Tag: ವೈರಲ್ ವಿಡಿಯೋ

  • ಆಂಟಿ ಎಂದು ಕರೆದ ಹುಡಿಗಿಗೆ ಗೂಸಾ ಕೊಟ್ಟ ಮಹಿಳೆ

    ಆಂಟಿ ಎಂದು ಕರೆದ ಹುಡಿಗಿಗೆ ಗೂಸಾ ಕೊಟ್ಟ ಮಹಿಳೆ

    ಲಕ್ನೋ: ಶಾಪಿಂಗ್ ಮಾಡುವ ವೇಳೆ ಆಂಟಿ ಎಂದು ಕರೆದಿದ್ದ ಹುಡುಗಿಗೆ ಮಹಿಳೆ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಇತಾನ ಬಾಬುಗಂಜ್ ಮಾರುಕಟ್ಟೆಯಲ್ಲಿ ನಡೆದಿದೆ.

    ಇತಾನ ಬಾಬುಗಂಜ್ ಮಾರುಕಟ್ಟೆಯಲ್ಲಿ 40 ವರ್ಷದ ಮಹಿಳೆ ತನ್ನ ಗೆಳತಿಯರೊಂದಿಗೆ ಶಾಪಿಂಗ್ ಮಾಡುತ್ತಿದ್ದಳು. ಈ ವೇಳೆ ಅಲ್ಲಿಯೆ ಶಾಪಿಂಗ್ ಮಾಡುತ್ತಿದ್ದ ಹುಡುಗಿ ಆಂಟಿ ಎಂದು ಕರೆದಿದ್ದಾಳೆ ಇದರಿಂದ ಕೋಪಗೊಂಡಿರುವ ಮಹಿಳೆ ಹುಡುಗಿಗೆ ಹಿಗ್ಗಾಮುಗ್ಗ ಥಳಿಸಿದ್ದಾಳೆ.

    ಹುಡುಗಿ ಆಂಟಿ ಎಂದು ಕರೆದ ನಂತರ ಮಹಿಳೆ ಮತ್ತು ಆಕೆಯ ಸ್ನೇಹಿತೆಯರು ಶಾಪಿಂಗ್ ನಿಲ್ಲಿಸಿ ಜಗಳ ಪ್ರಾರಂಭಿಸಿದ್ದಾರೆ. ಮಹಿಳೆ ಸಂಘರ್ಷದಲ್ಲಿ ಹುಡುಗಿಯ ಕೂದಲನ್ನು ಹಿಡಿದು ಎಳೆದಾಡಿದ್ದಾಳೆ.

    ಲೇಡಿ ಪೊಲೀಸ್ ಮಧ್ಯಪ್ರವೇಶಿಸಿದ ನಂತರ ಇಬ್ಬರೂ ಜಗಳ ನಿಲ್ಲಿಸಿದ್ದಾರೆ. ನಂತರ ಇವರ ಸಮಸ್ಯೆಯನ್ನು ಇತ್ಯರ್ಥಪಡಿಸಿ ಅಲ್ಲಿಂದ ಕಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ. ಮಹಿಳೆ ಹುಡುಗಿಯನ್ನು ಎಳೆದು ಹೊಡೆದಿರುವ ವಿಡಿಯೋ ಟ್ವಿಟ್ಟರ್‍ನಲ್ಲಿ ವೈರಲ್ ಆಗಿದೆ.

  • ತಾಳಿ ಕಟ್ಟೋ ಕೊನೆ ಕ್ಷಣದಲ್ಲಿ ಮದ್ವೆ ಬೇಡ ಎಂದ ವಧು- ಸಿನಿಮಾ ಸ್ಟೈಲ್‍ನಲ್ಲಿ ಯುವತಿಯ ಡೈಲಾಗ್

    ತಾಳಿ ಕಟ್ಟೋ ಕೊನೆ ಕ್ಷಣದಲ್ಲಿ ಮದ್ವೆ ಬೇಡ ಎಂದ ವಧು- ಸಿನಿಮಾ ಸ್ಟೈಲ್‍ನಲ್ಲಿ ಯುವತಿಯ ಡೈಲಾಗ್

    ಚೆನ್ನೈ: ಹಸೆಮಣೆ ಮೇಲೆ ಕುಳಿತ್ತಿದ್ದ ವರ ಇನ್ನೇನು ಕೆಲವೇ ಕ್ಷಣಗಳಲ್ಲಿ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಎಲ್ಲರಿಗೂ ಶಾಕ್ ನೀಡಿದ್ದ ವಧು, ತನಗೆ ಈ ಮದುವೆ ಬೇಡ ಎಂದು ಸಿನಿಮಾ ಸ್ಟ್ರೈಲ್ ಡೈಲಾಗ್ ಹೊಡೆದು ಮದುವೆ ನಿಲ್ಲಿಸಿರುವ ಘಟನೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

    ನೀಲಗಿರಿ ಜಿಲ್ಲೆಯ ಉದಗ ಗ್ರಾಮದಲ್ಲಿ ಘಟನೆ ನಡೆದಿದ್ದು, ತಾನು ಪ್ರೀತಿಸಿದ್ದ ಯುವಕನನ್ನೇ ಮದುವೆಯಾಗಲು ಯುವತಿ ಅಂತಿಮ ಕ್ಷಣದಲ್ಲಿ ಮದುವೆಗೆ ಬ್ರೇಕ್ ಹಾಕಿ ಕುಟುಂಬಸ್ಥರಿಗೆ ಶಾಕ್ ನೀಡಿದ್ದಳು.

