Tag: ವೈರಲ್ ವಿಡಿಯೋ

  • ಜ್ಯೂನಿಯರ್‌ ಕ್ರಿಸ್‌ ಗೇಲ್‌ – ಕಾಂಪೌಂಡ್‌ ಹೊರಗಡೆಗೆ ಸಿಕ್ಸ್‌

    ಜ್ಯೂನಿಯರ್‌ ಕ್ರಿಸ್‌ ಗೇಲ್‌ – ಕಾಂಪೌಂಡ್‌ ಹೊರಗಡೆಗೆ ಸಿಕ್ಸ್‌

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಜ್ಯೂನಿಯರ್‌ ಕ್ರಿಸ್‌ ಗೇಲ್‌ ಸಿಕ್ಸರ್‌ ಸಿಡಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

    ವೆಸ್ಟ್‌ ಇಂಡೀಸ್‌ ತಂಡದ ಎಡಗೈ ಬ್ಯಾಟ್ಸ್‌ಮನ್‌  ಕ್ರಿಸ್‌ಗೇಲ್‌ ಸಿಕ್ಸ್‌ ಎತ್ತುವುದರಲ್ಲಿ ಎತ್ತಿದ ಕೈ. ಈಗ ಅವರಂತೆ ಪುಟ್ಟ ಪೋರನೊಬ್ಬ ಬ್ಯಾಟ್‌ ಬೀಸಿದ್ದಾನೆ.

    ಪ್ಲಾಸ್ಟಿಕ್‌ ಬಾಲ್‌ನಲ್ಲಿ ಮೆಟ್ಟಿಲಿನಲ್ಲಿ ಆಟವಾಡಿದ್ದು ಬ್ಯಾಟ್‌ನಿಂದ ಭರ್ಜರಿ ಸಿಕ್ಸ್‌ ಸಿಡಿಸಿದ್ದಾನೆ. ಬಾಲಗಾಲನ್ನು ಎತ್ತಿ ಸಿಕ್ಸ್‌ ಸಿಡಿಸುತ್ತಿರುವ ಈ ವಿಡಿಯೋ ಈಗ ವೈರಲ್‌ ಆಗಿದೆ.

     

    View this post on Instagram

     

    How good is this young kid!!! #talented #aakashvani #feelitreelit #feelkaro

    A post shared by Aakash Chopra (@cricketaakash) on

    ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಆಕಾಶ್‌ ಚೋಪ್ರಾ ಇಂದು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ ಈ ಸಣ್ಣ ಬಾಲಕ ಹೇಗೆ ಆಡುತ್ತಿದ್ದಾನೆ ನೋಡಿ ಎಂದು ಬರೆದಿದ್ದಾರೆ.

    ಈ ವಿಡಿಯೋಗೆ ಕೆಲವರು ಕ್ರಿಸ್‌ಗೇಲ್‌ ರೀತಿ ಆಡುತ್ತಿದ್ದಾನೆ ಕೆಲವರು ಯುವರಾಜ್‌ ಸಿಂಗ್‌ ರೀತಿ ಸಿಕ್ಸ್‌ ಸಿಡಿಸುತ್ತಿದ್ದಾನೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

  • ನಾನು ಡ್ರಗ್ಸ್ ಅಡಿಕ್ಟ್ ಆಗಿದ್ದೆ – ಕಂಗನಾ ಹಳೆ ವಿಡಿಯೋ ವೈರಲ್

    ನಾನು ಡ್ರಗ್ಸ್ ಅಡಿಕ್ಟ್ ಆಗಿದ್ದೆ – ಕಂಗನಾ ಹಳೆ ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ವಿರುದ್ಧ ಡ್ರಗ್ಸ್ ಆರೋಪ ಕೇಳಿ ಬಂದಿರುವ ಬೆನ್ನಲ್ಲೇ ನಟಿಯ ಹಳೆಯ ವಿಡಿಯೋವೊಂದು ಸಂಚಲನ ಸೃಷ್ಟಿಸಿದೆ. ಕಂಗನಾ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಅನ್ನೋ ಆರೋಪಕ್ಕೆ ವಿಡಿಯೋ ಪುಷ್ಟಿ ನೀಡುತ್ತಿದೆ.

    ಸಿನಿ ಕೆರಿಯರ್ ಆರಂಭದಲ್ಲಿ ತಾನು ಡ್ರಗ್ ಅಡಿಕ್ಟ್ ಆಗಿದ್ದೆ ಎಂದು ನಟಿ ಕಂಗನಾ ರಣಾವತ್ ಹೇಳಿರುವ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಮಾರ್ಚ್ 29ರಂದು ಕಂಗನಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದು, ತನ್ನ ಸಿನಿ ಬದುಕು ಮತ್ತು ಡ್ರಗ್ಸ್ ಅಡಿಕ್ಟ್ ನಿಂದ ಹೊರ ಬಂದಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಣವೀರ್‌, ರಣ್‌ಬೀರ್‌, ವಿಕ್ಕಿ ಡ್ರಗ್ಸ್‌ ಪರೀಕ್ಷೆಗೆ ಒಳಪಡಬೇಕು – ಕಂಗನಾ

    ವಿಡಿಯೋದಲ್ಲಿ ಏನಿದೆ?: ಮನೆಯಲ್ಲಿ ಕುಳಿತು ಬೋರ್ ಆಗ್ತಿದೆಯಾ? ಕೆಲವರು ಅಳುತ್ತಿರಬಹುದು. ಕೆಟ್ಟ ಸಮಯ ಅದು ನಿಮ್ಮ ಜೀವನದ ಅತ್ಯಂತ ಒಳ್ಳೆಯ ದಿನ ಆಗಿರುತ್ತೆ. ಕಾರಣ ಆ ದಿನಗಳು ನಿಮಗೆ ಅಪಾರ ಅನುಭವ ನೀಡುತ್ತವೆ. 15-16ನೇ ವಯಸ್ಸಿನಲ್ಲಿ ಮನೆಯಿಂದ ಓಡಿ ಬಂದೆ. ಆಕಾಶದಲ್ಲಿರುವ ನಕ್ಷತ್ರಗಳನ್ನ ಹಿಡಿಯುವ ಆಸೆ ನನ್ನದಾಗಿತ್ತು. ಮನೆಯಿಂದ ಓಡಿ ಬಂದ ಎರಡೂವರೆ ವರ್ಷದಲ್ಲಿ ನಾನು ಫಿಲಂ ಸ್ಟಾರ್ ಮತ್ತು ಡ್ರಗ್ಸ್ ಅಡಿಕ್ಟ್ ಆಗಿದ್ದೆ. ಆ ಸಮಯದಲ್ಲಿ ಕೆಲವರ ಸಂಪರ್ಕದಿಂದಾಗಿ ನನ್ನ ಜೀವನ ಸಮಸ್ಯೆಗಳಿಂದ ತುಂಬಿತ್ತು. ನನ್ನ ಜೀವನವೇ ಅಂತ್ಯವಾಗುವ ಹಂತದಲ್ಲಿತ್ತು. ಇದನ್ನೂ ಓದಿ: ಚಂಡೀಗಢ ತಲುಪ್ತಿದ್ದಂತೆ ನಾನು ಬದುಕುಳಿದೆ ಎಂದ ಕಂಗನಾ

