಂತೆ. ಆತ ದಿನವೂ ಕೊಡುತ್ತಿದ್ದ ಕಿರುಕುಳವೇ ತನ್ನನ್ನು ಸಾಯುವಂತೆ ಪ್ರೇರೇಪಿಸಿತು ಎಂದು ಅವರು ಡೆತ್ ನೋಟ್ ನಲ್ಲಿ ಬರೆದಿದ್ದಾರಂತೆ. ತನ್ನ ಸಾವಿಗೆ ಕಾರಣ, ಅದೇ ನೆರೆಮನೆಯ ವ್ಯಕ್ತಿ ರಾಹುಲ್ ನವ್ಲಾನಿ (Rahul Navlani) ಎಂದು ಉಲ್ಲೇಖಿಸಿದ್ದಾರೆ. ಡೆತ್ ನೋಟ್ ಸಿಗುತ್ತಿದ್ದಂತೆ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಮನೆಗೆ ಬೀಗ ಹಾಕಿಕೊಂಡು ರಾಹುಲ್ ಎಸ್ಕೇಪ್ ಆಗಿದ್ದಾನೆ. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಬಿಗ್ ಬಾಸ್’ ಖ್ಯಾತಿಯ ವೈಶಾಲಿ ಠಕ್ಕರ್ ಆತ್ಮಹತ್ಯೆ

    `ಬಿಗ್ ಬಾಸ್’ ಖ್ಯಾತಿಯ ವೈಶಾಲಿ ಠಕ್ಕರ್ ಆತ್ಮಹತ್ಯೆ

    ಸಾಕಷ್ಟು ಸೀರಿಯಲ್, ಬಿಗ್ ಬಾಸ್ (Bigg Boss Hindi) ಮೂಲಕ ಮೋಡಿ ಮಾಡಿದ್ದ ಯುವ ನಟಿ ವೈಶಾಲಿ ಠಕ್ಕರ್ (Vaishali Thakkar) (ಅ.16)ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ . ವೈಯಕ್ತಿಕ ಕಾರಣಗಳಿಂದ ಯುವ ನಟಿ ವೈಶಾಲಿ ನೇಣಿಗೆ ಶರಣಾಗಿದ್ದಾರೆ. ಶವದ ಪಕ್ಕದಲ್ಲೇ ಡೆತ್ ನೋಟ್ ಕೂಡ ಸಿಕ್ಕಿದ್ದು, ಇಂದೋರ್‌ನ ತೇಜಾಜಿ ನಗರ(Tejaji Nagar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    `ಬಿಗ್ ಬಾಸ್’ ಖ್ಯಾತಿಯ ವೈಶಾಲಿ ಠಕ್ಕರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದರು. ಇತ್ತೀಚೆಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಖುಷಿ ಖುಷಿಯಾಗಿ ಇರುವಂತಹ ರೀಲ್ಸ್ ಹಂಚಿಕೊಂಡಿದ್ದರು. ಅವರು ಈಗ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಕ್ಕೆ ಕಾರಣ ಏನು ಎಂಬ ಪ್ರಶ್ನೆ ಮೂಡಿದೆ. ಪೊಲೀಸರ ತನಿಖೆ ಬಳಿಕ ಸತ್ಯ ಹೊರಬರಬೇಕಿದೆ. ವೈಶಾಲಿ ಸಾವು ಅವರ ಕುಟುಂಬಕ್ಕೆ, ಆಪ್ತರಿಗೆ ಆಘಾತವುಂಟು ಮಾಡಿದೆ. ನಟಿಯ ಸಾವಿಗೆ ಚಿತ್ರರಂಗ(Film Industry) ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:ನಯನತಾರಾ- ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನದ ಕೇಸ್‌ಗೆ ಬಿಗ್ ಟ್ವಿಸ್ಟ್

    ಹಿಂದಿ ಕಿರುತೆರೆಯಲ್ಲಿ ವೈಶಾಲಿ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದರು. `ಸಸುರಾಲ್ ಸಿಮರ್ ಕಾ’ ಧಾರಾವಾಹಿಯಲ್ಲಿ ಅವರು ಅಂಜಲಿ ಭಾರದ್ವಾಜ್ ಎಂಬ ಪಾತ್ರ ಮಾಡಿದ್ದರು. `ಯೇ ರಿಷ್ತಾ ಕ್ಯಾ ಕೆಹಲಾತಾ ಹೈ’, ʻರಕ್ಷಾ ಬಂಧನ್ʼ ಮುಂತಾದ ಧಾರಾವಾಹಿಗಳಲ್ಲಿ ವೈಶಾಲಿ ಠಕ್ಕರ್ ನಟಿಸಿದ್ದರು. `ಬಿಗ್ ಬಾಸ್'(Bigg Boss) ಮೂಲಕ ನಟಿ ಮೋಡಿ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]