    ತಾನು ಪ್ರೀತಿಸಿದ ಯುವಕ ಅರ್ಧ ಗಂಟೆಯಲ್ಲಿ ಮದುವೆ ಮನೆಗೆ ಬರುತ್ತಾನೆ. ತಾನು ಅವನನ್ನೇ ಮದುವೆಯಾಗುವುದಾಗಿ ಹೇಳಿ ಯುವತಿ ತಾಳಿ ಕಟ್ಟಲು ಬಂದ ವರನನ್ನು ತಡೆದಿದ್ದಳು. ಇತ್ತ ಕುಟುಂಬಸ್ಥರು ನೋಡಿ ನಿರ್ಧಾರ ಮಾಡಿದ್ದ ಯುವತಿಯನ್ನು ಮದುವೆಯಾಗಿ ಹೊಸ ಜೀವನವನ್ನು ಆರಂಭಿಸಲು ಕನಸು ಕಂಡಿದ್ದ ಯುವಕ ಕ್ಷಣ ಕಾಲ ಏನಾಗುತ್ತಿದೆ ಎಂದು ತಿಳಿಯದೆ ಸುಮ್ಮನೆ ಕುಳಿತ್ತಿದ್ದ.

    ಯುವತಿ ಮದುವೆ ನಿರಾಕರಿಸುತ್ತಿದಂತೆ ಆಕ್ರೋಶಗೊಂಡ ಕುಟುಂಬಸ್ಥರು ಆಕೆಗೆ ಬುದ್ಧಿ ಮಾತು ಹೇಳಿ ಮದುವೆ ಮಾಡಿಕೊಳ್ಳುವಂತೆ ತಿಳಿ ಹೇಳುವ ಕೆಲಸ ಮಾಡಿದ್ದರು. ಆದರೂ ಆಕೆ ಒಪ್ಪಿಕೊಳ್ಳದ ಕಾರಣ ಪ್ರೀತಿಯ ವಿಚಾರವನ್ನು ಮೊದಲೇ ಏಕೆ ಹೇಳಿಲ್ಲ ಎಂದು ಗರಂ ಆಗಿ ಯುವತಿಯ ಮೇಲೆ ಕೈ ಮಾಡುವುದಕ್ಕೂ ಮುಂದಾದರು. ಆದರೆ ಈ ವೇಳೆ ಮಧ್ಯ ಪ್ರವೇಶಿಸಿದ ಸಂಬಂಧಿಗಳು ಕುಟುಂಬಸ್ಥರನ್ನು ತಡೆದು ನಿಲ್ಲಿಸಿದ್ದರು.

    ಇದನ್ನೆಲ್ಲಾ ನೋಡುತ್ತಾ ಕುಳಿತ್ತಿದ್ದ ಯುವಕ ನಿರಾಸೆಯಿಂದ ಹಸೆಮಣೆಯಿಂದ ಎದ್ದು ಮದುವೆ ಮಂಟಪದಿಂದ ಹೊಸ ನಡೆದಿದ್ದ. ಆದರೆ ಯುವತಿಯನ್ನು ಪ್ರೀತಿಸಿದ್ದ ಯುವಕ ಮದುವೆ ನಿಂತು ಒಂದು ಗಂಟೆಯಾದರೂ ಮಂಟಪಕ್ಕೆ ಆಗಮಿಸಲಿಲ್ಲ. ಇದರಿಂದ ಮತ್ತಷ್ಟು ಕೋಪಗೊಂಡ ಯುವತಿಯ ಪೋಷಕರು ಆಕೆಯನ್ನು ಮದುವೆ ಮಂಟಪದಲ್ಲೇ ಬಿಟ್ಟು ವಾಪಸ್ ತೆರಳಿದ್ದರು. ಮದುವೆಯಲ್ಲಿ ನಡೆದ ಎಲ್ಲಾ ಹೈಡ್ರಾಮಾ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ವಾಲಿಬಾಲ್ ಆಡುತ್ತಿರುವ ಗಿಳಿಗಳ ವಿಡಿಯೋ ವೈರಲ್

    ವಾಲಿಬಾಲ್ ಆಡುತ್ತಿರುವ ಗಿಳಿಗಳ ವಿಡಿಯೋ ವೈರಲ್

    ಗಿಳಿಗಳು ಮಾತನಾಡುವುದು, ಹಾಡು ಹೇಳುವುದನ್ನು ಕೇಳಿದ್ದೀರಿ ಮತ್ತು ನೋಡಿದ್ದೀರಿ ಆದರೆ ಇಲ್ಲಿ ಗಿಳಿಗಳು ವಾಲಿಬಾಲ್ ಆಟ ಆಡುತ್ತವೆ ಎಂದು ಹೇಳಿದರೆ ಖಂಡಿತವಾಗಿಯೂ ಆಶ್ಚರ್ಯವಾಗುತ್ತದೆ ಆದರು ಇದು ಸತ್ಯ.