    https://www.instagram.com/p/B-T4iCHlGIo/

    ಈ ಸಮಯಲ್ಲಿ ಒಳ್ಳೆಯ ಸ್ನೇಹಿತರ ಪರಿಚಯವಾಯ್ತು. ಅವರು ನನಗೆ ಧ್ಯಾನ, ಯೋಗ ಅಭ್ಯಾಸ ಮಾಡೋದನ್ನ ಕಲಿಸಿದರು. ವಿವೇಕಾನಂದ ಅವರನ್ನ ಗುರುಗಳೆಂದು ತಿಳಿದು ನನ್ನನ್ನ ನಾನು ಸುಧಾರಿಸಿಕೊಂಡಿದ್ದೇನೆ. ನನಗಾಗಿ ನಾನು ಬದುಕೋದನ್ನ ಕಲಿತುಕೊಂಡಿದ್ದರಿಂದ ನನ್ನ ವಿಲ್ ಪವರ್, ಭಾವನೆ, ಕುಟುಂಬ ಜೊತೆಗಿನ ಸಂಬಂಧ, ಟ್ಯಾಲೆಂಟ್ ಸುಧಾರಿಸಿಕೊಂಡೆ. ಹಾಗಾಗಿ ಇಂದು ಒಂದು ಹಂತಕ್ಕೆ ಬಂದಿದ್ದೇನೆ. ಆ ಕಷ್ಟದ ದಿನಗಳ ಬರದಿದ್ರೆ ಗುಂಪಿನಲ್ಲಿ ನಾನು ಒಬ್ಬಳಾಗುತ್ತಿದ್ದೆ. ಒಂದೆರಡು ವರ್ಷ ಕಟ್ಟುನಿಟ್ಟಾಗಿ ಬ್ರಹ್ಮಚರ್ಯವನ್ನ ಪಾಲಿಸಿದ್ದೇನೆ ಎಂದು ಹೇಳಿದ್ದಾರೆ.

    ಕಂಗನಾ ಚಾಲೆಂಜ್: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‍ಮುಖ್ ಕಂಗನಾ ವಿರುದ್ಧ ಡ್ರಗ್ ತನಿಖೆ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಮುಂಬೈ ಪೊಲೀಸರು ಕಂಗನಾ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಕಂಗನಾ, ಬಹಳ ಸಂತೋಷ. ನನ್ನನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಿ. ನನ್ನ ಕರೆಗಳನ್ನು ತನಿಖೆ ಮಾಡಿ ಡ್ರಗ್ ಪೆಡ್ಲರ್ ಜೊತೆ ಇರುವ ಸಂಬಂಧವನ್ನು ಪತ್ತೆ ಹಚ್ಚಿ. ಒಂದು ವೇಳೆ ತಪ್ಪು ಸಾಬೀತಾದರೆ ನಾನು ಮುಂಬೈ ತೊರೆಯುತ್ತೇನೆ ಎಂದು ಚಾಲೆಂಜ್ ಹಾಕಿದ್ದರು. ಇದನ್ನೂ ಓದಿ: ಭಿಕ್ಷೆ ಬೇಡೋಕೆ ಮುಂಬೈಗೆ ಯಾಕೆ ಬಂದೆ- ಕಂಗನಾಗೆ ರಾಖಿ ಪ್ರಶ್ನೆ

    ರಣ್‍ವೀರ್ ಸಿಂಗ್, ರಣ್‍ಬೀರ್ ಕಪೂರ್, ಅಯಾನ್ ಮುಖರ್ಜಿ, ವಿಕ್ಕಿ ಕೌಶಿಕ್ ಡ್ರಗ್ ಪರೀಕ್ಷೆ ನಡೆಸಲು ರಕ್ತದ ಮಾದರಿಯನ್ನು ನೀಡಬೇಕು. ಈ ನಟರು ಕೊಕೇನ್ ಸೇವಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ. ತಮ್ಮ ಮೇಲೆ ಬಂದಿರುವ ಆರೋಪವನ್ನು ಸುಳ್ಳು ಮಾಡಲು ನಟರು ರಕ್ತದ ಮಾದರಿಯನ್ನು ನೀಡಬೇಕೆಂದು ವಿನಂತಿಸುತ್ತಿದ್ದೇನೆ. ಈ ವ್ಯಕ್ತಿಗಳು ಯುವ ಜನತೆಗೆ ಮಾದರಿಯಾಗಿರುವ ಕಾರಣ ಆರೋಪ ಮುಕ್ತವಾಗಬೇಕೆಂದು ಎಂದು ಕಂಗನಾ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿದ್ದಾರೆ.

    ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ಮತ್ತು ಸೋದರ ಶೌವಿಕ್ ಚಕ್ರವರ್ತಿ ಸೇರಿದಂತೆ 16 ಜನರನ್ನ ಎನ್‍ಸಿಬಿ ಬಂಧಿಸಿದೆ. ಇತ್ತ ಸ್ಯಾಂಡಲ್‍ವುಡ್ ನಲ್ಲಿ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಸಹ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.

  • ಸಿಕ್ಕಾಕೊಂಡ್ರರೆ ನಾವು ಮತ್ತೆ ಜೈಲಿಗೆ ಹೋಗ್ಬೇಕಾಗುತ್ತೆ- ಆಸ್ಪತ್ರೆಯಲ್ಲಿ ನಟಿ ರಾಗಿಣಿ ಕಿರಿಕ್

    ಸಿಕ್ಕಾಕೊಂಡ್ರರೆ ನಾವು ಮತ್ತೆ ಜೈಲಿಗೆ ಹೋಗ್ಬೇಕಾಗುತ್ತೆ- ಆಸ್ಪತ್ರೆಯಲ್ಲಿ ನಟಿ ರಾಗಿಣಿ ಕಿರಿಕ್

    ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಅವರನ್ನು ನ್ಯಾಯಾಲಯ ಮತ್ತೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ರಾಗಿಣಿಯನ್ನು ಮತ್ತೆ ಕಸ್ಟಡಿಗೆ ನೀಡಲು ವೈದ್ಯಕೀಯ ಪರೀಕ್ಷೆ ನಡೆಸುವ ವೇಳೆ ಅವರು ಮಾಡಿದ ಕಿರಿಕ್ ಕಾರಣ ಎನ್ನಲಾಗಿದೆ.