    ಹೌದು. ಹಸಿರು ಮತ್ತು ಹಳದಿ ಬಣ್ಣದ ಮುದ್ದು ಗಿಳಿಗಳು ಎರಡು ತಂಡಗಳಾಗಿ ವಾಲಿಬಾಲ್ ಆಟ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಪುಟ್ಟ ಪಕ್ಷಿಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಒಂದು ಬದಿಯಲ್ಲಿ ಹಸಿರು ಬಣ್ಣದ ಗಿಳಿಯ ತಂಡ ಇನ್ನೊಂದು ಕಡೆ ಹಳದಿ ಬಣ್ಣದ ಗಿಳಿಗಳ ತಂಡವನ್ನಾಗಿ ಮಾಡಲಾಗುತ್ತದೆ. ನಂತರ ಇವುಗಳ ಮಧ್ಯೆ ಒಂದು ಪುಟ್ಟ ನೆಟ್ ಕಟ್ಟಿ ಆಟವಾಡಲು ಬಿಡುತ್ತಾರೆ. ಆಗ ಗಿಳಿಗಳು ಕಾಳುಗಳನ್ನು ಹೆಕ್ಕುತ್ತಾ ಪುಟ್ಟ ಬಾಲ್ ಅನ್ನು ನೆಟ್ ನಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪಾಸ್ ಮಾಡುವ ದೃಶ್ಯ ಎಲ್ಲರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಆಟವಾಡುತ್ತಿರುವ ಈ ಮುದ್ದಾದ ಗಿಳಿಗಳ ವಿಡಿಯೋ ಹರಿದಾಡುತ್ತಿದೆ.

  • ಕುದಿಯುವ ಎಣ್ಣೆಗೆ ಕೈ ಹಾಕಿ ಬಜ್ಜಿ ಬೇಯಿಸುತ್ತಾಳೆ ಮಹಿಳೆ- ವಿಡಿಯೋ

    ಕುದಿಯುವ ಎಣ್ಣೆಗೆ ಕೈ ಹಾಕಿ ಬಜ್ಜಿ ಬೇಯಿಸುತ್ತಾಳೆ ಮಹಿಳೆ- ವಿಡಿಯೋ

    ನವದೆಹಲಿ: ಬಿಸಿ ಎಣ್ಣೆಯಲ್ಲಿ ಕೈ ಇಟ್ಟು ಜಾದು ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಯಾವುದೇ ಭಯವಿಲ್ಲ, ಯಾವುದರ ಸಹಾಯವಿಲ್ಲದೆ ಬೆರಳುಗಳನ್ನು ಎಣ್ಣೆಯೊಳಗೆ ಹಾಕಿ ಬಜ್ಜಿಯನ್ನು ಬೇಯಿಸಿದ್ದಾಳೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಮಹಿಳೆ ಕುದಿಯುವ ಎಣ್ಣೆಯಲ್ಲಿ ಬೆರಳುಗಳನ್ನು ಎದ್ದಿ, ಬರಿಗೈಲೇ ಬಜ್ಜಿಗಳನ್ನು ತಿರುಗಿಸುತ್ತ ಬೇಯಿಸುತ್ತಾಳೆ. ಇಂತಹ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಸಖತ್ ವೈರಲ್ ಆಗಿದೆ. ಅಲ್ಲದೆ ಇಕ್ಕಳು ಇಲ್ಲದ್ದಕ್ಕೆ ಎಂದು ಮಹಿಳೆ ಹೇಳಿರುವುದಾಗಿ ಟ್ವಿಟ್ಟರ್ ನಲ್ಲಿ ಬರೆದು ಪೋಸ್ಟ್ ಮಾಡಲಾಗಿದೆ.

    13 ಸೆಕೆಂಡ್‍ಗಳ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ದೊಡ್ಡ ಬಾಣಲಿಯಲ್ಲಿ ಎಣ್ಣೆ ಕುದಿಯುತ್ತಿದ್ದು, ಮಹಿಳೆ ಇಕ್ಕಳ ಅಥವಾ ಇನ್ನಾವುದೋ ವಸ್ತುಗಳ ಸಹಾಯವಿಲ್ಲದೇ ಬಜ್ಜಿಯನ್ನು ತಿರುಗಿಸುವ ಬದಲು ತನ್ನ ಬೆರಳುಗಳಿಂದಲೇ ಅವುಗಳ್ನು ಹೊರಳಿಸಿ ಹಾಕುತ್ತಿದ್ದಾಳೆ. ಅಲ್ಲದೆ ವಿಡಿಯೋದ ಒಂದು ಭಾಗದಲ್ಲಿ ಮಹಿಳೆ ಕುದಿಯುವ ಎಣ್ಣೆಯನ್ನು ಕೈಯ್ಯಲ್ಲೇ ಹಿಡಿಯುತ್ತಾಳೆ. ಆದರೆ ಏನೂ ಆಗುವುದಿಲ್ಲ. ಇದನ್ನು ನೆರೆದಿದ್ದ ಜನಕ್ಕೆ ಸಹ ತೋರಿಸಿದ್ದಾಳೆ.

    ಮಹಿಳೆ ಎಣ್ಣೆಯನ್ನು ಕೈಯಲ್ಲಿ ಹಿಡಿದ ದೃಶ್ಯ ಮುಗಿಯುತ್ತಿದ್ದಂತೆ ನಂತರ ವಿಡಿಯೋ ಎಡಿಟ್ ಮಾಡಲಾಗಿದ್ದು, ಇಕ್ಕಳುಗಳ ಮಧ್ಯೆ ಮುಖವನ್ನು ತೋರಿಸಿ, ನಾನು ಇಲ್ಲಿ ಇರಲಿಲ್ಲ ಅನ್ನಿಸುತ್ತದೆ. ನಾನು ಭ್ರಮೆಯಲ್ಲಿದ್ದೆ ಅನ್ನಿಸುತ್ತದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ವಿಡಿಯೋ ಕಣ್ಣಾರೆ ಕಂಡರೂ ನೆಟ್ಟಿಗರು ಇದನ್ನು ನಂಬುತ್ತಿಲ್ಲ. ಸಾವಿರಾರು ಜನ ಕಮೆಂಟ್ ಮಾಡಿ ಲೈಕ್ ಮಾಡಿದ್ದಾರೆ. ಹಲವು ಜನ ಆಶ್ಚರ್ಯಕರ ರೀತಿಯಲ್ಲಿ ವಿವಿಧ ರೀತಿಯ ಕಮೆಂಟ್ ಮಾಡಿದ್ದಾರೆ.

  • ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಬೆದರಿಕೆ ಕರೆ

    ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಬೆದರಿಕೆ ಕರೆ

    – ಇದು ನೆಹರು ದೇಶವಲ್ಲ, ಮೋದಿ ದೇಶ
    – ಬೆದರಿಕೆ ಕರೆ ವಿರುದ್ಧ ದೂರು ದಾಖಲು

    ಮಂಗಳೂರು: ದೇವಸ್ಥಾನದ ನವರಾತ್ರಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಮುಂಬೈನಿಂದ ಬೆದರಿಕೆ ಕರೆ ಬಂದಿದೆ.

    ಮಂಗಳೂರು ಹೊರವಲಯದ ಬಜಪೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಕೊಪ್ಪರಿಗೆ ಇಡುವ ಕಾರ್ಯಕ್ರಮವಿತ್ತು. ಇದಕ್ಕೆ ಕ್ಷೇತ್ರದ ಆಹ್ವಾನದಂತೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಭೇಟಿ ನೀಡಿದ್ದರು. ಅದೇ ವೇಳೆ ಕೊಪ್ಪರಿಗೆ ಇಡುವ ಧಾರ್ಮಿಕ ವಿಧಿ ವಿಧಾನ ನಡೆಯುತ್ತಿತ್ತು. ಹೀಗಾಗಿ ಕ್ಷೇತ್ರಾಡಳಿತ ಮಂಡಳಿಯವರು ಮಾಜಿ ಶಾಸಕ ಮೊಯಿದ್ದೀನ್ ಬಾವಾರಿಂದಲೂ ಕೊಪ್ಪರಿಗೆಗೆ (ಅನ್ನದಾನಕ್ಕೆ ಅಕ್ಕಿ ಸಂಗ್ರಹಿಸುವ ದೊಡ್ಡ ಪಾತ್ರೆ) ಅಕ್ಕಿ ಹಾಕುವಂತೆ ಹೇಳಿದ್ದು, ಬಾವಾ ಅವರು ಕೊಪ್ಪರಿಗೆಗೆ ಅಕ್ಕಿ ಹಾಕಿದ್ದಾರೆ.

    ಇದರ ವೀಡಿಯೋ ವೈರಲ್ ಆಗಿ ಪರ ವಿರೋಧ ಚರ್ಚೆ ನಡೆದಿತ್ತು. ಇದೇ ವೇಳೆ ಮುಂಬೈನಿಂದ ಅನಿಲ್ ಎಂದು ಹೇಳಿಕೊಂಡ ವ್ಯಕ್ತಿ ಮೊಯಿದ್ದೀನ್ ಬಾವಾ ಅವರ ಮೊಬೈಲ್‍ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಹಿಂದೂ ದೇವಸ್ಥಾನದಲ್ಲಿ ನೀವು ಕೊಪ್ಪರಿಗೆಗೆ ಅಕ್ಕಿ ಹಾಕಿದ್ದು ಯಾಕೆ? ನೀವು ದನದ ಮಾಂಸ ತಿನ್ನೋರು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗೋದು ಸರಿಯಲ್ಲ. ಇದು ನೆಹರು ದೇಶವಲ್ಲ, ಮೋದಿಯ ದೇಶ, ಇನ್ನು ಮುಂದೆ ಹೀಗೆಲ್ಲಾ ಹೋದ್ರೆ ಹುಷಾರ್ ಎಂದು ತುಳುವಿನಲ್ಲಿ ಮಾತಾಡಿ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಕರೆಯ ಬಗ್ಗೆ ಮೊಯಿದ್ದೀನ್ ಬಾವಾ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