    ವಿಚಾರಣೆ ಸಂದರ್ಭದಲ್ಲಿ ಪದೇ ಪದೇ ಅನಾರೋಗ್ಯ ನೆಪವೊಡ್ಡುತ್ತಿದ್ದ ಅವರ ಆರೋಗ್ಯ ತಪಾಸಣೆ ನಡೆಸಲು ನಗರದ ಕೆಸಿ ಜನರಲ್ ಆಸ್ಪತ್ರೆಗೆ ಕರೆತರಲಾಗಿತ್ತು. ಆ ಬಳಿಕ ಅವರನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ನ್ಯಾಯಾಲಯದ ಅನುಮತಿ ಪಡೆದು ರಾಗಿಣಿ ಅವರಿಗೆ ಡೋಪಿಂಗ್ ಪರೀಕ್ಷೆ ನಡೆಸಲು ಮುಂದಾಗಿದ್ದರು. ಆದರೆ ಈ ವೇಳೆ ಅಧಿಕಾರಿಗಳ ವಿರುದ್ಧವೇ ಗರಂ ಆದ ನಟಿ ವೈದ್ಯಕೀಯ ಪರೀಕ್ಷೆ ನಡೆಸಿಕೊಳ್ಳಲು ನಿರಾಕರಿಸಿದ್ದರು. ಈ ಕುರಿತ ವಿಡಿಯೋ ಸದ್ಯ ವೈರಲ್ ಆಗಿದೆ. ಇದನ್ನೂ ಓದಿ: ಸಾಂತ್ವನ ಕೇಂದ್ರದಲ್ಲಿ ಗಲಾಟೆ, ಪೊಲೀಸ್ ವಾಹನದಲ್ಲಿ ಮಾತುಕತೆ – ಇದು ರಾಗಿಣಿ, ಸಂಜನಾ ಫ್ರೆಂಡ್‍ಶಿಪ್

    ವಿಡಿಯೋದಲ್ಲಿ ಅಧಿಕಾರಿಗಳ ಗಲಾಟೆ ಮಾಡಿದ್ದು, ನಮ್ಮ ಲೈಫ್ ಈಗಾಗಲೇ ಹಾಳಾಗಿ ಹೋಗಿದೆ. ನೀವು ಬಂದನ ಮಾಡಿದ ಕಾರಣ ನಮ್ಮ ಮರ್ಯಾದೆ ಹೋಗಿದೆ. ಮೊದಲೇ ನಮ್ಮ ಲೈಪ್ ಬರ್ನ್ ಆಗಿದೆ. ಇದರಲ್ಲಿ ಸಿಕ್ಕಿಹಾಕ್ಕೋಂಡ್ರೆ ಜೈಲಿಗೆ ಹೋಗಬೇಕಾಗುತ್ತೆ ಎಂದು ಪರೀಕ್ಷೆ ಮಾಡಿಸಿಕೊಳ್ಳುವ ವಿಚಾರದಲ್ಲಿ ಹಠ ಮಾಡಿದ್ದರು. ಯಾವುದೇ ಟೆಸ್ಟ್ ಮಾಡೋದಿದ್ದರೂ ನಮ್ಮ ವಕೀಲರು ಬರಲಿ ಎಂದು ಹೇಳಿದ್ದರು. ಸದ್ಯ ಈ ವಿಡಿಯೊ ವೈರಲ್ ಆಗಿದೆ. ಇದನ್ನೂ ಓದಿ: ನಟಿ ಸಂಜನಾ ಸೇರಿ ಉಳಿದ ಆರೋಪಿಗಳೂ 3 ದಿನ ಸಿಸಿಬಿ ಕಸ್ಟಡಿಗೆ

    ಇಂದು ನಟಿ ರಾಗಿಣಿ ಮತ್ತು ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಮುಂದೆ ಹಾಜರ್ ಪಡಿಸಿದ್ದರು. ಈ ವೇಳೆ ವಿಚಾರಣೆಯನ್ನು ಮುಂದುವರಿಸಲು ಮತ್ತೆ 6 ದಿನ ಪೊಲೀಸ್ ಕಸ್ಟಡಿಗೆ ನೀಡಲು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನೂ ಓದಿ: ಮತ್ತೆ 3 ದಿನ ಸಿಸಿಬಿ ಕಸ್ಟಡಿಗೆ ನಟಿ ರಾಗಿಣಿ

    ಆದರೆ ರಾಗಿಣಿ ಪರ ವಕೀಲರು ತಮ್ಮ ವಾದ ಮಂಡಿಸಿ, ಈಗಾಗಲೇ 8 ದಿನ ಪೊಲೀಸ್ಟ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದಲ್ಲಿ ರಕ್ತ ಮಾದರಿಯ ಪರೀಕ್ಷೆ ಬಿಟ್ಟು ಬೇರೆ ಯಾವುದೇ ಪ್ರಗತಿ ಮಾಡಿಲ್ಲ. ನನ್ನ ಕಕ್ಷಿದಾರರು ಈಗಾಗಲೇ ತಮಗೇ ತಿಳಿದಿರುವ ಮಾಹಿತಿಯನ್ನು ತಿಳಿಸಿದ್ದಾರೆ. ಆದ್ದರಿಂದ ಅವರನ್ನು ನ್ಯಾಯಾಂಗ ಬಂಧನ ನೀಡಿ ಎಂದು ಮನವಿ ಮಾಡಿದ್ದರು. ಆದರೆ ನಟಿಯರು ತಮ್ಮ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಸಿಸಿಬಿ ಪೊಲೀಸರು ವೈದ್ಯಕೀಯ ತಪಾಸಣೆ ವೇಳೆ ಮಾಡಿದ್ದ ಕಿರಿಕ್ ವಿಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಯೇ ಮತ್ತೆ ಮೂರು ದಿನಗಳ ಕಾಲ ಎಲ್ಲಾ ಆರೋಪಿಗಳನ್ನು ಸಿಸಿಬಿ ಕಸ್ಟಡಿಗೆ ಕೋರ್ಟ್ ನೀಡಿದೆ ಎಂಬ ಮಾಹಿತಿ ಲಭಿಸಿದೆ.