    ಸುಂಕದಕಟ್ಟೆ ದೇವಸ್ಥಾನದ ನವರಾತ್ರಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಬಗ್ಗೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಹೇಳಿಕೆ ನೀಡಿದ್ದು, ದೇವಸ್ಥಾನದ ನವರಾತ್ರಿ ಉತ್ಸವಕ್ಕೆ ಅಲ್ಲಿನ ಸ್ವಾಮೀಜಿಯವರ ಮಗ ನನ್ನನ್ನು ಆಹ್ವಾನಿದ್ದರು. ನಾನು ಅಲ್ಲಿನ ಮಾಜಿ ಶಾಸಕನ ನೆಲೆಯಲ್ಲಿ ಅಲ್ಲಿಗೆ ಹೋಗಿದ್ದೇನೆ. ನಾನು ಅಲ್ಲಿಗೆ ಹೋದಾಗ ಕೊಪ್ಪರಿಗೆಗೆ ಅಕ್ಕಿಯನ್ನ ಹಾಕುವ ಧಾರ್ಮಿಕ ಕಾರ್ಯ ನಡೆಯುತ್ತಿತ್ತು. ದೇವರ ಅನುಗ್ರಹದಂತೆ ನನಗೆ ಆ ಅವಕಾಶ ಸಿಕ್ಕಿತು ಅಂದುಕೊಳ್ತೇನೆ. ಆಗಷ್ಟೇ ಹಾಲಿ ಶಾಸಕರು ಬಂದು, ಅರ್ಜೆಂಟ್ ಇದೆ ಅಂತ ಹೋದರು ಅನ್ನೋದು ಗೊತ್ತಾಯ್ತು. ಅಲ್ಲಿದ್ದವರು ನನಗೆ ಅಕ್ಕಿ ಹಾಕಿ ಅಂತ ಹೇಳಿದಾಗ ಹಾಕಿದೆ.

    ನಾನು ಜಾತಿವಾದಿಯಲ್ಲ, ಜಾತ್ಯಾತೀತ ನೆಲೆಯಲ್ಲಿ ಮಾಡಿದೆ. ಇದರಲ್ಲಿ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಅಲ್ಲಿ ಸೋತಿದ್ದರೂ ಜನರ ಪ್ರೀತಿ ಇಂದಿಗೂ ನನಗಿದೆ. ಚುನಾವಣೆ ವೇಳೆ ನಡೆದ ಒಂದು ಕೊಲೆಯನ್ನು ನನ್ನ ತಲೆಗೆ ಕಟ್ಟಿ ಸೋಲಿಸಿದ್ದರು. ಈ ಷಡ್ಯಂತ್ರದಿಂದ ಭರತ್ ಶೆಟ್ಟಿ ಅಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದಾರೆ ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವಾ ಪ್ರತಿಕ್ರಿಯಿಸಿದ್ದಾರೆ.

  • ಸೈಕಲ್ ಚಲಾಯಿಸ್ತಾ ಆಗುತ್ತೆ ಗೋಧಿ ಹಿಟ್ಟು- ವೈರಲ್ ವಿಡಿಯೋ

    ಸೈಕಲ್ ಚಲಾಯಿಸ್ತಾ ಆಗುತ್ತೆ ಗೋಧಿ ಹಿಟ್ಟು- ವೈರಲ್ ವಿಡಿಯೋ

    ಬೆಂಗಳೂರು: ಜಿಮ್ ಸೈಕಲ್ ಚಲಾಯಿಸುತ್ತಾ ಹಿಟ್ಟು ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ವಿಡಿಯೋವನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡು ತಂತ್ರಜ್ಞಾನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಮಹಿಳೆಯೊಬ್ಬರು ಜಿಮ್ ಸೈಕಲ್ ತುಳಿಯುತ್ತಾ ಇದ್ರೆ ಮುಂದೆ ಗೋಧಿ ಹಿಟ್ಟು ಬರುತ್ತದೆ. ಜಿಮ್ ಸೈಕಲ್ ಮಾಡಿಫೈ ಮಾಡಲಾಗಿದ್ದು, ಮೇಲ್ಭಾಗದಲ್ಲಿ ಗೋಧಿ ಹಾಕಲು ಸ್ಥಳ ಮಾಡಲಾಗಿದೆ. ಸೈಕಲ್ ತುಳಿದಂತೆ ಅದಕ್ಕೆ ಅಳವಡಿಸಲಾಗಿರುವ ಯಂತ್ರ ಸಹ ಕೆಲಸ ಮಾಡಲಾರಂಭಿಸುತ್ತದೆ. ನಿಧಾನವಾಗಿ ಸೈಕ್ಲಿಂಗ್ ಮಾಡುತ್ತಾ ಹೋದಂತೆ ನಿಮಗೆ ಮುಂಭಾಗದಲ್ಲಿರಿಸಿದ ಡಬ್ಬದಲ್ಲಿ ನಿಮಗೆ ಹಿಟ್ಟು ಸಿಗುತ್ತದೆ.

    https://twitter.com/AwanishSharan/status/1299658946332864513

    ಸಾಮಾನ್ಯ ಮಹಿಳೆ ಸಹ ಸೈಕಲ್ ತುಳಿಯಬಹುದಾಗಿದೆ. ಹಾಗಾಗಿ ಸೈಕಲ್ ತುಳಿಯುವದರಿಂದ ವ್ಯಾಯಾವದ ಜೊತೆಗೆ ಅಡುಗೆಗೆ ಬೇಕಾದ ಹಿಟ್ಟು ಸಹ ಸಿಗುತ್ತದೆ ಎಂದು ವಿಡಿಯೋದಲ್ಲಿ ಮಹಿಳೆ ಹೇಳುವುದನ್ನ ಕೇಳಬಹುದು. ಆದ್ರೆ ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

  • ಮಾಸ್ಕ್ ಹಾಕಿಲ್ಲ ಯಾಕೆ? ಯುವಕರಿಂದ ಲಂಚ ಪಡೆದ ಪೇದೆ

    ಮಾಸ್ಕ್ ಹಾಕಿಲ್ಲ ಯಾಕೆ? ಯುವಕರಿಂದ ಲಂಚ ಪಡೆದ ಪೇದೆ

    -ಕೈಯಲ್ಲಿ ಲಂಚದ ಹಣ ಮುಟ್ಟದ ಪೊಲೀಸಪ್ಪ
    -ಲಂಚ ಪಡೆಯಲು ಪೇದೆಯ ಸೂಪರ್ ಪ್ಲ್ಯಾನ್
    -ಪೊಲೀಸಪ್ಪನ ಕಳ್ಳಾಟ ಕ್ಯಾಮೆರಾದಲ್ಲಿ ಸೆರೆ

    ಲಕ್ನೋ: ಮಾಸ್ಕ್ ಹಾಕದ ಯುವಕರಿಂದ ಪೊಲೀಸ್ ಪೇದೆ ಲಂಚ ಪಡೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಹರ್ದೌಯಿ ಜಿಲ್ಲೆಯಲ್ಲಿ ಪೇದೆಯೋರ್ವ ಅತ್ಯಂತ ಚಾಣಕ್ಷತನದಿಂದ ಲಂಚ ಪಡೆದಿರುವ ವಿಡಿಯೋ ಸಾರ್ವಜನಿಕರ ಮೊಬೈಲಿನಲ್ಲಿ ಸೆರೆಯಾಗಿದೆ. ಪೇದೆಗೆ ಅಲ್ಲಿಯ ಟ್ರಾಫಿಕ್ ಪೊಲೀಸ್ ಸಹ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸೋಮವಾರ ಘಟನೆ ನಡೆದಿದ್ದು, ಮಂಗಳವಾರ ಪೊಲೀಸಪ್ಪ ಲಂಚದ ಕಳ್ಳಾಟ ಬಯಲಾಗಿದೆ.

    ವಿಡಿಯೋದಲ್ಲಿ ಏನಿದೆ?: ಮಾಸ್ಕ್ ಧರಿಸದ ಇಬ್ಬರು ಯುವಕರನ್ನ ಪೇದೆ ತಡೆದಿದ್ದಾನೆ. ಕೊರೊನಾ ನಿಯಮ ಪಾಲಿಸದಕ್ಕೆ ದಂಡ ಹಾಕೋದಾಗಿ ಬೆದರಿಕೆ ಹಾಕಿದ್ದಾರೆ. ನಂತರ ನಿಧಾನವಾಗಿ ತನ್ನ ಕೈಯಲ್ಲಿ ಡೈರಿಯೊಂದನ್ನ ಬೈಕ್ ಮೇಲಿಟ್ಟು ಪೇದೆ ಸ್ವಲ್ಪ ಮುಂದೆ ಹೋಗುತ್ತಾನೆ. ಯುವಕರಿಬ್ಬರು ಹಣವನ್ನ ಪೇದೆಯ ಡೈರಿಯಲ್ಲಿಟ್ಟು ತೆರಳುತ್ತಾರೆ. ಯುವಕರು ಹೋದ ನಂತರ ಪೇದೆ ಡೈರಿಯನ್ನ ಎತ್ತಿಕೊಂಡು ಹೋಗಿದ್ದಾನೆ.

    ವಿಡಿಯೋ ವೈರಲ್ ಬಳಿಕ ಪ್ರತಿಕ್ರಿಯಿಸಿರುವ ಎಸ್‍ಎಸ್‍ಪಿ, ಪೊಲೀಸರು ಲಂಚ ಪಡೆಯುವ ಬಗ್ಗೆ ಸಾರ್ವಜನಿಕರಿಂದ ದೂರುಗಳ ಬಂದಿವೆ. ವೈರಲ್ ಆಗಿರುವ ವಿಡಿಯೋ ಸಹ ನಮ್ಮ ಗಮನಕ್ಕೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

    ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯ ಮಾಸ್ಕ್ ಧರಿಸಿವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳುತ್ತಿದೆ. ಕೊರೊನಾ ನಿಯಮಗಳ ಪಾಲನೆ ಮಾಡದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ಸಹ ನೀಡಿದೆ. ಆದ್ರೆ ಇದೇ ಆದೇಶವನ್ನ ಕೆಲ ಪೊಲೀಸರು ಬಂಡವಾಳ ಮಾಡಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅಂತಹವುದು ಒಂದು ಘಟನೆ ಉತ್ತರ ಪ್ರದೇಶದ ಹರ್ದೌಯಿ ಜಿಲ್ಲೆಯಲ್ಲಿ ನಡೆದಿದೆ.

  • ಗುಲಾಬಿ ಮೇಲೆ ನೀಲಿ ಬಣ್ಣದ ಹಾವು – ವಿಡಿಯೋ ವೈರಲ್

    ಗುಲಾಬಿ ಮೇಲೆ ನೀಲಿ ಬಣ್ಣದ ಹಾವು – ವಿಡಿಯೋ ವೈರಲ್

    -ಹಾವಿನ ಡೆಡ್ಲಿ ಸೈಲೆಂಟ್ ಚಲನೆ
    -ಸುಂದರತೆ ಮೇಲೆ ವಿಷದ ಜಾಲ ಎಂದ ನೆಟ್ಟಿಗರು

    ಗುಲಾಬಿ ಹೂವಿನ ಮೇಲೆ ನೀಲಿ ಬಣ್ಣದ ಹಾವು ಕುಳಿತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