  • ಕಾರು ಪಾರ್ಕಿಂಗ್‌ ಸ್ಥಳ ಈಗ ಟೂರಿಸ್ಟ್‌ ಸ್ಪಾಟ್‌ – ವೈರಲ್‌ ವಿಡಿಯೋ ಸೆರೆಗೆ ಒಂದು ಕಮೆಂಟ್‌ ಕಾರಣ

    ಕಾರು ಪಾರ್ಕಿಂಗ್‌ ಸ್ಥಳ ಈಗ ಟೂರಿಸ್ಟ್‌ ಸ್ಪಾಟ್‌ – ವೈರಲ್‌ ವಿಡಿಯೋ ಸೆರೆಗೆ ಒಂದು ಕಮೆಂಟ್‌ ಕಾರಣ

    – ಇದು ದೊಡ್ಡ ಸಾಧನೆ ಅಲ್ಲ
    – ಯಾರೇ ಅನುಭವಿ ಚಾಲಕ ಪಾರ್ಕ್‌ ಮಾಡಬಹುದು

    ಕಣ್ಣೂರು: ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಇನ್ನೋವಾ ಪಾರ್ಕಿಂಗ್‌ ಸ್ಥಳ ಈಗ ಟೂರಿಸ್ಟ್‌ ಸ್ಪಾಟ್‌ ಆಗಿ ಬದಲಾಗಿದೆ.

    ಕೇರಳದ ವಯನಾಡ್‌ ನಿವಾಸಿ ಪಿ.ಜೆ ಬಿಜು ಅವರು ಮಾಹೆ ರೈಲ್ವೇ ನಿಲ್ದಾಣದ ಬಳಿ ಇರುವ ರಸ್ತೆಯ ಕಿರುದಾಗಿರುವ ಜಾಗದಲ್ಲಿ ಪಾರ್ಕ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    https://twitter.com/nandu79/status/1302612571002871813

    ಈಗ ಕಾರು ಪಾರ್ಕಿಂಗ್‌ ಮಾಡಿದ ಜಾಗ ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿದೆ. ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿ ಕಾರು ನಿಲ್ಲಿಸಿದ ಜಾಗವನ್ನು ಪರಿಶೀಲನೆ ಮಾಡಿ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.

    ವಿಡಿಯೋ ವೈರಲ್‌ ಆದ ಬಗ್ಗೆ ಪ್ರತಿಕ್ರಿಯಿಸಿದ 42 ವರ್ಷದ ಬಿಜು, ನನ್ನ ಪತ್ನಿ ಮಾಡಿರುವ ವಿಡಿಯೋ ಇದು. ಆಕೆಗೂ ಸಹ ವಿಡಿಯೋ ಈ ಪ್ರಮಾಣದಲ್ಲಿ ವೈರಲ್‌ ಆಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

    ಬಿಜು ಹೇಳುವುಂತೆ ಮನೆಯ ಈ ಜಾಗದಲ್ಲಿ ಪಾರ್ಕ್‌ ಮಾಡಿದ ನಾಲ್ಕನೇ ಕಾರು ಇನ್ನೋವಾ. ಈ ಮೊದಲು ಮಾರುತಿ ಅಲ್ಟೋ, ನಂತರ ಸ್ನೇಹಿತ ನೀಡಿದ ವಾಗನ್‌ ಆರ್‌, ಅಷ್ಟೇ ಅಲ್ಲದೇ ಜೀಪ್‌ ಸಹ ಈ ಜಾಗದಲ್ಲಿ ಪಾರ್ಕ್‌ ಮಾಡಿದ್ದರು. ಈ ಎಲ್ಲ ವಾಹನಗಳನ್ನು ಪಾರ್ಕ್‌ ಮಾಡಿದ್ದರೂ ಯಾರೂ ಗಮನ ಹರಿಸಿರಲಿಲ್ಲ ಎಂದು ಹೇಳುತ್ತಾರೆ.

    ಕಮೆಂಟ್‌ನಿಂದ ವೈರಲ್‌:
    ಆರಂಭದಲ್ಲಿ ಫೇಸ್‌ಬುಕ್‌ನಲ್ಲಿ ಫೋಟೋ ಹಾಕಿದಾಗ ಯಾರೊ ಒಬ್ಬರು ಎಡಿಟ್‌ ಮಾಡಿದ ಫೋಟೋ ಎಂದು ಹೇಳಿ ಕಮೆಂಟ್‌ ಮಾಡಿದ್ದರಂತೆ. ಈ ಕಾರಣಕ್ಕೆ ಅನುಮಾನ ಪರಿಹರಿಸಲು ಸಂಪೂರ್ಣವಾಗಿ ಪಾರ್ಕ್‌ ಮಾಡುತ್ತಿರುವ ವಿಡಿಯೋವನ್ನು  ಪತ್ನಿ ಮನೆಯಿಂದ ಸೆರೆ ಹಿಡಿದಳು. ಪತ್ನಿ ಆ ವಿಡಿಯೋವನ್ನು ಸ್ನೇಹಿತೆಗೆ ಕಳುಹಿಸಿದಳು. ಆಕೆ ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಾಕಿದ ಬಳಿಕ ವೈರಲ್‌ ಆಗಿದೆ ಎಂದು ಬಿಜು ತಿಳಿಸಿದರು.

    ಇನ್ನೋವಾ ಕಾರು ನನ್ನ ಸ್ನೇಹಿತನದ್ದು. ಓಣಂ ಸಮಯದಲ್ಲಿ ನಾನು ಊರಿನಲ್ಲಿ ಇರುವುದಿಲ್ಲ. ಕಾರನ್ನು ಸರ್ವಿಸ್‌ ಮಾಡಿಕೊಡು ಎಂದು ಹೇಳಿದ್ದ. ಹೀಗಾಗಿ ಕೆಲ ದಿನ ನಾನು ಮನೆಯ ಮುಂಭಾಗ ಪಾರ್ಕ್‌ ಮಾಡಿದ್ದೆ. ಓಣಂ ಮುಗಿದು ವರ್ಕ್‌ ಶಾಪ್‌ ಆರಂಭಗೊಂಡ ಬಳಿಕ ನಾನು ಕಾರು ತೆಗೆದಿದ್ದೆ. ಕಾರನ್ನು ತೆಗೆಯುವ ವೇಳೆ ಪತ್ನಿ ವಿಡಿಯೋ ಮಾಡಿದಳು ಎಂದು ಅವರು ವಿವರಿಸಿದರು.

    ಲಿಕ್ಕರ್‌ ಕಂಪನಿಯೊಂದರ ಉದ್ಯೋಗಿ ಮತ್ತು ಡ್ರೈವರ್‌ ಆಗಿರುವ ಬಿಜು ಅವರು ಕಳೆದ 12 ವರ್ಷಗಳಿಂದ ಮಾಹೆಯಲ್ಲಿ ಕುಟುಂಬದ ಜೊತೆ ವಾಸವಾಗಿದ್ದಾರೆ. 1996ರಲ್ಲಿ ಡ್ರೈವಿಂಗ್‌ ಲೈಸೆನ್ಸ್‌ ಪಡೆದಿರುವ ಇವರು ಬಸ್‌ ಸೇರಿದಂತೆ ಹಲವು ವಾಹನಗಳನ್ನು ಚಲಾಯಿಸಿದ ಅನುಭವವನ್ನು ಹೊಂದಿದ್ದಾರೆ.

    ಇಷ್ಟು ಸಣ್ಣ ಜಾಗದಲ್ಲಿ ಹೇಗೆ ಸುಲಭವಾಗಿ ಪಾರ್ಕ್‌ ಮಾಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ, ಇದು ಸಣ್ಣ ಜಾಗವೇ? ನಾನು ಎರ್ನಾಕುಲಂ ಮತ್ತು ಕಣ್ಣೂರು ಮಧ್ಯೆ ಹಲವು ವರ್ಷಗಳ ಕಾಲ ಬಸ್‌ ಓಡಿಸಿದ್ದೇನೆ. ಈ ಬಸ್ಸು 12 ಮೀಟರ್‌ ಉದ್ದವನ್ನು ಹೊಂದಿತ್ತು. ಹೀಗಿರುವ ಇನ್ನೋವಾದ ಗಾತ್ರ ಬಸ್ಸಿಗೆ ಹೋಲಿಸಿದರೆ ಬಹಳ ಚಿಕ್ಕದು. ಯಾವುದೇ ಕಾರಿನ ಗಾತ್ರವನ್ನು ಮನಸ್ಸಿನಲ್ಲೇ ಯೋಚಿಸಿಕೊಂಡು ಆತ್ಮವಿಶ್ವಾಸದಿಂದ ಪಾರ್ಕ್‌ ಮಾಡಿದರೆ ಇದು ಕಷ್ಟದ ಕೆಲಸವಲ್ಲ ಎಂದು ಉತ್ತರಿಸಿದರು.

    ಕಳೆದ ಮೂರು ದಿನಗಳಿಂದ ಹಲವು ವರದಿಗಾರರು ನನಗೆ ಕರೆ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಇದು ದೊಡ್ಡ ವಿಷಯವೇ ಇಲ್ಲ. ಯಾರೇ ಉತ್ತಮ ಚಾಲಕ ನಾನು ಪಾರ್ಕ್‌ ಮಾಡಿದಂತೆ ಮಾಡಬಹುದು ಎಂದು ಹೇಳಿದರು.

    ಸಾಮಾಜಿಕ ಜಾಲತಾಣದಲ್ಲಿ, ಕಿರಿದಾದ ಜಾಗದಲ್ಲಿ ಇಷ್ಟು ದೊಡ್ಡ ಕಾರನ್ನು ಯಾರ ಸಹಾಯ ಇಲ್ಲದೇ, ಬೇರೆ ವಾಹನಗಳಿಗೂ ತೊಂದರೆ ನೀಡದೇ ತೆಗೆದಿದ್ದಾನೆ. ಆತನ ಡ್ರೈವಿಂಗ್‌ ಪವರ್‌ ನಿಜವಾಗಿಯೂ ಗ್ರೇಟ್‌ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

  • ಅಬ್ಬಾ ಎಷ್ಟು ಸೆಕೆ- ವಿಮಾನದ ಎಮೆರ್ಜೆನ್ಸಿ ಡೋರ್ ನಿಂದ ಹೊರ ಬಂದ ಮಹಿಳೆ

    ಅಬ್ಬಾ ಎಷ್ಟು ಸೆಕೆ- ವಿಮಾನದ ಎಮೆರ್ಜೆನ್ಸಿ ಡೋರ್ ನಿಂದ ಹೊರ ಬಂದ ಮಹಿಳೆ

    – ವಿಮಾನದ ವಿಂಗ್ ಮೇಲೆ ಮಹಿಳೆಯ ವಾಕಿಂಗ್
    – ಮಹಿಳೆ ವರ್ತನೆ ಕಂಡು ಪ್ರಯಾಣಿಕರು ಶಾಕ್
    – ಮಹಿಳೆಯ ವಿಡಿಯೋ ವೈರಲ್

    ಕೀವ್: ಅಬ್ಬಾ ಎಷ್ಟೊಂದು ಸೆಕೆ ಅಂತ ಮಹಿಳಾ ಪ್ರಯಾಣಿಕರೊಬ್ಬರ ವಿಮಾನದ ಎಮೆರ್ಜೆನ್ಸಿ ಡೋರ್ಚ ತೆಗೆದಿರುವ ವಿಚಿತ್ರ ಘಟನೆ ಉಕ್ರೇನ್ ದೇಶದ ಕೀವ್ ನಲ್ಲಿ ನಡೆದಿದೆ. ಮಹಿಳೆ ಎಮೆರ್ಜೆನ್ಸಿ ಡೋರ್ ದಿಂದ ಹೊರ ಬಂದು ವಿಮಾನದ ವಿಂಗ್ ಮೇಲೆ ನಡೆದಾಡಿರುವ ವಿಡಿಯೋ ರಾಕೆಟ್ ವೇಗದಲ್ಲಿ ವೈರಲ್ ಆಗುತ್ತಿದೆ.

    ಈ ಕುರಿತು ಮಾಹಿತಿ ನೀಡಿರುವ ಉಕ್ರೇನ್ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆ, ಮಹಿಳೆ ದಿಢೀರ್ ಅಂತ ಎಮೆರ್ಜೆನ್ಸಿ ಡೋರ್ ತೆಗೆದು ವಿಂಗ್ ಮೇಲೆ ನಡೆಯಲಾರಂಭಿಸಿದರು. ಬೋಯಿಂಗ್ 737-86ಎನ್ ವಿಮಾನ ಲ್ಯಾಂಡ್ ಆಗ್ತಿದ್ದಂತೆ ಸೆಕೆ ಆಗುತ್ತಿದೆ ಎಂದು ಮಹಿಳೆ ಕಂಪ್ಲೇಂಟ್ ಮಾಡಿದ್ರು. ಜನರು ಸಹ ವಿಮಾನದಿಂದ ಹೊರ ಬರುತ್ತಿದ್ದರು. ಎಮೆರ್ಜೆನ್ಸಿ ಡೋರ್ ತೆಗೆದ ಮಹಿಳೆ ಗಾಳಿ ತೆಗೆದುಕೊಳ್ಳಲು ನಡೆಯುತ್ತಿದ್ದೆ ಅಂತಾ ಹೇಳಿದ್ದಾರೆ. ಕೂಡಲೇ ಸಿಬ್ಬಂದಿ ಮಹಿಳೆಯನ್ನ ಒಳ ಕರೆದು ಡೋರ್ ಕ್ಲೋಸ್ ಮಾಡಿದ್ದಾರೆ ಎಂದು ತಿಳಿಸಿದೆ.