    ಸಾಮಾನ್ಯವಾಗಿ ಈ ರೀತಿಯ ಹಾವುಗಳನ್ನು ಪ್ರಾಣಿ ಸಂಗ್ರಾಹಲಗಳಲ್ಲಿ ನೋಡಿರುತ್ತೀರಿ. ಆದ್ರೆ ಗುಲಾಬಿ ಮೇಲೆ ಕುಳಿತ ಈ ವಿಡಿಯೋ ನೋಡಗರ ಎದೆಯನ್ನ ಒಮ್ಮೆ ಝಲ್ ಅನ್ನುವಂತೆ ಮಾಡುತ್ತದೆ. ಲೈಫ್ ಆನ್ ಅರ್ಥ್ ಟ್ವಿಟ್ಟರ್ ಖಾತೆಯಲ್ಲಿ ಸೆಪ್ಟೆಂಬರ್ 17ರಂದು ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಇದುವರೆಗೂ 94 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ರಿಟ್ವೀಟ್ ಆಗಿದೆ. ಏಳು ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿಕೊಂಡಿದೆ.

    12 ಸೆಕೆಂಡ್ ವಿಡಿಯೋದಲ್ಲಿ ಗುಲಾಬಿ ಮೇಲೆ ಅಲುಗಾಡದೇ ನೀಲಿ ಹಾವು ಕುಳಿತಿರುವುದು ನೋಡಬಹುದು. ಗುಲಾಬಿ ಗಿಡದ ಕೆಳಭಾಗದಲ್ಲಿ ಅಲ್ಲಡಿಸಿದಾಗ ಹಾವು ತನ್ನ ನಾಲಗೆ ಹೊರ ತೆಗೆದು ಬುಸುಗುಟ್ಟಾಗ ಎದೆ ಝಲ್ ಅನ್ನಿಸುತ್ತೆ. ಆದ್ರೆ ಈ ವಿಡಿಯೋ ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಈ ಹಾವು ಅತ್ಯಂತ ವಿಷಕಾರಿಯಾಗಿದ್ದು, ಅದರ ಬಳಿ ಹತ್ತಿರ ಹೋಗುವುದು ಸಾವಿಗೆ ಆಹ್ವಾನ ನೀಡಿದಂತೆ ಎಂದು ನೆಟ್ಟಿಗರು ಹೇಳಿದ್ದಾರೆ.

    https://twitter.com/planetpng/status/1306620212045844482

    12 ಸೆಕೆಂಡ್ ವಿಡಿಯೋ ರಿಟ್ವೀಟ್ ಮಾಡಿಕೊಂಡಿರುವ ನೆಟ್ಟಿಗರು, ಸುಂದರತೆಯ ಮೇಲೆ ವಿಷದ ಜಾಲವಿದೆ ಎಂದು ಬರೆದುಕೊಂಡಿದ್ದಾರೆ. ಕೆಲವರು ಅಪರೂಪದ ವಿಡಿಯೋ, ಹಾವು ತುಂಬಾನೇ ಅಪಾಯ ಎಂದು ಕಮೆಂಟ್ ಮಾಡಿದ್ದಾರೆ.

  • ವಿಡಿಯೋ: ವಾಟರ್ ಜಗ್‍ನೊಳಗೆ ಕೈ ಹಾಕಿ ಪೋಷಕರಿಗೆ ಚಮಕ್ ಕೊಟ್ಟ ಕಂದಮ್ಮ

    ವಿಡಿಯೋ: ವಾಟರ್ ಜಗ್‍ನೊಳಗೆ ಕೈ ಹಾಕಿ ಪೋಷಕರಿಗೆ ಚಮಕ್ ಕೊಟ್ಟ ಕಂದಮ್ಮ

    – ಬಾಲಕಿಯ ನಟನಾ ಕೌಶಲ್ಯಕ್ಕೆ ನೆಟ್ಟಿಗರು ಫಿದಾ

    ಪುಟ್ಟ ಮಕ್ಕಳು ಏನೇ ಮಾಡಿದ್ರೂ ನೋಡೋಕೆ ಚಂದ. ಅವರು ಆಡುವ ತುಂಟಾಟ, ನಗು, ಅಳು, ಕೋಪ ಹೀಗೆ ಎಲ್ಲವೂ ಮನಸ್ಸಿಗೆ ಮುದ ನೀಡುತ್ತವೆ. ಮನೆಯಲ್ಲೊಂದು ಮಗು ಇದ್ದರೆ ನಾವು ಎಂತದ್ದೇ ಪರಿಸ್ಥಿತಿಯಲ್ಲಿದ್ದರೂ ಒಂದು ಬಾರಿ ಮನಸ್ಸು ನಿರಾಳ ಎನಿಸುವುದು ಸಹಜ. ಹೀಗೆ ಇಲ್ಲೊಂದು ಪುಟ್ಟ ಮಗು ತನ್ನ ಮನೆಯವರನ್ನು ಪ್ರ್ಯಾಂಕ್ ಮಾಡಿದ ಘಟನೆ ನಡೆದಿದೆ.