    ಬಹುತೇಕ ಪ್ರಯಾಣಿಕರು ಹೊರಗೆ ಬಂದಿದ್ದರು. ಆಕೆಯ ಇಬ್ಬರು ಮಕ್ಕಳು ಸಹ ಕೆಳಗೆ ನನ್ನ ಹಿಂದೆಯೇ ನಿಂತಿದ್ರು. ಪ್ಲೇನ್ ವಿಂಗ್ ಮೇಲೆ ಮಹಿಳೆಯನ್ನ ನೋಡಿದ ಮಕ್ಕಳು, ಅವರು ನಮ್ಮ ತಾಯಿ ಎಂದು ಕೂಗಿ ಹೇಳಿದ್ರು. ಮಹಿಳೆ ವಿಂಗ್ ಮೇಲೆ ನಡೆಯೋದು ನೋಡಿ ನಮಗೂ ಆಶ್ಚರ್ಯವಾಯ್ತು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

    https://www.instagram.com/p/CEkEaFmpZam/

    ಪ್ರಯಾಣಿಕರು ವಿಮಾನಯಾನ ಸಂಸ್ಥೆಯ ಸುರಕ್ಷಾ ನಿಯಮಗಳನ್ನ ಪಾಲನೆ ಮಾಡಬೇಕು. ನಿಯಮ ಉಲ್ಲಂಘನೆ ಹಿನ್ನೆಲೆ ಮಹಿಳೆಯ ಹೆಸರನ್ನ ಆಡಳಿತ ಮಂಡಳಿ ಕಪ್ಪುಪಟ್ಟಿಗೆ ಸೇರಿಸಿದೆ. ವರದಿಗಳ ಪ್ರಕಾರ ಮಹಿಳೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ.

  • ನಡು ರಸ್ತೆಯಲ್ಲಿ ಮಹಿಳೆಯರಿಬ್ಬರ ಬಿಂದಾಸ್ ಡ್ಯಾನ್ಸ್- ವಿಡಿಯೋ ವೈರಲ್

    ನಡು ರಸ್ತೆಯಲ್ಲಿ ಮಹಿಳೆಯರಿಬ್ಬರ ಬಿಂದಾಸ್ ಡ್ಯಾನ್ಸ್- ವಿಡಿಯೋ ವೈರಲ್

    -ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಂಚಲನ

    ಬೆಂಗಳೂರು: ಮಹಿಳೆಯರಿಬ್ಬರು ನಡು ರಸ್ತೆಯಲ್ಲಿ ಬಿಂದಾಸ್ ಆಗಿ ಹೆಜ್ಜೆ ಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

    ಗಾಯಕಿ ಆಶಾ ಬೋಸ್ಲೆ ಹಾಡಿರುವ ‘ಪಿಯಾ ತು ಅಬ್ ತೋ ಆಜಾ’ ಹಾಡಿಗೆ ಮಹಿಳೆಯರು ಹೆಜ್ಜೆ ಹಾಕಿದ್ದಾರೆ. ಕೇವಲ 15 ಸೆಕೆಂಡ್ ವಿಡಿಯೋ ಕ್ಲಿಪ್ ನೋಡಿದ ನೆಟ್ಟಿಗರು, ಇಬ್ಬರ ಡ್ಯಾನ್ಸ್‍ಗೆ ಫಿದಾ ಆಗಿದ್ದಾರೆ. ವಿಡಿಯೋದಲ್ಲಿ ಮಹಿಳೆಯರ ಜೊತೆ ಓರ್ವ ವ್ಯಕ್ತಿ ಹೆಜ್ಜೆ ಹಾಕಿ ಹಿಂದೆ ಸರಿದಿರೋದನ್ನ ಗಮನಿಸಬಹುದು. ಈ ವಿಡಿಯೋ ಎಲ್ಲಿಯದ್ದು ಮತ್ತು ಮಹಿಳೆಯರು ಯಾರು ಎಂಬುವುದು ತಿಳಿದು ಬಂದಿಲ್ಲ.

    ಮಹಿಳೆಯರ ಡ್ಯಾನ್ಸ್ ವಿಡಿಯೋ 11 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. 1970ರಲ್ಲಿ ಬಿಡುಗಡೆಯಾದ ‘ಕಾರವಾನ್’ ಸಿನಿಮಾದಲ್ಲಿ ‘ಪಿಯಾ ತು ಅಬ್ ತೋ ಆಜಾ’ ಆರ್.ಡಿ. ಬರ್ಮನ್ ಸಂಯೋಜನೆಯಲ್ಲಿ ಮೂಡಿ ಬಂದಿತ್ತು. ಚಿತ್ರದಲ್ಲಿ ಜೀತೇಂದ್ರ ಮತ್ತು ಆಶಾ ಪಾರೇಖ್ ಜೊತೆಯಾಗಿ ನಟಿಸಿದ್ದರು.

  • ಆರ್ ಜೆ ಕಪಾಳಕ್ಕೆ ಬಾರಿಸಿದ ನಟ ಅರ್ಜುನ್ ಕಪೂರ್

    ಆರ್ ಜೆ ಕಪಾಳಕ್ಕೆ ಬಾರಿಸಿದ ನಟ ಅರ್ಜುನ್ ಕಪೂರ್

    -ಆರ್ ಜೆ ಪ್ರಶ್ನೆಗೆ ನಿಗಿ ನಿಗಿ ಕೆಂಡವಾದ ನಟ

    ಮುಂಬೈ: ಬಾಲಿವುಡ್ ನಟ ಅರ್ಜುನ್ ಕಪೂರ್ ಆರ್ ಜೆ ಕಪಾಳಕ್ಕೆ ಹೊಡೆದಿರುವ ಹಳೆಯ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಆರ್ ಜೆ ಕೇಳಿದ ಪ್ರಶ್ನೆಗೆ ಕೋಪಗೊಂಡ ಅರ್ಜುನ್ ಕಪೂರ್ ಕಪಾಳಕ್ಕೆ ಬಾರಿಸುತ್ತಾರೆ. ಏನಿದು ಪ್ರಶ್ನೆ, ಕ್ಯಾಮೆರಾ ಬಂದ್ ಮಾಡಿ ಎಂದು ಕೂಗ್ತಾರೆ. ಹೊರ ಹೋಗುವಾಗ ಕ್ಯಾಮೆರಾ ಸಹ ಬೀಳಿಸಿದ್ದಾರೆ. ಮಾರುಕಟ್ಟೆಯಲ್ಲಿ ನಿಮ್ಮ ಕ್ಯಾರೆಕ್ಟರ್ ಮಾರಾಟ ಆಗ್ತಿಲ್ಲವಾ? ಅದಕ್ಕೆ ಹುಡುಗಿಯರ ಕ್ಯಾರೆಕ್ಟರ್ ಮಾಡ್ತಿದ್ದೀರಾ ಎಂದು ಆರ್ ಜೆ ಪ್ರಶ್ನೆ ಮಾಡಿದ್ದಾರೆ. ಕ್ಯಾಮೆರಾಗಳ ಮುಂದೆ ನಿಂತಿದ್ದರೂ ಅರ್ಜುನ್ ಆರ್‍ಜೆ ಮೇಲೆ ಹಲ್ಲೆ ನಡೆಸಿದ್ದಾರೆ.

    ಪ್ರಶ್ನೆ ಸರಿ ಇಲ್ಲದಿದ್ರೆ ಸಂದರ್ಶನದಿಂದ ಹೊರ ಬರಬಹುದಿತ್ತು. ಹೀಗೆ ಹಲ್ಲೆ ನಡೆಸೋದು ಎಷ್ಟು ಸರಿ ಎಂದು ಕೆಲ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಮತ್ತೊಂದು ಕಡೆ ಅರ್ಜುನ್ ಕೆಲ ಅಭಿಮಾನಿಗಳು, ನಟನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತೆ ಕೆಲವರು ಇದು ಸ್ಕ್ರಿಪ್ಟೆಡ್ ಡ್ರಾಮಾ ಅಂತ ಬರೆದು ಇಲ್ಲಿಯೂ ಸಹ ಅರ್ಜುನ್ ನಟನೆ ಸರಿ ಮಾಡಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್‍ಬಾಲಿವುಡ್ ಪೇಜ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಎರಡು ಗಂಟೆಯಲ್ಲಿ 10 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.

    https://www.instagram.com/p/CEBWu47BoOu/

  • ವ್ಯಾಪಾರಿಯ ಮೆಕ್ಕೆಜೋಳದ ತಳ್ಳುವ ಗಾಡಿ ಬೀಳಿಸಿದ- ವಿಡಿಯೋ ವೈರಲ್

    ವ್ಯಾಪಾರಿಯ ಮೆಕ್ಕೆಜೋಳದ ತಳ್ಳುವ ಗಾಡಿ ಬೀಳಿಸಿದ- ವಿಡಿಯೋ ವೈರಲ್

    -ದರ್ಪ ಮೆರೆದ ಸಬ್ ಇನ್‍ಸ್ಪೆಕ್ಟರ್ ಅಮಾನತು

    ಲಕ್ನೋ: ಸಬ್ ಇನ್‍ಸ್ಪೆಕ್ಟರ್ ರಸ್ತೆ ಬದಿಯಲ್ಲಿ ಮೆಕ್ಕೆಜೋಳ ಮಾರುತ್ತಿದ್ದ ವ್ಯಾಪಾರಿಯ ತಳ್ಳುವ ಗಾಡಿ ಬೀಳಿಸಿದ ದರ್ಪ ಮರೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಬಳಿ ದರ್ಪ ಮೆರದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ:  100 ರೂ. ಲಂಚ ನೀಡಲು ನಿರಾಕರಿಸಿದ ಬಾಲಕ- ಮೊಟ್ಟೆ ಬಂಡಿ ಪಲ್ಟಿ ಮಾಡಿದ ಪಾಲಿಕೆ ಅಧಿಕಾರಿ

    ಉತ್ತರ ಪ್ರದೇಶದ ವಾರಾಣಸಿಯ ಶಿವಪುರದಲ್ಲಿ ಬೀದಿ ಬದಿ ವ್ಯಾಪಾರಿ ಗಾಡಿಯಲ್ಲಿ ಮೆಕ್ಕೆಜೋಳ ಮಾರುತ್ತಿದ್ದರು. ವ್ಯಾಪಾರಿ ಬಳಿ ಬಂದ ಸಬ್ ಇನ್‍ಸ್ಪೆಕ್ಟರ್ ಕುಮಾರರ ಶಶಿ ಗಾಡಿಯಲ್ಲಿದ್ದ ಜೋಳವನ್ನು ಕೆಳಗೆ ಬೀಳಿಸಿ, ನೋಡ ನೋಡುತ್ತಿದ್ದಂತೆ ಗಾಡಿ ಪಲ್ಟಿ ಹೊಡೆಸಿದ್ದಾನೆ. ಈ ಎಲ್ಲ ದೃಶ್ಯಗಳು ಕಟ್ಟಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಮವಾರ ಘಟನೆ ನಡೆದಿದ್ದು, ವಿಡಿಯೋ ವೈರಲ್ ಬಳಿಕ ಮಂಗಳವಾರ ಕಿಶೋರ್ ಶಶಿಯನ್ನು ಅಮಾನತುಗೊಳಿಸಲಾಗಿದೆ. ಹಾಗೆ ಬೀದಿ ಬದಿ ವ್ಯಾಪಾರಿ ಬಳಿ ಪೊಲೀಸರು ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: 100 ರೂ. ಲಂಚಕ್ಕಾಗಿ ಮೊಟ್ಟೆ ಬಂಡಿ ಪಲ್ಟಿ – ಬಾಲಕನಿಗೆ ಉಚಿತ ಶಿಕ್ಷಣ, ಮನೆ

    ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಹಿರಿಯ ಅಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಜೊತೆಗೆ ವ್ಯಾಪಾರಿಯಾದ ನಷ್ಟವನ್ನು ನೀಡುವಂತೆ ತಿಳಿಸಲಾಗಿದೆ. ಆದ್ರೆ ಕಿಶೋರ್ ಗಾಡಿಯನ್ನು ಯಾಕೆ ಬೀಳಿಸಿದ್ರು ಎಂಬುವುದು ಗೊತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿ ಮಾಧ್ಯಮಕ್ಕೆ ಹೇಳಿದ್ದಾರೆ. ಇದನ್ನೂ ಓದಿ: ಫ್ರೀಯಾಗಿ ಐಸ್ ಕ್ರೀಂ ಕೊಡದಕ್ಕೆ ಗಾಡಿ ತೊಗೊಂಡು ಹೋದ ಪೊಲೀಸರು