    ಹೌದು. ಪುಟ್ಟ ಬಾಲಕಿಯೊಬ್ಬಳು ನೀರಿನ ಜಗ್ ಒಳಗೆ ಕೈ ಹಾಕಿ ಅಳಲು ಶುರು ಮಾಡಿದ್ದಾಳೆ. ಕೂಡಲೇ ಆಕೆಯ ಪೋಷಕರು ಬಂದು ಜಗ್ ಒಳಗಿಂದ ಕೈ ತೆಗೆದಿದ್ದಾರೆ. ಈ ವೇಳೆ ಬಾಲಕಿ ನಗುತ್ತಾ ಮತ್ತೆ ಅದೇ ರೀತಿ ಮಾಡಲು ಮುಂದಾಗುತ್ತಾಳೆ. ಈಕೆಯ ಕುಚೇಷ್ಟೆಯಿಂದ ಸುಸ್ತಾದ ಮನೆಯವರು ನೀರಿನ ಜಗ ಇಡುವ ಜಾಗವನ್ನು ಬದಲಾಯಿಸುತ್ತಾರೆ. ಪುಟ್ಟ ಕಂದಮ್ಮಳ ಈ ಕುಚೇಷ್ಟೆಯನ್ನು ಮನೆಯವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ವಿಡಿಯೋವನ್ನು ಬ್ಯಾಕ್ ಟು ನೇಚರ್ ಎಂಬ ಟ್ವಿಟ್ಟರ್ ಅಕೌಂಟ್ ಅಪ್ಲೋಡ್ ಮಾಡಿದೆ. 16 ಸೆಕೆಂಡಿನ ಈ ವಿಡಿಯೋ ಇದೂವರೆಗೂ ಸುಮಾರು 20 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಅಲ್ಲದೆ ಸಾಕಷ್ಟು ಕಾಮೆಂಟ್ ಗಳು ಬಂದಿದ್ದು, ಪುಟ್ಟ ಬಾಲಕಿಯ ಕುಚೇಷ್ಟೆಗೆ ನೆಟ್ಟಿಗೆ ಮಾರು ಹೋಗಿದ್ದಾರೆ.

    ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಪುಟ್ಟ ಹುಡುಗಿಯ ನಟನಾ ಕೌಶಲ್ಯಕ್ಕೆ ಫಿದಾ ಆಗಿರುವ ಟ್ವಿಟ್ಟರ್ ಬಳಕೆದಾರರು, ತುಂಬಾ ತಮಾಷೆಯಾಗಿದೆ. ಆದರೂ ಉತ್ತಮ ನಟನೆ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಹೀಗೆ ಹಲವಾರು ಕಾಮೆಂಟ್ ಗಳು ಬಂದಿವೆ.

    https://twitter.com/backt0nature/status/1306005877602889728

  • ಹಾವು ಹಿಡಿದ ಸೀರೆ ತೊಟ್ಟ ಕನ್ನಡತಿ -ವೈರಲ್ ಆಯ್ತು ವಿಡಿಯೋ

    ಹಾವು ಹಿಡಿದ ಸೀರೆ ತೊಟ್ಟ ಕನ್ನಡತಿ -ವೈರಲ್ ಆಯ್ತು ವಿಡಿಯೋ

    -ಮೂಲೆಯಲ್ಲಿ ಹೆಡೆ ಬಿಚ್ಚಿ ಬುಸುಗುಡುತ್ತಿದ್ದ ನಾಗರಾಜ

    ನವದೆಹಲಿ: ಸೀರೆ ತೊಟ್ಟ ಮಹಿಳೆ ಹಾವು ಹಿಡಿದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹಿಳೆಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕ ಮೂಲದ ನಿರ್ಜರಾ ಚಿಟ್ಟಿ ಹಾವು ಹಿಡಿದ ಮಹಿಳೆ. ನಿರ್ಜರಾ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ರೆಡಿಯಾಗಿದ್ದರು. ಈ ವೇಳೆ ಮನೆಯಲ್ಲಿ ಹಾವು ಬಂದಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಬಟ್ಟೆ ಬದಲಿಸಿಕೊಳ್ಳದೇ ಸೀರೆಯಲ್ಲಿಯೇ ಬಂದು ಯಾವುದೇ ಮುಂಜಾಗ್ರತ ಉಪಕರಣಗಳಿಲ್ಲದೇ ಬರಿಗೈಯಲ್ಲಿ ಹಾವನ್ನ ಹಿಡಿದು ಮನೆಯ ಸದಸ್ಯರ ಆತಂಕವನ್ನ ದೂರ ಮಾಡಿದ್ದಾರೆ.

    https://twitter.com/DoctorAjayita/status/1304779562945933313

    12 ಸೆಕೆಂಡ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಮೂಲೆಯಲ್ಲಿ ಹಡೆ ಬಿಚ್ಚಿ ಬುಸುಗುಡುತ್ತಿದ್ದ ನಾಗಪ್ಪನನ್ನು ನಿರ್ಜರಾ ರಕ್ಷಿಸಿದ್ದಾರೆ. ಸೀರೆ ಧರಿಸಿದ ಪರಿಣಾಮ ಹಾವು ಹಿಡಿಯಲು ಕಷ್ಟವಾಗುತ್ತಿದೆ. ಬಟ್ಟೆ ಬದಲಿಸಿ ಬರೋಷ್ಟರಲ್ಲಿ ಹಾವು ಅಪಾಯ ಮಾಡಿದ್ರೆ ಹೇಗೆ ಎಂದು ಬಂದೆ ಎಂದು ನಿರ್ಜರಾ ಹೇಳಿರುವುದು ವಿಡಿಯೋದಲ್ಲಿ ಕೇಳಬಹುದು.