  • ಚುಮು ಚುಮು ಚಳಿಯಲ್ಲಿ ಬಿಕಿನಿ ತೊಟ್ಟು ಈಜುಕೊಳಕ್ಕೆ ಧಮುಕಿದ ಸಾರಾ

    ಚುಮು ಚುಮು ಚಳಿಯಲ್ಲಿ ಬಿಕಿನಿ ತೊಟ್ಟು ಈಜುಕೊಳಕ್ಕೆ ಧಮುಕಿದ ಸಾರಾ

    -ಸೈಫ್ ಪುತ್ರಿಯ ಸ್ವಿಮಿಂಗ್ ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟಿ, ಸೈಫ್ ಪುತ್ರಿ ಸಾರಾ ಅಲಿಖಾನ್ ಸ್ವಿಮಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪಾದರಸದಂತೆ ಹರಿದಾಡ್ತಿದೆ. ಈಜುಕೊಳದಲ್ಲಿ ಮತ್ಸಕನ್ನೆಯಂತೆ ಸಾರಾ ಈಜಾಡುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಲಾಕ್‍ಡೌನ್ ಆದಾಗಿನಿಂದ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿರುವ ಸಾರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಕೆಲವು ದಿನಗಳ ಹಿಂದೆ ಸಾಮಾನ್ಯರಂತೆ ಮುಂಬೈ ರಸ್ತೆಯಲ್ಲಿ ಸಾರಾ ಸೈಕಲ್ ಓಡಿಸಿದ್ದ ವಿಡಿಯೋ ವೈರಲ್ ಆಗಿತ್ತು.

    https://www.instagram.com/p/CDtoJSbpt7E/?utm_source=ig_embed

    ಸಾರಾ ಜೊತೆ ಸೋದರ ಇಬ್ರಾಹಿಂ ಅಲಿ ಖಾನ್ ಸಹ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸೋದರ ಇಬ್ರಾಹಿಂ ಜೊತೆಗಿನ ಸೈಕಲ್ ರೇಸ್ ವಿಡಿಯೋ ಸಾರಾ ಪೋಸ್ಟ್ ಮಾಡಿಕೊಂಡಿದ್ದರು.

    https://www.instagram.com/p/CDtR2Y5JZcH/

    ಕೇದಾರನಾಥ್ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿರುವ ಸಾರಾ ಮೊದಲ ಚಿತ್ರದ ನಟನೆಗೆ ಅಪಾರ ಮೆಚ್ಚುಗೆ ಪಡೆದುಕೊಂಡಿದ್ದರು. ತದನಂತರ ಸಿಂಬಾದಲ್ಲಿಯೂ ಸಾರಾ ನಟಿಸಿದ್ದಾರೆ. ಸದ್ಯ ವರುಣ್ ಧವನ್ ಗೆ ಜೊತೆಯಾಗಿ ಕೂಲಿ ನಂಬರ್ ಒನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    https://www.instagram.com/p/CDdqAhBJ-XV/

  • 100 ರೂ. ಲಂಚ ನೀಡಲು ನಿರಾಕರಿಸಿದ ಬಾಲಕ- ಮೊಟ್ಟೆ ಬಂಡಿ ಪಲ್ಟಿ ಮಾಡಿದ ಪಾಲಿಕೆ ಅಧಿಕಾರಿ

    100 ರೂ. ಲಂಚ ನೀಡಲು ನಿರಾಕರಿಸಿದ ಬಾಲಕ- ಮೊಟ್ಟೆ ಬಂಡಿ ಪಲ್ಟಿ ಮಾಡಿದ ಪಾಲಿಕೆ ಅಧಿಕಾರಿ

    -ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

    ಇಂದೋರ್: ತಳ್ಳುವ ಬಂಡಿಯಲ್ಲಿ ಮೊಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ 14 ವರ್ಷದ ಬಾಲಕನ ಬಂಡಿಯನ್ನು ಪಲ್ಟಿ ಮಾಡಿ ಅಧಿಕಾರಿ ದರ್ಪ ನಡೆಸಿರುವ ಘಟನೆ ಮಧ್ಯಪ್ರದೇಶ ಇಂದೋರ್ ನಲ್ಲಿ ನಡೆದಿದೆ.

    ವ್ಯಾಪಾರ ಮಾಡಲು ಮೊಟ್ಟೆಯನ್ನು ತೆಗೆದುಕೊಂಡು ಹೋಗುತ್ತಿದ್ದ ಬಾಲಕನ ಬಳಿ ಸ್ಥಳೀಯ ಪಾಲಿಗೆ ಅಧಿಕಾರಿ 100 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಇಲ್ಲ ಎಂದರೇ ಬಂಡಿಯನ್ನು ಸ್ಥಳದಿಂದ ತೆಗೆಯುವಂತೆ ಎಚ್ಚರಿಕೆ ನೀಡಿದ್ದ. ಆದರೆ ಲಾಕ್‍ಡೌನ್ ಕಾರಣದಿಂದ ವ್ಯಾಪಾರ ಕಡಿಮೆಯಾಗಿದ್ದರಿಂದ ಬಾಲಕ ಹಣ ನೀಡಲು ನಿರಾಕರಿಸಿದ್ದ. ಇದರಿಂದ ಕುಪಿತಗೊಂಡ ಅಧಿಕಾರಿ ನಡುರಸ್ತೆಯಲ್ಲಿ ಬಾಲಕನ ಬಂಡಿಯನ್ನು ಪಲ್ಟಿ ಮಾಡಿ ಮೊಟ್ಟೆಗಳನ್ನು ನಾಶ ಮಾಡಿದ್ದಾನೆ.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗಿದ್ದು, ಬಾಲಕ ನಡೆದ ಘಟನೆ ಬಗ್ಗೆ ವಿವರಿಸಿದ್ದಾನೆ. ಕೊರೊನಾ ಕಾರಣದಿಂದ ವ್ಯಾಪಾರ ಆಗಿಲ್ಲ. ಅಲ್ಲದೇ ಮೊಟ್ಟೆ ವ್ಯಾಪಾರವಾಗದೆ ಉಳಿದಿರುವುದು ಮತ್ತಷ್ಟು ನಷ್ಟ ತಂದಿದೆ ಎಂದಿದ್ದಾನೆ. ವಿಡಿಯೋದಲ್ಲಿ ಬಾಲಕನ ಬಳಿ ನಿಂತಿರುವ ವ್ಯಕ್ತಿಯನ್ನು ಪಾಲಿಕೆ ಅಧಿಕಾರಿ ಎಂದು ಗುರುತಿಸಲಾಗಿದೆ.

    ಇಂದೋರ್ ನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ವ್ಯಾಪಾರಕ್ಕೆ ನಿಷೇಧ ವಿಧಿಸಿದ್ದ ಸರ್ಕಾರ ಇತ್ತೀಚೆಗೆ ನಿಯಮಗಳನ್ನು ಸಡಿಲಗೊಳಿಸಿತ್ತು. ಇಂದೋರ್ ನಲ್ಲಿ ನಿನ್ನೆ 118 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 6,457 ಮಂದಿಗೆ ಇದುವರೆಗೂ ಸೋಂಕು ಹರಡಿದೆ.